Tag: ತಸ್ಲಿಮಾ ನಸ್ರೀನ್

  • ಇಸ್ಲಾಂ ಇರುವವರೆಗೂ ಭಯೋತ್ಪಾದನೆ ಜೀವಂತ: ತಸ್ಲಿಮಾ ನಸ್ರೀನ್‌

    ಇಸ್ಲಾಂ ಇರುವವರೆಗೂ ಭಯೋತ್ಪಾದನೆ ಜೀವಂತ: ತಸ್ಲಿಮಾ ನಸ್ರೀನ್‌

    ನವದೆಹಲಿ: ಇಸ್ಲಾಂ (Islam) ಇರುವವರೆಗೂ ಭಯೋತ್ಪಾದನೆ (Terrorism) ಜೀವಂತವಾಗಿರುತ್ತದೆ ಎಂದು ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್‌ (Taslima Nasrin) ಹೇಳಿದ್ದಾರೆ.

    ದೆಹಲಿ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ಅವರು ಪಹಲ್ಗಾಮ್ ಭಯೋತ್ಪಾದಕ ದಾಳಿ (Pahalgam Terror Attack) ಮತ್ತು 2016ರ ಢಾಕಾದಲ್ಲಿ (Dhaka Attack) ನಡೆದ ಭಯೋತ್ಪಾದಕ ದಾಳಿಯನ್ನು ಹೋಲಿಸಿ ಈ ಹೇಳಿಕೆ ನೀಡಿದ್ದಾರೆ.

    ಕಳೆದ 1,400 ವರ್ಷಗಳಲ್ಲಿ ಇಸ್ಲಾಂ ವಿಕಸನಗೊಂಡಿಲ್ಲ. ಅದು ವಿಕಸನಗೊಳ್ಳುವವರೆಗೆ ಭಯೋತ್ಪಾದಕರನ್ನು ಬೆಳೆಸುತ್ತಲೇ ಇರುತ್ತದೆ. 2016ರ ಢಾಕಾ ದಾಳಿಯಲ್ಲಿ ಕಲ್ಮಾವನ್ನು ಪಠಿಸದ್ದಕ್ಕೆ ಜನರನ್ನು ಹತ್ಯೆ ಮಾಡಲಾಯಿತು. ನಮ್ಮ ನಂಬಿಕೆ ವಿವೇಚನೆ ಮತ್ತು ಮಾನವೀಯತೆಯನ್ನು ಮೀರಿದಾಗ ಹೀಗೆ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: 30 ನಿಮಿಷ ಲೈಟ್ ಆಫ್ – ಪಂಜಾಬ್ ಗಡಿಯಲ್ಲಿ ಸೇನೆಯಿಂದ ಮಾಕ್ ಡ್ರಿಲ್

    ಯುರೋಪ್‌ನಲ್ಲಿ ಚರ್ಚುಗಳು ವಸ್ತುಸಂಗ್ರಹಾಲಯಗಳಾಗಿ ಬದಲಾಗುತ್ತಿದ್ದರೆ ಮುಸ್ಲಿಮರು ಎಲ್ಲೆಡೆ ಮಸೀದಿಗಳನ್ನು ನಿರ್ಮಿಸುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ಸಾವಿರಾರು ಮಸೀದಿಗಳು ನಿರ್ಮಾಣವಾಗಿದ್ದರೂ ಮತ್ತಷ್ಟು ನಿರ್ಮಾಣ ಮಾಡಲಾಗುತ್ತಿದೆ. ಈ ಮೂಲಕ ಮತ್ತಷ್ಟು ಜಿಹಾದಿಗಳು ತಯಾರಾಗುತ್ತಾರೆ. ಯಾವುದೇ ಮದರಸಾಗಳು ಇರಬಾರದು. ಮಕ್ಕಳು ಒಂದು ಪುಸ್ತಕವನ್ನು ಮಾತ್ರ ಓದಬಾರದು, ಎಲ್ಲಾ ಪುಸ್ತಕಗಳನ್ನು ಓದಬೇಕು ಎಂದು ಅಭಿಪ್ರಾಯಪಟ್ಟರು.

    ಪ್ರತಿಯೊಂದು ನಾಗರಿಕ ದೇಶವೂ ಏಕರೂಪ ನಾಗರೀಕ ಸಂಹಿತೆಯನ್ನು (UCC) ಹೊಂದಿರಬೇಕು ಮತ್ತು ನಾನು ಇದನ್ನು ಬೆಂಬಲಿಸುತ್ತೇನೆ. ಸಂಸ್ಕೃತಿ, ಧರ್ಮ ಅಥವಾ ಸಂಪ್ರದಾಯದ ಹೆಸರಿನಲ್ಲಿ ಮಹಿಳೆಯರ ಭದ್ರತೆಯನ್ನು ರಾಜಿ ಮಾಡಿಕೊಂಡರೆ ನಾವು ಆ ಸಂಸ್ಕೃತಿಯನ್ನು ಪ್ರಶ್ನಿಸಬೇಕು. ತನ್ನ ಜನಸಂಖ್ಯೆಯ ಅರ್ಧದಷ್ಟು ಜನರನ್ನು ರಕ್ಷಿಸಲು ಸಾಧ್ಯವಾಗದ ಸಮಾಜವು ವಿಫಲ ಸಮಾಜವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಗೆ 50 ಲಕ್ಷ ಫಂಡಿಂಗ್‌ – ಪ್ರಭಾವಿ ಮುಸ್ಲಿಮರ ಬ್ಯಾಂಕ್ ಖಾತೆ ಮೇಲೆ ಕಣ್ಣು!

    ನಾನು ಅಮೆರಿಕದ ಖಾಯಂ ನಿವಾಸಿಯಾಗಿದ್ದು, 10 ವರ್ಷಗಳ ಕಾಲ ಅಲ್ಲಿ ವಾಸಿಸುತ್ತಿದ್ದೆ. ಆದರೆ ನಾನು ಯಾವಾಗಲೂ ಹೊರಗಿನವನಂತೆ ಭಾಸವಾಗುತ್ತಿತ್ತು. ನಾನು ಕೋಲ್ಕತ್ತಾಗೆ ಬಂದಾಗ ಮಾತ್ರ ನನಗೆ ಮನೆಯಲ್ಲಿರುವಂತೆ ಭಾಸವಾಯಿತು. ಪಶ್ಚಿಮ ಬಂಗಾಳದಿಂದ ಹೊರಹಾಕಲ್ಪಟ್ಟ ನಂತರವೂ ದೆಹಲಿಯಲ್ಲಿ ನನಗೆ ಮತ್ತೊಂದು ಮನೆ ಸಿಕ್ಕಿತು. ನನ್ನ ಸ್ವಂತ ದೇಶಕ್ಕೆ ಸಾಧ್ಯವಾಗದ ಒಂದು ರೀತಿಯ ಆತ್ಮೀಯತೆಯ ಭಾವನೆಯನ್ನು ಈ ದೇಶ ನನಗೆ ನೀಡಿದೆ ಎಂದು ಅವರು ಹೇಳಿದರು.

    ಬಾಂಗ್ಲಾದೇಶದ ದೇಶದ ಮಹಿಳೆಯರು ಎಲ್ಲಾ ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ ಎಂದು ಈ ವೇಳೆ ವಿಷಾದ ವ್ಯಕ್ತಪಡಿಸಿದರು.

    ಢಾಕಾದಲ್ಲಿ ಏನಾಗಿತ್ತು?
    ಇಸ್ಲಾಮಿಕ್‌ ಸ್ಟೇಟ್‌ನ ಐವರು ಉಗ್ರರು ಜುಲೈ 2016 ರಲ್ಲಿ ಪ್ರವಾಸಿಗರನ್ನು ಒತ್ತೆಯಾಳಾಗಿ ಇಟ್ಟುಕೊಂಡು ದಾಳಿ ನಡೆಸಿದ್ದರು. ಬಾಂಗ್ಲಾದೇಶದ 7, ಇಟಲಿಯ 9, ಜಪಾನಿನ 9, ಭಾರತದ ಒಬ್ಬರು ಸೇರಿದಂತೆ 24 ಮಂದಿಯನ್ನು ಉಗ್ರರು ಹತ್ಯೆಗೈದಿದ್ದರು.

  • ಎ.ಆರ್.ರಹಮಾನ್ ಪುತ್ರಿ ನೋಡಿದ್ರೆ ಉಸಿರುಗಟ್ಟಿದಂತಾಗುತ್ತೆ: ತಸ್ಲಿಮಾ ನಸ್ರೀನ್

    ಎ.ಆರ್.ರಹಮಾನ್ ಪುತ್ರಿ ನೋಡಿದ್ರೆ ಉಸಿರುಗಟ್ಟಿದಂತಾಗುತ್ತೆ: ತಸ್ಲಿಮಾ ನಸ್ರೀನ್

    ನವದೆಹಲಿ: ಸಂಗೀತ ಮಾಂತ್ರಿಕ, ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್.ರಹಮಾನ್ ಪುತ್ರಿಯನ್ನು ನೋಡಿದ್ರೆ ಉಸಿರುಗಟ್ಟಿದಂತಾಗುತ್ತೆ ಎಂದು ಲೇಖಕಿ ತಸ್ಲಿಮಾ ನಸ್ರೀನ್ ಟ್ವೀಟ್ ಮಾಡಿದ್ದಾರೆ.

    ಕಳೆದ ವರ್ಷ ಎ.ಆರ್.ರಹಮಾನ್ ಪುತ್ರಿ ಹಿಜಬ್ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವಿಷಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆದಿದ್ದರಿಂದ ಎ.ಆರ್.ರಹಮಾನ್ ಸ್ಪಷ್ಟನೆ ನೀಡಿದ್ದರು. ಇದೀಗ ತಸ್ಲಿಮಾ ನಸ್ರೀನ್ ಈ ಕುರಿತು ಟ್ವೀಟ್ ಮಾಡಿದ್ದಾರೆ. ನನಗೆ ಎ.ಆರ್.ರಹಮಾನ್ ಸಂಗೀತ ಅಂದ್ರೆ ತುಂಬಾ ಇಷ್ಟ. ಆದ್ರೆ ಪ್ರತಿಬಾರಿ ಅವರ ಪುತ್ರಿಯನ್ನು ನೋಡಿದಾಗ ಉಸಿರು ಗಟ್ಟಿದಂತಾಗುತ್ತದೆ. ಒಬ್ಬ ವಿದ್ಯಾವಂತೆಯನ್ನು ಕುಟುಂಬದ ಸಂಪ್ರದಾಯದ ಹೆಸರಿನಲ್ಲಿ ಸರಳವಾಗಿ ಬ್ರೈನ್ ವಾಶ ಮಾಡಬಹುದು ಎಂದು ಬರೆದುಕೊಂಡಿದ್ದಾರೆ.

    ‘ಸ್ಲಂಡಾಗ್ ಮಿಲಿಯೇನರ್’ ಸಿನಿಮಾ 10 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮಾರಂಭದಲ್ಲಿ ರೆಹಮಾನ್ ಪುತ್ರಿ ಖತೀಜಾ ಸಹ ಭಾಗಿಯಾಗಿದ್ದರು. ಸೀರೆ ಧರಿಸಿದ್ದ ಖತೀಜಾ, ಮುಖ ಕಾಣದಂತೆ ಹಿಜಬ್ ಧರಿಸಿದ್ದರು. ಕಾರ್ಯಕ್ರಮದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಪುತ್ರಿಗೆ ರಹಮಾನ್ ಬಲವಂತವಾಗಿ ಹಿಜಬ್ ಧರಿಸುವಂತೆ ಒತ್ತಡ ಹಾಕಿದ್ದಾರೆ ಎಂದು ಟ್ರೋಲ್ ಮಾಡಲಾಗಿತ್ತು.

    ಟ್ರೋಲ್ ಗಳಿಗೆ ಪ್ರತಿಕ್ರಿಯಿಸಿದ್ದ ರಹಮಾನ್, ಬುರ್ಖಾ ಧರಿಸೋದು ಪುತ್ರಿಯ ನಿರ್ಧಾರವಾಗಿದೆ ಎಂದಿದ್ದರು. ಇನ್ನು ಫೇಸ್‍ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದ ಖತೀಜಾ, ನಾನು ಹೇಗೆ ಇರಬೇಕೆಂಬುವುದು ಗೊತ್ತಿದೆ. ವಿಷಯದ ಬಗ್ಗೆ ಗೊತ್ತಿಲ್ಲದೇ ನಿಮ್ಮ ಊಹೆಗಳನ್ನು ಸತ್ಯ ಎಂದು ವಾದಿಸಬೇಡಿ ಎಂದು ಖಡಕ್ ಆಗಿ ಪ್ರತಿಕ್ರಿಯಿಸಿದ್ದರು.

    https://www.instagram.com/p/BtjSI1KlTfW/?utm_source=ig_embed