Tag: ದಸರಾ

  • ಮೈಸೂರಿನ ದಸರಾದ ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿಗೆ ಡಿಮ್ಯಾಂಡ್

    ಮೈಸೂರಿನ ದಸರಾದ ಆಹಾರ ಮೇಳದಲ್ಲಿ ಬಂಬೂ ಬಿರಿಯಾನಿಗೆ ಡಿಮ್ಯಾಂಡ್

    -ಏನಿದು ಬಂಬೂ ಬಿರಿಯಾನಿ? ತಯಾರಿಸುವುದು ಹೇಗೆ?

    ಮೈಸೂರು: ದಸರಾ ಎಂದರೆ ಸಾಕು ಮೈಸೂರಲ್ಲಿ ಸ್ವರ್ಗವೇ ಧರೆಗೆ ಇಳಿದಂತೆ ಕಾಣುತ್ತದೆ. ಕಲೆ, ಸಾಹಿತ್ಯ, ಕ್ರೀಡೆ, ಸಿನಿಮಾ, ಮನರಂಜನೆ ದಸರಾದಲ್ಲಿ ನಡೆಯುತ್ತದೆ. ಆದರೆ ಇವುಗಳಲ್ಲಿ ಜನರನ್ನು ಪ್ರಮುಖವಾಗಿ ಆಹಾರ ಮೇಳ ಆಕರ್ಷಣೆ ಮಾಡುತ್ತದೆ. ಈ ಮೇಳದಲ್ಲಿ ಸೋಲಿಗರು ಮಾಡುವ ವಿಶೇಷ ಬಿರಿಯಾನಿಗೆ ಡಿಮ್ಯಾಂಡು.

    ಸಾಮಾನ್ಯವಾಗಿ ನಾವು ಧಮ್ ಬಿರಿಯಾನಿ, ದೊನ್ನೆ ಬಿರಿಯಾನಿ, ಆಂಧ್ರ ಬಿರಿಯಾನಿ, ಅಂಬೂರ್ ಬಿರಿಯಾನಿ ಈ ರೀತಿ ಬಿರಿಯಾನಿ ತಿಂದಿದ್ದೇವೆ. ನೀವು ಎಲ್ಲಾದರೂ ಬಂಬೂ ಬಿರಿಯಾನಿ ತಿಂದಿದ್ದಾರಾ? ಹೌದು. ಈಗ ಮೈಸೂರಲ್ಲಿ ಒಂದು ಕಡೆ ದಸರೆಯ ಸುಂದರ ಸೋಬಗು ಮನೆ ಮಾಡಿದರೆ, ಇನ್ನೊಂದು ಕಡೆ ಆಹಾರ ಮೇಳದಲ್ಲಿ ಎಲ್ಲರ ಬಾಯಲ್ಲಿ ಬಂಬೂ ಬಿರಿಯಾನಿಯದೇ ಮಾತು ಕೇಳಿ ಬರುತ್ತದೆ. ವರ್ಷಕ್ಕೆ ಒಂದು ಬಾರಿ ಕಳೆದ ಐದು ವರ್ಷದಿಂದ ಮೈಸೂರು ದಸರಾದ ಆಹಾರ ಮೇಳಕ್ಕೆ ಬಂಬೂ ಬಿರಿಯಾನಿ ಬರುತ್ತಿದೆ. ಮೈಸೂರು ಜಿಲ್ಲೆಯ ನಾಗರಹೊಳೆ ಕಾಡಿನಲ್ಲಿರುವ ಸೋಲಿಗರು ಈ ಬಂಬೂ ಬಿರಿಯಾನಿಯನ್ನು ತಯಾರು ಮಾಡುತ್ತಾರೆ.

    ಬಂಬೂ ಬಿರಿಯಾನಿ ಮಾಡೋದು ಹೇಗೆ..?
    25 ಮಂದಿ ಜನರನ್ನು ಹೊಂದಿರುವ ಸೋಲಿಗರ ಟೀಮ್ ಮಾಡುವ ಬಂಬೂ ಬಿರಿಯಾನಿಗೆ ಆಹಾರ ಮೇಳದಲ್ಲಿ ಜನರು ಮುಗಿ ಬಿಳುತ್ತಿದ್ದಾರೆ. ಈ ಸೋಲಿಗರು ಮೊದಲಿಗೆ ಟಮೋಟೋ, ಈರುಳ್ಳಿ, ಮೆಣಸಿನಕಾಯಿ, ತೆಂಗಿನಕಾಯಿ, ಚಕ್ಕೆ, ಲವಂಗ ಸೇರಿದಂತೆ ಇನ್ನಿತರ ಮಸಾಲ ಪದಾರ್ಥಗಳನ್ನು ಹಾಕಿ ಮಸಾಲೆ ರುಬ್ಬಿಕೊಳ್ಳುತ್ತಾರೆ. ರುಬ್ಬಿಕೊಂಡ ಮಸಾಲೆ, ಪಲಾವ್ ಎಲೆ, ಕೊತ್ತಂಬರಿ ಸೊಪ್ಪು ಮತ್ತು ನೀರಿನಲ್ಲಿ ನೆನಸದ ಅಕ್ಕಿಯನ್ನು ಒಂದು ಬಿದಿರಿನ ಬೊಂಬಿನಲ್ಲಿ ತುಂಬಲಾಗುತ್ತದೆ. ಇನ್ನೊಂದು ಬೊಂಬಿನಲ್ಲಿ ಶುಚಿಯಾಗಿ ತೊಳೆದ ಚಿಕನ್ ಹಾಗೂ ಮಸಾಲೆಯನ್ನು ತುಂಬಲಾಗುತ್ತದೆ. ಭರ್ತಿ ಮಾಡಿದ ಎರಡು ಬೊಂಬುಗಳನ್ನು ಬೆಂಕಿಗೆ ಹಾಕಲಾಗುತ್ತದೆ. ಬೆಂಕಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬೊಂಬುಗಳನ್ನು ಸುಡಲಾಗುತ್ತದೆ. ನಂತರ ಬೆಂಕಿಯಲ್ಲಿ ಬೆಂದ ಬೊಂಬುಗಳನ್ನು ಹೊರತೆಗೆದು, ಬೊಂಬನ್ನು ಓಪನ್ ಮಾಡಲಾಗುತ್ತದೆ. ನಂತರ ಚಿಕನ್ ಮತ್ತು ಪಲಾವ್‍ನ್ನು ಮಿಶ್ರಣ ಮಾಡಲಾಗುತ್ತದೆ. ಸಿದ್ಧವಾದ ಬೊಂಬು ಬಿರಿಯಾನಿಯನ್ನಾ 160ರೂ. ಕೊಟ್ಟು ತಿನ್ನಲು ಜನ ನಾ ಮುಂದು ತಾ ಮುಂದು ಎಂದು ಮುಗಿ ಬೀಳ್ತಾರೆ.

    ದಸರಾ ವೇಳೆಯಲ್ಲಿ ಮೈಸೂರಿಗೆ ಬರುವ ಬಂಬೂ ಬಿರಿಯಾನಿಗೆ ಆಹಾರ ಮೇಳದಲ್ಲಿ ವರ್ಷದಿಂದ ವರ್ಷಕ್ಕೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಆಹಾರ ಪ್ರಿಯರು ಆಹಾರ ಮೇಳಕ್ಕೆ ಬಂದು ಬಂಬೂ ಬಿರಿಯಾನಿಯ ಸ್ವಾದವನ್ನು ಸವಿಯುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರಿನಲ್ಲಿ ಗಣ್ಯಾತಿಗಣ್ಯರ ದಂಡು- ಒಂದೇ ಸೂರಿನಲ್ಲಿ ಮಹಾ ದಿಗ್ಗಜರ ಮಿಲನ

    ಮೈಸೂರಿನಲ್ಲಿ ಗಣ್ಯಾತಿಗಣ್ಯರ ದಂಡು- ಒಂದೇ ಸೂರಿನಲ್ಲಿ ಮಹಾ ದಿಗ್ಗಜರ ಮಿಲನ

    ಮೈಸೂರು: ಸಾಮಾನ್ಯವಾಗಿ ಸೆಲೆಬ್ರಿಟಿಗಳನ್ನು, ಗಣ್ಯ ವ್ಯಕ್ತಿಗಳನ್ನು ನೋಡಬೇಕು ಅಂತಾ ಎಲ್ಲರಿಗೂ ಆಸೆ ಇರತ್ತೆ. ಹಾಗೇ ಎಲ್ಲರನ್ನೂ ಒಟ್ಟಿಗೆ ನೋಡಬೇಕು ಅಂತಾ ಜನರು ಹಾತೋರೆಯುತ್ತಿರುತ್ತಾರೆ. ಇವೆಲ್ಲಕ್ಕೂ ಮೈಸೂರು ದಸರಾ ಅವಕಾಶ ಮಾಡಿಕೊಟ್ಟಿದೆ.

    ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ನೆಚ್ಚಿನ ನಟ, ನಟಿ, ರಾಜಕಾರಣಿಗಳು, ಸ್ಟಾರ್ ಫ್ಲೇಯರ್ಸ್ ಹೀಗೆ ತಮ್ಮಗೆ ಇಷ್ಟವಾದವರನ್ನು ಹತ್ತಿರದಿಂದ ನೋಡಿ ಕಣ್ಣು ತುಂಬಿಕೊಳ್ಳಬೇಕು ಅಂತಾ ಆಸೆ ಇರುತ್ತೆ. ಈ ಬಾರಿಯ ದಸರಾ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿದೆ. ಒಂದೇ ಸೂರಿನಲ್ಲಿ ಸುಮಾರು 100ಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳನ್ನು ತಂದಿದೆ. ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂನಲ್ಲಿ ಮೇಣದಿಂದ ರಾಜಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಅಬ್ದುಲ್ ಕಲಾಂ, ನರೇಂದ್ರ ಮೋದಿ, ಅಮಿತ್ ಶಾ, ಮೈಕೆಲ್ ಜಾಕ್ಸನ್ ಸೇರಿದಂತೆ ಅನೇಕರ ಪ್ರತಿಕೃತಿಯನ್ನು ನಿರ್ಮಾಣ ಮಾಡಲಾಗಿದೆ.

    ಅಷ್ಟೇ ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರರಾದ ಗಾಂಧೀಜಿ, ಭಗತ್ ಸಿಂಗ್, ಬಾಲ ಗಂಗಾಧರ ತಿಲಕ್ ಅವರ ಮೇಣದ ಪ್ರತಿಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ಶಿರಡಿ ಸಾಯಿಬಾಬಾ ಸ್ವಾಮಿ ವಿವೇಕಾನಂದ, ಪುಟ್ಟಪರ್ತಿ ಸಾಯಿಬಾಬಾ ಅವರ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗಿದೆ.

    ಮಕ್ಕಳಿಗೆ ಇಷ್ಟವಾಗುವ ಸೂಪರ್ ಮ್ಯಾನ್, ಮಿಸ್ಟರ್ ಬೀನ್, ಚಾರ್ಲಿ ಚಾಂಪಿಯನ್, ಧೋನಿ, ಜಾನ್ ಸೀನಾ ಅವರ ಪ್ರತಿಮೆಗಳು ಕಣ್ಮನ ಸೆಳೆಯುತ್ತಿವೆ. ಮೇಣದಿಂದ ಮಾಡಿರುವ ಗಣ್ಯರ ಪ್ರತಿಮೆ ನೋಡಿ ಪ್ರೇಕ್ಷಕರು ಹರ್ಷ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾ 2018: `ಕೈ’ ನಾಯಕರ ಗೈರು ಹಿಂದಿನ ರಹಸ್ಯ ಬಿಚ್ಚಿಟ್ರು ಪುಟ್ಟರಂಗ ಶೆಟ್ಟಿ

    ಮೈಸೂರು ದಸರಾ 2018: `ಕೈ’ ನಾಯಕರ ಗೈರು ಹಿಂದಿನ ರಹಸ್ಯ ಬಿಚ್ಚಿಟ್ರು ಪುಟ್ಟರಂಗ ಶೆಟ್ಟಿ

    ಚಾಮರಾಜನಗರ: ಮೈಸೂರು ದಸರಾ ನಾಡಹಬ್ಬದಲ್ಲಿ ಈ ಹಿಂದಿನಿಂದಲೂ ಚಾಮರಾಜನಗರ, ಮೈಸೂರು ಉಸ್ತುವಾರಿ ಸಚಿವರು ಹಾಗೂ ಸಿಎಂ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೆ ಈ ಬಾರಿ ಉಸ್ತುವಾರಿಯಾಗಿರುವ ಸಚಿವ ಜಿ.ಟಿ ದೇವೇಗೌಡ ಅವರು ತಮ್ಮ ಇಚ್ಛೆಯಂತೆ ವರ್ತಿಸುತ್ತಿದ್ದಾರೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ ಪುಟ್ಟರಾಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಾಮ್ ಕೇ ವಾಸ್ತೆಗೆ ದಸರಾ ಸಮಿತಿ ರಚಿಸಿ ನನ್ನನ್ನು ಉಪಾಧ್ಯಕ್ಷರಾಗಿ ನೇಮಕ ಮಾಡಿದ್ದು ಬಿಟ್ಟರೆ ಯಾವುದೇ ಇತರೆ ಕಮಿಟಿಗಳನ್ನು ರಚಿಸಿಲ್ಲ. ಈ ಕುರಿತು ಕೇಳಿದರೆ ಮಾಡೋಣ ಬಿಡಿ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಇಲ್ಲಿಯವರೆಗೆ ಕಮಿಟಿ ರಚಿಸಿ ಸೂಕ್ತ ಸ್ಥಾನಮಾನ ನೀಡಿಲ್ಲ. ಮೈಸೂರು, ಚಾಮರಾಜನಗರದಲ್ಲಿ ಇರುವ ಏಕೈಕ ಸಚಿವ ನಾನು. ಆದರೂ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಮೈಸೂರು ಭಾಗದಲ್ಲಿ ಕಾಂಗ್ರೆಸ್ ಮುಖಂಡರು ಯಾರೂ ಇಲ್ಲದ ಕಾರಣ ಕಮಿಟಿಗಳಲ್ಲಿ ನಮ್ಮವರನ್ನು ನೇಮಕ ಮಾಡುವುದು ನನ್ನ ಜವಾಬ್ದಾರಿಯಾಗಿತ್ತು. ಅದು ಕೂಡ ಸಾಧ್ಯವಾಗಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ನಡೆಯುತ್ತಿರುವುದರಿಂದ ನಾವು ಈ ಕುರಿತು ಏನೂ ಮಾತನಾಡಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಕೂಡ ನೀವು ಹೇಗೆ ಹೋಗುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ನಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ನಾನು ನಾಡಹಬ್ಬ ಮೈಸೂರಿನ ದಸರಾದಲ್ಲಿ ಭಾಗವಹಿಸುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಪಾಲುದಾರರಾದ ಕಾಂಗ್ರೆಸ್ ಸಚಿವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪ ಮಾಡಿದರು.

    ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭ ದಸರಾ ಸಾಂಸ್ಕೃತಿಕ  ಕಾರ್ಯಕ್ರಮಗಳಿಗೂ ಕಾಂಗ್ರೆಸ್ ಸಚಿವರು ಗೈರುಹಾಜರಾಗಿದ್ದರು. ಇದರೊಂದಿಗೆ ದೋಸ್ತಿ ಪಕ್ಷದಲ್ಲಿನ ಮುನಿಸು ಮತ್ತೊಮ್ಮೆ ಎದ್ದು ಕಾಣಿಸಿತ್ತು. ದಸರಾ ಕಾರ್ಯಕ್ರಮದ ಮೊದಲ ದಿನ ಮೈಸೂರು-ಚಾಮರಾಜನಗರದ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿಯೂ ಸಮಾರಂಭಕ್ಕೆ ಬಂದಿರಲಿಲ್ಲ. ಬುಧವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಸಚಿವೆ ಜಯಮಾಲ ಅವರು ಹಾಜರಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಅಪ್ಪನ ದರ್ಬಾರ್ ನೋಡಿ ಕಿಲಕಿಲ ನಕ್ಕ ಆದ್ಯವೀರ

    ಅಪ್ಪನ ದರ್ಬಾರ್ ನೋಡಿ ಕಿಲಕಿಲ ನಕ್ಕ ಆದ್ಯವೀರ

    ಮೈಸೂರು: ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಖಾಸಗಿ ದರ್ಬಾರ್ ಬುಧವಾರ ಆರಂಭವಾಗಿದ್ದು, ಈ ವೇಳೆ ಮೊದಲ ಬಾರಿಗೆ ಖಾಸಗಿ ದರ್ಬಾರಿನಲ್ಲಿ ಭಾಗವಹಿಸಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪುತ್ರ ಆದ್ಯವೀರ ನರಸಿಂಹರಾಜ ಒಡೆಯರ್ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು. ಈ ವೇಳೆ ಅಪ್ಪನ ದರ್ಬಾರ್ ಕಂಡ ಆದ್ಯವೀರ ತನ್ನ ಮುದ್ದ ನಗುವಿನ ಎಲ್ಲರ ಗಮನ ಸೆಳೆದಿದ್ದಾರೆ.

    ಅರಮನೆಯ ಖಾಸಗಿ ದರ್ಬಾರಿನಲ್ಲಿ ಭಾಗವಹಿಸಿದ್ದ ಆದ್ಯವೀರ ಅವರ ಫೋಟೋ ಲಭ್ಯವಾಗಿದ್ದು, ತಾಯಿ ತ್ರಿಷಿಕಾ ಹಾಗೂ ರಾಜಮಾತೆ ಪ್ರಮೋದಾ ದೇವಿ ಅವರ ಆರೈಕೆಯಲ್ಲಿದ್ದರು. ಪೂಜಾ ವಿಧಾನದಲ್ಲಿ ಪಾಲ್ಗೊಳ್ಳುವ ಮುನ್ನ ಅರಮನೆಗೆ ತಾಯಿಯೊಂದಿಗೆ ಆಗಮಿಸಿದ್ದ ಆದ್ಯವೀರ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಅಚ್ಚಯಿಂದಲೇ ಗಮನಿಸುತ್ತಿದ್ದರು. ಇತ್ತ ರಾಜಾಪೋಷಾಕಿನಲ್ಲಿ ಕಂಗೊಳಿಸುತ್ತಿರುವ ಯದುವೀರ್ ಅವರು ತಿಳಿ ನೀಲಿ ಬಣ್ಣ ಸಾಂಪ್ರದಾಯಿಕ ಮೈಸೂರಿನ ಪೇಟಾ, ಗುಲಾಬಿ ವರ್ಣದ ನಿಲುವಂಗಿ, ಪೈಜಾಮಾ ಧರಿಸಿದ್ದರು. ನಿಲುವಂಗಿಯ ಮೇಲೆ ಗಂಡಭೇರುಂಡ ರಾಜ ಲಾಂಛನ ರಾರಾಜಿಸುತ್ತಿತ್ತು. ಅಲ್ಲದೇ ಮುತ್ತಿನ ಹಾರ, ಸ್ವರ್ಣ ಹಾರ, ಸ್ವರ್ಣ ತೋಳು ಬಂದಿ, ಮುತ್ತು ರತ್ನ ಖಚಿತ ಉಂಗುರ ತೊಟ್ಟಿದ್ದರು.

    ಈ ಬಾರಿಯ ದಸರಾ ಐತಿಹಾಸಿಕವಾಗಿದ್ದು, ಯದುವಂಶದ ಆದ್ಯವೀರ ನರಸಿಂಹರಾಜ ಒಡೆಯರ್ ಕೂಡ ತಮ್ಮ ಮೊದಲ ದಸರಾ ಹಬ್ಬದಲ್ಲಿ ಭಾಗವಹಿಸಿದ್ದರು. ಡಿ. 6 2017ರಲ್ಲಿ ಜನಿಸಿದ್ದ ಆದ್ಯವೀರಿಗೆ ಇದೇ ಮೊದಲ ದಸರಾವಾಗಿದೆ. ಮೈಸೂರಿನ ಸಂಸ್ಥಾನದ ಯದುವಂಶಕ್ಕೆ ಸುಮಾರು 6 ದಶಕಗಳಿಂದ ಸಂತಾನ ಇರಲಿಲ್ಲ. ಆದರೆ ಕಳೆದ ವರ್ಷ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ದಂಪತಿಗೆ ಆದ್ಯವೀರ ಜನಿಸುವ ಮೂಲಕ ರಾಜಮನೆತನಕ್ಕೆ ಸಂತಾನ ಪ್ರಾಪ್ತಿಯಾಗಿತ್ತು. ಈ ಸಂತಸವನ್ನು ಇಡೀ ನಾಡಿನ ಜನತೆಯೂ ಸಂಭ್ರಮಿಸಿತ್ತು.

    ದಸರಾ ಆರಂಭಕ್ಕೂ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಆದ್ಯವೀರ ನರಸಿಂಹರಾಜ ಒಡೆಯರ್ ಭಾಗಿಯಾಗುತ್ತಿರುವುದು ಖುಷಿ ತಂದಿದೆ. ನಮ್ಮ ಕುಟಂಬದ ಮತ್ತೊಬ್ಬ ಸದಸ್ಯ ಹಲವು ವರ್ಷಗಳ ನಂತರ ಪಾಲ್ಗೊಳ್ಳುತ್ತಿರುವುದು ಸಂತಸ ಇಮ್ಮಡಿಗೊಳಿಸಿದೆ. ದಸರಾದ ಸಿದ್ಧತೆಯಲ್ಲಿ ತೊಡಗಿಕೊಂಡಿರುವುದರಿಂದ ಆದ್ಯವೀರನನ್ನು ಗಮನಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • Photos: ವಿದ್ಯುತ್ ದೀಪಗಳಿಂದಲೇ ಮಿಂದೆದ್ದ ಮೈಸೂರು- ಬೆಳಕಿನ ವೈಭವ ನೋಡುಗರ ಕಣ್ಣಿಗೆ ಹಬ್ಬ

    Photos: ವಿದ್ಯುತ್ ದೀಪಗಳಿಂದಲೇ ಮಿಂದೆದ್ದ ಮೈಸೂರು- ಬೆಳಕಿನ ವೈಭವ ನೋಡುಗರ ಕಣ್ಣಿಗೆ ಹಬ್ಬ

    ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದ ವಿದ್ಯುತ್ ದೀಪಾಲಂಕಾರ ಅದುವೇ ಬೆಳಕಿನ ಚಿತ್ತಾರ. ನಾನಾ ಬಗೆಯಲ್ಲಿ ಬೆಳಕು ಸೂಸುವ ಬಗೆಬಗೆಯ ವಿನ್ಯಾಸದ ಮನಮೋಹಕ ಬೆಳಕಿನ ವೈಭವ ನೋಡುಗರ ಕಣ್ಣುಗಳಲ್ಲಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡುತ್ತದೆ. ಈ ಬಾರಿ ವಿಭ್ನಿನವಾಗಿ ಹಾಗೂ ವಿಶೇಷವಾಗಿ ಅಲಂಕಾರ ಮಾಡಲಾಗಿದೆ.

    ದಸರಾ ವೇಳೆ ಮೈಸೂರು ಅರಮನೆ ಮಾತ್ರವಲ್ಲದೆ, ಇಡೀ ನಗರ ಕತ್ತಲಾಗುತ್ತಿದ್ದಂತೆಯೇ ವಿದ್ಯುತ್ ದೀಪಗಳ ಅಲಂಕಾರ, ಬೆಳಕಿನ ವೈಯ್ಯಾರ ಕಣ್ಣಿಗೆ ಕಟ್ಟುತ್ತಿದೆ. ನಗರದ ಎಲ್ಲಾ ರಸ್ತೆಗಳು ಹಾಗೂ ವೃತ್ತಗಳು ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸುತ್ತಿವೆ.

    ಈ ಬಾರಿ ವಿಶೇಷವಾಗಿ ನಗರದ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ಅನೇಕ ಗಣ್ಯರ ಹಾಗೂ ಪಾರಂಪರಿಕ ಕಟ್ಟಡಗಳನ್ನು ಬಿದಿರಿನಿಂದ ತಯಾರು ಮಾಡಿ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಚಾಮುಂಡೇಶ್ವರಿ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿಜೀ, ನಾಲ್ವಡಿ, ವಿಶ್ವೇಶ್ವರಯ್ಯ, ಕೃಷ್ಣರಾಜ ಒಡೆಯರ್, ಜಂಜೂ ಸವಾರಿ ಸೇರಿದಂತೆ ಅನೇಕ ಮಹನೀಯರ ಪ್ರತಿಕೃತಿಗಳನ್ನು ನಗರದಲ್ಲಿ ನಿರ್ಮಿಸಲಾಗಿದೆ.

    ಮೈಸೂರು ಅರಮನೆ, ಸಂಸತ್ ಭವನ, ವಿಧಾನಸೌಧ, ಕೆಆರ್‍ಎಸ್ ಇಂಡಿಯಾ ಗೇಟ್, ಹಂಪಿಯ ರಥ ಸೇರಿದಂತೆ ಹಲವು ಪ್ರತಿಕೃತಿಗಳು ಲೈಟ್ ಗಳಲ್ಲಿ ಜಗಮಗಿಸುತ್ತೀವೆ. ಪ್ರವಾಸಿಗರಿಗೆ ಇಂತಹ ಕಟ್ಟಡಗಳ ಮಹತ್ವವನ್ನು ಸಾರುವ ದೃಷ್ಟಿಯಿಂದ ಮಾಡಲಾಗಿದೆ.

    https://www.youtube.com/watch?v=KhpVKpi1lno

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈಸೂರು ದಸರಾ 2018- ಎರಡನೇ ದಿನವೂ ರಂಗೇರಿದ ಹತ್ತು ಹಲವು ಕಾರ್ಯಕ್ರಮಗಳು

    ಮೈಸೂರು ದಸರಾ 2018- ಎರಡನೇ ದಿನವೂ ರಂಗೇರಿದ ಹತ್ತು ಹಲವು ಕಾರ್ಯಕ್ರಮಗಳು

    ಮೈಸೂರು: ಜಿಲ್ಲೆಯ ದಸರಾ ಮಹೋತ್ಸವಕ್ಕೆ ಇಂದು ಎರಡನೇ ದಿನವಾಗಿದ್ದು, ಹತ್ತು ಹಲವು ಕಾರ್ಯಕ್ರಮಗಳು ನಡೆಯುತ್ತಿವೆ.

    ಎರಡನೇ ದಿನದ ಕಾರ್ಯಕ್ರಮಕ್ಕೆ ಪಾರಂಪರಿಕ ಉಡುಗೆಯಲ್ಲಿ ಸಚಿವ ಸಾ.ರಾ ಮಹೇಶ್ ಅವರಿಂದ ಪಾರಂಪರಿಕ ನಡಿಗೆಗೆ ಚಾಲನೆ ನೀಡಿದ್ದಾರೆ. ಬಾಲಕರಿಂದ ವೃದ್ಧರವರೆಗೆ ಪಾರಂಪರಿಕ ಉಡುಗೆ-ತೊಡುಗೆಯ ಮೂಲಕ ನಡಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೈಸೂರಿನ ನಾಗರೀಕರು ಮೈಸೂರು ಪೇಟ, ಸಿಲ್ಕ್ ಪಂಚೆ, ಸೀರೆ ತೊಟ್ಟು ಮಿಂಚಿದ್ದಾರೆ.

    ಮೈಸೂರಿನ ಪುರಭವನದಿಂದ ನಡಿಗೆ ಪ್ರಾರಂಭವಾಗಿದ್ದು, ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾಡಲಾಗುತ್ತಿದೆ. ಕೆ.ಆರ್ ವೃತ್ತ, ಕೆ.ಆರ್.ಆಸ್ಪತ್ರೆ ಸೇರಿದಂತೆ ಪ್ರಮುಖ ಪಾರಂಪರಿಕ ಕಟ್ಟಡಗಳ ಮಾರ್ಗದಿಂದ ಪ್ರವಾಸಿಗರಿಗೆ ಮೈಸೂರಿನ ಪರಂಪರೆಯ ಬಗ್ಗೆ ಮಾಹಿತಿ ನೀಡುವ ಈ ನಡಿಗೆ ಕಾರ್ಯಕ್ರಮ ಮಾಡಲಾಗಿದೆ. ಇದನ್ನು ಓದಿ: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಸುಧಾಮೂರ್ತಿ ಚಾಲನೆ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಹಿಳಾ ರಂಗೋಲಿ ಆಯೋಜನೆ ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ದರು. ರಂಗೋಲಿ ಸ್ಪರ್ಧೆಗೆ ಸಚಿವೆ ಜಯಮಾಲಾ ಚಾಲನೆ ನೀಡಿದರು. ಚಾಲನೆ ಬಳಿಕ ಸಚಿವೆ ಜಯಮಾಲ ಮಾತನಾಡಿ ರಂಗೋಲಿ ದೇವರಿಗೆ ಪ್ರಿಯ, ರಂಗೋಲಿಯಲ್ಲೂ ದೇವರಿದ್ದಾನೆ. ಬ್ಯಾಡ್ ಎನರ್ಜಿ ಹೊರ ಹಾಕುವ ಶಕ್ತಿ ರಂಗೋಲಿಗೆ ಇದೆ. ದಸರಾ ರಂಗೋಲಿ ಸ್ಪರ್ಧೆಯಲ್ಲಿ ಮಕ್ಕಳು ಭಾಗಿಯಾಗಿದ್ದಾರೆ. ನಾನು ರಂಗೋಲಿ ಬಿಡಿಸುತ್ತೇನೆ. ರಂಗೋಲಿ ಹಾಕೋದು ನನಗೆ ಇಷ್ಟ. ರಥಸಪ್ತಮಿ, ದೀಪಾವಳಿ ಮುಂತಾದ ಹಬ್ಬಗಳ ಸಂದರ್ಭದಲ್ಲಿ ನಾನು ರಂಗೋಲಿ ಬಿಡಿಸ್ತೇನೆ. ಇಂದು ರಂಗೋಲಿಯಲ್ಲಿ ಯಾರು ಪ್ರಥಮ ಬಹುಮಾನ ಪಡೀತಾರೋ ಅನ್ನೋ ಕೂತೂಹಲ ಇದೆ ಅಂತ ಹೇಳಿ ಎಲ್ಲಾ ಸ್ಪರ್ಧಾಳುಗಳಿಗೂ ಶುಭ ಕೋರಿದರು.

    ದಸರಾ ಕಾರ್ಯಕ್ರಮಗಳಿಗೆ ಕಾಂಗ್ರೆಸ್ ನಾಯಕರ ಗೈರು ವಿಚಾರಕ್ಕೆ ಸಂಬಂಧಪಟ್ಟಂತೆ ದಸರಾ ಇನ್ನು 10 ದಿನ ಬಾಕಿ ಇದೆ. ಕೊನೆ ದಿನದವರೆಗೆ ಕಾಯಿರಿ ಉತ್ತರ ಕೊಡುತ್ತೇನೆ ಎಂದು ಮೈಸೂರಿನಲ್ಲಿ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ. ಚುನಾವಣೆ ಕೆಲಸ, ಮಂಡ್ಯ, ಚಾಮರಾಜನಗರದ ದಸರಾದಲ್ಲಿ ಭಾಗಿಯಾಗಿದ್ದರಿಂದ ಮೈಸೂರಿನಲ್ಲಿ ಭಾಗಿಯಾಗಿಲ್ಲ. ಈಗಷ್ಟೇ ದಸರಾ ಪ್ರಾರಂಭವಾಗಿದೆ. ಅವರನ್ನ ವಿಶ್ವಾಸಕ್ಕೆ ತೆಗೆದುಕೊಂಡು ದಸರಾ ನಡೆಸುತ್ತಿದ್ದೇವೆ. ಪುಟ್ಟರಂಗಶೆಟ್ಟಿ ಬೇಡಿಕೆಯನ್ನ ಈಡೇರಿಸಿದ್ದೇವೆ. ಪ್ರಮೋದಾ ದೇವಿ ಅವರನ್ನು ಆಹ್ವಾನ ಮಾಡಲು ಬಂದಿದ್ದರು ಎಂದು ಕಾಂಗ್ರೆಸ್ ನಾಯಕರ ಗೈರಿನ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

    ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಬುಧವಾರ ಅದ್ಧೂರಿ ಚಾಲನೆ ಸಿಕ್ಕಿತ್ತು. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ನಾಡದೇವತೆ ಚಾಮುಂಡೇಶ್ವರಿಗೆ ತುಲಾ ಲಗ್ನದಲ್ಲಿ ಅಗ್ರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದ್ದರು. ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ ದೇವೆಗೌಡ, ಸಚಿವ ಸಾರಾ ಮಹೇಶ್ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸುಧಾಮೂರ್ತಿ ಕುಟುಂಬ ಸಮೇತರಾಗಿ ಚಾಮುಂಡಿ ದೇವಿಗೆ ಬಾಗೀನ ಅರ್ಪಿಸಿದ್ದರು. ನಿನ್ನೆ ಬೆಳಗ್ಗೆ 11 ಗಂಟೆಗೆ ಖಾಸಗಿ ದರ್ಬಾರ್ ನಡೆಯಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿಕ್ಕೋಡಿಯಲ್ಲಿ ಈ ಬಾರಿ ಸರಳ ದಸರಾ ಮಹೋತ್ಸವ

    ಚಿಕ್ಕೋಡಿಯಲ್ಲಿ ಈ ಬಾರಿ ಸರಳ ದಸರಾ ಮಹೋತ್ಸವ

    ಚಿಕ್ಕೋಡಿ: ಪ್ರತಿವರ್ಷ ಅತೀ ವಿಜೃಂಭಣೆಯಿಂದ ನಡೆಸುವ ಉತ್ತರ ಕರ್ನಾಟಕದ ಅದ್ದೂರಿ ಹುಕ್ಕೇರಿ ದಸರಾ ಮಹೋತ್ಸವವನ್ನು ಈ ಬಾರಿ ಅತ್ಯಂತ ಸರಳವಾಗಿ ನಡೆಸಲಾಯಿತು.

    ಪ್ರತಿವರ್ಷ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿರುವ ಹುಕ್ಕೇರಿ ಹಿರೇಮಠದ ವತಿಯಿಂದ ಆಚರಿಸುತ್ತಿದ್ದ ಅದ್ದೂರಿ ದಸರಾವನ್ನು ಈ ಬಾರಿ ಕೊಡಗು ಮತ್ತು ಕೇರಳ ನೆರೆ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ರಾಜ್ಯ ಜಲಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎನ್ ಜಯರಾಮ್ ಅತಿಥಿಯಾಗಿ ಆಗಮಿಸಿ ದಸರಾ ಉತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದ ರಮೇಶ್ ಕತ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್ ರಾಮಚಂದ್ರನ್ ಭಾಗವಹಿಸಿದ್ದರು.

    ಕಾರ್ಯಕ್ರಮದ ಕುರಿತು ಮಾತನಾಡಿದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕೊಡಗು ಮತ್ತು ಕೇರಳದಲ್ಲಿ ಭೀಕರ ನೆರೆಗೆ ಸಿಕ್ಕ ಜನರಿಗೆ ಬೇಗ ಪುನರ್ವಸತಿ ಸಿಗುವಂತಾಗಲಿ. ಆ ಕಾರಣದಿಂದಲೇ ಈ ಬಾರಿಯ ದಸರಾ ಮಹೋತ್ಸವನ್ನು ಸರಳ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದರು.

    ಕಾರ್ಯಕ್ರಮ ಮುಗಿದ ನಂತರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಂಸದ ರಮೇಶ್ ಕತ್ತಿ ಲೋಕಸಭಾ ಚುಣಾವಣೆಗೆ ನಾನು ಸೇರಿದಂತೆ ಅಣ್ಣಾ ಸಾಹೇಬ್ ಜೊಲ್ಲೆ, ಪ್ರಭಾಕರ್ ಕೋರೆ, ಅಮಿತ್ ಕೋರೆ, ಲಕ್ಷ್ಮಣ ಸವದಿ ಸೇರಿದಂತೆ ಎಲ್ಲರೂ ಆಕಾಂಕ್ಷಿಯಾಗಿದ್ದಾರೆ. ಆದರೆ ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಅವರನ್ನು ಗೆಲ್ಲಿಸಿ ಮತ್ತೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವುದು ನಮ್ಮ ಉದ್ದೇಶ ಅಂತ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಕಾಂಗ್ರೆಸ್ ನಾಯಕರು ಗೈರು!

    ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಕಾಂಗ್ರೆಸ್ ನಾಯಕರು ಗೈರು!

    ಮೈಸೂರು: ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭದಲ್ಲಿ ದೋಸ್ತಿ ಪಕ್ಷದಲ್ಲಿನ ಮುನಿಸು ಮತ್ತೊಮ್ಮೆ ಎದ್ದು ಕಾಣಿಸಿದ್ದು, ಮೈಸೂರು-ಚಾಮರಾಜನಗರದ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿಯೂ ಸಮಾರಂಭಕ್ಕೆ ಬಂದಿರಲಿಲ್ಲ. ಇದೀಗ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಕಾಂಗ್ರೆಸ್ ಸಚಿವರು ಗೈರುಹಾಜರಾಗಿದ್ದಾರೆ.

    ಅರಮನೆ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾದ ಪ್ರಮುಖ ಆಕರ್ಷಣೆಯಾಗಿವೆ. ಅರಮನೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಗೈರಾಗಿದ್ದಾರೆ. ಅರಮನೆಯ ಮುಂಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ ಜೆಡಿಎಸ್ ಸಚಿವರುಗಳು ಹಾಗೂ ಬಿಜೆಪಿ ಶಾಸಕರಷ್ಟೇ ಭಾಗಿಯಾಗಿದ್ದಾರೆ. ದಸರಾ ಉದ್ಘಾನೆಯಿಂದ ಸಾಂಸ್ಕೃತಿಕ ಕಾರ್ಯಕ್ರಮದ ವರೆಗೂ ಕಾಂಗ್ರೆಸ್ ಸಚಿವರು ಗೈರಾಗಿದ್ದಾರೆ. ಇದನ್ನು ಓದಿ: ದಸರಾ ಉದ್ಘಾಟನಾ ಸಮಾರಂಭದಲ್ಲೂ ದೋಸ್ತಿ ಪಕ್ಷದ ಮುನಿಸು ಬಹಿರಂಗ!

    ಸಚಿವೆ ಜಯಮಾಲ ಹೊರತು ಪಡಿಸಿ ಇನ್ನುಳಿದ ಕಾಂಗ್ರೆಸ್ ಸಚಿವರು ದಸರಾದಿಂದ ದೂರ ಉಳಿದಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ಹಾಗೂ ದಸರಾ ಉದ್ಘಾಟಕಿ ಸುಧಾಮೂರ್ತಿ ಉಪಸ್ಥಿತರು ಹಾಜರಾಗಿದ್ದರು. ಸಿಎಂ ಜೊತೆಗೆ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಎನ್.ಮಹೇಶ್, ಜಯಮಾಲ, ಶಾಸಕರಾದ ಅಶ್ವಿನ್, ರಾಮದಾಸ್, ಹರ್ಷವರ್ಧನ್, ಮಹದೇವ್, ಕೆ.ಟಿ.ಶ್ರೀಕಂಠೇಗೌಡ ಸಾಥ್ ನೀಡಿದರು.

    ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲೂ ಜೆಡಿಎಸ್ ಸಚಿವರು, ಶಾಸಕರ ಓಡಾಟ ಜೋರಾಗಿತ್ತು. ಆದರೆ ಕಾಂಗ್ರೆಸ್ಸಿನ ಕೆಲ ನಾಯಕರು ಮುನಿಸಿಕೊಂಡಿದ್ದು, ಯಾರೊಬ್ಬರೂ ದಸರಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಯಮಾಲ ಅವರನ್ನು ಹೊರತು ಪಡಿಸಿ ಯಾವೊಬ್ಬ ಕೈ ನಾಯಕ ವೇದಿಕೆಯಲ್ಲಿ ಕಾಣಿಸಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅದ್ದೂರಿಯಾಗಿ ನಡೆಯಿತು ಯದುವೀರ್ ಖಾಸಗಿ ದರ್ಬಾರ್!

    ಅದ್ದೂರಿಯಾಗಿ ನಡೆಯಿತು ಯದುವೀರ್ ಖಾಸಗಿ ದರ್ಬಾರ್!

    ಮೈಸೂರು: ದಸರಾ ಪ್ರಮುಖ ಆಕರ್ಷಣೆಯಾದ ಖಾಸಗಿ ದರ್ಬಾರ್ ಅದ್ದೂರಿಯಾಗಿ ನಡೆದಿದೆ. ಗತಕಾಲದ ರಾಜರ ಆಡಳಿತವನ್ನು ಮತ್ತೆ ನೆನಪಿಸಿದ್ದು, ಇಂದು ಯದುವೀರ್ ಮಹರಾಜರ ಖಾಸಗಿ ದರ್ಬಾರ್ ನಡೆಸಿದರು.

    ಅರಮನೆಯ ಅಂಬಾ ವಿಲಾಸ ಅರಮನೆಯ ದರ್ಬಾರ್ ಹಾಲ್ ನಲ್ಲಿ ಸಾಂಪ್ರದಾಯಿಕವಾಗಿ ಸಕಲ ವಿಧಿ ವಿಧಾನದಲ್ಲಿ ಖಾಸಗಿ ದರ್ಬಾರ್ ನಡೆಯಿತು. ಒಡೆಯರ್ ಮನೆತನದ ರಾಜ ಯದುವೀರ್ ಕೃಷ್ಣದತ್ತ ಜಯಚಾಮರಾಜ ಒಡೆಯರ್ ದರ್ಬಾರ್ ನಡೆಸಿದರು.

    ಖಾಸಗಿ ದರ್ಬಾರ್‌ಗೂಮೊದಲು ಅನೇಕ ವಿಧಿವಿಧಾನಗಳು ನಡೆಯಿತು. ಒಡೆಯರ್ ಚಾಮುಂಡಿ ತೊಟ್ಟಿಯಲ್ಲಿ ಗಣಪತಿ ಪೂಜೆ ಮಾಡಿದ ಬಳಿಕ ಕಲಶಪೂಜೆ, ಕಂಕಣಪೂಜೆ ನಡೆಸಿದರು. ಶಿವಸನ್ನಿಧಿ, ಕೃಷ್ಟಸನ್ನಿಧಿ, ಚಾಮುಂಡಿಸನ್ನಿಧಿ ಮುಂತಾದ ದೇವ ದೇವತೆಗಳ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು. ನಂತರ ದೇವಿ ಭಾಗವತ ಪಾರಾಯಣ, ರಾಮಾಯಣ ಪಾರಾಯಣ ನಡೆಯಿತು. ಗಣಪತಿ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ನವಗ್ರಹ ಪೂಜೆ, ಬ್ರಹ್ಮ, ವಿಷ್ಣು, ಮಹೇಶ್ವರ, ಮಹಾಕಾಳಿ, ಮಹಾಸರಸ್ವತಿ, ಮಹಾಲಕ್ಷ್ಮಿ ಪೂಜೆಗಳೆಲ್ಲ ನಡೆಯಿತು.

    ಪ್ರಮುಖವಾಗಿ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗಳನ್ನು ಅಲಂಕಾರ ಮಾಡಿ ಅರಮನೆ ಅವರಣದಲ್ಲಿರುವ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಅರಮನೆಯೊಳಗೆ ಇವುಗಳ ಪ್ರವೇಶವಾದ ನಂತರ ಖಾಸಗಿ ದರ್ಬಾರ್ ಪ್ರಾರಂಭವಾಯಿತು.

    ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಲಶಗಳಿಗೆ ಬೆಳ್ಳಿ ಖುರ್ಚಿಯ ಮೇಲೆ ಕುಳಿತು ಪೂಜೆ ನೆರವೇರಿಸಿದರು. ಈ ವೇಳೆ ವಿದ್ವಾಂಸರಿಂದ ವೇದ-ಘೋಷಗಳು ಮೊಳಗಿದವು. ಖಾಸಗಿ ದರ್ಬಾರ್ ಅನ್ನು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ವಿಕ್ಷಣೆ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಸರಾ ಉದ್ಘಾಟನಾ ಸಮಾರಂಭದಲ್ಲೂ ದೋಸ್ತಿ ಪಕ್ಷದ ಮುನಿಸು ಬಹಿರಂಗ!

    ದಸರಾ ಉದ್ಘಾಟನಾ ಸಮಾರಂಭದಲ್ಲೂ ದೋಸ್ತಿ ಪಕ್ಷದ ಮುನಿಸು ಬಹಿರಂಗ!

    ಮೈಸೂರು: ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭದಲ್ಲಿ ದೋಸ್ತಿ ಪಕ್ಷದಲ್ಲಿನ ಮುನಿಸು ಮತ್ತೊಮ್ಮೆ ಎದ್ದು ಕಾಣಿಸಿದೆ. ಮೈಸೂರು – ಚಾಮರಾಜನಗರದ ಯಾವೊಬ್ಬ ಕಾಂಗ್ರೆಸ್ ಜನಪ್ರತಿನಿಧಿಯೂ ಸಮಾರಂಭಕ್ಕೆ ಬಂದಿರಲಿಲ್ಲ.

    ಹೌದು, ಮೈಸೂರು ದಸರಾ ರಂಗೆರುತ್ತಿದ್ದು, ಕಾರ್ಯಕ್ರಮದಲ್ಲಿ ಜೆಡಿಎಸ್ ಸಚಿವರು, ಶಾಸಕರ ಓಡಾಟ ಜೋರಾಗಿದೆ. ಆದರೆ ಕಾಂಗ್ರೆಸ್ಸಿನ ಕೆಲ ನಾಯಕರು ಮುನಿಸಿಕೊಂಡಿದ್ದು, ಯಾರೊಬ್ಬರೂ ದಸರಾದಲ್ಲಿ ಕಾಣಿಸಿಕೊಂಡಿಲ್ಲ.

    ಯಾರು ಗೈರು?:
    ದಸರಾ ಉದ್ಘಾಟನಾ ಸಮಾರಂಭಕ್ಕೆ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಪುಟ್ಟರಂಗಶೆಟ್ಟಿ, ಶಾಸಕರಾದ ತನ್ವೀರ್ ಸೇಠ್, ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು ಸೇರಿದಂತೆ ಮೈಸೂರು ಮತ್ತು ಚಾಮರಾಜನಗರದ ಕಾಂಗ್ರೆಸ್ಸಿನ ಎಲ್ಲಾ ಶಾಸಕರು ಗೈರಾಗಿದ್ದರು. ಸಂಸದ ಆರ್.ಧ್ರುವನಾರಾಯಣ್, ಸಮ್ಮಿಶ್ರ ಸರ್ಕಾರದ ಅಂಗ ಪಕ್ಷ ಬಿಎಸ್‍ಪಿಯ ಸಚಿವ ಎನ್.ಮಹೇಶ್ ಸಹ ದಸರಾ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಇದನ್ನು ಓದಿ: ಅವ್ರ ದರ್ಬಾರ್ ದಸರಾದಲ್ಲಿ ನಡಿಲಿ: ಸಚಿವ ಜಿ.ಟಿ.ದೇವೇಗೌಡ ವಿರುದ್ಧ ಪುಟ್ಟರಂಗಶೆಟ್ಟಿ ಕಿಡಿ

    ಸಮಾರಂಭದ ವೇದಿಕೆಯಲ್ಲಿ ಜೆಡಿಎಸ್‍ನ ಬಹುತೇಕ ಶಾಸಕರು ಹಾಗೂ ಬಿಜೆಪಿ ಶಾಸಕರು ಭಾಗಿಯಾಗಿದ್ದರು. ಇತ್ತ ಎಲ್ಲ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ಅವರೇ ಕಾಣಿಸಿಕೊಳ್ಳುತ್ತಿದ್ದು, ಕಾಂಗ್ರೆಸ್ಸಿನ ನಾಯಕರು ಗೈರಾಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಒಟ್ಟಿನಲ್ಲಿ ಈ ಬಾರಿಯ ದಸರಾದಲ್ಲಿ ಜೆಡಿಎಸ್ ನಾಯಕರು ರಂಗು ಪಡೆದಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಶಾಸಕರನ್ನು ಕಡೆಗಣಿಸಲಾಗುತ್ತಿದೆ ಎಂದು ಶಾಸಕ ತನ್ವೀರ್ ಸೇಠ್ ಅವರು, ಈ ಹಿಂದೆ ಆರೋಪಿಸಿದ್ದರು. ಈ ಮಾತಿಗೆ ಪೂರಕ ಎಂಬಂತೆ ಇವತ್ತಿನ ಉದ್ಘಾಟನಾ ಸಮಾರಂಭದ ವೇದಿಕೆಯನ್ನು ನೋಡಿದಾಗ ದೋಸ್ತಿ ಪಕ್ಷದ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಸ್ಪಷ್ಟವಾಗಿ ಕಾಣಿಸುತಿತ್ತು. ಇದನ್ನು ಓದಿ: ಸಿಎಂ ಹೊಗಳಿ ವೇದಿಕೆಯಲ್ಲೇ ಎರಡು ಮನವಿ ಇಟ್ಟ ಪ್ರತಾಪ್ ಸಿಂಹ

    ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಇಂದು ವೈಭವದ ಚಾಲನೆ ಕಂಡಿರುವ ನಾಡ ಹಬ್ಬ ದಸರಾ ಅತ್ಯಂತ ಯಶಸ್ವಿಯಾಗಿ ಸಾಗಲಿ. ದೈವೀ ಆರಾಧನೆಯ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ನಾಡಿನ ಶ್ರೀಮಂತ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಜಗದಗಲ ತಲುಪಿಸಲಿ ಎಂದು ಹಾರೈಸುತ್ತೇನೆ. ನಾಡಿನ ಜನತೆಗೆ ನವರಾತ್ರಿಯ ಶುಭಾಶಯಗಳು ಎಂದು ಬರೆದು ಟ್ವೀಟ್ ಮಾಡಿ ಶುಭಾಶಯ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://youtu.be/EwABHrgayaE