Tag: ದಸರಾ

  • ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಗೊಂಬೆಗಳ ಉತ್ಸವ

    ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಗೊಂಬೆಗಳ ಉತ್ಸವ

    ಬೆಂಗಳೂರು: ಗೊಂಬೆಗಳ ಸಂಭ್ರಮದ ಹಬ್ಬ ನವರಾತ್ರಿಗೆ ಬೆಂಗಳೂರು ನಗರ ಸಿದ್ಧವಾಗುತ್ತಿದೆ. ವಿವಿಧ ಶೈಲಿಯ ದಸರಾ ಗೊಂಬೆಗಳ ಉತ್ಸವ ನಡೆಯುತ್ತಿದ್ದು, ಬೆಂಗಳೂರು ಜನರು ಗೊಂಬೆಗಳ ಖರೀದಿ ಮಾಡುತ್ತಿದ್ದಾರೆ.

    ದಸರಾ ಹಬ್ಬದ ಪ್ರಯುಕ್ತ ಮಲ್ಲೇಶ್ವರಂನ ವರ್ಣ ಸ್ಟೋರ್ ಗೊಂಬೆಗಳ ಉತ್ಸವ ಆಯೋಜಿಸಿದ್ದಾರೆ. ಇದು ಗೊತ್ತಾಗುತ್ತಿದ್ದಂತೆ ಸಿಲಿಕಾನ್ ಸಿಟಿ ಮಂದಿ ಗೊಂಬೆಗಳನ್ನ ಖರೀದಿಸಲು ಮುಗಿಬಿದ್ದಿದ್ದಾರೆ. ಈ ಉತ್ಸವದಲ್ಲಿ ಬಣ್ಣ ಬಣ್ಣದ ಗೊಂಬೆ, ದೀಪಗಳಿಂದ ಕಂಗೊಳಿಸುತ್ತಿರುವ ಪುಟಾಣಿ ಅರಮನೆ, ಅಂಬಾರಿ, ವಿಧಾನಸೌಧ, ಮದುವೆ ಸೆಟ್ಟು ಮತ್ತು ಅನ್ನದಾತ ಗೊಂಬೆಗಳನ್ನು ಕಾಣಬಹುದಾಗಿದೆ.

    ಈ ಉತ್ಸವದಲ್ಲಿ 500 ಬಗೆಯ ಗೊಂಬೆಗಳಿದ್ದು, ಚನ್ನಪಟ್ಟಣ ಸೇರಿದಂತೆ ಬೇರೆ ಬೇರೆ ರಾಜ್ಯದಿಂದಲೂ ತರಲಾಗುತ್ತಿದೆ. ಈ ಬಾರಿ ಮಕ್ಕಳಿಗೆ ಇಷ್ಟವಾಗುವ ಕಾರ್ಟೂನ್‍ನಲ್ಲಿ ಬರುವ ಚಿತ್ರಗಳ ಗೊಂಬೆಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ ಎಂದು ಗೊಂಬೆ ಉತ್ಸವದ ಆಯೋಜಕರು ಅರುಣ್ ಹೇಳಿದ್ದಾರೆ.

    ಮೈಸೂರು ಅಷ್ಟೇ ಅಲ್ಲ ಸಿಲಿಕಾನ್ ಸಿಟಿಯಲ್ಲೂ ದಸರಾ ಉತ್ಸವ ಕಳೆಗಟ್ಟುತ್ತಿದ್ದು, ಈ ಉತ್ಸವ ಅಕ್ಟೋಬರ್ 19ರ ವರೆಗೂ ಇರಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರಲ್ಲಿ ಯುವ ದಸರಾ ಸಂಭ್ರಮ – ಯೂತ್ಸ್ ಉತ್ಸಾಹ ಹೆಚ್ಚಿಸಿದ್ರು ನಟಿ ಹರ್ಷಿಕಾ

    ಮೈಸೂರಲ್ಲಿ ಯುವ ದಸರಾ ಸಂಭ್ರಮ – ಯೂತ್ಸ್ ಉತ್ಸಾಹ ಹೆಚ್ಚಿಸಿದ್ರು ನಟಿ ಹರ್ಷಿಕಾ

    ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ 2018ರ ಸಂಭ್ರಮ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭಾನುವಾರ ಯುವ ಸಂಭ್ರಮಕ್ಕೆ ಚಾಲನೆ ನೀಡಲಾಗಿದ್ದು, ನಟಿ ಹರ್ಷಿಕಾ ಪೂಣಚ್ಚ ಯೂತ್ಸ್ ಉತ್ತಾಹ ಹೆಚ್ಚಿಸಿದ್ದಾರೆ.

    ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಡೋಲು ಬಾರಿಸುವ ಮೂಲಕ ಯುವ ಸಂಭ್ರಮಕ್ಕೆ ಚಾಲನೆ ನೀಡಿದರು. ಇದೇ ವೇಳೆ ಶಾಸಕರಾದ ಎಲ್.ನಾಗೇಂದ್ರ, ಅಶ್ವಿನ್ ಕುಮಾರ್, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಎಸ್‍ಪಿ ಅಮಿತ್ ಸಿಂಗ್ ಉಪಸ್ಥಿತರಿದ್ದರು.

    ಯುವ ಸಂಭ್ರಮಕ್ಕೆ ನಟಿ ಹರ್ಷಿಕಾ ಪೂರ್ಣಚ್ಚ ತಾರಾ ಮೆರಗು ನೀಡಿದರು. ಭಾನುವಾರದಿಂದ ಅಕ್ಟೋಬರ್ 7ರ ವರೆಗೂ ಯುವ ಸಂಭ್ರಮ ನಡೆಯಲಿದ್ದು, ಪ್ರತಿದಿನ 20 ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ.

    ಯುಕ್ರೆನ್ ದೇಶದ ಯುಲಿಯಾ ನೃತ್ಯಗಾರ್ತಿ ವಿಶೇಷ ನೃತ್ಯ ಮಾಡಿದ್ದಾರೆ. ಕ್ಲಸ್ಟರ್ ಇಲಿಯಂ ಬಲೂನ್ ಮೂಲಕ ನೃತ್ಯ ಮಾಡಲಾಗಿದ್ದು, ಬಯಲು ರಂಗಮಂದಿರದ ಯುವ ಸಂಭ್ರಮದಲ್ಲಿ ಯುವ ಸಮೂಹ ಮಿಂದೆದ್ದಿದ್ದಾರೆ.

    ವಿಂಟೇಜ್ ಕಾರು ರ‍್ಯಾಲಿ ಕೂಡ ಮೈಸೂರಿಗೆ ತಲುಪಿದೆ. ಐತಿಹಾಸಿಕ ವಾಹನಗಳ ಭಾರತದ ಕಾರು ಒಕ್ಕೂಟ ಹಾಗೂ ಯುನೆಸ್ಕೋ ಸಹಯೋಗದಲ್ಲಿ ಕಾರ್ ರ‍್ಯಾಲಿ ನಡೆದಿದೆ. ಭಾನುವಾರ ಬೆಳಗ್ಗೆ ಬೆಂಗಳೂರಿನಲ್ಲಿ ಸಿಎಂ ಕುಮಾರಸ್ವಾಮಿ ರ‍್ಯಾಲಿ ಉದ್ಘಾಟಿಸಿದ್ದರು. ವಿಧಾನಸೌಧ ಆವರಣದಲ್ಲಿ ವಿಂಟೇಜ್ ಕಾರ್ ರ್ಯಾಲಿಗೆ ಚಾಲನೆ ನೀಡಿದರು.

    ಬೆಂಜ್, ಫೋಕ್ಸ್ ವಾಗನ್, ಬೀಡಲ್ ಕಾರು ಸೇರಿದಂತೆ 19ನೇ ಶತಮಾನದ ಕಾರ್ ಗಳ ರ‍್ಯಾಲಿ ನಡೆದಿದೆ. ಸದ್ಯ ವಿಂಟೇಜ್ ಕಾರುಗಳನ್ನು ನೋಡಲು ಜನತೆ ಮುಗಿಬಿದ್ದಿದ್ದು, ಕಾರುಗಳು ಲಲಿತ್ ಮಹಲ್ ತಲುಪಿದೆ. ಸಚಿವ ಜಿ.ಟಿ ದೇವೇಗೌಡ ವಿಂಟೇಜ್ ಕಾರಿನಲ್ಲಿ ಸುತ್ತು ಹೊಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರಮನೆ ಅಂಗಳದಲ್ಲಿ ಸ್ಯಾಂಡಲ್ ವುಡ್ ನಟರ ಕಲರವ

    ಅರಮನೆ ಅಂಗಳದಲ್ಲಿ ಸ್ಯಾಂಡಲ್ ವುಡ್ ನಟರ ಕಲರವ

    ಮೈಸೂರು: ಈ ಬಾರಿಯ ದಸರಾ ಹಬ್ಬದ ಸಿದ್ಧತೆಗಳು ನಡೆಯುತ್ತಿರುವ ನಡುವೇ ಸ್ಯಾಂಡಲ್ ವುಡ್ ನಟರ ದಂಡು ಮೈಸೂರು ಅರಮನೆ ಅಂಗಳಕ್ಕೆ ಆಗಮಿಸಿದ್ದು, ಹಬ್ಬದ ಸಂಭ್ರಮಕ್ಕೂ ಮುನ್ನವೇ ಸಂತಸ ವಾತಾರಣ ನಿರ್ಮಾಣವಾಗಲು ಕಾರಣವಾಯಿತು.

    ಚಾಲೆಂಜಿಗ್ ಸ್ಟಾರ್ ದರ್ಶನ್, ಸೃಜನ್ ಲೋಕೇಶ್, ಪ್ರಜ್ವಲ್ ದೇವರಾಜ್, ಹಾಸ್ಯ ನಟರಾದ ವಿಶ್ವ, ಮಂಡ್ಯ ರಮೇಶ್ ಸೇರಿದಂತೆ ಹಲವು ನಟರು ಇಂದು ಅರಮನೆ ಆವರಣಕ್ಕೆ ಆಗಮಿಸಿದ್ದರು. ಈ ವೇಳೆ ಗಜಪಡೆ ಕಂಡು ಖುಷಿ ಪಟ್ಟರು. ಅಂಬಾರಿ ಆನೆ ಅರ್ಜುನನ್ನು ಕಂಡ ದರ್ಶನ್, ಅದರ ಮೈಸವರಿ ಖುಷಿ ಪಟ್ಟರು. ಬಳಿಕ ಗಜಪಡೆಯೊಂದಿಗೆ ಆಗಮಿಸಿರುವ ಕಾವಾಡಿ ಮತ್ತು ಮಾವುತರ ಕುಟುಂಬಸ್ಥರನ್ನ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು.

    ನಟ ದರ್ಶನ್ ಇದೇ ವೇಳೆ ಮಾವುತರು ಮತ್ತು ಕಾವಾಡಿ ಕುಟುಂಬಕ್ಕೆ ಆತಿಥ್ಯ ಕಾರ್ಯಕ್ರಮ ಆಯೋಜಿಸಿದ್ದರು. ಈ ಆತಿಥ್ಯ ಕಾರ್ಯಕ್ರಮದಲ್ಲಿ ಸಿನಿತರೆಯಾರರೊಂದಿಗೆ ರಾಜವಂಶಸ್ಥ ಯದುವೀರ್ ಕೂಡ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಕಾರ್ಯಕ್ರಮದಲ್ಲಿ ಎಲ್ಲರೊಂದಿಗೆ ಊಟ ಮಾಡುವ ಮೂಲಕ ನಟರು ತಮ್ಮ ಸರಳತೆ ಮೆರೆದರು.

    ಈ ವೇಳೆ ಮಾತನಾಡಿದ ಯದುವೀರ್, ನಟ ದರ್ಶನ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಎಲ್ಲರು ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತಸ ತಂದಿದೆ. ಈ ಬಾರಿ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ಎಂದಿನಂತೆ ನಡೆಯಲಿದ್ದು, ಆದ್ಯವೀರ್ ಕೂಡ ಈ ಬಾರಿಯ ದಸರಾ ಕ್ಷಣಗಳಿಗೆ ಭಾಗಿಯಾಗುತ್ತಿರುವುದು ಮತ್ತಷ್ಟು ಸಂತಸ ತಂದಿದೆ. ಅಕ್ಟೋಬರ್ 10 ರಿಂದ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ವಿಜಯ ದಶಮಿ 19ಕ್ಕೆ ನಿಗಧಿಯಾಗಿದೆ. ಪ್ರತಿ ವರ್ಷದಂತೆ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೇ ದಸರಾ ಕಾರ್ಯಕ್ರಮಗಳು ಈಗಾಗಲೇ ಚುರುಕುಗೊಂಡಿವೆ ಎಂದು ತಿಳಿಸಿದರು.

    ಆತಿಥ್ಯ ಕಾರ್ಯಕ್ರಮದ ಬಳಿಕ ನಟ ದರ್ಶನ್ ಹಾಗೂ ಯದುವೀರ್, ಮಾವುತ ಮತ್ತು ಕಾವಾಡಿ ಕುಟುಂಬಸ್ಥರಿಗೆ ಹೊಸ ಬಟ್ಟೆ, ಬೆಡ್ ಶೀಟ್, ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ದಸರಾದಲ್ಲಿ ಆದ್ಯವೀರ್ ಭಾಗಿಯಾಗ್ತಿರೋದು ಖುಷಿ ತಂದಿದೆ: ಯದುವೀರ್ ಒಡೆಯರ್

    ದಸರಾದಲ್ಲಿ ಆದ್ಯವೀರ್ ಭಾಗಿಯಾಗ್ತಿರೋದು ಖುಷಿ ತಂದಿದೆ: ಯದುವೀರ್ ಒಡೆಯರ್

    ಮೈಸೂರು: ಐತಿಹಾಸಿಕ ನಾಡ ಹಬ್ಬ ದಸರಾಗೆ ನಾಡಿನ ಜನತೆ ಸಿದ್ಧರಾಗುತ್ತಿದ್ದು, ಈ ಬಾರಿ ವಿಶೇಷವಾಗಿ ಯದುವಂಶದ ಕುಡಿ ಆದ್ಯವೀರ್ ನರಸಿಂಹರಾಜ ಒಡೆಯರ್ ಭಾಗಿಯಾಗುತ್ತಿರುವುದು ಖುಷಿ ತಂದಿದೆ ಎಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.

    ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಯದುವೀರ್, ಈ ಬಾರಿಯ ದಸರಾದಲ್ಲಿ ಮಗ ಆದ್ಯವೀರ್ ಭಾಗಿಯಾಗುತ್ತಿರುವುದು ಸಂತಸದ ವಿಚಾರ. ನಮ್ಮ ಕುಟಂಬದ ಮತ್ತೊಬ್ಬ ಸದಸ್ಯ ಹಲವು ವರ್ಷಗಳ ನಂತರ ಪಾಲ್ಗೊಳ್ಳುತ್ತಿರುವುದು ಸಂತಸ ಇಮ್ಮಡಿಗೊಳಿಸಿದೆ. ದಸರಾದ ಸಿದ್ಧತೆಯಲ್ಲಿ ತೊಡಗಿಕೊಂಡಿರುವುದರಿಂದ ಆದ್ಯವೀರ್‍ರನ್ನು ಗಮನಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.

    ಅಕ್ಟೋಬರ್ 10 ರಿಂದ ಅರಮನೆಯಲ್ಲಿ ದಸರಾ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ವಿಜಯ ದಶಮಿ 19ಕ್ಕೆ ನಿಗಧಿಯಾಗಿದೆ. ಪ್ರತಿ ವರ್ಷದಂತೆ ಎಲ್ಲಾ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೇ ದಸರಾ ಕಾರ್ಯಕ್ರಮಗಳು ಈಗಾಗಲೇ ಚುರುಕುಗೊಂಡಿವೆ ಎಂದು ತಿಳಿಸಿದರು. ಇದನ್ನೂ ಓದಿ: ಮೊದಲ ದಸರಾಗೆ ಸಜ್ಜಾದ ಆದ್ಯವೀರ್ – ಈಗ ಅರಮನೆ ಒಡೆಯರ್ ಹೀಗಿದ್ದಾರೆ

    ಆದ್ಯವೀರ್ ಒಡೆಯರ್ ಅವರು 2017ರ ಡಿಸೆಂಬರ್ 6 ರಲ್ಲಿ ಜನಿಸಿದ್ದರು. ಆದ್ದರಿಂದ ಆದ್ಯವೀರ್ ಗೆ ಇದೇ ಮೊದಲ ದಸರವಾಗಿದೆ. ಈ ಬಾರಿಯ ದಸರಾ ವಿಶೇಷವಾಗಿದೆ. ಏಕೆಂದರೆ ಮೈಸೂರಿನ ಸಂಸ್ಥಾನದ ಯದುವಂಶಕ್ಕೆ ಸುಮಾರು 6 ದಶಕಗಳಿಂದ ಸಂತಾನವೇ ಇರಲಿಲ್ಲ. ಕಳೆದ ವರ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ದಂಪತಿಗೆ ಆದ್ಯವೀರ್ ಜನಿಸುವ ಮೂಲಕ ರಾಜಮನೆತನಕ್ಕೆ ಸಂತಾನ ಪ್ರಾಪ್ತಿಯಾಗಿತ್ತು. ಈ ಸಂತಸವನ್ನು ಇಡೀ ನಾಡಿನ ಜನತೆಯೂ ಸಂಭ್ರಮಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮೊದಲ ದಸರಾಗೆ ಸಜ್ಜಾದ ಆದ್ಯವೀರ್ – ಈಗ ಅರಮನೆ ಒಡೆಯರ್ ಹೀಗಿದ್ದಾರೆ

    ಮೊದಲ ದಸರಾಗೆ ಸಜ್ಜಾದ ಆದ್ಯವೀರ್ – ಈಗ ಅರಮನೆ ಒಡೆಯರ್ ಹೀಗಿದ್ದಾರೆ

    ಮೈಸೂರು: ಐತಿಹಾಸಿಕ ಹಬ್ಬ ದಸರಾಗೆ ನಾಡಿನ ಜನತೆ ಸಿದ್ಧರಾಗುತ್ತಿದ್ದಾರೆ. ಇತ್ತ ಗಜಪಡೆಗಳು ಕೂಡ ಸಜ್ಜಾಗುತ್ತಿದ್ದು, ಯದುವಂಶದ ಆದ್ಯವೀರ್ ನರಸಿಂಹರಾಜ ಒಡೆಯರ್ ಕೂಡ ತನ್ನ ಮೊದಲ ದಸರಾ ಹಬ್ಬಕ್ಕೆ ತಯಾರಾಗುತ್ತಿದ್ದಾರೆ.

    ಆದ್ಯವೀರ್ ಡಿಸೆಂಬರ್ 6 2017ರಲ್ಲಿ ಜನಿಸಿದ್ದರು. ಆದ್ದರಿಂದ ಆದ್ಯವೀರ್ ಗೆ ಇದೇ ಮೊದಲ ದಸರವಾಗಿದೆ. ಈ ಬಾರಿಯ ದಸರಾ ವಿಶೇಷವಾಗಿದೆ. ಆದ್ದರಿಂದ ಮೈಸೂರಿನ ಸಂಸ್ಥಾನದ ಯದುವಂಶಕ್ಕೆ ಸುಮಾರು 6 ದಶಕಗಳಿಂದ ಸಂತಾನ ಇರಲಿಲ್ಲ. ಆದರೆ ಕಳೆದ ವರ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ದಂಪತಿಗೆ ಆದ್ಯವೀರ್ ಜನಿಸುವ ಮೂಲಕ ರಾಜಮನೆತನಕ್ಕೆ ಸಂತಾನ ಪ್ರಾಪ್ತಿಯಾಗಿತ್ತು. ಈ ಸಂತಸವನ್ನು ಇಡೀ ನಾಡಿನ ಜನತೆಯೂ ಸಂಭ್ರಮಿಸಿತ್ತು.

    ಆದ್ಯವೀರ್ ಜನಿಸಿ ಸುಮಾರು ಒಂಭತ್ತು ತಿಂಗಳಾಗಿದೆ. ಇದುವರೆಗೂ ಅವರ ಫೋಟೋ ಎಲ್ಲಿಯೂ ಲಭ್ಯವಾಗಿರಲಿಲ್ಲ. ಆದರೆ ಈಗ ಅವರು ಹೇಗಿದ್ದಾರೆ ಎಂಬುದನ್ನು ಈ ಫೋಟೋ ಮೂಲಕ ತಿಳಿಯಬಹುದು. ಆದ್ಯವೀರ್ ಅವರು ತಮ್ಮ ತಾಯಿ ತ್ರಿಷಿಕಾ ಅವರ ಆರೈಕೆಯಲ್ಲಿದ್ದಾರೆ.

    ಈಗಾಗಲೇ ದಸರಾಗೆ ಅರ್ಜುನ ಮತ್ತು ತಂಡ ಅರಮನೆಗೆ ಬಂದಿದ್ದು, ಅವುಗಳಿಗೆ ಪೌಷ್ಠಿಕ ಆಹಾರ ನೀಡುವ ಮೂಲಕ ಆರೈಕೆ ಮಾಡಲಾಗುತ್ತಿದೆ. ಪ್ರತಿದಿನ ಆನೆಗಳಿಗೆ ರಸ್ತೆಗಳಲ್ಲಿ ತಾಲೀಮು ನಡೆಯುತ್ತಿದೆ. ತೂಕವನ್ನು ಕೂಡ ಅಳತೆ ಮಾಡಲಾಗಿದೆ. ಇತ್ತೀಚೆಗಷ್ಟೆ ಅರ್ಜುನ ಮತ್ತು ತಂಡದ ಆನೆಗಳು ಅರಮನೆ ಮುಂದೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದವು. ನಾಡಿನ ಹಬ್ಬವಾದ ದಸರಾಗೆ ಸಕಲ ಸಿದ್ಧತೆ ಕೂಡ ನಡೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಅರಮನೆ ಆವರಣದಲ್ಲಿ ಆರಂಭವಾಯ್ತು ಟೆಂಟ್ ಶಾಲೆ -ಇತ್ತ ಫಿರಂಗಿ ಪೂಜೆ

    ಅರಮನೆ ಆವರಣದಲ್ಲಿ ಆರಂಭವಾಯ್ತು ಟೆಂಟ್ ಶಾಲೆ -ಇತ್ತ ಫಿರಂಗಿ ಪೂಜೆ

    ಮೈಸೂರು: ಅರಮನೆ ಆವರಣದಲ್ಲಿ ಕಾಡಿನ ಮಕ್ಕಳಿಗೆ ಟೆಂಟ್ ಶಾಲೆ ಆರಂಭವಾಗಿದ್ದು, ಇನ್ನೊಂಡೆ ಫಿರಂಗಿ ತಾಲೀಮಿಗಾಗಿ ಅರಮನೆಯಲ್ಲಿ ಫಿರಂಗಿ ಪೂಜೆ ನಡೆದಿದೆ.

    ಗಜಪಡೆಯ ಜೊತೆ ಇರುವ ಕಾಡಿನ ಜನರ ಮಕ್ಕಳಿಗಾಗಿ ಈ ಟೆಂಟ್ ಶಾಲೆ ಆರಂಭಿಸಲಾಗಿದೆ. ಕಾಡಿನ ಮಕ್ಕಳು ಒಂದು ತಿಂಗಳು ಶಾಲೆಯಿಂದ ದೂರ ಇರಬಾರದೆಂದು ಎಂಬ ಉದ್ದೇಶದಿಂದ ಈ ಟೆಂಟ್ ಶಾಲೆ ತೆರೆಯಲಾಗಿದೆ. ಆನೆಗಳ ಕಾವಾಡಿ ಮತ್ತು ಮಾವುತರ 20 ಮಕ್ಕಳು ಈ ಶಾಲೆಗೆ ಬರುತ್ತಾರೆ ಎಂದು ಟೆಂಟ್ ಶಾಲೆ ಶಿಕ್ಷಕಿ ನೂರ್ ಫಾತಿಮಾ ಹೇಳಿದ್ದಾರೆ.

    ಇತ್ತ ದಸರಾ ಜಂಬೂ ಸವಾರಿ ದಿನ 21 ಕುಶಲತೋಪು ಸಿಡಿಸಲಾಗುತ್ತದೆ. ಆ ಸಿಡಿತದ ಸದ್ದಿಗೆ ಆನೆಗಳು ಬೆಚ್ಚದಂತೆ ಅವುಗಳಿಗೆ ಸದ್ದನ್ನು ಪರಿಚಯಿಸಲು ಫಿರಂಗಿ ತಾಲೀಮು ಮಾಡಲಾಗುತ್ತದೆ. ಇವತ್ತು ಅರಮನೆ ಮುಂಭಾಗದಲ್ಲಿನ ಫಿರಂಗಿಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಫಿರಂಗಿ ತಾಲೀಮಿಗೆ ಚಾಲನೆ ನೀಡಲಾಯಿತು.

    ಇಂದು ಬೆಳಗ್ಗೆ ಪ್ರವಾಸೋದ್ಯಮ ಇಲಾಖೆಯೂ, ದಸರಾ ಹಾಗೂ ರಾಜ್ಯದ ಪ್ರವಾಸೋದ್ಯಮದ ಪ್ರಚಾರಕ್ಕಾಗಿ ಗಜಪಡೆಯ ಫೋಟೋ ಶೂಟ್ ಅನ್ನು ಅರಮನೆ ಮುಂಭಾಗ ನಡೆಸಿದೆ. ಆರು ಆನೆಗಳು ಫೋಟೋಗೆ ಫೋಸ್ ನೀಡಿದವು. ಈ ಆನೆಗಳ ಮುಂದೆ ಮಾಡೆಲ್‍ಗಳು, ಭರತನಾಟ್ಯ ಕಲಾವಿದೆಯರು ನಿಂತು ಕ್ಯಾಮಾರಾಗೆ ಫೋಸ್ ನೀಡಿದರು.

    ಒಂದು ಕಡೆ ದಸರಾ ಗಜಪಡೆಯ ತಾಲೀಮು ದಿನ ದಿನಕ್ಕೂ ಬಿರುಸುಗೊಳ್ಳುತ್ತಿದೆ. ಮತ್ತೊಂದು ಕಡೆ ದಸರಾ ಸಿದ್ಧತೆ ಕಾರ್ಯಗಳು ಚುರುಕುಗೊಳ್ಳುತ್ತಿವೆ. ಇದರಿಂದ ಮೈಸೂರಿನ ಅರಮನೆ ಅಂಗಳದಲ್ಲಿ ಈಗ ದಸರಾದ ವಾತಾವರಣ ನಿಧನವಾಗಿ ಕಳೆಕಟ್ಟುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜಪಥದಲ್ಲಿ ಗಜಪಡೆ ನಡಿಗೆ

    ರಾಜಪಥದಲ್ಲಿ ಗಜಪಡೆ ನಡಿಗೆ

    ಮೈಸೂರು: ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿದೆ. ಹೀಗಾಗಿ ದಸರಾ ಗಜಪಡೆಯ ತಾಲೀಮು ಕೂಡ ಮೈಸೂರಿನಲ್ಲಿ ಆರಂಭವಾಗಿದೆ. ಮೈಸೂರಿನ ರಾಜಪಥದಲ್ಲಿ ಇಂದು ಗಜಪಡೆ ತಾಲೀಮು ಆರಂಭಿಸಿದೆ.

    ಮೈಸೂರಿನಲ್ಲಿ 40 ದಿನ ಗಜಪಡೆಯೂ ವಾಕಿಂಗ್ ಮಾಡುತ್ತದೆ. ದಸರಾ ತಾಲೀಮು ರೂಪದ ವಾಕಿಂಗ್ ಅನ್ನು ಗಜಪಡೆಯೂ ಬೆಳಗ್ಗೆ ಮತ್ತು ಸಂಜೆ ಮಾಡಲಿವೆ. ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಯ ವಾಕಿಂಗ್ ಪ್ರತಿದಿನ ಅರಮನೆಯ ಆವರಣದಿಂದ ಆರಂಭವಾಗುತ್ತಿತ್ತು. ಈ ಬಾರಿ ದಸರಾದಲ್ಲಿ ಎಲ್ಲ 13 ಆನೆಗಳೂ ತಾಲೀಮಿನಲ್ಲಿ ಭಾಗಿಯಾಗಲಿದ್ದು, ಇದುವರೆಗೆ ಆರು ಆನೆಗಳು ನಡಿಗೆ ತಾಲೀಮು ನಡೆಸುತ್ತಿದೆ. ಶುಕ್ರವಾರ ಸಂಜೆಯಷ್ಟೇ ಮೈಸೂರಿಗೆ ಆಗಮಿಸಿದ್ದ ಎರಡನೇ ತಂಡದ ಆರು ಆನೆಗಳು ಮೊದಲನೇ ದಿನ ತಾಲೀಮು ನಡೆಸುತ್ತಿವೆ. ಇದನ್ನು ಓದಿ: ಮೈಸೂರೊಳಗೆ ದಸರಾ ಆನೆ ಟೀಂ ವಾಕಿಂಗ್- ವಿಡಿಯೋ ನೋಡಿ

    ಧನಂಜಯ ಆನೆಗೆ ಭಾರ ಹೊರುವ ತಾಲೀಮು ನೀಡಲಾಗಿದ್ದು, ಇಂದು ಧನಂಜಯನ ಬೆನ್ನಿಗೆ ಸುಮಾರು 300 ಕೆ.ಜಿ. ತೂಕದ ಭಾರವನ್ನು ಹೊರಿಸಲಾಗುತ್ತಿದೆ. ಅರ್ಜುನ ಶುಕ್ರವಾರ ಮರಳು ಮೂಟೆ ಹೊತ್ತಿದ್ದಾನೆ. ಇನ್ನೂ ಅರಣ್ಯ ಇಲಾಖೆ ಅಂಬಾರಿ ಹೊರಲು ಅರ್ಜುನ, ಧನಂಜಯ, ಬಲರಾಮನಿಗೆ ಪ್ರಾಕ್ಟೀಸ್ ಮಾಡಿಸುತ್ತಿದ್ದಾರೆ.

    ತಾಲೀಮು ಏಕೆ?
    ಆನೆಗಳಿಗೆ ಜನರ ಗದ್ದಲ, ವಾಹನಗಳ ಧ್ವನಿ ಮತ್ತು ರಸ್ತೆಯ ಪರಿಚಯ ಮಾಡುವ ಉದ್ದೇಶದಿಂದ ಈ ತಾಲೀಮು ಮಾಡಿಸಲಾಗುತ್ತದೆ. ಅಲ್ಲದೆ ಕಾಡಿನಲ್ಲಿ ಓಡಾಡುವ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ನಡೆಯುವುದನ್ನು ಅಭ್ಯಾಸ ಮಾಡಿಸುವುದು ಈ ತಾಲೀಮಿನ ಉದ್ದೇಶವಾಗಿದೆ. ತಾಲೀಮು ಮುಗಿದ ನಂತರ ಆನೆಗಳಿಗೆ ಪೌಷ್ಠಿಕ ಆಹಾರ ನೀಡಿ ಅವು ಸದೃಢವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಹಂತದಲ್ಲೂ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ಸಾಗಿ ಸುಸ್ತಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಆನೆ ವೈದ್ಯರಾದ ಡಾ. ನಾಗರಾಜ್ ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=cziWRBz4mkg

  • ಇತಿಹಾಸದಲ್ಲೇ ಮೊದಲು- ಈ ವರ್ಷ ಮೈಸೂರಿನಲ್ಲಿ 2 ಬಾರಿ ಜಂಬೂ ಸವಾರಿ

    ಇತಿಹಾಸದಲ್ಲೇ ಮೊದಲು- ಈ ವರ್ಷ ಮೈಸೂರಿನಲ್ಲಿ 2 ಬಾರಿ ಜಂಬೂ ಸವಾರಿ

    ಮೈಸೂರು: ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ನೀವು ಎರಡು ಬಾರಿ ದಸರಾ ಜಂಬೂ ಸವಾರಿಯನ್ನು ಕಣ್ತುಂಬಿ ಕೊಳ್ಳಬಹುದು. ಇಷ್ಟು ದಿನ ವಿಜಯದಶಮಿ ದಿನ ಮಾತ್ರ ನಡೆಯುತ್ತಿದ್ದ ಜಂಬೂ ಸವಾರಿ ಈ ಬಾರಿ ಎರಡು ಬಾರಿ ನಡೆಯಲಿದೆ.

    ಪ್ರತಿ ವರ್ಷವೂ ದಸರಾ ಪಂಜಿನ ಕವಾಯತು ಎರಡು ಬಾರಿ ನಡೆಯುತ್ತಿದೆ. ಕಾರ್ಯಕ್ರಮಕ್ಕೆ ಎರಡು ದಿನ ಮುಂಚೆ ರಿಹರ್ಸಲ್ ರೂಪದಲ್ಲಿ ಪಂಚಿನ ಕವಾಯತು ನಡೆಯುತ್ತದೆ. ಈ ಬಾರಿ ಜಂಬೂ ಸವಾರಿಯೂ ಕೂಡ ರಿಹರ್ಸಲ್ ನಡೆಯುವ ಕಾರಣ ಎರಡು ಬಾರಿ ಜನರು ಜಂಬೂ ಸವಾರಿ ನೋಡಬಹುದಾಗಿದೆ.

    ಅಕ್ಟೋಬರ್ 17 ರಂದು ಜಂಬೂ ಸವಾರಿ ರಿಹರ್ಸಲ್ ನಡೆಯಲಿದೆ. ಮೈಸೂರಿನ ಅರಮನೆಯಿಂದ ಬನ್ನಿಮಂಟಪದವರೆಗೂ ರಿಹರ್ಸಲ್‍ನ ಮೆರವಣಿಗೆ ಸಾಗಲಿದೆ. ಸ್ಥಬ್ಧ ಚಿತ್ರ ಹೊರತು ಪಡಿಸಿ ಎಲ್ಲಾ ಕಲಾ ತಂಡಗಳು ಮತ್ತು ಜಂಬೂ ಸವಾರಿ ದಿನ ಪಾಲ್ಗೋಳುವುದಕ್ಕೆ ಅವಕಾಶ ಸಿಗದ ಕಲಾ ತಂಡಗಳು ರಿಹರ್ಸಲ್‍ನಲ್ಲಿ ಭಾಗಿಯಾಗಲಿವೆ.

    ಕ್ಯಾಪ್ಟನ್ ಅರ್ಜುನ ನೇತೃತ್ವದ ಎಲ್ಲಾ ಆನೆಗಳು ಮೆರವಣಿಗೆಯಲ್ಲಿ ಸಾಗಲಿವೆ. ಆದರೆ ಅರ್ಜುನನಿಗೆ ಚಿನ್ನದ ಅಂಬಾರಿ ಹೊರಿಸಬೇಕೆ ಅಥವಾ ಮರದ ಅಂಬಾರಿಯನ್ನು ಮಾತ್ರ ಹೊರಿಸಬೇಕೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಇದನ್ನು ಹೊರತು ಪಡಿಸಿ ಜಂಬೂ ಸವಾರಿ ಹೇಗೆ ನಡೆಯುತ್ತೋ ಅದೇ ರೀತಿ ರಿಹರ್ಸಲ್ ಕೂಡ ನಡೆಯುತ್ತದೆ. ಜಂಬೂ ಸವಾರಿ ದಿನ ಬಹುತೇಕರಿಗೆ ಮೆರವಣಿಗೆ ವೀಕ್ಷಿಸಲು ಆಗುವುದಿಲ್ಲ. ಅಂತವರಿಗೆ ಇದೊಂದು ಅವಕಾಶವಾಗಿದೆ. ಮೆರವಣಿಗೆ ದಿನಕ್ಕೆ ಹೆಚ್ಚಿನ ಜನರನ್ನು ಮೈಸೂರಿನತ್ತ ಸೆಳೆಯುವ ಉದ್ದೇಶದಿಂದ ಕೂಡ ಈ ರಿಹರ್ಸಲ್ ಸಹಕಾರಿ ಅನ್ನೋದು ಜಿಲ್ಲಾಡಳಿತದ ಲೆಕ್ಕಚಾರವಾಗಿದೆ ಎಂದು ಜಿಲ್ಲಾಧಿಕಾರಿಗಳು ಅಭಿರಾಮ್ ಜಿ. ಶಂಕರ್ ಹೇಳಿದ್ದಾರೆ.

    ಖುದ್ದು ಸಿಎಂ ಎಚ್.ಡಿ. ಕುಮಾರಸ್ವಾಮಿ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಜಂಬೂ ಸವಾರಿ ರಿಹರ್ಸಲ್ ನಡೆಸುವಂತೆ ಸೂಚನೆ ಕೊಟ್ಟಿದ್ದಾರೆ. ಈ ರಿಹರ್ಸಲ್ ಯಶಸ್ವಿಯಾಗಿ ನಡೆದರೆ ಜಂಬೂ ಸವಾರಿ ರಿಹರ್ಸಲ್ ಅನ್ನೋದು ದಸರಾದಲ್ಲಿ ಖಾಯಂ ಆಗಿ ಉಳಿಯುತ್ತದೆ ಎಂದು ಶಂಕರ್ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಗಜಪಡೆಗೆ ಆರೈಕೆ ಮಾಡಿದ್ರು ಯದುವಂಶದ ಮಹಾರಾಜ

    ಗಜಪಡೆಗೆ ಆರೈಕೆ ಮಾಡಿದ್ರು ಯದುವಂಶದ ಮಹಾರಾಜ

    ಮೈಸೂರು: ದಸರಾದ ಪ್ರಮುಖ ಆಕರ್ಷಣೆಯಾದ ಗಜಪಡೆಗಳನ್ನು ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಆರೈಕೆ ಮಾಡಿದ್ದಾರೆ.

    ದಸರಾ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಅರ್ಜುನ ಅಂಡ್ ಟೀಂನ ಆನೆಗಳಿಗೆ ಮೈಸೂರು ಮಹಾರಾಜರು ಖುದ್ದು ಆರೈಕೆ ಮಾಡಿದರು. ಈ ವೇಳೆ ಅರ್ಜುನ ಆನೆಗೆ ಕಬ್ಬು, ಬೆಲ್ಲ ಹಾಗೂ ಬಾಳೆ ಹಣ್ಣನ್ನು ನೀಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ದಸರಾದಲ್ಲಿನ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಯು ವಿಶ್ವದಲ್ಲಿಯೇ ಪ್ರಖ್ಯಾತಿ ಪಡೆದುಕೊಂಡಿದೆ. ಈ ಬಾರಿಯು ಸಹ ಅರ್ಜುನ ದೇವಿ ಚಾಮುಂಡೇಶ್ವರಿಯನ್ನು ಹೊರಲಿದ್ದಾನೆ. ಹೀಗಾಗಿ ಅರ್ಜುನ ಹಾಗೂ ಇತರೆ ಆನೆಗಳಿಗೆ ಹೆಚ್ಚಿನ ಆರೈಕೆ ಮಾಡಲಾಗುತ್ತಿದೆ.

    ಈ ಕುರಿತು ತಮ್ಮ ಫೇಸ್ ಬುಕ್ ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿರುವ ಅವರು, ಮೈಸೂರಿನ ಸಂಸ್ಕೃತಿ ಹಾಗೂ ಸಂಪ್ರದಾಯ ಪರಂಪರೆಗಳಲ್ಲಿ ಆನೆಗಳು ಪ್ರಮುಖ ಪಾತ್ರ ವಹಿಸುತ್ತವೆ. ದಸರಾ ಮಹೋತ್ಸವಕ್ಕೆ ಆಗಮಿಸಿರುವ ಅರ್ಜುನ ಹಾಗೂ ಇತರೆ ಆನೆಗಳ ಗಜಪಡೆಯನ್ನು ನೋಡಿ, ಅವುಗಳಿಗೆ ಆಹಾರ ನೀಡಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಬರೆದುಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರೊಳಗೆ ದಸರಾ ಆನೆ ಟೀಂ ವಾಕಿಂಗ್- ವಿಡಿಯೋ ನೋಡಿ

    ಮೈಸೂರೊಳಗೆ ದಸರಾ ಆನೆ ಟೀಂ ವಾಕಿಂಗ್- ವಿಡಿಯೋ ನೋಡಿ

    ಮೈಸೂರು: ನಾಡಹಬ್ಬ ದಸರಾಗೆ ದಿನಗಣನೆ ಶುರುವಾಗಿದೆ. ಹೀಗಾಗಿ ದಸರಾ ಗಜಪಡೆಯ ತಾಲೀಮು ಕೂಡ ಮೈಸೂರಿನಲ್ಲಿ ಆರಂಭವಾಗಿದೆ. ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ತಾಲೀಮು ಆರಂಭಿಸಿದೆ.

    ಮೈಸೂರಿನ ಒಳಗೆ ಇನ್ನು 40 ದಿನ ಗಜಪಡೆಯೂ ವಾಕಿಂಗ್ ಮಾಡುತ್ತದೆ. ದಸರಾ ತಾಲೀಮು ರೂಪದ ವಾಕಿಂಗ್ ಅನ್ನು ಗಜಪಡೆಯೂ ಬೆಳಗ್ಗೆ ಮತ್ತು ಸಂಜೆ ಮಾಡಲಿವೆ. ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆಯ ವಾಕಿಂಗ್ ಪ್ರತಿದಿನ ಅರಮನೆಯ ಆವರಣದಿಂದ ಆರಂಭವಾಗಲಿದೆ. ಇದನ್ನೂ ಓದಿ: ರಾಜಬೀದಿಯಲ್ಲಿ ತಾಲೀಮು ಆರಂಭ: ದಸರಾ ಆನೆಗಳ ತೂಕ 1 ವರ್ಷದ ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?

    ದಸರಾ ಮೆರವಣಿಗೆ ಸಾಗುವ ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಹೈವೆ ವೃತ್ತದವರೆಗೆ ಇಂದು ಐದು ಕಿ.ಮೀ. ವಾಕಿಂಗ್ ಮಾಡಿದವು. ಕ್ಯಾಪ್ಟನ್ ಅರ್ಜುನ ಹಿಂದೆ ಧನಂಜಯ, ವಿಕ್ರಮ, ಗೋಪಿ, ಚೈತ್ರಾ, ವರಲಕ್ಷ್ಮಿ ಆನೆಗಳು ಹೆಜ್ಜೆ ಹಾಕಿದವು.

    ಆನೆಗಳಿಗೆ ಜನರ ಗದ್ದಲ, ವಾಹನಗಳ ಧ್ವನಿ ಮತ್ತು ರಸ್ತೆಯ ಪರಿಚಯ ಮಾಡುವ ಉದ್ದೇಶದಿಂದ ಈ ತಾಲೀಮು ಮಾಡಿಸಲಾಗುತ್ತದೆ. ಅಲ್ಲದೆ ಕಾಡಿನಲ್ಲಿ ಓಡಾಡುವ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ನಡೆಯುವುದನ್ನು ಅಭ್ಯಾಸ ಮಾಡಿಸುವುದು ಈ ತಾಲೀಮಿನ ಉದ್ದೇಶವಾಗಿದೆ. ತಾಲೀಮು ಮುಗಿದ ನಂತರ ಆನೆಗಳಿಗೆ ಪೌಷ್ಠಿಕ ಆಹಾರ ನೀಡಿ ಅವು ಸದೃಢವಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ಯಾವುದೇ ಹಂತದಲ್ಲೂ ಆನೆಗಳು ಸಿಮೆಂಟ್ ಹಾಗೂ ಕಾಂಕ್ರಿಟ್ ರಸ್ತೆ ಮೇಲೆ ಸಾಗಿ ಸುಸ್ತಾಗದಂತೆ ನೋಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದು ಆನೆ ವೈದ್ಯರಾದ ಡಾ. ನಾಗರಾಜ್ ಹೇಳಿದ್ದಾರೆ.

    ಆನೆಗಳ ವಾಕಿಂಗ್ ಕಂಡ ಜನರು ಸಾಮಾನ್ಯವಾಗಿ ಪುಳಕಿತಗೊಂಡಿದ್ದು, ಆನೆಗಳ ಫೋಟೋ ಮತ್ತು ಸೆಲ್ಫಿ ತೆಗೆದುಕೊಳ್ಳುತ್ತಾ ಆನೆಗಳ ವಾಕಿಂಗ್ ನೋಡಿ ಜನರು ಎಂಜಾಯ್ ಮಾಡಿದ್ದಾರೆ. ದಸರಾವರೆಗೂ ಈ ವಾಕಿಂಗ್ ಮೈಸೂರಲ್ಲಿ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=cziWRBz4mkg