Tag: ತಾನ್ಯ ಹೋಪ್

  • ತಮಿಳಿಗೆ ಹೊರಟ ಬಸಣ್ಣಿ ಖ್ಯಾತಿಯ ತಾನ್ಯ ಹೋಪ್ : ಪ್ರಶಾಂತ್ ರಾಜ್ ಚಿತ್ರಕ್ಕೆ ತಾನ್ಯ ನಾಯಕಿ

    ತಮಿಳಿಗೆ ಹೊರಟ ಬಸಣ್ಣಿ ಖ್ಯಾತಿಯ ತಾನ್ಯ ಹೋಪ್ : ಪ್ರಶಾಂತ್ ರಾಜ್ ಚಿತ್ರಕ್ಕೆ ತಾನ್ಯ ನಾಯಕಿ

    ತೆಲುಗು ಸಿನಿಮಾ ರಂಗದ ಮೂಲಕ ಸಿನಿಮಾ ರಂಗ ಪ್ರವೇಶ ಮಾಡಿದ್ದ ತಾನ್ಯ ಹೋಪ್, ಯಜಮಾನ ಚಿತ್ರದಿಂದ ಕನ್ನಡಿಗರ ಮನೆಮಾತಾದರು. ಅದರಲ್ಲೂ ‘ಬಸಣ್ಣಿ ಬಾ’ ಹಾಡು ಅವರನ್ನು ಮತ್ತೊಂದು ಮಟ್ಟಕ್ಕೆ ಕರೆದುಕೊಂಡು ಹೋಯಿತು. ಆನಂತರ ತಾನ್ಯ ಸಿನಿಮಾ ರಂಗದಲ್ಲಿ ಬ್ಯುಸಿಯಾದರು. ಈಗ ಬ್ಯಾಕ್ ಟು ಬ್ಯಾಕ್ ತಮಿಳು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಕುಲಸಾಮಿ ಸಿನಿಮಾದ ನಂತರ ಇದೀಗ ಕನ್ನಡದ ಚಿತ್ರ ನಿರ್ದೇಶಕ ಪ್ರಶಾಂತ್ ರಾಜ್ ನಿರ್ದೇಶನದ ಹೊಸ ತಮಿಳು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೇ ತಿಂಗಳ ಕೊನೆ ವಾರದಿಂದ ಶೂಟಿಂಗ್ ನಲ್ಲೂ ಪಾಲ್ಗೊಳ್ಳುತ್ತಿದ್ದಾರೆ. ಇದನ್ನೂ ಓದಿ : ಸೋಲೊ ಟ್ರಿಪ್ ನಲ್ಲಿ ಪ್ಯಾರ್ಗೆ ಹುಡುಗಿ ಪಾರುಲ್ ಯಾದವ್

    ಸಿನಿಮಾ ತಮಿಳದ್ದಾದರೂ, ಬಹುತೇಕ ಕನ್ನಡದ ತಂತ್ರಜ್ಞರು ಮತ್ತು ಕಲಾವಿದರು ಈ ಸಿನಿಮಾದಲ್ಲಿ ಇರಲಿದ್ದಾರೆ ಎಂದು ಈ ಹಿಂದೆ ಪ್ರಶಾಂತ್ ರಾಜ್ ಹೇಳಿದ್ದರು. ಕನ್ನಡದ ಹುಡುಗಿಯನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡುವೆ ಎಂದೂ ತಿಳಿಸಿದ್ದರು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಕನ್ನಡದ ನಟಿಯನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಸದ್ಯ ಡೇಟಿಂಗ್, ಮುಂದೆ ಮದ್ವೆ, ಹೃತಿಕ್ –ಸಬಾ ಜೋಡಿ ಪ್ರೇಮ್ ಕಹಾನಿ

    “ನಾನು ಈವರೆಗೂ ಏನು ಹೇಳಿದ್ದೇನೋ ಹಾಗೆಯೇ ನಡೆದುಕೊಂಡಿದ್ದೇನೆ. ತಮಿಳು ಸಿನಿಮಾ ಮಾಡುತ್ತಿದ್ದರೂ, ಕನ್ನಡದ ನಾಯಕಿಯೇ ನನ್ನ ಸಿನಿಮಾದಲ್ಲಿ ಇರಲಿದ್ದಾರೆ ಎಂದಿದ್ದೆ. ಮಾತಿನಂತೆ ನಡೆದುಕೊಂಡಿದ್ದೇನೆ. ತಾನ್ಯ ಒಂದೊಳ್ಳೆ ಮಹತ್ವದ ಪಾತ್ರವನ್ನೇ ನಿರ್ವಹಿಸಲಿದ್ದಾರೆ. ನಗಿಸುತ್ತಲೇ ಹೊಸ ವಿಷಯವನ್ನು ಹೇಳುವ ಪ್ರಯತ್ನ ಈ ಸಿನಿಮಾದಲ್ಲಿ ಆಗಲಿದೆ” ಎನ್ನುತ್ತಾರೆ ಪ್ರಶಾಂತ್ ರಾಜ್. ಇದನ್ನೂ ಓದಿ : ಪಂಜಾಬ್ ನಿಯೋಜಿತ ಸಿಎಂ ಭಗವಂತ್ ಮಾನ್ ನಟ ಹಾಗೂ ಕಾಮಿಡಿ ಕಲಾವಿದ

    ಪ್ರಶಾಂತ್ ರಾಜ್ ನಿರ್ದೇಶನದ ಬಹುತೇಕ ಸಿನಿಮಾಗಳಲ್ಲಿ ನಾಯಕನಷ್ಟೇ ನಾಯಕಿಗೂ ಮಹತ್ವ ಇರುತ್ತದೆ. ಹಾಗಾಗಿಯೇ ಇವರ ಚಿತ್ರದ ನಟನೆಗಾಗಿ ರಾಧಿಕಾ ಪಂಡಿತ್ ಸೇರಿದಂತೆ ಹಲವು ನಟಿಯರು ಅತ್ಯುತಮ ನಟಿ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ. ತಾನ್ಯಗೂ ಅಂಥದ್ದೇ ಮಹತ್ವದ ಪಾತ್ರವನ್ನು ನೀಡಿದ್ದಾರಂತೆ. ಇದನ್ನೂ ಓದಿ : ಕಿಕ್ ಏರಿಸಲು ಹೊರಟಿದ್ದ ಸಮಂತಾಗೆ ‘ನೋ ನೋ’ ಅಂದ ಟ್ರೋಲಿಗರು

    ಅಂದಹಾಗೆ ತಮಿಳಿನ ನಟ ಸಂತಾನಂ ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಕನ್ನಡದ ಹಾಸ್ಯನಟ ಸಾಧು ಕೋಕಿಲಾ ಸೇರಿದಂತೆ ಅನುಭವಿ ತಾರಾ ಬಳಗವೇ ಸಿನಿಮಾದಲ್ಲಿ ಇರಲಿದೆ.

  • ಲಾಕ್‍ಡೌನ್‍ ಟೈಮಲ್ಲಿ ಟೀಚರ್ ಆದ ಬಸಣ್ಣಿ ಬೆಡಗಿ

    ಲಾಕ್‍ಡೌನ್‍ ಟೈಮಲ್ಲಿ ಟೀಚರ್ ಆದ ಬಸಣ್ಣಿ ಬೆಡಗಿ

    ಬೆಂಗಳೂರು: ಲಾಕ್‍ಡೌನ್‍ನಿಂದಾಗಿ ಬಹುತೇಕರು ಮನೆಯಲ್ಲಿ ಬಂಧಿಯಾಗಿದ್ದು, ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳಲು ಬಯಸುತ್ತಿದ್ದಾರೆ. ಆದರೆ ಎಲ್ಲಾ ಕೊರೊನಾ ಮಾಯೆ ಹೀಗಾಗಿ ಮನೆಯಲ್ಲೇ ಬಂಧಿಯಾಗಬೇಕಿದೆ. ಹಲವು ನಟ ನಟಿಯರಿಗೂ ಇದೇ ರೀತಿಯ ಬೇಸರ ಕಾಡುತ್ತಿದ್ದು, ಯಾವಾಗ ಶೂಟಿಂಗ್ ಹಾಜರಾಗುತ್ತೇವೋ ಎಂದು ಎದುರು ನೋಡುತ್ತಿದ್ದಾರೆ. ಅದೇ ರೀತಿ ಬಸಣ್ಣಿ ಹಾಡಿನ ಖ್ಯಾತಿಯ ನಟಿ ತಾನ್ಯ ಹೋಪ್ ಶೂಟಿಂಗ್‍ಗೆ ತೆರಳಲು ಕಾತರದಿಂದ ಕಾಯುತ್ತಿದ್ದಾರಂತೆ.

    ತಾನ್ಯ ಇತ್ತೀಚೆಗೆ ಕನ್ನಡ, ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಸಖತ್ ಬ್ಯುಸಿಯಾಗಿದ್ದರು. ಹಲವು ಚಿತ್ರಗಳಲ್ಲಿ ತೊಡಗಿಕೊಂಡಿದ್ದರು. ಹೀಗಿರುವಾಗಲೇ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಮನೆಯಲ್ಲೇ ಕಾಲ ಕಳೆಯುವಂತಾಗಿದೆ. ಇದನ್ನೇ ಸದುಪಯೋಗ ಪಡಿಸಿಕೊಂಡು ಕುಟುಂಬದೊಂದಿಗೆ ದಿನಗಳನ್ನು ದೂಡುತ್ತಿದ್ದಾರೆ.

    ಹಲವು ನಟ ನಟಿಯರು ಸಾಮಾಜಿಕ ಕಾರ್ಯ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ, ತೊಡಗಿಕೊಳ್ಳುವ ಮೂಲಕ ಲಾಕ್‍ಡೌನ್ ದಿನಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಬೇಜಾರು ಎಂದು ಸಪ್ಪೆ ಮೋರೆ ಹೊತ್ತು ಕುಳಿತಿದ್ದಾರೆ. ಈ ಮಧ್ಯೆ ನಟಿ ತಾನ್ಯ ಹೋಪ್ ತಮ್ಮದೇ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಆದರೂ ಲಾಕ್‍ಡೌನ್ ದಿನಗಳು ಅವರಿಗೆ ಬೇಸರ ತರಿಸಿವೆಯಂತೆ, ನನ್ನೊಂದಿಗೆ ಕುಟುಂಬಸ್ಥರು ಇಲ್ಲದಿದ್ದರೆ ಪರಿಸ್ಥಿತಿ ಗಂಭಿರವಾಗುತ್ತಿತ್ತು ಎಂದು ಹೇಳಿದ್ದಾರೆ.

    ಲಾಕ್‍ಡೌನ್‍ನ ತಮ್ಮ ನಿತ್ಯ ಜೀವನದ ಕುರಿತು ಹಂಚಿಕೊಂಡಿರುವ ಅವರು, ಗೊಂದಲಕ್ಕೊಳಗಾಗಿದ್ದೇನೆ. ಕೆಲವು ದಿನ ತುಂಬಾ ಚುರುಕಾಗಿ ಕೆಲಸ ಮಾಡಿದರೆ, ಇನ್ನೂ ಕೆಲ ದಿನ ಬೆಡ್ ಬಿಟ್ಟು ಏಳುವುದೇ ಇಲ್ಲ. ಹೀಗಾಗಿ ರಾತ್ರಿಯಲ್ಲೇ ಜೀವನ ಕಳೆಯುತ್ತಿದ್ದೇವೆ ಅನ್ನಿಸುತ್ತದೆ. ಎಚ್ಚರಗೊಂಡ ತಕ್ಷಣ ಭಯಾನಕ ಸುದ್ದಿ ಕೇಳುವಂತಾಗಿದೆ.

    ಇಂತಹ ದಿನಗಳು ತುಂಬಾ ನೆಗೆಟಿವ್ ಪರಿಣಾಮಗಳನ್ನು ಬೀರುತ್ತವೆ. ನಾನು ಅದೃಷ್ಟವಂತೆ ಏಕೆಂದರೆ ನನ್ನ ಜೊತೆ ಕುಟುಂಬವಿದೆ. ಅಂತಹ ಚೌಕಟ್ಟಿನಿಂದ ನನ್ನನ್ನು ಹೊರ ತರುತ್ತದೆ. ನನ್ನ ಸಹೋದರ, ಆತನ ಮಕ್ಕಳು ಹಾಗೂ ಅಳಿಯನೊಂದಿಗೆ ಕಾಲ ಕಳೆಯುತ್ತಿದ್ದೇನೆ. ಇನ್ನೂ ವಿಶೇಷವೆಂದರೆ ಅಳಿಯನಿಗೆ ಮನೆಯಲ್ಲೇ ಶಾಲೆ ಆರಂಭಿಸಿದ್ದೇನೆ, ಪಾಠ ಹೇಳುತ್ತಿದ್ದೇನೆ. ಇಂಗ್ಲಿಷ್ ಕ್ಲಾಸ್ ತೆಗೆದುಕೊಳ್ಳುತ್ತೇನೆ. ಅವನಿಗೆ ಪಾಠ ಮಾಡುವುದನ್ನು ಆರಂಭಿಸಿದ ನಂತರ ನಾನೂ ಕೊಡುಗೆ ನೀಡುತ್ತಿದ್ದೇನೆ ಎಂಬ ಭಾವ ಮೂಡುತ್ತಿದೆ. ಇದು ನನಗೆ ತುಂಬಾ ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

    ಕೆಲಸದ ಕುರಿತು ಮಾತನಾಡಿರುವ ಅವರು 2016ರಿಂದಲೂ ನಾನು ಒಂದು ದಿನವೂ ಫ್ರೀ ಇರಲಿಲ್ಲ. ಪ್ರತಿ ದಿನ ಶೂಟಿಂಗ್‍ನಲ್ಲಿ ಬ್ಯುಸಿಯಾಗಿರುತ್ತಿದ್ದೆ. ಆದರೆ ಈಗ ಇಷ್ಟು ದಿನ ಮನೆಯಲ್ಲಿರುವುದು ತುಂಬಾ ಕಷ್ಟವೆನಿಸುತ್ತಿದೆ ಎಂದು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇಲ್ಲದ ಕುರಿತು ಮಾತನಾಡಿರುವ ಅವರು ಸಿನಿಮಾ ಅಪ್‍ಡೇಟ್‍ಗಾಗಿ ಮಾತ್ರ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತೇನೆ. ಈಗ ಏನೂ ಇಲ್ಲ, ಹೀಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿಲ್ಲ ಎಂದು ಹೇಳಿದ್ದಾರೆ.

    ತಾನ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಚಿರಪರಿಚಿತರಾದರು. ಬಸಣ್ಣಿ ಹಾಡಿನ ಮೂಲಕ ಸದ್ದು ಮಾಡಿದರು. ನಂತರ ಅಮರ್ ಸಿನಿಮಾ ಅಭಿಷೇಕ್ ಜೊತೆ ರೊಮ್ಯಾನ್ಸ್ ಮಾಡಿದ್ದರು. ಇದೀಗ ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ.

  • ಯಂಗ್ ರೆಬೆಲ್‍ಗೆ ಸ್ಯಾಂಡಲ್‍ವುಡ್‍ನಿಂದ ಶುಭಾಶಯಗಳ ಮಹಾಪೂರ

    ಯಂಗ್ ರೆಬೆಲ್‍ಗೆ ಸ್ಯಾಂಡಲ್‍ವುಡ್‍ನಿಂದ ಶುಭಾಶಯಗಳ ಮಹಾಪೂರ

    -ಗೆಳೆಯನಿಗಾಗಿ ವಿಡಿಯೋ ಮಾಡಿದ ಕ್ರಿಕೆಟಿಗ ಕೆ.ಎಲ್ ರಾಹುಲ್

    ಬೆಂಗಳೂರು: ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟಿಸುತ್ತಿರುವ “ಅಮರ್” ಚಿತ್ರ ಇಂದು ಬಿಡುಗಡೆ ಆಗಲಿದ್ದು, ಚಿತ್ರ ಬಿಡುಗಡೆಗೂ ಮುನ್ನ ಸ್ಯಾಂಡಲ್‍ವುಡ್ ನಟರಾದ ದರ್ಶನ್, ಸುದೀಪ್, ಉಪೇಂದ್ರ, ಮೆಗಾಸ್ಟಾರ್ ಚಿರಂಜೀವಿ, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಭಾರತ ತಂಡದ ಕ್ರಿಕೆಟ್ ಆಟಗಾರ ಕೆ.ಎಸ್ ರಾಹುಲ್ ಶುಭ ಕೋರಿದ್ದಾರೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಟ್ವಿಟ್ಟರಿನಲ್ಲಿ, ಯಂಗ್ ರೆಬೆಲ್ ಸ್ಟಾರ್ ನಮ್ಮ ಅಭಿ ಅಭಿನಯದ `ಅಮರ್’ ಇಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವೂ ಭರ್ಜರಿ ಯಶಸ್ಸು ಕಾಣಲಿ ಎಂದು ಆಶಿಸುತ್ತೇನೆ. ಅಪ್ಪಾಜಿಗಿಂತಲೂ ಇನ್ನು ಹೆಚ್ಚು ಎತ್ತರಕ್ಕೆ ಅವರ ಮಗ ಬೆಳೆಯಲಿ. ನಿಮ್ಮ ಪ್ರೀತಿ- ಪ್ರೋತ್ಸಾಹ ಸದಾ ಹೀಗೆ ಇರಲಿ. ಇಡೀ ಚಿತ್ರತಂಡಕ್ಕೆ ನನ್ನ ಶುಭ ಹಾರೈಕೆಗಳು ಎಂದು ಟ್ವೀಟ್ ಮಾಡಿದ್ದಾರೆ.

    ಕಿಚ್ಚ ಸುದೀಪ್ ಅವರು `ಅಭಿ ನಿನಗೆ ಶುಭಾಶಯಗಳು. ಚಿತ್ರ ನಿನಗೆ ಹೊಸದಲ್ಲ ಆದರೆ ಮೊದಲ ಹೆಜ್ಜೆ ಮುಖ್ಯವಾಗುತ್ತದೆ. ಚಿತ್ರದಲ್ಲಿ ನೀನು ನಿನ್ನ ಬೆಸ್ಟ್ ಕೊಟ್ಟಿರುತ್ತೀಯಾ ಎಂದು ನನಗೆ ಗೊತ್ತು. ಮೇಲಿಂದ ನೋಡುತ್ತಿರುವ ಗ್ರೇಟ್ ಸೋಲ್‍ನ ಆಶೀರ್ವಾದ ಇದೆ ಎಂದು ಟ್ವೀಟ್ ಮಾಡಿ ಅಭಿಷೇಕ್ ಅವರಿಗೆ ಶುಭ ಕೋರಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ, “ಅಮರ” ನಮ್ಮ ಅಂಬರೀಷ್ ಅಣ್ಣ ಸುಪುತ್ರ ಅಭಿಷೇಕ್ ಯಂಗ್ ರೆಬೆಲ್ ಸ್ಟಾರ್ ಆಗಿ ಬೆಳ್ಳಿತೆರೆಯ ಮೇಲೆ ಬರುತ್ತಿರುವ `ಅಮರ್’ ಚಿತ್ರ ಅದ್ಭುತ ಯಶಸ್ಸು ಗಳಿಸಲಿ ಎಂದು ಶುಭಕೋರಿದ್ದಾರೆ.

    ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್ ರಾಹುಲ್ ಅವರು ಕೂಡ ವಿಡಿಯೋ ಮೂಲಕ ಅಭಿಷೇಕ್ ಹಾಗೂ ಅಮರ್ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ರಾಹುಲ್ ವಿಡಿಯೋವನ್ನು ಸುಮಲತಾ ಅವರು ತಮ್ಮ ಟ್ವಿಟ್ಟರಿನಲ್ಲಿ ಟ್ವೀಟ್ ಮಾಡಿ ಅದಕ್ಕೆ, “ಅಭಿಷೇಕ್ ಅಂಬರೀಶ್ ಅವರ ಆಪ್ತ ಗೆಳೆಯ ಹಾಗೂ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್.ರಾಹುಲ್ ಇಂದು ಬಿಡುಗಡೆಯಾಗಲಿರುವ ಅಮರ್ ಚಿತ್ರಕ್ಕೆ ಶುಭಹಾರೈಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

    ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಕೂಡ ವಿಡಿಯೋ ಮೂಲಕ ಅಭಿಷೇಕ್ ಅವರಿಗೆ ಶುಭ ಕೋರಿದ್ದಾರೆ. ಈ ವಿಡಿಯೋವನ್ನು ಸುಮಲತಾ ಅವರು “ಅಮರ್ ಗೆ ಶುಭಾಶಯ ಕೋರುವ ಸರದಿ ಈಗ ಮೆಗಾಸ್ಟಾರ್ ಚಿರಂಜೀವಿಯವರದ್ದು, ಶುಕ್ರವಾರ ಬಿಡುಗಡೆಯಾಗಲಿರುವ ಅಮರ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಎಂದು ಟ್ವೀಟ್ ಮಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ವಿಡಿಯೋ ಮೂಲಕ ಚಿತ್ರಕ್ಕೆ ಹಾಗೂ ಅಭಿಷೇಕ್‍ಗೆ ಶುಭ ಕೋರಿದ್ದರು.

    `ಅಮರ್’ ಸಿನಿಮಾ ನಿರ್ದೇಶಕ ನಾಗಶೇಖರ್ ಸಾರಥ್ಯದಲ್ಲಿ ಮೂಡಿಬಂದಿದ್ದು, ಸಿನಿಮಾದಲ್ಲಿ ಅಭಿಷೇಕ್‍ಗೆ ಜೋಡಿಯಾಗಿ ನಟಿ ತಾನ್ಯಾ ಹೋಪ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನಟ ದರ್ಶನ್ ಸಹ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.

  • ತರುಣ್ ಶಿವಪ್ಪ ಸಿನಿಮಾದಲ್ಲಿ ತಾನ್ಯ ಹೋಪ್

    ತರುಣ್ ಶಿವಪ್ಪ ಸಿನಿಮಾದಲ್ಲಿ ತಾನ್ಯ ಹೋಪ್

    -ಚಿರಂಜೀವಿ ಸರ್ಜಾಗೆ ಜೊತೆಯಾಗಿ ತಾನ್ಯ ಮಿಂಚಿಂಗ್

    ಬೆಂಗಳೂರು: ಚಂದನವನದ ಚೆಂದದ ಚೆಲುವೆ ತಾನ್ಯ ಹೋಪ್ ನಟಿಸಿದ್ದ ಯಜಮಾನ ಕಳೆದ ವಾರ ಬಿಡುಗಡೆಯಾಗಿದೆ. ಕೈಯಲ್ಲಿ ಮೂರು ಚಿತ್ರಗಳನ್ನು ಹೊಂದಿರುವ ತಾನ್ಯ ಹೋಪ್ ಸ್ಯಾಂಡಲ್‍ವುಡ್ ನ ಬೇಡಿಕೆಯ ನಟಿಯಾಗಿದ್ದಾರೆ.

    ಚಿರಂಜೀವಿ ಸರ್ಜಾ ನಟಿಸುತ್ತಿರುವ ‘ಖಾಕಿ-ದ ಪವರ್ ಆಫ್ ಕಾಮನ್ ಮ್ಯಾನ್’ ಚಿತ್ರದಲ್ಲಿ ತಾನ್ಯ ಹೋಪ್ ನಟಿಸೋದು ಪಕ್ಕಾ ಆಗಿದೆ. ನವೀನ್ ರೆಡ್ಡಿ ಆ್ಯಕ್ಷನ್ ಕಟ್ ಹೇಳಲಿದ್ದು, ತರುಣ್ ಶಿವಪ್ಪ ನಿರ್ಮಾಣದಲ್ಲಿ ಸಿನಿಮಾ ಮೂಡಿಬರಲಿದೆ. ನವೀನ್ ರೆಡ್ಡಿ `ಖಾಕಿ’ ಸಿನಿಮಾದ ಮೂಲಕ ನಿರ್ದೇಶಕರಾಗಿದ್ದಾರೆ. ಈ ಹಿಂದೆ ತರುಣ್ ಶಿವಪ್ಪ ನಿರ್ಮಾಣದ ‘ಮಾಸ್ ಲೀಡರ್’ ಮತ್ತು ‘ರೋಜ್’ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವವನ್ನು ನವೀನ್ ರೆಡ್ಡಿ ಹೊಂದಿದ್ದಾರೆ.

    ಮಾಸ್ ಮತ್ತು ಎಂಟರ್‍ಟೈನರ್ ಕಥೆಯನ್ನು ಸಿನಿಮಾ ಒಳಗೊಂಡಿದ್ದು, ಕೊನೆಗೆ ಯುವ ಸಮುದಾಯಕ್ಕೆ ಸಂದೇಶವನನ್ನು ನೀಡಲಿದೆ ಎಂದು ಚಿತ್ರತಂಡ ತಿಳಿಸಿದೆ. ಮುಂದಿನ ತಿಂಗಳನಿಂದ ಹೈದರಾಬಾದ್ ನಲ್ಲಿ ಮೂವತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ತಾನ್ಯ ನಾಯಕನಿಗೆ ಜೊತೆಯಾಗಿ ಕಾಣಸಿಕೊಳ್ಳವ ಬಬ್ಲಿ ಗರ್ಲ್ ಪಾತ್ರದಲ್ಲಿ ಮಿಂಚಲಿದ್ದಾರೆ.

    ತಮಿಳಿನ “ನ್ಯೂ’ ಚಿತ್ರ ನಿರ್ದೇಶಕ ವಿದ್ಯಾದರ್ ಕಥೆ ಬರೆದಿದ್ದು, ಬಾಲು ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಮೊದಲು ಸ್ಟಂಟ್ ಮಾಸ್ಟರ್ ಪೀಟರ್ ಹೇನ್ಸ್ ನಿರ್ದೇಶನದ ಹಾಲಿವುಡ್ ಚಿತ್ರಕ್ಕೆ ಕ್ಯಾಮೆರಾ ವಿಭಾಗದಲ್ಲಿ ಬಾಲು ಕೆಲಸ ಮಾಡಿದ್ದವರು. ‘ಸಂಕಷ್ಟಕರ ಗಣಪತಿ’ಯ ಋತ್ವಿಕ್ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv