Tag: ದರ ಏರಿಕೆ

  • ಪೆಟ್ರೋಲ್ ದರವನ್ನು 25 ರೂ ಕಡಿತ ಮಾಡಬಹುದು, ಆದ್ರೆ ಸರ್ಕಾರ ಮಾಡಲ್ಲ: ಚಿದಂಬರಂ

    ಪೆಟ್ರೋಲ್ ದರವನ್ನು 25 ರೂ ಕಡಿತ ಮಾಡಬಹುದು, ಆದ್ರೆ ಸರ್ಕಾರ ಮಾಡಲ್ಲ: ಚಿದಂಬರಂ

    ನವದೆಹಲಿ: ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 25 ರೂ. ಕಡಿಮೆ ಮಾಡಬಹುದು. ಆದರೆ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಆರೋಪಿಸಿದ್ದಾರೆ.

    ಈ ಸಂಬಂಧ ನಿತಂತರ ಟ್ವಿಟ್ ಮಾಡಿರುವ ಅವರು, ಪೆಟ್ರೋಲ್ ದರದಲ್ಲಿ ಕೇಂದ್ರ ಸರ್ಕಾರವು ಹೆಚ್ಚು ಹಣ ಉಳಿತಾಯ ಮಾಡುತ್ತಿದೆ. ಕಚ್ಚಾ ತೈಲದಲ್ಲಿ ಕೇಂದ್ರ ಸರ್ಕಾರವು ಪ್ರತಿ ಲೀಟರ್‍ಗೆ 15 ರೂ. ಉಳಿತಾಯ ಮಾಡುತ್ತಿದೆ. ಅಲ್ಲದೇ 10 ರೂ. ಅಬಕಾರಿ ಸುಂಕ ಹಾಕುತ್ತಿದೆ ಎಂದು ಅವರು ಹೇಳಿದ್ದಾರೆ.

    ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 25 ರೂ. ಕಡಿಮೆ ಮಾಡಬಹುದು. ಆದರೆ ಕೇಂದ್ರ ಸರ್ಕಾರ ಇದಕ್ಕೆ ಮುಂದಾಗುತ್ತಿಲ್ಲ. ಬದಲಿಗೆ ಪತ್ರಿ ಲೀಟರ್‍ಗೆ 1 ಅಥವಾ 2 ರೂಪಾಯಿ ಇಳಿಕೆ ಮಾಡಿ ಜನರಿಗೆ ಮೋಸ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

    ಕಳೆದ 9 ದಿನಗಳಲ್ಲಿ ಸರ್ಕಾರ ಸ್ವಾಮ್ಯದ ತೈಲ ಕಂಪೆನಿಗಳ ಪೆಟ್ರೋಲ್ ಮತ್ತು ಡೀಸೆಲ್ ದರವು ದಾಖಲೆಯ ಗರಿಷ್ಠಮಟ್ಟವನ್ನು ಮುಟ್ಟಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಪ್ರತಿ ಲೀಟರ್ ಪೆಟ್ರೋಲ್‍ಗೆ 19.48 ರೂ ಹಾಗೂ ಪ್ರತಿ ಲೀಟರ್ ಡೀಸೆಲ್‍ಗೆ 15.33 ರೂ. ಅಬಕಾರಿ ಸುಂಕವನ್ನು ಹೇರಿದೆ.

    ಜಾಗತಿಕ ತೈಲ ಬೆಲೆ ಕುಸಿತವಿದ್ದರೂ, 2014ರ ನವೆಂಬರ್‍ನಿಂದ 2016ರ ಜನವರಿ ನಡುವೆ ಕೇಂದ್ರ ಸರ್ಕಾರವು 9 ಬಾರಿ ಅಬಕಾರಿ ಸುಂಕವನ್ನು ಏರಿಸಿತ್ತು. ಆದರೆ ಕಳೆದ ಅಕ್ಟೋಬರ್ ನಲ್ಲಿ ಪ್ರತಿ ಲೀಟರ್ ಡೀಸೆಲ್ ಮತ್ತು ಪೆಟ್ರೋಲ್ ಮೇಲೆ 2 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು.

    ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಬಳಿಕ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ವ್ಯಾಟ್ ಅನ್ನು ಕಡಿಮೆ ಮಾಡಿ ಗ್ರಾಹಕರ ಮೇಲಿನ ಹೊರಯನ್ನು ಕಡಿಮೆ ಮಾಡುವಂತೆ ಕೇಳಿಕೊಂಡಿತ್ತು. ಈ ವೇಳೆ ಬಿಜೆಪಿ ಆಡಳಿತವಿದ್ದ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶಗಳು ವ್ಯಾಟ್ ಬೆಲೆಯನ್ನು ಇಳಿಸಿತ್ತು. ಇದನ್ನು ಓದಿ: ಸದ್ಯದಲ್ಲೇ ತೈಲ ದರ ಮತ್ತಷ್ಟು ಏರಿಕೆ: ಬೆಲೆ ಏರುತ್ತಿರುವುದು ಯಾಕೆ? ರಾಜ್ಯ, ಕೇಂದ್ರದ ಪಾಲು ಎಷ್ಟು? ದರ ಇಳಿಕೆಯಾಗುತ್ತಾ?

    ಕಳೆದ 15 ತಿಂಗಳಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 11.77 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್‍ಗೆ 15.47 ರೂ. ಅಬಕಾರಿ ಸುಂಕ ಏರಿಕೆಯಾದ ಪರಿಣಾಮ ಕೇಂದ್ರದ ಬೊಕ್ಕಸಕ್ಕೆ 2014-15ರಲ್ಲಿ 99,000 ಕೋಟಿ ರೂ. ಬಂದಿದ್ದರೆ 2016-17ರ ವೇಳೆಗೆ 2,42,000 ಕೋಟಿಗೆ ರೂ. ಹಣ ಸಂಗ್ರಹವಾಗಿದೆ.

  • ಲಾರಿ ಮುಷ್ಕರ ನಿಂತಿತು, ಅಕ್ಕಿ, ಬೆಳೆ, ಸಕ್ಕರೆ ದರ ದಿಢೀರ್ ಏರಿಕೆ ಆಯ್ತು!

    ಲಾರಿ ಮುಷ್ಕರ ನಿಂತಿತು, ಅಕ್ಕಿ, ಬೆಳೆ, ಸಕ್ಕರೆ ದರ ದಿಢೀರ್ ಏರಿಕೆ ಆಯ್ತು!

    ಬೆಂಗಳೂರು: ಲಾರಿ ಮುಷ್ಕರ ನಿಂತಿದ್ರೂ ಅದರ ಬಿಸಿಮಾತ್ರ ಆರಿಲ್ಲ. ಲಾರಿ ಮುಷ್ಕರದಿಂದ ಸ್ಥಗಿತಗೊಂಡಿದ್ದ ಎಪಿಎಂಸಿಗಳು ಇನ್ನು ಚೇತರಿಕೆ ಕಂಡಿಲ್ಲ. ಇದ್ರ ಎಫೆಕ್ಟ್, ದರ ಏರಿಕೆಯ ಬಿಸಿ. ಮಾರ್ಕೆಟ್‍ನಲ್ಲಿ ಅಕ್ಕಿ ಮತ್ತು ಬೇಳೆ ದಾಸ್ತಾನು ಕೊರತೆಯಿಂದ ದರ ಏಕಾಏಕಿ ದರ ಗಗನಕ್ಕೇರಿದೆ.

    ಲಾರಿ ಮುಷ್ಕರ ಹತ್ತು ದಿನಗಳ ಕಾಲ ನಡೆದು ಮೊನ್ನೆ ಮುಷ್ಕರ ಅಂತ್ಯಗೊಂಡಿದೆ. ಆದ್ರೆ ಮುಷ್ಕರದ ಎಫೆಕ್ಟ್ ಗೆ ಎಪಿಎಂಸಿ ಮಕಾಡೆ ಮಲಗಿಕೊಂಡಿದೆ. ಅಕ್ಕಿ ಬೇಳೆ ಕಾಳುಗಳು ಬರೋಬ್ಬರಿ ಕೆಜಿಗೆ ಹತ್ತು ರೂಪಾಯಿ ಏರಿಕೆ ಕಂಡಿದೆ. ಇನ್ನು ಒಂದು ತಿಂಗಳ ಕಾಲ ಮಾರ್ಕೆಟ್‍ನಲ್ಲಿ ಈ ದರ ಏರಿಕೆಯ ಬಿಸಿ ಇರುತ್ತೆ ಅನ್ನೋದು ವ್ಯಾಪಾರಿಗಳ ಲೆಕ್ಕಾಚಾರ.

    ಅಕ್ಕಿ ದರ ಎಷ್ಟಾಯ್ತು? ರಾ ರೈಸ್ ಕೋಲಂ ಕೆಜಿಗೆ 60 ರೂಪಾಯಿ ಇದ್ದ ದರ 70 ರೂ.ಗೆ ಏರಿಕೆ ಕಂಡಿದೆ. ಇನ್ನು ಸೋನಾಮಸೂರಿ 52 ರೂಪಾಯಿಯಿಂದ 58 ರೂ.ಗೆ, ಸ್ಟೀಮ್ ಕೋಲಂ 45 ರಿಂದ 54 ರೂಪಾಯಿಗೆ, ಸ್ಟೀಮ್ ಸೊನಾಂ 32 ರೂಪಾಯಿಂದ 43 ರೂ.ಗೆ, ಇಡ್ಲಿ ಅಕ್ಕಿ 36 ರೂಪಾಯಿಯಿಂದ 40 ರೂಪಾಯಿಗೆ ಹಾಗೂ ದೋಸೆ ರೈಸ್ 35 ರೂಪಾಯಿಯಿಂದ 40 ರೂಪಾಯಿಗೆ ಏರಿಕೆ ಕಂಡಿದೆ.

    ಬೆಳೆ ದರ ಎಷ್ಟಾಯ್ತು? ತೊಗರಿ 70 ರೂಪಾಯಿಯಿಂದ 90 ರೂಗೆ, ಉದ್ದಿನಬೇಳೆ 110 ರೂಪಾಯಿಯಿಂದ 120 ರೂ.ಗೆ ಹೆಸರುಬೇಳೆ 80 ರೂಪಾಯಿಯಿಂದ 90 ರೂಪಾಯಿಗೆ ಜಂಪ್ ಆಗಿದೆ. ಹುರುಳಿಕಾಳು 60 ರೂಪಾಯಿಯಿಂದ 70, ಅಲಸಂದೆ 90 ರೂಪಾಯಿಯಿಂದ 100 ರೂ. ಹಾಗೂ ಗೋಧಿ 30 ರೂಪಾಯಿಯಿಂದ 35 ರೂ.ಗೆ ಏರಿಕೆಯಾಗಿದೆ. ಇನ್ನು ಸಕ್ಕರೆ ಕೂಡ ಗ್ರಾಹಕರ ಪಾಲಿಗೆ ಕಹಿಯಾಗಿದ್ದು ಮೂರು ರೂಪಾಯಿ ಏರಿಕೆಯಾಗಿದೆ.

    ಒಟ್ಟಾರೆ ಬೇಸಗೆಯ ಬಿಸಿ ಜನ್ರಿಗೆ ತಟ್ಟಿ ತಟ್ಟಿ ಜನ ಹೈರಾಣಗಿದ್ದರೆ, ಈಗ ಅಕ್ಕಿ ಬೇಳೆ ಕಾಳು ದರ ಏರಿಕೆ ಕಂಡಿದ್ದು ಮತ್ತೆ ಕಷ್ಟವಾಗಿದೆ.

    https://www.youtube.com/watch?v=qd1QRjmx5jI

  • ಬೇಸಿಗೆಯಲ್ಲಿ ಕರೆಂಟ್ ಶಾಕ್: ವಿದ್ಯುತ್ ಕಂಪೆನಿಗಳ ಪ್ರಸ್ತಾವನೆಯಲ್ಲಿ ಇಷ್ಟು ರೇಟ್ ಹೆಚ್ಚು ಮಾಡಬೇಕಂತೆ!

    ಬೇಸಿಗೆಯಲ್ಲಿ ಕರೆಂಟ್ ಶಾಕ್: ವಿದ್ಯುತ್ ಕಂಪೆನಿಗಳ ಪ್ರಸ್ತಾವನೆಯಲ್ಲಿ ಇಷ್ಟು ರೇಟ್ ಹೆಚ್ಚು ಮಾಡಬೇಕಂತೆ!

    ಬೆಂಗಳೂರು: ಬೇಸಿಗೆಯಲ್ಲಿ ವಿದ್ಯುತ್ ದರ ಏರಿಸಲು ಸರ್ಕಾರ ಮುಂದಾಗಿದೆ. ಅದರಲ್ಲೂ ಇಂಧನ ಸಚಿವ ಡಿಕೆ ಶಿವಕುಮಾರ್ ಅವರೇ ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ.

    5 ವಿದ್ಯುತ್ ಸರಬರಾಜು ಕಂಪೆನಿಗಳಿಂದ ಪ್ರಸ್ತಾವನೆ ಬಂದಿದ್ದು, ಪ್ರತಿ ಯೂನಿಟ್‍ಗೆ 1 ರೂಪಾಯಿ 48 ಪೈಸೆ ಹೆಚ್ಚಳಕ್ಕೆ ಬೇಡಿಕೆ ಇಟ್ಟಿವೆ ಎಂದು ತಿಳಿಸಿದ್ದಾರೆ.

    ಕಳೆದ ವರ್ಷ ಮಾರ್ಚ್‍ನಲ್ಲಿ ವಿದ್ಯುತ್‍ದರ ಏರಿಕೆ ಮಾಡಲಾಗಿತ್ತು. ಆದರೆ ಈಗ, ದಾಖಲೆ ಮಟ್ಟದಲ್ಲಿ ಬೇಡಿಕೆ ಇಟ್ಟಿರುವುದರಿಂದ ಬೇಸಿಗೆಯಲ್ಲಿ ಕರೆಂಟ್ ದರ ಏರಿಕೆಯಾಗುವುದು ಪಕ್ಕಾ ಆಗಿದೆ.

    ಕಳೆದ ಬಾರಿ ಎಷ್ಟು ಹೆಚ್ಚಳ ಮಾಡಲಾಗಿತ್ತು?
    ನಗರದ ಗೃಹಬಳಕೆ ಗ್ರಾಹಕರಿಗೆ ಮೊದಲ 30 ಯೂನಿಟ್‍ಗೆ 30 ಪೈಸೆ , 31ರಿಂದ 100 ಯೂನಿಟ್‍ಗೆ 40 ಪೈಸೆ ಹೆಚ್ಚಿಸಲಾಗಿತ್ತು. 100 ಯೂನಿಟ್‍ಗೆ ಮೇಲ್ಪಟ್ಟ ಬಳಕೆಗೆ ಪ್ರತಿ ಹಂತದಲ್ಲಿ ತಲಾ 50 ಪೈಸೆ ಏರಿಸಲಾಗಿತ್ತು. ಗ್ರಾಮೀಣ ಗೃಹಬಳಕೆದಾರರಿಗೂ ಇಷ್ಟೇ ದರ ಹೆಚ್ಚಳವಾಗಿತ್ತು. ಎಲ್ಲ ಗ್ರಾಹಕರನ್ನು ಪರಿಗಣಿಸಿ ಲೆಕ್ಕ ಹಾಕಿದರೆ ಪ್ರತಿ ಯೂನಿಟ್ ವಿದ್ಯುತ್ ದರದಲ್ಲಿ 48 ಪೈಸೆಯಷ್ಟು ಏರಿಕೆ ಮಾಡಿದಂತಾಗಿತ್ತು. ಇದು ಕಳೆದ ಒಂದು ದಶಕದಲ್ಲಾದ ಅತ್ಯಧಿಕ ಪ್ರಮಾಣದ ದರ ಏರಿಕೆಯಾಗಿತ್ತು. ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂ) ಪ್ರತಿ ಯೂನಿಟ್‍ಗೆ 1.02 ರೂ. ಹೆಚ್ಚಳಕ್ಕೆ ಅನುಮೋದನೆ ನೀಡುವಂತೆ ಪ್ರಸ್ತಾವ ಸಲ್ಲಿಸಿತ್ತು.

    ಪರಿಹಾರ ಚೆಕ್: ರಾಜ್ಯ ಒಲಂಪಿಕ್ಸ್ ಕ್ರೀಡಾಕೂಟದ ವೇಳೆಯೇ ಸಾವನ್ನಪ್ಪಿದ್ದ ಸಂತೋಷ್ ಡಿ ಹೊಸಮನಿಗೆ ಕರ್ನಾಟಕ ವಿದ್ಯುತ್ ಕಾರ್ಖಾನೆ ವತಿಯಿಂದ 1 ಲಕ್ಷ ರೂಪಾಯಿಗಳ ಪರಿಹಾರದ ಚೆಕ್ ವಿತರಿಸಲಾಯ್ತು. ಸಂತೋಷ್ ತಂದೆ ದೇವಣ್ಣ ಆರ್ ಹೊಸಮನಿ ಚೆಕ್ ಸ್ವೀಕರಿಸಿದ್ರು.