Tag: ತೃತೀಯ ಲಿಂಗಿಗಳು

  • ತೃತೀಯ ಲಿಂಗಿಗಳಿಗೆ ಸಂಜೆ ಕಾಲೇಜು ಆರಂಭಿಸಿ: ಡಿಸಿಪಿ ಅರುಣಾಂಗ್ಸು ಗಿರಿ

    ತೃತೀಯ ಲಿಂಗಿಗಳಿಗೆ ಸಂಜೆ ಕಾಲೇಜು ಆರಂಭಿಸಿ: ಡಿಸಿಪಿ ಅರುಣಾಂಗ್ಸು ಗಿರಿ

    ಮಂಗಳೂರು: ತೃತೀಯ ಲಿಂಗಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು. ಅವರಿಗಾಗಿ ಸಂಜೆ ಕಾಲೇಜು ಪ್ರಾರಂಭಿಸಿ, ಉದ್ಯೋಗ-ಆಧಾರಿತ ತರಗತಿ ಶುರು ಮಾಡಿದಲ್ಲಿ ಸ್ವಂತ ಉದ್ಯಮ ಪ್ರಾರಂಭಿಸಲು ಅನುಕೂಲವಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅರುಣಾಂಗ್ಸು ಗಿರಿ ಅಭಿಪ್ರಾಯಪಟ್ಟರು.

    ಕರಾವಳಿ ಲೇಖಕಿಯರ-ವಾಚಕಿಯರ ಸಂಘ, ಪರಿವರ್ತನಾ ಚಾರೀಟೇಬಲ್ ಟ್ರಸ್ಟ್ ಮಂಗಳೂರು ಹಾಗೂ ಆಂತರಿಕ ಗುಣಮಟ್ಟ ಖಾತ್ರಿ ಕೋಶ ಮತ್ತು ಕನ್ನಡ ವಿಭಾಗ ಕೆನರಾ ಕಾಲೇಜು ಮಂಗಳೂರು ಇವರ ಸಹಯೋಗದಲ್ಲಿ ನಡೆದ ತೃತೀಯ ಲಿಂಗಿಗಳ ಬದುಕು, ಬವಣೆ ಕುರಿತ ವಿಶ್ವವಿದ್ಯಾನಿಲಯ ಮಟ್ಟದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಕೆಲವು ಮಕ್ಕಳು ಪರ್ಯಾಯ ಲಿಂಗವೆಂದು ಗುರುತಿಸಲು ಬಯಸುತ್ತಾರೆ ಎಂದು ಹೇಳುತ್ತಾರೆ. ಅರ್ಜಿ ನಮೂನೆಗಳಲ್ಲಿ ಪರ್ಯಾಯ ಲಿಂಗ ಆಯ್ಕೆಯನ್ನು ಸೇರಿಸಬೇಕು ಇದು ಅಂತಹ ಮಕ್ಕಳಿಗೆ ಸಹಾಯ ಮಾಡುತ್ತದೆ ಎಂದರು.

    ಪರಿವರ್ತನ ಚಾರಿಟೇಬಲ್ ಟ್ರಸ್ಟ್ ಸ್ಥಾಪಕಿ ಮತ್ತು ವ್ಯವಸ್ಥಾಪಕ ಟ್ರಸ್ಟಿ ವೈಲೆಟ್ ಪಿರೇರಾ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಜನಿಸಿದ ತೃತೀಯ ಲಿಂಗಿಗಳಿಂದ ಯಾವುದೇ ಸಮಸ್ಯೆಗಳಿಲ್ಲ ಆದರೆ ಇತರ ಸ್ಥಳಗಳಿಂದ ಮಂಗಳೂರಿಗೆ ಬಂದ ತೃತೀಯ ಲಿಂಗಿಗಳಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ತೃತಿಯ ಲಿಂಗಿಗಳು ಮಂಗಳೂರಿನಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬದಲಾವಣೆಯ ಅವಶ್ಯಕತೆಯಿದೆ ಇದರಿಂದ ತೃತಿಯ ಲಿಂಗಿಗಳು ಸಹ ಸಾಮಾನ್ಯ ಜೀವನವನ್ನು ನಡೆಸಬಹುದು. ಪರಿವರ್ತನ ಚಾರಿಟೇಬಲ್ ಟ್ರಸ್ಟ್ ತೃತೀಯ ಲಿಂಗಿಗಳ ಬೆಂಬಲಕ್ಕಿದ್ದು, ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದರು.

    ಪರಿವರ್ತನಾ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ರಮ್ಯಾ ಗೌಡ ಮಾತನಾಡಿ, ನಾವು ತೃತೀಯ ಲಿಂಗಿಗಳು ಹುಡುಗರಾಗಿ ಜನಿಸುತ್ತೇವೆ ಮತ್ತು ಕ್ರಮೇಣ ಹುಡುಗಿಯರಾಗುತ್ತೇವೆ. ನಾವು ಮೊದಲು ನಮ್ಮ ಮನೆಗಳಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತೇವೆ. ಜನಿಸಿದಾಗ ಹೆತ್ತವರು ಸಂತೋಷ ಪಡುತ್ತಾರೆ. ಆದರೆ ಬೆಳೆದಂತೆ ನಮ್ಮ ಹೆತ್ತವರು ಮತ್ತು ಸಮಾಜದಿಂದ ಪ್ರತ್ಯೇಕಿಸಲ್ಪಟ್ಟಿದ್ದೇವೆ. ಜೀವನೋಪಾಯಕ್ಕಾಗಿ ಭಿಕ್ಷೆ ಬೇಡಲು ಮತ್ತು ಲೈಂಗಿಕ ಕೆಲಸದಲ್ಲಿ ತೊಡಗಿಕೊಂಡಿದ್ದೇವೆ. ನಾವೂ ಮೀಸಲಾತಿಗೆ ಒಳಪಟ್ಟಿದ್ದೇವೆ, ಉದ್ಯೋಗವನ್ನು ಪಡೆಯಬಹುದು ಮತ್ತು ಜೀವನೋಪಾಯವನ್ನುಗಳಿಸಬಹುದು ಎಂದರು.

  • ತೃತೀಯ ಲಿಂಗಿಗಳಿಗೆ ತೆರಿಗೆ ಸಂಗ್ರಹ ಕೆಲಸ ನೀಡಿದ ನಗರಸಭೆ

    ತೃತೀಯ ಲಿಂಗಿಗಳಿಗೆ ತೆರಿಗೆ ಸಂಗ್ರಹ ಕೆಲಸ ನೀಡಿದ ನಗರಸಭೆ

    – ತೆರಿಗೆ ಜೊತೆ ವ್ಯಾಪಾರ ಪರವಾನಗಿ ಶುಲ್ಕ ವಸೂಲಿಗೆ ನೇಮಕ
    – ಡ್ರಗ್ಸ್ ದಂಧೆ, ವೇಶ್ಯಾವಾಟಿಕೆ ವಿವಿಧ ಅಕ್ರಮ ಚಟುವಟಿಕೆ ತಡೆಯಲು ಕ್ರಮ
    – ಸಮವಸ್ತ್ರ, ಐಡಿ ಕಾರ್ಡ್, ವಾಹನ, ಇಂಧನ ಸೌಲಭ್ಯ

    ಭುವನೇಶ್ವರ: ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ತೃತೀಯ ಲಿಂಗಿಗಳಿಗೆ ಕೆಲಸ ನೀಡುವ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದು, ನಗರಸಭೆ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ನೇಮಿಸಿಕೊಂಡು ತೆರಿಗೆ ಸಂಗ್ರಹ ಹಾಗೂ ವ್ಯಾಪಾರ ಪರವಾನಗಿ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ.

    ಒಡಿಶಾದ ಭುವನೇಶ್ವರ ನಗರಸಭೆ(ಬಿಎಂಸಿ) ಇಂತಹದ್ದೊಂದು ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದು, ತೃತೀಯ ಲಿಂಗಿಗಳಿಗೂ ಉದ್ಯೋಗಾವಕಾಶ ನೀಡಬೇಕು. ಈ ನಿಟ್ಟಿನಲ್ಲಿ ಅವರನ್ನು ಸ್ವಾವಲಂಬಿಗಳನ್ನಾಗಿ ಹಾಗೂ ಸ್ವಾಭಿಮಾನದಿಂದ ಬದುಕವಂತೆ ಮಾಡಬೇಕೆಂಬ ಉದ್ದೇಶದಿಂದ ನಗರಸಭೆ ಈ ಕಾರ್ಯಕ್ಕೆ ಮುಂದಾಗಿದೆ. ಈ ಕುರಿತು ಬಿಎಂಸಿ ಹಾಗೂ ಟಿಜಿ ಸ್ವೀಕೃತಿ ಸ್ವ-ಸಹಾಯ ಸಂಘ(ಎಸ್‍ಎಚ್‍ಜಿ)ದ ಮಧ್ಯೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮೂಲಕ ತೃತೀಯ ಲಿಂಗಿಗಳನ್ನು ಆಯ್ಕೆ ಮಾಡಿ ಅವರಗೆ ಹಿಡುವಳಿ ತೆರಿಗೆ ಹಾಗೂ ವ್ಯಾಪಾರ ಪರವಾನಗಿಯ ಶುಲ್ಕವನ್ನು ವಸೂಲಿ ಮಾಡಲು ಬಳಸಿಕೊಳ್ಳಲಾಗುತ್ತಿದೆ.

    ಒಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಸ್ಥಳೀಯ ತೃತೀಯ ಲಿಂಗಿ ಸಮುದಾಯದವರಿಗೆ ನಗರಸಭೆಯ ಹಿಡುವಳಿ ತೆರಿಗೆ ಹಾಗೂ ವ್ಯಾಪಾರ ಪರವಾನಗಿ ಶುಲ್ಕವನ್ನು ವಸೂಲಿ ಮಾಡುವ ಜವಾಬ್ದಾರಿಯನ್ನು ವಹಿಸಿದೆ. ಎಸ್‍ಎಚ್‍ಜಿ ತಾವು ಸಂಗ್ರಹಿಸಿದ ಹಣ ಹಾಗೂ ತೆರಿಗೆ ಕುರಿತು ಬಿಎಂಸಿಗೆ ಪ್ರತಿ ತಿಂಗಳು 5ರಂದು ವರದಿ ಸಲ್ಲಿಸುತ್ತದೆ. ಒಪ್ಪಂದ ಪೂರ್ಣಗೊಂಡ ನಂತರ ಎರಡೂ ಸಂಸ್ಥೆಗಳ ಒಪ್ಪಿಗೆ ಮೇರೆಗೆ ಮತ್ತೆ ನವೀಕರಿಸಲಾಗುತ್ತದೆ.

    ಈ ಕುರಿತು ನಗರಸಭೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ತೆರಿಗೆ ಸಂಗ್ರಹಿಸಿದ ಆಧಾರದ ಮೇಲೆ ತೃತೀಯ ಲಿಂಗಿಗಳಿಗೆ ಸಂಭಾವನೆ ನೀಡಲಾಗುತ್ತದೆ. ಅಲ್ಲದೆ ನಿಗದಿಪಡಿಸಿದ ಸ್ಥಳಕ್ಕೆ ತೆರಳಿ ಹಣ ಸಂಗ್ರಹಿಸಲು ತೃತೀಯ ಲಿಂಗಿಗಳಿಗೆ ವಾಹನ, ಇಂಧನ, ಸಮವಸ್ತ್ರ ಹಾಗೂ ಗುರುತಿನ ಚೀಟಿ ನೀಡಲಾಗಿರುತ್ತದೆ. ಮಾಸಿಕ ಸಂಗ್ರಹ 40 ಲಕ್ಷ ರೂ.ಗಿಂತ ಕಡಿಮೆ ಇದ್ದರೆ ಶೇ.1ರಷ್ಟು, 40 ಲಕ್ಷದಿಂದ 60 ಲಕ್ಷ ರೂ. ವರೆಗೆ ಇದ್ದರೆ ಶೇ.1.5ರಷ್ಟು ಹಣವನ್ನು ಎಸ್‍ಎಚ್‍ಜಿ ಸಂಸ್ಥೆಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ನಿರುದ್ಯೋಗದಿಂದಾಗಿ ತೃತೀಯ ಲಿಂಗಿಗಳು ಡ್ರಗ್ಸ್ ದಂಧೆ, ವೇಶ್ಯಾವಾಟಿಕೆ ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದು, ಇದರಿಂದ ಅವರನ್ನು ರಕ್ಷಿಸಿ, ಉದ್ಯೋಗ ನೀಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ವರ್ಷದ ಆರಂಭದಲ್ಲಿ ತೃತೀಯ ಲಿಂಗಿ ವ್ಯಕ್ತಿಗಳ(ಹಕ್ಕುಗಳ ರಕ್ಷಣೆ) ಮಸೂದೆ ವಿರುದ್ಧ ತೃತೀಯ ಲಿಂಗಿ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸಿದ್ದರು. ನಂತರದ ಚರ್ಚೆಯಲ್ಲಿ ತೃತೀಯ ಲಿಂಗಿ ಸಮುದಾಯದ ಪ್ರತಿನಿಧಿಗಳು ಉದ್ಯೋಗದ ಕೊರತೆ ಹಾಗೂ ಶಿಕ್ಷಣದದ ಅವಕಾಶಗಳ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದರು.

  • ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರೇ ಇಲ್ಲ – ಮಹಿಳಾ ವೈದ್ಯರು ಬರಲು ಹಿಂದೇಟು

    ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರೇ ಇಲ್ಲ – ಮಹಿಳಾ ವೈದ್ಯರು ಬರಲು ಹಿಂದೇಟು

    ಬೆಂಗಳೂರು: ದಿನಕ್ಕೆ ಲಕ್ಷಾಂತರ ಜನರು ಪ್ರಯಾಣ ಮಾಡುವ ಮೆಜೆಸ್ಟಿಕ್‍ನಲ್ಲಿರುವ ಇಂದಿರಾ ಕ್ಲಿನಿಕ್‍ಗೆ ಕಳೆದ ಒಂದು ತಿಂಗಳಿನಿಂದ ಡಾಕ್ಟರ್ ಬಂದಿಲ್ಲ. ಹೆಚ್ಚಾಗಿ ತೃತೀಯ ಲಿಂಗಿಗಳೇ ಕ್ಲಿನಿಕ್‍ಗೆ ಬರುತ್ತಾರೆ ಎಂದು ವೈದ್ಯರು ನೇಮಕವಾಗಲು ಹಿಂದೇಟು ಹಾಕುತ್ತಿದ್ದಾರೆ.

    ಬೆಂಗಳೂರು ನಗರದಲ್ಲಿ ಇಂದಿರಾ ಕ್ಯಾಂಟಿನ್ ಯಶಸ್ವಿಯಾದ ಬೆನ್ನಲ್ಲೆ ಕಳೆದ ಬಾರಿ ಇದ್ದ ಸರ್ಕಾರ ಬಿಎಂಟಿಸಿ ಸಿಬ್ಬಂದಿ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಇಲಾಖೆ ಮೆಜೆಸ್ಟಿಕ್ ಮತ್ತು ಯಶವಂತಪುರ ಟಿಟಿಎಂಸಿಯಲ್ಲಿ ಇಂದಿರಾ ಕ್ಲಿನಿಕ್ ಆರಂಭ ಮಾಡಿತ್ತು. ಕೆಲವು ದಿನಗಳು ಚೆನ್ನಾಗಿ ನಡೆಯುತ್ತಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರೇ ಇಲ್ಲ. ಇದ್ದ ವೈದ್ಯರು ಕ್ಲಿನಿಕ್ ಬಿಟ್ಟು ಒಂದು ತಿಂಗಳಾದರೂ ಇನ್ನೂ ಬೇರೆ ಡಾಕ್ಟರ್ ನೇಮಕ ಮಾಡಿಲ್ಲ.

    ಬೇರೆ ಡಾಕ್ಟರ್ ನಾ ನೇಮಕ ಮಾಡೋಣ ಅಂದರೆ ಯಾವ ಡಾಕ್ಟರ್ ಕೂಡ ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ಗೆ ಬರಲು ಮುಂದಾಗುತ್ತಿಲ್ಲ. ಮಹಿಳಾ ವೈದ್ಯರು, ನಾವು ಹೋಗಲ್ಲ, ಜಾಗ ಸರಿ ಇಲ್ಲ ಮತ್ತು ತೃತೀಯ ಲಿಂಗಿಗಳು ಜಾಸ್ತಿ ಬರುತ್ತಾರೆ ಆಗಾಗಿ ನಾವು ಹೋಗಲ್ಲ ಎಂದು ಹೇಳುತ್ತಿದ್ದಾರೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.

    ನಮ್ಮ ಪಬ್ಲಿಕ್ ಟಿವಿ, ವೈದ್ಯಾಧಿಕಾರಿಗಳ ಜೊತೆ ನಡೆಸಿದ ಮಾತುಕತೆ
    ಪ್ರತಿನಿಧಿ : ಯಾಕ್ ಸರ್ ಮೆಜೆಸ್ಟಿಕ್‍ನಲ್ಲಿ ಡಾಕ್ಟರ್ ಇಲ್ಲ. ಮೆಜೆಸ್ಟಿಕ್ ಅಂದರೆ ಯಾರು ಬರಲ್ಲ ಅಂತಾ ಇದಾರಂತೆ ಯಾಕೆ?
    ವೈದ್ಯಾಧಿಕಾರಿ : ಇಲ್ಲ ಸರ್ ಮೆಜೆಸ್ಟಿಕ್ ಅಂದರೆ ಲೇಡಿಸ್ ಹಾಕೋಕೆ ಆಗಲ್ಲ. ಅಲ್ಲಿ ವರ್ಕರ್ಸ್ ಜಾಸ್ತಿ
    ಪ್ರತಿನಿಧಿ : ಹುಂ ಹುಂ .
    ವೈದ್ಯಾಧಿಕಾರಿ : ಅಲ್ಲಿ ತೃತೀಯ ಲಿಂಗಿಗಳು ಜಾಸ್ತಿ ಸರ್ ಆಗಾಗಿ ಬರುತ್ತಿಲ್ಲ.
    ಪ್ರತಿನಿಧಿ : ಹೌದಾ…
    ವೈದ್ಯಾಧಿಕಾರಿ : ಅಲ್ಲಿ ತೃತೀಯ ಲಿಂಗಿಗಳು ಜಾಸ್ತಿ ಇದಾರೆ ಸರ್
    ಪ್ರತಿನಿಧಿ : ಆದರೆ ಏನು..
    ವೈದ್ಯಾಧಿಕಾರಿ : ಅಲ್ಲಿ ತೃತೀಯ ಲಿಂಗಿಗಳು ಹೆಚ್ಚಾಗಿ ಬರುವುದು ಸರ್.. ಅವರಿಗೆ ಲೇಡಿಸ್ ಟ್ರೀಟ್ ಮೆಂಟ್ ಕೊಡೋಕೆ ಆಗಲ್ಲ ಸರ್
    ಪ್ರತಿನಿಧಿ : ಲೇಡಿ ಡಾಕ್ಟರ್ ಅಪಾಯಿಂಟ್ ಆಗಿದ್ರಾ
    ವೈದ್ಯಾಧಿಕಾರಿ : ಹೌದು.. ಲೇಡಿ ಡಾಕ್ಟರ್ ಅಪಾಯಿಂಟ್ ಆಗಿದ್ರು, ಬರಲ್ಲ ಅಂತಾ ಅಂದ್ರು
    ಪ್ರತಿನಿಧಿ : ಮತ್ತೆ ಹೇಗೆ ಈಗ
    ವೈದ್ಯಾಧಿಕಾರಿ : ಈಗ ಜೆಂಟ್ಸ್ ಡಾಕ್ಟರ್ ಬರುತ್ತಾರೆ, ಸೋಮವಾರ

    ಮೆಜೆಸ್ಟಿಕ್ ಇಂದಿರಾ ಕ್ಲಿನಿಕ್‍ನಲ್ಲಿ ಡಾಕ್ಟರ್ ಇಲ್ಲದೇ ನರ್ಸ್‌ಗಳು ಟ್ರೀಟ್ ಮೆಂಟ್ ಕೊಡುತ್ತಿದ್ದಾರೆ. ವೈದ್ಯರಿಲ್ಲದೇ ನರ್ಸ್‌ಗಳ ಬಳಿ ಟ್ರೀಟ್ ಮೆಂಟ್ ತೆಗೆದುಕೊಳ್ಳುವುದಕ್ಕೆ ರೋಗಿಗಳು ಸಹ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಯಾಕೆ ಒಂದು ತಿಂಗಳಿನಿಂದ ಡಾಕ್ಟರ್ ಇಲ್ಲ ಎಂದು ನರ್ಸ್ ಕೇಳಿದರೆ ಏನು ಉತ್ತರ ಕೊಟ್ಟಿದ್ದಾರೆ ಎಂದು ರಹಸ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ…

    ಪ್ರತಿನಿಧಿ : ಮೆಜೆಸ್ಟಿಕ್ ಆದರೆ ಏನಂತೆ ಮೇಡಂ ಬರೋದಕ್ಕೆ
    ಇಂದಿರಾ ಕ್ಲಿನಿಕ್ ನರ್ಸ್ : ಮೆಜೆಸ್ಟಿಕ್ ಏರಿಯಾ ಸರಿ ಇಲ್ಲ ಅಂತಾ ಸರ್
    ಪ್ರತಿನಿಧಿ : ಇವರು ಯಾಕ್ ಬಿಟ್ಟಿದ್ದು
    ಇಂದಿರಾ ಕ್ಲಿನಿಕ್ ನರ್ಸ್ : ಎಂಡಿ ಮಾಡೋದಕ್ಕೆ ಹೋಗಿದ್ದಾರೆ
    ಪ್ರತಿನಿಧಿ : ಏನು ಹೇಳ್ತಾರೆ ಮೇಲಿನವರು ಯಾವಾಗ ಬರುತ್ತಾರಂತೆ
    ಇಂದಿರಾ ಕ್ಲಿನಿಕ್ ನರ್ಸ್ : ಗೊತ್ತಿಲ್ಲ ಸರ್ ಮೆಜೆಸ್ಟಿಕ್ ಸರಿ ಇಲ್ಲ ಯಾರು ಬರುತ್ತಿಲ್ಲ ಅಂತಾ ಹೇಳುತ್ತಿದ್ದಾರೆ ಸರ್
    ಪ್ರತಿನಿಧಿ : ಎರಡು ತಿಂಗಳಿನಿಂದ ಡಾಕ್ಟರ್ ಇಲ್ಲ
    ಇಂದಿರಾ ಕ್ಲಿನಿಕ್ ನರ್ಸ್ : ಒಂದು ತಿಂಗಳಿನಿಂದ ಇಲ್ಲ ಸರ್
    ಪ್ರತಿನಿಧಿ : ಯಾವಾಗ ಬರಬಹುದು ?
    ನರ್ಸ್ : ಬರುತ್ತಾರೆ ಸರ್ ಇನ್ನೊಂದು ವಾರದಲ್ಲಿ ಬರ್ತಾರೆ ಅಂತಾ ಆಫೀಸರ್ಸ್ ಹೇಳುತ್ತಿದ್ದಾರೆ ಸರ್.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ 15 ತೃತೀಯಲಿಂಗಿ ದಂಪತಿ!

    ದಾಂಪತ್ಯ ಜೀವನಕ್ಕೆ ಕಾಲಿಟ್ಟ 15 ತೃತೀಯಲಿಂಗಿ ದಂಪತಿ!

    ರಾಯ್‍ಪುರ: ತೃತೀಯ ಲಿಂಗಿ ಸಮುದಾಯದವರು ಏರ್ಪಡಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಸುಮಾರು 15 ಜೋಡಿಗಳು ವಿವಾಹವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿವೆ.

    ಶನಿವಾರದಂದು ಛತ್ತಿಸ್‍ಗಢದಲ್ಲಿ ನಡೆದ ತೃತೀಯ ಲಿಂಗಿಗಳ ಸಾಮೂಹಿಕ ವಿವಾಹವು ಹಿಂದೂ ಸಂಪ್ರದಾಯದಂತೆ ನೆರವೇರಿತು. ಈ ಕಾರ್ಯಕ್ರಮದಲ್ಲಿ ಸುಮಾರು 15 ಜೋಡಿ ತೃತಿಯ ಲಿಂಗಿಗಳು ಮದುವೆಯಾಗಿ ಸಪ್ತಪದಿ ತುಳಿದಿದ್ದಾರೆ. ಅಲ್ಲದೆ ಶುಕ್ರವಾರದಂದು ಈ ಜೋಡಿಗಳಿಗೆ ಮೆಹಂದಿ, ಸಂಗೀತ ಹಾಗೂ ಅರಿಶಿನ ಶಾಸ್ತ್ರವನ್ನು ಕೂಡ ಸಮುದಾಯದವರೇ ಮುಂದೆ ನಿಂತು ನಡೆಸಿಕೊಟ್ಟಿದ್ದಾರೆ. ಈ ಅಪರೂಪದ ಮದುವೆಗೆ ಈ ಸಮುದಾಯದ ಮುಖಂಡರು ಸಾಕ್ಷಿಯಾಗಿ, ನವಜೋಡಿಗಳಿಗೆ ಆಶೀರ್ವಾದ ನೀಡಿದ್ದಾರೆ.

    ತೃತೀಯ ಲಿಂಗಿ ಹಾಗೂ ಛತ್ತಿಸ್‍ಗಢದ ರಾಯ್‍ಗಢ ಪ್ರದೇಶದ ಮೇಯರ್ ಆಗಿರುವ ಮಧು ಕಿನ್ನರ್ ಈ ಬಗ್ಗೆ ಪ್ರತಿಕ್ರಿಯಿಸಿ, ಈ ಸಮಾರಂಭದಲ್ಲಿ ಭಾಗಿಯಾಗಿದ್ದು ಬಹಳ ಖುಷಿಯಾಗಿದೆ. ನಮ್ಮಂತ ತೃತೀಯ ಲಿಂಗಿಗಳ ಸಂತೋಷ, ದು:ಖ ಕೇಳುವವರು ಇರಲಿಲ್ಲ. ಆದರೆ ಸರ್ಕಾರ ನಮ್ಮ ಬಗ್ಗೆ ಯೋಚಿಸಿ ಸಲಿಂಗ ಕಾಮ ಅಪರಾಧವಲ್ಲ ಎಂದಿದೆ. ಇದರಿಂದ ನಾವು ಕೂಡ ಮದುವೆ ಆಗಬಹುದು, ಸಂಗಾತಿ ಜೊತೆ ಚೆನ್ನಾಗಿ ಬಾಳಲು ಅನುವು ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಈ ತೃತೀಯ ಲಿಂಗಿಗಳ ವಿವಾಹ ಟ್ರೆಂಡ್ ಆಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  • ತೃತೀಯ ಲಿಂಗಿಗಳಿಂದ ಯುವಕನ ಮೇಲೆ ಲೈಂಗಿಕ ದೌರ್ಜನ್ಯ!

    ತೃತೀಯ ಲಿಂಗಿಗಳಿಂದ ಯುವಕನ ಮೇಲೆ ಲೈಂಗಿಕ ದೌರ್ಜನ್ಯ!

    ಬೆಂಗಳೂರು: ಯುವಕನೊಬ್ಬನ ಮೇಲೆ ತೃತೀಯ ಲಿಂಗಿಗಳು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿರುವ ಘಟನೆ ನಗರದ ಹೆಬ್ಬಾಳದಲ್ಲಿ ನಡೆದಿದೆ.

    ಹೆಬ್ಬಾಳದ ಫ್ಲೈಓವರ್ ಬಳಿ ದೊಡ್ಡಬಳ್ಳಾಪುರ ಮೂಲದ ಕಿಶೋರ್ (ಹೆಸರು ಬದಲಾಯಿಸಿದೆ) ಅನ್ನೋ ಯುವಕ ರಾತ್ರಿ 11 ಗಂಟೆ ವೇಳೆಯಲ್ಲಿ ಬಸ್‍ಗಾಗಿ ಕಾಯುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ಮೂವರು ತೃತೀಯ ಲಿಂಗಿಗಳು ಕಿಶೋರ್ ಬಳಿ ಅಸಭ್ಯವಾಗಿ ವರ್ತಿಸಿದ್ದಾರೆ. ಮೊಬೈಲ್ ಕಸಿದು ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾರೆ.

    ಗಾಬರಿಗೊಂಡ ಕಿಶೋರ್ ತೃತೀಯ ಲಿಂಗಿಗಳಿಂದ ತಪ್ಪಿಸಿಕೊಂಡು ಬಂದು ಹೆಬ್ಬಾಳ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.