Tag: ತಂಪು ಪಾನೀಯ

  • ಪೊಲೀಸ್ ಸಿಬ್ಬಂದಿಗೆ ಹಣ್ಣು, ತಂಪು ಪಾನೀಯ ವಿತರಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು

    ಪೊಲೀಸ್ ಸಿಬ್ಬಂದಿಗೆ ಹಣ್ಣು, ತಂಪು ಪಾನೀಯ ವಿತರಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು

    ಮಡಿಕೇರಿ: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೊರೊನಾ ಕಫ್ರ್ಯೂ ಜಾರಿಗೊಳಿಸಿ ನಾಲ್ಕು ದಿನ ಕಳೆಯುತ್ತಿದೆ. ಈ ನಿಟ್ಟಿನಲ್ಲಿ ಹಗಲು ರಾತ್ರಿ ಎನ್ನದೆ ಕರ್ತವ್ಯ ಮಾಡುತ್ತಿರುವ ಪೊಲೀಸರು. ಸುಡು ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ. ಹೀಗಾಗಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಸಿಬ್ಬಂದಿಗೆ ಹಣ್ಣು ಹಾಗೂ ತಂಪು ಪಾನೀಯ ವಿತರಿಸಿದ್ದಾರೆ.

    ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಅಂಕಿತ್ ಪೊನ್ನಪ್ಪ ನೇತೃತ್ವದಲ್ಲಿ ಇಂದು ಪೊಲೀಸರಿಗೆ ಹಣ್ಣು ಮತ್ತು ತಂಪು ಪಾನೀಯಗಳನ್ನು ವಿತರಿಸಲಾಯಿತು. ಕೊರೊನಾ ಮಹಾಮಾರಿ ತಡೆಗಟ್ಟಲು ಹಗಲು ರಾತ್ರಿ ಸಾರ್ವಜನಿಕರಿಗಾಗಿ ಕೆಲಸ ಮಾಡುವ ಪೊಲೀಸ್ ಇಲಾಖೆಯ ಕಾರ್ಯವನ್ನು ಮನಗಂಡು ತಿತಿಮತಿ ಗಡಿಬಾಗದಿಂದ ಗೋಣಿಕೊಪ್ಪಲು ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಲ್ಲ ಪೊಲೀಸ್ ಸಿಬ್ಬಂದಿಗೆ ಹಣ್ಣು ಹಾಗೂ ತಂಪು ಪಾನೀಯಗಳ ಕಿಟ್ ವಿತರಿಸಿದರು.

    ಕಫ್ರ್ಯೂ ಹಿನ್ನೆಲೆಯಲ್ಲಿ ಪೊಲೀಸರಿಗೆ ಸರಿಯಾದ ಸಮಯಕ್ಕೆ ಊಟ, ಕಾಫಿ, ತಂಪು ಪಾನಿಯಗಳು ಸಿಗುತ್ತಿಲ್ಲ. ಸದಾ ಸಾರ್ವಜನಿಕರಿಗಾಗಿ ದುಡಿಯುವ ಪೊಲೀಸರ ಕಷ್ಟವನ್ನರಿತ ಯುವ ಕಾಂಗ್ರೆಸ್ ಕಾರ್ಯಕರ್ತರು ಹಣ್ಣು ಹಾಗೂ ತಂಪು ಪಾನೀಯ ವಿತರಿಸಿದ್ದಾರೆ.

  • ತಂಪು ಪಾನೀಯ ಗೋದಾಮಿಗೆ ಬೆಂಕಿ- ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ತಂಪು ಪಾನೀಯ ಗೋದಾಮಿಗೆ ಬೆಂಕಿ- ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿ

    ಶಿವಮೊಗ್ಗ: ತಂಪು ಪಾನೀಯ ಹಾಗೂ ಕುರ್ ಕುರೆ ಸೇರಿದಂತೆ ಇತರೆ ರೆಡಿಪುಡ್ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದ್ದು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.

    ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಹಿಂಭಾಗದ ಗೋದಾಮಿನಲ್ಲಿ ಬೆಳಗಿನಜಾವ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ದುರ್ವೇಶ್ ಅಸೋಸಿಯೇಷನ್ ರಫೀಕ್ ಮಾಲೀಕತ್ವದ ಸಗಟು ವ್ಯಾಪಾರ ಮಳಿಗೆಯಾಗಿದ್ದು, ದುರ್ವೇಶ್ ಅಸೋಸಿಯೇಷನ್ ಮೂಲಕ ಇಡೀ ಜಿಲ್ಲೆಗೆ ತಂಪು ಪಾನೀಯ ಹಾಗೂ ಕುರುಕಲು ತಿಂಡಿಯನ್ನು ವಿವಿಧ ಅಂಗಡಿಗಳಿಗೆ ವಿತರಣೆ ಮಾಡಲಾಗುತ್ತದೆ.

    ಬೆಳಗಿನ ಜಾವ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಪಕ್ಕದ ಮನೆಯವರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಗೋದಾಮಿನಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿ ಆಗಿರುವುದರಿಂದ ಸಂಪೂರ್ಣ ಹಾನಿಯಾಗಿದೆ. ಘಟನೆ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕೋಲಾ, ಥಮ್ಸ್‌ ಅಪ್‌ ನಿಷೇಧಿಸಲು ಆಗ್ರಹಿಸಿದ ವ್ಯಕ್ತಿಗೆ 5 ಲಕ್ಷ ದಂಡ

    ಕೋಲಾ, ಥಮ್ಸ್‌ ಅಪ್‌ ನಿಷೇಧಿಸಲು ಆಗ್ರಹಿಸಿದ ವ್ಯಕ್ತಿಗೆ 5 ಲಕ್ಷ ದಂಡ

    ನವದೆಹಲಿ: ಕೋಕಾ-ಕೋಲಾ ಮತ್ತು ಥಮ್ಸ್‌ ಅಪ್‌ ಪಾನೀಯವನ್ನು ನಿಷೇಧಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಗೆ ಸುಪ್ರೀಂ ಕೋರ್ಟ್‌ 5 ಲಕ್ಷ ರೂ. ದಂಡವನ್ನು ವಿಧಿಸಿದೆ.

    ಉಮೇದ್‌ಸಿನ್ಹಾ ಎಂಬವರು ಕೋಕಾ-ಕೋಲಾ ಮತ್ತು ಥಮ್ಸ್‌ ಅಪ್‌ ಪಾನೀಯವನ್ನು ನಿಷೇಧಿಸುವಂತೆ ಸಲ್ಲಿಸಿದ್ದ ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯ ವಿಚಾರಣೆ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್‌, ಹೇಮಂತ್‌ ಗುಪ್ತಾ, ಅಜಯ್‌ ರಸ್ತೋಗಿ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.

    ಈ ವೇಳೆ ಪಾನೀಯ ನಿಷೇಧಿಸುವಂತೆ ಕೋರಿ ಸಲ್ಲಿಸಿದ್ದ ಸಾಕ್ಷ್ಯಗಳು ಪರಿಪೂರ್ಣವಾಗಿಲ್ಲ. ಅಷ್ಟೇ ಅಲ್ಲದೇ ಈ ಎರಡೂ ಬ್ರಾಂಡ್‌ ಗಳನ್ನು ಮಾತ್ರ ಗುರಿಯಾಗಿಸಿದ್ದು ಯಾಕೆ ಎಂದು ಪೀಠ ಪ್ರಶ್ನಿಸಿ ಅರ್ಜಿಯನ್ನು ವಜಾಗೊಳಿಸಿದೆ.

    ಪರಿಚ್ಚೇಧ 32ರ ಅಡಿ ಹಕ್ಕು ಇದೆ ಎಂದು ಎಲ್ಲ ವಿಚಾರಕ್ಕೂ ಪಿಐಎಲ್‌ ಸಲ್ಲಿಸುವುದು ಸರಿಯಲ್ಲ. ಯಾವುದೇ ತಾಂತ್ರಿಕ ಜ್ಞಾನ ಇಲ್ಲದೇ ಈ ರೀತಿಯ ಅರ್ಜಿ ಸಲ್ಲಿಸಿ ಕೋರ್ಟ್‌ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ 5 ಲಕ್ಷ ರೂ. ದಂಡವನ್ನು ವಿಧಿಸುತ್ತಿದ್ದೇವೆ. ಒಂದು ತಿಂಗಳ ಒಳಗಡೆ ದಂಡವನ್ನು ಸುಪ್ರೀಂ ಕೋರ್ಟ್‌ಗೆ ಪಾವತಿಸಬೇಕು ಎಂದು ಪೀಠ ಸೂಚಿಸಿದೆ.

    ಅರ್ಜಿದಾರರು ಕೋಕಾ-ಕೋಲಾ ಮತ್ತು ಥಮ್ಸ್‌ ಅಪ್‌ ಕಂಪನಿಗಳ ಪಾನೀಯ ಮಾರಾಟಕ್ಕೆ ಕೇಂದ್ರ ಸರ್ಕಾರ ನೀಡಿರುವ ವೈಜ್ಞಾನಿಕ ವರದಿಯನ್ನು ಸಲ್ಲಿಸುವಂತೆ ಕೋರ್ಟ್‌ ಆದೇಶಿಸಬೇಕೆಂದು ಮನವಿ ಮಾಡಿದ್ದರು.

  • ತಂಪು ಪಾನೀಯ ಬಾಟಲಿಯಲ್ಲಿ ಸ್ಕ್ರೂಡ್ರೈವರ್ ಪತ್ತೆ – ಗ್ರಾಹಕ ಶಾಕ್

    ತಂಪು ಪಾನೀಯ ಬಾಟಲಿಯಲ್ಲಿ ಸ್ಕ್ರೂಡ್ರೈವರ್ ಪತ್ತೆ – ಗ್ರಾಹಕ ಶಾಕ್

    ಶಿವಮೊಗ್ಗ: ತಂಪು ಪಾನೀಯದ ಬಾಟಲಿಯೊಂದರಲ್ಲಿ ಕಬ್ಬಿಣದ ಸ್ಕ್ರೂಡ್ರೈವರ್ ಪತ್ತೆಯಾಗಿರುವ ಘಟನೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಹೋಟೆಲ್ ವೊಂದರಲ್ಲಿ ನಡೆದಿದೆ.

    ಇಂದು ಸಂಜೆಯ ವೇಳೆಗೆ ಮೂರು ಮಂದಿ ಗ್ರಾಹಕರ ಗುಂಪೊಂದು ಹೋಟೆಲ್ ಗೆ ತೆರಳಿ ತಂಪು ಪಾನೀಯ ಕುಡಿಯಲು ಹೋಗಿದ್ದಾರೆ. ಹೋಟೆಲ್ ನವರು ತಂಪು ಪಾನೀಯವನ್ನು ನೀಡಿದ್ದಾರೆ. ಈ ವೇಳೆ ಗ್ರಾಹಕ ಸುರೇಂದ್ರ ಎಂಬುವರು ಕುಡಿಯುತ್ತಿದ್ದ ತಂಪು ಪಾನೀಯ ಬಾಟಲಿಯೊಂದರಲ್ಲಿ ಕಬ್ಬಿಣದ ಸ್ಕ್ರೂಡ್ರೈವರ್ ಪತ್ತೆಯಾಗಿದ್ದು ತಂಪು ಪಾನೀಯ ಕುಡಿಯುತ್ತಿದ್ದ ಗ್ರಾಹಕನಿಗೆ ಶಾಕ್ ಆಗಿದೆ.

    ಕುಡಿಯುತ್ತಿದ್ದ ಬಾಟಲಿಯನ್ನು ಅರ್ಧಕ್ಕೆ ಬಿಟ್ಟು ಹೋಟೆಲ್ ಮಾಲೀಕರನ್ನು ಕರೆದು ತೋರಿಸಿದ್ದಾರೆ. ಈ ವೇಳೆ ಹೋಟೆಲ್ ಮಾಲೀಕ ಬಾಟಲಿಯನ್ನು ಹಿಂಪಡೆದುಕೊಂಡಿದ್ದಾರೆ. ಆದರೆ ಅಷ್ಟಕ್ಕೇ ಸಮಾಧಾನಗೊಳ್ಳದ ಗ್ರಾಹಕ ಘಟನೆ ಬಳಿಕ ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದ್ದರು.

    ಗ್ರಾಹಕರು ನೀಡಿದ ದೂರಿನ ಮೇರೆಗೆ ಹೋಟೆಲ್ ಗೆ ಆಗಮಿಸಿದ ಅಧಿಕಾರಿಗಳು ತಂಪು ಪಾನೀಯ ಬಾಟಲಿಯನ್ನು ಪರಿಶೀಲನೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ತಂಪು ಪಾನೀಯ ಕಂಪನಿಯ ಅಧಿಕಾರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಆಹಾರ ಇಲಾಖೆ ಅಧಿಕಾರಿ ಡಾ. ಶಮಾ ತಿಳಿಸಿದ್ದಾರೆ.

  • ಬಿಸಿಲಿನಿಂದ ರಕ್ಷಿಸಿಕೊಳ್ಳಲು ಚಿಲ್ಡ್ ಬೀಯರ್ ಮೊರೆ ಹೋದ ಕಲಬುರಗಿಯ ಮದ್ಯಪ್ರಿಯರು

    ಬಿಸಿಲಿನಿಂದ ರಕ್ಷಿಸಿಕೊಳ್ಳಲು ಚಿಲ್ಡ್ ಬೀಯರ್ ಮೊರೆ ಹೋದ ಕಲಬುರಗಿಯ ಮದ್ಯಪ್ರಿಯರು

    ಕಲಬುರಗಿ: ಬೇಸಿಗೆ ಕಾಲ ಬಂದರೆ ಸಾಕು ತಂಪು ಪಾನೀಯಗಳಿಗೆ ಜನ ಮೊರೆ ಹೋಗುತ್ತಾರೆ. ಆದರೆ ಬಿಸಿಲ ನಾಡು ಕಲಬುರಗಿಯ ಮದ್ಯಪ್ರಿಯರು ಬಿಸಲಿನಿಂದ ರಕ್ಷಿಸಿಕೊಳ್ಳಲು ಚಿಲ್ಡ್ ಬೀಯರ್ ಮೊರೆ ಹೋಗಿದ್ದಾರೆ. ಅಬಕಾರಿ ಇಲಾಖೆ ನೀಡಿರುವ ಅಂಕಿ ಅಂಶಗಳು ಇದನ್ನು ಹೇಳುತ್ತಿವೆ.

    ಬೇಸಿಗೆ ಕಾಲ ಆರಂಭವಾದ ನಂತರ ಕಲಬುರಗಿ ಜಿಲ್ಲೆಯಲ್ಲಿ ಮಾರ್ಚ್‍ನಿಂದ ಇಂದಿನವರೆಗೆ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತಿದೆ. ಇದರಿಂದ ಬಚಾವಾಗಲು ಕಲಬುರಗಿಯಲ್ಲಿನ ಮದ್ಯಪ್ರಿಯರು ಮಧ್ಯಾಹ್ನ 12 ಗಂಟೆಯಾದ್ರೆ ಸಾಕು, ನೇರವಾಗಿ ಬಾರ್‍ಗಳತ್ತ ಮುಖ ಮಾಡಿ ಚಿಲ್ಡ್ ಬೀಯರ್ ಒಂದರ ಮೇಲೊಂದು ಬಾಟಲಿಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಬಹುತೇಕ ಬಾರ್‍ಗಳು ಮಧ್ಯಾಹ್ನವಾದ್ರೆ ಗಿರಾಕಿಗಳಿಂದ ಫುಲ್ ಆಗ್ತಾ ಇವೆ. ಈ ಬಗ್ಗೆ ಖುದ್ದು ಗ್ರಾಹಕರನ್ನು ಕೇಳಿದ್ರೆ ಬಿಸಲಿನ ತಾಪ ಹೆಚ್ಚಳದಿಂದ ಹಾರ್ಡ್ ಡ್ರಿಂಕ್ಸ್ ಬದಲು ಬೀಯರ್ ಮೊರೆ ಹೋಗಿದ್ದೇವೆ ಎಂದು ಹೇಳುತ್ತಾರೆ.

    ಅಬಕಾರಿ ಇಲಾಖೆಯ ಪ್ರಕಾರ ಕಳೆದ ವರ್ಷಕ್ಕಿಂತ ಈ ವರ್ಷ ಏಪ್ರಿಲ್ ನಲ್ಲಿ 10 ಸಾವಿರದ 396 ಬೀಯರ್ ಬಾಕ್ಸ್ ಗಳು ಹೆಚ್ಚಿಗೆ ಮಾರಾಟವಾಗಿದ್ದು, ಇದನ್ನು ಅರಿತ ಮದ್ಯದಂಗಡಿಯವರು ಇದೀಗ ಬಿಯರ್ ಸ್ಟಾಕ್ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಅಬಕಾರಿ ಇಲಾಖೆಗೆ ಕೋಟಿ ಕೋಟಿ ಹಣ ಕೇವಲ ಬೀಯರ್ ಮಾರಾಟದಿಂದ ಆದಾಯ ಬರುತ್ತಿದೆ. ಬೇಸಿಗೆ ಕಾಲದ ಈ ಮೂರು ತಿಂಗಳಲ್ಲಿ ಹಗಲು ಹೊತ್ತಿನಲ್ಲಿಯೇ ಬೀಯರ್ ಸೇವನೆ ಗ್ರಾಹಕರು, ಸಂಜೆಯಾದ್ರೆ ಮಾಮೂಲು ನಿತ್ಯದ ಗ್ರಾಹಕರು ಎಂದು ಬಾರ್‍ವೊಂದರ ವ್ಯವಸ್ಥಾಪಕರು ಹೇಳುತ್ತಾರೆ.