Tag: ದರೋಡೆಕೋರ

  • ಪಾಟ್ನಾ ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್‌ ಹತ್ಯೆ – ಐವರು ಆರೋಪಿಗಳು ಕೋಲ್ಕತ್ತಾದಲ್ಲಿ ಅರೆಸ್ಟ್‌

    ಪಾಟ್ನಾ ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ಗ್ಯಾಂಗ್‌ಸ್ಟರ್‌ ಹತ್ಯೆ – ಐವರು ಆರೋಪಿಗಳು ಕೋಲ್ಕತ್ತಾದಲ್ಲಿ ಅರೆಸ್ಟ್‌

    ಪಾಟ್ನಾ: ಇಲ್ಲಿನ ಆಸ್ಪತ್ರೆಯಲ್ಲಿ ಐಸಿಯುಗೆ ನುಗ್ಗಿ ದರೋಡೆಕೋರ ಚಂದನ್ ಮಿಶ್ರಾನನ್ನ (Chandan Mishra) ಗುಂಡಿಕ್ಕಿ (Firing) ಕೊಂದ್ದಿದ್ದ ಐವರು ಆರೋಪಿಗಳನ್ನು ಕೋಲ್ಕತ್ತಾದಲ್ಲಿ (Kolkata) ಪೊಲೀಸರು ಶನಿವಾರ (ಇಂದು) ಬಂಧಿಸಿದ್ದಾರೆ.

    ಬಿಹಾರ ಪೊಲೀಸರು (Bihar Police) ಮತ್ತು ಪಶ್ಚಿಮ ಬಂಗಾಳ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ಕೋಲ್ಕತ್ತಾದ ಉಪನಗರದ ವಸತಿ ಸಂಕೀರ್ಣದಲ್ಲಿ ಬಂಧಿಸಿದ್ದಾರೆಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ‘Sher’ Will Roar | ನಿಮಿಷಕ್ಕೆ 700 ಬುಲೆಟ್‌ ಹಾರಿಸಬಲ್ಲ `AK-203′ ರೈಫಲ್‌ ಸೇನೆಗೆ!

    ಆ ದಿನ ಆಸ್ಪತ್ರೆ ವಾರ್ಡ್‌ನಲ್ಲಿ ನಡೆದಿದ್ದೇನು?
    ಪೆರೋಲ್ ಮೇಲೆ ಹೊರಗಿದ್ದ ದರೋಡೆಕೋರ ಚಂದನ್ ಮಿಶ್ರಾನನ್ನ ಪಾಟ್ನಾದ ಆಸ್ಪತ್ರೆಯ ಐಸಿಯುನಲ್ಲೇ ಗುಂಡು ಹಾರಿಸಿ ಐವರು ದುಷ್ಕರ್ಮಿಗಳು ಕೊಂದಿದ್ದರು. ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ಗ್ಯಾಂಗ್‌ಸ್ಟಾರ್ ಚಂದನ್ ಮಿಶ್ರಾನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಪೆರೋಲ್ ಮೇಲೆ ಪಾಟ್ನಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಮೈದುನನ ಜೊತೆ ಲವ್ವಿಡವ್ವಿ – ಪತಿ ಕೊಂದು ಆಕಸ್ಮಿಕ ಸಾವು ಅಂತ ಬಿಂಬಿಸಿದ್ದ ಮಹಿಳೆ ಬಂಧನ

    ಇದನ್ನರಿತ ಎದುರಾಳಿ ಗ್ಯಾಂಗ್‌ನವರು ಗನ್ ಸಮೇತ ಆಸ್ಪತ್ರೆಗೆ ನುಗ್ಗಿ ಮನಸೋ ಇಚ್ಛೆ ಗುಂಡಿನ ಸುರಿಮಳೆಗೈದಿದ್ದರು. ಚಂದನ್ ಮಿಶ್ರಾ ದೇಹಕ್ಕೆ 12 ಬುಲೆಟ್ ಹೊಕ್ಕಿದ್ದು, ಆಸ್ಪತ್ರೆಯಲ್ಲೆ ಹತನಾಗಿದ್ದ. ಫೈರಿಂಗ್ ಬಳಿಕ ದಾಳಿಕೋರರು ಎಸ್ಕೇಪ್ ಆಗಿದ್ದರು. ಪಾಟ್ನಾದಿಂದ ಪರಾರಿಯಾಗಿ ಕೋಲ್ಕತ್ತಾದ ನ್ಯೂ ಟೌನ್‌ ವಸತಿ ಪ್ರದೇಶದಲ್ಲಿ ಅಡಗಿಕೊಂಡಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡಿದ್ದ ಬಿಹಾರ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿಗಳನ್ನಾಧರಿಸಿ ತನಿಖೆ ಆರಂಭಿಸಿದ್ದರು. ಇದನ್ನೂ ಓದಿ: Uttar Pradesh | ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ – 6 ಜನ ದುರ್ಮರಣ

    ಈ ಮಧ್ಯೆ ಎಲ್ಲಾ ಆರೋಪಿಗಳು ಕೋಲ್ಕತ್ತಾದ ನ್ಯೂ ಟೌನ್‌ ಪ್ರದೇಶದ ವಸತಿ ಸಂಕೀರ್ಣದ ಫ್ಲಾಟ್‌ನಲ್ಲಿ ಅಡಗಿರುವುದಾಗಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಬಳಿಕ ಬಂಗಾಳ ಪೊಲೀಸರ ಸಹಾಯ ಪಡೆದು ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರ ಪೈಕಿ ನಾಲ್ವರು ಆರೋಪಿಗಳು ನೇರವಾಗಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಐದನೇ ಆರೋಪಿ ಅಪರಾಧದಲ್ಲಿ ಭಾಗಿಯಾಗಿದ್ದನೇ ಅಥವಾ ಕೊಲೆಗಾರರು ಅಡಗಿಕೊಳ್ಳಲು ಸಹಾಯ ಮಾಡಿದ್ದನೇ ಎಂಬುದರ ಬಗ್ಗೆ ತರನಿಖೆ ನಡೆಸಲಾಗುತ್ತಿದೆ.

    ಸದ್ಯ ಬಂಧಿತ ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಿ ಕೋಲ್ಕತ್ತಾದಿಂದ ಬಿಹಾರಕ್ಕೆ ಕರೆತರುವ ಪ್ರಕ್ರಿಯೆಗಳು ನಡೆಯುತ್ತಿವೆ. ಇದನ್ನೂ ಓದಿ: ಅಪ್ರಾಪ್ತನ ಜೊತೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ – ಇಬ್ಬರು ಬಾಲಕರು ಅರೆಸ್ಟ್‌

  • ಮಗಳ ಮೇಲೆ ರೇಪ್‍ಗೆ ತಾಯಿಯೇ ಸಪೋರ್ಟ್- 14ರ ಬಾಲಕಿ 8 ತಿಂಗ್ಳ ಗರ್ಭಿಣಿ

    ಮಗಳ ಮೇಲೆ ರೇಪ್‍ಗೆ ತಾಯಿಯೇ ಸಪೋರ್ಟ್- 14ರ ಬಾಲಕಿ 8 ತಿಂಗ್ಳ ಗರ್ಭಿಣಿ

    – ದರೋಡೆಕೋರನಿಗೆ ಅಮ್ಮನೇ ಸಹಾಯ
    – ಹುಷಾರಿಲ್ಲ ಎಂದಾಗ ಆಸ್ಪತ್ರೆಗೂ ಕರ್ಕೋಂಡೋಗಿಲ್ಲ

    ಬೆಂಗಳೂರು: ಹೆತ್ತ ತಾಯಿಯ ಸಹಾಯದಿಂದಲೇ ಬಾಲಕಿ ಮೇಲೆ ದರೋಡೆಕೋರನೊಬ್ಬ ಅತ್ಯಾಚಾರವೆಸಗಿದ ಘಟನೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    14 ವರ್ಷದ ಬಾಲಕಿಯನ್ನು ದರೋಡೆಕೋರ ವಿನಯ್(22) ನಿರಂತರವಾಗಿ ರೇಪ್ ಮಾಡಿದ ಪರಿಣಾಮ ಇದೀಗ ಆಕೆ 8 ತಿಂಗಳ ಗರ್ಭಿಣಿಯಾಗಿದ್ದಾಳೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿ, ಎಲ್ಲಾ ಆಯಾಮಗಳಲ್ಲೂ ವಿಚಾರಣೆ ನಡೆಸುತ್ತಿದ್ದಾರೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ..?:
    ಒಂದು ದಿನ ಬಾಲಕಿ ತನ್ನ ತಾಯಿ ಬಳಿ ಆರೋಗ್ಯ ಸರಿ ಇಲ್ಲ, ಆಸ್ಪತ್ರೆಗೆ ಹೋಗುವಂತೆ ಹೇಳಿದ್ದಾಳೆ. ಆದರೆ ಮಗಳ ಮಾತಿಗೆ ತಾಯಿ ಕ್ಯಾರೇ ಎಂದಿಲ್ಲ. ಅಲ್ಲದೆ ಆಸ್ಪತ್ರೆಗೂ ಕರೆದುಕೊಂಡು ಹೋಗಿರಲಿಲ್ಲ. ಹೀಗಾಗಿ ಇದೀಗ ಬಾಲಕಿ 8 ತಿಂಗಳ ಗರ್ಭಿಣಿಯಾಗಿದ್ದಾಳೆ. ತಾಯಿಯ ನಡತೆಯಿಂದ ಬೇಸರಗೊಂಡ ಬಾಲಕಿ ತನ್ನ ಅಜ್ಜಿ ಮನೆಗೆ ತೆರಳಿದ್ದು, ಅಜ್ಜಿ ಬಾಲಕಿಯನ್ನು ಕರೆದುಕೊಂಡು ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಬಾಲಕಿ ಮಾಗಡಿ ಉಪ-ವಿಭಾಗ ಪೊಲೀಸ್ ಠಾಣೆಗೆ ತೆರಳಿ ವ್ಯಕ್ತಿ ಹಾಗೂ ತಾಯಿ ವಿರುದ್ಧ ದೂರು ನೀಡಿದ್ದಾಳೆ.

    ತಾಯಿ ಮಾಡಿದ್ದ ನೀಚ ಕೃತ್ಯವೇನು..?:
    ಬಾಲಕಿ ತಾಯಿ, ದರೋಡೆಕೋರ ವಿನಯ್‍ನನ್ನು ಬೆಂಗಳೂರು ದಕ್ಷಿಣದಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಬಂದಿದ್ದಾಳೆ. ನಂತರ ಬಾಲಕಿಯನ್ನು ಆತನ ಜೊತೆ ಮಲಗುವಂತೆ ಒತ್ತಾಯ ಮಾಡಿದ್ದಾಳೆ. ಅಲ್ಲದೆ ವಿನಯ್ ನಿನ್ನನ್ನು ಮದುವೆಯಾಗುತ್ತಾನೆ ಎಂದು ಕೂಡ ಹೇಳಿ ಬಾಲಕಿಯನ್ನು ಒಪ್ಪಿಸಿದ್ದಾಳೆ. ಕೆಲ ದಿನಗಳ ನಂತರ ಬಾಲಕಿಯ ಪಿರಿಯೆಡ್(ತಿಂಗಳ ಸಮಸ್ಯೆ) ನಲ್ಲಿ ಬದಲಾವಣೆ ಕಂಡುಬಂತು. ಅಲ್ಲದೆ ಆಕೆಯ ಆರೋಗ್ಯದಲ್ಲಿಯೂ ವ್ಯತ್ಯಾಸ ಕಂಡು ಬಂತು. ಇದರಿಂದ ಗಾಬರಿಗೊಂಡ ಬಾಲಕಿ, ತನ್ನ ತಾಯಿ ಬಳಿ ಆರೋಗ್ಯದ ಬಗ್ಗೆ ಹೇಳಿಕೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾಳೆ. ಆದರೆ ಪಾಪಿ ತಾಯಿ ಕೆಲವೊಂದು ಮೆಡಿಸಿನ್ ತೆಗೆದುಕೊಳ್ಳುವಂತೆ ಹೇಳಿದ್ದೇ ವಿನಃ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಿಲ್ಲ.

    ಕೊನೆಗೆ ಬಾಲಕಿ ತನ್ನ ಕಷ್ಟವನ್ನು ಅಜ್ಜಿ ಬಳಿ ಹೇಳಿಕೊಂಡಿದ್ದಾಳೆ. ಕೂಡಲೇ ಅಜ್ಜಿ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಬಾಲಕಿಯನ್ನು ಪರೀಕ್ಷಿಸಿ ಆಕೆ ಗರ್ಭಿಣಿಯಾಗಿದ್ದು, 8 ತಿಂಗಳು ಆಗಿದೆ ಎಂದು ತಿಳಿಸಿದ್ದಾರೆ. ವೈದ್ಯರ ಮಾತು ಕೇಳುತ್ತಿದ್ದಂತೆಯೇ ಅಜ್ಜಿ ಶಾಕ್‍ಗೆ ಒಳಗಾಗಿದ್ದಾರೆ.

    ಬಾಲಕಿ 7ನೇ ತರಗತಿ ಓದುತ್ತಿದ್ದು, ತಾಯಿ ತನ್ನ ಗಂಡನನ್ನು ತೊರೆದು 10 ವರ್ಷಗಳಿಂದ ಬೇರೆಯೇ ವಾಸ ಮಾಡುತ್ತಿದ್ದಾಳೆ. ತಾಯಿ ಜೊತೆ ಬಾಲಕಿ ಕೂಡ ವಾಸಿಸುತ್ತಿದ್ದಳು. ಕಲ್ಯಾಣ ಮಂಟಪ ಹಾಲ್ ನಲ್ಲಿ ತಾಯಿ ಕೆಲಸ ಮಾಡುತ್ತಿದ್ದು, ಕಳೆದ 1 ವರ್ಷದಿಂದ ಈಕೆಗೆ ವಿನಯ್ ಪರಿಚಯವಾಗಿದೆ. ವೃತ್ತಿಯಲ್ಲಿ ರಿಕ್ಷಾ ಚಾಲಕನಾಗಿರುವ ವಿನಯ್ ಗೆ ಆಗಾಗ ದರೋಡೆ ಮಾಡುವ ಹವ್ಯಾಸ ಕೂಡ ಇತ್ತು.

    ತನ್ನ ತಾಯಿ ಹಾಗೂ ವಿನಯ್ ಇಬ್ಬರೂ ಮನೆಗೆ ಕುಡಿದು ಬರುತ್ತಿದ್ದರು. ಆ ನಂತರ ತಾಯಿ ವಿನಯ್ ಜೊತೆ ಮಲಗುವಂತೆ ಒತ್ತಾಯ ಮಾಡುತ್ತಿದ್ದಳು. ಅಲ್ಲದೆ ತಾಯಿ, ಊಟದಲ್ಲಿ ಮತ್ತು ಬರುವ ಪದಾರ್ಥ ಹಾಕಿ ಕೊಡುತ್ತಿದ್ದಳು ಎಂದು ಬಾಲಕಿ ಪೊಲೀಸರ ಬಳಿ ಹೇಳಿದ್ದಾಳೆ. ಕಳೆದ ಒಂದು ವರ್ಷಗಳಿಂದ ವಿನಯ್ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದನು. ಯಾವಾಗ ಬಾಲಕಿಯ ಪೀರಿಯೆಡ್ ನಿಂತಿದೆ ಎಂದು ತಿಳಿಯಿತೋ ಆವತ್ತಿನಿಂದ ಆತನ ಮನೆಗೆ ಬರುವುದನ್ನು ನಿಲ್ಲಿಸಿದ್ದನು. ಸದ್ಯ ದರೋಡೆ ಪ್ರಕರಣ ಸಂಬಂಧ ಆರೋಪಿ ವಿನಯ್ ನನ್ನು ಸಿಟಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

    ಕೈ-ಕಾಲು ಮುರಿದುಕೊಂಡಿರೋ ತಾಯಿ:
    ಬಾಲಕಿಯ ತಾಯಿ ಕೆಲ ತಿಂಗಳ ಹಿಂದೆಯಷ್ಟೇ ಮೆಟ್ಟಿಲಿನಿಂದ ಬಿದ್ದು, ಕಾಲು ಹಾಗೂ ಕೈಗೆ ಗಂಭೀರ ಗಾಯಗಳಾಗಿದ್ದು, ನಡೆದಾಡಲು ಕಷ್ಟವಾಗುತ್ತಿದೆ. ಹೀಗಾಗಿ ಆಕೆಯನ್ನು ಬಂಧಿಸಲು ಸಾಧ್ಯವಾಗಿಲ್ಲ. ಆದರೆ ಆಕೆ ಗುಣಮುಖಳಾದ ಬಳಿಕ ಬಂಧಿಸುತ್ತೇವೆ. ಆರೋಪಿ ಹಾಗೂ ಬಾಲಕಿಯ ತಾಯಿ ನಡುವೆ ಇರುವ ಸಂಬಂಧದ ಬಗ್ಗೆ ನಮಗೆ ಇನ್ನೂ ನಿಖರ ಮಾಹಿತಿ ತಿಳಿದಿಲ್ಲ. ಹೀಗಾಗಿ ವಿನಯ್ ಸಂಪೂರ್ಣ ತನಿಖೆಯ ಬಳಿಕವಷ್ಟೇ ಪ್ರಕರಣ ಬೆಳಕಿಗೆ ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ದರೋಡೆಕೋರರನ್ನು ಹಿಮ್ಮೆಟ್ಟಿಸಿದ ವೃದ್ಧ ದಂಪತಿಯ ವಿಡಿಯೋ ವೈರಲ್

    ದರೋಡೆಕೋರರನ್ನು ಹಿಮ್ಮೆಟ್ಟಿಸಿದ ವೃದ್ಧ ದಂಪತಿಯ ವಿಡಿಯೋ ವೈರಲ್

    ಚೆನ್ನೈ: ವೃದ್ಧ ದಂಪತಿ ದರೋಡೆಕೋರರೊಂದಿಗೆ ಹೋರಾಡಿದ ಸಾಹಸಮಯ ಘಟನೆಯೊಂದು ತಮಿಳುನಾಡಿನ ತಿರುವನ್ವೇಲಿಯಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ರಾತ್ರಿ ನಡೆದಿದೆ. 75 ವರ್ಷದ ಶನ್ಮುಗವೆಲ್ ಹಾಗೂ ಪತ್ನಿ 68 ವರ್ಷದ ಸೆಂತಮರೈ ದರೋಡೆಕೋರರ ಜೊತೆ ಹೋರಾಡಿದ ವೃದ್ಧ ದಂಪತಿಯಾಗಿದ್ದಾರೆ. ಇವರು ಇಬ್ಬರು ದರೋಡೆಕೋರರೊಂದಿಗೆ ಹೋರಾಟ ಮಾಡುತ್ತಿರುವ ದೃಶ್ಯ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ದಂಪತಿಯ ಸಾಹಸದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ವಿಡಿಯೋದಲ್ಲೇನಿದೆ..?
    ದಂಪತಿ ಭಾನುವಾರ ರಾತ್ರಿ ಊಟ ಮುಗಿಸಿ ಕಡಾಯಮ್ ನ ತಮ್ಮ ಮನೆಯ ಹೊರಗಡೆ ಕುಳಿತುಕೊಂಡು ಮಾತನಾಡುತ್ತಿದ್ದರು. ಹೀಗೆ ಮಾತನಾಡುತ್ತಾ ಪತ್ನಿ ಎದ್ದು ಮನೆಯೊಳಗೆ ಹೋಗುತ್ತಾರೆ. ಪತಿ ಅಲ್ಲೇ ಕುಳಿತಿದ್ದು, ಅವರ ಹಿಂದಿನಿಂದ ಮುಖಕ್ಕೆ ಬಟ್ಟೆ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬ ಬರುತ್ತಾನೆ. ಅಲ್ಲದೆ ಆತ ತನ್ನ ಕೈಯಲಿದ್ದ ಟವೆಲನ್ನು ಅಜ್ಜನ ಕುತ್ತಿಗೆಗೆ ಸುತ್ತಿ ಅಲ್ಲೇ ಕಂಬಕ್ಕೆ ಕಟ್ಟಿ ಹಾಕಲು ಪ್ರಯತ್ನಿಸಿದ್ದಾನೆ. ಈ ವೇಳೆ ಮತ್ತೊಬ್ಬ ಅಲ್ಲಿಗೆ ಆಗಮಿಸುತ್ತಾನೆ.

    ಇದರಿಂದ ಗಾಬರಿಗೊಂಡ ಶನ್ಮುಗವೆಲ್ ಜೋರಾಗಿ ಕಿರುಚಿಕೊಂಡಿದ್ದಾರೆ. ಕೂಡಲೇ ಪತ್ನಿ ಮನೆಯೊಳಗಿಂದ ಓಡಿ ಬಂದಿದ್ದು, ಅಲ್ಲೇ ಇದ್ದ ಕುರ್ಚಿಯಿಂದ ಇಬ್ಬರೂ ದಾಳಿಕೋರರ ವಿರುದ್ಧ ಹೋರಾಡಿದ್ದಾರೆ. ಈ ಮೂಲಕ ಅವರಿಂದ ಅಜ್ಜ ಬಚಾವ್ ಆಗಿದ್ದಾರೆ.

    ದರೋಡೆಕೋರರಲ್ಲಿ ಕೈಯಲ್ಲಿ ಆಯುಧವಿದ್ದು ವೃದ್ಧ ದಂಪತಿಯ ಕೊಲೆಗೆ ಯತ್ನಿಸಿದ್ದಾರೆ. ಆದರೆ ದಂಪತಿ ಅಲ್ಲೇ ಇದ್ದ ಕುರ್ಚಿಗಳಿಂದ ದರೋಡೆಕೋರರ ವಿರುದ್ಧ ಹೋರಾಟ ಮಾಡಿದ್ದಾರೆ. ಆದರೂ ಬಿಡದ ಖದೀಮರು ತಮ್ಮ ಕೈಯಲ್ಲಿದ್ದ ಆಯುಧಗಳಿಂದ ಎಲ್ಲೆಂದರಲ್ಲಿ ಕಡಿದಿದ್ದಾರೆ. ಪರಿಣಾಮ ವೃದ್ಧರು ಹೋರಾಡಿದ ಕುರ್ಚಿಯೆಲ್ಲ ಪೀಸ್ ಪೀಸ್ ಆಗಿದೆ.

    ಆ ಪೀಸ್ ನಿಂದಲೇ ದಂಪತಿ ಕೂಡ ಬಿಡದೇ ದರೋಡೆಕೋರರನ್ನು ಹಿಮ್ಮೆಟ್ಟಿಸಿದ್ದಾರೆ. ಬಳಿಕ ಏನೂ ಮಾಡಲು ಸಾಧ್ಯವಾಗದೇ ದರೋಡೆಕೋರರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ವೈರಲ್ ಆಗುತ್ತಿದ್ದು, ವೃದ್ಧ ದಂಪತಿಯ ಧೈರ್ಯವನ್ನು ಜನ ಕೊಂಡಾಡುತ್ತಿದ್ದಾರೆ.

  • ಶವಾಗಾರದಲ್ಲಿದ್ದ ಶವದ ಜೊತೆಗೆ ದರೋಡೆಕೋರನ ಸೆಕ್ಸ್!

    ಶವಾಗಾರದಲ್ಲಿದ್ದ ಶವದ ಜೊತೆಗೆ ದರೋಡೆಕೋರನ ಸೆಕ್ಸ್!

    – ಆರೋಪಿಗೆ ಆರು ವರ್ಷ ಜೈಲು ಶಿಕ್ಷೆ

    ಲಂಡನ್: ಶವಾಗಾರದಲ್ಲಿದ್ದ ಮೃತ ದೇಹದ ಜೊತೆಗೆ ಸೆಕ್ಸ್ ಮಾಡಿದ್ದ ದರೋಡೆಕೋರನಿಗೆ ಇಂಗ್ಲೆಂಡ್ ಕೋರ್ಟ್ ಆರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಖಾಸಿಂ ಖುರಾಮ್ (23) ಜೈಲು ಶಿಕ್ಷೆಗೆ ಗುರಿಯಾದ ದರೋಡೆಕೋರ. ಆರೋಪಿಯನ್ನು 2018 ನವೆಂಬರ್ 11ರಂದು ಬಂಧಿಸಲಾಗಿತ್ತು. ಪ್ರಕರಣದ ಕುರಿತು ಶುಕ್ರವಾರ ವಿಚಾರಣೆ ನಡೆಸಿದ ಬರ್ಮಿಂಗ್‍ಹ್ಯಾಮ್ ಕೋರ್ಟ್ ಖಾಸಿಂಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

    ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು, ಖಾಸಿಂ ಅಮಾನವೀಯವಾಗಿ ನಡೆದುಕೊಂಡಿದ್ದಾನೆ ಎಂದ ಅವರು, ಮೂರು ದೇಹಗಳನ್ನು ಕದಡಿದ್ಯಾಕೆ? ಒಂಬತ್ತು ಶವ ಪೆಟ್ಟಿಗೆಗಳನ್ನು ಧ್ವಂಸಗೊಳಿಸಲು ಪ್ರಯತ್ನಿಸಿದ್ದು ಯಾಕೆ? ನಿಜವಾಗಿಯೂ ನೀನು ಏನು ಮಾಡಿರುವೆ? ಯಾಕೆ ಹೀಗೆ ಮಾಡಿದ್ದು? ಈ ಕೃತ್ಯವನ್ನು ನೀನೊಬ್ಬನೇ ಮಾಡಿದ್ದೀಯಾ ಅಥವಾ ಬೇರೆ ಯಾರಾದ್ರೂ ನಿನ್ನ ಜೊತೆಯಲ್ಲಿದ್ರಾ ಎಂದು ಪ್ರಶ್ನಿಸಿದ್ದರು.

    ನನ್ನ ಕಕ್ಷಿದಾರನ ತಪ್ಪನ್ನು ಕ್ಷಮಿಸಿ ಹಾಗೂ ಆತನ ನಿಯಂತ್ರಣ ಮೀರಿ ಘಟನೆ ನಡೆದಿದೆ ಎಂದು ಖಾಸಿಂ ಪರ ವಕೀಲ ವಾದ ಮಂಡಿಸಿದ್ದಾರೆ.

    ಏನಿದು ಪ್ರರಕಣ?:
    ದರೋಡೆ ಮಾಡಿದ್ದ ಆಭರಣಗಳನ್ನು ಹಿಡಿದುಕೊಂಡು ಆರೋಪಿ ಖಾಸಿಂ ಖುರಾಮ್ ಇಂಗ್ಲೆಂಡ್ ಕೇಂದ್ರ ಕೋ ಆಪರೇಟಿವ್ ಶವಾಗಾರಕ್ಕೆ ತೆರಳಿದ್ದ. ಈ ವೇಳೆ ಮದ್ಯ ಹಾಗೂ ಗಾಂಜಾ ಮತ್ತಿನಲ್ಲಿದ್ದ ಖಾಸಿಂ ಖುರಾಮ್ ಶವಾಗಾರದಲ್ಲಿದ್ದ ಶವಗಳನ್ನು ನೋಡಿದ್ದಾನೆ. ಅಲ್ಲಿದ್ದ ಮಹಿಳೆಯೊಬ್ಬರ ಮೃತ ದೇಹದ ಜೊತೆಗೆ ಸೆಕ್ಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಎರಡು ಶವಗಳ ಬಟ್ಟೆಯನ್ನು ಕೂಡ ಕಳಚಿದ್ದ.

    ಸೆಕ್ಸ್ ಬಳಿಕ ಪ್ರಜ್ಞೆ ತಪ್ಪಿ ಬಿದ್ದಿದ್ದ ಖಾಸಿಂ ಖುರಾಮ್‍ನನ್ನು ಸಿಬ್ಬಂದಿಯೊಬ್ಬರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ರಾತ್ರಿ 1.40 ಸುಮಾರು ಆರೋಪಿಯನ್ನು ಬಂಧಿಸಿ, ದರೋಡೆ ಮಾಡಿದ್ದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದರು.

    ಶವದ ಸಂಬಂಧಿಕರು ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಪಟ್ಟು ಹಿಡಿದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಕಲಬುರಗಿಯಲ್ಲಿ ದರೋಡೆಕೋರನ ಮೇಲೆ ಪೊಲೀಸರಿಂದ ಫೈರಿಂಗ್- ಕರಿಚಿರತೆ ಸಹಚರನಿಗೆ ಗುಂಡೇಟು

    ಕಲಬುರಗಿಯಲ್ಲಿ ದರೋಡೆಕೋರನ ಮೇಲೆ ಪೊಲೀಸರಿಂದ ಫೈರಿಂಗ್- ಕರಿಚಿರತೆ ಸಹಚರನಿಗೆ ಗುಂಡೇಟು

    ಕಲಬುರಗಿ: ದರೋಡೆಕೋರನ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ ಘಟನೆ ಕಲಬುರಗಿ ಹೊರವಲಯದ ಗ್ರೀನ್‍ಸಿಟಿ ಬಳಿ ನಡೆದಿದೆ.

    ಕುಖ್ಯಾತ ಹಂತಕ ಮಲ್ಲಿಕಾರ್ಜುನ ಕಡಬುರ ಮೇಲೆ ಗುಂಡಿನ ದಾಳಿ ನಡೆದಿದೆ. ಆರೋಪಿ ಮಲ್ಲಿಕಾರ್ಜುನ, ಮೃತ ರೌಡಿಶೀಟರ್ ಕರಿಚಿರತೆ ಸಹಚರ. ದರೋಡೆ ಪ್ರಕರಣವೊಂದರಲ್ಲಿ ಬಂಧಿಸಲು ಪೊಲೀಸರು ಹೋದಾಗ ಹಂತಕ ಪೊಲೀಸ್ ಸಿಬ್ಬಂದಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಹೀಗಾಗಿ ಆತ್ಮರಕ್ಷಣೆಗಾಗಿ ಪಿಎಸ್‍ಐ ಪರಶುರಾಮ ವಾನಜರಕರ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

    ಘಟನೆಯಲ್ಲಿ ಪೇದೆಗಳಾದ ಅನಿಲ್ ಮತ್ತು ವಿಶ್ವನಾಥ್‍ಗೆ ಗಾಯವಾಗಿದ್ದು ಅವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ.ಆರೋಪಿಯನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.