Tag: ತ್ರಿಶಾ

  • ಇಬ್ಬರೂ ಸ್ಟಾರ್ ನಟಿಯರ ಜೊತೆ ಅಲ್ಲು ಅರ್ಜುನ್ ರೊಮ್ಯಾನ್ಸ್

    ಇಬ್ಬರೂ ಸ್ಟಾರ್ ನಟಿಯರ ಜೊತೆ ಅಲ್ಲು ಅರ್ಜುನ್ ರೊಮ್ಯಾನ್ಸ್

    ‘ಪುಷ್ಪ’ ಹೀರೋ ಅಲ್ಲು ಅರ್ಜುನ್ (Allu Arjun) ಜೊತೆ ಜವಾನ್ (Jawan) ಡೈರೆಕ್ಟರ್ ಹೊಸ ಸಿನಿಮಾ ಮಾಡುವ ಬಗ್ಗೆ ಈಗಾಗಲೇ ಸಿಕ್ಕಾಪಟ್ಟೆ ಸುದ್ದಿಯಾಗಿದೆ. ಐಕಾನ್ ಸ್ಟಾರ್ ಜೊತೆ ಸಮಂತಾ (Samantha) ರೊಮ್ಯಾನ್ಸ್ ಮಾಡುತ್ತಾರೆ ಎಂಬ ವಿಚಾರ ಹೊರಬಿದ್ದಿತ್ತು. ಇದೀಗ ಸ್ಯಾಮ್ ಒಬ್ಬರೇ ಅಲ್ಲ, ತ್ರಿಶಾ ಕೂಡ ಈ ಚಿತ್ರಕ್ಕೆ ಸಾಥ್ ನೀಡುತ್ತಿದ್ದಾರೆ.

    ಕಳೆದ ಎರಡ್ಮೂರು ದಿನಗಳಿಂದ ಅಲ್ಲು ಅರ್ಜುನ್ ಮುಂದಿನ ಸಿನಿಮಾಗೆ ಸಮಂತಾ ನಾಯಕಿಯಾಗ್ತಾರೆ ಎಂಬ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಸಲಿಗೆ ಸಮಂತಾ ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಾರಾ? ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಈ ಬೆನ್ನಲ್ಲೇ ಸ್ಟಾರ್ ನಟಿ ತ್ರಿಶಾ ಹೆಸರು ಕೂಡ ಚಾಲ್ತಿಯಲ್ಲಿದೆ.

    ಅಲ್ಲು ಅರ್ಜುನ್ ಮುಂಬರುವ ಸಿನಿಮಾದಲ್ಲಿ ಸಮಂತಾ ಮತ್ತು ತ್ರಿಶಾ ಕೃಷನ್ (Trisha) ಇಬ್ಬರೂ ತೆರೆಹಂಚಿಕೊಳ್ತಾರೆ ಎನ್ನಲಾಗುತ್ತಿದೆ. ಇಬ್ಬರ ಜೊತೆ ಅಲ್ಲು ಅರ್ಜುನ್ ಡ್ಯುಯೇಟ್ ಹಾಡೋಕೆ ರೆಡಿಯಾಗುತ್ತಿದ್ದಾರಂತೆ. ತ್ರಿಶಾ ಕೃಷ್ಣನ್ ಅವರಿಗೂ ಕೂಡ ಸಿನಿಮಾದಲ್ಲಿ ಉತ್ತಮ ಪಾತ್ರವಿದೆಯಂತೆ. ಇದನ್ನೂ ಓದಿ:ಟರ್ಕಿಯಲ್ಲಿ ಚಿಟ್ಟೆಯಾದ ದೀಪಿಕಾ ದಾಸ್

    ಅಲ್ಲು ಅರ್ಜುನ್ ಜೊತೆ ಸಮಂತಾ, ತ್ರಿಶಾ ನಟಿಸುವ ಸುದ್ದಿ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಒಂದು ವೇಳೆ, ಈ ಸುದ್ದಿ ನಿಜವೇ ಆಗಿದ್ದಲ್ಲಿ ಟ್ರಯೋ ಜೋಡಿಯನ್ನು ಫ್ಯಾನ್ಸ್ ನೋಡೋದೇ ಹಬ್ಬ ಎನ್ನಬಹುದು.

    ಸದ್ಯ ಅಲ್ಲು ಅರ್ಜುನ್ ಸದ್ಯ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ನಂತರ ಅಟ್ಲಿ ಸಿನಿಮಾವನ್ನು ಅವರು ಕೈಗೆತ್ತಿಕೊಳ್ಳಲಿದ್ದಾರೆ. ಇನ್ನೂ ಚಿತ್ರತಂಡದಿಂದ ಏನೆಲ್ಲಾ ತಾಜಾ ಸಮಾಚಾರ ಸಿಗಲಿದೆ ಎಂಬುದನ್ನು ಕಾದುನೋಡಬೇಕಿದೆ.

  • ಬಾಲಿವುಡ್ ಸಿನಿಮಾಗಳಲ್ಲಿ ನಟಿಸದಿರಲು ಕಾರಣ ತಿಳಿಸಿದ ತ್ರಿಶಾ

    ಬಾಲಿವುಡ್ ಸಿನಿಮಾಗಳಲ್ಲಿ ನಟಿಸದಿರಲು ಕಾರಣ ತಿಳಿಸಿದ ತ್ರಿಶಾ

    ತ್ರಿಶಾ ಕೃಷ್ಣನ್ (Trisha Krishnan) ಸದ್ಯ ದಕ್ಷಿದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 40 ವರ್ಷದ ಈ ಸುಂದರಿಗೆ ಟಾಪ್ ಹೀರೋಗಳ ಜೊತೆ ನಟಿಸಲು ಭಾರೀ ಬೇಡಿಕೆ ಇದೆ. ಹೀಗಿರುವಾಗ ಬಾಲಿವುಡ್ ಚಿತ್ರಗಳಲ್ಲಿ ಯಾಕೆ ನಟಿಸಲ್ಲ ಎಂದು ತ್ರಿಶಾ ತಿಳಿಸಿದ್ದಾರೆ. ಇದನ್ನೂ ಓದಿ:ಮಂಜುನಾಥನ ಸನ್ನಿಧಿಯಲ್ಲಿ ನೆರವೇರಿತು ‘ಗಾಡ್ ಪ್ರಾಮಿಸ್’ ಚಿತ್ರದ ಸ್ಕ್ರೀಪ್ಟ್ ಪೂಜೆ

    ‘ಪೊನ್ನಿಯನ್ ಸೆಲ್ವನ್’ ಚಿತ್ರದ ಸಕ್ಸಸ್ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ತ್ರಿಶಾ ತೊಡಗಿಸಿಕೊಂಡಿದ್ದಾರೆ. ಇದೀಗ ಸೌತ್‌ನ ಸಾಕಷ್ಟು ನಟಿಯರು ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ತ್ರಿಶಾ ಈಗಾಗಲೇ ಒಂದು ಹಿಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ಅದಾದ ನಂತರ ಅವರು ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಳ್ಳಲೇ ಇಲ್ಲ.

    ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಖಟ್ಟಾ ಮಿಟ್ಟಾ’ ಸಿನಿಮಾ ನಂತರ ನಾನು ಹಿಂದಿ ಚಿತ್ರದಲ್ಲಿ ನಟಿಸಲಿಲ್ಲ. ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿತ್ತು. ಆದರೆ ಆ ಚಿತ್ರ ಸಕ್ಸಸ್ ಕಾಣದೇ ಹೀನಾಯವಾಗಿ ಸೋತಿತ್ತು. ಹಿಂದಿ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆಯೋದ್ರಲ್ಲಿ ನಾನು ಸೋತೆ ಎಂದಿದ್ದಾರೆ. ಹಾಗಾಗಿ ಅದೇ ನನ್ನ ಮೊದಲ ಮತ್ತು ಕೊನೆಯ ಚಿತ್ರವಾಗಿದೆ. ಹಾಗಾಗಿ ನಾನು ಬಾಲಿವುಡ್‌ನಲ್ಲಿ ಸಿನಿಮಾ ಮಾಡುವುದು ಬಿಟ್ಟೆ ಎಂದು ತ್ರಿಶಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

    ಸದ್ಯ ‘ವಿಶ್ವಾಂಭರ’ (Vishwambara) ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿಗೆ (Megastar Chiranjeevi) ತ್ರಿಶಾ ನಾಯಕಿಯಾಗಿದ್ದಾರೆ. ಚಿತ್ರೀಕರಣ ಭರದಿಂದ ಸಾಗುತ್ತಿದೆ.

  • ರಾಜಕಾರಣಿ ರಾಜುನನ್ನು ಕ್ಷಮಿಸಲ್ಲ: ಕಾನೂನು ಕ್ರಮಕ್ಕೆ ಮುಂದಾದ ತ್ರಿಶಾ

    ರಾಜಕಾರಣಿ ರಾಜುನನ್ನು ಕ್ಷಮಿಸಲ್ಲ: ಕಾನೂನು ಕ್ರಮಕ್ಕೆ ಮುಂದಾದ ತ್ರಿಶಾ

    ಮ್ಮ ಬಗ್ಗೆ ಹಗುರವಾಗಿ ಮಾತನಾಡಿರುವ ಮತ್ತು ನಟಿಯರನ್ನು ಅನುಮಾನದ ರೀತಿಯಲ್ಲಿ ನೋಡುವಂತೆ ಮಾಡಿರುವ ತಮಿಳಿನ ಖ್ಯಾತ ರಾಜಕಾರಣಿ ಎ.ವಿ.ರಾಜು ಅವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ ತ್ರಿಶಾ. ಇಂಥ ಕೊಳಕು ಮನಸ್ಥಿತಿಯವರಿಗೆ ಬುದ್ಧಿ ಕಲಿಸಲು ಕಾನೂನು ಹೋರಾಟವೇ ಸರಿಯಾದ ಮಾರ್ಗ ಎಂದಿದ್ದಾರೆ ನಟಿ.

    ಹಿರಿಯ ರಾಜಕಾರಣಿಗಾಗಿ ನಟಿ ತ್ರಿಶಾರನ್ನು 25 ಲಕ್ಷ ರೂಪಾಯಿ ಕೊಟ್ಟು ರೆಸಾರ್ಟ್ ಗೆ ಕರೆಯಿಸಿಕೊಂಡಿದ್ದೆವು ಎಂದು ಎಐಎಡಿಎಂಕೆ ಉಚ್ಚಾಟಿತ ಮುಖಂಡ ಎ.ವಿ.ರಾಜು ಅಸಂಬದ್ಧ ಹೇಳಿಕೆ ನೀಡಿದ್ದರು. ಈ ಮಾತು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ತಮಿಳು ಸಿನಿಮಾ ರಂಗದ ಅನೇಕರು ರಾಜು ವಿರುದ್ಧ ಹರಿಹಾಯ್ದಿದ್ದರು. ತ್ರಿಶಾ ಕೂಡ ಕಾನೂನು ರೀತಿಯ ಕ್ರಮಕ್ಕೆ ಮುಂದಾಗುವ ಕುರಿತು ಪ್ರತಿಕ್ರಿಯೆ ನೀಡಿದ್ದರು.

    ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ರಾಜು ಕ್ಷಮೆ ಕೇಳಿದ್ದಾರೆ. ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ನಾನು ತ್ರಿಶಾ ರೀತಿಯ ನಟಿಯನ್ನು ಎಂದು ಹೇಳಿದ್ದು, ತ್ರಿಶಾ ಅವರನ್ನೇ ಅಂತ ಹೇಳಿಲ್ಲ. ಆದರೂ, ನಾನು ಕ್ಷಮೆ (Kshame) ಕೇಳುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶ ತಮಗೆ ಇರಲಿಲ್ಲವೆಂದು ಹೇಳಿದ್ದಾರೆ.

    ಪದೇ ಪದೇ ನಟಿ ತ್ರಿಶಾ (Trisha) ಅವರ ಮೇಲೆ ಮಾನಹಾನಿ ಮಾಡುವಂತಹ ಘಟನೆಗಳು ತಮಿಳು ನಾಡಿನಲ್ಲಿ ನಡೆಯುತ್ತಿವೆ. ಈ ಹಿಂದೆ ಮನ್ಸೂರ್ ಅಲಿ ಖಾನ್ ಕೂಡ ತ್ರಿಶಾರ ಬಗ್ಗೆ ಅವಹೇಳನ ಮಾಡುವಂತ ಮಾತುಗಳನ್ನು ಆಡಿದ್ದರು. ಇದೀಗ ತಮಿಳು ನಾಡಿನ ರಾಜಕೀಯ ಮುಖಂಡ  ಎ.ವಿ.ರಾಜು (A.V. Raju)ನಾಲಿಗೆ ಹರಿಬಿಟ್ಟಿದ್ದರು.  ಲೈಂಗಿಕ ಕೆಲಸಕ್ಕಾಗಿ ಎ.ವೆಂಕಟಾಚಲಂ (A. Venkatachalam) ಅವರು ತ್ರಿಶಾರಿಗೆ 25 ಲಕ್ಷ ರೂಪಾಯಿ ಆಫರ್ ನೀಡಿದ್ದರು. ಶಾಸಕರೊಬ್ಬರು ಅದಕ್ಕೆ ಒಪ್ಪಿಸಿದ್ದರು ಎಂದು ರಾಜು ಹೇಳಿದ್ದರು. ಇಂತಹ ಅನೇಕ ನಟಿಯರು ನಮ್ಮಲ್ಲಿ ಇದ್ದಾರೆ ಎಂದು ರಾಜು ಹೇಳಿಕೆ ನೀಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ಈ ವಿಡಿಯೋ ಭಾರೀ ಸದ್ದು ಮಾಡುತ್ತಿದ್ದಂತೆಯೇ ಇದ್ದಕ್ಕೆ ನಟಿ ತ್ರಿಶಾ ಕೂಡ ಪ್ರತಿಕ್ರಿಯೆ ನೀಡಿದ್ದರು. ಪ್ರಚಾರಕ್ಕಾಗಿ ಹೀಗೆ ನಾಲಿಗೆ ಹರಿಬಿಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ಲೀಗಲ್ ಟೀಮ್ ತಕ್ಕ ಪಾಠ ಕಲಿಸೋಕೆ ಸಜ್ಜಾಗಿದೆ ಎಂದು ತ್ರಿಷಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

     

    ಪ್ರಚಾರಕ್ಕಾಗಿ ಇಂತ ಕೀಳು ಮಟ್ಟದ ವ್ಯಕ್ತಿಗಳನ್ನು ಎದುರುಗೊಳ್ಳೋಕೆ ಅಸಹ್ಯವಾಗುತ್ತಿದೆ. ಇದನ್ನು ಎಂದಿಗೂ ಸಹಿಸಲ್ಲ ಮತ್ತು ಸುಮ್ಮನೆ ಕೂರುವುದಿಲ್ಲ. ನನ್ನ ಲೀಗಲ್ ಟೀಮ್ ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದರು.

  • ತ್ರಿಶಾನ ‘ರೆಸಾರ್ಟ್’ಗೆ ಕರೆಯಿಸಿಕೊಂಡಿದ್ದೆ: ಮಾತಿಗೆ ಕ್ಷಮೆ ಕೇಳಿದ ರಾಜು

    ತ್ರಿಶಾನ ‘ರೆಸಾರ್ಟ್’ಗೆ ಕರೆಯಿಸಿಕೊಂಡಿದ್ದೆ: ಮಾತಿಗೆ ಕ್ಷಮೆ ಕೇಳಿದ ರಾಜು

    ಹಿರಿಯ ರಾಜಕಾರಣಿಗಾಗಿ ನಟಿ ತ್ರಿಶಾರನ್ನು 25 ಲಕ್ಷ ರೂಪಾಯಿ ಕೊಟ್ಟು ರೆಸಾರ್ಟ್ ಗೆ ಕರೆಯಿಸಿಕೊಂಡಿದ್ದೆವು ಎಂದು ಎಐಎಡಿಎಂಕೆ ಉಚ್ಚಾಟಿತ ಮುಖಂಡ ಎ.ವಿ.ರಾಜು ಅಸಂಬದ್ಧ ಹೇಳಿಕೆ ನೀಡಿದ್ದರು. ಈ ಮಾತು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ತಮಿಳು ಸಿನಿಮಾ ರಂಗದ ಅನೇಕರು ರಾಜು ವಿರುದ್ಧ ಹರಿಹಾಯ್ದಿದ್ದರು. ತ್ರಿಶಾ ಕೂಡ ಕಾನೂನು ರೀತಿಯ ಕ್ರಮಕ್ಕೆ ಮುಂದಾಗುವ ಕುರಿತು ಪ್ರತಿಕ್ರಿಯೆ ನೀಡಿದ್ದರು.

    ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ರಾಜು ಕ್ಷಮೆ ಕೇಳಿದ್ದಾರೆ. ತಮ್ಮ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ನಾನು ತ್ರಿಶಾ ರೀತಿಯ ನಟಿಯನ್ನು ಎಂದು ಹೇಳಿದ್ದು, ತ್ರಿಶಾ ಅವರನ್ನೇ ಅಂತ ಹೇಳಿಲ್ಲ. ಆದರೂ, ನಾನು ಕ್ಷಮೆ (Kshame) ಕೇಳುತ್ತೇನೆ. ಯಾರನ್ನೂ ನೋಯಿಸುವ ಉದ್ದೇಶ ತಮಗೆ ಇರಲಿಲ್ಲವೆಂದು ಹೇಳಿದ್ದಾರೆ.

    ಪದೇ ಪದೇ ನಟಿ ತ್ರಿಶಾ (Trisha) ಅವರ ಮೇಲೆ ಮಾನಹಾನಿ ಮಾಡುವಂತಹ ಘಟನೆಗಳು ತಮಿಳು ನಾಡಿನಲ್ಲಿ ನಡೆಯುತ್ತಿವೆ. ಈ ಹಿಂದೆ ಮನ್ಸೂರ್ ಅಲಿ ಖಾನ್ ಕೂಡ ತ್ರಿಶಾರ ಬಗ್ಗೆ ಅವಹೇಳನ ಮಾಡುವಂತ ಮಾತುಗಳನ್ನು ಆಡಿದ್ದರು. ಇದೀಗ ತಮಿಳು ನಾಡಿನ ರಾಜಕೀಯ ಮುಖಂಡ  ಎ.ವಿ.ರಾಜು (A.V. Raju)ನಾಲಿಗೆ ಹರಿಬಿಟ್ಟಿದ್ದರು.

    ಲೈಂಗಿಕ ಕೆಲಸಕ್ಕಾಗಿ ಎ.ವೆಂಕಟಾಚಲಂ (A. Venkatachalam) ಅವರು ತ್ರಿಶಾರಿಗೆ 25 ಲಕ್ಷ ರೂಪಾಯಿ ಆಫರ್ ನೀಡಿದ್ದರು. ಶಾಸಕರೊಬ್ಬರು ಅದಕ್ಕೆ ಒಪ್ಪಿಸಿದ್ದರು ಎಂದು ರಾಜು ಹೇಳಿದ್ದರು. ಇಂತಹ ಅನೇಕ ನಟಿಯರು ನಮ್ಮಲ್ಲಿ ಇದ್ದಾರೆ ಎಂದು ರಾಜು ಹೇಳಿಕೆ ನೀಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ಈ ವಿಡಿಯೋ ಭಾರೀ ಸದ್ದು ಮಾಡುತ್ತಿದ್ದಂತೆಯೇ ಇದ್ದಕ್ಕೆ ನಟಿ ತ್ರಿಶಾ ಕೂಡ ಪ್ರತಿಕ್ರಿಯೆ ನೀಡಿದ್ದರು. ಪ್ರಚಾರಕ್ಕಾಗಿ ಹೀಗೆ ನಾಲಿಗೆ ಹರಿಬಿಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ಲೀಗಲ್ ಟೀಮ್ ತಕ್ಕ ಪಾಠ ಕಲಿಸೋಕೆ ಸಜ್ಜಾಗಿದೆ ಎಂದು ತ್ರಿಷಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

    ಪ್ರಚಾರಕ್ಕಾಗಿ ಇಂತ ಕೀಳು ಮಟ್ಟದ ವ್ಯಕ್ತಿಗಳನ್ನು ಎದುರುಗೊಳ್ಳೋಕೆ ಅಸಹ್ಯವಾಗುತ್ತಿದೆ. ಇದನ್ನು ಎಂದಿಗೂ ಸಹಿಸಲ್ಲ ಮತ್ತು ಸುಮ್ಮನೆ ಕೂರುವುದಿಲ್ಲ. ನನ್ನ ಲೀಗಲ್ ಟೀಮ್ ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದರು.

  • ಸಿಂಗಲ್ ಆಗಿರೋ ತ್ರಿಶಾಗೆ ರೋಸ್ ಕೊಟ್ಟಿದ್ಯಾರು?

    ಸಿಂಗಲ್ ಆಗಿರೋ ತ್ರಿಶಾಗೆ ರೋಸ್ ಕೊಟ್ಟಿದ್ಯಾರು?

    ಸೌತ್ ನಟಿ ತ್ರಿಶಾ (Trisha Krishnan) ಆಗಾಗ ಸಿನಿಮಾ ಬಿಟ್ಟು ವೈಯಕ್ತಿಕ ವಿಚಾರವಾಗಿಯೂ ಭಾರೀ ಸುದ್ದಿಯಾಗ್ತಾರೆ. ಇದೀಗ ವ್ಯಾಲೆಂಟೈನ್ ದಿನದಂದು ಗುಲಾಬಿ ಗೊಂಚಲು ತ್ರಿಶಾಗೆ ಗಿಫ್ಟ್ ನೀಡಿದ್ದಾರೆ. ಯಾರು ಎಂಬುದರ ಬಗ್ಗೆ ಸುಳಿವಿಲ್ಲ. ಸದ್ದಿಲ್ಲದೇ ನಟಿ ಎಂಗೇಜ್ ಆದ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ.

    40ರ ವರ್ಷದ ನಟಿ ತ್ರಿಶಾ ಸದ್ಯ ಟಾಪ್ ನಟರಿಗೆ ನಾಯಕಿಯಾಗುವ ಮೂಲಕ ಸಿನಿಮಾ ಕೆರಿಯರ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಪರ್ಸನಲ್ ಲೈಫ್‌ನಲ್ಲಿ ನಟಿ ಕಮೀಟ್ ಆಗಿದ್ದಾರಾ? ಎಂದು ತ್ರಿಶಾ ಬಗ್ಗೆ ಚರ್ಚೆ ಶುರುವಾಗಿದೆ.

    ನಟಿ ತ್ರಿಶಾ ಅವರು ಪ್ರೇಮಿಗಳ ದಿನ ಒಂದು ಸ್ಪೆಷಲ್ ಪೋಸ್ಟ್ ಶೇರ್ ಮಾಡಿದ್ದರು. ಈ ಪೋಸ್ಟ್ನಲ್ಲಿ ಅಂತೂ ಈ ದಿನ ಹೀಗೆ ಕಳೆಯಿತು ಎಂದು ಕ್ಯಾಪ್ಷನ್ ಬರೆದು ನಟಿ ಕೆಲವೊಂದು ಫೋಟೋಗಳನ್ನು ಅಪ್ಲೋಡ್ ಮಾಡಿದ್ದರು. ಫೋಟೋವೊಂದರಲ್ಲಿ ತಿಳಿ ಗುಲಾಬಿ ಬಣ್ಣದ ರೋಸ್ ಬೊಕ್ಕೆ ಕೂಡಾ ಹಿಡಿದುಕೊಂಡಿದ್ದರು. ಹೂಗಳಿಗೆ ಮುಖ ತಾಗಿಸಿ ನಟಿ ಫುಲ್ ಜೂಮ್‌ನಲ್ಲಿ ಫೋಟೋ ಕ್ಲಿಕ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ನಟಿ ಮುದ್ದಾಗಿ ಕಾಣಿಸಿದ್ದಾರೆ. ನಟಿಯ ಫೋಟೋ ನೋಡ್ತಿದ್ದಂತೆ ನಿಮ್ಮ ವ್ಯಾಲೆಂಟೈನ್‌ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಎಂಗೇಜ್‌ ಆಗಿದ್ದಾರೆ ಎನ್ನಲಾದ ಸುದ್ದಿಗೆ ತ್ರಿಶಾ ಕ್ಲ್ಯಾರಿಟಿ ಕೊಡುವವರೆಗೂ ಕಾಯಬೇಕಿದೆ.

     

    View this post on Instagram

     

    A post shared by Trish (@trishakrishnan)

    ಕೆಲ ವರ್ಷಗಳ ಹಿಂದೆ ಉದ್ಯಮಿ ವರುಣ್ ಜೊತೆ ತ್ರಿಷಾ ಎಂಗೇಜ್ ಆಗಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಇಬ್ಬರೂ ಬ್ರೇಕಪ್ ಮಾಡಿಕೊಂಡರು. ಮದುವೆಗೆ ಇನ್ನೂ ಕೆಲವೇ ದಿನಗಳು ಇದೇ ಎನ್ನುವಾಗ ಬ್ರೇಕಪ್ ಸುದ್ದಿ ಹೇಳಿ ಶಾಕ್ ಕೊಟ್ಟಿದ್ದರು. ಇದನ್ನೂ ಓದಿ:‘ಪುಷ್ಪ 2’ ಶೂಟಿಂಗ್ ಮಧ್ಯ ಬರ್ಲಿನ್ ವಿಮಾನ ಹತ್ತಿದ ಅಲ್ಲು ಅರ್ಜುನ್

    ವಿಜಯ್ ಜೊತೆ ಲಿಯೋ ಸಿನಿಮಾ ಆದ್ಮೇಲೆ ಈಗ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಜೊತೆ ‘ವಿಶ್ವಾಂಭರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  • Leo ಟ್ರೈಲರ್‌ಗೆ ಮಿಶ್ರ ಪ್ರತಿಕ್ರಿಯೆ- ಸಿನಿಮಾ ಗೆಲುವಿನ ಬಗ್ಗೆ ತಲೆಕೆಡಿಸಿಕೊಂಡ ದಳಪತಿ ಫ್ಯಾನ್ಸ್

    Leo ಟ್ರೈಲರ್‌ಗೆ ಮಿಶ್ರ ಪ್ರತಿಕ್ರಿಯೆ- ಸಿನಿಮಾ ಗೆಲುವಿನ ಬಗ್ಗೆ ತಲೆಕೆಡಿಸಿಕೊಂಡ ದಳಪತಿ ಫ್ಯಾನ್ಸ್

    ಳಪತಿ ವಿಜಯ್ (Vijay Thalapathy) ಫ್ಯಾನ್ಸ್ ಕಂಗಾಲಾಗಿದ್ದಾರೆ. ಇನ್ನೇನು ಬಿಡುಗಡೆ ಹೊಸ್ತಿಲಲ್ಲಿರುವ ಲಿಯೋ (Leo Film) ಸಿನಿಮಾದ ಟ್ರೈಲರ್‌ಗೆ ಸಿಕ್ಕ ಪ್ರತಿಕ್ರಿಯೆಗೆ ಮುಖ ಮುಚ್ಚಿಕೊಂಡಿದ್ದಾರೆ. ನಿರ್ದೇಶಕ ಲೋಕೇಶ್ ಕನಕರಾಜ್ ಕಡೆ ಅನುಮಾನದಿಂದ ನೋಡುತ್ತಿದ್ದಾರೆ. ಹಾಗಿದ್ದರೆ ಲಿಯೋ ಏನಾಗಲಿದೆ ? ಯಾಕೀ ಗೊಂದಲ? ಇಲ್ಲಿದೆ ಮಾಹಿತಿ. ಇದನ್ನೂ ಓದಿ:‘ಜವಾನ್’ ಕಲೆಕ್ಷನ್ 1103.27 ಕೋಟಿ ರೂಪಾಯಿ: ಅಧಿಕೃತ ಘೋಷಣೆ

    ‘ಲಿಯೋ’ ಚಿತ್ರ ವಿಜಯ್ ಹಾಗೂ ಲೋಕೇಶ್ ಕಾಂಬಿನೇಶನ್ ಎರಡನೇ ಸಿನಿಮಾ. ಮಾಸ್ಟರ್‌ನಲ್ಲಿ ಒಂದಾಗಿದ್ದ ಈ ಜೋಡಿ ಲಿಯೋಕ್ಕೆ ಮತ್ತೆ ಕೈ ಜೋಡಿಸಿದೆ. ಆದರೆ ಲಿಯೋ ಟ್ರೈಲರ್ ನೋಡಿ ಖುದ್ದು ಕೆಲವು ಫ್ಯಾನ್ಸ್ ಮುಖ ಸಪ್ಪೆ ಮಾಡಿಕೊಂಡಿದ್ದಾರೆ. ಏನೋ ಹೊಸದನ್ನು ನೋಡುತ್ತೇವೆ ಎಂದಿದ್ದವರಿಗೆ ಮತ್ತದೇ ರಿವೇಂಜ್ ಕತೆ ಬೇಸರ ಮೂಡಿಸಿದೆ. ಟ್ರೈಲರ್ ಹೀಗಿದ್ದರೆ ಇನ್ನು ಸಿನಿಮಾ ಗತಿ ಏನಾಗಬೇಡ? ಅನುಮಾನ ಆಕಾಶಕ್ಕೇರಿದೆ. ಉತ್ತರ ಹೇಳಬೇಕಾದ ಲೋಕೇಶ್ ಇನ್ ಸೈಲೆಂಟ್ ಮೋಡ್‌ನಲ್ಲಿದ್ದಾರೆ.

    ‘ವಿಕ್ರಮ್’ (Vikram) ಸಿನಿಮಾ ಆರು ನೂರು ಕೋಟಿ ಬಾಚಿತ್ತು. ಹೀಗಾಗಿ ವಿಜಯ್ ಸಿನಿಮಾಕ್ಕೂ ಅದೇ ನಿರೀಕ್ಷೆ ಹುಟ್ಟಿಕೊಂಡಿತ್ತು. ಹೊಸದನ್ನು ಹೇಳಲಿದ್ದಾರೆ ಲೋಕೇಶ್ ಎನ್ನುವ ನಿರೀಕ್ಷೆ ಇತ್ತು. ಈಗ ಅದು ಊರಾಚೆ ಬಿದ್ದಿದೆ. ಇದೇ ಅಕ್ಟೋಬರ್ 19ಕ್ಕೆ ಬಿಡುಗಡೆಯಾಗಲಿದೆ. ಭಕ್ತಗಣ ಹೈರಾಣು ಅಂಡ್ ದಿಕ್ಕಾಪಾಲು. ಬೀಸ್ಟ್ (Beast) ಮತ್ತು ವಾರಿಸು (Varisu) ಅಡ್ಡಡ್ಡ ಮಲಗಿದ್ದವು. ಈಗ ಲಿಯೋ ಕೂಡ ಹಾಗಾದರೆ ? ಉತ್ತರ ಇಲ್ಲದ ಪ್ರಶ್ನೆ ಮುಂದಿಟ್ಟುಕೊಂಡಿದೆ ದಳಪತಿ ದಳ. ಏನಾಗಲಿದೆಯೋ ಲಿಯೋ ಸಿನಿಮಾ? ಕಾಯಬೇಕಷ್ಟೇ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಯ ಪಡಬೇಡಿ: ಈ ವಾರ ಬರೋಬ್ಬರಿ 20 ಸಿನಿಮಾಗಳು ರಿಲೀಸ್

    ಭಯ ಪಡಬೇಡಿ: ಈ ವಾರ ಬರೋಬ್ಬರಿ 20 ಸಿನಿಮಾಗಳು ರಿಲೀಸ್

    ವರ್ಷ ಚಿತ್ರೋದ್ಯಮದ ಮತ್ತೊಂದು ದಾಖಲೆಯ ವಾರಕ್ಕೆ ಸಿದ್ಧವಾಗುತ್ತಿದೆ. ಕರ್ನಾಟಕದಲ್ಲಿ ಈ ವಾರ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿ ಬರೋಬ್ಬರಿ 20ಕ್ಕೂ ಹೆಚ್ಚು ಚಿತ್ರಗಳು (Movie) ಬಿಡುಗಡೆ ಆಗುತ್ತಿವೆ. ಕನ್ನಡದಲ್ಲೇ ಆರು ಚಿತ್ರಗಳು ಈ ಶುಕ್ರವಾರ ತೆರೆ ಕಾಣುತ್ತಿವೆ. ಲೂಸ್ ಮಾದ ಯೋಗಿ, ಡಾಲಿ ಧನಂಜಯ್ ಸಿನಿಮಾಗಳು ಇದರಲ್ಲಿ ಸೇರಿವೆ. ವರ್ಷಾಂತ್ಯಕ್ಕೆ ಈ ಪ್ರಮಾಣದಲ್ಲಿ ಸಿನಿಮಾಗಳು ರಿಲೀಸ್ ಆಗುತ್ತಿರುವುದು ನಿಜಕ್ಕೂ ಅಭಿಮಾನಿಗಳ ಪಾಲಿಗೆ ಸಂಭ್ರಮವೋ ಸಂಕಟವೋ ಗೊಂದಲವಾಗಿದೆ.

    ಡಾಲಿ ಧನಂಜಯ್ (Dhananjay) ನಟನೆಯ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’, ಲೂಸ್ ಮಾದ ಯೋಗೀಶ್ (Yogi) ನಟನೆಯ ‘ನಾನು ಮತ್ತು ಸರೋಜ’, ಯೋಗರಾಜ್ ಭಟ್ ಅವರ ಬ್ಯಾನರ್ ನಿಂದ ತಯಾರಾದ ‘ಪದವಿ ಪೂರ್ವ’, ಹೊಸ ತಂಡದ ‘ಮೇಡ್ ಇನ್ ಇಂಡಿಯಾ’, ‘ಜೋರ್ಡನ್’, ‘ದ್ವಿಪಾತ್ರ’ ಚಿತ್ರಗಳು ಈ ವಾರ ತೆರೆಗೆ ಬರಲು ಸಿದ್ಧವಾಗಿವೆ. ಈ ಕನ್ನಡ ಚಿತ್ರಗಳು ಈ ವಾರ ಬಿಡುಗಡೆ ಆಗುತ್ತಿರುವ ಇತರ ಭಾಷೆಯ ಚಿತ್ರಗಳ ಜೊತೆ ಪೈಪೋಟಿಗೆ ಇಳಿಯಲಿವೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಅರವಿಂದ್‌ಗಾಗಿ ಬೇಡಿಕೆಯಿಟ್ಟ ದಿವ್ಯಾ ಉರುಡುಗ

    ಸ್ಟಾರ್ ನಟ ನಟಿಯರ ಚಿತ್ರಗಳಾದ ತಮಿಳಿನ ಖ್ಯಾತ ನಟಿ ತ್ರಿಶಾ (Trisha) ನಟನೆಯ ‘ರಾಂಗಿ’, ಐಶ್ವರ್ಯ ರಾಜೇಶ್ ನಟನೆಯ ‘ದ ಗ್ರೇಟ್ ಇಂಡಿಯನ್ ಕಿಚನ್, ಬಾಲಿವುಡ್ ನ ವೇದ್, ಟಾಲಿವುಡ್ ನ ಆದಿ ಸಾಯಿಕುಮಾರ್ ನಟನೆಯ ‘ಟಾಪ್ ಗೇರ್’, ಧನಂಜಯ್ ನಟನೆಯ ತೆಲುಗು ಅವತರಣಿಕೆ ‘ಒನ್ಸ್ ಅಪಾನ್ ಎ ಟೈಮ್ ಇನ್ ದೇವರಕೊಂಡ’ ಹೀಗೆ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳು ಈ ವಾರ ಕರ್ನಾಟಕದಲ್ಲಿ ಬಿಡುಗಡೆ (Release) ಆಗುತ್ತಿವೆ.

    ಈಗಾಗಲೇ ರಿಲೀಸ್ ಆಗಿರುವ ಶಿವರಾಜ್ ಕುಮಾರ್ ನಟನೆಯ ವೇದ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುತ್ತಿವೆ. ಕಳೆದ ಕೆಲ ವಾರಗಳಿಂದ ರಿಲೀಸ್ ಆಗಿರುವ ಹಲವು ಚಿತ್ರಗಳು ಥಿಯೇಟರ್ ನಲ್ಲಿ ಇನ್ನೂ ಪ್ರದರ್ಶನ ಕಾಣುತ್ತಿವೆ. ಹಾಗಾಗಿ ಈ ಪ್ರಮಾಣದ ಸಂಖ್ಯೆಯ ಚಿತ್ರಗಳು ಥಿಯೇಟರ್ ಎಲ್ಲಿಂದ ತರೋದು ಎನ್ನುವುದು ವಿತರಕರ ತಲೆನೋವು ಆಗಿದೆ. ಸಿಕ್ಕಷ್ಟು ಚಿತ್ರಮಂದಿರಗಳಲ್ಲಿ ನಿರ್ಮಾಪಕ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಿ, ಹೊಸ ವರ್ಷವನ್ನು ಸ್ವಾಗತಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪೊನ್ನಿಯನ್ ಸೆಲ್ವನ್ ವಿವಾದ : ಮಣಿರತ್ನಂ ಮತ್ತು ವಿಕ್ರಮ್ ಗೆ ನೋಟಿಸ್

    ಪೊನ್ನಿಯನ್ ಸೆಲ್ವನ್ ವಿವಾದ : ಮಣಿರತ್ನಂ ಮತ್ತು ವಿಕ್ರಮ್ ಗೆ ನೋಟಿಸ್

    ಮಿಳಿನ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿರೀಕ್ಷಿತ ಸಿನಿಮಾ ಪೊನ್ನಿಯನ್ ಸೆಲ್ವನ್ ಇದೀಗ ವಿವಾದಕ್ಕೀಡಾಗಿದೆ. ಟೀಸರ್ ಬಗ್ಗೆ ಅಪಾರ ಮೆಚ್ಚುಗೆ ಬಂದ ಹಿನ್ನೆಲೆಯಲ್ಲಿ ಸಂಭ್ರಮಿಸಬೇಕಾಗಿದ್ದ ಚಿತ್ರತಂಡ ಇದೀಗ ಆತಂಕಕ್ಕೊಳಗಾಗಿದೆ. ಚೋಳರ ಇತಿಹಾಸವನ್ನು ಹೇಳಲು ಹೊರಟಿರುವ ನಿರ್ದೇಶಕರು, ಆ ಇತಿಹಾಸವನ್ನು ತಿರುಚಿದ್ದಾರೆ ಎಂದೆ ಸೆಲ್ವನ್ ಅನ್ನುವವರು ಕೋರ್ಟ್ ಮೆಟ್ಟಿಲು ಏರಿದ್ದಾರೆ. ಹಾಗಾಗಿ ನಿರ್ದೇಶಕ ಮಣಿರತ್ನಂ ಮತ್ತು ವಿಕ್ರಮ್ ಗೆ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

    ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಚೋಳ ಸಾಮ್ರಾಜ್ಯದ ಉಗಮ ಮತ್ತು ಅದು ಬೆಳೆದು ಬಂದ ಇತಿಹಾಸವನ್ನು ಹೇಳಲು ಹೊರಟಿದ್ದಾರೆ ಮಣಿರತ್ನಂ. ಆದರೆ, ನಿಜ ಇತಿಹಾಸವನ್ನು ಅವರು ಹೇಳುತ್ತಿಲ್ಲ ಎಂದು ಉದಾಹರಣೆ ಸಮೇತ, ಕೋರ್ಟ್ ಮೆಟ್ಟಿಲು ಏರಿದ್ದಾರೆ ಸೆಲ್ವನ್.  ಈ ಸಿನಿಮಾದಲ್ಲಿ ನಟ ವಿಕ್ರಮ್ ಅವರು, ಆದಿತ್ಯ ಕರಿಕಾಲನ್ ಪಾತ್ರದಲ್ಲಿ ನಟಿಸಿದ್ದು, ರಿಲೀಸ್ ಆದ ಪೋಸ್ಟರ್ ನಲ್ಲಿ ಅವರ ಹಣೆ ಮೇಲೆ ತಿಲಕವಿದೆ. ಟೀಸರ್ ನಲ್ಲಿ ತಿಲಕವಿಲ್ಲ ಎಂದು. ಹೀಗಾಗಿ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:ಬ್ರೇಕಪ್ ನಂತರ ಸ್ಟಾರ್ ನಟಿ ಸಹೋದರನ ಜೊತೆ ಇಲಿಯಾನಾ ಡೇಟಿಂಗ್

    ಕೋರ್ಟ್ ನೋಟಿಸ್ ಜಾರಿಯಾಗಿದ್ದರೂ, ಈ ಕುರಿತು ಮಣಿರತ್ನಂ ಆಗಲಿ, ವಿಕ್ರಮ್ ಆಗಲಿ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಅಲ್ಲದೇ, ಸಿನಿಮಾ ರಿಲೀಸ್ ಗೂ ತಮಗೆ ಆ ಸಿನಿಮಾವನ್ನು ತೋರಿಸಬೇಕು ಎಂದು ಸೆಲ್ವನ್ ದೂರಿನಲ್ಲಿ ಬರೆದ್ದಾರೆ. ಆದರೆ, ಈ ಕುರಿತು ಮಣಿರತ್ನಂ ಅವರು ಯಾವುದೇ ನಿರ್ಧಾರ ತಗೆದುಕೊಂಡಿಲ್ಲ. ಐದು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದ್ದು, ಐಶ್ವರ್ಯಾ ರೈ, ಕಾರ್ತಿ, ತ್ರಿಶಾ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ʻದಿ ರೋಡ್‌ʼ ಚಿತ್ರದ ಮೂಲಕ ಮಧುರೈನ ನೈಜ ಕಥೆಯನ್ನ ಹೇಳಲು ಹೊರಟಿದ್ದಾರೆ ತ್ರಿಶಾ

    ʻದಿ ರೋಡ್‌ʼ ಚಿತ್ರದ ಮೂಲಕ ಮಧುರೈನ ನೈಜ ಕಥೆಯನ್ನ ಹೇಳಲು ಹೊರಟಿದ್ದಾರೆ ತ್ರಿಶಾ

    ವಿಭಿನ್ನ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರೋ ಬಹುಭಾಷಾ ನಟಿ ತ್ರಿಶಾ ಕೃಷ್ಣನ್ ಆ್ಯಕ್ಷನ್ ಅವತಾರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ಬಾರಿ ನಟಿ ತ್ರಿಶಾ ಮಧುರೈನ ನೈಜ ಕಥೆಯನ್ನ ಹೇಳಲು ಹೊರಟಿದ್ದಾರೆ.

    ಸೌತ್ ಸಿನಿರಂಗದಲ್ಲಿ ವಿಶಿಷ್ಟ ವ್ಯಕ್ತಿತ್ವ ಮತ್ತು ಅಮೋಘ ನಟನೆಯ ಮೂಲಕ ಮನೆಮಾತಾಗಿರೋ ನಟಿ ತ್ರಿಶಾ `ಪೊನ್ನಿಯನ್ ಸೆಲ್ವನ್’ ಚಿತ್ರೀಕರಣ ಮುಗಿಯುತ್ತಿದ್ದಂತೆ `ದಿ ರೋಡ್’ ಎಂಬ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರದ ಮುಹೂರ್ತ ನೆರೆವೇರಿದೆ.

    ನವ ನಿರ್ದೇಶಕ ಅರುಣ್ ವಸೀಗರನ್ ಆ್ಯಕ್ಷನ್ ಕಟ್ ಹೇಳ್ತಿರುವ `ದಿ ರೋಡ್’ ಚಿತ್ರದಲ್ಲಿ ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಆ್ಯಕ್ಷನ್ ಕ್ವೀನ್ ಆಗಿ ಮಿಂಚಲಿದ್ದಾರೆ. ಮಧುರೈನ ನೈಜ ಘಟನೆಯನ್ನ ಆಧರಿಸಿ `ದಿ ರೋಡ್’ ಚಿತ್ರ ಮಾಡಲಾಗುತ್ತಿದ್ದು, 50 ದಿನಗಳ ಕಾಲ ಮಧುರೈನಲ್ಲೇ ಶೂಟಿಂಗ್ ನಡೆಯಲಿದೆ. ಇದನ್ನೂ ಓದಿ: ಪುನೀತ್ ಗಾಗಿ ಹಾಡಿದ ಅಪ್ಪು ಅಕ್ಕನ ಮಗಳು ನಟಿ ಧನ್ಯಾ ರಾಮ್ ಕುಮಾರ್

    ಕಾಲಿವುಡ್ ನಿರ್ದೇಶಕ ಅರುಣ್ ವಸೀಗರನ್ ಭಿನ್ನ ಕಥೆಯನ್ನ ತೆರೆಯ ಮೇಲೆ ತರಲು ಸಜ್ಜಾಗಿದ್ದಾರೆ. ನಾಯಕಿ ತ್ರಿಶಾಗೆ ಸಂತೋಷ ಪ್ರತಾಪ್, ಶಬೀರ್, ಮಿಯಾ ಜಾರ್ಜ್, ಸಾಥ್ ನೀಡಲಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿರೋ ತ್ರಿಶಾ ನಟನೆಯ ಮುಂಬರುವ ಚಿತ್ರಕ್ಕಾಗಿ ಕಾಯ್ತಿದ್ದಾರೆ.

  • ಸಾಮಿ ಸ್ಕ್ವೇರ್ ನಿಂದ ತ್ರಿಶಾ ಔಟ್ – ಚಿಯಾನ್ ವಿಕ್ರಂಗೆ ಸಿಕ್ಕಿದ್ದು ಐಶ್ವರ್ಯ!

    ಸಾಮಿ ಸ್ಕ್ವೇರ್ ನಿಂದ ತ್ರಿಶಾ ಔಟ್ – ಚಿಯಾನ್ ವಿಕ್ರಂಗೆ ಸಿಕ್ಕಿದ್ದು ಐಶ್ವರ್ಯ!

    ಬೆಂಗಳೂರು: ‘ಸಾಮಿ ಸ್ಕ್ವೇರ್’ ಯಾವುದೋ ಹಾಲಿವುಡ್, ಬಾಲಿವುಡ್ ಸಿನಿಮಾ ಎಂದು ಕನ್ಫ್ಯೂಸ್ ಆಗಬೇಡಿ! 2003ರಲ್ಲಿ ಸಂಚಲನ ಸೃಷ್ಟಿಸಿದ್ದ ವಿಕ್ರಮ್ ನಾಯಕನಾಗಿದ್ದ ‘ಸಾಮಿ’ ಚಿತ್ರದ ಭಾಗ 2 ಈ ಚಿತ್ರ. ಕೆಟ್ಟಾ ಕೊಳಕಾಗಿ ಬೈಯುವ ಖಡಕ್ ಪೊಲೀಸ್ ಅಧಿಕಾರಿ ಆಗಿದ್ದ ವಿಕ್ರಮ್ ‘ಸಾಮಿ ಸ್ಕ್ವೇರ್’ನಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಹಿಟ್ ಜೋಡಿ ಆಗಿ ನಾಯಕ ವಿಕ್ರಂ ಹಾಗೂ ನಿರ್ದೇಶಕ ಹರಿ ಅವರೇ ಇರಲಿದ್ದು, ‘ಆಫೀಸರ್ ಆರು ಸಾಮಿ’ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

    ಆ್ಯಕ್ಷನ್ ಚಿತ್ರದಲ್ಲಿ ವಿಕ್ರಂ ಎದುರು ರಾಷ್ಟ್ರ ಪ್ರಶಸ್ತಿ ವಿಜೇತ ನಟ ಬಾಬಿ ಸಿಂಹ ನಟಿಸಿದ್ದು, ಭಾಗ 2ರಲ್ಲಿ ಮೊದಲ ನಾಯಕ ತ್ರಿಶಾ ಔಟ್ ಆಗಿದ್ದಾರೆ. ಅವರ ಸ್ಥಾನದಲ್ಲಿ ‘ಸಾಮಿ ಸ್ಕ್ವೇರ್’ಗೆ ನಟಿ ಐಶ್ವರ್ಯ ರಾಜೇಶ್ ಆಯ್ಕೆಯಾಗಿದ್ದು, ಚಿತ್ರ ಆಗಸ್ಟ್ 31 ಅಥವಾ ಸೆಪ್ಟೆಂಬರ್ 13ಕ್ಕೆ ರಿಲೀಸ್ ಆಗಲಿದೆ ಎನ್ನಲಾಗಿದೆ.

    ಟೀಸರ್ ಬಿಡುಗಡೆಯಾದ ತಿಂಗಳಲ್ಲೇ 11 ಮಿಲಿಯನ್ ವ್ಯೂಗಳನ್ನು ಯುಟ್ಯೂಬ್‍ನಲ್ಲಿ ಪಡೆದಿರುವ ಚಿತ್ರ ಕುತೂಹಲ ಹುಟ್ಟಿಸಿರುವುದಂತೂ ಸುಳ್ಳಲ್ಲ. ತೆಲುಗಿನ ಖ್ಯಾತ ರಾಕ್ ಸ್ಟಾರ್ ಗಾಯಕ ದೇವಿಶ್ರೀ ಪ್ರಸಾದ್ (ಡಿಎಸ್‍ಪಿ) ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು ಪ್ಲಸ್ ಪಾಯಿಂಟ್ ಆಗುವುದು ಖಂಡಿತ. ಚಿತ್ರದ ಇನ್ನೋರ್ವ ನಾಯಕಿಯಾಗಿ ಕೀರ್ತಿ ಸುರೇಶ್ ಆಯ್ಕೆ ಆಗಿದ್ದು, ಐಶ್ವರ್ಯ ರಾಜೇಶ್‍ಗೆ ಸ್ಪರ್ಧೆ ಹೆಚ್ಚಿಸಿದೆ. ತನ್ನ ಪಾತ್ರದ ಬಗ್ಗೆ ಥ್ರಿಲ್ ಆಗಿರುವ ಐಶ್ವರ್ಯ ತಾನು ಪ್ರಸ್ತುತ ಪ್ರಯೋಗಾತ್ಮಕ ಪಾತ್ರಗಳಿಗೆ ಒಡ್ಡಿಕೊಂಡಿದ್ದೇನೆಂದು ಹೇಳಿಕೊಂಡಿದ್ದಾರೆ. ತೆರೆಗೆ ಬರಲಿರುವ ‘ಕಾನಾ’ ಚಿತ್ರದಲ್ಲಿ ತಾಪ್ಸಿ ಪನ್ನು ಜೊತೆ ತೆರೆ ಹಂಚಿಕೊಂಡಿರುವ ಐಶ್ವರ್ಯ ಮಹಿಳಾ ಕ್ರಿಕೆಟರ್ ಆಗಿ ನಟಿಸಿದ್ದಾರೆ. ‘ಚೆಕ್ಕಾ ಚಿವಂತವನಂ’ನಲ್ಲಿ ಕ್ಲಾಸ್ ಪಾತ್ರ ಮಾಡಿರುವ ಐಶ್ವರ್ಯ ‘ಧ್ರುವ ನಕ್ಷತ್ರಂ’ನಲ್ಲಿ ಜರ್ನಲಿಸ್ಟ್ ಆಗಿದ್ದಾರೆ.

    ‘ಸಾಮಿ’ ಮಾಡಿದ್ದ ಗಲ್ಲಾ ಪೆಟ್ಟಿಗೆ ರೆಕಾರ್ಡ್‍ಗಳನ್ನು ‘ಸಾಮಿ ಸ್ಕ್ವೇರ್’ ಚಿಂದಿ ಉಡಾಯಿಸಿ ಹೊಸ ದಾಖಲೆಗಳನ್ನು ಬರೆಯಲಿದೆ ಎಂಬುದು ತಮಿಳು ಚಿತ್ರ ಪಂಡಿತರ ಹಾಗೂ ಸಿನಿ ರಸಿಕರ ಅಂಬೋಣ!