Tag: ತಂತ್ರಜ್ಞಾನ

  • ಶೀಘ್ರದಲ್ಲೇ ಬೆಂಗಳೂರು ಉತ್ತರದಲ್ಲೂ ನಿಮ್ಹಾನ್ಸ್ ಘಟಕ: ಡಾ. ಅಶ್ವತ್ಥನಾರಾಯಣ

    ಶೀಘ್ರದಲ್ಲೇ ಬೆಂಗಳೂರು ಉತ್ತರದಲ್ಲೂ ನಿಮ್ಹಾನ್ಸ್ ಘಟಕ: ಡಾ. ಅಶ್ವತ್ಥನಾರಾಯಣ

    ಬೆಂಗಳೂರು: ನಿಮ್ಹಾನ್ಸ್ ಆಸ್ಪತ್ರೆ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಬೆಂಗಳೂರು ಉತ್ತರದಲ್ಲಿ ಸಂಸ್ಥೆಯ ಘಟಕ ಶೀಘ್ರದಲ್ಲೇ ಸ್ಥಾಪನೆ ಆಗಲಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಶುಕ್ರವಾರ ತಿಳಿಸಿದ್ದಾರೆ.

    ನಿಮ್ಹಾನ್ಸ್ ಇನ್‍ಸ್ಟಿಟ್ಯೂಟ್ ದಿನಾಚರಣೆಯಲ್ಲಿ ಭಾಗವಹಿಸಿದ ಡಾ. ಅಶ್ವತ್ಥನಾರಾಯಣ ಅವರು, ‘ಹ್ಯೂಮನ್ ಜಿನೋಮ್ ಲ್ಯಾಬ್’, ‘ನ್ಯೂರೊ ಬಯಾಲಜಿ ರಿಸರ್ಚ್ ಸೆಂಟರ್’, ‘ನ್ಯೂರೊ ಇನ್ಫೆಕ್ಷನ್ ಲ್ಯಾಬ್’ ಉದ್ಘಾಟಿಸಿ ಮಾತನಾಡಿದರು. “ನಿಮ್ಹಾನ್ಸ್ ಸಂಸ್ಥೆ ವಿಸ್ತೃತವಾಗಿ ಬೆಳೆಯಬೇಕು. ಯಾವುದೇ ಒಂದು ಭಾಗಕ್ಕೆ ಸೀಮಿತವಾಗದೇ ದೇಶ ಹಾಗೂ ರಾಜ್ಯದ ವಿವಿಧ ಭಾಗಗಳಿಗೆ ವಿಸ್ತರಿಸಬೇಕು ಎಂದರು.

    ಸದ್ಯ ನಿಮ್ಹಾನ್ಸ್‍ನಲ್ಲಿ 400 ಹಾಸಿಗೆಯ ಸಾಮರ್ಥ್ಯ ಇದ್ದು, ಈ ಸಾಮಥ್ರ್ಯ ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೆಚ್ಚ ಹೆಚ್ಚಿರುವ ಜತೆಗೆ ಈ ಗುಣಮಟ್ಟವನ್ನು ನಿರೀಕ್ಷಿಸಲಾಗದು. ಹಾಗಾಗೀ ಈ ಕೆಲಸ ತ್ವರಿತವಾಗಿ ಆಗಬೇಕಿದೆ. ಇದಲ್ಲದೇ ಬೆಂಗಳೂರು ಉತ್ತರದಲ್ಲಿ ಸಂಸ್ಥೆಯ ಘಟಕ ಸ್ಥಾಪಿಸುವ ಉದ್ದೇಶವೂ ಇದೆ. ಇಂಥ ದೊಡ್ಡ ಜವಾಬ್ದಾರಿಗಳನ್ನು ನಾವು ನೀವು ಸೇರಿ ಮಾಡೋಣ. ಉಪಮುಖ್ಯಮಂತ್ರಿಯಾಗಿ ನಾನು ಎಲ್ಲ ರೀತಿಯ ಸಹಕಾರ ನೀಡಲು ಬದ್ಧ ಎಂದು ಅವರು ಭರವಸೆ ನೀಡಿದರು.

    ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪ್ರಾರಂಭವಾದ ನಿಮ್ಹಾನ್ಸ್ ಸಂಸ್ಥೆಇಂದು ದೇಶಕ್ಕೆ ಮಾದರಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಜೋಡಿಸಿದರೆ ಇಂಥ ಉತ್ತಮ ಸಂಸ್ಥೆ ಸ್ಥಾಪಿಸಬಹುದು ಎನ್ನಲು ಈ ಸಂಸ್ಥೆಯೇ ನಿರ್ದಶನ. ಸಂಸ್ಥೆಯ 75ನೇ ವರ್ಷಾಚರಣೆ ಪ್ರಯುಕ್ತ ಧರ್ಮಶಾಲೆ ನಿರ್ಮಿಸುವ ಆಶಯ ಬಹಳ ಉತ್ತಮವಾದುದು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

    ನಮ್ಮ ಸಮಾಜದಲ್ಲಿ ಮಾನಸಿಕ ಸಮಸ್ಯೆ ಇದೆ ಎಂದು ಒಪ್ಪಿಕೊಂಡು ಚಿಕಿತ್ಸೆಗೆ ಬರುವವರ ಸಂಖ್ಯೆ ಅತಿ ವಿರಳ. ಅಂಥವರಿಗೆ ಉತ್ತಮ ಚಿಕಿತ್ಸೆ ಕೊಡದಿದ್ದರೆ ತಪ್ಪಾಗುತ್ತದೆ. ಆದರೆ, ಚಿಕಿತ್ಸೆ ನೀಡಲು ನಮ್ಮಲ್ಲಿ ಸಿಬ್ಬಂದಿಯ ಕೊರತೆ ಇದ್ದು, ಇದೇ ದೊಡ್ಡ ಸಮಸ್ಯೆ ಎಂದು ವೈದ್ಯ ಶಿಕ್ಷಣ ಸಚಿವರಾದ ಡಾ. ಸುಧಾಕರ್ ಹೇಳಿದ್ದಾರೆ. ಈ ಸಮಸ್ಯೆಗೆ ಆದಷ್ಟು ಬೇಗ ಅವರು ಪರಿಹಾರ ಕಂಡುಕೊಂಡು, ಉತ್ತಮ ಕಾರ್ಯಗಳನ್ನು ಮಾಡಲಿದ್ದಾರೆ ಎಂಬ ಭರವಸೆ ನನಗಿದೆ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

    ತಂತ್ರಜ್ಞಾನದ ಮೊರೆ
    ರೋಗಿಗಳ ಸಮಸ್ಯೆಗಳನ್ನು ಅರಿತು ತ್ವರಿತವಾಗಿ ಸ್ಪಂದಿಸುತ್ತಿರುವ ನಿಮ್ಹಾನ್ಸ್ ಸಂಸ್ಥೆ, ರಾಜ್ಯ ಸರ್ಕಾರದ ಜತೆ ಕೈ ಜೋಡಿಸಿ ಹಲವು ಉತ್ತಮ ಕಾರ್ಯಕ್ರಮಗಳನ್ನು ಪರಿಚಯಿಸಿದೆ. ರೋಗಿಗಳಿಗೆ ಉತ್ತಮ ಸೇವೆ ಒದಗಿಸಲು ತಂತ್ರಜ್ಞಾನದ ಸದ್ಭಳಕೆ ಮಾಡಿಕೊಳ್ಳುತ್ತಿದೆ. ಜತೆಗೆ, ಮಕ್ಕಳು ಹಾಗೂ ಯುವ ಜನರಿಗೆ ಮಾನಸಿಕ ಚಿಕಿತ್ಸೆ ನೀಡುವ ‘ಯುವ ಸ್ಪಂದನೆ’ಯಂಥ ಹಲವು ಉತ್ತಮ ಕಾರ್ಯಕ್ರಮಗಳನ್ನು ಜಾರಿ ತಿಂದಿದೆ. ಬೆಂಗಳೂರಿನ ಸಂಸ್ಥೆಯ ಸಹಕಾರದಲ್ಲಿ ‘ಮೆಂಟಲ್ ಹೆಲ್ತ್ ಮ್ಯಾನೇಜ್ಮೆಂಟ್ ಪ್ರೋಗ್ರಾಂ’ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಿದ್ದು, ಇದು ಸಂಪನ್ಮೂಲ ಕೊರತೆಯ ಮಾಹಿತಿ ನೀಡುವ ಜತೆಗೆ ಸಿಬ್ಬಂದಿ ತರಬೇತಿಗೆ ಪೂರಕವಾಗಿದೆ ಎಂದು ಅವರು ತಿಳಿಸಿದರು.

    ಕಾರ್ಯಕ್ರಮದಲ್ಲಿ ವೈದ್ಯ ಶಿಕ್ಷಣ ಸಚಿವ ಡಾ. ಸುಧಾಕರ್, ಸಂಸ್ಥೆ ನಿರ್ದೇಶಕ ಡಾ. ಬಿಎಸ್ ಗಂಗಾಧರ್, ಡಾ. ಸಿಎಸ್ ಶರ್ಮ, ಡಾ. ಆರ್. ಶೇಖರ್, ಡಾ. ಸತ್ರಪ್ರಭಾ, ಡಾ. ಗುರುರಾಜ್ ಉಪಸ್ಥಿತರಿದ್ದರು.

  • ಬಿಡುಗಡೆಯಾಯ್ತು ಹಾನರ್ 8ಸಿ ನೂತನ ಸ್ಮಾರ್ಟ್ ಫೋನ್: ಗುಣವೈಶಿಷ್ಟ್ಯವೇನು? ಬೆಲೆ ಎಷ್ಟು?

    ಬಿಡುಗಡೆಯಾಯ್ತು ಹಾನರ್ 8ಸಿ ನೂತನ ಸ್ಮಾರ್ಟ್ ಫೋನ್: ಗುಣವೈಶಿಷ್ಟ್ಯವೇನು? ಬೆಲೆ ಎಷ್ಟು?

    ನವದೆಹಲಿ: ಆಂಡ್ರಾಯ್ಡ್ ಆವೃತ್ತಿಯಲ್ಲಿ ಹೆಸರು ಮಾಡುತ್ತಿರುವ ಹಾನರ್ ತನ್ನ ನೂತನ ಆವೃತ್ತಿಯಾದ ಹಾನರ್ 8ಸಿ ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ನೂತನ ಹಾನರ್ 8ಸಿ ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿಗಾಗಿ 8 ಎಂಪಿ ಎಚ್‍ಡಿ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 13+2ಎಂಪಿ ಡ್ಯುಯಲ್ ಕ್ಯಾಮೆರಾವಿದೆ. ಮಿಡ್ ನೈಟ್ ಬ್ಲಾಕ್, ಅರೋರ ಬ್ಲ್ಯೂ ಹಾಗೂ ಪ್ಲಾಟಿನಂ ಗೋಲ್ಡ್ ಬಣ್ಣಗಳಲ್ಲಿ ನೂತನ ಫೋನ್ ಲಭ್ಯವಿದೆ. ಡಿಸೆಂಬರ್ 10 ರಿಂದ ಆನ್‍ಲೈನ್ ಜಾಲತಾಣಗಳಲ್ಲಿ ಲಭ್ಯವಿರಲಿದೆ.

    ಬೆಲೆ ಎಷ್ಟು?
    4ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 11,999 ರೂ. 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 12,999 ರೂಪಾಯಿಯನ್ನು ನಿಗದಿಪಡಿಸಿದೆ.

    ಹಾನರ್ 8ಸಿ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ:
    157.2 X 76 X 7.98 ಮಿ.ಮೀ., 167 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸ್ಲಾಟ್ ಸೌಲಭ್ಯ, 6.26 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720 X 1520 ಪಿಕ್ಸೆಲ್, 19:9 ಅನುಪಾತ 269ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನಾಪ್‍ಡ್ರಾಗನ್ 632, ಆಕ್ಟಾ ಕೋರ್ ಪ್ರೊಸೆಸರ್ 1.8 ಗೀಗಾಹರ್ಟ್ಸ್, ಅಡ್ರಿನೋ 506 ಗ್ರಾಪಿಕ್ ಪ್ರೊಸೆಸರ್, 3ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ, 4ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೆ ಫೀಚರ್:
    ಮುಂಭಾಗ 8 ಎಂಪಿ ಎಚ್‍ಡಿ ಕ್ಯಾಮೆರಾ, ಹಿಂಭಾಗ 13+2 ಎಂಪಿ ಡ್ಯುಯಲ್ ಕ್ಯಾಮೆರಾ, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸಾರ್, ಫೋಟೋ ಲಾಕಿಂಗ್, 4,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಕ್ಸಿಯೋಮಿಯ ಮೂರು ಫೋನ್‍ಗಳ ಬೆಲೆ ದಿಢೀರ್ ಭಾರೀ ಇಳಿಕೆ

    ಕ್ಸಿಯೋಮಿಯ ಮೂರು ಫೋನ್‍ಗಳ ಬೆಲೆ ದಿಢೀರ್ ಭಾರೀ ಇಳಿಕೆ

    ನವದೆಹಲಿ: ಬಜೆಟ್ ಗಾತ್ರದ ಮೊಬೈಲ್ ತಯಾರಿಕಾ ಕಂಪನಿ ಕ್ಸಿಯೋಮಿ ತನ್ನ ಮೂರು ಸ್ಮಾರ್ಟ್ ಫೋನ್‍ಗಳ ದರವನ್ನು ಕಡಿತಗೊಳಿಸಿದೆ.

    ಹೌದು, ಕ್ಸಿಯೋಮಿ ತನ್ನ ರೆಡ್‍ಮಿ ನೋಟ್ 5 ಪ್ರೋ, ರೆಡ್‍ಮಿ ವೈ2 ಹಾಗೂ ಎಂಐ ಎ2 ಸ್ಮಾರ್ಟ್ ಫೋನ್‍ಗಳ ಮೇಲಿನ ದರದಲ್ಲಿ 1,000 ಸಾವಿರ ರೂಪಾಯಿಯನ್ನು ಕಡಿತಗೊಳಿಸಿದೆ. ಈ ದರಗಳು ಶುಕ್ರವಾರ ಮಧ್ಯಾಹ್ನ 12 ಗಂಟೆಯಿಂದ ಜಾರಿಯಾಗಲಿದೆ. ಅಲ್ಲದೇ ಎಲ್ಲಾ ಆನ್‍ಲೈನ್ ಹಾಗೂ ಆಫ್‍ಲೈನ್ ಮಾರುಕಟ್ಟೆಗಳಲ್ಲಿ ನೂತನ ದರ ಅನ್ವಯವಾಗಲಿದೆ ಎಂದು ಕಂಪನಿ ತಿಳಿಸಿದೆ.

     

    ಮಾಹಿತಿಗಳ ಪ್ರಕಾರ ಕ್ಸಿಯೋಮಿ ಸ್ಮಾರ್ಟ್ ಫೋನ್‍ಗಳ ತಯಾರಿಕಾ ವೆಚ್ಚ ಕಡಿಮೆಯಾದ ಹಿನ್ನೆಲೆಯಲ್ಲಿ ಕಂಪನಿ ತನ್ನ ಮೂರು ಮಾದರಿಗಳ ಬೆಲೆಯನ್ನು ಕಡಿತಗೊಳಿಸಿದೆ. ಅಲ್ಲದೇ ತಯಾರಿಕಾ ವೆಚ್ಚದಿಂದ ಉಳಿದ ಹಣವನ್ನು ಗ್ರಾಹಕರಿಗೆ ನೀಡುವ ಉದ್ದೇಶದಿಂದ ಸಂಸ್ಥೆ ದರ ಇಳಿಸಿದೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಬಹುತೇಕ ಮಂದಿ ಕ್ಸಿಯೋಮಿ ಸ್ಮಾರ್ಟ್ ಫೋನಿನ ಗ್ರಾಹಕರಾಗಿದ್ದಾರೆ. ಹೀಗಾಗಿ ಕಂಪನಿ ಗ್ರಾಹಕರಿಗಾಗಿಯೇ ದರ ಇಳಿಸಿದೆ.

    ತನ್ನ ಸ್ಮಾರ್ಟ್ ಫೋನ್ ದರಗಳನ್ನು ಇಳಿಸಿದ ಬೆನ್ನಲ್ಲೇ, ಇದೇ ನವೆಂಬರ್ 22ರಂದು ಕ್ಸಿಯೋಮಿ ತನ್ನ ನೂತನ ರೆಡ್‍ಮೀ ನೋಟ್ 6 ಪ್ರೋ ಅನ್ನು ಭಾರತದಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ.

    ರೆಡ್‍ಮಿ ನೋಟ್ 5 ಪ್ರೋ ದರ ಎಷ್ಟಿತ್ತು? ಎಷ್ಟಾಗಿದೆ?

    4ಜಿಬಿ ರ‍್ಯಾಮ್ ಹಾಗೂ 64 ಜಿಬಿ ಆವೃತ್ತಿಗೆ ಈ ಮೊದಲು 14,999 ರೂ. ನಿಗದಿಯಾಗಿದ್ದರೆ, ಇಂದಿನಿಂದ 13,999 ರೂ.ಗೆ ಸಿಗಲಿದೆ. ಇದಲ್ಲದೇ 6ಜಿಬಿ ರ‍್ಯಾಮ್ ಹಾಗೂ 64 ಜಿಬಿ ಮಾದರಿಗೆ 16,999 ರೂ.ಗಳ ಬದಲಾಗಿ 15,999 ರೂ. ಆಗಿದೆ.

    ಕ್ಸಿಯೋಮಿ ಎಂಐ ಎ2 ದರ ಎಷ್ಟಿತ್ತು? ಎಷ್ಟಾಗಿದೆ?

    ಇತ್ತೀಚೆಗೆ ಬಿಡುಗಡೆ ಮಾಡಿದ್ದ ಎಂಐ ಎ2 4ಜಿಬಿ ರ‍್ಯಾಮ್ ಹಾಗೂ 64ಜಿಬಿ ಆವೃತ್ತಿಯ ಬೆಲೆ 16,999 ರೂಪಾಯಿಗಳಾಗಿತ್ತು. ಈಗ 15,999 ರೂ.ಆಗಿದೆ. ಇದಲ್ಲದೇ 6ಜಿಬಿ ರ‍್ಯಾಮ್ ಹಾಗೂ 128 ಜಿಬಿ ಆವೃತ್ತಿಗೆ 19,999 ರೂ. ಇತ್ತು. ಈಗ 18,999 ರೂ. ಆಗಿದೆ.

    ಕ್ಸಿಯೋಮಿ ರೆಡ್‍ಮೀ ವೈ2 ದರ ಎಷ್ಟಿತ್ತು? ಎಷ್ಟಾಗಿದೆ?

    4 ಜಿಬಿ ರ‍್ಯಾಮ್ ಹಾಗೂ 64 ಜಿಬಿ ಆವೃತ್ತಿಗೆ ಈ ಮೊದಲು 12,999 ರೂ. ಇತ್ತು ಈಗ 11,9990 ರೂ.ಗೆ ಇಳಿಕೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಅಗ್ಗದ 2 ಏಸಸ್ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಅಗ್ಗದ 2 ಏಸಸ್ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಏಸಸ್ ಕಂಪೆನಿಯು ಬಜೆಟ್ ಗಾತ್ರದ ನೂತನ ಫೀಚರ್ ಗಳನ್ನೊಳಗೊಂಡ ಏಸಸ್ ಝೆನ್‍ಫೋನ್ ಮ್ಯಾಕ್ಸ್ ಎಂ1 ಹಾಗೂ ಝೆನ್‍ಫೋನ್ ಲೈಟ್ ಎಲ್ 1 ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ಏಸಸ್ ಝೆನ್‍ಫೋನ್ ಸಂಸ್ಥೆಯು ಭಾರತದಲ್ಲಿ ಬಜೆಟ್ ಗಾತ್ರದ ಝೆನ್‍ಫೋನ್ ಮ್ಯಾಕ್ಸ್ ಎಂ1 ಹಾಗೂ ಝೆನ್‍ಫೋನ್ ಲೈಟ್ ಎಲ್ 1 ಸ್ಮಾರ್ಟ್ ಫೋನ್‍ಗಳನ್ನು ಬಿಡುಗಡೆ ಮಾಡಿದ್ದು, ಈ ಫೋನ್‍ಗಳು ರೆಡ್‍ಮೀ ಹಾಗೂ ರಿಯಲ್ ಮೀ ಒನ್ ಸ್ಮಾರ್ಟ್ ಫೋನ್‍ಗಳಿಗೆ ಪೈಪೋಟಿ ನೀಡಲಿವೆ.

    ತನ್ನ ಎರಡೂ ಸ್ಮಾರ್ಟ್ ಫೋನ್‍ಗಳಲ್ಲಿ ಸ್ನಾಪ್ ಡ್ರಾಗನ್ ಪ್ರೊಸೆಸರ್ ಬಳಸಿದ್ದು, ಸುದೀರ್ಘ ಬ್ಯಾಟರಿಯನ್ನು ಸಹ ನೀಡಿದೆ. ಈ ನೂತನ ಫೋನ್‍ಗಳು ಇದೇ ಅಕ್ಟೋಬರ್ 30 ರಿಂದ ಆನ್‍ಲೈನ್ ಜಾಲತಾಣ ಫ್ಲಿಪ್‍ಕಾರ್ಟ್‍ಗಳಲ್ಲಿ ಗ್ರಾಹಕರಿಗೆ ಸಿಗಲಿವೆ.

    ಏಸಸ್ ಝೆನ್‍ಫೋನ್ ಮ್ಯಾಕ್ಸ್ ಎಂ1 ಗುಣ ವೈಶಿಷ್ಟ್ಯಗಳು:
    ಬೆಲೆ ಎಷ್ಟು?
    3ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಗೆ 7,499 ರೂಪಾಯಿ ಬೆಲೆ ನಿಗದಿಪಡಿಸಿದ್ದು, ಕೇವಲ ಒಂದೇ ಒಂದು ಆವೃತ್ತಿಯಲ್ಲಿ ಮ್ಯಾಕ್ಸ್ ಎಂ1 ಲಭ್ಯವಿರಲಿದೆ. ಸ್ಮಾರ್ಟ್ ಫೋನ್ ಡೀಪ್ ಸೀ ಬ್ಲಾಕ್ ಹಾಗೂ ಸನ್‍ಲೈಟ್ ಗೋಲ್ಡ್ ಬಣ್ಣಗಳಲ್ಲಿ ಸಿಗುತ್ತದೆ.

    ಬಾಡಿ ಮತ್ತು ಡಿಸ್ಪ್ಲೇ:
    147.3 X 70.9 X 8.7 ಮಿ.ಮೀ. ಗಾತ್ರ, 150 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 5.45 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್ (720X1440 ಪಿಕ್ಸೆಲ್, 16:10 ಅನುಪಾತ 247 ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.0 (ಓರಿಯೋ), ಕ್ವಾಲಕಂ ಸ್ನಾಪ್ ಡ್ರಾಗನ್ 430, ಅಕ್ಟಾ ಕೋರ್ ಪ್ರೊಸೆಸರ್, 1.4 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 505 ಗ್ರಾಫಿಕ್ ಪ್ರೊಸೆಸರ್ ಹೊಂದಿದ್ದು 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ. 3ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೇ ಫೀಚರ್ ಗಳು:
    ಮುಂಭಾಗ 8 ಎಂಪಿ ಕ್ಯಾಮೆರಾ, ಹಿಂಭಾಗ 13 ಎಂಪಿ ಕ್ಯಾಮೆರಾ ಹೊಂದಿದ್ದು, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಇದರೊಂದಿಗೆ ಫಿಂಗರ್ ಪ್ರಿಂಟ್ ಸೆನ್ಸರ್, 4,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಹೊಂದಿದೆ.

    ಝೆನ್‍ಫೋನ್ ಲೈಟ್ ಎಲ್1 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
    ಬೆಲೆ ಎಷ್ಟು?
    2ಜಿಬಿ ರ‍್ಯಾಮ್/16 ಜಿಬಿ ಆಂತರಿಕ ಮೆಮೊರಿಗೆ 5,999 ರೂಪಾಯಿ ಬೆಲೆ ನಿಗದಿಪಡಿಸಿದ್ದು, ಕೇವಲ ಒಂದೇ ಒಂದು ಆವೃತ್ತಿಯಲ್ಲಿ ಲೈಟ್ ಎಲ್1 ಸ್ಮಾರ್ಟ್ ಫೋನ್ ಸಿಗುತ್ತದೆ. ಬ್ಲಾಕ್ ಹಾಗೂ ಗೋಲ್ಡ್ ಬಣ್ಣಗಳಲ್ಲಿ ಫೋನ್ ಲಭ್ಯವಿರಲಿದೆ.

    ಬಾಡಿ ಮತ್ತು ಡಿಸ್ಪ್ಲೇ:
    147.3 X 71.8 X 8.7 ಮಿ.ಮೀ., 140 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 5.45 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್ (720X1440 ಪಿಕ್ಸೆಲ್, 18:9 ಅನುಪಾತ 295 ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.0 (ಓರಿಯೋ), ಕ್ವಾಲಕಂ ಸ್ನಾಪ್ ಡ್ರಾಗನ್ 430, ಅಕ್ಟಾ ಕೋರ್ ಪ್ರೊಸೆಸರ್, 1.4 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 505 ಗ್ರಾಫಿಕ್ ಪ್ರೊಸೆಸರ್, 512 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ. 2ಜಿಬಿ ರ‍್ಯಾಮ್/16 ಜಿಬಿ ಆಂತರಿಕ ಮೆಮೊರಿ ನೀಡಲಾಗಿದೆ.

    ಕ್ಯಾಮೆರಾ ಹಾಗೂ ಇತರೇ ಫೀಚರ್ ಗಳು:
    ಮುಂಭಾಗ 5 ಎಂಪಿ ಕ್ಯಾಮೆರಾ, ಹಿಂಭಾಗ 13 ಎಂಪಿ ಕ್ಯಾಮೆರಾ ಹೊಂದಿದ್ದು, ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಇದರೊಂದಿಗೆ 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ಮಾರ್ಟ್ ಫೋನ್‍ಗಳಲ್ಲಿ ಈ 10 ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ!

    ಸ್ಮಾರ್ಟ್ ಫೋನ್‍ಗಳಲ್ಲಿ ಈ 10 ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ!

    ಸ್ಮಾರ್ಟ್ ಫೋನ್ ಇಂದು ನಮ್ಮ ಜೀವನದ ಅವಶ್ಯಕ ವಸ್ತುಗಳಲ್ಲಿ ಒಂದಾಗಿದೆ. ಬಹಳಷ್ಟು ಜನ ಪ್ರತಿ ದಿನ ಸಾಕಷ್ಟು ಗಂಟೆ ಫೋನಿನಲ್ಲೇ ಕಾಲ ಕಳೆಯುತ್ತಾರೆ. ಅತಿಯಾದರೆ ಅಮೃತವೂ ವಿಷ ಆಗುತ್ತೆ ಎನ್ನುವುಂತೆ ಸ್ಮಾರ್ಟ್ ಫೋನ್ ಬಳಕೆಯೂ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಸ್ಮಾರ್ಟ್ ಫೋನಲ್ಲಿ ಮಾಡಲೇ ಬಾರದ 10 ಪ್ರಮುಖ ವಿಚಾರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

    1. ಗಂಟೆಗಟ್ಟಲೇ ಫೋನ್ ಚಾರ್ಜಿಂಗ್:
    ಸ್ಮಾರ್ಟ್ ಫೋನ್‍ಗಳನ್ನು ಗಂಟೆ ಗಟ್ಟಲೇ ಚಾರ್ಜ್ ಮಾಡುವುದನ್ನು ಮಾಡಬಾರದು. ಮೊಬೈಲ್ ಸಂಪೂರ್ಣವಾಗಿ ಚಾರ್ಜ್ ಆದ ಬಳಿಕ ಕೂಡಲೇ ಚಾರ್ಜರ್ ಅನ್ನು ಅನ್‍ಪ್ಲಗ್ ಮಾಡಬೇಕು. ಚಾರ್ಜ್ ಆದ ನಂತರವೂ ಚಾರ್ಜ್ ಮಾಡುತ್ತಲೇ ಇದ್ದರೆ ಬ್ಯಾಟರಿಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

    2. ಶರ್ಟ್ ಜೇಬಲ್ಲಿ ಇಡಬೇಡಿ:
    ಸ್ಮಾರ್ಟ್ ಫೋನ್‍ಗಳಿದ್ದ ಹೊರಸೂಸುವ ತರಂಗಗಳು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆಂದು ವೈದ್ಯರು ಸ್ಪಷ್ಟಪಡಿಸಿದ್ದು, ಅದರಲ್ಲಿ ಎದೆಯ ಹತ್ತಿರ ಬಳಿ ಯಾವುದೇ ಕಾರಣಕ್ಕೂ ಇಟ್ಟುಕೊಳ್ಳಬಾರದು. ಒಂದು ವೇಳೆ ಪದೇ ಪದೇ ಶರ್ಟ್ ಪ್ಯಾಕೇಟ್‍ನಲ್ಲಿ ಇಟ್ಟುಕೊಳ್ಳುವುದರಿಂದ ಹೃದಯಸ್ತಂಭನವಾಗುವ ಸಾಧ್ಯತೆಯಿದೆ ಎಂಬುದು ವರದಿಗಳಲ್ಲಿ ಸಾಬೀತಾಗಿದೆ. ಹೀಗಾಗಿ ಮೊಬೈಲ್‍ಗಳನ್ನು ಶರ್ಟ್ ಪಾಕೇಟ್‍ಗಳಲ್ಲಿ ಇರಿಸಿಕೊಳ್ಳಬಾರದು.

    3. ಚಾರ್ಜಿಂಗ್ ವೇಳೆ ಹೆಡ್‍ಫೋನ್ ಬಳಕೆ ಬೇಡ:
    ಫೋನನ್ನು ಚಾರ್ಜಿಂಗ್ ಹಾಕಿದ ಸಮಯದಲ್ಲಿ ಯಾವುದೇ ಕಾರಣಕ್ಕೂ ಹೆಡ್‍ಫೋನ್‍ಗಳನ್ನು ಬಳಕೆ ಮಾಡಬಾರದು. ಚಾರ್ಜಿಂಗ್ ಆಗುತ್ತಿರುವ ವೇಳೆ ಮೊಬೈಲ್ ತರಂಗಳು ಹಾಗೂ ವಿದ್ಯುತ್ತಿನ ವ್ಯತ್ಯಾಸದಿಂದ ಉಂಟಾಗುವ ಕಂಪನದಿಂದ ಸಾವನ್ನಪ್ಪುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಈ ಹಿಂದೆ ಭಾರತದಲ್ಲಿ ಚಾರ್ಜಿಂಗ್ ವೇಳೆ ಹೆಡ್‍ಫೋನ್ ಹಾಕಿದ್ದಾಗ ಫೋನ್ ಸ್ಟೋಟಗೊಂಡ ಪ್ರಕರಣಗಳು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.

    4. ಮಲಗುವಾಗ ಫೋನ್ ಬೇಡ:
    ಸ್ಮಾರ್ಟ್ ಫೋನ್‍ಗಳನ್ನು ಹತ್ತಿರದಲ್ಲಿಟ್ಟುಕೊಂಡು ಮಲಗಲೇಬಾರದು. ಅಲ್ಲದೇ ತಲೆದಿಂಬಿನ ಕೆಳಗೆ ಮೊಬೈಲ್ ಇಟ್ಟುಕೊಳ್ಳಬಾರದು. ಮೊಬೈಲ್ ನೆಟ್‍ವರ್ಕ್‍ನ ತರಂಗಗಳು ತಮ್ಮ ಮೆದುಳಿನ ಮೇಲೆ ಪ್ರಭಾವ ಬೀರಿ, ನಮ್ಮ ನೆಮ್ಮದಿಯ ನಿದ್ದೆಗೆ ಭಂಗವನ್ನು ತರುತ್ತವೆ.

    5. ಸೂರ್ಯನಿಗೆ ಮುಖಮಾಡಿ ಚಾರ್ಜ್ ಮಾಡಬೇಡಿ:
    ಸ್ಮಾರ್ಟ್ ಫೋನ್‍ಗಳನ್ನು ಚಾರ್ಜಿಂಗ್ ಹಾಕುವಾಗ ಅದನ್ನು ನೆರಳು ಅಥವಾ ಸೂರ್ಯನ ಕಿರಣಗಳು ತಾಗದೇ ಇರುವಂತಹ ಸ್ಥಳದಲ್ಲಿ ಹಾಕಿರಿ. ಕಿಟಕಿಯ ಹತ್ತಿರ ಚಾರ್ಜಿಂಗ್ ಹಾಕುವುದು ಅಥವಾ ಸೂರ್ಯನ ಕಿರಣಗಳು ನೇರವಾಗಿ ಫೋನ್‍ಗೆ ಬೀಳುವ ಕಡೆ ಇಟ್ಟರೆ, ಸ್ಮಾರ್ಟ್‍ಫೋನ್‍ಗಳು ಹೆಚ್ಚೆಚ್ಚು ಬಿಸಿಯಾಗುವ ಸಂಭವವಿರುತ್ತದೆ. ಸುಮಾರು 45 ಡಿಗ್ರಿವರೆಗೂ ತಮ್ಮ ಶಾಖವನ್ನು ಸ್ಮಾರ್ಟ್ ಫೋನ್‍ಗಳು ಹೆಚ್ಚಿಸಿಕೊಳ್ಳುತ್ತವೆ.

    6. ಕಳಪೆ ಗುಣಮಟ್ಟದ ಚಾರ್ಜರ್ ಗಳನ್ನು ಬಳಸಬೇಡಿ:
    ಕಂಪೆನಿ ಫೋನಿನೊಂದಿಗೆ ನೀಡಿದ ಚಾರ್ಜರ್ ಅನ್ನು ಮಾತ್ರ ಬಳಸಿ. ಕಡಿಮೆ ಬೆಲೆಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ಕಳಪೆ ಗುಣಮಟ್ಟದ ಚಾರ್ಜರ್ ಬಳಸಲು ಹೋಗಬೇಡಿ. ಕಡಿಮೆ ಗುಣಮಟ್ಟ ಪವರ್ ಬ್ಯಾಂಕ್ ಖರೀದಿಸಬೇಡಿ. ಕಳಪೆ ಗುಣಮಟ್ಟದ ಚಾರ್ಜರ್ ಬಳಸಿ ಪ್ರತಿಷ್ಠಿತ ಕಂಪೆನಿಗಳ ಫೋನ್ ಗಳ ಸ್ಫೋಟಗೊಂಡಿರುವ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇರುವುದನ್ನು ನೀವು ಗಮನಿಸಿರಬಹುದು.

    7. ಚಾರ್ಜಿಂಗ್ ವೇಳೆ ಸ್ಮಾರ್ಟ್‍ಫೋನ್ ರಕ್ಷಣಾ ಕವಚ(ಕೇಸ್)ಗಳನ್ನು ತೆಗೆಯಿರಿ:
    ಸಾಧ್ಯವಾದರೆ ಮೊಬೈಲ್ ಚಾರ್ಜ್ ಮಾಡುವ ವೇಳೆ ಮೊಬೈಲ್ ಕೇಸ್‍ಗಳನ್ನು ತೆಗೆದು ಚಾರ್ಜ್ ಮಾಡಬೇಕು. ಇದರಿಂದ ಮೊಬೈಲ್ ಹೀಟ್ ಆಗುವ ಪ್ರಕ್ರಿಯೆ ಕಡಿಮೆಯಾಗಯತ್ತದೆ. ಹೀಗೆ ಮಾಡಿದರೆ ಮೊಬೈಲ್‍ಗೆ ವಾತಾವರಣದಲ್ಲಿನ ಗಾಳಿಯು ನೇರವಾಗಿ ಸೇರುವುದರಿಂದ ಮೊಬೈಲ್ ಹೀಟ್ ಆಗುವ ಪ್ರಮೇಯ ಇರುವುದಿಲ್ಲ.

    8.ಥರ್ಡ್ ಪಾರ್ಟಿ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬೇಡಿ:
    ಆ್ಯಪ್ ಸ್ಟೋರ್ ಗಳನ್ನು ಹೊರತು ಪಡಿಸಿ ಇತರೆ ಯಾವುದೇ ಮೂಲಗಳಿಂದ ಆ್ಯಪ್‍ಗಳನ್ನು ಡೌನ್‍ಲೋಡ್ ಮಾಡಿಕೊಳ್ಳಬೇಡಿ. ವಿಶೇಷವಾಗಿ ಗೂಗಲ್ ಕಂಪೆನಿ ತನ್ನ ಪ್ಲೇ ಸ್ಟೋರ್ ನಲ್ಲಿ ಅಪ್ಲಿಕೇಶನ್ ಸೇರ್ಪಡೆಯಾಗಲು ಕೆಲವೊಂದು ಮಾನದಂಡಗಳನ್ನು ನಿಗದಿ ಪಡಿಸಿದೆ. ಈ ಮಾನದಂಡಗಳನ್ನು ಉಲ್ಲಂಘಿಸಿದ ಆ್ಯಪ್ ಗಳು ಪ್ಲೇ ಸ್ಟೋರ್ ನಲ್ಲಿ ಲಭ್ಯವಿರುವುದಿಲ್ಲ. ಆದರೆ ವೆಬ್ ಸೈಟ್ ಮೂಲಕ ಡೌನ್‍ಲೋಡ್ ಮಾಡಬಹುದು. ಈ ಆಂಡ್ರಾಯ್ಡ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿದರೆ ಫೋನಿನಲ್ಲಿ ಡೇಟಾ ನಮಗೆ ಗೊತ್ತಿಲ್ಲದಂತೆ ಕದಿಯುವ ಸಾಧ್ಯತೆ ಹೆಚ್ಚಿರುತ್ತದೆ.

    9. ನೀರಿಗೆ ಬಿದ್ದ ಕೂಡಲೇ ಹೆಡ್‍ಫೋನ್ ತೆಗೆಯಬೇಡಿ:
    ಒಂದು ವೇಳೆ ಚಾರ್ಜಿಂಗ್ ಹಾಕಿದಾಗ ಅಥವಾ ಹೆಡ್‍ಫೋನ್ ಸಹಿತ ಮೊಬೈಲ್ ನೀರಿನಲ್ಲಿ ಬಿದ್ದರೆ, ತಕ್ಷಣವೇ ಮೊಬೈಲನ್ನು ನೀರಿನಿಂದ ತೆಗಿಯಿರಿ. ಹೆಡ್‍ಫೋನ್ ಹಾಗೂ ಚಾರ್ಜರ್ ಕೇಬಲ್ ಅನ್ನು ನೀರಿನಲ್ಲೇ ತೆಗೆಯಬೇಡಿ. ನೀರಿನಲ್ಲಿ ಕೇಬಲ್ ತೆಗೆದರೆ ನೀರು ಮೊಬೈಲ್ ಒಳ ಪ್ರವೇಶಿಸುವ ಸಾಧ್ಯತೆ ಹೆಚ್ಚಿರುತ್ತದೆ. ಈಗ ದುಬಾರಿ ಬೆಲೆಯ ಫೋನ್ ಗಳಿಗೆ ಜಲ ನಿರೋಧಕ ವಿಶೇಷತೆ ನೀಡಿದರೂ ಬಜೆಟ್ ಫೋನ್‍ಗಳ ಬಳಕೆ ವೇಳೆ ಎಚ್ಚರದಲ್ಲಿರಬೇಕಾಗುತ್ತದೆ.

    10. ಫೋನ್‍ಗಳನ್ನು ಅನ್‍ಲಾಕ್‍ನಲ್ಲಿಡಬೇಡಿ:
    ಸ್ಮಾರ್ಟ್ ಫೋನ್‍ಗಳಲ್ಲಿ ಎಲ್ಲಾ ವೈಯಕ್ತಿಕ ವಿಷಯಗಳನ್ನು ಸಂಗ್ರಹಿಸಿರುತ್ತೇವೆ. ಹೀಗಾಗಿ ಯಾವುದೇ ಕಾರಣಕ್ಕೂ ಫೋನ್‍ಗಳನ್ನು ಅನ್‍ಲಾಕ್ ಮಾಡಿ ಬಿಡಬೇಡಿ. ಕಡ್ಡಾಯವಾಗಿ ನಿಮಗೆ ಬೇಕಾದ ರೀತಿಯಲ್ಲಿ ಲಾಕಿಂಗ್ ವ್ಯವಸ್ಥೆ ಮಾಡಿಕೊಳ್ಳಿ. ಇದರ ಜೊತೆ ಫಿಂಗರ್ ಪ್ರಿಂಟ್ ಸೆನ್ಸರ್ ಹಾಗೂ ಫೇಸ್ ಲಾಕ್ ಗಳನ್ನು ಬಳಸಿಕೊಳ್ಳಿ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವೈದೇಹಿ ಮೆಡಿಕಲ್ ಕಾಲೇಜಿನಲ್ಲಿ ಪಾಠ ಮಾಡುತ್ತೆ ರೋಬೋ!

    ವೈದೇಹಿ ಮೆಡಿಕಲ್ ಕಾಲೇಜಿನಲ್ಲಿ ಪಾಠ ಮಾಡುತ್ತೆ ರೋಬೋ!

    ಬೆಂಗಳೂರು: ಭಾರತದ ಅಗ್ರಗಣ್ಯ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ `ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರ’ 2018ರಲ್ಲಿ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದ್ದು, ರೋಬೋ ಮೂಲಕ ಬೋಧನೆ ಮಾಡುವ ನವೀನ ತಂತ್ರಜ್ಞಾನವನ್ನು ಅಳವಡಿಸಲು ಮುಂದಾಗಿದೆ.

    ರೋಬೋ ಬೋಧನೆ ಮಾಡಲು `ಪೆಪ್ಪರ್’ ಎನ್ನುವ ರೋಬೋವನ್ನು ಬಳಕೆ ಮಾಡುತ್ತಿದ್ದು, ಇದು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಗೆಳೆಯ, ಒಡನಾಡಿ ಮತ್ತು ಮಾರ್ಗದರ್ಶಕನಂತೆ ಕೆಲಸ ಮಾಡಲಿದೆ.

    ಹೊಸ ತಂತ್ರಜ್ಞಾನ ಮೂಲಕ ಬೋಧನೆ ಮಾಡುವ ಮೂಲಕ ಶೈಕ್ಷಣಿಕ ವರ್ಷದಲ್ಲಿ, ವಿದ್ಯಾರ್ಥಿಗಳ ಅಗತ್ಯಗಳಿಗೆ ತಕ್ಕಂತೆ ರೋಬೋದ ಪ್ರೋಗ್ರಾಮಿಂಗ್ ತಯಾರಿಸಿಸಲಾಗುತ್ತದೆ. ಅಲ್ಲದೇ ಕಲಿಕಾ ಕೊಠಡಿಗಳ ಸ್ಥಿತಿಗತಿಗಳು, ಗುಣಮಟ್ಟ ಇತ್ಯಾದಿಗಳನ್ನು ಅಳೆಯಲು ಗೇಮಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ದೂರಸಂವೇದಿ ತಂತ್ರಜ್ಞಾನವನ್ನು ಆಧರಿಸಿದ ರೇಡಿಯೋ ಫ್ರೀಕ್ವೆನ್ಸಿ ಕುರಿತ ಸಂಶೋಧನೆಗಳನ್ನು ಕೂಡ ಆರಂಭಿಸಲಾಗುತ್ತಿದೆ. ಗುಣಮಟ್ಟದಿಂದ ಕೂಡಿದ ಮತ್ತು ಡಿಜಿಟಲ್ ರೂಪದ ಶಿಕ್ಷಣವನ್ನು ಸಾಕಾರಗೊಳಿಸುವುದಕ್ಕಾಗಿ ಭವಿಷ್ಯದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತದೆ.

    ಭವಿಷ್ಯದ ಕಲಿಕೆಯ ದೂರದರ್ಶಿತ್ವ ಮತ್ತು ವಿಶ್ವ ಮಟ್ಟದ ಆರೋಗ್ಯ ಚಿಕಿತ್ಸಾ ವ್ಯವಸ್ಥೆಯನ್ನು ಹೊಂದಿರುವುದು ನಮ್ಮ ಈ ಸಂಸ್ಥೆಯ ವೈಶಿಷ್ಟ್ಯ. ಸಂಸ್ಥೆಯು 65 ಎಕರೆ ವಿಸ್ತಾರವಾದ ಕ್ಯಾಂಪಸ್ ಹೊಂದಿದ್ದು, ವಿಶ್ವ ದರ್ಜೆಯ ಬೋಧನ ಸೌಲಭ್ಯಗಳನ್ನು ಹೊಂದಿದೆ. ಅಲ್ಲದೇ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಬೇಕಾದ ವಸತಿ ವ್ಯವಸ್ಥೆ, ನುರಿತ ಉಪನ್ಯಾಸಕ ವೃಂದ ಮತ್ತು ಸಂಪೂರ್ಣ ಅನುಕೂಲವುಳ್ಳ 1,600 ಹಾಸಿಗೆಗಳ ಸಾಮಥ್ರ್ಯದ ಸುಸಜ್ಜಿತ ಆಸ್ಪತ್ರೆಯನ್ನು ಈ ಕ್ಯಾಂಪಸ್ ಹೊಂದಿದೆ.

    2016ರಲ್ಲಿಯೇ ವಿದ್ಯಾರ್ಥಿಗಳಿಗೆ 3ಡಿ ದೃಶ್ಯಾವಳಿಗಳೊಂದಿಗೆ ವೈದ್ಯಕೀಯ ಶಿಕ್ಷಣವನ್ನು ಕಲಿಯುವ ಸೌಲಭ್ಯವನ್ನು ಒದಗಿಸುವ `ಇಮ್ಮರ್ಸೀವ್ ತಂತ್ರಜ್ಞಾನ’ವನ್ನು ಸಂಸ್ಥೆಯಲ್ಲಿ ಅಳವಡಿಸಿಕೊಂಡಿದೆ. ಈ ವಿಶಿಷ್ಟ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಜಗತ್ತಿನ ಮೊಟ್ಟಮೊದಲ ವೈದ್ಯಕೀಯ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆಗೆಯನ್ನು ಪಡೆದುಕೊಂಡಿದೆ. ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ಯಾವುದೇ ಒಂದು ವಿಷಯದ ಬಗ್ಗೆ ಆಳವಾದ ಗ್ರಹಿಕೆ ಮತ್ತು ಅನುಸಂಧಾನ ಸಾಧ್ಯವಾಗುತ್ತದೆ. ಇದರ ಜೊತೆಗೆ, ವಿದ್ಯಾರ್ಥಿಗಳು ದೀರ್ಘಕಾಲ ಒಂದು ವಿಚಾರದ ಮೇಲೆ ತಮ್ಮ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.

    ಸಂಸ್ಥೆಯಲ್ಲಿ ಸುಸಜ್ಜಿತವಾದ `ಸಂಶೋಧನಾ ಮ್ಯೂಸಿಯಂ’ (ಡಿಸ್ಕವರಿ ಮ್ಯೂಸಿಯಂ) ಅನ್ನು 50,000 ಚದರ ಅಡಿಗಳಷ್ಟು ವಿಸ್ತಾರವಾದ ಜಾಗದಲ್ಲಿ ನೂರಾರು ಬಗೆಯ ವೈದ್ಯಕೀಯ ಮಾದರಿಗಳೊಂದಿಗೆ ನಿರ್ಮಿಸಲಾಗಿದೆ. ವೈದೇಹಿ ಆಸ್ಪತ್ರೆಯು ಸ್ಥಾಪನೆ ಬಳಿಕ ಇಲ್ಲಿವರೆಗೂ 60 ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಈ ಮೂಲಕ, ನಮ್ಮ ಸಂಸ್ಥೆಯು ಆರೋಗ್ಯ ಸೇವೆಗಳಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರು ಮಹಾನಗರದ ಬಹುದೊಡ್ಡ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವುದು ವಿಶೇಷ.

    ಸಂಸ್ಥೆಯಲ್ಲಿ ಅತ್ಯಾಧುನಿಕ ವ್ಯವಸ್ಥೆಯುಳ್ಳ, 300 ಹಾಸಿಗೆಗಳ ಸಾಮರ್ಥ್ಯದ ಕ್ಯಾನ್ಸರ್ ಕೇಂದ್ರ (ವೈದೇಹಿ ಆಂಕಾಲಜಿ ಇನ್ಸ್ಟಿಟ್ಯೂಟ್ ಅಂಡ್ ಸೆಂಟರ್ ಆಫ್ ಎಕ್ಸಲೆನ್ಸ್) 14 ಬಗೆಯ ಪದವಿ ಕೋರ್ಸುಗಳು, 6 ಬಗೆಯ ಸ್ನಾತಕೋತ್ತರ ಪದವಿಗಳು ಮತ್ತು 19 ಬಗೆಯ ಸೂಪರ್ ಸ್ಪೆಷಾಲಿಟಿ ಕೋರ್ಸುಗಳನ್ನು ಹೊಂದಿದೆ. ಇಲ್ಲಿ ಜಗತ್ತಿನ 12 ರಾಷ್ಟ್ರಗಳಿಗೆ ಸೇರಿದ ವಿದ್ಯಾರ್ಥಿಗಳು ಓದುತ್ತಿದ್ದಾರೆ.

    ಕಳೆದ 8 ವರ್ಷಗಳಲ್ಲಿ ಸಂಸ್ಥೆಯಲ್ಲಿ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಪದವೀಧರರಾಗಿದ್ದು, ಇವರಲ್ಲಿ 405 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಗೂ ಅಂತರರಾಷ್ಟ್ರೀಯ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಸಿಗುವಂತೆ ಮಾಡಬೇಕೆನ್ನುವುದೇ `ವೈದೇಹಿ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ’ಯ ಗುರಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೇವಾ ವಿಶ್ವ ವಿದ್ಯಾಲಯದಲ್ಲಿ ಆಧುನಿಕ ಭದ್ರತಾ ವ್ಯವಸ್ಥೆ

    ರೇವಾ ವಿಶ್ವ ವಿದ್ಯಾಲಯದಲ್ಲಿ ಆಧುನಿಕ ಭದ್ರತಾ ವ್ಯವಸ್ಥೆ

    ಬೆಂಗಳೂರು: ವಿದ್ಯಾರ್ಥಿಗಳಿಗೆ ಸೂಕ್ತ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಇದೇ ಪ್ರಥಮ ಬಾರಿಗೆ ನಗರದ ಯಲಹಂಕದಲ್ಲಿರುವ ರೇವಾ ವಿಶ್ವವಿದ್ಯಾನಿಲಯದಲ್ಲಿ ಸ್ಟೇಟ್ ಆಫ್ ದಿ ಆರ್ಟ್ ಸೆಕ್ಯೂರಿಟಿ ಸರ್ವೀಸ್ ಸಿಸ್ಟಂ ನೂತನವಾಗಿ ನಿರ್ಮಿಸಿದ್ದು, ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ.ಶ್ಯಾಮರಾಜು ಇಂದು ಚಾಲನೆ ನೀಡಿದರು.

    ಅಲರ್ಟ್ ಐ ಪ್ರೀಕ್ವೆನ್ಸಿ ಡಿಟೆಕ್ಟರ್ ಎಂದು ಕರೆಯಲ್ಪಡುವ ಈ ರಕ್ಷಣೆ ವ್ಯವಸ್ಥೆಯಲ್ಲಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವವರ ಮಾಹಿತಿಯನ್ನು ವಿಡಿಯೋ ಸಮೇತ ಸಹಿತ ಸ್ವಯಂ ಚಾಲಿತವಾಗಿ ಸಂಪೂರ್ಣ ಮಾಹಿತಿಯನ್ನು ಸಂಗ್ರಹ ಮಾಡುತ್ತದೆ. ಇನ್ನುಳಿದಂತೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ನೌಕರರು ಬಾರ್ ಕೋಡ್ ನೀಡಿದ್ದು, ಕಾಲೇಜಿಗೆ ಭೇಟಿ ನೀಡಿದ್ದ ಸಮಯ ಹಾಗೂ ಸಮಗ್ರ ಮಾಹಿತಿ ಕೂಡ ದಾಖಲಾಗುತ್ತದೆ. ಇನ್ನುಳಿದಂತೆ ವಾಹನಗಳ ಮಾಹಿತಿಗಳು ಸಂಗ್ರಹವಾಗುತ್ತದೆ.

    ಉದ್ಘಾಟಣೆ ನಂತರ ಮಾತನಾಡಿದ ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಪಿ.ಶ್ಯಾಮರಾಜು, ನಮ್ಮ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿ 4,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ. ಅವರಿಗೆ ಸೂಕ್ತಭದ್ರತೆ ಹಾಗೂ ಅವರ ಚಲನವಲನಗಳ ಮೇಲೆ ನಿಗಾ ಇಡುವ ಸಲುವಾಗಿಯು ಎಚ್ಎಫ್‍ಡಿ ರಕ್ಷಣಾ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಹಾಗೂ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿರುವ ಸಂಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದ್ದು, ಕಾಲೇಜು ವಿದ್ಯಾರ್ಥಿಗಳ ಚಲನ – ವಲನಗಳನ್ನು ವೀಕ್ಷಿಸುವುದರ ಜೊತೆಗೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

    ಇದೇ ವೇಳೆ ರೇವಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಸ್.ವೈ.ಕುಲಕರ್ಣಿ ಸೇರಿದಂತೆ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

  • ರಸ್ತೆ ಗುತ್ತಿಗೆದಾರರಲ್ಲಿ ಭ್ರಷ್ಟತೆ ಕಂಡುಬಂದಲ್ಲಿ ಅವರ ಮೇಲೆಯೇ ಬುಲ್‍ಡೋಜರ್ ಓಡಿಸಲಾಗುವುದು:ನಿತಿನ್ ಗಡ್ಕರಿ

    ರಸ್ತೆ ಗುತ್ತಿಗೆದಾರರಲ್ಲಿ ಭ್ರಷ್ಟತೆ ಕಂಡುಬಂದಲ್ಲಿ ಅವರ ಮೇಲೆಯೇ ಬುಲ್‍ಡೋಜರ್ ಓಡಿಸಲಾಗುವುದು:ನಿತಿನ್ ಗಡ್ಕರಿ

    ಭೋಪಾಲ್: ಹೆದ್ದಾರಿಗಳ ನಿರ್ಮಾಣದಲ್ಲಿ ಭ್ರಷ್ಟಾಚಾರ ಕಂಡುಬಂದಲ್ಲಿ ಗುತ್ತಿಗೆದಾರರ ಮೇಲೆ ಬುಲ್ ಡೋಜರ್ ಓಡಿಸಲಾಗುವುದು ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಹಾಗೂ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ.

    ಬೆಟುಲ್ ನಲ್ಲಿ ಅಸಂಘಟಿತ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು, ಸರ್ಕಾರ ಯಾವುದೇ ರೀತಿಯ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ. ಹೆದ್ದಾರಿಗಳ ನಿರ್ಮಾಣದಲ್ಲಿ ಭ್ರಷ್ಟಾಚಾರ ಕಂಡುಬಂದಲ್ಲಿ ಬುಲ್‍ಡೋಜರ್ ಕೆಳಗೆ ಜಲ್ಲಿ ಕಲ್ಲಿನ ಬದಲು ಭ್ರಷ್ಟ ಗುತ್ತಿಗೆದಾರರು ಇರುತ್ತಾರೆ ಎಂದು ಹೇಳಿದ್ದಾರೆ.

    ಯಾವೊಬ್ಬ ಗುತ್ತಿಗೆದಾರರು ನನ್ನ ಕಚೇರಿ ಬಳಿ ಬಂದಿಲ್ಲ. ಹೆದ್ದಾರಿಗಳ ಕಾಮಗಾರಿ ಉತ್ತಮವಾಗಿರಬೇಕು. ಸರ್ಕಾರದ ಬಳಿ ಸಾಕಷ್ಟು ಹಣವಿದೆ. ರಸ್ತೆ ಕಾಮಗಾರಿಗಳಿಗೆ ಹಣದ ಕೊರತೆ ಎಂದು ಎದುರಾಗಿಲ್ಲ. ತಂತ್ರಜ್ಞಾನದ ಕೊರತೆ ಹಾಗೂ ತಂತ್ರಜ್ಞಾನವನ್ನು ಬಳಸಿ ಸರಿಯಾದ ದಿಕ್ಕಿನಲ್ಲಿ ಹೋಗುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಸಹಾಯವಾಗಲಿದೆ ಎಂದು ತಿಳಿಸಿದರು.

  • ವಿಶ್ವದ ಮೊದಲ ಡಿಜಿಟಲ್ ಮಾತ್ರೆಯನ್ನು ನುಂಗಲಿದ್ದಾರೆ ಅಮೆರಿಕ ಜನತೆ!

    ವಿಶ್ವದ ಮೊದಲ ಡಿಜಿಟಲ್ ಮಾತ್ರೆಯನ್ನು ನುಂಗಲಿದ್ದಾರೆ ಅಮೆರಿಕ ಜನತೆ!

    ವಾಷಿಂಗ್ಟನ್: ಮಾನವನ ದೇಹವನ್ನು ಪ್ರವೇಶಿದ ನಂತರ ಮಾತ್ರೆಯೇ ಸ್ವತಃ ತನ್ನ ಮಾಹಿತಿಯನ್ನು ಒದಗಿಸುವ ವಿಶಿಷ್ಟ ತಂತ್ರಜ್ಞಾನದ ಡಿಜಿಟಲ್ ಮಾತ್ರೆಗೆ ಅಮೆರಿಕ ಸರ್ಕಾರ ಅನುಮತಿಯನ್ನು ನೀಡಿದೆ. ಒಟುಕ್ಸಾ ಫಾರ್ಮಸುಟಿಕಲ್ಸ್ ಸಂಸ್ಥೆ ಸಿದ್ಧಪಡಿಸಿರುವ ಮಾತ್ರೆಗೆ ಅಮೆರಿಕದ ಆಹಾರ ಮತ್ತು ಔಷಧ ಇಲಾಖೆ ಅನುಮತಿ ನೀಡಿದೆ.

    ಏನಿದು ಡಿಜಿಟಲ್ ಮಾತ್ರೆ: ವೈದ್ಯರು ರೋಗಿಗಳಿಗೆ ನೀಡುವ ಎಲ್ಲಾ ಮಾತ್ರೆಗಳಂತೆ ಇದು ಸಹ ಸಾಮಾನ್ಯ ಮಾದರಿಯ ಮಾತ್ರೆಯಾಗಿದ್ದು, ಆದರೆ ಇದರಲ್ಲಿ ಸಿಲಿಕಾ, ಮ್ಯಾಗ್ನೇಷಿಯಂ, ತಾಮ್ರದಿಂದ ತಯಾರಿಸಿದ ಸಣ್ಣ ಚೀಪ್ ಅಳವಡಿಸಲಾಗಿರುತ್ತದೆ. ರೋಗಿ ಮಾತ್ರೆ ಸೇವಿಸಿದ ನಂತರ ಮಾತ್ರೆ ಸೇವಿಸಿದ ಸಮಯ, ಪ್ರಮಾಣ ಕುರಿತ ಎಲ್ಲಾ ಅಂಶಗಳ ಮಾಹಿತಿಯನ್ನು ನೀಡುತ್ತದೆ. ಅಲ್ಲದೇ ಮಾತ್ರೆ ಸೇವಿಸಿದ ನಂತರ ಚಿಪ್ ರೋಗಿಯ ಮಲದ ಮೂಲಕ ಹೊರ ಬರುತ್ತದೆ.

    ಉಪಯೋಗ ಏನು? ಮಾತ್ರೆ ರೋಗಿಯ ಹೊಟ್ಟೆ ಸೇರಿಸಿದ ನಂತರ ಯಾವ ಪ್ರಮಾಣದಲ್ಲಿ ಔಷಧಿಯನ್ನು ಬಳಸಲಾಗಿದೆ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ. ಈ ಮಾಹಿತಿ ಲಭಿಸಲು ಕನಿಷ್ಟ ಮಾತ್ರೆ ಸೇವಿಸಿದ ನಂತರ 30 ನಿಮಿಷಗಳಿಂದ ರಿಂದ 2 ಗಂಟೆಗಳ ಅವಧಿ ಬೇಕಾಗುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

    ಕಾರ್ಯನಿರ್ವಹಣೆ ಹೇಗೆ?
    ರೋಗಿಯು ಮಾತ್ರೆ ಸೇವಿಸಿದ ನಂತರ ಹೊಟ್ಟೆಯೊಳಗಿನ ಆಮ್ಲದೊಂದಿಗೆ ಸಮ್ಮಿಲಗೊಂಡು ಪ್ರತಿಕ್ರಿಯೆ ನೀಡುತ್ತದೆ. ಮಾತ್ರೆಯಲ್ಲಿ ಅಳವಡಿಸಲಾಗರುವ ಸಣ್ಣ ಗಾತ್ರದ ಚಿಪ್ ರೋಗಿಯ ಕೈಗೆ ಅಳವಡಿಸುವ ಯಂತ್ರಕ್ಕೆ ಮಾಹಿತಿ ರವಾನಿಸುತ್ತದೆ. ನಂತರ ಈ ಮಾಹಿತಿಯನ್ನು ರೋಗಿಯ ಮೊಬೈಲ್, ಡಾಕ್ಟರ್ ಅಥವಾ ಸಂಬಂಧಿಕರ ಮೊಬೈಲ್‍ಗೆ ರವಾನೆಯಾಗುತ್ತದೆ. ಇದರಿಂದ ರೋಗಿ ಔಷಧಿ ಸೇವಿಸಿದ್ದಾರ, ಇಲ್ಲವೇ ಎಂಬ ಮಾಹಿತಿ ಸುಲಭವಾಗಿ ಲಭ್ಯವಾಗುತ್ತದೆ.

    ಪ್ರಸ್ತುತ ಡಿಜಿಟಲ್ ಮಾತ್ರೆಗಳನ್ನು ಮಾನಸಿಕ ಸಮಸ್ಯೆ ಹಾಗೂ ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳಿಗೆ ಬಳಸಲು ಅನುಮತಿ ನೀಡಲಾಗಿಲ್ಲ.