Tag: ದಲ್ಲಾಳಿ

  • ಮದ್ವೆಯಾಗಲು ಬಂದವನಿಗೆ ಶಾಕ್- ವಧುವಿನ ಮನೆ ಸಿಗದೆ ರಾತ್ರಿಯೆಲ್ಲಾ ಹುಡುಕಾಡಿ ವರ ಕಂಗಾಲು!

    ಮದ್ವೆಯಾಗಲು ಬಂದವನಿಗೆ ಶಾಕ್- ವಧುವಿನ ಮನೆ ಸಿಗದೆ ರಾತ್ರಿಯೆಲ್ಲಾ ಹುಡುಕಾಡಿ ವರ ಕಂಗಾಲು!

    – ರೊಚ್ಚಿಗೆದ್ದ ದಲ್ಲಾಳಿ ಮಹಿಳೆಯನ್ನೇ ಒತ್ತೆಯಾಳಾಗಿರಿಸಿದ್ರು

    ಲಕ್ನೋ: ಮದುವೆಯಾಗಲು ಬಂದ ವರ ಹಾಗೂ ಸಂಬಂಧಿಕರು ವಧುವಿನ ಮನೆ ಸಿಗದೆ ರಾತ್ರಿ ಪೂರ್ತಿ ಹುಡುಕಾಡಿ ಕಂಗಾಲಾದ ವಿಚಿತ್ರ ಘಟನೆಯೊಂದು ಉತ್ತರಪ್ರದೇಶದ ಅಜಂಗಢ ಜಿಲ್ಲೆಯಲ್ಲಿ ನಡೆದಿದೆ.

    ಈ ಘಟನೆ ಡಿಸೆಂಬರ್ 10ರಮದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೊತ್ವಾಲಿ ಪಟ್ಟಣದ ಕಾನ್ಷಿರಾಮ್ ಕಾಲೋನಿ ನಿವಾಸಿಯ ಯುವಕನ ಮದುವೆ ರಾಣಿಪುರದ ಯುವತಿಯೊಂದಿಗೆ ಡಿಸೆಂಬರ್ 11 ರಂದು ಫಿಕ್ಸ್ ಆಗಿತ್ತು. ಹೀಗಾಗಿ ವರ ಹಾಗೂ ಆತನ ಸಂಬಂಧಿಕರು ಡಿಸೆಂಬರ್ 10ರಂದು ರಾಣಿಪುರಕ್ಕೆ ಬಂದಿದ್ದಾರೆ.

    ಹೀಗೆ ಬಂದವರಿಗೆ ಯುವತಿಯ ಮನೆ ವಿಳಾಸ ಸಿಗದೆ ರಾತ್ರಿಯೆಲ್ಲ ಹುಡುಕಾಟ ನಡೆಸಿ ಕಂಗಾಲಾಗಿದ್ದು, ತಮ್ಮ ಮನೆಗೆ ವಾಪಸ್ ಬಂದಿದ್ದಾರೆ. ಮರುದಿನ ಬೆಳಗ್ಗೆ ಮದುವೆ ಫಿಕ್ಸ್ ಮಾಡಿದ್ದ ದಲ್ಲಾಳಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಅಲ್ಲದೆ ಕೊಟ್ಟಾಲಿ ಪೊಲಿಸ್ ಠಾಣೆಯಲ್ಲಿ ಹೈಡ್ರಾಮಾ ಮಾಡಿದರು.

    ವರನಿಗೆ ಇದು ಎರಡನೇಯ ಮದುವೆಯಾಗಿದೆ. ಇದಕ್ಕೂ ಮೊದಲು ಆತ ಬಿಹಾರದ ಸಮಷ್ಠಿಪುರದ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದು, ಆಕೆಯಿಂದ ದೂರವಾಗಿದ್ದನು. ಬಳಿಕ ರಾಣಿಪುರದ ಯುವತಿಯೊಂದಿಗೆ ಎರಡನೇ ಮದುವೆಯ ಸಿದ್ಧತೆ ನಡೆಸಿಕೊಂಡಿದ್ದನು. ಈ ಮದುವೆ ದಲ್ಲಾಳಿ ಮಹಿಳೆಯೊಬ್ಬರ ಮೂಲಕ ಫಿಕ್ಸ್ ಆಗಿತ್ತು. ವಿಶೇಷ ಅಂದ್ರೆ ವರ ಆಗಲಿ ವರನ ಕಡೆಯವರಾಗಲಿ ಹುಡುಗಿಯನ್ನು ನೋಡಲು ಹೋಗಿರಲಿಲ್ಲ. ಆದರೆ ಮದುವೆಯ ಖರ್ಚಿಗೆ ಅಂತ 20 ಸಾವಿರ ಹಣ ಮಾತ್ರ ನೀಡಿದ್ದರು.

    ಇತ್ತ ಮದುವೆಯ ಹಿಂದಿನ ವರ ಹಾಗೂ ವರನ ಕಡೆಯವರು ಬಂದಿದ್ದಾರೆ. ಆದರೆ ಅವರಿಗೆ ವಧುವಿನ ಮನೆಯ ವಿಳಾಸವೇ ಸಿಗದೆ ಪರದಾಡಿದ್ದಾರೆ. ಕೊನೆಗೆ ಸಿಟ್ಟುಗೊಂಡು ಮನೆಗೆ ವಾಪಸ್ಸಾಗಿದ್ದರು. ಮರುದಿನ ಬೆಳಗ್ಗೆ ದಲ್ಲಾಳಿ ಮಹಿಳೆಯನ್ನು ಹಿಡಿದು ಒತ್ತೆಯಾಳಾಗಿರಿಸಿ ಕ್ಯಾತೆ ತೆಗೆದಿದ್ದಾರೆ. ಗಲಾಟೆ ತಾರಕಕ್ಕೇರುತ್ತಿದ್ದಂತೆಯೇ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಸಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

  • ರಾಯಚೂರು ಆರ್.ಟಿ.ಓ ಕಚೇರಿ ಮೇಲೆ ಎಸಿಬಿ ದಾಳಿ

    ರಾಯಚೂರು ಆರ್.ಟಿ.ಓ ಕಚೇರಿ ಮೇಲೆ ಎಸಿಬಿ ದಾಳಿ

    ರಾಯಚೂರು: ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಸಾರಿಗೆ ಪ್ರಾಧಿಕಾರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಚೇರಿಯಲ್ಲಿ ಮಿತಿ ಮೀರಿದ ಲಂಚ ಹಾಗೂ ಬ್ರೋಕರ್ ಗಳ ಹಾವಳಿ ಕುರಿತ ದೂರು ಹಿನ್ನೆಲೆ ದಾಳಿ ನಡೆಸಲಾಗಿದೆ. ಎಸಿಬಿ ಡಿಎಸ್‍ಪಿ ಸಂತೋಷ್ ಬನ್ನಟ್ಟಿ ನೇತೃತ್ವದಲ್ಲಿ ದಾಳಿ ನಡೆದಿದೆ.

    ಬಳ್ಳಾರಿ, ಬೀದರ್, ಕೊಪ್ಪಳ, ಯಾದಗಿರಿ ಹಾಗೂ ರಾಯಚೂರು ಸೇರಿದಂತೆ 5 ಜಿಲ್ಲೆಗಳ ಒಟ್ಟು 30 ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ಮಧ್ಯಾಹ್ನ ಒಂದು ಗಂಟೆಯಿಂದ ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆ ಆರಂಭವಾಗಿದೆ. ದಾಳಿ ಸಮಯದಲ್ಲಿ ಕಚೇರಿ ಒಳಗಿದ್ದ ಬ್ರೋಕರ್‍ ಗಳು ಹಾಗೂ ಸಾರ್ವಜನಿಕರನ್ನ ಎಸಿಬಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

    ಆರ್.ಟಿ.ಓ ಕಚೇರಿಯಲ್ಲಿ ಪ್ರತಿಯೊಂದಕ್ಕೂ ಲಂಚ ಕೊಡಬೇಕು ಹಾಗೂ ಬ್ರೋಕರ್ ಗಳು ಇಲ್ಲದಿದ್ದರೆ ಯಾವುದೇ ಕೆಲಸಗಳು ಆಗುವುದಿಲ್ಲ ಅನ್ನೋ ಮಟ್ಟಿಗೆ ಪರಸ್ಥಿತಿಯಿದೆ ಎಂದು ಬಂದಿದ್ದ ದೂರುಗಳ ಹಿನ್ನೆಲೆ ಅಧಿಕಾರಿಗಳು ಇಂದು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.

  • ತೂಕದ ಯಂತ್ರಕ್ಕೆ ಕಂಟ್ರೋಲರ್ – ಅನ್ನದಾತರ ಅನ್ನಕ್ಕೆ ಕನ್ನ

    ತೂಕದ ಯಂತ್ರಕ್ಕೆ ಕಂಟ್ರೋಲರ್ – ಅನ್ನದಾತರ ಅನ್ನಕ್ಕೆ ಕನ್ನ

    ಯಾದಗಿರಿ: ತೂಕದ ಯಂತ್ರಕ್ಕೆ ಕಂಟ್ರೋಲರ್ ಅಳವಡಿಸಿ ಅನ್ನದಾತರ ಅನ್ನಕ್ಕೆ ಕನ್ನ ಹಾಕುವ ದಂಧೆ ಯಾದಗಿರಿಯಲ್ಲಿ ಭರ್ಜರಿಯಾಗಿ ನಡೆಯುತ್ತದೆ.

    ಜಿಲ್ಲೆಯಲ್ಲಿ ಸದ್ಯ ಹತ್ತಿ ಮಾರಾಟ ಜೋರಾಗಿದ್ದು, ಹತ್ತಿ ಖರೀದಿಗಾಗಿ ರಾತ್ರೋರಾತ್ರಿ ಅನಧಿಕೃತ ದಲ್ಲಾಳಿಗಳ ಖಾಸಗಿ ಖರೀದಿ ಕೇಂದ್ರಗಳು ನಾಯಿ ಕೊಡೆಯಂತೆ ಎದ್ದಿವೆ. ವಿವಿಧ ಗ್ರಾಮಗಳ ರಸ್ತೆ ಬದಿ ಹಾಕಲಾಗಿರುವ ಈ ಅನಧಿಕೃತ ಹತ್ತಿ ಖರೀದಿ ಕೇಂದ್ರದಲ್ಲಿ, ರೈತರು ವರ್ಷ ಪೂರ್ತಿ ಕಷ್ಟ ಪಟ್ಟು ಬೆಳೆದ ಹತ್ತಿಯ ತೂಕದಲ್ಲಿ ಹಾಡ ಹಗಲೇ ದಲ್ಲಾಳಿಗಳು ಮಹಾ ಮೋಸ ಮಾಡುತ್ತಿದ್ದಾರೆ.

    ತೂಕದ ಯಂತ್ರದಲ್ಲಿ ಕಂಟ್ರೋಲ್ ಅಳವಡಿಸಲಾಗಿದ್ದು ಇದರಿಂದ ಒಂದು ಕ್ವಿಂಟಲ್ ಹತ್ತಿ ಕೇವಲ 40 ಕೆಜಿ ತೋರಿಸುತ್ತದೆ. ಈ ಮೋಸವನ್ನು ಸತ್ವಃ ರೈತರೆ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ ಗ್ರಾಮದ ರೈತರು, ಅನಧಿಕೃತ ದಲ್ಲಾಳಿಗಳ ಹಾಕಿರುವ ಶೆಡ್ ಗಳಲ್ಲಿ ಹತ್ತಿ ಮಾರಾಟ ಮಾಡಲು ಹೋದಾಗ ಈ ಮೊಸದ ಜಾಲ ಬೆಳಕಿಗೆ ಬಂದಿದೆ. ಈ ಬಗ್ಗೆ ದಲ್ಲಾಳಿಗಳನ್ನು ರೈತರು ತರಾಟೆ ತೆಗೆದುಕೊಂಡಾಗ ಅಲ್ಲಿಂದ ದಲ್ಲಾಳಿಗಳು ಎಸ್ಕೇಪ್ ಆಗಿದ್ದಾರೆ.

  • ಕೋಟಿ ರೂ. ಮೆಕ್ಕೆಜೋಳ ಖರೀದಿಸಿ ರೈತರಿಗೆ ವ್ಯಾಪಾರಿಯಿಂದ ದೋಖಾ

    ಕೋಟಿ ರೂ. ಮೆಕ್ಕೆಜೋಳ ಖರೀದಿಸಿ ರೈತರಿಗೆ ವ್ಯಾಪಾರಿಯಿಂದ ದೋಖಾ

    – ಪೊಲೀಸರ ವಿರುದ್ಧವೇ ಡೆತ್‍ನೋಟ್ ಬರೆದು ಬೆದರಿಕೆ

    ಬಳ್ಳಾರಿ: ರೈತರು ಬರಗಾಲದಲ್ಲಿ ಕಷ್ಟಪಟ್ಟು ಬೆಳದಿದ್ದ ಮೆಕ್ಕೆಜೋಳವನ್ನು ಖರೀದಿ ಮಾಡಿದ್ದ ವ್ಯಾಪಾರಿಯೊಬ್ಬ ಹಣ ನೀಡದೇ ಮೋಸ ಮಾಡಿದ್ದಾನೆ. ರೈತರಿಗೆ ಹಣ ನೀಡಬೇಕೆಂದು ಪೊಲೀಸರು ಹೇಳಿದರೇ ಅವರ ವಿರುದ್ಧವೇ ಡೆತ್‍ನೋಟ್ ಬರೆದು ಬೆದರಿಕೆ ಹಾಕಿದ್ದಾನೆ.

    ಹಿರೇಹೆಗ್ಡಾಳ ಗ್ರಾಮ ಪಂಚಾಯತಿ ಸದಸ್ಯ, ದಲ್ಲಾಳಿ ಚಂದ್ರಪ್ಪ ಎಂಬವನೇ ರೈತರಿಗೆ ಹಣ ನೀಡದೇ ಸತಾಯಿಸುತ್ತಿರುವ ವ್ಯಕ್ತಿ. ಜಿಲ್ಲೆಯ ಕೂಡ್ಲಗಿ ತಾಲೂಕಿನ ಇಚಲ, ಬೊಮ್ಮನಹಳ್ಳಿ ಗ್ರಾಮ ಸೇರಿದಂತೆ ಸುತ್ತಲಿನ ಹಳ್ಳಿಗಳಿಂದ ನೂರಾರು ರೈತರ ಬಳಿ ಮೆಕ್ಕೆಜೋಳ ಖರೀದಿಸಿ ವ್ಯಾಪಾರಿ ಇದೂವರೆಗೂ ರೈತರಿಗೆ ಹಣ ನೀಡಿಲ್ಲ.

    ಚಂದ್ರಪ್ಪ ಕಲೆ ರೈತರಿಗೆ ಚೆಕ್ ನೀಡಿದ್ದಾನೆ.ಆದರೆ ಚಂದ್ರಪ್ಪ ನೀಡಿರುವ ಎಲ್ಲ ಚೆಕ್‍ಗಳು ಬೌನ್ಸ್ ಆಗಿವೆ. ಹೀಗಾಗಿ ಹಣ ಕೊಡಿಸುವಂತೆ ರೈತರು ಪೊಲೀಸ ಠಾಣೆ ಮೇಟ್ಟಿಲೇರಿದ್ರೆ, ಚಂದ್ರಪ್ಪ ಇದೀಗ ಪೊಲೀಸರನ್ನೆ ಬೆದರಿಸುತ್ತಿದ್ದಾನೆ. ರೈತರ ಹಣ ಕೊಡುವಂತೆ ತಾಕೀತೂ ಮಾಡಿದ ಕೂಡ್ಲಗಿ ಡಿವೈಎಸ್‍ಪಿ ತಮಗೆ ಕಿರುಕುಳ ನೀಡಿದ್ರೂ ಅಂತಾ ಪೊಲೀಸರ ವಿರುದ್ಧವೇ ವ್ಯಾಪಾರಿ ಚಂದ್ರಪ್ಪ ಡೆತ್‍ನೋಟ್ ಬರೆದಿಟ್ಟು ಪೊಲೀಸರನ್ನು ಬೆದರಿಸುತ್ತಿದ್ದಾನೆ.

    ರೈತರಿಂದ ಮೆಕ್ಕಜೋಳ ಖರೀದಿಸಿ ಹಣ ಕೊಡದೆ ಪೊಲೀಸರನ್ನೆ ಬೆದರಿಸುತ್ತಿರುವ ಚಂದ್ರಪ್ಪನಿಂದ ಹಣ ಪಡೆಯೋದೇಗೆ ಅಂತಾ ರೈತರು ಇದೀಗ ಕಂಗಾಲಾಗಿದ್ದಾರೆ. ಇತ್ತ ರೈತರು ನಮಗೆ ಹಣ ಕೊಡದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಿದ್ದಾರೆ.

     

  • ತಮಗೆ ಹುಣಸೆ ಹಣ್ಣು ಮಾರಾಟ ಮಾಡದಕ್ಕೆ ರೈತನ ಮೇಲೆ ದಲ್ಲಾಳಿಗಳಿಂದ ಹಲ್ಲೆ

    ತಮಗೆ ಹುಣಸೆ ಹಣ್ಣು ಮಾರಾಟ ಮಾಡದಕ್ಕೆ ರೈತನ ಮೇಲೆ ದಲ್ಲಾಳಿಗಳಿಂದ ಹಲ್ಲೆ

    ಚಿಕ್ಕಬಳ್ಳಾಪುರ: ಮಾರಾಟಕ್ಕೆ ತಂದಿದ್ದ ಹುಣಸೆ ಹಣ್ಣನ್ನು ತಮಗೆ ನೀಡಲಿಲ್ಲ ಎಂಬ ಕಾರಣಕ್ಕೆ ಕೆಲ ದಲ್ಲಾಳಿಗಳು ರೈತರೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಚಿಂತಾಮಣಿ ಪಟ್ಟಣದ ಮಾರುಕಟ್ಟೆಯಲ್ಲಿ ನಡೆದಿದೆ.

    ಮಿಂಡಿಗಲ್ ಗ್ರಾಮದ 50 ವರ್ಷದ ನಾರಾಯಣಸ್ವಾಮಿ ಹಲ್ಲೆಗೊಳಗಾಗಿರುವ ರೈತ. ಹುಣಸೆ ಹಣ್ಣು ಮಾರಾಟ ಮಾಡಲು ಮಾರುಕಟ್ಟೆಗೆ ಬಂದಿದ್ದ ರೈತ ನಾರಾಯಣಸ್ವಾಮಿ ಬಳಿಯಿದ್ದ ಹುಣಸೆ ಹಣ್ಣನ್ನ ಬಲವಂತವಾಗಿ ಎಲ್.ಟಿ.ನರಸಿಂಹ ಎಂಬುವರಿಗೆ ಸೇರಿದ ಮಂಡಿಯ ದಲ್ಲಾಳಿಗಳು ತೆಗೆದುಕೊಂಡು ಹೋಗಿದ್ದಾರೆ. ಆದ್ರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ರೈತ ನಾರಾಯಣಸ್ವಾಮಿ ಈ ಮೊದಲೇ ನಾನು ಟಿ.ಜಿ ಗೋಪಾಲಪ್ಪ ಮಂಡಿಯವರ ಬಳಿ ಅಡ್ವಾನ್ಸ್ ಪಡೆದಿದ್ದೇನೆ ಅವರಿಗೆ ಮಾರಾಟ ಮಾಡುತ್ತೇನೆ ಅಂತ ಹೇಳಿದ್ದಾರೆ.

    ಇದರಿಂದ ಕೆರಳಿದ ದಲ್ಲಾಳಿಗಳು ರೈತ ನಾರಾಯಣಸ್ವಾಮಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರೈತ ನಾರಾಯಣಸ್ವಾಮಿಯ ಕೈಗೆ ಗಂಭೀರ ಗಾಯವಾಗಿದ್ದು ಸದ್ಯ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.