Tag: ದಸರಾ ಗಜಪಡೆ

  • ಮೈಸೂರು ದಸರಾ – ಮೊದಲ ತಂಡದ ಭೀಮನಿಗಿಂತ ಸುಗ್ರೀವನೇ ಬಲಶಾಲಿ

    ಮೈಸೂರು ದಸರಾ – ಮೊದಲ ತಂಡದ ಭೀಮನಿಗಿಂತ ಸುಗ್ರೀವನೇ ಬಲಶಾಲಿ

    ಮೈಸೂರು: ನಾಡಹಬ್ಬ ದಸರಾ ಮಹೋತ್ಸವ (Dasara Festival) ಹಿನ್ನೆಲೆ ಸೋಮವಾರ (ಆ.25) ದಸರಾ ಗಜಪಡೆಯ ಎರಡನೇ ತಂಡ ಮೈಸೂರಿಗೆ (Mysuru) ಬಂದಿವೆ. ಮೊದಲ ದಿನದ ತಾಲೀಮಿಗೂ ಮುನ್ನ ಅರಮನೆ ಅಂಗಳಕ್ಕೆ ಆಗಮಿಸಿರುವ ಆನೆಗಳ ತೂಕ ಪರೀಕ್ಷಿಸಲಾಗಿದ್ದು, ಈ ಪೈಕಿ ಮೊದಲ ತಂಡದಲ್ಲಿ ಹೆಚ್ಚು ತೂಕ ಹೊಂದಿರುವ ಭೀಮನಿಗಿಂತ ಸುಗ್ರೀವ ಆನೆ ಹೆಚ್ಚು ಬಲಶಾಲಿಯಾಗಿದ್ದಾನೆ ಅನ್ನೋದು ಗೊತ್ತಾಗಿದೆ.

    ಎರಡನೇ ತಂಡದ ಆನೆಗಳ ತೂಕದ ವಿವರ:
    ಸುಗ್ರೀವ: 5,545 ಕೆ.ಜಿ
    ಶ್ರೀಕಂಠ: 5,540 ಕೆ.ಜಿ
    ಗೋಪಿ: 4,990 ಕೆ.ಜಿ
    ರೂಪ: 3,320 ಕೆ.ಜಿ
    ಹೇಮಾವತಿ: 2440 ಕೆ.ಜಿ

    ಮೊದಲ ತಂಡದ ಆನೆಗಳ ತೂಕದ ವಿವರ:
    ಅಭಿಮನ್ಯು: 5,360 ಕೆ.ಜಿ
    ಭೀಮ: 5,465 ಕೆ.ಜಿ
    ಧನಂಜಯ: 5,310 ಕೆ.ಜಿ
    ಕಾವೇರಿ: 3,010 ಕೆ.ಜಿ
    ಲಕ್ಷ್ಮೀ: 3,730 ಕೆ.ಜಿ
    ಏಕಲವ್ಯ: 5,305 ಕೆ.ಜಿ
    ಮಹೇಂದ್ರ: 5,120 ಕೆ.ಜಿ
    ಕಂಜನ್: 4,880 ಕೆ.ಜಿ
    ಪ್ರಶಾಂತ: 5,110 ಕೆ.ಜಿ

    ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರಿಶೀಲನೆ ಮಾಡಲಾಯಿತು. ಪರಿಶೀಲನೆ ನಂತರ ಆನೆಗಳಿಗೆ ಪ್ರತಿನಿತ್ಯ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಬೆಳಗ್ಗೆ, ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗುತ್ತದೆ. ನಗರದ ಸದ್ದುಗದ್ದಲಕ್ಕೆ ವಿಚಲಿತವಾಗದಂತೆ ಆನೆಗಳಿಗೆ ತರಬೇತಿ ನೀಡಲಾಗುತ್ತದೆ. ಇದನ್ನೂ ಓದಿ: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ `ನಂದಿನಿ’ ಪಾರ್ಲರ್ – ಗ್ರಾಹಕರಿಗೆ 175ಕ್ಕೂ ಹೆಚ್ಚು ಉತ್ಪನ್ನಗಳು ಲಭ್ಯ

  • ದಸರಾ ಆನೆ ಸೊಂಡಿಲು, ದಂತ ಹಿಡಿದು ರೀಲ್ಸ್ – ಅರಣ್ಯಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ

    ದಸರಾ ಆನೆ ಸೊಂಡಿಲು, ದಂತ ಹಿಡಿದು ರೀಲ್ಸ್ – ಅರಣ್ಯಾಧಿಕಾರಿಗಳ ದಿವ್ಯ ನಿರ್ಲಕ್ಷ್ಯ

    ಮೈಸೂರು: ದಸರಾ ಗಜಪಡೆಯನ್ನು ಮೈಸೂರಲ್ಲಿ (Mysuru Dasara) ಕೆಲವರು ತಮ್ಮ ರೀಲ್ಸ್ ಶೋಕಿಗೆ ಬಳಸಲು ಆರಂಭಿಸಿದ್ದಾರೆ. ಮೈಸೂರಿನ ಅರಮನೆ ಆವರಣಕ್ಕೆ ಪ್ರತಿದಿನವೂ ಹಲವು ಅನಾಮಿಕರು ಬಂದು ಆನೆ ಸೊಂಡಿಲು, ದಂತಗಳನ್ನು ಹಿಡಿದು ಪೋಸ್‌ ಕೊಡುತ್ತಾ ರೀಲ್ಸ್ ಮಾಡುತ್ತಿದ್ದಾರೆ.

    ಆನೆಗಳ ಮುಂದೆ ಫೋಟೊಶೂಟ್‌ಗಾಗಿ ಅರಣ್ಯ ಅಧಿಕಾರಿಗಳು ಅನುಮತಿ ಕೊಡುವ ಮೂಲಕ ಆನೆಗಳ ವಿಚಾರದಲ್ಲಿ ಅರಣ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರಿದಂತಿದೆ. ಮೊನ್ನೆಯಷ್ಟೆ ಎರಡು ಆನೆಗಳ ನಡುವೆ ಕಾಳಗ ನಡೆದು ಆತಂಕ ಸೃಷ್ಟಿಸಿತ್ತು. ಆದರೂ ಅಧಿಕಾರಿಗಳು ಎಚ್ಚೆತ್ತಂತೆ ಕಾಣುತ್ತಿಲ್ಲ.

    ಈ‌ ಹಿಂದೆ ಕೂಡ ಆನೆ ಮುಂದೆ ಫೋಟೋ ತೆಗೆದಿದ್ದರಿಂದ ಹಲವು ಅವಾಂತರ ಸೃಷ್ಟಿಯಾಗಿತ್ತು. ಆದರ, ಈಗ ಕೆಲವರ ರೀಲ್ಸ್ ಶೋಕಿಗೆ ದಸರಾ ಆನೆಗಳ ಬಳಕೆ ಹೆಚ್ಚಾಗಿದೆ. ಅರಣ್ಯ ಅಧಿಕಾರಿಗಳು ದುಡ್ಡಿಗೆ ಮಣಿದರಾ ಅಥವಾ ಒತ್ತಡಕ್ಕೆ ಮಣಿದರಾ ಎಂಬ ಪ್ರಶ್ನೆ ಮೂಡಿದೆ.

    ಆದರೆ, ದಿನ ನಿತ್ಯ ಅರಮನೆ ಆವರಣದ ಅನಾಮಿಕ ವ್ಯಕ್ತಿಗಳ ರೀಲ್ಸ್ ಶೋಕಿ ಮಾತ್ರ ಹೆಚ್ಚಾಗಿದೆ. ರೀಲ್ಸ್ ಹೆಸರಿನಲ್ಲಿ ಅರಣ್ಯ ಅಧಿಕಾರಿಗಳು ದುಡ್ಡು ಮಾಡುತ್ತಿದ್ದಾರೆ ಎಂಬ ಮಾತು ಜೋರಾಗಿದೆ.