Tag: ತುಕಾಲಿ ಸಂತೂ

  • Bigg Boss: ದೊಡ್ಮನೆಯಿಂದ ತುಕಾಲಿ ಸಂತು ಎಲಿಮಿನೇಟ್

    Bigg Boss: ದೊಡ್ಮನೆಯಿಂದ ತುಕಾಲಿ ಸಂತು ಎಲಿಮಿನೇಟ್

    ಬಿಗ್ ಬಾಸ್ ಮನೆಯ (Bigg Boss Kannada 10) ಫಿನಾಲೆ ವಾರದಲ್ಲಿ ತುಕಾಲಿ ಸಂತು (Tukali Santhosh) ಔಟ್ ಆಗಿದ್ದಾರೆ. ಫಿನಾಲೆಯ ಅಂತಿಮ ಹಂತದಲ್ಲಿರುವ ದೊಡ್ಮನೆಯ ಆಟದಿಂದ ತುಕಾಲಿ ಸಂತು ಎಲಿಮಿನೇಟ್ (Elimination) ಆಗಿದ್ದಾರೆ.

    ಹಾಸ್ಯ ನಟ ತುಕಾಲಿ ಸಂತು ದೊಡ್ಮನೆಗೆ ಕಾಲಿಡುವ ಮೂಲಕ ಸ್ಪರ್ಧಿಗಳನ್ನು, ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ಸಂತು ಇದ್ದಾರೆ ಅಂದರೆ ಅಲ್ಲಿ ನಗುವಿಗೆ ಕೊರತೆ ಇಲ್ಲ ಎಂದರ್ಥ. ಅಷ್ಟರ ಮಟ್ಟಿಗೆ ತುಕಾಲಿ ಸಂತು ಮೋಡಿ ಮಾಡಿದ್ದಾರೆ. ಹೀಗಿರುವಾಗ ಫಿನಾಲೆಯ ದಿನ ತುಕಾಲಿ ಸಂತು ಆಟಕ್ಕೆ ‘ಬಿಗ್ ಬಾಸ್’ ಬ್ರೇಕ್ ಹಾಕಿದ್ದಾರೆ. ಇದನ್ನೂ ಓದಿ:ಕಾರ್ತಿಕ್ ವಿನ್ನರ್ ಎನ್ನುವ ಸುಳಿವು ಬಿಟ್ಟು ಕೊಟ್ರಾ ಸುದೀಪ್?

    ಹಳೆಯ ಸೀಸನ್‌ಗಳ ರೆಕಾರ್ಡ್ ಬ್ರೇಕ್ ಮಾಡಿದ ಸೀಸನ್ ಅಂದರೆ ಅದು ಬಿಗ್ ಬಾಸ್ ಸೀಸನ್ 10 ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಷನ್ ಮೂಡಿಸಿದ ಸೀಸನ್ ಎಂದರೆ ತಪ್ಪಾಗಲಾರದು. ಕಳೆದ ವಾರದ ನಮ್ರತಾ ಎಲಿಮಿನೇಷನ್ ನಂತರ ತುಕಾಲಿ ಸಂತು ಆಟಕ್ಕೆ ಬಿಗ್ ಬಾಸ್ ಅಂತ್ಯ ಹಾಡಿದ್ದಾರೆ.

    ತುಕಾಲಿ ಅವರ ಕಾಮಿಡಿಗೆ ಮತ್ತು ಪಂತು ವರ್ತೂರು ಜೊತೆಗಿನ ಬಾಂಧವ್ಯಕ್ಕೆ ಅಭಿಮಾನಿಗಳು ಹಾಡಿಹೊಗಳಿದ್ದರು.

  • ಡೇಂಜರ್ ಝೋನ್‌ನಲ್ಲಿ ವಿನಯ್‌, ತುಕಾಲಿ ಸಂತು, ವರ್ತೂರು ಸಂತೋಷ್

    ಡೇಂಜರ್ ಝೋನ್‌ನಲ್ಲಿ ವಿನಯ್‌, ತುಕಾಲಿ ಸಂತು, ವರ್ತೂರು ಸಂತೋಷ್

    ಬಿಗ್ ಬಾಸ್ ಮನೆಯ (Bigg Boss Kannada 10) ಆಟಕ್ಕೆ ತೆರೆ ಬೀಳಲು ಕ್ಷಣಗಣನೆ ಶುರುವಾಗಿದೆ. ಈ ಬಾರಿ ಫಿನಾಲೆಗೆ 6 ಮಂದಿ ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಇದೀಗ ಬಾಟಮ್ 3ರಲ್ಲಿ ವಿನಯ್‌, ವರ್ತೂರು ಸಂತೋಷ್, ತುಕಾಲಿ ಸಂತು ಇದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಪ್ರತಿ ಬಾರಿ ಫಿನಾಲೆ ಸಮಯದಲ್ಲಿ 5 ಜನ ಸ್ಪರ್ಧಿಗಳು ಇರುತ್ತಿದ್ದರು. ಆದರೆ ಈ ಬಾರಿ 6 ಜನ ಸ್ಪರ್ಧಿಗಳು ಫಿನಾಲೆಗೆ ಟಿಕೆಟ್ ಪಡೆದಿದ್ದಾರೆ. 6 ಜನರ ಶ್ರಮ, ಪೈಪೋಟಿ ಗಮನಿಸಿ ಸುದೀಪ್ (Sudeep) ಸ್ಪರ್ಧಿಗಳಿಗೆ ಸೂಪರ್ ಗಿಫ್ಟ್ ನೀಡಿದ್ದಾರೆ. ವರ್ತೂರು ಸಂತೋಷ್, ತುಕಾಲಿ ಸಂತು, ವಿನಯ್, ಕಾರ್ತಿಕ್, ಪ್ರತಾಪ್, ಸಂಗೀತಾ ಫಿನಾಲೆ ಕಣದಲ್ಲಿದ್ದಾರೆ. ‘ಬಿಗ್ ಬಾಸ್’ ಶೋ ಕುರಿತು ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ.

    ಇಂದು (ಜ.27) ಫಿನಾಲೆಯ ಮೊದಲ ದಿನವಾಗಿದ್ದು, 6 ಜನರಲ್ಲಿ ಇಬ್ಬರನ್ನು ಎಲಿಮಿನೇಟ್ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲಿ ವರ್ತೂರು ಸಂತೋಷ್, ತುಕಾಲಿ (Tukali Santhu), ವಿನಯ್ ಡೇಂಜರ್ ಝೋನ್‌ನಲ್ಲಿದ್ದಾರೆ ಹೀಗೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ನಿಜನಾ ಎಂದು ತಿಳಿಯಲು ಎಪಿಸೋಡ್‌ ಪ್ರಸಾರವಾಗುವವರೆಗೂ ಕಾಯಬೇಕಿದೆ. ಇದನ್ನೂ ಓದಿ:ಕುಪ್ಪಳ್ಳಿಯ ಕವಿಮನೆಯಲ್ಲಿ ಖ್ಯಾತ ನಟ ಸಾಯಿಕುಮಾರ್

    ಈಗಾಗಲೇ ನಾಮಿನೇಟ್ ಆಗಿರುವ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ನಿನ್ನೆಯಿಂದಲೇ ಒಂದಷ್ಟು ಚಿತ್ರೀಕರಣದ ಕೆಲಸವನ್ನೂ ಮುಗಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಇವತ್ತು ಮತ್ತು ನಾಳೆ ಎರಡು ದಿನಗಳ ಕಾಲ ಫಿನಾಲೆ ಶೂಟಿಂಗ್ ನಡೆಯಲಿದೆ. ಜೊತೆಗೆ ಇವತ್ತು ಇಬ್ಬರು ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರಂತೆ.

    ಡ್ರೋನ್ ಪ್ರತಾಪ್ (Drone Prathap), ಸಂಗೀತಾ ಶೃಂಗೇರಿ (Sangeetha Sringeri), ಕಾರ್ತಿಕ್, ತುಕಾಲಿ ಸಂತು, ವರ್ತೂರು ಸಂತು ಹಾಗೂ ವಿನಯ್ ಸದ್ಯ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಸಂಗೀತಾ, ವಿನಯ್ ಹಾಗೂ ಡ್ರೋನ್ ಪ್ರತಾಪ್ ನಡುವೆ ತೀವ್ರ ಪೈಪೋಟಿ ನಡೆದಿದೆ. ಅಂತಿಮವಾಗಿ ಬಿಗ್ ಬಾಸ್ ಪಟ್ಟ ಯಾರ ಪಾಲಾಗಲಿದೆ ಎನ್ನುವುದು ನಾಳೆ ಗೊತ್ತಾಗಲಿದೆ.

  • Bigg Boss: ನೊಂದವರ ಗುಂಪಿಗೆ ಅಧ್ಯಕ್ಷ ಯಾರು ಗೊತ್ತಾ?

    Bigg Boss: ನೊಂದವರ ಗುಂಪಿಗೆ ಅಧ್ಯಕ್ಷ ಯಾರು ಗೊತ್ತಾ?

    ಬಿಗ್ ಬಾಸ್ ಮನೆಯ (Bigg Boss Kannada) ಆಟ ಈಗಾಗಲೇ 8ನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಗ್ರೂಪಿಸಂ, ಟೀಮ್‌ಗಳಾಗಿ ವಿಂಗಡಣೆ ಆಗಿದೆ. ವಿನಯ್, ಕಾರ್ತಿಕ್, ನೊಂದವರ ಗುಂಪು ಎಂದೆಲ್ಲಾ ತಂಡಗಳಾಗಿದೆ. ನೊಂದವರು ಎಂದು ಹೇಳಿಕೊಂಡು ಓಡಾಡುವ ತುಕಾಲಿಗೆ ಸುದೀಪ್, ನೊಂದವರ ಸಂಘದಲ್ಲಿ ಯಾರಿಗೆ ಯಾವ ಸ್ಥಾನ ಕೊಡುತ್ತೀರಾ ಎಂದೆಲ್ಲಾ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ಬಾತ್‌ರೂಂ ಬಿಟ್ಟು ಕೊಡದೇ ಡ್ರೋನ್‌ಗೆ ಕಾಡಿಸಿದ ಸ್ನೇಹಿತ್‌ಗೆ ಸುದೀಪ್‌ ಕ್ಲಾಸ್‌

    ದೊಡ್ಮನೆ ವಾತಾವರಣ ಸಂಪೂರ್ಣ ಬದಲಾಗಿದೆ. ಸ್ಪರ್ಧಿಗಳ ಮಧ್ಯೆ ಈಗ ರಿಯಲ್ ಗೇಮ್ ಶುರುವಾಗಿದೆ. ಆಗಾಗ ತುಕಾಲಿ ಸಂತೂ, ತಮಗೆ ಟಾಸ್ಕ್ ಆಡಲು ಸರಿಯಾದ ಅವಕಾಶ ಸಿಗುತ್ತಿಲ್ಲ. ಮೂಲೆಗುಂಪು ಮಾಡ್ತಾರೆ ಎಂದೆಲ್ಲಾ ಕುಟುಕಿದ್ದಾರೆ. ನೊಂದವರು ನಾವು ಎಂದೆಲ್ಲಾ ಅವರು ಮಾತನಾಡಿದ್ದಾರೆ. ಇದು ಕಿಚ್ಚನ ಗಮನಕ್ಕೂ ಬಂದಿದ್ದು, ನೊಂದವರು ಎಂದು ಹಣೆಪಟ್ಟಿ ಕಟ್ಟಿಕೊಂಡು ಓಡಾಡುತ್ತಿದ್ದ ತುಕಾಲಿ ಸಂತೋಷ್ ಕಾಣಿಸಿದ್ದಾರೆ. ಇದನ್ನೇ ಒಂದು ಹಾಸ್ಯವಾಗಿ ತೆಗೆದುಕೊಂಡ ಕಿಚ್ಚ ಸುದೀಪ್ ಇಂದು ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದಲ್ಲಿ ತುಕಾಲಿ ಅವರನ್ನು ಕಿಚಾಯಿಸಿದ್ದಾರೆ.

    ನೊಂದವರ ಗುಂಪಿನ ಸಂಘದಲ್ಲಿ ಯಾರ್ಯಾರಿಗೆ ಯಾವ ಸ್ಥಾನವನ್ನ ನೀಡುತ್ತೀರಾ ಎಂದು ತುಕಾಲಿ ಸಂತೋಷ್ ರವರನ್ನು ಕಿಚ್ಚ ಸುದೀಪ್ (Sudeep) ಕೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ಕಾರ್ತಿಕ್ ಹಾಗೂ ವರ್ತೂರು ಸಂತೋಷ್, ಡ್ರೋಣ್ ಪ್ರತಾಪ್ ಅವರ ಹೆಸರನ್ನ ತೆಗೆದುಕೊಂಡಿದ್ದಾರೆ. ಅವರಿಗೆ ಇಂತಹ ಸ್ಥಾನವನ್ನು ಕೊಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಮನೆಯ ಸದಸ್ಯರಿಗೆ ಬ್ಯಾಡ್ಜ್ ಕೂಡ ಬಂದಿದೆ ಅದನ್ನು ತುಕಾಲಿಯವರಿಗೆ ಹಾಕಲು ಸುದೀಪ್ ಹೇಳಿದ್ದಾರೆ.

    ದೊಡ್ಮನೆಯಲ್ಲಿ ನೊಂದವರ ಸಂಘವನ್ನು ಉದ್ಘಾಟನೆ ಮಾಡಿದ್ದಾರೆ. ತುಕಾಲಿ ಸಂತೋಷ್ ನೊಂದವರ ಸಂಘದ ಗೌರವಾಧ್ಯಕ್ಷರಾಗಿದ್ದಾರೆ. ಯಾವಾಗಲೂ ತುಕಾಲಿ ಸಂತೋಷ್ ವಿನಯ್ ಏನಾದರೂ ಮಾತನಾಡಿದರೆ ನಾವು ನೊಂದವರು ನಮ್ಮ ಕಷ್ಟವನ್ನು ಕೇಳಲು ಯಾರು ಇಲ್ಲ ಎಂಬ ಮಾತನ್ನು ಬಳಕೆ ಮಾಡುತ್ತಿದ್ದರು. ಅದಕ್ಕೆ ಇಂದು ನೊಂದವರ ಸಂಘ ಎಂದು ಅಧಿಕೃತವಾಗಿ ಚಾಲನೆಯನ್ನು ನೀಡಲಾಗಿದೆ. ಇನ್ನು ತುಕಾಲಿ ಸಂತೋಷ ತಮ್ಮ ಸಂಘದ ಬಗ್ಗೆ ಮಾತನಾಡಿದ್ದು ಸಂಘಕ್ಕೆ ಅಧ್ಯಕ್ಷರನ್ನಾಗಿ ಕಾರ್ತಿಕ್ ಅವರನ್ನ ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ.

    ಕಾರ್ತಿಕ್ (Karthik Mahesh) ತುಂಬಾ ನೊಂದು ಬೆಂದಿದ್ದಾರೆ. ಅದಕ್ಕೆ ಅವರನ್ನೇ ಸಂಘದ ಅಧ್ಯಕ್ಷರನ್ನಾಗಿ ಮಾಡುತ್ತಾ ಇದ್ದೇನೆ ಎಂದು ತುಕಾಲಿ ಸಂತೋಷ್ ಹೇಳಿದ್ದೆ ತಡ ಸಂಗೀತಾ ಮುಖಭಾವವೇ ಚೇಂಜ್ ಆಗಿ ಹೋಗಿದೆ. ಇನ್ನು ಉಪಾಧ್ಯಕ್ಷರನ್ನಾಗಿ ವರ್ತೂರು ಸಂತೋಷ್ ಅವರನ್ನ ಮಾಡಲಾಗಿದೆ. ಇದಕ್ಕೆ ತುಕಾಲಿ ಕೊಟ್ಟ ರೀಸನ್ ಮಾತ್ರ ಎಲ್ಲರ ಮುಖದಲ್ಲೂ ನಗು ತರಿಸಿದೆ. ವರ್ತೂರು ಸಂತೋಷ್ ಮಾತನಾಡುತ್ತಾ ಇದ್ದರು ಅದು ಅಳುವ ರೀತಿ ಕಾಣಿಸುತ್ತದೆ ಎಂದು ಹೇಳಿದ್ದಾರೆ. ತುಕಾಲಿ ಸಂತೋಷ್ ಮಾತಿಗೆ ನೊಂದವರ ಸಂಘದವರು ಬಿದ್ದು ಬಿದ್ದು ನಕ್ಕರೆ ವಿರೋಧಿ ಗುಂಪಿನವರು ಮಾತ್ರ ಏನು ರಿಯಾಕ್ಟ್ ಮಾಡದೆ ಸುಮ್ಮನೆ ಕುಳಿತುಕೊಂಡಿದ್ದಾರೆ.

  • Bigg Boss: ನಾನೂ ತಲೆ ಬೋಳಿಸಿದ್ಮೇಲೆ ಪಾಪ್ಯುಲರ್ ಆಗಿದ್ದು- ಸುದೀಪ್

    Bigg Boss: ನಾನೂ ತಲೆ ಬೋಳಿಸಿದ್ಮೇಲೆ ಪಾಪ್ಯುಲರ್ ಆಗಿದ್ದು- ಸುದೀಪ್

    ಬಿಗ್ ಬಾಸ್ ಮನೆಯ(Bigg Boss Kannada 10) ಆಟ 8ನೇ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ರೋಚಕ ಹಂತ ತಲುಪುತ್ತಿದೆ. ಮನೆಯಲ್ಲಿ ಸ್ಪರ್ಧಿಗಳ ನಡುವೆ ಕಾಂಪಿಟೇಷನ್ ಕೂಡ ಜೋರಾಗಿದೆ. ಹೀಗಿರುವಾಗ ಕಿಚ್ಚನ ಪಂಚಾಯಿತಿಯಲ್ಲಿ, ನಾನು ತಲೆ ಬೊಳಿಸಿದ ಮೇಲೆ ಪಾಪ್ಯುಲರ್ ಆಗಿದ್ದು, ಎಂದು ತುಕಾಲಿ- ಕಾರ್ತಿಕ್ ಗೆ(Karthik Mahesh) ಕಿವಿ ಮಾತು ಹೇಳಿದ್ದಾರೆ.

    ಈಗ ವಾತವರಣವೇ ಬದಲಾಗಿದೆ. ಈ ವಾರ ಟಾಸ್ಕ್ ಮಾಡುವಾಗಲೇ ಬಿಗ್ ಬಾಸ್ ಎರಡು ತಂಡಗಳಾಗಿ ವಿಂಗಡಿಸಿದ್ರು. ಸಂಪತ್ತಿಗೆ ಸವಾಲ್ ಮತ್ತು ಗಜಕೇಸರಿ ಎಂಬ ಹೆಸರನ್ನ ತಂಡಕ್ಕೆ ಇಟ್ಟು ಮೈಕಲ್ & ಸಂಗೀತಾರನ್ನ ಮಾಡಲಾಗಿತ್ತು. ಎದುರಾಳಿ ತಂಡಕ್ಕೆ ಚಾಲೆಂಜ್ ಕೊಡುವ ಟಾಸ್ಕ್ ನಲ್ಲಿ ಹೆಡ್ ಶೇವ್ ಮಾಡುವ ಚಾಲೆಂಜ್ ಅನ್ನ ಕಾರ್ತಿಕ್ – ತುಕಾಲಿಗೆ ನೀಡಿದ್ರು. ಅದನ್ನ ಚಾಲೆಂಜ್ ಆಗಿ ತೆಗೆದುಕೊಂಡು ಸಿನಿಮಾ ಅವಕಾಶಗಳು ಕೈಯಲ್ಲಿದ್ರು ತುಕಾಲಿ ಸಂತು ಹಾಗೂ ಕಾರ್ತಿಕ್ ಮಹೇಶ್ ತಲೆ ಬೋಳಿಸಿಕೊಂಡರು. ಚಾಲೆಂಜ್‌ನ ಸ್ವೀಕರಿಸಿ ಕಂಪ್ಲೀಟ್ ಹೆಡ್ ಶೇವ್ ಮಾಡಿದರು. ಇದೇ ವಿಚಾರದ ಕುರಿತಾಗಿ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಮಾತಿಗಿಳಿದರು. ನಾನೂ ತಲೆ ಬೋಳಿಸಿದ್ಮೇಲೆ ಪಾಪ್ಯುಲರ್ ಆಗಿದ್ದ ಎಂದು ಕಿಚ್ಚ ಸುದೀಪ್ (Kichcha Sudeep) ಬಿಗ್ ಬಾಸ್ ವೇದಿಕೆಯಲ್ಲಿ ಹೇಳಿದ್ದಾರೆ.

    ಓಂ ಪ್ರಕಾಶ್ ರಾವ್ ನಿರ್ದೇಶನದ ‘ಹುಚ್ಚ’ ಸಿನಿಮಾಗಾಗಿ ತಾವು ಹೆಡ್ ಶೇವ್ ಮಾಡಿಕೊಂಡಿದ್ದನ್ನ ನೆನೆದು ಬಿಗ್ ಬಾಸ್ ಕನ್ನಡ 10 ವೇದಿಕೆ ಮೇಲೆ ನಾನೂ ತಲೆ ಬೋಳಿಸಿದ್ಮೇಲೆ ನಾನು ಪಾಪ್ಯುಲರ್ ಆಗಿದ್ದು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಶನಿವಾರದ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ತುಕಾಲಿ ಸಂತು ಹಾಗೂ ಕಾರ್ತಿಕ್ ಮಹೇಶ್ ಜೊತೆಗೆ ಮಾತಿಗಿಳಿದ ಸುದೀಪ್, ಹೇಗಿದೆ ಹವಾಮಾನ ಎಂದು ಪ್ರಶ್ನಿಸಿದರು. ಚೆನ್ನಾಗಿದೆ. ಡಿಫರೆಂಟ್ ಆಗಿದೆ ಎಂದು ಕಾರ್ತಿಕ್ ಮಹೇಶ್ ಹೇಳಿದರು. ಆಗ, ತಲೆ ತುಂಬಾ ತಂಪಾಗಿ ಇರಬೇಕಲ್ವಾ. ಎಂದು ಸುದೀಪ್ ಕೇಳಿದಾಗ, ಹೌದು ನನಗಂತೂ ಈ ವಾರ ತುಂಬಾ ಡಿಫರೆಂಟ್ ಆಗಿತ್ತು. ಮರೆಯುವ ಹಾಗೇ ಇಲ್ಲ. ನನ್ನದು ಸಿನಿಮಾ ಕಮಿಟ್‌ಮೆಂಟ್ ಇತ್ತು ಎನ್ನುತ್ತಾರೆ ತುಕಾಲಿ ಸಂತು. ಇದನ್ನೂ ಓದಿ:‘ಸಲಾರ್‌’ ಮೆರವಣಿಗೆಗೆ ಕೌಂಟ್‌ಡೌನ್‌- ಪ್ರಭಾಸ್‌ ಮತ್ತೆ ಗೆಲ್ಲುತ್ತಾರಾ?

    ಈ ವೇಳೆ, ನಾನೂ ತಲೆ ಬೋಳಿಸಿದ್ಮೇಲೆ ಪಾಪ್ಯುಲರ್ ಆಗಿದ್ದು ರೀ ಅಂತ ಸುದೀಪ್ ಹೇಳಿದಾಗ ನೆರೆದಿದ್ದ ವೀಕ್ಷಕರು ಚಪ್ಪಾಳೆ ತಟ್ಟುತ್ತಾರೆ. ಬಹಳ ಲಕ್ ಆಗಿ ನಿಮ್ಮಿಬ್ಬರ ಹತ್ತಿರ ಬಂದಿದೆ ಅಂದುಕೊಳ್ಳಿ ಎಂದು ಸುದೀಪ್ ಹೇಳಿದಾಗ ಹೌದು ಸರ್ ಅಂತಾರೆ ಕಾರ್ತಿಕ್ ಮಹೇಶ್ ಮತ್ತು ತುಕಾಲಿ ಸಂತು. ಇದಾದ ಬಳಿಕ ಮತ್ತೆ ಎದುರಾಳಿ ತಂಡಕ್ಕೆ ಸಂಗೀತಾ ಕ್ಯಾಪ್ಟನ್ ಆಗ್ತಾರೆ. ತಲೆ ಬೋಳಿಸಿಕೊಳ್ಳುವ ಸವಾಲು ಹಾಕ್ತಾರೆ ಆಗ ಏನ್ನನ್ನಿಸಿತು ಎಂದು ತುಕಾಲಿ, ಕಾರ್ತಿಕ್ ಗೆ ಕೇಳುತ್ತಾರೆ. ಎರಡು ನಿಮಿಷ ಟೈಮ್ ಕೊಟ್ಟಿದ್ದರು. ನನ್ನ ಟೀಮ್‌ಗೋಸ್ಕರ ಈ ತರಹ ಒಂದು ಮಾಡಿದರೆ, ಮುಂದೆ ಟೀಮ್‌ನವರೂ ಮೋಟಿವೇಟ್ ಆಗ್ತಾರೆ ಅನಿಸ್ತು. ಕೂದಲು ತಾನೇ ಪರ್ವಾಗಿಲ್ಲ ಅಂತ ಕೊಟ್ಟೆ ಸರ್.

    ಟೀಮ್‌ಗಾಗಿ ಏನಾದರೂ ಸರಿ. ನಮ್ಮನ್ನ ನಾವು ಪ್ರೂವ್ ಮಾಡಿಕೊಳ್ಳೋಕೆ ಒಂದು ಅವಕಾಶ ಸಿಕ್ಕಂತಾಯ್ತು. ಕೂದಲು ಕೊಟ್ಟಾದರೂ ಸರಿ ನಾವು ಪ್ರೂವ್ ಮಾಡಿಕೊಳ್ಳಬೇಕು ಅನಿಸಿತು. ಕೂದಲು ಹೋದರೆ ಮತ್ತೆ ಬರುತ್ತೆ. ಆದರೆ ಈ ಮೊಮೆಂಟ್ ಬರಲ್ಲ ಅಂತ ಕೊಟ್ಟುಬಿಟ್ವಿ ಎಂದು ಇಬ್ಬರೂ ರಿಯಾಕ್ಟ್ ಮಾಡ್ತಾರೆ. ಕೂದಲು ಬರೋದೇ ಇಲ್ಲ ಅಂದಿದ್ರೆ ಕೊಡುತ್ತಿದ್ದಾರಾ ಎಂದು ಸುದೀಪ್ ತುಕಾಲಿ‌ (Tukali Santhu) ಕಾಲೆಳೆದಿದ್ದಾರೆ. ಇಬ್ಬರ ಮಾತಿಗೆ ಮನೆಮಂದಿಯೆಲ್ಲಾ ನಕ್ಕಿದ್ದಾರೆ.

  • Bigg Boss: ತುಕಾಲಿ ಗಾಳಕ್ಕೆ ಬೀಳದ ಡ್ರೋನ್‌ ಪ್ರತಾಪ್‌

    Bigg Boss: ತುಕಾಲಿ ಗಾಳಕ್ಕೆ ಬೀಳದ ಡ್ರೋನ್‌ ಪ್ರತಾಪ್‌

    ಡ್ರೋನ್ ಪ್ರತಾಪ್ (Drone Prathap) ಅವರು ದೊಡ್ಮನೆಗೆ ಕಾಲಿಡುವ ಮುನ್ನ ಜನರಿಗೆ ಇದ್ದ ಅಭಿಪ್ರಾಯವೇ ಬೇರೆಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಆದ ಬಳಿಕ ಪ್ರತಾಪ್ ಮೇಲೆ ಜನರಿಗೆ ನಂಬಿಕೆ ಇರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ಬಿಗ್ ಬಾಸ್‌ಗೆ (Bigg Boss Kannada 10) ಬಂದ ಮೇಲೆ ಡ್ರೋನ್ ಪ್ರತಾಪ್ ಅವರು ಅಪಾರ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಇನ್ನೂ ದೊಡ್ಮನೆಯಲ್ಲಿ ಪ್ರತಾಪ್, ಬುದ್ಧಿವಂತ ಎಂದು ತಿಳಿದ ಮೇಲೆ ಅವರ ಜೊತೆ ಫ್ರೆಂಡ್‌ಶಿಪ್ ಮಾಡಿಕೊಳ್ಳಲು ತುಕಾಲಿ ಸಂತೂ, ವರ್ತೂರು ಸಂತೋಷ್, ವಿನಯ್, ಸ್ನೇಹಿತ್ ಮುಂದಾಗಿದ್ದಾರೆ.

    ಸಂತೋಷ್‌ಗೆ ಮನೆಯ ಒಳಗೆ ಇರುವ ಸ್ಪರ್ಧಿಗಳ ಬಗ್ಗೆ ಜನರಿಗೆ ಯಾವ ರೀತಿಯ ಅಭಿಪ್ರಾಯ ಇದೆ ಅನ್ನೋದು ಅವರಿಗೆ ತಿಳಿದಿದೆ. ಹೀಗಾಗಿ, ದೊಡ್ಮನೆ ಒಳಗೆ ಬಂದ ಅವರು ವಿನಯ್ & ಟೀಮ್‌ನಿಂದ ದೂರಯುಳಿದಿದ್ದಾರೆ. ತುಕಾಲಿ ಸಂತೂ ಬಳಿ ಸಂತೋಷ್ ಹೋಗಿ ಪ್ರತಾಪ್ ಜೊತೆ ಸೇರಿಕೊಳ್ಳೋಕೆ ಅವರು ಸೂಚಿಸಿದ್ದಾರೆ. ವಿನಯ್-ಕಾರ್ತಿಕ್ ಕಿತ್ತಾಡುತ್ತಿದ್ದರು. ಆದರೆ, ಈಗ ಅವರಿಬ್ಬರೂ ಒಂದಾಗಿದ್ದಾರೆ. ಪ್ರತಾಪ್ ಜೊತೆ ಸೇರಿಕೊಂಡರೆ ನಿನಗೆ ಸಹಾಯ ಆಗುತ್ತದೆ ಎಂದಿದ್ದಾರೆ ವರ್ತೂರು ಸಂತೋಷ್. ಈ ಮಾತನ್ನು ತುಕಾಲಿ ಸಂತೂ ಗಂಭೀರವಾಗಿ ಪರಿಗಣಿಸಿದ್ದಾರೆ. ಇದನ್ನೂ ಓದಿ:Bigg Boss: ‘ಗೆಲ್ಲೋ ಕುದುರೆ’ ವಿನಯ್ ಎಂದ ನೀತುಗೆ ಮೈಕಲ್ ಠಕ್ಕರ್

    ಈ ಕಾರಣಕ್ಕೆ ತುಕಾಲಿ ಸಂತೂ (Tukali Santhosh) ಅವರು ಪ್ರತಾಪ್ ಬಳಿ ರಾಜಿಗೆ ಪ್ರಯತ್ನಿಸಿದ್ದಾರೆ. ನನ್ನ ನಿನ್ನ ಕೆಮಿಸ್ಟ್ರಿ ಮೊದಲಿನಿಂದಲೂ ಚೆನ್ನಾಗಿದೆ. ನಿನ್ನ ವಿಚಾರ ಮಾತನಾಡದೇ ಮೂರು ವಾರ ಆಗಿದೆ. ನಿನ್ನ ಕಣ್ಣಲ್ಲಿ ನನ್ನ ಮೇಲೆ ಇರುವ ಪ್ರೀತಿ ಕಾಣುತ್ತದೆ. ನೀನು ನಾನು ಕನೆಕ್ಟ್ ಆದರೆ ಕಾಮಿಡಿ ಆಗುತ್ತದೆ ಎಂದು ತುಕಾಲಿ ಸಂತೂ ಹೇಳಿದ್ದಾರೆ.

    ಅವರ ಮಾತಿಗೆ ಪ್ರತಾಪ್, ಊಸರವಳ್ಳಿ ಎಂಬ ಸ್ಥಾನವನ್ನ ಟಾಸ್ಕ್‌ವೊಂದರಲ್ಲಿ ನೀವು ನನಗೆ ಕೊಟ್ರಿ ಅಲ್ವಾ ಎಂದು ಸಂತೂಗೆ ತಿರುಗೇಟು ನೀಡಿದ್ದಾರೆ. ಅಲ್ಲಿಗೆ ಸಂತೂ ಬೀಸಿದ ಗಾಳಕ್ಕೆ ಬೀಳದೇ ಪ್ರತಾಪ್ ಎಚ್ಚೆತ್ತುಕೊಂಡಿದ್ದಾರೆ.

  • ಕಿಚ್ಚನ ಮುಂದೆಯೇ ವಿನಯ್‌ಗೆ ಚಾಟಿ ಬೀಸಿದ ಮನೆಮಂದಿ

    ಕಿಚ್ಚನ ಮುಂದೆಯೇ ವಿನಯ್‌ಗೆ ಚಾಟಿ ಬೀಸಿದ ಮನೆಮಂದಿ

    ದೊಡ್ಮನೆಯ ಮನೆಯ ಆಟ ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. 3 ವಾರ ಪೂರೈಸಿ 4ನೇ ವಾರದತ್ತ ಮುನ್ನುಗ್ಗುತ್ತಿದೆ. ಇದರ ನಡುವೆ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಮುಂದೆಯೇ ವಿನಯ್ ಗೌಡಗೆ (Vinay Gowda) ತುಕಾಲಿ ಸಂತೂ (Tukali Santhu) ಟಾಂಗ್ ಕೊಟ್ಟಿದ್ದಾರೆ.

    ಬಿಗ್‌ ಬಾಸ್ (Bigg Boss Kannada) ಒಂಟಿ ಸಲಗ ಎಂದು ಹೇಳುವ ಮೂಲಕ ವಿನಯ್ ಫೈನಲಿಸ್ಟ್ ಆಗುವ ಲಕ್ಷಣವಿದೆ ಎಂದು ಸುದೀಪ್ ವಾರದ ಪಂಚಾಯಿತಿಯಲ್ಲಿ ಮಾತನಾಡಿದರು. ಅವರಿಗೆ ಯಾರು ಎದುರಾಳಿಗಳು ಇಲ್ವಾ ಎಂದು ಕಿಚ್ಚ ಪ್ರಶ್ನಿಸಿದ್ದರು. ಈ ಬೆನ್ನಲ್ಲೇ ವಿನಯ್ ವಿರುದ್ಧ ಮನೆಮಂದಿ ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ:ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು

    ಸೂಕ್ತವೆನಿಸುವ ಗಾದೆಯ ಫಲಕವನ್ನ ಎದುರಾಳಿ ಸ್ಪರ್ಧಿಗೆ ಹಾಕಿ ಸೂಕ್ತ ಕಾರಣವನ್ನ ನೀಡಬೇಕು. ಅದರಂತೆಯೇ ಕಾರ್ತಿಕ್, ನಮ್ರತಾ, ವಿನಯ್ ಸೇರಿದಂತೆ ಹಲವರಿಗೆ ನಾ ನಾ ರೀತಿಯ ಗಾದೆಯ ಫಲಕಗಳು ಸಿಕ್ಕಿವೆ. ಅದರಲ್ಲಿ ವಿನಯ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ‘ಮೂರು ಬಿಟ್ಟವರು ಊರಿಗೆ ದೊಡ್ಡವರು’ ಎಂದು ತುಕಾಲಿ ಸಂತೂ ವಿನಯ್‌ಗೆ ಕುಟುಕಿದ್ದಾರೆ.

    ‘ಸೂಪರ್ ಸಂಡೇ ವಿತ್ ಸುದೀಪ್’ ಶೋನಲ್ಲಿ ಸುದೀಪ್ ಮುಂದೆಯೇ ಎಲ್ಲರನ್ನೂ ಹೀಯಾಳಿಸಿ ಮಾತನಾಡುತ್ತಾರೆ ಎಂದು ಡ್ರೋನ್ ಪ್ರತಾಪ್, ತನಿಷಾ ಸೇರಿದಂತೆ ಹಲವರು ವಿನಯ್ ವಿರುದ್ಧ ಮಾತನಾಡಿದ್ದಾರೆ. ಇನ್ನೂ ವಿನಯ್ ಗೌಡ ವಿಚಾರದಲ್ಲಿ ವೀಕೆಂಡ್ ಪಂಚಾಯಿತಿಯಲ್ಲಿ ಯಾಕಿಷ್ಟು ಮೌನ ವಹಿಸಿದ್ದಾರೆ ಕಿಚ್ಚ (Sudeep) ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.

    ನಟಿ ಸಂಗೀತಾ ಆಡಿದ ಅಸಭ್ಯ ಮಾತು, ಡ್ರೋನ್ ಹೀಯಾಳಿಸಿದ ರೀತಿ ಸೇರಿದಂತೆ ಹಲವು ವಿಷಯಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುಬೇಕಿತ್ತು. ಆದರೆ ಯಾಕೆ ತಟಸ್ಥರಾಗಿದ್ದಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡ್ತಿದ್ದಾರೆ. ಅಭಿಮಾನಿಗಳ ಪ್ರಶ್ನೆ ಉತ್ತರ ಸಿಗುತ್ತಾ ಕಾದುನೋಡಬೇಕಿದೆ.

    ಬಿಗ್‌ ಬಾಸ್‌ ಆಟದಿಂದ ಈಗಾಗಲೇ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್‌ ಆಗಿದ್ದಾರೆ. ಮತ್ತೆ ದೊಡ್ಮನೆಗೆ ವರ್ತೂರು ಸಂತೋಷ್‌ (Varthur Santhosh) ಕಾಲಿಡಲಿದ್ದಾರೆ ಎಂಬ ಸುದ್ದಿಯೂ ಇದೆ. ಇದೆಲ್ಲದರ ನಡುವೆ ಈ ವಾರ ಮನೆಯಿಂದ ಹೊರ ಬರುವ ಆ ಸ್ಪರ್ಧಿ ಯಾರು ಎಂಬ ಕುತೂಹಲ ಮನೆ ಮಾಡಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]