Tag: ತನಿಷಾ ಕುಪ್ಪುಂಡ

  • ನಾಮಿನೇಟ್ ಮಾಡುವ ಅಧಿಕಾರ ಪಡೆದ ಸ್ನೇಹಿತ್

    ನಾಮಿನೇಟ್ ಮಾಡುವ ಅಧಿಕಾರ ಪಡೆದ ಸ್ನೇಹಿತ್

    ಬೆಳಿಗ್ಗೆಯಷ್ಟೇ ತಮಾಷೆಯ ಟಾಸ್ಕ್‌ನಲ್ಲಿ ನಕ್ಕು ನಲಿದಿದ್ದ ಬಿಗ್‌ಬಾಸ್ (Bigg Boss Kannada) ಸ್ಪರ್ಧಿಗಳ ಮುಖದಲ್ಲಿ ನಾಮಿನೇಷನ್ (Nomination) ಹೀಟ್ ಎದ್ದು ಕಾಣುತ್ತಿದೆ. ಅದರ ಒಂದು ಝಲಕ್‌, JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿದೆ.

    ‘ವಿಶೇಷ ಅಧಿಕಾರದ ಅಂಗವಾಗಿ ನಾಮಿನೇಟ್ ಮಾಡುವ ಅಧಿಕಾರ ಸ್ನೇಹಿತ್ ಅವರಿಗಷ್ಟೇ ಇರುತ್ತದೆ’ ಎಂದು ಬಿಗ್‌ಬಾಸ್ ಹೇಳಿದ್ದಾರೆ. ವಿಶೇಷ ಅಧಿಕಾರದ ಆಸನದ ಮೇಲೆ ಸ್ಟೈಲಿಶ್ ಆಗಿ ಕೂತಿರುವ ಸ್ನೇಹಿತ್ (Snehith) ಅವರ ಎದುರು ಮನೆಯ ಸದಸ್ಯರು, ತಮ್ಮನ್ನು ಸೇವ್ ಮಾಡಿ ಎಂದು ಸ್ನೇಹಿತ್ ಅವರಿಗೆ ಕನ್ವಿನ್ಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

    ತನಿಷಾ (Tanisha Kuppunda) ಅವರ ಪರವಾಗಿ ಕಾರ್ತಿಕ್ ವಾದ ಮಾಡಿದ್ದಾರೆ. ಅದಕ್ಕೆ ವಿರುದ್ಧವಾಗಿ ವರ್ತೂರು ಸಂತೋಷ್ ಅವರು, ‘ನಾವಿಲ್ಲಿ ತ್ಯಾಗಮೂರ್ತಿಗಳಾಗೋಕೆ ಬಂದಿಲ್ಲ. ತನಿಷಾನ ನಾನು ಬೇಕಂತ ಹೋಗಿ ತಳ್ಳಿಲ್ಲ. ಹಾಗಾಗಿ ಅವ್ರಿಗೆ ಇನ್ನೊಂದು ಚಾನ್ಸ್ ಸಿಗಲಿ ಎಂದೂ ಹೇಳಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ.

     

    ವರ್ತೂರ್ ಮಾತಿನಿಂದ ಖುಷಿಯಾಗಿ ನಮ್ರತಾ ಕೇಕೆ ಹಾಕಿದ್ದರೆ, ತನಿಷಾಗೆ ಶಾಕ್ ಆಗಿದೆ. ‘ವರ್ತೂರು ಅವರು ಮೊದಲ ದಿನದಿಂದಲೇ ಹೀಗೆ ಮಾತಾಡಿದ್ದರೆ ನಾನು ಒಪ್ಕೋತಾ ಇದ್ದೆ’ ಎಂದು ಕೋಪ ಮಾಡಿಕೊಂಡಿದ್ದಾರೆ. ಸ್ನೇಹಿತ್‌ ಕೈಗೆ ಸಿಕ್ಕಿರುವ ವಿಶೇಷ ಅಧಿಕಾರ ಹೇಗೆ ಕೆಲಸ ಮಾಡುತ್ತದೆ? ಯಾರ ನೆತ್ತಿಮೇಲೆ ತೂಗುಗತ್ತಿಯಾಗುತ್ತದೆ? ಯಾರಿಗೆ ಅಭಯಹಸ್ತವಾಗಿ ಬದಲಾಗುತ್ತದೆ? ಕಾದು ನೋಡಬೇಕು.

  • ‘ಬಿಗ್ ಬಾಸ್’ ಇತಿಹಾಸದಲ್ಲೇ ಟೈಮ್ಸ್ ಸ್ಕ್ವೇರ್‌ನಲ್ಲಿ ಕಾಣಿಸಿಕೊಂಡ ತನಿಷಾ

    ‘ಬಿಗ್ ಬಾಸ್’ ಇತಿಹಾಸದಲ್ಲೇ ಟೈಮ್ಸ್ ಸ್ಕ್ವೇರ್‌ನಲ್ಲಿ ಕಾಣಿಸಿಕೊಂಡ ತನಿಷಾ

    ನ್ನಡದ ಸಿನಿಮಾ ಮತ್ತು ಕಿರುತೆರೆ ನಟಿ ತನಿಷಾ ಕುಪ್ಪಂಡಗೆ (Tanisha Kuppunda) ಟೈಮ್ಸ್ ಸ್ಕ್ವೇರ್  (Times Square) ಮೂಲಕ ಶುಭಾಶಯ ಹೇಳಲಾಗಿದೆ. ಬಿಗ್ ಬಾಸ್ (Bigg Boss Kannada) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬರಿಗೆ ಈ ಮೂಲಕ ಹಾರೈಸಲಾಗಿದೆ. ಇದು ತನಿಷಾಗೆ ಗೊತ್ತಿಲ್ಲದೇ ಇದ್ದರೂ, ಅವರನ್ನು ಪ್ರೀತಿಸುವ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

    ‘ಆಲ್ ದಿ ಬೆಸ್ಟ್ ತನಿಷಾ ಕುಪ್ಪಂಡ. ವಿ ಆರ್ ವಿತ್ ಯು’ ಎಂದು ಟೈಮ್ಸ್ ಸ್ಕ್ವೇರ್ ಬೋರ್ಡ್ ನಲ್ಲಿ ಬರೆಯಿಸಲಾಗಿದ್ದು, ಈ ಮೂಲಕ ಬಿಗ್ ಬಾಸ್ ಮನೆಯಿಂದ ಗೆದ್ದು ಬನ್ನಿ ಎಂದು ಹಾರೈಸಲಾಗಿದೆ. ಈ ಹಿಂದೆ ಸಾಕಷ್ಟು ನಟ ನಟಿಯರ ಹಾಗೂ ಸಿನಿಮಾಗಳ ಪ್ರಚಾರವನ್ನು ಈ ಬೋರ್ಡ್ ಮೇಲೆ ಮಾಡಿದ್ದರೂ, ಇದೇ ಮೊದಲ ಬಾರಿಗೆ ಬಿಗ್ ಬಾಸ್ ಸ್ಪರ್ಧಿಗೆ ಅಂಥದ್ದೊಂದು ಅವಕಾಶ ಸಿಕ್ಕಿದೆ.

    ಟೈಮ್ಸ್ ಸ್ಕ್ವೇರ್ ಜಗತ್ತಿನ ಅತ್ಯಂತ ಜನಪ್ರಿಯ ಸ್ಥಳ. ಅಂದಾಜಿನ ಪ್ರಕಾರ 39.20 ದಶಲಕ್ಷ ಜನರು ಈ ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಭೋಜನ ಪ್ರಿಯರಿಗೆ ಅತ್ಯಂತ ಹೇಳಿ ಮಾಡಿಸಿದ ತಾಣವೂ ಇದಾಗಿದೆ. ನ್ಯೂಯಾರ್ಕ್ ನ ಈ ಟೈಮ್ಸ್ ಸ್ಕ್ವೇರ್ ಕುರಿತಾಗಿ ಸಾಕಷ್ಟು ಪುಸ್ತಕಗಳು ಮತ್ತು ಕಾದಂಬರಿಗಳು ಬಂದಿರುವುದು ಈ ಜಾಗದ ಮತ್ತೊಂದು ವಿಶೇಷ.

    ನ್ಯೂಯಾರ್ಕ್‌ನ ಮ್ಯಾನ್ ಹ್ಯಾಟನ್ ನಗರದ ಕೇಂದ್ರ ದ್ವೀಪ. ಇಲ್ಲಿನ 42ನೇ ಸ್ಟ್ರೀಟ್‍ ನ ಸುತ್ತಮುತ್ತಲಿನ ಪ್ರದೇಶವನ್ನು ಟೈಮ್ಸ್ ಸ್ಕ್ವೇರ್ ಎಂದು ಕರೆಯಲಾಗುತ್ತಿದೆ. ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ಈ ಟೈಮ್ಸ್ ಸ್ಕ್ವೇರ್ ಪ್ರದೇಶದಲ್ಲಿ ಮುನ್ನೂರಕ್ಕೂ ಹೆಚ್ಚು ಭಾರತೀಯ ರೆಸ್ಟೋರೆಂಟ್ ಗಳಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada ವಾರ್: ಶಟಪ್ ಎಂದು ಗರಂ ಆದ ನಮ್ರತಾ

    Bigg Boss Kannada ವಾರ್: ಶಟಪ್ ಎಂದು ಗರಂ ಆದ ನಮ್ರತಾ

    ಬಿಗ್ ಬಾಸ್  (Bigg Boss Kannada) ಮನೆ ಬೆಳಗ್ಗೆ ರಣರಂಗವಾಗಿತ್ತು. ನೆನ್ನೆಯಿಂದಲೇ ನಮ್ರತಾ (Namrata Gowda) ಮತ್ತು ತನಿಷಾ (Tanisha Kuppunda) ನಡುವೆ ಯಾವುದೂ ಸರಿಯಿಲ್ಲ ಎನ್ನುವಂತಿತ್ತು. ಅದು ಇವತ್ತು ನಿಜವಾಗಿದೆ. ಇಬ್ಬರೂ ಜೋರು ಧ್ವನಿಯಲ್ಲೇ ಕಿತ್ತಾಡಿದ್ದಾರೆ. ತನಿಷಾ ಮೇಲೆ ನಮ್ರತಾ ಗರಂ ಆಗಿದ್ದಾರೆ. ಶಟಪ್.. ಮುಚ್ಕೋ ಬಾಯಿ ಎಂದು ಹೇಳುವಷ್ಟರ ಮಟ್ಟಿಗೆ ಜಗಳ ಬೆಳೆದು ನಿಂತಿದೆ.

    ಬಿಗ್ ಬಾಸ್ ಮನೆಯಲ್ಲಿ ಇದೀಗ ಮತ್ತೆ ಜಡೆ ಜಗಳ ಶುರುವಾಗಿದೆ. ತನಿಷಾ ಮತ್ತು ನಮ್ರತಾ ಗೌಡ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದಿದೆ. ಫನ್ ಟಾಸ್ಕ್‌ ಫನ್‌ ಆಗಿ ನಡೆಯಬೇಕಿದ್ದ ಜಾಗದಲ್ಲಿ ನಮ್ರತಾ- ತನಿಷಾ ಕಿತ್ತಾಡಿಕೊಂಡಿದ್ದಾರೆ. ರೊಚ್ಚಿಗೆದ್ದ ನಮ್ರತಾ, ಆ್ಯಸಿಡ್ ಹಾಕಿ ತನಿಷಾ ಬಾಯಿ ತೊಳಿಯಿರಿ ಎಂದು ಕುಟುಕಿದ್ದಾರೆ.

    ಬಿಗ್ ಬಾಸ್ ಎಂದಿನಂತೆ ಈ ವಾರವೂ 2 ತಂಡಗಳಿಗೆ ಟಾಸ್ಕ್ ನೀಡಿದ್ರು. ಭಜರಂಗಿ’ – ‘ಉಗ್ರಂ’ ತಂಡಕ್ಕೆ ‘ಬಿಗ್ ಬಾಸ್’ ಫನ್ ಟಾಸ್ಕ್ ಕೊಟ್ಟಿದ್ದರು. ಅದೇ ‘ಗಲ್ಲಿ ಕ್ರಿಕೆಟ್’ ಇದರ ಅನುಸಾರ, ಎರಡೂ ತಂಡಗಳು ಮೂರು ಓವರ್‌ಗಳ ಗಲ್ಲಿ ಕ್ರಿಕೆಟ್ ಆಡಬೇಕಿತ್ತು. ಎರಡೂ ತಂಡದಿಂದ ತಲಾ ಒಬ್ಬರು ಅಂಪೈರ್‌ ಆಗಬೇಕಿತ್ತು. ‘ಭಜರಂಗಿ’ ತಂಡದಿಂದ ತನಿಷಾ ಅಂಪೈರ್ ಆದರೆ, ‘ಉಗ್ರಂ’ ತಂಡದಿಂದ ನಮ್ರತಾ ಗೌಡ ಅಂಪೈರ್‌ ಆಗಿದ್ದರು.

    ಆಟಕ್ಕೆ ತನಿಷಾ ಎಂಟ್ರಿ ಕೊಟ್ಟ ಕೂಡಲೆ ನಮ್ರತಾ, ತನಿಷಾ ಡಿಸಿಷನ್ ಫೇರ್‌ ಆಗಿರಲಿ ಈಗಲೇ ಹೇಳ್ತಿದ್ದೀನಿ ಎಂದು ಖಡಕ್ ಆಗಿ ಹೇಳಿ ಬಿಟ್ಟರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಶುರುವಾಯಿತು. ನಮ್ರತಾ ಮಾತಿಗೆ ನಿಮ್ಮ ಹತ್ತಿರ ಅನ್ನಿಸಿಕೊಳ್ಳಲು ಬಂದಿಲ್ಲ ಇಲ್ಲಿ. ಇದು ನಾನ್‌ ಸೆನ್ಸ್. ಎಂಟರ್‌ಟೇನ್ಮೆಂಟ್ ಗೇಮ್‌ನ ಹಾಳು ಮಾಡೋಕೆ ನಿಮ್ಮಂಥೋರು ಇರಬೇಕು ಇಲ್ಲಿ ಅಂತ ತನಿಷಾ ತಿರುಗೇಟು ನೀಡಿದ್ರು.

    ಗಲ್ಲಿ ಕ್ರಿಕೆಟ್‌’ನಲ್ಲಿ ಅಂತಿಮವಾಗಿ ‘ಭಜರಂಗಿ’ ತಂಡ ಗೆಲುವು ಸಾಧಿಸಿತು. ಉತ್ತಮ ಬ್ಯಾಟ್‌ಮ್ಯಾನ್ ಪಟ್ಟ ತುಕಾಲಿ ಸಂತುಗೆ ಒಲಿಯಿತು. ಆದರೆ ಆಟ ಮುಗಿದ್ರೂ ನಮ್ರತಾ-ತನಿಷಾ ಕೋಳಿ ಜಳಗಕ್ಕೆ ಬ್ರೇಕ್ ಬಿಳಲಿಲ್ಲ.

    ಇದಾದ ಬಳಿಕ ಡಿಸಿಷನ್ ಫೇರ್‌ ಆಗಿರಲಿ ಈಗಲೇ ಹೇಳ್ತಿದ್ದೀನಿ ಅಂತ ತನಿಷಾ ಮುಂದೆ ಹೇಳಿಬಿಟ್ಟು. ಜಗಳದ ಬಳಿಕ ವಿನಯ್ ಮತ್ತು ಕಾರ್ತಿಕ್ ಮುಂದೆ, ನಾನು ಏನೂ ಹೇಳಿಲ್ಲ ಗುರು ನಮ್ರತಾ ಖ್ಯಾತೆ ತೆಗೆದರು. ಮಾತು ಶುರುವಾದ್ಮೇಲೆ ನಿಲ್ಲಿಸೋದೇ ಇಲ್ಲ ಅಂತ ತನಿಷಾ ಬಗ್ಗೆ ವಿನಯ್ ಗೌಡ ಕಾಮೆಂಟ್ ಮಾಡಿದ್ಮೇಲೆ, ಮಾತನಾಡುವ ಕಾಯಿಲೆ ಅನ್ಸುತ್ತೆ. ಆ್ಯಸಿಡ್ ಹಾಕಿ ಬಾಯಿ ತೊಳಿದುಬಿಡು ಒಂದ್ಸಲಿ ಎಂದು ಕೊಂಕು ನುಡಿದರು ನಮ್ರತಾ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]