Tag: ದಸರಾ ಮೆರವಣಿಗೆ

  • ಮೈಸೂರಿನಂತೆ ಸಿಲಿಕಾನ್ ಸಿಟಿಯಲ್ಲಿಯೂ ವಿಜೃಂಭಣೆಯ ದಸರಾ ಆಚರಣೆ

    ಮೈಸೂರಿನಂತೆ ಸಿಲಿಕಾನ್ ಸಿಟಿಯಲ್ಲಿಯೂ ವಿಜೃಂಭಣೆಯ ದಸರಾ ಆಚರಣೆ

    ಬೆಂಗಳೂರು: ಮೈಸೂರು ದಸರಾದ (Mysuru Dasara) ವಿಜೃಂಭಣೆ ಒಂದು ಕಡೆಯಾದರೆ, ಇನ್ನೊಂದು ಕಡೆ ಧಾರ್ಮಿಕ ಆಚರಣೆ ಮತ್ತು ಸಾಂಸ್ಕೃತಿಕ ಹಬ್ಬದ ಸಮ್ಮಿಲನವಾಗಿರುವ ದಸರಾ ಹಬ್ಬವನ್ನು ಸಿಲಿಕಾನ್ ಸಿಟಿಯ (Silicon City) ಜನರು ಸಂಭ್ರಮಿಸಿ, ವಿಜೃಂಭಣೆಯಿಂದ ಆಚರಿಸಿದರು.

    ನಗರದ ಹಲವು ಕಡೆಗಳಲ್ಲಿ ದಸರಾ ಸಂಭ್ರಮ ಮನೆ ಮಾಡಿತ್ತು. ಜೆ.ಸಿ.ನಗರ ದಸರಾ ಮಹೋತ್ಸವ ಸಮಿತಿ ಆಯೋಜಿಸಿದ್ದ ದಸರಾ ಮೆರವಣಿಗೆ (Dasara Procession) ಕಳೆಗಟ್ಟಿ ಭಕ್ತರನ್ನು ಪುಳಕಿತಗೊಳಿಸಿತ್ತು. ಅಲಂಕೃತ ರಥಗಳಲ್ಲಿ ಸಾಲು ಸಾಲಾಗಿ ಬಂದ 90ಕ್ಕೂ ಹೆಚ್ಚು ಮೂರ್ತಿಗಳನ್ನು ಕಂಡು ಜನರು ಸಂಭ್ರಮಿಸಿದರು. ಶಿವಾಜಿನಗರ, ಆರ್.ಟಿ.ನಗರ, ಲಕ್ಷ್ಮೀದೇವಮ್ಮ ಬ್ಲಾಕ್, ಸಿಬಿಐ ರಸ್ತೆ, ಮಠದಹಳ್ಳಿ, ಮೋತಿನಗರ, ಗಂಗೇನಹಳ್ಳಿ, ಸುಲ್ತಾನ್‌ಪಾಳ್ಯ, ಯಶವಂತಪುರ, ಹೆಬ್ಬಾಳ, ಗಂಗಾನಗರಗಳ ದೇವರ ಮೂರ್ತಿಗಳು ಅಲಂಕೃತಗೊಂಡ ರಥಗಳಲ್ಲಿ ಜೆ.ಸಿ.ನಗರದ ದಸರಾ ಮೈದಾನದತ್ತ ಸಾಗಿ ಬಂದು ಜನರನ್ನು ಆಕರ್ಷಿಸಿತು. ಹೂವಿನ ಪಲ್ಲಕ್ಕಿ, ಪೂಜಾ ಕುಣಿತ, ಕೀಲು ಕುದುರೆ, ಕರಡಿ ಮೇಳ, ಗೊರವರ ಕುಣಿತ, ಪಟ ಕುಣಿತ, ಡೊಳ್ಳು ಕುಣಿತ ಮುಂತಾದ ಜನಪದ ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಿದ್ದವು.ಇದನ್ನೂ ಓದಿ: ಸಿಎಂ ಭೇಟಿ ಹೊತ್ತಲ್ಲೇ ಬೆಳಗಾವಿಯಲ್ಲಿ ʻಭವಿಷ್ಯದ ಮುಖ್ಯಮಂತ್ರಿʼ ಬ್ಯಾನರ್ – ರಾಜಕೀಯದಲ್ಲಿ ಸಂಚಲನ

    ಇನ್ನು ನಗರದ ಆಡುಗೋಡಿಯ ಪೋತಲಪ್ಪ ಮತ್ತು ಅಯ್ಯಪ್ಪ ಗಾರ್ಡನಲ್ಲಿ ದಸರಾ ಅಂಗವಾಗಿ ದುರ್ಗಾಪರಮೇಶ್ವರಿ ದೇವಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ದಸರಾ ಅಂಗವಾಗಿ ಕಳೆದ 9 ದಿನಗಳಿಂದ ದೇವಸ್ಥಾನದಲ್ಲಿ ವಿವಿಧ ದೇವತಾ ಕಾರ್ಯ ನಡೆದಿದ್ದು, ಪ್ರತಿದಿನವೂ ದೇವಿಯ ಅವತಾರದಂತೆ ಪಾರಾಯಣ, ಅಲಂಕಾರ ಮಾಡಲಾಗಿತ್ತು. ಎಂಟನೇ ದಿನ ಅಷ್ಟಮಿಯಂದು ಚಿಕ್ಕಮಕ್ಕಳಿಗೆ ನವದುರ್ಗೆಯರ ಅಲಂಕಾರ ಮಾಡಿ, ಕನ್ಯೆ ಪೂಜೆ ನೆರವೇರಿಸಲಾಯಿತು. ವಿಜಯ ದಶಮಿಯ ದಿನ ದುರ್ಗಾಪರಮೇಶ್ವರಿ ದೇವಿಯ ಅದ್ಧೂರಿ ಮೆರವಣಿಗೆಯೊಂದಿಗೆ ಅದ್ಧೂರಿ ದಸರಾ ಕೂಡ ಸಮಾಪ್ತಿಯಾಯಿತು. ಅಯ್ಯಪ್ಪ ಗಾರ್ಡನ ಹಲವೆಡೆ ಮೆರವಣಿಗೆ ನಡೆಯಿತು. ದೇವಿಯ ದರ್ಶನ ಪಡೆಯುವ ಭಕ್ತರು ಪುನೀತರಾದರು.

    ಆಡುಗೋಡಿಯಂತೆ ಆಸ್ಟಿನ್ ಟೌನ್‌ನಲ್ಲಿಯೂ ದಸರಾ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಆಸ್ಟಿನ್ ಟೌನ್ ಜೆಸ್ಮಾ ಮಂದಿರ ಸಮೀಪದಲ್ಲಿ ನೀಲಸಂದ್ರ, ಆನೆಪಾಳ್ಯ ಹಾಗೂ ಸುತ್ತಮುತ್ತಲಿನ ದೇವಾಲಯಗಳ ಸುಮಾರು 16ಕ್ಕೂ ಹೆಚ್ಚು ದೇವಿ ಮೂರ್ತಿಗಳ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆ ಹೊಸ ರೋಡ್‌ವರೆಗೂ ಸಾಗಿದ್ದು, ಒಟ್ಟಿನಲ್ಲಿ ಮೈಸೂರು ದಸರಾ ರೀತಿ ಬೆಂಗಳೂರಿನಲ್ಲಿಯೂ ಹಲವು ಕಡೆ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.ಇದನ್ನೂ ಓದಿ: ಬಾಲಕನ ತಲೆಯ ಮೇಲೆ ಹರಿದ ಟಾಟಾ ಏಸ್‌ – ಸ್ಥಳದಲ್ಲೇ ಸಾವು

  • ದಸರಾ ಮೆರವಣಿಗೆ ವೇಳೆ ಗ್ಯಾಂಗ್‍ವಾರ್ – ಇಬ್ಬರಿಗೆ ಗಂಭೀರ ಗಾಯ

    ದಸರಾ ಮೆರವಣಿಗೆ ವೇಳೆ ಗ್ಯಾಂಗ್‍ವಾರ್ – ಇಬ್ಬರಿಗೆ ಗಂಭೀರ ಗಾಯ

    ಬೆಂಗಳೂರು: ನಗರದಲ್ಲಿ ದಸರಾ (Dasara) ಮೆರವಣಿಗೆ ವೇಳೆ ಬಂದಿದ್ದ ಗ್ಯಾಂಗ್‍ಗಳಿಂದ ಗಲಾಟೆ (GangWar) ನಡೆದು, ಇಬ್ಬರು ಗಂಭೀರ ಗಾಯಗೊಂಡಿರುವ ಪ್ರತ್ಯೇಕ ಎರಡು ಘಟನೆ ವಿಜಯ ನಗರ, ಮಾಗಡಿ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ದೊಣ್ಣೆ, ಮಾರಕಾಸ್ತ್ರಗಳಿಂದ ಪ್ರತ್ಯೇಕ ಎರಡು ಗ್ಯಾಂಗ್ ಬಡಿದಾಡಿಕೊಂಡಿವೆ. ಪ್ರತ್ಯೇಕ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಪುಂಡರ ಗ್ಯಾಂಗ್ ಎಸ್ಕೇಪ್ ಆಗಿದೆ. ವಿಜಯನಗರದ ಚೇತನ್ ಶೆಟ್ಟಿ, ಹಾಗೂ ಚೇತನ್ ಸೋಮಶೇಖರ್ ಎಂಬುವರ ಮೇಲೆ ಬಾರ್‌ಗಳ (Bar) ಮುಂದೆ ದಾಳಿ ನಡೆದಿದ್ದು, ಮಾಗಡಿ ರೋಡ್ ಠಾಣಾ ವ್ಯಾಪ್ತಿಯ ನವ್ಯ ಬಾರ್ ಮುಂದೆ ಹಾಗೂ ವಿಜಯ ನಗರ ಠಾಣಾ ವ್ಯಾಪ್ತಿಯ ಎಂ.ಆರ್ ಗಾರ್ಡನ್ ಬಾರ್ & ರೆಸ್ಟೋರೆಂಟ್ ಬಳಿ ಗ್ಯಾಂಗ್‍ವಾರ್ ನಡೆದಿದೆ. ಇದನ್ನೂ ಓದಿ: ದುರ್ಗಾದೇವಿ ಮೂರ್ತಿ ವಿಸರ್ಜನೆ ವೇಳೆ ದಿಢೀರ್ ಪ್ರವಾಹ – 8 ಮಂದಿ ಸಾವು, ಮೋದಿ ಸಂತಾಪ

    ಘಟನೆಯಲ್ಲಿ ಗಾಯಗೊಂಡಿರುವ ದೀಪು ಹಾಗೂ ಚೇತನ್ ಶೆಟ್ಟಿ, ಚೇತನ್ ಸೋಮಶೇಖರ್‌ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಮಾಗಡಿ ರೋಡ್, ಹಾಗೂ ವಿಜಯ ನಗರ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ದಾಖಲಾಗಿದೆ. ಇದನ್ನೂ ಓದಿ: PFI ಕಚೇರಿಯಲ್ಲಿ ಮೆಟಲ್ ಡಿಟೆಕ್ಟರ್ ಪತ್ತೆ!

    Live Tv
    [brid partner=56869869 player=32851 video=960834 autoplay=true]

  • ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ತುಳಿತಕ್ಕೊಳಗಾದ ವೀರಗಾಸೆ ಕಲಾವಿದ

    ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಆನೆ ತುಳಿತಕ್ಕೊಳಗಾದ ವೀರಗಾಸೆ ಕಲಾವಿದ

    ಶಿವಮೊಗ್ಗ: ದಸರಾ ಹಿನ್ನೆಲೆ ಇಂದು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ದಸರಾ ಮೆರವಣಿಗೆ ಜೋರಾಗಿ ನಡೆಯುತ್ತಿದ್ದು, ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಭಾನುಮತಿ ಆನೆ ತುಳಿತಕ್ಕೊಳಗಾಗಿ ವೀರಗಾಸೆ ಕಲಾವಿದರೊಬ್ಬರು ಗಾಯಗೊಂಡಿದ್ದಾರೆ.

    ಆನೆಗೆ ಅಂಬಾರಿ ಕಟ್ಟುವ ವೇಳೆ ಈ ಘಟನೆ ನಡೆದಿದೆ. ಶಿವಮೊಗ್ಗ ನಗರ ಸಮೀಪದ ಅರಕೆರೆ ನಿವಾಸಿಯಾಗಿರುವ ವೀರಗಾಸೆ ಕಲಾವಿದ ಸತೀಶ್ ಆನೆ ತುಳಿತಕ್ಕೊಳಗಾಗಿ ಗಾಯಗೊಂಡಿದ್ದಾರೆ. ದಸರಾ ಮೆರವಣಿಗೆಯಲ್ಲಿ ವೀರಗಾಸೆ ತಂಡದಲ್ಲಿ ಸತೀಶ್ ಕೂಡ ಇದ್ದರು. ಮೆರವಣಿಗೆ ಮುನ್ನ ಆನೆಗೆ ಅಂಬಾರಿ ಕಟ್ಟುವ ವೇಳೆ ಈ ಅವಘಡ ಸಂಭವಿಸಿ ಕೆಲ ಕಾಲ ಸತೀಶ್ ಅವರು ಅಸ್ವಸ್ಥಗೊಂಡಿದ್ದರು. ಬಳಿಕ ಚೇತರಿಸಿಕೊಂಡಿದ್ದಾರೆ. ಸದ್ಯ ಸತೀಶ್ ಅವರ ಕಾಲಿಗೆ ಗಾಯವಾಗಿರುವ ಕಾರಣಕ್ಕೆ ಕಾಲು ಊರಲಾಗದೇ ನೋವು ಅನುಭವಿಸುತ್ತಿದ್ದಾರೆ. ಗಾಯಗೊಂಡ ಸತೀಶ್ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.

    ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿದ ಬಳಿಕ ತಹಶೀಲ್ದಾರ್ ಗಿರೀಶ್ ದಸರಾ ಮೆರವಣಿಗೆಗೆ ಚಾಲನೆ ನೀಡಿದ್ದಾರೆ. ನಗರದ ಶಿವಪ್ಪ ನಾಯಕ ಕೋಟೆ ಆವರಣದಿಂದ ದಸರಾ ಮೆರವಣಿಗೆ ಆರಂಭಗೊಂಡಿದ್ದು, ಅಂಬಾರಿ ಹೊತ್ತ ಸಾಗರ್ ಆನೆ ಪ್ರಮುಖ ಆಕರ್ಷಣೆಯಾಗಿದೆ. ಮೆರವಣಿಗೆಗೂ ಮುನ್ನ ಆನೆಗೆ ಹೂ ಮಳೆಯ ಸ್ವಾಗತ ಕೋರಿ, ವಿಶೇಷ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ ಅಸ್ವಸ್ಥವಾಗಿದ್ದ ಸಾಗರ್ ಆನೆ ಚೇತರಿಸಿಕೊಂಡು ಮೆರವಣಿಗೆಯಲ್ಲಿ ಭಾಗಿಯಾಗಿರುವುದು ವಿಶೇಷವಾಗಿದೆ.

    ಮೆರವಣಿಗೆಯಲ್ಲಿ ಹಲವು ಸಾಂಸ್ಕೃತಿಕ ಕಲಾ ತಂಡಗಳು ಭಾಗಿಯಾಗಿದ್ದು, ಈ ಬಾರಿಯ ಮೆರವಣಿಗೆಯಲ್ಲಿ ಅರಣ್ಯ ಇಲಾಖೆ, ಪಾಲಿಕೆ, ಪೊಲೀಸ್ ಇಲಾಖೆಯ ಟ್ಯಾಬ್ಲೋಗಳು ಎಲ್ಲರ ಗಮನ ಸೆಳೆಯುತ್ತಿದೆ. ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೆರವಣಿಗೆ ವೀಕ್ಷಿಸುತ್ತಿದ್ದಾರೆ.