Tag: ತಯಾರಿ

  • ದೊಡ್ಮನೆಯಲ್ಲಿ ಮದ್ವೆ ಸಂಭ್ರಮ – ಹೂವುಗಳಿಂದ ವಿವಾಹ ಮಂಟಪ ಸಜ್ಜು

    ದೊಡ್ಮನೆಯಲ್ಲಿ ಮದ್ವೆ ಸಂಭ್ರಮ – ಹೂವುಗಳಿಂದ ವಿವಾಹ ಮಂಟಪ ಸಜ್ಜು

    – ಆರತಕ್ಷತೆಯಲ್ಲಿ 60ಕ್ಕೂ ಹೆಚ್ಚು ತಿನಿಸು
    – ಗೋಲ್ಡ್ ವೈಟ್ ರೆಡ್ ಥೀಮ್‍ನಲ್ಲಿ ವೇದಿಕೆ ರೆಡಿ

    ಬೆಂಗಳೂರು: ದೊಡ್ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ನಟ ರಾಘವೇಂದ್ರ ರಾಜ್‍ಕುಮಾರ್ ಅವರ ಕಿರಿಯ ಪುತ್ರ ಯುವರಾಜ್ ಕುಮಾರ್ ಮದುವೆಗೆ ಬೆಂಗಳೂರು ಅರಮನೆಯಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ.

    ಕಳೆದ ಒಂದು ವಾರದಿಂದ ಮದುವೆಯ ಶಾಸ್ತ್ರಗಳು ಶುರುವಾಗಿದ್ದು, ಇಂದು ಸಂಜೆ ಬೆಂಗಳೂರು ಅರಮನೆಯಲ್ಲಿ ವರ ಪೂಜೆ ನಡೆಯಲಿದೆ. ಯುವ ರಾಜ್‍ಕುಮಾರ್ ಮೈಸೂರು ಮೂಲದ ಶ್ರೀದೇವಿಯನ್ನು ಕೈ ಹಿಡಿಯಲಿದ್ದು, ಭಾನುವಾರ ಬೆಳಗ್ಗೆ ಮುಹೂರ್ತ ಸಮಾರಂಭಕ್ಕೆ ಬೆಂಗಳೂರು ಅರಮನೆಯಲ್ಲಿ ತಯಾರಿ ಭರ್ಜರಿಯಾಗಿದೆ.

    ಭಾನುವಾರ ಸಂಜೆ ಆರತಕ್ಷತೆ ನಡೆಯಲಿದ್ದು, ಆರತಕ್ಷತೆಯಲ್ಲಿ ಸ್ಯಾಂಡಲ್‍ವುಡ್, ಬಾಲಿವುಡ್ ಸೇರಿದಂತೆ ಟಾಲಿವುಡ್‍ನ ಸಾಕಷ್ಟು ಕಲಾವಿದರು ಭಾಗಿಯಾಗಲಿದ್ದಾರೆ. ಅದಷ್ಟೇ ಅಲ್ಲದೆ ರಾಜಕೀಯ ಗಣ್ಯರು ಕೂಡ ಮದುವೆಯಲ್ಲಿ ಭಾಗಿಯಾಗಿ ವಧು-ವರರನ್ನು ಆಶೀರ್ವದಿಸಲಿದ್ದಾರೆ.

    ಯುವರಾಜ್ ಕುಮಾರ್ ವಿವಾಹಕ್ಕಾಗಿ ಗೋಲ್ಡ್ ವೈಟ್ ರೆಡ್ ಥೀಮ್‍ನಲ್ಲಿ ವೇದಿಕೆ ಸಜ್ಜಾಗಿದ್ದು ಸಾಕಷ್ಟು ಹೂವುಗಳಿಂದ ವಿವಾಹದ ಮಂಟಪವನ್ನು ಸಜ್ಜುಗೊಳಿಸಲಾಗುತ್ತಿದೆ. ಅಭಿಮಾನಿಗಳಿಗೆ ಮತ್ತು ವಿವಿಐಪಿಗಳಿಗೆ ಒಂದೇ ರೀತಿಯ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಳಗ್ಗೆ ಮುಹೂರ್ತದ ಸಂದರ್ಭಕ್ಕೆ 30ಕ್ಕೂ ಹೆಚ್ಚು ಖಾದ್ಯಗಳು ಹಾಗೂ ಆರತಕ್ಷತೆಯಲ್ಲಿ 60ಕ್ಕೂ ಹೆಚ್ಚು ತಿನಿಸುಗಳನ್ನು ಮದುವೆಗೆ ಬಂದವರು ಸವಿಯಬಹುದಾಗಿದೆ.

    ಈ ಹಿಂದೆ ಶಿವರಾಜ್ ಕುಮಾರ್ ಮಗಳ ಮದುವೆ ಹಾಗೂ ರಾಕಿಂಗ್ ಸ್ಟಾರ್ ಯಶ್ ಮದುವೆ ತಯಾರಿಯನ್ನು ಮಾಡಿ ಕೊಟ್ಟಂತಹ ಧ್ರುವ ಡೆಕೋರೇಟ್ ಅವರೇ ಈ ಮದುವೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ರಾಜ್‍ಕುಮಾರ್ ಕಾಲದಿಂದಲೂ ದೊಡ್ಮನೆಯ ಕಾರ್ಯಕ್ರಮಗಳಲ್ಲಿ ಊಟದ ವ್ಯವಸ್ಥೆ ಮಾಡುತ್ತಿದ್ದ ಚನ್ನಕೇಶವ ಅವರೇ ಯುವ ರಾಜ್‍ಕುಮಾರ್ ಮದುವೆಯ ಊಟದ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ.

  • ಲೀಟರ್ ಮೂತ್ರಕ್ಕೆ 1 ರೂ. ಕೊಡ್ತಾರಂತೆ- ಮೂತ್ರ ಬ್ಯಾಂಕ್ ಸ್ಥಾಪನೆಗೆ ಮುಂದಾದ ಕೇಂದ್ರ ಸರ್ಕಾರ

    ಲೀಟರ್ ಮೂತ್ರಕ್ಕೆ 1 ರೂ. ಕೊಡ್ತಾರಂತೆ- ಮೂತ್ರ ಬ್ಯಾಂಕ್ ಸ್ಥಾಪನೆಗೆ ಮುಂದಾದ ಕೇಂದ್ರ ಸರ್ಕಾರ

    ನವದೆಹಲಿ: ಯೂರಿಯಾ ಉತ್ಪಾದಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಯೊಂದು ತಾಲೂಕು ಕೇಂದ್ರದಲ್ಲಿ ಮೂತ್ರ ಬ್ಯಾಂಕ್ ಸ್ಥಾಪಿಸಲು ಮುಂದಾಗಿದ್ದು, ಆ ಮೂಲಕ ಯೂರಿಯಾ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಹೊರಟಿದ್ದಾರೆ.

    ಮನುಷ್ಯನ ಮೂತ್ರದಲ್ಲಿ ಸಾಕಷ್ಟು ನೈಟ್ರೋಜನ್ ಇದೆ. ಆದರೆ ಇದನ್ನು ವ್ಯರ್ಥ ಮಾಡುತ್ತಿದ್ದೇವೆ. ಕಸದಿಂದ ರಸ ತೆಗೆಯೋದು ನನ್ನ ಪ್ಯಾಶನ್. ಇದನ್ನ ಪ್ರಯತ್ನಿಸೋದ್ರಲ್ಲಿ ಯಾವುದೇ ಹಾನಿ ಇಲ್ಲ. ಈಗಾಗಲೇ ಫಾಸ್ಫರಸ್ ಮತ್ತ ಪೊಟಾಷಿಯಂಗೆ ಬದಲಿ ಸಾವಯವ ಇದೆ. ನೈಟ್ರೋಜನ್ ಕೂಡ ಸೇರಿಸಿದರೆ ಇನ್ನೂ ಹೆಚ್ಚು ಸಹಾಯಕವಾಗುತ್ತದೆ ಎಂದು ಗಡ್ಕರಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ .

    ಈ ಯೋಜನೆ ಇನ್ನೂ ಪ್ರಾಥಮಿಕ ಹಂತದ ಪ್ರಸ್ತಾಪವಾಗಿದೆ. ಇದನ್ನ ವಾಸ್ತಚಿಕವಾಗಿ ಜಾರಿಗೆ ತರಲು ಸ್ವೀಡನ್ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

    ಈ ಯೋಜನೆಯನ್ನು ಪ್ರಯೋಗಿಕವಾಗಿ ಗ್ರಾಮೀಣ ಭಾಗದಲ್ಲಿ ಆರಂಭ ಮಾಡಲಾಗುತ್ತದೆ. ಒಂದು ಬಾರಿಗೆ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ಸಂಗ್ರಹಿಸಿದ 10 ಲೀಟರ್ ಮೂತ್ರ ತರಬೇಕು. ಪ್ರತಿ ಲೀಟರ್ ಮೂತ್ರಕ್ಕೆ 1 ರೂ. ನೀಡಲಾಗುತ್ತೆ. ಸರ್ಕಾರದಿಂದಲೇ ಪ್ಲಾಸ್ಟಿಕ್ ಕ್ಯಾನ್ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ನಂತರ ಮೂತ್ರವನ್ನ ಶುದ್ಧೀಕರಣ ಮಾಡಿ ಸಾವಯವ ಗೊಬ್ಬರ ತಯಾರು ಮಾಡಲಾಗುತ್ತದೆ ಎಂದು ವಿವರಿಸಿದರು.

    ಈ ಯೋಜನೆಗೆ ತಗಲುವ ಆರ್ಥಿಕ ವೆಚ್ಚದ ಕುರಿತು ಮತ್ತು ಯೋಜನೆಯ ಕಾರ್ಯಸಾಧ್ಯತೆಯ ಬಗ್ಗೆ ಖಚಿತವಾಗಿಲ್ಲ. ಈ ಕುರಿತು ನಾಗ್ಪುರದ ಸಮೀಪದ ಧಪೇವಾಡಾ ಗ್ರಾಮದ ಪ್ರಯೋಗಲಯದಲ್ಲಿ ಆರಂಭಿಕ ಪರೀಕ್ಷೆಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.