Tag: ತಿರುಮಲ ದೇವಾಲಯ

  • ಜೂ.11ರಿಂದ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವ ದರ್ಶನ ಆರಂಭ

    ಜೂ.11ರಿಂದ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಸರ್ವ ದರ್ಶನ ಆರಂಭ

    – ಗಂಟೆಗೆ 500 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ

    ಹೈದರಾಬಾದ್: ಲಾಕ್‍ಡೌನ್ ಕಾರಣದಿಂದ ಬಂದ್ ಆಗಿದ್ದ ಪ್ರಸಿದ್ಧ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಜೂನ್ 11 ರಿಂದ ಭಕ್ತರಿಗೆ ದರ್ಶನ ಆರಂಭವಾಗಲಿದ್ದು, ಕೇಂದ್ರ ಸರ್ಕಾರ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಮಾರ್ಗದರ್ಶನ ಬಿಡುಗಡೆ ಮಾಡಿದ ಒಂದು ದಿನದ ಬಳಿಕ ಟಿಟಿಡಿ ಈ ಕುರಿತು ಸ್ಪಷ್ಟನೆ ನೀಡಿದೆ.

    ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಜೂನ್ 11ರಿಂದ ಸರ್ವ ದರ್ಶನ ಆರಂಭವಾಗಲಿದೆ. ತಿಮ್ಮಪ್ಪನ ದರ್ಶನ ಪಡೆಯಲು ಗಂಟೆಗೆ 500 ಭಕ್ತರಿಗೆ ಅವಕಾಶ ಸಿಗಲಿದೆ. ಬೆಳಗ್ಗೆ 6.30ರಿಂದ ಸಂಜೆ 7.30ರವರೆಗೆ ಮಾತ್ರ ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಸಿಗಲಿದೆ. ದಿನಕ್ಕೆ 6 ಸಾವಿರ ಮಂದಿಗೆ ಮಾತ್ರ ದೇವರ ದರ್ಶನ ಭಾಗ್ಯ ಸಿಗಲಿದೆ.

    ಜೂನ್ 8ರಿಂದ ತಿರುಮಲದಲ್ಲಿ ಪ್ರಾರಂಭಿಕ ದರ್ಶನ ಕಾರ್ಯವನ್ನು ಆರಂಭಿಸಲಿದ್ದು, ಮೊದಲು ಸ್ಥಳೀಯರಿಗೆ ಹಾಗೂ ಟಿಟಿಡಿ ಸಿಬ್ಬಂದಿಗಳಿಗೆ ಮಾತ್ರ ದೇವರ ದರ್ಶನಕ್ಕೆ ಅನುಮತಿ ನೀಡಲಾಗಿದೆ. ಆ ಬಳಿಕವೇ ಟಿಟಿಡಿ ಸಮಿತಿ ಸರ್ವ ದರ್ಶನ ಸೇವೆಯನ್ನು ಆರಂಭಿಸಲಿದೆ. ಆನ್‍ಲೈನ್‍ನಲ್ಲಿ ದರ್ಶನದ ಟಿಕೆಟ್ ಸೇವೆಗಳು ಬುಕ್ ಮಾಡಿಕೊಳ್ಳಲು ಈಗಾಗಲೇ ಅವಕಾಶ ನೀಡಲಾಗಿದೆ.

    ಕೇಂದ್ರ ಸರ್ಕಾರ ನೀಡಿರುವ ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಪ್ರಯೋಗಿಕ ದರ್ಶನದ ಸೇವೆ ವೇಳೆ ಈ ಕುರಿತು ಸಿಬ್ಬಂದಿಗೂ ತರಬೇತಿ ನೀಡಲಾಗುವುದು. ಸಾಮಾಜಿಕ ಅಂತರ ಪಾಲನೆ, ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಬಳಕೆ ಮಾಡಲಾಗುತ್ತದೆ. ಕೇಂದ್ರ ಸೂಚನೆ ಅನ್ವಯ 10 ವರ್ಷಕ್ಕಿಂತ ಕೆಳಗಿನ ಹಾಗೂ 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ವಿವರಿಸಿದ್ದಾರೆ.

  • ನೋಟ್ ಬ್ಯಾನ್ ಬಳಿಕ ಸೋಮವಾರ ತಿಮ್ಮಪ್ಪನ ಹುಂಡಿಗೆ ಬಿತ್ತು ಭಾರೀ ಹಣ

    ನೋಟ್ ಬ್ಯಾನ್ ಬಳಿಕ ಸೋಮವಾರ ತಿಮ್ಮಪ್ಪನ ಹುಂಡಿಗೆ ಬಿತ್ತು ಭಾರೀ ಹಣ

    ತಿರುಪತಿ: ನೋಟ್ ಬ್ಯಾನ್ ಆದ ಬಳಿಕ ಇದೇ ಮೊದಲ ಬಾರಿಗೆ ತಿರುಪತಿ ವೆಂಕಟೇಶ್ವರ ದೇವಾಲಯದ ಕಾಣಿಕೆ ಹುಂಡಿಯಲ್ಲಿ ಸೋಮವಾರ ಒಂದೇ ದಿನ ಬರೋಬ್ಬರಿ 4.75 ಕೋಟಿ ರೂ. ಸಂಗ್ರಹವಾಗಿದೆ.

    ವೆಂಕಟೇಶ್ವರ ದೇವರಿಗಾಗಿ ಸಮರ್ಪಿಸುವ ಬೆಳ್ಳಿ, ಬಂಗಾರದ ಜೊತೆಗೆ 2.5 ಕೋಟಿ ರೂ.ನಿಂದ 3 ಕೋಟಿ ರೂ. ವರೆಗೆ ಪ್ರತಿ ದಿನ ಕಾಣಿಕೆ ಸಂಗ್ರಹವಾಗುತಿತ್ತು. ಆದರೆ 1 ಸಾವಿರ ಮತ್ತು 500 ರೂ. ಮುಖಬೆಲೆಯ ನೋಟುಗಳು ನಿಷೇಧವಾದ ಬಳಿಕ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಕಾಣಿಕೆ ಹಣ ಸಂಗ್ರಹವಾಗಿದೆ ಎಂದು ತಿರುಪತಿ ದೇವಾಲಯದ ಮೂಲಗಳು ಸುದ್ದಿಸಂಸ್ಥೆಗೆ ಮಾಹಿತಿ ನೀಡಿವೆ.

    7 ಅಡಿ ಎತ್ತರದ ಕಾಣಿಕೆ ಹುಂಡಿಯನ್ನು ಸಿಬ್ಬಂದಿ ತೆಗೆದಾಗ ಇಷ್ಟೊಂದು ಮೊತ್ತದ ಹಣಗಳನ್ನು ನೋಡಿ ಆಶ್ಚರ್ಯವಾಗಿತ್ತು. ವಿಶೇಷವಾಗಿ ಎಣಿಕೆ ಮಾಡುವಾಗ ಒಂದೇ ಚೀಲದಲ್ಲಿ 1 ಕೋಟಿ ರೂ. ಮೌಲ್ಯದ ಹಣ ಸಿಕ್ಕಿದೆ ಎಂದು ತಿಳಿಸಿದ್ದಾರೆ.

    ಈ ಹಿಂದೆ 2012ರ ಏಪ್ರಿಲ್‍ನಲ್ಲಿ ಶ್ರೀರಾಮ ನವಮಿ ದಿನದಂದು 5.73 ಕೋಟಿ ರೂ. ಕಾಣಿಕೆ ಹಣ ಸಂಗ್ರಹವಾಗಿತ್ತು. ಇದು ಇದೂವರೆಗೆ ಸಂಗ್ರಹವಾದ ಅತಿ ಹೆಚ್ಚು ಕಾಣಿಕೆಯಾಗಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.

    2016-17ರ ಹಣಕಾಸು ವರ್ಷದಲ್ಲಿ 2,678 ಕೋಟಿ ರೂ. ಅಂದಾಯ ಸಂಗ್ರಹವಾಗಲಿದೆ ಎಂದು ಎಂದು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಅಂದಾಜಿಸಿದೆ. ಈ ವರ್ಷ ಹುಂಡಿಯಿಂದಲೇ 1,010 ಕೋಟಿ ರೂ. ಆದಾಯ ಬರುವ ನಿರೀಕ್ಷೆಯಿದೆ.

    ಇದನ್ನೂ ಓದಿ: ತಿರುಪತಿ ದೇಗುಲಕ್ಕೆ ತೆಲಂಗಾಣದಿಂದ ಚಿನ್ನ ಕಾಣಿಕೆ: ಎಷ್ಟು ಚಿನ್ನ? ಬೆಲೆ ಎಷ್ಟು?

  • ತಿರುಪತಿ ಲಡ್ಡು ಟಿಟಿಡಿಗೆ ಕಹಿ – 140 ಕೋಟಿ ರೂ. ನಷ್ಟ

    ತಿರುಪತಿ ಲಡ್ಡು ಟಿಟಿಡಿಗೆ ಕಹಿ – 140 ಕೋಟಿ ರೂ. ನಷ್ಟ

    ತಿರುಪತಿ: ತಿರುಪತಿ ತಿಮ್ಮಪ್ಪನ ಲಡ್ಡು ಸೇವೆಯಿಂದಾಗಿ ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ವಾರ್ಷಿಕ 140 ಕೋಟಿ ರೂ. ನಷ್ಟವಾಗುತ್ತಿದೆ. ತಿರುಪತಿ ಲಡ್ಡನ್ನು ಕಳೆದ ಮೂರು ವರ್ಷಗಳಿಂದ ಸಬ್ಸಿಡಿ ದರ ಹಾಗೂ ಕೆಲವು ಭಕ್ತರಿಗೆ ಉಚಿತವಾಗಿ ಹಂಚಿಕೆ ಮಾಡುತ್ತಿರುವುದರಿಂದ ಈ ನಷ್ಟವಾಗುತ್ತಿದೆ ಎಂದು ಟಿಟಿಡಿ ಮೂಲಗಳು ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿವೆ.

    ಭಕ್ತರ ಬಾಯಲ್ಲಿ ನೀರೂರಿಸುವ ಲಡ್ಡು ಪ್ರಸಾದವನ್ನು ಕಳೆದ 11 ವರ್ಷಗಳಿಂದ 25 ರೂ.ಗಳ ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತಿದೆ. ಆದರೆ ಒಂದು ಲಡ್ಡುವಿನ ಉತ್ಪಾದನಾ ವೆಚ್ಚವೇ 32.50 ರೂಪಾಯಿ ಆಗುತ್ತದೆ.

    2016ರಲ್ಲಿ ಸುಮಾರು 10 ಕೋಟಿ ಲಡ್ಡು ತಯಾರಾಗಿ ಮಾರಾಟವಾಗಿವೆ. ಸಬ್ಸಿಡಿ ದರವಲ್ಲದೆ ಉಚಿತ ದರ್ಶನ ಹಾಗೂ ಸರತಿ ಸಾಲಲ್ಲಿ ನಿಂತು ದರ್ಶನ ಪಡೆದವರಿಗೆ ಕೇವಲ 10 ರೂ.ಗೆ ಲಡ್ಡು ಪ್ರಸಾದ ನೀಡಲಾಗುತ್ತದೆ. ಇದರಿಂದಾಗಿಯೇ ವರ್ಷಕ್ಕೆ 23 ಕೋಟಿ ರೂಪಾಯಿ ನಷ್ಟವಾಗುತ್ತದೆ ಎನ್ನಲಾಗಿದೆ.

    ತಿರುಮಲ ಬೆಟ್ಟವನ್ನು 11 ಕಿ.ಮೀ. ನಡೆದುಕೊಂಡು ಬರುವವರಿಗೆ 1 ಲಡ್ಡುವಿನಂತೆ ವಿತರಣೆ ಮಾಡುತ್ತಿದ್ದು ಇದರಿಂದಾಗಿ 22.7 ಕೋಟಿ ನಷ್ಟವಾಗುತ್ತದೆ. ಅಕ್ಟೋಬರ್ 2013ರಲ್ಲಿ ಈ ಯೋಜನೆ ಆರಂಭವಾಗಿತ್ತು. ಇದು ಆರಂಭವಾದ ಬಳಿಕ ವಾರ್ಷಿಕ ಸುಮಾರು 70 ಲಕ್ಷ ಭಕ್ತರು ಬೆಟ್ಟವನ್ನು ಹತ್ತಿ ಬರುತ್ತಾರೆ.

    70 ಲಕ್ಷಕ್ಕೂ ಹೆಚ್ಚು ಭಕ್ತರು 300 ರೂ.ಗಳ ವಿಶೇಷ ದರ್ಶನ ಹಾಗೂ 500 ರೂ.ಗಳ ವಿಐಪಿ ದರ್ಶನ ಪಡೆದುಕೊಂಡು ಬರುವವರಿಗೆ ತಲಾ 2 ಲಡ್ಡುಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದು ಕೂಡಾ ಟಿಟಿಡಿಯ ನಷ್ಟದ ಲೆಕ್ಕಕ್ಕೆ ಸೇರ್ಪಡೆಯಾಗುತ್ತಿದೆ.