Tag: ತಮಿಳುನಾಡು ವಿಧಾನಸಭಾ ಚುನಾವಣೆ

  • ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಸಕ್ಸಸ್ – ಖಾತೆ ತೆರೆಯಲು ಕಮಲ್ ಹಾಸನ್ ಹರಸಾಹಸ

    ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಸಕ್ಸಸ್ – ಖಾತೆ ತೆರೆಯಲು ಕಮಲ್ ಹಾಸನ್ ಹರಸಾಹಸ

    – ಬಿಜೆಪಿ ಜೊತೆಗೆ ಕಣಕ್ಕಿಳಿದಿದ್ದ ಎಐಡಿಎಂಕೆಗೆ ಸೋಲು

    ಚೆನ್ನೈ: ಪ್ರತಿ ಚುನಾವಣೆಯಂತೆ ತಮಿಳುನಾಡಿನಲ್ಲಿ ಒಂದೇ ಪಕ್ಷವನ್ನ ಬೆಂಬಲಿಸ್ತಾರೆ ಅನ್ನೋ ಮಾತು ಈ ಬಾರಿ ಸತ್ಯ ಆಗಿದೆ. ಜಯಲಲಿತಾ ಮತ್ತು ಕರುಣಾನಿಧಿ ಇಲ್ಲದ ಮೊದಲ ಚುನಾವಣೆ ಇದಾಗಿದ್ದು, ಜನರು ಕಾಂಗ್ರೆಸ್ ಮೈತ್ರಿಯನ್ನ ಒಪ್ಪಿಕೊಂಡಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ಹಿನ್ನೆಲೆ ಎರಡೂ ರಾಷ್ಟ್ರೀಯ ಪಕ್ಷಗಳ ನೇರವಾಗಿ ಕಣಕ್ಕಿಳಿದಿರಲಿಲ್ಲ.

    ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಮತ್ತು ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಜೋಡಿಯನ್ನ ಜನ ಒಪ್ಪಿ ಮತ ನೀಡಿದ್ದಾರೆ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳದಲ್ಲಿ ನಿರಾಸೆ ಕಂಡಿದ್ದ ಕಾಂಗ್ರೆಸ್ ಗೆ ತಮಿಳುನಾಡಿನ ಗೆಲುವು ಮುಂದಿನ ರಾಜಕಾರಣಕ್ಕೆ ಆಸರೆ ಸಿಕ್ಕಂತಾಗಿದೆ. ಇದನ್ನೂ ಓದಿ: ಅಸ್ಸಾಂ ಚಹಾ ತೋಟದಲ್ಲಿ ಎರಡನೇ ಬಾರಿ ಅರಳಿದ ಕಮಲ

    ಯಾರಿಗೆ ಎಷ್ಟು ಕ್ಷೇತ್ರ?: ತಮಿಳುನಾಡು ಒಟ್ಟು ವಿಧಾನಸಭಾ ಕ್ಷೇತ್ರಗಳು – 232

    ಇಂಡಿಯಾ ಟುಡೇ-ಆಕ್ಸಿನ್ ಮೈ ಇಂಡಿಯಾ
    ಎಐಎಡಿಎಂಕೆ+ಬಿಜೆಪಿ: 38-54
    ಡಿಎಂಕೆ+ಕಾಂಗ್ರೆಸ್: 175-195
    ಎಎಂಎಂಕೆ+: 1-2
    ಎಂಎನ್‍ಎಂ+: 0-2

    ಟೈಮ್ಸ್ ನೌ-ಸಿ ವೋಟರ್
    ಎಐಎಡಿಎಂಕೆ+ಬಿಜೆಪಿ: 64
    ಡಿಎಂಕೆ+ಕಾಂಗ್ರೆಸ್: 166
    ಎಎಂಎಂಕೆ+: 1
    ಎಂಎನ್‍ಎಂ+: 1

    ಟುಡೇಸ್ ಚಾಣಕ್ಯ
    ಎಐಎಡಿಎಂಕೆ+ಬಿಜೆಪಿ: 46-68
    ಡಿಎಂಕೆ+ಕಾಂಗ್ರೆಸ್: 164-186
    ಎಎಂಎಂಕೆ+: 0
    ಇತರೆ: 0-8

    ಸಿಎನ್‍ಎಕ್ಸ್
    ಎಐಎಡಿಎಂಕೆ+ಬಿಜೆಪಿ: 58-68
    ಡಿಎಂಕೆ+ಕಾಂಗ್ರೆಸ್: 160-170
    ಎಎಂಎಂಕೆ+: 4-6
    ಎಂಎನ್‍ಎಂ+: 0-2

    ಜನ್ ಕೀ ಬಾತ್:
    ಎಐಎಡಿಎಂಕೆ+ಬಿಜೆಪಿ: 102-123
    ಡಿಎಂಕೆ+ಕಾಂಗ್ರೆಸ್: 110-130
    ಎಎಂಎಂಕೆ+: 0
    ಇತರೆ: 1-2

    ರಾಹುಲ್ ಗಾಂಧಿ ಸಾಲು ಸಾಲು ಸಮಾವೇಶ, ವಿದ್ಯಾರ್ಥಿಗಳ ಸಂವಾದ, ಗ್ರಾಮೀಣ ಭಾಗದಲ್ಲಿ ಮಿಂಚಿನ ಸಂಚಾರ ತಮಿಳುನಾಡಿನಲ್ಲಿ ಕಾಂಗ್ರೆಸ್ ಕೈ ಹಿಡಿದೆ. ಆಡಳಿತ ವಿರೋಧಿ ಅಲೆ ಜೊತೆ ಬಿಜೆಪಿಯೊಂದಿಗಿನ ಮೈತ್ರಿ ಅಣ್ಣಾಡಿಎಂಕೆಗೆ ಶಾಕ್ ನೀಡಿದೆ. ಇತ್ತ ಮೊದಲ ಬಾರಿಗೆ ಎಂಎನ್‍ಎಂ ಪಕ್ಷ ಸ್ಥಾಪಿಸಿ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದ ನಟ ಕಮಲ್ ಹಾಸನ್ ಮತ್ತು ಟಿಟಿವಿ ದಿನಕರನ್ ಎಎಂಎಂಕೆ ಖಾತೆ ತರೆಯಲು ಹರಸಾಹಸ ಪಟ್ಟಿವೆ.  ಇದನ್ನೂ ಓದಿ: ಮಸ್ಕಿ, ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ – ಬೆಳಗಾವಿಯಲ್ಲಿ ಮತ್ತೆ ಬಿಜೆಪಿ

    2016ರ ಫಲಿತಾಂಶ: ಒಟ್ಟು 232 ಕ್ಷೇತ್ರಗಳಲ್ಲಿ ಅಣ್ಣಾಡಿಎಂಕೆ 134ರಲ್ಲಿ ಗೆದ್ದು ಅಧಿಕಾರ ರಚಿಸಿತ್ತು. ಡಿಎಂಕೆ 89, ಕಾಂಗ್ರೆಸ್ 08 ಮತ್ತು ಇತರರು ಒಂದರಲ್ಲಿ ಗೆಲುವು ದಾಖಲಿಸಿದ್ದರು. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಮತ್ತೊಮ್ಮೆ ದೀದಿ ಅಧಿಕಾರಕ್ಕೆ

    ಇದನ್ನೂ ಓದಿ: ಕೇರಳದಲ್ಲಿ ಪಿಣರಾಯಿ ‘ವಿಜಯ’ನ್ ಪತಾಕೆ – ಒಂದಂಕಿಗೆ ಸೀಮಿತವಾದ ಬಿಜೆಪಿ

  • ಸೈಕಲ್ ಸವಾರಿಯಲ್ಲಿ ಬಂದು ವೋಟ್ ಹಾಕಿದ ಸ್ಟಾರ್ ನಟ

    ಸೈಕಲ್ ಸವಾರಿಯಲ್ಲಿ ಬಂದು ವೋಟ್ ಹಾಕಿದ ಸ್ಟಾರ್ ನಟ

    ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಸೂಪರ್ ಸ್ಟಾರ್ ವಿಜಯ್ ಸೈಕಲ್‍ನಲ್ಲಿ ಮತಗಟ್ಟೆಗೆ ಬಂದು ವೋಟ್ ಹಾಕುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    ನಟ ವಿಜಯ್ ಅವರು ಸೈಕಲ್‍ನಲ್ಲಿ ಚೆನ್ನೈನ ನೀಲಾಂಕರೈನಲ್ಲಿರುವ ವೆಲ್ಸ್ ಇಂಟರ್ ನ್ಯಾಷನಲ್ ಪ್ರೀ ಸ್ಕೂಲ್ ಮತಗಟ್ಟೆಗೆ ಬಂದಿದ್ದಾರೆ. ಈ ವೇಳೆ ಅಭಿಮಾನಿಗಳು ವಿಜಯ್ ಅವರ ಜೊತೆಯಲ್ಲಿ ಫೋಟೋ ಮತ್ತು ವೀಡಿಯೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಅಭಿಮಾನಿಗಳು ರಸ್ತೆ ಮಧ್ಯದಲ್ಲಿ ಸುತ್ತವರಿದ ಕಾರಣ ಮುಂದೆ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ವಿಜಯ್ ತಮ್ಮ ಸಿಬ್ಬಂದಿಯ ದ್ವಿಚಕ್ರವಾಹನದಲ್ಲಿ ಹಿಂದೆ ಕುಳಿತು ಮತಗಟ್ಟೆಗೆ ಹೋಗಿದ್ದಾರೆ. ಮತಗಟ್ಟೆಯ ಬಳಿ ಹಲವಾರು ಅಭಿಮಾನಿಗಳು ಜಮಾಯಿಸಿದ್ದರು. ಅವರನ್ನು ಚದುರಿಸಲು ಪೊಲೀಸರು ಲಘು ಲಾಠೀ ಚಾರ್ಚ್ ಮಾಡಿದರು.

    ವಿಜಯ್ ಅವರು ಮಾಸ್ಕ್ ಧರಿಸಿಕೊಂಡು ಸೈಕಲ್‍ನಲ್ಲಿ ಮತಗಟ್ಟೆಗೆ ಬಂದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇಂಧನ ದರ ಏರಿಕೆ ಖಂಡಿಸಲು ಸೈಕಲ್‍ನಲ್ಲಿ ಬಂದಿದ್ದಾರೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.