Tag: ತಂಬಾಕು

  • ಇಂದು ವಿಶ್ವ ತಂಬಾಕು ದಿನ – ಸ್ಯಾಂಡ್ ಆರ್ಟ್ ಮೂಲಕ ಸಂದೇಶ ಕೊಟ್ಟ ಕಲಾವಿದ

    ಇಂದು ವಿಶ್ವ ತಂಬಾಕು ದಿನ – ಸ್ಯಾಂಡ್ ಆರ್ಟ್ ಮೂಲಕ ಸಂದೇಶ ಕೊಟ್ಟ ಕಲಾವಿದ

    ನವದೆಹಲಿ: ಮೇ 31 ರಂದು ವಿಶ್ವ ತಂಬಾಕು ದಿನ ಎಂದು ಆಚರಣೆ ಮಾಡುತ್ತೇವೆ. ಈ ದಿನ ತಂಬಾಕು ಸೇವನೆ ಮಾಡುವವರಿಗೆ ತನ್ನ ಮರಳು ಶಿಲ್ಪ ಕಲೆಯ ಮೂಲಕ ಕಲಾವಿದ ಸುದರ್ಶನ್ ಪಾಟ್ನಾಯಕ್ ಅವರು ಒಳ್ಳೆಯ ಸಂದೇಶ ನೀಡಿದ್ದಾರೆ.

    ಒಡಿಶಾದ ಜನಪ್ರಿಯ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಾಟ್ನಾಯಕ್ ಅವರು ಮರಳಿನಲ್ಲಿ ಮೇರುಕೃತಿಗಳನ್ನು ತಯಾರು ಮಾಡುವುದರಲ್ಲಿ ಹೆಸರುವಾಸಿಯಾಗಿದ್ದಾರೆ. ಇಂದು ವಿಶ್ವ ತಂಬಾಕು ದಿನ ಇರುವ ಕಾರಣ ತಮ್ಮ ಮರಳು ಶಿಲ್ಪ ಕಲೆಯ ಮೂಲಕ “ತಂಬಾಕು ಸೇವನೆ ಬಿಡಿ ಜೀವ ಉಳಿಸಿಕೊಳ್ಳಿ” ಎಂಬ ಸಂದೇಶವನ್ನು ನೀಡಿದ್ದಾರೆ.

    ತಂಬಾಕು ಸೇವನೆಯಿಂದ ಪ್ರಾಣಕ್ಕೆ ಹಾನಿಯಾಗುತ್ತದೆ ಎಂದು ಅರಿವು ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ವತಿಯಿಂದ ಮೇ 31 ರಂದು ಪ್ರತಿ ವರ್ಷ ವಿಶ್ವ ತಂಬಾಕು ದಿನವನ್ನು ಆಚರಿಸಲಾಗುತ್ತದೆ.

    ತಂಬಾಕು ಸೇವನೆಯಿಂದ ಶ್ವಾಸಕೋಶದ ಕ್ಯಾನ್ಸರ್ ಮತ್ತು ಇತರ ಉಸಿರಾಟದ ಕಾಯಿಲೆಗಳು ಬರುತ್ತವೆ. ಈ ರೀತಿಯ ಆಚರಣೆಯಿಂದ ತಂಬಾಕು ಸೇವನೆ ಮಾಡುವವರಿಗೆ ಒಳ್ಳೆಯ ಸಂದೇಶ ನೀಡಬೇಕು ಮತ್ತು ಜನರಲ್ಲಿ ತಂಬಾಕು ಸೇವನೆಯನ್ನು ಕಡಿಮೆ ಮಾಡಬೇಕು ಎಂಬುದು ಇದರ ಉದ್ದೇಶವಾಗಿದೆ.

  • ಕ್ಯಾನ್ಸರ್ ಪೀಡಿತ ಅಪ್ಪಟ ಅಭಿಮಾನಿಯಿಂದ ನಟ ಅಜಯ್ ದೇವಗನ್‍ಗೆ ಮನವಿ

    ಕ್ಯಾನ್ಸರ್ ಪೀಡಿತ ಅಪ್ಪಟ ಅಭಿಮಾನಿಯಿಂದ ನಟ ಅಜಯ್ ದೇವಗನ್‍ಗೆ ಮನವಿ

    ಜೈಪುರ: ಸಮಾಜದ ಏಳಿಗೆಗೋಸ್ಕರ ದಯಮಾಡಿ ತಂಬಾಕು ಉತ್ಪನ್ನದ ಬಗ್ಗೆ ಜಾಹೀರಾತು ನೀಡಬೇಡಿ ಎಂದು ಕಟ್ಟ ಅಭಿಮಾನಿಯೊಬ್ಬರು ಬಾಲಿವುಡ್ ನಟ ಅಜಯ್ ದೇವಗನ್ ಬಳಿ ಮನವಿ ಮಾಡಿದ್ದಾರೆ.

    ಅಭಿಮಾನಿಯಾಗಿರುವ 40 ವರ್ಷದ ನನಕ್ರಮ್ ಜಾಹೀರಾತುಗಳಲ್ಲಿ ಅಭಿನಯಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮೂಲತಃ ರಾಜಸ್ಥಾನದವರಾಗಿರುವ ಇವರು ಜೈಪುರದ ಸಂಗನೆರ್ ಪಟ್ಟಣದಲ್ಲಿ ವಾಸವಾಗಿದ್ದು, ಸದ್ಯ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ.

    ನನಕ್ರಮ್ ಅವರು ಅಜಯ್ ದೇವಗನ್ ಅವರ ಅಪ್ಪಟ ಅಭಿಮಾನಿಯಾಗಿದ್ದಾರೆ. ಹೀಗಾಗಿ ತನ್ನ ನೆಚ್ಚಿನ ನಟ ನೀಡುತ್ತಿರುವ ತಂಬಾಕು ಜಾಹೀರಾತು ನೋಡಿ ಅದನ್ನು ಪ್ರತಿನಿತ್ಯ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಇದು ಅವರ ದೇಹದ ಮೇಲೆ ಪರಿಣಾಮ ಬೀರಿದೆ ಎಂದು ರೋಗಿಯ ಕುಟುಂಬಸ್ಥರು ತಿಳಿಸಿದ್ದಾರೆ.

    ನಟ ದೇವಗನ್ ಅವರು ಜಾಹೀರಾತು ನೀಡುತ್ತಿರುವ ತಂಬಾಕನ್ನೇ ಕಳೆದ ಕೆಲ ವರ್ಷಗಳ ಹಿಂದೆಯಿಂದ ನನ್ನ ತಂದೆ ಸೇವನೆ ಮಾಡಲು ಆರಂಭಿಸಿದ್ದಾರೆ. ದೇವಗನ್ ಅವರು ನೀಡುತ್ತಿರುವ ಜಾಹೀರಾತಿನಿಂದ ತಂದೆ ಪ್ರಭಾವಿತರಾಗಿದ್ದರು. ಆದರೆ ಇದೀಗ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಹೀಗಾಗಿ ಒಬ್ಬ ದೊಡ್ಡ ನಟ ಮನುಷ್ಯನ ಜೀವನಕ್ಕೆ ಕುತ್ತು ತರುವಂತಹ ಜಾಹೀರಾತುಗಳನ್ನು ನೀಡಿ ಜನರನ್ನು ಪ್ರೇರೇಪಣೆಗೊಳಿಸಬಾರದು ಅಂತ ತಂದೆ ಹೇಳುತ್ತಿದ್ದಾರೆಂದು ಮಗ ದಿನೇಶ್ ಮೀನಾ ತಿಳಿಸಿದ್ದಾರೆ.

    ಮದ್ಯಪಾನ, ಸಿಗರೇಟ್ ಹಾಗೂ ತಂಬಾಕು ಮನುಷ್ಯನ ದೇಹದ ಮೇಲೆ ಅಡ್ಡಪರಿಣಾಮ ಬೀರುತ್ತವೆ. ಹೀಗಾಗಿ ಕುತ್ತು ತರುವಂತಹ ಉತ್ಪನ್ನಗಳ ಜಾಹೀರಾತುಗಳನ್ನು ನಟರು ಕೊಡಬಾರದೆಂದು ನನಕ್ರಮ್ ಮೀನಾ ಮನವಿ ಮಾಡಿಕೊಂಡಿದ್ದಾರೆ.

    ಒಟ್ಟಿನಲ್ಲಿ ಇಬ್ಬರು ಮಕ್ಕಳ ತಂದೆಯಾಗಿರುವ ನನಕ್ರಮ್ ಅವರು ಟೀ ಸ್ಟಾಲ್ ಇಟ್ಟುಕೊಂಡು ವ್ಯಾಪಾರ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಇದೀಗ ಅವರು ಕ್ಯಾನ್ಸರ್ ರೋಗಿಯಾಗಿದ್ದು ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ.

  • ಧೂಮಪಾನ ಬಿಡುವಂತೆ ಕುಂಭಮೇಳದಲ್ಲಿ ಸಾಧುಗಳ ಕಾಲು ಮುಟ್ಟಿ ಬೇಡಿಕೊಂಡ ಬಾಬಾ ರಾಮ್‍ದೇವ್

    ಧೂಮಪಾನ ಬಿಡುವಂತೆ ಕುಂಭಮೇಳದಲ್ಲಿ ಸಾಧುಗಳ ಕಾಲು ಮುಟ್ಟಿ ಬೇಡಿಕೊಂಡ ಬಾಬಾ ರಾಮ್‍ದೇವ್

    ಲಕ್ನೋ: ಪ್ರಯಾಗ್ ಕುಂಭ ಮೇಳದಲ್ಲಿ ಸೇರಿರುವ ಅನೇಕ ಸಾಧು ಹಾಗೂ ಭಕ್ತರ ಬಳಿಗೆ ಹೋಗಿ ಧೂಮಪಾನ ಬಿಡುವಂತೆ ಯೋಗ ಗುರು ಬಾಬಾ ರಾಮ್‍ದೇವ್ ಮನವಿ ಮಾಡಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ.

    ಶ್ರೀರಾಮ ಹಾಗೂ ಕೃಷ್ಣ ತಂಬಾಕು ಸೇವನೆ ಮಾಡುತ್ತಿರಲಿಲ್ಲ. ಅವರನ್ನು ಪೂಜಿಸುವ ನಾವು ತಂಬಾಕು ಸೇವನೆ ಹಾಗೂ ಧೂಮಪಾನ ಮಾಡುವುದು ಎಷ್ಟು ಸರಿ? ನಾವೆಲ್ಲರೂ ಧೂಮಪಾನ ಬಿಟ್ಟುಬಿಡೋಣ ಎಂದು ಬಾಬಾ ರಾಮ್‍ದೇವ್ ಸಾಧುಗಳಿಗೆ ಮನವರಿಕೆ ಮಾಡುತ್ತಿದ್ದಾರೆ.

    ಸಾಧುಗಳಾದ ನಾವು ಮನೆ, ಕುಟುಂಬ ಸೇರಿದಂತೆ ಎಲ್ಲವನ್ನೂ ಬಿಟ್ಟಿದ್ದೇವೆ. ಇದಕ್ಕಿಂತ ಮಿಗಿಲಾಗಿ ನಮ್ಮ ತಂದೆ ಹಾಗೂ ತಾಯಿಯನ್ನು ಬಿಟ್ಟು ಬಂದಿದ್ದೇವೆ. ಆದರೆ ನಮ್ಮಿಂದ ಯಾಕೆ ಧೂಮಪಾನ ಬೀಡಲು ಆಗುತ್ತಿಲ್ಲ ಎಂದು ಪ್ರಶ್ನಿಸಿ, ಸಾಧುಗಳ ಕಾಲು ಮುಟ್ಟಿ ಧೂಮಪಾನ ಮಾಡದಂತೆ ಬಾಬಾ ರಾಮ್‍ದೇವ್ ಮನವಿ ಮಾಡಿಕೊಂಡಿದ್ದಾರೆ.

    https://twitter.com/yogrishiramdev/status/1090858740046315520

    ಬಾಬಾ ರಾಮ್‍ದೇವ್ ಅವರು ಅನೇಕ ಸಾಧುಗಳ ಬಳಿ ಇದ್ದ ಚಿಲ್ಮಿ (ತಂಬಾಕು ಸೇವನೆ ಕೊಳವೆ) ಪಡೆದಿದ್ದಾರೆ. ಈ ಮೂಲಕ ಅವುಗಳನ್ನು ತಮ್ಮ ವಸ್ತು ಪ್ರದರ್ಶನ ಕೇಂದ್ರದಲ್ಲಿ ಇಡುತ್ತೇನೆ. ನೀವು ತಂಬಾಕು ಸೇವನೆಯನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡಿದ್ದಾರೆ.

    ಧೂಮಪಾನ ಹಾಗೂ ತಂಬಾಕು ಸೇವನೆಯನ್ನು ಬಿಡುವಂತೆ ಯುವಕರಿಗೆ ಸಲಹೆ ನೀಡುತ್ತಿರುವೆ. ಹೀಗಾಗಿ ಮಹಾತ್ಮರಿಗೂ ಈ ಕುರಿತು ಮನವರಿಕೆ ಮಾಡಿಕೊಡುತ್ತಿರುವೆ ಎಂದು ಬಾಬಾ ರಾಮ್‍ದೇವ್ ತಿಳಿಸಿದ್ದಾರೆ.

    ಒಟ್ಟು 55 ದಿನಗಳ ಕಾಲ ನಡೆಯುವ ಕುಂಭ ಮೇಳವು ಮಾರ್ಚ್ 4ರಂದು ಮುಕ್ತಾಯವಾಗಲಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಜನರು ಸೇರುವ ಮೇಳ ಇದಾಗಿದೆ. ಸಾಧು, ಸಂತರು ಹಾಗೂ ಭಕ್ತರು ಸೇರಿದಂತೆ ಸುಮಾರು 13 ಕೋಟಿ ಜನರು ಪ್ರಯಾಗ್ ಕುಂಭ ಮೇಳದಲ್ಲಿ ಸೇರುತ್ತಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ತಂಬಾಕು ಬ್ಯಾರನ್‍ಗೆ ಬೆಂಕಿ – ಲಕ್ಷಾಂತರ ರೂ. ಮೌಲ್ಯದ ತಂಬಾಕು ಸುಟ್ಟು ನಾಶ

    ತಂಬಾಕು ಬ್ಯಾರನ್‍ಗೆ ಬೆಂಕಿ – ಲಕ್ಷಾಂತರ ರೂ. ಮೌಲ್ಯದ ತಂಬಾಕು ಸುಟ್ಟು ನಾಶ

    ಮೈಸೂರು: ತಂಬಾಕು ಬ್ಯಾರನ್‍ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ತಂಬಾಕು ಸುಟ್ಟು ನಾಶವಾಗಿರೋ ಘಟನೆ ಮೈಸೂರಿನಲ್ಲಿ ನಡೆದಿದೆ.

    ನಂಜನಗೂಡಿನ ಮಡುವಿನಹಳ್ಳಿ ಗ್ರಾಮದ ಸಿದ್ದಪ್ಪ ಎಂಬುವರ ಜಮೀನಿನಲ್ಲಿದ್ದ ತಂಬಾಕು ಬ್ಯಾರನ್‍ಗೆ ಬೆಂಕಿ ಬಿದ್ದಿದ್ದು, ಬಹುತೇಕ ತಂಬಾಕು ಸುಟ್ಟು ಕರಕಲಾಗಿದೆ. ಕಿಡಿಗೇಡಿಗಳು ಬೆಂಕಿ ಹಂಚಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ.

    ರೈತ ಸಿದ್ದಪ್ಪ ಕಳೆದ 10 ವರ್ಷಗಳಿಂದ ಇದೇ ಸ್ಥಳದಲ್ಲಿ ತಂಬಾಕು ಹದ ಮಾಡಿ ನಂತರ ನೇರವಾಗಿ ಮಾರಾಟ ಮಾಡುತ್ತಾ ಬಂದಿದ್ದಾರೆ. ಇದೀಗ 5 ಲಕ್ಷ ರೂ. ಮೌಲ್ಯದ ತಂಬಾಕು ಬೆಂಕಿಗಾಹುತಿಯಾಗಿರೋ ಶಂಕೆಯಿದೆ.

    ನಂಜನಗೂಡು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.