Tag: ದಶಮಾನೋತ್ಸವ

  • ಪಬ್ಲಿಕ್ ತೇರಿಗೆ ಬೀದರ್‌ನಲ್ಲಿ ಅದ್ಧೂರಿ ಸ್ವಾಗತ

    ಪಬ್ಲಿಕ್ ತೇರಿಗೆ ಬೀದರ್‌ನಲ್ಲಿ ಅದ್ಧೂರಿ ಸ್ವಾಗತ

    ಬೀದರ್: ಕನ್ನಡಿಗರ ಅಚ್ಚು ಮೆಚ್ಚಿನ ಪಬ್ಲಿಕ್ ಟಿವಿಗೆ ದಶಮಾನೋತ್ಸವದ ಸಂಭ್ರಮ. ಈ ಹಿನ್ನೆಲೆ ಪಬ್ಲಿಕ್ ಟಿವಿಯನ್ನು ಕೈಹಿಡಿದು ನಡೆಸಿದ ರಾಜ್ಯದ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸಲು ರಾಜ್ಯಾದ್ಯಂತ ಪಬ್ಲಿಕ್ ತೇರು ಸಂಚಾರ ಮಾಡುತ್ತಿದೆ.

    ಬುಧವಾರ ಪಬ್ಲಿಕ್ ದಶರಥ ಗಡಿ ಜಿಲ್ಲೆ ಬೀದರ್‍ಗೆ ಎಂಟ್ರಿ ಕೊಟ್ಟಿದ್ದು, ಬೀದರ್‍ನ ಜನರು ಪಬ್ಲಿಕ್ ತೇರನ್ನು ಬಹಳ ಅದ್ದೂರಿಯಾಗಿ ಸ್ವಾಗತ ಮಾಡಿದರು. ನಗರದ ಐತಿಹಾಸಿಕ ಹನುಮಾನ್ ದೇವಸ್ಥಾನದ ಅರ್ಚಕರು ವಿಶೇಷ ಪೂಜೆ ಮಾಡಿ ಪಬ್ಲಿಕ್ ಟಿವಿಯ ಒಳಿತಿಗಾಗಿ ಸಂಕಲ್ಪ ಮಾಡಿದರು. ಇದನ್ನೂ ಓದಿ: ಈ ಕೂಡಲೇ ಖಾರ್ಕಿವ್ ತೊರೆಯಿರಿ: ಭಾರತೀಯರಿಗೆ ರಾಯಭಾರ ಕಚೇರಿಯಿಂದ ತುರ್ತು ಸಂದೇಶ

    ಸಾರ್ವಜನಿಕರು ಪಬ್ಲಿಕ್ ತೇರಿಗೆ ಹೂ ಮಳೆ ಸುರಿಸಿ ಪರಸ್ಪರ ಸಿಹಿ ಹಂಚಿಕೊಂಡು ಅದ್ದೂರಿಯಾಗಿ ಸ್ವಾಗತ ಮಾಡಿ ಸಂಭ್ರಮಿಸಿದರು. ಪಬ್ಲಿಕ್ ಟಿವಿಯ ಹತ್ತು ವರ್ಷಗಳ ಜರ್ನಿ ಬಗ್ಗೆ ವಿಟಿ ನೋಡುತ್ತಾ ಪಬ್ಲಿಕ್ ಟಿವಿಗೆ ಹಾಗೂ ಪಬ್ಲಿಕ್ ಟಿವಿಯ ಮುಖ್ಯಸ್ಥ ಹೆಚ್‍ಆರ್ ರಂಗನಾಥ್ ಅವರಿಗೆ ಜೈಕಾರದ ಘೋಣೆಗಳನ್ನು ಹಾಕಿ ಪಬ್ಲಿಕ್ ಟಿವಿ ಶತಮಾನೋತ್ಸವ ಆಚರಿಸಲಿ ಎಂದು ಶುಭ ಹಾರೈಸಿದರು. ಇದನ್ನೂ ಓದಿ: ಬೆಳಗ್ಗೆಯಿಂದ ವಾಟ್ಸಪ್ ಸಂದೇಶಕ್ಕೆ ತಮ್ಮನಿಂದ ಉತ್ತರ ಬಂದಿಲ್ಲ: ವಿದ್ಯಾರ್ಥಿ ಸಹೋದರ

     

     

    ಅವಮಾನಗಳನ್ನೇ ಮಟ್ಟಿಲಾಗಿ ಮಾಡಿಕೊಂಡು ಪಬ್ಲಿಕ್ ಟಿವಿ ಇಂದು ರಾಜ್ಯದ ನಂಬರ್ ಒನ್ ಚಾನಲ್ ಆಗಿದೆ. ಒಬ್ಬ ವ್ಯಕ್ತಿಯ, ಪಕ್ಷದ ಟಿವಿ ಅಲ್ಲ. ಇದು ಜನ ಸಾಮಾನ್ಯರ ಟಿವಿಯಾಗಿದೆ. ಹೀಗಾಗೀ ನಾವು ಬೀದರ್ ಜನ ಸಮಾನ್ಯರು ಅದ್ಧೂರಿಯಾಗಿ ಪಬ್ಲಿಕ್ ಟಿವಿಯ ದಶರಥಕ್ಕೆ ವಿಶೇಷವಾಗಿ ಪೂಜೆ, ಹೂ ಚೆಲ್ಲುವ ಹಾಗೂ ಸಿಹಿ ಹಂಚುವ ಮೂಲಕ ಅದ್ದೂರಿಯಾಗಿ ಬರಮಾಡಿಕೊಂಡಿದ್ದೆವೆ ಎಂದು ಸಾರ್ವಜನಿಕರು ಹಾಗೂ ಪಬ್ಲಿಕ್ ಟಿವಿ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

  • ಮೈಸೂರಿನಲ್ಲಿ ಪಬ್ಲಿಕ್ ರಥ ಸಂಚಾರ

    ಮೈಸೂರಿನಲ್ಲಿ ಪಬ್ಲಿಕ್ ರಥ ಸಂಚಾರ

    ಮೈಸೂರು: ಪಬ್ಲಿಕ್ ಟಿವಿ ದಶಮಾನೋತ್ಸವ ಹಿನ್ನೆಲೆಯಲ್ಲಿ ಪಬ್ಲಿಕ್ ರಥ ಇಡೀ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಇಂದು ಅರಮನೆ ನಗರಿ ಮೈಸೂರು ನಗರ ಪ್ರವೇಶಿಸಿದೆ.

    ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪಬ್ಲಿಕ್ ರಥಕ್ಕೆ ಅರ್ಚಕರು ಪೂಜೆ ಸಲ್ಲಿಸಿದರು. ಬೆಟ್ಟದಿಂದ ನಗರಕ್ಕೆ ಆಗಮಿಸಿದ ಪಬ್ಲಿಕ್ ರಥಕ್ಕೆ ಯುವ ಸಮೂಹ ಹೂಹಾಕಿ ರಥವನ್ನು ಸ್ವಾಗತಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನಂತರ ಪಬ್ಲಿಕ್ ಟಿವಿ ನಡೆದು ಬಂದ ಹಾದಿಯ ವೀಡಿಯೋ ವೀಕ್ಷಿಸಿದರು. ಇಂದು ಮತ್ತು ನಾಳೆ ಮೈಸೂರಿನ ನಗರ ಮತ್ತು ಗ್ರಾಮಾಂತರದಲ್ಲಿ ಸಂಚರಿಸಲಿದೆ.

    ಈ ಬಗ್ಗೆ ಅಭಿಮಾನಿಗಳು ಪಬ್ಲಿಕ್ ಟಿವಿ ದಶಕ ಪೂರೈಸಿದ ಯಶಸ್ಸಿನ ಬಗ್ಗೆ ಮಾತನಾಡಿ, ಪಬ್ಲಿಕ್ ಟಿವಿ ಜನರ ಸಮಸ್ಯೆಗೆ ಧ್ವನಿಯಾಗಿದೆ. ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ಅವರ ವ್ಯಕ್ತಿತ್ವ, ನೇರ ನುಡಿಯು ನಮಗೆ ಇಷ್ಟವಾಗುತ್ತದೆ. ಪಬ್ಲಿಕ್ ಟಿವಿಗೆ ಶುಭವಾಗಲಿ ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದಶಮಾನೋತ್ಸವ ಸಂಭ್ರಮ – ಬೆಂಗ್ಳೂರಲ್ಲಿ ಪಬ್ಲಿಕ್ ರಥ ಸಂಚಾರ

    ಪಬ್ಲಿಕ್ ಟಿವಿ ಯಾವಾಗಲೂ ಜನರ ಪರವಿದೆ. ಪಬ್ಲಿಕ್ ಟಿವಿಯ ನಡೆದ ಹಾದಿಯನ್ನು ನೋಡಿದರೆ ಎಲ್ಲರಿಗೂ ಸ್ಫೂರ್ತಿಯಾಗಿದೆ. ಮನೆಯೇ ಮಂತ್ರಾಲಯದಿಂದ ನೋಡಿ ನಮಗೂ ಏನಾದರೂ ಸಹಾಯ ಮಾಡಬೇಕು ಎನಿಸುತ್ತಿತ್ತು ಎಂದು ನುಡಿದರು.

    ಕೊರೊನಾ ಸಮಯದಲ್ಲಿ ಮಾಡಿದ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಮಾಡಿದ ಸಹಾಯ ಉನ್ನತವಾದ ಕೊಡುಗೆಯಾಗಿದೆ. ಪಬ್ಲಿಕ್ ಟಿವಿ ಮನೆ ಮನೆಗೂ ತಲುಪಿದೆ. ಕಷ್ಟಕಾಲದಲ್ಲಿ ಪಬ್ಲಿಕ್ ಟಿವಿ ಸಹಾಯ ಮಾಡಿದೆ ಎಂದು ಆಟೋ ಚಾಲಕರೊಬ್ಬರು ನೆನಪಿಸಿಕೊಂಡರು. ಇದನ್ನೂ ಓದಿ:  ಕೃಷಿ ಕ್ಷೇತ್ರದಲ್ಲಿ ಕ್ರಾಂತಿ – 100 ʼಕಿಸಾನ್‌ ಡ್ರೋನ್‌ʼಗಳಿಗೆ ಪ್ರಧಾನಿ ಮೋದಿ ಚಾಲನೆ

    ಹತ್ತು ವರ್ಷ ಪೂರೈಸಲು ಕಾರಣದ ರಾಜ್ಯದ ಜನತೆಗೆ ಧನ್ಯವಾದ, ಕೃತಜ್ಞತೆ ಸಲ್ಲಿಸುವ ಸಲುವಾಗಿ, ಪಬ್ಲಿಕ್ ಟಿವಿ ಪಬ್ಲಿಕ್ ದಶ ರಥಕ್ಕೆ ಚಾಲನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಇಂದು ಪಬ್ಲಿಕ್ ಟಿವಿ ತೇರು ಮೈಸೂರಿನಲ್ಲಿ ಸಂಚರಿಸುತ್ತಿದೆ.

  • ಪಬ್ಲಿಕ್ ಟಿವಿಗೆ ದಶಮಾನೋತ್ಸವ ಸಂಭ್ರಮ – ಬೆಂಗ್ಳೂರಲ್ಲಿ ಪಬ್ಲಿಕ್ ರಥ ಸಂಚಾರ

    ಪಬ್ಲಿಕ್ ಟಿವಿಗೆ ದಶಮಾನೋತ್ಸವ ಸಂಭ್ರಮ – ಬೆಂಗ್ಳೂರಲ್ಲಿ ಪಬ್ಲಿಕ್ ರಥ ಸಂಚಾರ

    ಬೆಂಗಳೂರು: ಪಬ್ಲಿಕ್ ಟಿವಿಗೆ ದಶಮನೋತ್ಸವದ ಸಂಭ್ರಮ. ಈ ಸಾರ್ಥಕ ಸಂದರ್ಭದಲ್ಲಿ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಲು ಪಬ್ಲಿಕ್ ದಶರಥ ನಿಮ್ಮ ಮನೆ ಬಾಗಿಲಿಗೆ ಬರುತ್ತಿದೆ. ಇಂದು ರಾಜಧಾನಿ ಬೆಂಗಳೂರಿನಲ್ಲಿ ಪಬ್ಲಿಕ್ ದಶರಥ ಸಂಚರಿಸಿ ಸಿಲಿಕಾನ್ ಸಿಟಿ ಜನರಿಗೆ ಕೃತಜ್ಞತೆ ಸಲ್ಲಿಸಿದೆ. ಬೆಂಗಳೂರಿನ ಜನ ಕೂಡ ಪಬ್ಲಿಕ್ ಟಿವಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿ ಹರಸಿ ಹಾರೈಸಿದ್ದಾರೆ.

    ನಿಮ್ಮ ಪ್ರೀತಿಯ ಕೂಸು ಪಬ್ಲಿಕ್ ಟಿವಿಗೆ 10 ವರ್ಷದ ಸಂಭ್ರಮ. ಹತ್ತು ವರ್ಷ ಪೂರೈಸಲು ಕಾರಣದ ನಿಮಗೆ ಅಂದ್ರೆ ರಾಜ್ಯದ ಜನತೆಗೆ ಧನ್ಯವಾದ, ಕೃತಜ್ಞತೆ ಸಲ್ಲಿಸುವ ಸಲುವಾಗಿ, ಪಬ್ಲಿಕ್ ಟಿವಿ ನಿನ್ನೆ ಪಬ್ಲಿಕ್ ದಶ ರಥಗೆ ಚಾಲನೆ ನೀಡಿತ್ತು. ಪಬ್ಲಿಕ್ ದಶರಥಗೆ ಚಾಲನೆ ಸಿಕ್ಕ ಹಿನ್ನೆಲೆ ಇಂದು ಪಬ್ಲಿಕ್ ಟಿವಿ ತೇರು ಬೆಂಗಳೂರಿನಲ್ಲಿ ಸಂಚರಿಸ್ತು.

    ಪಬ್ಲಿಕ್ ಟಿವಿಯ ಕಚೇರಿ ಯಶವಂತಪುರದಿಂದ ಹೊರಟ ಪಬ್ಲಿಕ್ ರಥ ಮಲ್ಲೇಶ್ವರಂ ಮಾರ್ಗವಾಗಿ ಸಂಚರಿಸ್ತು. ಮಲ್ಲೇಶ್ವರಂನ 18 ನೇ ಕ್ರಾಸ್‌ನಲ್ಲಿ ಎಲ್ ಇಡಿ ಹೊಂದಿರುವ ಪಬ್ಲಿಕ್ ರಥದಲ್ಲಿ ಪಬ್ಲಿಕ್ ಟಿವಿ ನಡೆದು ಬಂದ ಹಾದಿ, ಜನರು ಬೆಳೆಸಿರುವ ರೀತಿ ಬಗ್ಗೆ ವಿವರಣೆ ನೀಡ್ತಾ ಜನರಿಗೆ ಧನ್ಯವಾದ ತಿಳಿಸಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಜನ ಪಬ್ಲಿಕ್ ಟಿವಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ರು.

    ಬೆಂಗಳೂರಿನ ಹೃದಯ ಭಾಗ ಆಗಿರೋ ಮೆಜೆಸ್ಟಿಕ್‌ನಲ್ಲಿ ರಂಗನಾಥ್ ಸರ್ ಧ್ವನಿ ಕೇಳಿದ ತಕ್ಷಣವೇ ಜನ ನಿಂತು ನೋಡಿದ್ರು. ಪಬ್ಲಿಕ್ ಟಿವಿಗೆ ಶುಭಕೋರಿದ್ರು. ಇನ್ನು ಜಯನಗರ ಮತ್ತು ಕೆ.ಆರ್ ಮಾರ್ಕೆಟ್ ನಲ್ಲಿ ಕೂಡ ಪಬ್ಲಿಕ್ ದಶರಥ ಧನ್ಯವಾದ ಆಲಿಸಿದ ಜನ ಪಬ್ಲಿಕ್ ಟಿವಿ ಮುಖ್ಯಸ್ಥ ರಂಗನಾಥ್ ನೇರವಾಗಿ ಮಾತಾಡ್ತಾರೆ ಅದು ನಮಗೆ ಇಷ್ಟ ಅಂದ್ರು. ಇದನ್ನೂ ಓದಿ: ಕಂದಮ್ಮನ ಆಗಮನಕ್ಕಾಗಿ ಕಾಯ್ತಿದ್ದೇನೆ- ಅಮೂಲ್ಯಗೆ ಹರಿಪ್ರಿಯಾ ವಿಶ್

    ಒಟ್ಟಾರೆ ಪಬ್ಲಿಕ್ ಟಿವಿಯ ದಶಮಾನೋತ್ಸವ ಹಿನ್ನೆಲೆ ಜನರಿಗೆ ಕೃತಜ್ಞತೆ ಸಲ್ಲಿಸಲು ಪಬ್ಲಿಕ್ ತೇರು ಬೆಂಗಳೂರು ಸಂಚರಿಸಿದೆ. ನಾಳೆಯಿಂದ ಎಲ್ಲಾ ಜಿಲ್ಲೆಗಳಿಗೂ ಪ್ರಯಾಣ ಬೆಳೆಸಲಿದೆ. ಪಬ್ಲಿಕ್ ರಥದ ಕೃತಜ್ಞತೆಯನ್ನ ಜನ ಸ್ವೀಕರಿಸಿ ಪಬ್ಲಿಕ್ ಟಿವಿ ಮೇಲೆ ಇದೇ ರೀತಿ ಪ್ರೀತಿ ವಿಶ್ವಾಸ ಇರಲಿ ಎಂಬುದೇ ನಮ್ಮೆಲ್ಲರ ಆಶಯವಾಗಿದೆ. ಇದನ್ನೂ ಓದಿ: ನಿಮ್ಮ ಚಿಕ್ಕಮಗಳೂರಿನ ಆಟ ಇಲ್ಲಿ ಆಡಲು ಬಂದ್ರೆ ಬಿಡಲ್ಲ – ಎಸ್‍ಪಿಗೆ ಎಚ್‍ಡಿಕೆ ವಾರ್ನಿಂಗ್

  • ನಿಮ್ಮ ಮನೆ ಬಾಗಿಲಿಗೆ ಬರಲಿದೆ ಪಬ್ಲಿಕ್ ಟಿವಿಯ ತೇರು ʼದಶʼರಥ

    ನಿಮ್ಮ ಮನೆ ಬಾಗಿಲಿಗೆ ಬರಲಿದೆ ಪಬ್ಲಿಕ್ ಟಿವಿಯ ತೇರು ʼದಶʼರಥ

    ಬೆಂಗಳೂರು: ಜನಮೆಚ್ಚಿದ ಸುದ್ದಿ ವಾಹಿನಿ ಪಬ್ಲಿಕ್ ಟಿವಿಗೆ ಸಾರ್ಥಕ 10 ವರ್ಷಗಳ ಸಂಭ್ರಮ. ಈ ಸಂತಸಕ್ಕೆ ಕಾರಣವಾದ ನಾಡಿನ ಜನತೆಗೆ ಧನ್ಯವಾದ ಹೇಳಲು ನಿಮ್ಮ ಪಬ್ಲಿಕ್ ಟಿವಿಯ ತೇರು `ದಶ’ರಥ ನಿಮ್ಮ ಮನೆ ಬಾಗಿಲಿಗೆ ಬರಲಿದೆ.

    ಪಬ್ಲಿಕ್ ಟಿವಿ ಪ್ರಚಾರ ರಥಕ್ಕೆ ಇಂದು ಚಾಲನೆ ನೀಡಲಾಯಿತು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು ಹಸಿರು ನಿಶಾನೆ ತೋರುವ ಮೂಲಕ ರಥಕ್ಕೆ ಚಾಲನೆ ನೀಡಿದರು. ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದಶಮಾನೋತ್ಸವ ಸಂಭ್ರಮ – ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾವು ಸದಾ ಚಿರಋಣಿ

    ಈ ರಥವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಚರಿಸಿ ಪಬ್ಲಿಕ್ ಟಿವಿಯ ಸಾಧನೆ ಕುರಿತು ಪ್ರಚಾರ ಮಾಡಲಿದೆ. ಪಬ್ಲಿಕ್ ಟಿವಿಯ ಜನಪ್ರಿಯತೆ, ಜನಪರ ಕಾರ್ಯಗಳ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಲಿದೆ.

    ರಥಕ್ಕೆ ಚಾಲನೆ ನೀಡಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಕನ್ನಡದ ಪಬ್ಲಿಕ್ ಟಿವಿ ರಥವು ಉದ್ಘಾಟನೆಗೊಂಡಿದ್ದು, ರಾಜ್ಯದ ಉದ್ದಗಲಕ್ಕೂ ಸಂಚರಿಸಲಿದೆ. ಪಬ್ಲಿಕ್ ಟಿವಿ ಸಾಧನೆಗಳು ಹಾಗೂ ಹೆಚ್.ಆರ್.ರಂಗನಾಥ್ ಅವರು ಹಂಚಿಕೊಂಡಿರುವ ವಿಷಯಗಳನ್ನು ಜನತೆಗೆ ತಿಳಿಸುವ ಶುಭ ಸಂದರ್ಭ ಇದಾಗಿದೆ. ರಥ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಂಚರಿಸಿ ಯಶಸ್ವಿಯಾಗಿ ಮರಳಲಿ. ರಂಗನಾಥ್ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಲಿ ಎಂದು ಹಾರೈಸಿದರು. ಇದನ್ನೂ ಓದಿ: ಸಿದ್ದಗಂಗಾ ಮಠದಲ್ಲಿ ಪಬ್ಲಿಕ್ ಟಿವಿ ದಶಮಾನೋತ್ಸವ ಸಂಭ್ರಮಕ್ಕೆ ಚಾಲನೆ

    ಸಚಿವ ಆರ್.ಅಶೋಕ್ ಮಾತನಾಡಿ, ಪಬ್ಲಿಕ್ ಟಿವಿಯನ್ನು 10 ವರ್ಷದಿಂದ ಬಲ್ಲೆ. ಆದರೆ ರಂಗಣ್ಣ ಅವರನ್ನು 25 ವರ್ಷದಿಂದ ಬಲ್ಲೆ. ರಂಗಣ್ಣ ಮತ್ತು ನಾವು ಸ್ನೇಹಿತರು. ಪಬ್ಲಿಕ್ ಟಿವಿ 10 ವರ್ಷ ಪೂರೈಸಿ ವೈಭವದ ಕಾಲದಲ್ಲಿದೆ. ಆರಂಭದಲ್ಲಿ ಕಷ್ಟದ ಕಾಲ ಎದುರಿಸಿತ್ತು. ಈಗ ಪ್ರಖ್ಯಾತಿಯ ಕಾಲದಲ್ಲಿದೆ. ಮೊದಲು ಜನರ ಹತ್ತಿರ ಪಬ್ಲಿಕ್ ಟಿವಿ ಹೋಗಿತ್ತು. ಈಗ ಜನರೇ ಪಬ್ಲಿಕ್ ಟಿವಿ ಹತ್ತಿರ ಬಂದಿದ್ದಾರೆ. ದಶಕ ಪೂರೈಸಿರುವ ಪಬ್ಲಿಕ್ ಟಿವಿ ನೂರಾರು ವರ್ಷ ಜನರ ವಾಹಿನಿಯಾಗಿ ಯಶಸ್ಸುಗಳಿಸಲಿ ಎಂದು ಹಾರೈಸುತ್ತೇನೆ ಎಂದರು.

    ಈ ವೇಳೆ ಬಿಜೆಪಿ ರಾಜ್ಯ ಯುವ ಮೋರ್ಚ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ರೇವಾ ವಿವಿ ಕುಲಪತಿ ಡಾ. ಪಿ. ಶ್ಯಾಮರಾಜು, ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್.ರಂಗನಾಥ್ ಇತರರು ಉಪಸ್ಥಿತರಿದ್ದರು.

  • ಸಿದ್ದಗಂಗಾ ಮಠದಲ್ಲಿ ಪಬ್ಲಿಕ್ ಟಿವಿ ದಶಮಾನೋತ್ಸವ ಸಂಭ್ರಮಕ್ಕೆ ಚಾಲನೆ

    ಸಿದ್ದಗಂಗಾ ಮಠದಲ್ಲಿ ಪಬ್ಲಿಕ್ ಟಿವಿ ದಶಮಾನೋತ್ಸವ ಸಂಭ್ರಮಕ್ಕೆ ಚಾಲನೆ

    ತುಮಕೂರು: ಕರುನಾಡ ಜನತೆಯ ನೆಚ್ಚಿನ ‘ಪಬ್ಲಿಕ್ ಟಿವಿ’ ದಶಮಾನೋತ್ಸವ ಸಂಭ್ರಮದಲ್ಲಿದೆ. 2012ರ ಫೆಬ್ರವರಿ 12ರಂದು ಲೋಕಾರ್ಪಣೆಗೊಂಡ ಪಬ್ಲಿಕ್ ಟಿವಿಗೆ ಹತ್ತು ವರ್ಷ ಪೂರೈಸಿದ ಸಂಭ್ರಮ. ಈ ಅಮೃತ ಘಳಿಗೆಯನ್ನು ಅರ್ಥಪೂರ್ಣವಾಗಿಸಲು ಸಿದ್ಧಗಂಗೆ ಶ್ರೀಗಳ ದಿವ್ಯ ಸಾನಿಧ್ಯ ಹಾಗೂ ಸಹಸ್ರಾರು ವಿದ್ಯಾರ್ಥಿಗಳ ಸಮಕ್ಷಮದಲ್ಲಿ ಶುಕ್ರವಾರ ಸಂಜೆ `ಪಬ್ಲಿಕ್ ದೀಪಾವಳಿ’ ಆಚರಿಸಲಾಯಿತು.

    ಶ್ರೀಮಠದ ಸಿದ್ದಲಿಂಗ ಸ್ವಾಮೀಜಿ, ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ದಂಪತಿ, ಸಂಸ್ಥೆಯ ಸಿಓಓ ಹರೀಶ್ ಕುಮಾರ್ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಸ್ರಾರು ಮಕ್ಕಳು ದೀಪ ಬೆಳಗಿ ಪಬ್ಲಿಕ್ ಟಿವಿಗೆ ಶುಭ ಹಾರೈಸಿದರು. ಪಬ್ಲಿಕ್ ದೀಪಾವಳಿಯ ದೃಶ್ಯಗಳು ನಯನಮನೋಹರವಾಗಿದ್ದವು. ಇದನ್ನೂ ಓದಿ: ಭಾರತಕ್ಕೆ ಏಕದಿನ ಸರಣಿ – ವಿಂಡೀಸ್‍ಗೆ ವೈಟ್‍ವಾಶ್ ಮುಖಭಂಗ

    ಈ ವೇಳೆ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಹೆಚ್.ಆರ್.ರಂಗನಾಥ್ ಅವರ ಸಮರ್ಪಣೆಯ ಕಾರಣದಿಂದ ‘ಪಬ್ಲಿಕ್ ಟಿವಿ’ 10 ವರ್ಷದಲ್ಲಿಯೇ 25 ವರ್ಷದ ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು. ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್‌ಗೆ ಜನ ಹೇಗೆ ಕಾಯುತ್ತಾರೆ ಎಂಬುದನ್ನು ನೆನಪಿಸಿಕೊಂಡರು. ಪಬ್ಲಿಕ್ ಟಿವಿ ರಜತ ಮಹೋತ್ಸವ ಆಚರಿಸಲಿ ಎಂದು ಹಾರೈಸಿದರು.

    ಸಂಸ್ಥೆಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಮಾತನಾಡಿ, ಪಬ್ಲಿಕ್ ಟಿವಿ ಆರಂಭಿಸಿದ ಸಂದರ್ಭದಲ್ಲಿ ಉದ್ಘಾಟನೆ ಕಾರ್ಯಕ್ರಮದಲ್ಲಿ ನಾನೊಬ್ಬನೇ ಇದ್ದೆ. ಆದರೆ ದಶಮಾನೋತ್ಸವ ಸಂದರ್ಭದಲ್ಲಿ ಶ್ರೀಮಠದ ಸಹಸ್ರಾರು ಮಕ್ಕಳೊಂದಿಗೆ ಪಾಲ್ಗೊಂಡಿದ್ದು ನಿಜಕ್ಕೂ ಖುಷಿಯಾಗಿದೆ. ಈ ಎರಡು ಕ್ಷಣಗಳನ್ನು ನನ್ನ ಜೀವನದಲ್ಲಿ ಸ್ಮರಣೀಯ ಎಂದು ತಿಳಿಸಿದರು. ಇದನ್ನೂ ಓದಿ: ಸಂಸ್ಕೃತದಲ್ಲಿ 5 ಚಿನ್ನದ ಪದಕಗಳನ್ನ ಗೆದ್ದ ಮುಸ್ಲಿಂ ದಿನಗೂಲಿ ಕಾರ್ಮಿಕನ ಮಗಳು

    ಯಾವುದೇ ಕಾಯಕವನ್ನು ಪ್ರಾರಂಭ ಮಾಡುವುದು ಸುಲಭ. ಆದರೆ ಆ ಕಾಯಕವನ್ನು ಯಶಸ್ಸಿನ ಕಡೆಗೆ ಕೊಂಡೊಯ್ಯುವುದು ತುಂಬಾ ಕಷ್ಟದ ಕೆಲಸ. ಅಂತಹ ಅದ್ಭುತ ಕಾರ್ಯವನ್ನು ಶ್ರೀಗಳು ಮುಂದುವರಿಸುತ್ತಿದ್ದಾರೆ ಎಂದು ಸಿದ್ದಗಂಗಾ ಶ್ರೀಗಳ ಕಾರ್ಯವನ್ನು ಕೊಂಡಾಡಿದರು.

    ಪಬ್ಲಿಕ್ ಟಿವಿ 10 ವರ್ಷದಲ್ಲಿ ಜನತೆಯ ಬೆಂಬಲದೊಂದಿಗೆ ಬೆಳೆದ ಪರಿಯನ್ನು ನೆನಪಿಸಿಕೊಂಡು ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ರಮ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ನಡೆಯಲು ಅವಕಾಶ ಮಾಡಿಕೊಟಿದ್ದಕ್ಕೆ ಚಿರಋಣಿ ಎಂದು ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ಕೊರೊನಾ ಮಾರ್ಗಸೂಚಿ ಹೋದ ಮೇಲೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡ್ತೇವೆ: ಜೋಶಿ

    ನಿಮ್ಮೆಲ್ಲರ ಪ್ರೀತಿಯಿಂದ ಈ ಹತ್ತು ವರ್ಷದಲ್ಲಿ ಪಬ್ಲಿಕ್ ಟಿವಿ ಸಾಧಿಸಿದ್ದು ಬಹಳಷ್ಟು, ಸಾಧಿಸಬೇಕಿರೋದು ಇನ್ನಷ್ಟು. ಈ ಸಾರ್ಥಕ ದಶಕದ ಹಿಂದೆ ನಮ್ಮೊಡನೆ ನೀವಿದ್ದೀರಿ. ನಮ್ಮನ್ನು ಇಷ್ಟರ ಮಟ್ಟಿಗೆ ಬೆಳೆಸಿದ್ದೀರಿ. ನಿಮಗೆ ನಾವು ಚಿರಋಣಿ. ಜೊತೆಗೆ ಕೇಬಲ್ ಆಪರೇಟರ್ಸ್, ಜಾಹೀರಾತುದಾರರಿಗೂ ಧನ್ಯವಾದ ಎಂದು ಕೃತಜ್ಞತೆ ಸಲ್ಲಿಸಿದರಲ್ಲದೇ, ಈ ಹತ್ತು ವರ್ಷದ ಪಯಣದ ಹಾದಿಯನ್ನು ಸಂಸ್ಥೆಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಮೆಲುಕು ಹಾಕಿದರು.

     

  • ದಶಮಾನೋತ್ಸವ ಆಚರಣೆಗೆ ಸರ್ಕಾರಿ ನೌಕರರಿಂದ 500 ರೂ. ವಸೂಲಿ- ಸರ್ಕಾರದ ಬಳಿ ದುಡ್ಡು ಇಲ್ವಾ?

    ದಶಮಾನೋತ್ಸವ ಆಚರಣೆಗೆ ಸರ್ಕಾರಿ ನೌಕರರಿಂದ 500 ರೂ. ವಸೂಲಿ- ಸರ್ಕಾರದ ಬಳಿ ದುಡ್ಡು ಇಲ್ವಾ?

    ಚಿಕ್ಕಬಳ್ಳಾಪುರ: ಜಿಲ್ಲೆಗೆ 10 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಜಿಲ್ಲಾ ದಶಮಾನೋತ್ಸವ ಆಚರಣೆಗೆ ಜಿಲ್ಲಾಡಳಿತ ಮುಂದಾಗಿದೆ. ಆದರೆ ಜಿಲ್ಲೆಯ ಸರ್ಕಾರಿ ನೌಕರರ ವೇತನದಲ್ಲಿ 500 ರೂಪಾಯಿ ಕಡಿತ ಮಾಡಿಕೊಳ್ಳಲು ನಿರ್ಧಾರಕ್ಕೆ ಆಕ್ಷೇಪ ಕೇಳಿ ಬಂದಿದೆ.

    ಫೆಬ್ರವರಿ 2, 3 ಹಾಗೂ 4 ಮೂರು ದಿನಗಳ ಕಾಲ ಚಿಕ್ಕಬಳ್ಳಾಪುರ ನಗರದಲ್ಲಿರುವ ಸರ್.ಎಂ.ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ದಶಮಾನೋತ್ಸವ ಆಚರಿಸಲು ಸಿದ್ಧತೆ ನಡೆದಿದೆ. ಆದರೆ ಈ ದಶಮಾನೋತ್ಸವ ಆಚರಣೆಗೆ ಸರ್ಕಾರಿ ನೌಕರರ ವೇತನದಲ್ಲಿ ಹಣ ಕಡಿತ ಮಾಡಿಕೊಳ್ಳುತ್ತಿರುವುದರಿಂದ ನೌಕರರ ಅಸಮಾಧಾನಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಸರ್ಕಾರಿ ಕಾರ್ಯಕ್ರಮ ಮಾಡೋಕೆ ಹಣದ ಕೊರತೆ ಇದೆಯಾ ಎಂಬ ಮಾತುಗಳು ಕೇಳಿಬರುತ್ತಿದೆ.

    ಕೋಲಾರ ಜಿಲ್ಲೆಯಿಂದ ಬೇರ್ಪಟ್ಟು ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 10 ವರ್ಷಗಳಾಗಿವೆ. ದಶಮಾನೋತ್ಸವ ಆಚರಣೆಗೆ ಸ್ವತಃ ರಾಜ್ಯ ಸರ್ಕಾರ ಸೂಕ್ತ ಅನುದಾನ ನೀಡಬೇಕಿತ್ತು. ಆದರೆ ಜಿಲ್ಲೆಯಲ್ಲಿ ಪ್ರಭಾವಿ ಮೂರು ಜನ ಕಾಂಗ್ರೆಸ್ ಶಾಸಕರಿದ್ದರೂ ಅನುದಾನ ತರಲು ಸಾಧ್ಯವಾಗಿಲ್ಲ. ಹೀಗಾಗಿ ದಶಮಾನೋತ್ಸವ ಆಚರಣೆಗೆ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯಾ ಕಾನಡೆ, ಎಲ್ಲಾ ರೀತಿಯ ಸರ್ಕಾರಿ ನೌಕರರ ವೇತನದಲ್ಲಿ ತಲಾ 1000-2000 ರೂ. ಕೊಡಿ ಎಂದು ನೌಕರರ ಸಂಘಗಳ ಜೊತೆ ಸಭೆಗಳನ್ನು ನಡೆಸಿದ್ದಾರೆ.

    ಜಿಲ್ಲೆಯ ಸರ್ಕಾರಿ ನೌಕರರು ಮೊದಲೇ ಕಡಿಮೆ ವೇತನ ಪಡೆದುಕೊಳ್ಳುತ್ತಿದ್ದಾರೆ. ಈ ಮಧ್ಯೆ ಇಂಥದೊಂದು ವಿವಾದಾತ್ಮಕ ನಿರ್ಧಾರವನ್ನು ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೈಗೊಂಡಿದೆ. ಜಿಲ್ಲಾಧಿಕಾರಿಯ ಒತ್ತಡಕ್ಕೆ ಮಣಿದ ನೌಕರರು ಕೊನೆಗೆ ಒಲ್ಲದ ಮನಸ್ಸಿನಿಂದಲೇ 500 ರೂಪಾಯಿ ನೀಡಲು ಒಪ್ಪಿದ್ದಾರೆ.

    ದಶಮಾನೋತ್ಸವ ಆಚರಣೆಗೆ ರಾಜ್ಯ ಸರ್ಕಾರದಿಂದ ಭರ್ಜರಿ ಅನುದಾನ ಮಂಜೂರು ಮಾಡಿಸಿಕೊಳ್ಳೊದನ್ನು ಬಿಟ್ಟು ಸರ್ಕಾರಿ ನೌಕರರ ವೇತನವನ್ನು ಕಡಿತ ಮಾಡಿಕೊಳ್ಳಲು ಮುಂದಾಗಿದೆ.