Tag: ತನಿಖೆ

  • ಶಿರೂರು ಶ್ರೀ ಕೋಣೆಯಲ್ಲಿ ವಿದೇಶಿ ಮದ್ಯ- ಕಾಂಡೋಮ್ ಸ್ಯಾನಿಟರಿ ಪ್ಯಾಕ್!

    ಶಿರೂರು ಶ್ರೀ ಕೋಣೆಯಲ್ಲಿ ವಿದೇಶಿ ಮದ್ಯ- ಕಾಂಡೋಮ್ ಸ್ಯಾನಿಟರಿ ಪ್ಯಾಕ್!

    ಉಡುಪಿ: ಶೀರೂರು ಸ್ವಾಮೀಜಿಗಳ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಪೊಲೀಸರು ಶೀರೂರು ಮಠವನ್ನು ತಪಾಸಣೆ ಮಾಡಿದ್ದಾರೆ. ಈ ಸಂದರ್ಭ ಪೊಲೀಸರು ಶಾಕ್‍ಗೆ ಒಳಗಾಗಿದ್ದಾರೆ.

    ಶೀರೂರು ಮಠದ ಸ್ವಾಮೀಜಿಗಳ ಆಪ್ತರ ಕೋಣೆಯಲ್ಲಿ ಮದ್ಯ ಬಾಟಲಿಗಳು ಸಿಕ್ಕಿವೆ. ಅವುಗಳ ಮೌಲ್ಯ ಬರೋಬ್ಬರಿ 6 ಲಕ್ಷ ರೂ. ಇದ್ದು, ವಿದೇಶದ ದುಬಾರಿ ಮದ್ಯವಾಗಿದೆ. ಕಾಂಡಮ್, ಸ್ಯಾನಿಟರಿ ಪ್ಯಾಡ್, ಮಹಿಳೆಯರ ಬಟ್ಟೆಗಳೂ ಪತ್ತೆಯಾಗಿದೆ.

    ಸ್ವಾಮೀಜಿ ಚಾರಿತ್ರ್ಯ ಕುರಿತು ಬಹಳ ಹಿಂದೆಯೇ ಚರ್ಚೆಗಳು ನಡೆಯುತ್ತಿತ್ತು. ಆದರೆ ಸ್ವಾಮೀಜಿ ಬದುಕಿದ್ದಾಗ ಈ ಬಗ್ಗೆ ಗೊತ್ತಿರುವವರೂ ಚಕಾರ ಎತ್ತುತ್ತಿರಲಿಲ್ಲ. ಏಳು ಮಠದ ಯತಿಗಳಿಗೆ ತಗಾದೆ ಇದ್ದರೂ ಏನೂ ಮಾಡಲಾಗದೆ ಸುಮ್ಮನಿದ್ದರು. ಇದೀಗ ಎಲ್ಲವೂ ಬೆಳಕಿಗೆ ಬಂದಿದೆ ಎಂದು ಕೃಷ್ಣಮಠದ ಭಕ್ತ ಬಾಲಾಜಿ ರಾಘವೇಂದ್ರರು ಆರೋಪಿಸಿದ್ದಾರೆ.

    ಪ್ರಕರಣ ಸಂಬಂಧ ರಮ್ಯಾ ಶೆಟ್ಟಿ ಬಂಧನ ಆಗಿಲ್ಲ. ಕೆಲವು ಮಾಧ್ಯಮಗಳಲ್ಲಿ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದೆ. ಹೀಗೆ ಬಿಂಬಿಸಿ ಜನರ, ನ್ಯಾಯಾಲಯದ ದಿಕ್ಕು ತಪ್ಪಿಸಬೇಡಿ ಎಂದು ಎಸ್‍ಪಿ ಲಕ್ಷ್ಮಣ ನಿಂಬರ್ಗಿ ಮಾಧ್ಯಮಗಳಿಗೆ ವಿನಂತಿಸಿಕೊಂಡರು.

    ಶೀರೂರು ಸ್ವಾಮೀಜಿಗೆ ಇಬ್ಬರು ಮಹಿಳೆಯರ ಸಂಪರ್ಕವಿತ್ತು. ಹೀಗಾಗಿ ಮೊದಲ ಮಹಿಳೆಯ ಪುತ್ರನನ್ನು ಪೊಲೀಸರು ವಿಚಾರಣೆಗೆ ಒಳಪಡೆಸಿದ್ದಾರೆ. ಆತನು ಮಹತ್ವದ ಮಾಹಿತಿಯನ್ನು ನೀಡಿದ್ದಾನೆ ಎನ್ನಲಾಗಿದೆ. ಡಿವಿಆರ್ ನಾಪತ್ತೆ ವಿಚಾರಕ್ಕೆ ಸಂಬಂಧಿಸದಂತೆ ಆತನ ಜೊತೆಗೆ ಇನ್ನು ಇಬ್ಬರು ಯುವಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮೂವರನ್ನು ನಿನ್ನೆ ಬೆಳಗ್ಗೆಯಿಂದ ಸಂಜೆಯವರೆಗೆ ತನಿಖೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    https://youtu.be/Ssv-pfTMn6Y

  • ಶಿರೂರು ಶ್ರೀ ನಿಗೂಢ ಸಾವು- ಮಠಕ್ಕೆ ಐಜಿಪಿ ಅರುಣ್ ಚಕ್ರವರ್ತಿ ಭೇಟಿ

    ಶಿರೂರು ಶ್ರೀ ನಿಗೂಢ ಸಾವು- ಮಠಕ್ಕೆ ಐಜಿಪಿ ಅರುಣ್ ಚಕ್ರವರ್ತಿ ಭೇಟಿ

    ಉಡುಪಿ: ಶಿರೂರು ಸ್ವಾಮೀಜಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಡುಪಿ ಎಸ್ಪಿ ಕಚೇರಿಯಲ್ಲಿ ಮಹತ್ವದ ಸಭೆ ನಡೆದಿದ್ದು, ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಸಭೆ ನಡೆಸಿದ್ದಾರೆ.

    ದಿನಪೂರ್ತಿ ಉಡುಪಿಯಲ್ಲಿದ್ದ ಐಜಿಪಿ ತನಿಖೆಯ ಪ್ರಗತಿ ಪರಿಶೀಲಿಸಿದ್ದಾರೆ. ಸ್ವಾಮೀಜಿ ನಿಗೂಢ ಸಾವಿನ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಮೂಲ ಮಠಕ್ಕೆ ಮತ್ತು ಉಡುಪಿ ಮಠಕ್ಕೆ ಭೇಟಿ ನೀಡುತ್ತೇನೆ. ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ. ಈ ಪ್ರಕರಣದಲ್ಲಿ ಯಾರನ್ನೂ ಈವರೆಗೆ ಬಂಧಿಸಿಲ್ಲ. ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂದು ಪರಿಶೀಲಿಸಲಿಸಿದ್ದೇನೆ ಎಂದು ಐಜಿಪಿ ಹೇಳಿದರು.

    ತನಿಖಾಧಿಕಾರಿ ಬೆಳ್ಳಿಯಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್ ಜೊತೆ ಚರ್ಚೆ ಮಾಡಿದ್ದೇನೆ. ತನಿಖೆಗೆ ಐದು ತಂಡಗಳ ರಚನೆಯಾಗಿದೆ. ಎಲ್ಲಾ ತಂಡಗಳು ವಿವಿಧ ಆಯಾಮದಲ್ಲಿ ಕೆಲಸ ಮಾಡುತ್ತಿದೆ ಎಂದರು.

    ಸಭೆಯ ನಂತರ ಶಿರೂರು ಮೂಲ ಮಠಕ್ಕೆ ಐಜಿಪಿ ಭೇಟಿ ನೀಡಿದ್ದರು. ಶಿರೂರು ಶ್ರೀ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವದ್ದಾಗಿದೆ. ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಜೊತೆ ಮೂಲಮಠಕ್ಕೆ ಭೇಟಿಕೊಟ್ಟ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಐಜಿ ಶಿರೂರು ಶ್ರೀಗಳ ಬೃಂದಾವನವನ್ನು ವೀಕ್ಷಿಸಿದರು.

    ಮೂಲ ಮಠದಲ್ಲಿ ನಡೆಯುವ ತನಿಖೆ ಕುರಿತು ಎಸ್ಪಿ ಮೂಲಕ ಮಾಹಿತಿ ಪಡೆದ ಐಜಿ, ಸ್ವಾಮೀಜಿ ಆಸ್ಪತ್ರೆಗೆ ತೆರಳಿದ ದಿನ ಯಾರೆಲ್ಲ ಇದ್ದರು, ಅವರ ಹೇಳಿಕೆಗಳೇನು ಅಂತ ಮಾಹಿತಿ ಕಲೆ ಹಾಕಿದ್ದಾರೆ. ಶಿರೂರು ನಗರದ ಮಠಕ್ಕೆ ಬಂದು ಅಲ್ಲೂ ಪರಿಶೀಲನೆ ನಡೆಸಿದ್ದಾರೆ.

  • ಶಿರೂರು ಮಠದ ಆವರಣದಲ್ಲಿರೋ ಬಾವಿಯಲ್ಲಿ ಮದ್ಯದ ಬಾಟಲಿ ಪತ್ತೆ!

    ಶಿರೂರು ಮಠದ ಆವರಣದಲ್ಲಿರೋ ಬಾವಿಯಲ್ಲಿ ಮದ್ಯದ ಬಾಟಲಿ ಪತ್ತೆ!

    ಉಡುಪಿ: ಇಲ್ಲಿನ ಶಿರೂರು ಮಠದ ಆವರಣದಲ್ಲಿರುವ ಬಾವಿಯಲ್ಲಿ ಮದ್ಯದ ಬಾಟಲ್ ಪತ್ತೆಯಾಗಿದ್ದು, ಇದೀಗ ತನಿಖೆ ಚುರುಕುಗೊಂಡಿದೆ.

    ಶಿರೂರು ಶ್ರೀಗಳ ಅನುಮನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದೆ. ಈ ವೇಳೆ ಜಗದೀಶ್ ಪೂಜಾರಿ ಎಂಬವರು ಶಿರೂರು ಮಠ ಮತ್ತು ಕೃಷ್ಣಮಠದ ಪಕ್ಕದಲ್ಲಿರುವ ಬಾವಿಯಲ್ಲಿ ಮದ್ಯದ ಬಾಟಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಶಿರೂರು ಮಠದ ಬಾವಿಯಲ್ಲಿ ಪೊಲೀಸರು ಹುಡುಕಾಟ ನಡೆಸಿದ ವೇಳೆ ಮದ್ಯದ ಬಾಟಲ್ ಇರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಉಡುಪಿ ಶಿರೂರು ಮಠದ ಸಿಸಿಟಿವಿ ಡಿವಿಆರ್ ನಾಪತ್ತೆ!

    ಕೂಡಲೇ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ, ಬಾವಿಯಲ್ಲಿದ್ದ ಕೆಲವು ವಸ್ತುಗಳನ್ನು ಕೊಕ್ಕೆಯೊಂದರ ಮೂಲಕ ಮೇಲೆತ್ತಿ ಕೊಂಡೊಯ್ದಿದ್ದಾರೆ. ಸಂಗ್ರಹಿಸಿದ ವಸ್ತುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಭದ್ರತೆಗೊಳಿಸಿ ರವಾನೆ ಮಾಡಲಾಗಿದೆ.

    ಇನ್ನು ಸೋಮವಾರವಷ್ಟೇ ಮಠದ ಮುಂಭಾಗದಲ್ಲಿದ್ದ ಸಿಸಿಟಿವಿ ಡಿವಿಆರ್ ನಾಪತ್ತೆಯಾಗಿದೆ ಎನ್ನಲಾಗುತ್ತಿತ್ತು. ಆದ್ರೆ ಇದೀಗ ಸಿ.ಸಿ ಕ್ಯಾಮರಾದ ಡಿ.ವಿ.ಆರ್ ಪತ್ತೆಯಾಗಿದೆ ಅಂತ ಹೇಳಲಾಗುತ್ತಿದ್ದು, ಆದ್ರೆ ಪೊಲೀಸರು ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡುತ್ತಿಲ್ಲ. ಇದನ್ನೂ ಓದಿ: ಶಿರೂರು ಮೂಲ ಮಠದಲ್ಲಿ ಸಿಕ್ಕಿದ್ದು ಪಾಯ್ಸನ್ ಅಲ್ಲ, ಜ್ಯೂಸ್ ಬಾಟಲ್!

  • ಶಿರೂರು ಶ್ರೀ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್!

    ಶಿರೂರು ಶ್ರೀ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್!

    ಉಡುಪಿ: ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದೆ.

    ಶಿರೂರು ಶ್ರೀಗೆ ಭೂ ಮಾಫಿಯಾ ಜೊತೆ ಸಂಪರ್ಕ ಇದೆ ಎನ್ನಲಾಗುತ್ತಿದ್ದು, ಈ ಕುರಿತು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಯುತ್ತಿದೆ. ಮಠ ಸಂಘರ್ಷ, ಭೂ ವ್ಯವಹಾರ, ಅನೈತಿಕ ಸಂಬಂಧದ ವಿಚಾರದಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ತನಿಖೆಗೆ ಉಡುಪಿ ಎಸ್ ಪಿ 5 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಇದನ್ನೂ ಓದಿ: ಊಟ ನೀಡ್ತಿದ್ದ ಮಹಿಳೆ ಮೈ ಮೇಲೆ ಶಿರೂರು ಶ್ರೀಗಳ ಆಭರಣಗಳು

    ಉಡುಪಿಯಲ್ಲಿರುವ ಪ್ರಮುಖ ಉದ್ಯಮಿ ಹಾಗೂ ಬಿಲ್ಡರ್ ಗಳ ತನಿಖೆ ನಡೆಸಲಾಗುತ್ತಿದೆ. ಇದರ ಜೊತೆಗೆ ಸ್ವಾಮೀಜಿಗೆ 26 ಕೋಟಿ ರೂ. ವಂಚನೆ ನಡೆದಿದೆ ಅನ್ನೋ ವಿಡಿಯೋ ಮತ್ತು ಆಡಿಯೋ ವೈರಲ್ ಆಗಿದ್ದು, ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಸ್ವಾಮೀಜಿಗಳ ರಿಯಲ್ ಎಸ್ಟೇಟ್ ಉದ್ಯಮ ಪಾಲುದಾರರ ತೀವ್ರ ವಿಚಾರಣೆ ಆರಂಭವಾಗಿದೆ. ಇದನ್ನೂ ಓದಿ: ಶಿರೂರು ಶ್ರೀಗೆ ಇಬ್ಬರು ಉದ್ಯಮಿಗಳಿಂದ ಮೋಸ- ಬರೋಬ್ಬರಿ 26 ಕೋಟಿ ರೂ. ದೋಖಾ

    ಸ್ವಾಮೀಜಿಗಳ ಬಳಿ ನೂರಾರು ಎಕರೆ ಜಮೀನು ಇದೆ. ಸುಮಾರು 30 ಕೋಟಿ ರೂ. ವೆಚ್ಚದ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಕಾರ್ಯದಲ್ಲಿವೆ. ಈ ವಿಚಾರದಲ್ಲಿಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮುಂಬೈ ಮೂಲದ ಉದ್ಯಮಿಯೊಬ್ಬರ ಜೊತೆ ಈ ಕಾಂಪ್ಲೆಕ್ಸ್ ನಿರ್ಮಾಣ ಮತ್ತು ಸೇಲ್ ಬಗ್ಗೆ ಸಾಕಷ್ಟು ಚರ್ಚೆಗಳು, ಜಟಾಪಟಿ ನಡೆದಿತ್ತು ಅನ್ನೋ ಮಾತುಗಳು ಕೂಡ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿಯೂ ಕೂಡ ಪೊಲೀಸರು ಈಗಾಗಲೇ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನಕ್ಕೆ ಟ್ವಿಸ್ಟ್!

    ಬಹು ಅಂಗಾಂಗ ವೈಫಲ್ಯದಿಂದ ತೀವ್ರ ಅಸ್ವಸ್ಥರಾಗಿದ್ದ ಶ್ರೀಗಳು ಗುರುವಾರ ಬೆಳಗ್ಗೆ ಹರಿಪಾದ ಸೇರಿದ್ದರು. ಶ್ರೀಗಳ ಸಾವಿನ ಬಳಿಕ ಅವರಿಗೆ ವಿಷಪ್ರಾಶನ ಮಾಡಿಸಲಾಗಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಇದಕ್ಕೆ ಪೂರಕವಾಗಿರುವಂತೆ ಕೆಎಂಸಿ ಆಸ್ಪತ್ರೆಯ ವೈದ್ಯರೂ ದೇಹದಲ್ಲಿ ವಿಷಕಾರಕ ಅಂಶ ಪತ್ತೆಯಾಗಿದೆ ಅಂದಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.

    ದೂರು ದಾಖಲಿಸಿಕೊಂಡಿರೋ ಪೊಲೀಸರು ಶ್ರೀಗಳಿಗೆ ದಿನಾಲೂ ಫಲಾಹಾರ ತರುತ್ತಿದ್ದ ಮಹಿಳೆಯನ್ನು ಉಡುಪಿ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.  ಇನ್ನು ಶ್ರೀಗಳ ಸಾವಿನ ಸಂಬಂಧ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿಸಿದ್ದ ಅವರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯರನ್ನು ಕೂಡಾ ವಿಚಾರಣೆ ನಡೆಸಲಾಗಿದೆ.

  • ಬೆಂಗಳೂರಿನ ಪಿ.ಜಿ. ನಿವಾಸಿಗಳೇ ಹುಷಾರ್!

    ಬೆಂಗಳೂರಿನ ಪಿ.ಜಿ. ನಿವಾಸಿಗಳೇ ಹುಷಾರ್!

    ಬೆಂಗಳೂರು: ಖತರ್ನಾಕ್ ಕಳ್ಳನೊಬ್ಬ ಹಾಡಹಗಲೇ ಪಿಜಿಗೆ ನುಗ್ಗಿ ಕೈಗೆ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ಕದ್ದು ಕ್ಷಣಾರ್ಧದಲ್ಲಿ ಪರಾರಿಯಾದ ಆದ ಘಟನೆ ಆರ್ ಆರ್ ನಗರದಲ್ಲಿ ನಡೆದಿದೆ.

    ಶಿವಮೊಗ್ಗ ಮೂಲದ ಯಶುರಾಜು ಎಂಬಾತನೇ ಕಳ್ಳ ಎಂದು ಗುರುತಿಸಲಾಗಿದೆ. ಜುಲೈ 10ರಂದು ಕಳ್ಳತನ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಉತ್ತರಹಳ್ಳಿ ಮುಖ್ಯರಸ್ತೆ ಚನ್ನಸಂದ್ರದಲ್ಲಿರುವ ಚೈತು ಪಿಜಿ ಯಲ್ಲಿ ಖತರ್ನಾಕ್ ಕಳ್ಳನೊಬ್ಬ ಹಾಡಗಲೇ ಪಿಜಿಗೆ ನುಗ್ಗಿ ಇಡೀ ರೂಂಗಳನ್ನು ಜಾಲಾಡುತ್ತಾನೆ. ನಂತರ ವಾಲ್ ರೋಬ್ ಲಾಕ್ ಹೊಡೆದು, ಕೈಗೆ ಸಿಗುವ ಬೆಲೆ ಬಾಳುವ ವಸ್ತುಗಳನ್ನು ಮತ್ತು ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್, ವಾಚ್ ಎಗರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ. ಈ ಎಲ್ಲ ದೃಶ್ಯಾವಳಿಗಳು ಸಂಪೂರ್ಣವಾಗಿ ಪಿಜಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.

    ಈ ಘಟನೆ ಕುರಿತು ಆರ್ ಆರ್ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಗೆ ಜಾಲ ಬೀಸಿದ್ದಾರೆ.

  • ಬಾರ್ ಮುಂಭಾಗ ರಾಶಿಗಟ್ಟಲೇ ಆಧಾರ್ ಕಾರ್ಡ್ ಪತ್ತೆ – ತನಿಖೆಗೆ ಆದೇಶ

    ಬಾರ್ ಮುಂಭಾಗ ರಾಶಿಗಟ್ಟಲೇ ಆಧಾರ್ ಕಾರ್ಡ್ ಪತ್ತೆ – ತನಿಖೆಗೆ ಆದೇಶ

    ದಾವಣಗೆರೆ: ನಗರದ ಬಾರ್ ವೊಂದರ ಮುಂಭಾಗದಲ್ಲಿ ಪತ್ತೆಯಾಗಿದ್ದ ರಾಶಿಗಟ್ಟಲೆ ಆಧಾರ್ ಕಾರ್ಡ್ ಕುರಿತು ಪಬ್ಲಿಕ್ ಟಿವಿ ವಿಸ್ತೃತವಾಗಿ ವರದಿ ಮಾಡಿತ್ತು. ಸದ್ಯ ವರದಿಯ ಬಳಿಕ ಎಚ್ಚೆತ್ತುಕೊಂಡ ಅಂಚೆ ಇಲಾಖೆ ಅಧಿಕಾರಿಗಳು ಘಟನೆ ಕುರಿತು ತನಿಖೆ ಆದೇಶ ನೀಡಿದ್ದಾರೆ.

    ನಗರದ ಪಿಬಿ ರಸ್ತೆಯಲ್ಲಿರುವ ಭವಾನಿ ಬಾರ್ ಮುಂಭಾಗ ಆಧಾರ್ ಕಾರ್ಡ್ ಗಳು ಪತ್ತೆಯಾಗಿದ್ದವು. ಈ ವೇಳೆ ನಕಲಿ ಆಧಾರ ಕಾರ್ಡ್ ಜಾಲ ಇರುವ ಬಗ್ಗೆ ಸಾರ್ವಜನಿಕರಿಂದ ಶಂಕೆ ವ್ಯಕ್ತವಾಗಿತ್ತು. ಸಾರ್ವಜನಿಕ ಶಂಕೆಯ ಹಿನ್ನೆಲೆಯಲ್ಲಿ ಸದ್ಯ ಅಧಿಕಾರಿಗಳು ತನಿಖೆಗೆ ಆದೇಶ ನೀಡಿದ್ದಾರೆ.

    ಬಾರ್ ಮುಂದೇ ಕಂಠ ಪೂರ್ತಿ ಕುಡಿದು ಬಿದ್ದಿದ್ದ ವ್ಯಕ್ತಿಯೊಬ್ಬರ ಚೀಲದಿಂದ ಆಧಾರ್ ಕಾರ್ಡ್ ಗಳು ಬಾರ್ ಮುಂದೇ ಬಿದ್ದಿದ್ದವು. ಸದ್ಯ ಆ ವ್ಯಕ್ತಿ ಅಂಚೆ ಇಲಾಖೆಯ ಸಿಬ್ಬಂದಿಯ ಅಥವಾ ಬೇರೆ ವ್ಯಕ್ತಿಯ ಎಂದು ಅಂಚೆ ಇಲಾಖೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ. ಬಾರ್ ಮುಂಭಾಗ ಸಿಕ್ಕ 37 ಆಧಾರ್ ಕಾರ್ಡ್ ಗಳಲ್ಲಿ ಒಂದಕ್ಕೆ ಮಾತ್ರ ಪೋಸ್ಟಲ್ ಸ್ಟಾಂಪ್ ಹಚ್ಚಿದ್ದು ಕಂಡು ಬಂದಿದೆ. ಆಧಾರ್ ಕಾರ್ಡ್ ಹಂಚಿಕೆ ಮಾಡುವ ಮುನ್ನ ಅಕ್ರಮ ನಡೆದಿರಬಹುದು ಎಂದು ಸದ್ಯ ಅನುಮಾನ ವ್ಯಕ್ತವಾಗಿದೆ. ಘಟನೆ ಕುರಿತು ತನಿಖೆ ನಡೆದ ಬಳಿಕವೇ ಘಟನೆ ಹಿಂದಿನ ಸತ್ಯತೆ ಬಯಲಿಗೆ ಬರಲಿದೆ.

  • ಸಿಎಂ ಎಚ್‍ಡಿಕೆ ಸಂಬಂಧಿ, ಮೈಸೂರು ವಿವಿ ಕುಲಪತಿಗೆ ಸಂಕಷ್ಟ!

    ಸಿಎಂ ಎಚ್‍ಡಿಕೆ ಸಂಬಂಧಿ, ಮೈಸೂರು ವಿವಿ ಕುಲಪತಿಗೆ ಸಂಕಷ್ಟ!

    ಮೈಸೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಸಂಬಂಧಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಸಲಹೆಗಾರನಾಗಲು ಸಿದ್ಧರಾಗಿರುವ ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ.

    ರಂಗಪ್ಪ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಆಗಿದ್ದ ವೇಳೆ 2016 ರಲ್ಲಿ ನಡೆದ 124 ಬೋಧಕೇತರ ವರ್ಗದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಅದರಲ್ಲಿ ಪ್ರೊ.ಕೆ.ಎಸ್. ರಂಗಪ್ಪ ಎಲ್ಲಾ ನಿಯಾಮಾವಳಿಗಳನ್ನು ಗಾಳಿಗೆ ತೂರಿದ್ದಾರೆ. ಅವರ ಮೇಲೆ ಕ್ರಮ ಕೈಗೊಂಡು ಶಿಕ್ಷಿಸಿ ಎಂದು ಡಾ.ಎಂ.ಆರ್. ನಿಂಬಾಳ್ಕಾರ್ ನೇತೃತ್ವದ ತನಿಖಾ ಸಮಿತಿಯೂ ರಾಜ್ಯಪಾಲರಿಗೆ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

    ಈ ವರದಿಯಲ್ಲಿ ತಕ್ಷಣವೇ ಅಕ್ರಮವಾಗಿ ನೇಮಕಗೊಂಡಿರುವ 124 ಬೋಧಕೇತರ ಹುದ್ದೆ ರದ್ದು ಮಾಡಬೇಕು ಹಾಗೂ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ರಾಜಣ್ಣ ಕೂಡ ತಪ್ಪು ಮಾಡಿದ್ದು, ಅವರನ್ನು ಶಿಕ್ಷಿಸಿ ಎಂದು ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸಿನ ಅನುಸಾರ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ವಿ.ಆರ್. ರಮೇಶ್ ಜೂನ್ 18 ರಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ತನಿಖಾ ವರದಿ ಆಧರಿಸಿ ಇನ್ನೂ 30 ದಿನದ ಒಳಗೆ ಕ್ರಮ ಜರುಗಿಸಿ 45 ದಿನದ ಒಳಗೆ ವರದಿ ಕಳುಹಿಸಿ ಎಂದು ಸೂಚಿಸಿದ್ದಾರೆ.

    ಈ ಪತ್ರ ಆಧರಿಸಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೈಸೂರು ವಿವಿಗೆ ಪತ್ರ ಬರೆದು ತನಿಖಾ ವರದಿ ಆಧರಿಸಿ ಭ್ರಷ್ಟಾಚಾರದಲ್ಲಿ ಭಾಗವಹಿಸಿರುವ ಎಲ್ಲರನ್ನು ಗುರುತಿಸಿ ಒಂದು ತಿಂಗಳ ಒಳಗೆ ಎಲ್ಲರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಜೊತೆಗೆ ಅಕ್ರಮ ನೇಮಕಾತಿಗಳನ್ನು ರದ್ದು ಗೊಳಿಸಬೇಕು. ಈ ಎಲ್ಲಾ ಕ್ರಮ ಕೈಗೊಂಡು ಒಂದು ತಿಂಗಳ ಒಳಗೆ ಸರ್ಕಾರಕ್ಕೆ ವರದಿ ನೀಡಬೇಕೆಂದು ಸೂಚಿಸಿದ್ದಾರೆ. ಆದ್ದರಿಂದ ಪ್ರೊ. ರಂಗಪ್ಪಗೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ತನಿಖಾ ವರದಿಯಲ್ಲಿ ಪ್ರೊ. ರಂಗಪ್ಪ ತಪ್ಪು ಮಾಡಿರುವುದು ಸ್ಪಷ್ಟವಾಗಿ ನಮೂದಾಗಿರುವ ಕಾರಣ ರಂಗಪ್ಪ ಈ ಅಕ್ರಮದ ಸುಳಿಯಿಂದ ಬಚಾವಾಗುವುದು ಕಷ್ಟವಾಗಿದೆ.

  • ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣ- ಪೊಲೀಸರ ವಿರುದ್ಧವೇ ಆಕ್ರೋಶ!

    ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣ- ಪೊಲೀಸರ ವಿರುದ್ಧವೇ ಆಕ್ರೋಶ!

    ಮಂಗಳೂರು: ಕಳೆದ ವರ್ಷ ಜುಲೈನಲ್ಲಿ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದ್ದ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಸಾವು ಪ್ರಕರಣ ಮತ್ತೆ ಚಿಗುರಿಕೊಳ್ಳುವ ಲಕ್ಷಣ ಕಂಡು ಬಂದಿದೆ.

    ಪ್ರಕರಣ ನಡೆದು ವರ್ಷವಾದರೂ ವಿದ್ಯಾರ್ಥಿನಿ ಸಾವಿನ ಬಗ್ಗೆ ಇನ್ನೂ ಫೈನಲ್ ರಿಪೋರ್ಟ್ ತಯಾರಿಸದ ಪೊಲೀಸರ ವಿರುದ್ಧವೇ ಈಗ ಆಕ್ರೋಶ ಎದ್ದಿದೆ. ಜಸ್ಟಿಸ್ ಫಾರ್ ಕಾವ್ಯಾ ಹೋರಾಟ ಸಮಿತಿ ಸ್ಥಳೀಯ ಪೊಲೀಸರ ತನಿಖೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಆರ್‍ಟಿಐ ಕಾಯ್ದೆಯಡಿ ಬಯಲಾಯ್ತು ಆಳ್ವಾಸ್ ಸಂಸ್ಥೆಯ ಸ್ಫೋಟಕ ರಹಸ್ಯ

    ಅಷ್ಟೇ ಅಲ್ಲದೇ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದೆ. ಒಂದು ತಿಂಗಳ ಒಳಗೆ ಸಿಓಡಿ ತನಿಖೆಗೆ ಒಪ್ಪಿಸದಿದ್ದರೆ, ಕಾವ್ಯಾ ಕೊಲೆಯಾದ ಜುಲೈ 20 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ. ಇದನ್ನೂ ಓದಿ:  ಕಾವ್ಯಾ ಅಸಹಜವಾಗಿ ಸಾವನ್ನಪ್ಪಿದ್ದಾಳೆ: ಉಗ್ರಪ್ಪ ಕಾಲೇಜಿಗೆ ಭೇಟಿ ನೀಡಿದಾಗ ಸಿಕ್ಕಿರೋ ಸ್ಫೋಟಕ ಮಾಹಿತಿ ಇಲ್ಲಿದೆ

    ಈ ಬಗ್ಗೆ ಸಾಂಕೇತಿಕ ಪ್ರತಿಭಟನೆ ನಡೆಸಿ, ಸಮಿತಿ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ. ಶಿಕ್ಷಣ ಸಂಸ್ಥೆಯ ಪ್ರಭಾವಿಗಳಿಗೆ ಮಣಿದು ತನಿಖೆಯನ್ನು ವಿಳಂಬಿಸುತ್ತಿದ್ದಾರೆಯೇ ಅನ್ನೋ ಆರೋಪ ಕೇಳಿಬಂದಿದೆ.

  • ತನಿಖೆ ನಡೆಸಿ ಸೋತವರಿಂದ ನಮ್ಮ ವಿರುದ್ಧ ಹತಾಷೆಯ ಮಾತು: ಬಿಸ್‍ವೈಗೆ ಎಚ್‍ಡಿ ರೇವಣ್ಣ ತಿರುಗೇಟು

    ತನಿಖೆ ನಡೆಸಿ ಸೋತವರಿಂದ ನಮ್ಮ ವಿರುದ್ಧ ಹತಾಷೆಯ ಮಾತು: ಬಿಸ್‍ವೈಗೆ ಎಚ್‍ಡಿ ರೇವಣ್ಣ ತಿರುಗೇಟು

    ಬೆಂಗಳೂರು: ಸದನದಲ್ಲಿ ತಮ್ಮ ವಿರುದ್ಧ ಬಿಎಸ್ ಯಡಿಯೂರಪ್ಪ ಅವರು ಮಾಡಿರುವ ಅರೋಪಗಳಿಗೆ ದಾಖಲೆ ಬಿಡುಗಡೆ ಮಾಡಲಿ. ಆದರೆ ಅವರ ಹೇಳಿಕೆಗಳನ್ನು ಗಮನಿಸಿದರೆ ಬಿಎಸ್‍ವೈ ಹತಾಶೆಯಿಂದ ಹೇಳಿಕೆ ನೀಡಿದ್ದಾರೆ ಎನಿಸುತ್ತದೆ ಎಂದು ಎಚ್‍ಡಿ ರೇವಣ್ಣ ತಿರುಗೇಟು ನೀಡಿದ್ದಾರೆ.

    ಬಿಎಸ್‍ವೈ ಅವರ ಭಾಷಣದ ಕುರಿತು ಮಾತನಾಡಿದ ಅವರು, ನಮ್ಮ ವಿರುದ್ಧ ಬಿಎಸ್ ಯಡಿಯೂರಪ್ಪ ಅವರು ಅಕ್ರಮ ಮನೆ ಹಂಚಿಕೆ ಆರೋಪ ಮಾಡಿದ್ದಾರೆ. ಈ ಆರೋಪಗಳಿಗೆ ಅವರು ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಈ ಕುರಿತು ಅವರೇ ತನಿಖೆ ಮಾಡಿಸಿ ಸೋತಿದ್ದಾರೆ. ಈಗ ಹತಾಶರಾಗಿ ಮತ್ತೆ ಆರೋಪ ಮಾಡಿದ್ದಾರೆ. ಬೇಕಾದರೆ ಇನ್ನೊಮ್ಮೆ ತನಿಖೆ ಮಾಡಿಸಲಿ ಸವಾಲು ಹಾಕಿದರು.

    ಇದೇ ವೇಳೆ ಬಿಎಸ್ ವೈ ಅವರ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ಇಂದಿನ ಭಾಷಣ ವಿರೋಧ ಪಕ್ಷದ ನಾಯಕನ ಭಾಷಣ ಆಗಿರಲಿಲ್ಲ. ಅವರ ಭಾಷಣ ನೋಡಿದಾಗ ಅಯ್ಯೋ ಅನಿಸಿತು. ಅವರ ವಿಕೃತ ಮನಸ್ಸನ್ನು ಪ್ರದರ್ಶನ ಮಾಡಿದ್ದಾರೆ. ಬಿಎಸ್‍ವೈ ಅವರಿಗೆ ವೈರಿ ಅಂದರೆ ನಾನು ಹಾಗೂ ದೇವೇಗೌಡರು ಎಂದರು.

    ಕಾಂಗ್ರೆಸ್ ಜೊತೆ ಸರ್ಕಾರ ರಚನೆಯಲ್ಲಿ ತಂದೆ ದೇವೇಗೌಡರ ಪಾತ್ರ ಮಹತ್ವದ್ದು. ಬಿಜೆಪಿ ಜೊತೆ ನಾನು ಹೋದರೆ ಕುಟುಂಬದಿಂದ ಹೊರ ಹಾಕುವುದಾಗಿ ನನಗೆ ಹೇಳಿದ್ದರು. ದೇವೇಗೌಡರು ಸುಮ್ಮನಾಗಿದ್ದಾರೆ ಬಿಜೆಪಿ ಜೊತೆ ಕುಮಾರಸ್ವಾಮಿ ಬರುತ್ತಿದ್ದರು ಎಂಬುವುದು ಅವರ ಮನಸ್ಸಿನ ಇರಬೇಕು. ಹಾಗಾಗಿ ದೇವೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು ನನ್ನ ವಿರುದ್ಧ ವಿಕೃತಿ ಮೆರೆದಿದ್ದಾರೆ ಎಂದು ಹೇಳಿದರು.

  • ಜೇಡವನ್ನು ಸುಡಲು ಹೋಗಿ ತನ್ನ ಮನೆಯನ್ನೇ ಸುಟ್ಟುಕೊಂಡ!

    ಜೇಡವನ್ನು ಸುಡಲು ಹೋಗಿ ತನ್ನ ಮನೆಯನ್ನೇ ಸುಟ್ಟುಕೊಂಡ!

    ವಾಷಿಂಗ್ಟನ್: ವ್ಯಕ್ತಿಯೊಬ್ಬ ಜೇಡವನ್ನು ಕೊಲ್ಲಲು ಹೋಗಿ ಕೊನೆಗೆ ತನ್ನ ಮನೆಯನ್ನೇ ಸುಟ್ಟುಕೊಂಡು ಎಡವಟ್ಟು ಮಾಡಿಕೊಂಡಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

    ಭಾನುವಾರ ಅಮೆರಿಕದ ಉತ್ತರ ಕ್ಯಾಲಿಫೋನಿರ್ಯಾದ ರೆಡಿಂಗ್ ನಲ್ಲಿರುವ ನಿವಾಸದಲ್ಲಿ ಈ ಘಟನೆ ನಡೆದಿದೆ. ಜೇಡಕ್ಕೆ ಬೆಂಕಿ ನೀಡಿ ಕೊಲ್ಲಲು ಯತ್ನಿಸಿದ್ದಾಗ ನನ್ನ ಮನೆ ಕೂಡ ಬೆಂಕಿಗೆ ಆಹುತಿಯಾಗಿದೆ ಎಂದು ನಿವಾಸಿ ಲಿಂಡ್ಸೆ ವಿಸ್ಗರ್ವರ್ ತಿಳಿಸಿದ್ದಾರೆ.

    ದೊಡ್ಡ ಗಾತ್ರದಲ್ಲಿದ್ದ ಜೇಡವನ್ನು ಕೊಲ್ಲಲು ಹೋದಾಗ ಮನೆಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಗೆ ಕಾರಣವೇನು ಹಾಗೂ ಅದರಿಂದ ಮನೆಗೆ ಹೇಗೆ ವ್ಯಾಪಿಸಿತು ಎನ್ನುವುದರ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಜೇಡದ ಬಗ್ಗೆ ಇರುವ ಮಾಹಿತಿಯೂ ತನಿಖೆಯ ಒಂದು ಭಾಗ ಎಂದು ರೆಡಿಂಗ್ ಅಗ್ನಿಶಾಮಕ ದಳದ ಮುಖ್ಯಸ್ಥ ಹೇಳಿದ್ದಾರೆ.

    ಬೆಂಕಿಯಲ್ಲಿ ಉರಿಯುತ್ತಿದ್ದ ಜೇಡ ತಕ್ಷಣ ಹಾಸಿಗೆಯ ಮೇಲೆ ಬಿತ್ತು. ಹಾಸಿಗೆಗೆ ಬೆಂಕಿ ಬಿದ್ದ ಬಳಿಕ ಕೊಠಡಿಗೆ ವ್ಯಾಪಿಸಿ ನಂತರ ಕೆನ್ನಾಲಿಗೆ ಮನೆಗೆ ವ್ಯಾಪಿಸಿತ್ತು. ಕೂಡಲೇ ಬೆಂಕಿಯನ್ನು ನಂದಿಸಲು ಅಲ್ಲಿದ್ದ ಸ್ಥಳೀಯರು ಹರಸಾಹಸಪಟ್ಟರೂ ಯಾವುದೇ ಪ್ರಯೋಜನವಾಗಿಲ್ಲ.

    ಅಗ್ನಿ ಅವಘಡದಿಂದ ಅಂದಾಜು 11 ಸಾವಿರ ಡಾಲರ್(ಅಂದಾಜು 7 ಲಕ್ಷ ರೂ.) ನಷ್ಟವಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 20 ನಿಮಿಷಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.