Tag: ಡ್ರೋಣ್ ಪ್ರತಾಪ್

  • ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ – ಡ್ರೋಣ್ ಪ್ರತಾಪ್‍ 3 ದಿನ ಪೊಲೀಸ್‌ ಕಸ್ಟಡಿಗೆ

    ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ – ಡ್ರೋಣ್ ಪ್ರತಾಪ್‍ 3 ದಿನ ಪೊಲೀಸ್‌ ಕಸ್ಟಡಿಗೆ

    ತುಮಕೂರು: ಸೋಡಿಯಂ ಮೆಟಲ್ (Chemical Blast) ಬಳಸಿ ಕೃಷಿ ಹೊಂಡದಲ್ಲಿ ಸ್ಫೋಟಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಖ್ಯಾತಿಯ ಡ್ರೋಣ್ ಪ್ರತಾಪ್‍ನನ್ನು (Drone Prathap) ಮಧುಗಿರಿಯ ಜೆಎಂಎಫ್‍ಸಿ ನ್ಯಾಯಾಲಯ (Court) ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

    ಪ್ರಕರಣ ಸಂಬಂಧ ಡ್ರೊಣ್ ಪ್ರತಾಪ್, ಜಮೀನಿನ ಮಾಲೀಕ ಸೇರಿದಂತೆ ಮೂವರ ಮೇಲೆ ಎಫ್‍ಐಆರ್ ದಾಖಲಾಗಿದೆ. ಮಿಡಿಗೇಶಿ ಪೊಲೀಸರಿಂದ ಸುಮೋಟೋ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪೊಲೀಸರು ಪ್ರತಾಪ್‌ನನ್ನ ಕರೆತಂದು ಸ್ಫೋಟ ನಡೆಸಿದ್ದ ಸ್ಥಳ ಮಹಜರು ನಡೆಸಿದ್ದಾರೆ.

    ಏನಿದು ಪ್ರಕರಣ?
    ನೀರಿಗೆ ಕೆಮಿಕಲ್ ಹಾಕಿ ಡ್ರೋನ್ ಪ್ರತಾಪ್ ನೀರಿನಾಳದಲ್ಲಿ ಬ್ಲಾಸ್ಟ್ ಮಾಡಿದ್ದಾನೆ. ಕೆಮಿಕಲ್ ಎಸೆದಿದ್ದೇ ತಡ ದೊಡ್ಡ ಮಟ್ಟದಲ್ಲಿ ಬ್ಲಾಸ್ಟ್ ಆಗಿದೆ. ಬೆಂಕಿ ಸಹ ಚಿಮ್ಮಿದೆ. ಅಷ್ಟೇ ಅಲ್ಲದೇ ಬಾಂಬ್ ಬ್ಲಾಸ್ಟ್ ರೀತಿ ದೃಶ್ಯ ಕಂಡುಬಂದಿದೆ. ಈ ವೀಡಿಯೋ ನೋಡಿ ಪ್ರತಾಪ್ ಬಿಲ್ಡಪ್ ಬೇರೆ ಕೊಟ್ಟಿದ್ದಾನೆ. ಜೊತೆಗೆ ನಗು-ನಗುತ್ತಲೇ ನೋಡಿ.. ನೋಡಿ ದೊಡ್ಡ ಬ್ಲಾಸ್ಟ್ ಇದು ಎಂದು ಪ್ರತಾಪ್ ಕೂಗಿದ್ದಾನೆ.

    ಈ ರೀತಿ ವಿಡಿಯೋ ಮಾಡೋದು ಕಾನೂನು ಬಾಹಿರ. ಹೀಗಾಗಿ ಪ್ರತಾಪ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ. ಯಾವೆಲ್ಲ ಕೆಮಿಕಲ್ ಹಾಕಿದ್ರೇ ಬ್ಲಾಸ್ಟ್ ಆಗುತ್ತೆ ಅಂತಾನೂ ಲೈವ್‌ನಲ್ಲಿ ಹೇಳಿದ್ದ. ಇದನ್ನು ಕಿಡಿಗೇಡಿಗಳು ಕುಕೃತ್ಯಕ್ಕೆ ಬಳಸುವ ಸಾಧ್ಯತೆ ಇದೆ ಎಂದು ಪರಿಸತವಾದಿ ವಿಜಯ್ ನಿಶಾಂತ್ ಕಿಡಿಕಾರಿದ್ದರು.

    ಈ ರೀತಿಯ ಪ್ರಯೋಗ ಅಪಾಯಕಾರಿ ಮತ್ತು ಕಾನೂನು ಬಾಹಿರವಾದದ್ದು. ಈ ಬ್ಲಾಸ್ಟ್ ವಿಡಿಯೋ ಮಾಡುವ ಮುನ್ನ ಕನಿಷ್ಟ ಪಕ್ಷ ಡ್ರೋನ್ ಪ್ರತಾಪ್ ಯೋಚನೆ ಮಾಡಬೇಕಾಗಿತ್ತು ಇದ್ಯಾವ ಸೀಮೆ ವಿಜ್ಞಾನದ ಬಗ್ಗೆ ಮಾಹಿತಿ ಕೊಡ್ತಾ ಇರೋದು ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ.

  • ಡ್ರೋಣ್ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ತೆಗೆದ ಯುವಕ!

    ಡ್ರೋಣ್ ಪ್ರತಾಪ್ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ತೆಗೆದ ಯುವಕ!

    – ಹಸಿ ಮೆಣಸಿನಕಾಯಿ ತಿಂದು ವೀಡಿಯೋ ಅಪ್ಲೋಡ್

    ಮಂಗಳೂರು: ಬಿಗ್ ಬಾಸ್ ಸೀಸನ್ 10 (Big Boss) ರಲ್ಲಿ ಡ್ರೋಣ್ ಪ್ರತಾಪ್ (Drone Pratap) ಸೋತಿದ್ದಕ್ಕೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬದ ಯುವಕನೋರ್ವ (Youth) ಅರ್ಧ ಗಡ್ಡ, ಮೀಸೆ ತೆಗೆದು ತನ್ನ ಚಾಲೆಂಜ್ ಪೂರೈಸಿದ್ದಾನೆ.

    ಭಾನುವಾರಂದು ನಡೆದ ಕನ್ನಡ ಬಿಗ್ ಬಾಸ್ ಸೀಸನ್ 10 ಗ್ರಾಂಡ್ ಫಿನಾಲೆಯಲ್ಲಿ ವಿಜೇತರಾಗಿ ಕಾರ್ತಿಕ್ ಮಹೇಶ್ ಹೊರಹಮ್ಮಿದ್ದಾರೆ. ಈ ಸಂದರ್ಭದಲ್ಲಿ ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್ ಆಬಿದ್ ಎಂಬಾತ ಡ್ರೋಣ್ ಪ್ರತಾಪ್‌ಗಾಗಿ ಅರ್ಥ ಗಡ್ಡ ಹಾಗೂ ಮೀಸೆ ತೆಗೆದಿದ್ದಾನೆ. ಇದನ್ನೂ ಓದಿ:  ಮಾಜಿ ಪ್ರಧಾನಿಯೊಬ್ಬರ ಮಗ ಜಿಲ್ಲೆಗೆ ಬಂದು ಶಾಂತಿ ಕದಡುವ ನಿರ್ಧಾರ ಮಾಡಿರೋದು ಸರಿಯಲ್ಲ: ಚಲುವರಾಯಸ್ವಾಮಿ

    ಝೈನುಲ್ ಈ ಬಾರಿ ಬಿಗ್‌ಬಾಸ್ ಸೀಸನ್‌ನಲ್ಲಿ ಡ್ರೋಣ್ ಪ್ರತಾಪ್ ವಿನ್ನರ್ ಆಗಿ ಹೊರಬರುತ್ತಾರೆ ಎಂದು ಹೇಳಿದ್ದರು. ಒಂದು ವೇಳೆ ಪ್ರತಾಪ್ ಸೋತರೆ ತನ್ನ ಅರ್ಧ ಗಡ್ಡ, ಮೀಸೆ ತೆಗೆಯುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್ ಹಾಕಿ ಪೋಸ್ಟ್ ಮಾಡಿದ್ದನು. ಜೊತೆಗೆ ಹಸಿ ಮೆಣಸಿನಕಾಯಿ ತಿನ್ನುವುದಾಗಿ ಮತ್ತೊಂದು ವೀಡಿಯೋವನ್ನು ಸಹ ಹರಿಬಿಟ್ಟಿದ್ದನು. ಇದನ್ನೂ ಓದಿ: ED  ಕೈಗೆ ಸಿಗದ ಜಾರ್ಖಂಡ್ ಸಿಎಂ – ಹೇಮಂತ್ ಸೊರೆನ್  BMW ಕಾರು  ವಶಕ್ಕೆ

    ಇದೀಗ ಕಾರ್ತಿಕ್ ವಿನ್ನರ್ ಆಗಿ ಹೊರಬಂದಿದ್ದು, ಪ್ರತಾಪ್ ರನ್ನರ್ ಅಪ್ ಆಗಿರೋದು ಝೈನುಲ್‌ಗೆ ಅಸಮಾಧಾನ ತಂದು ಕೊಟ್ಟಿದೆ. ಫಲಿತಾಂಶ ಹೊರ ಬರುತ್ತಿದ್ದಂತೆ ಸವಾಲಿನಂತೆ ಆಬಿದ್ ಅರ್ಧ ಗಡ್ಡ ಮತ್ತು ಮೀಸೆಯನ್ನ ಬೋಳಿಸಿಕೊಂಡಿದ್ದಾನೆ. ಜೊತೆಗೆ ಹಸಿ ಮೆಣಸಿನಕಾಯಿಯನ್ನು ಸಹ ತಿಂದು ವೀಡಿಯೋ ಮಾಡಿ ಅಪ್ಲೋಡ್ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ. ಇದೀಗ ಝೈನುಲ್ ಹಾಕಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ಖರ್ಗೆ ವಿರುದ್ಧ ಅವಹೇಳನ; ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಪ್ರಕರಣಕ್ಕೆ ಕೋರ್ಟ್‌ ಮಧ್ಯಂತರ ತಡೆ

  • ಡ್ರೋನ್ ದೋಖಾ ಆರೋಪ: ಸದ್ಯಕ್ಕೆ ದೂರು ನೀಡಲ್ಲ ಎಂದ ಸಾರಂಗ್

    ಡ್ರೋನ್ ದೋಖಾ ಆರೋಪ: ಸದ್ಯಕ್ಕೆ ದೂರು ನೀಡಲ್ಲ ಎಂದ ಸಾರಂಗ್

    ಬಿಗ್ ಬಾಸ್ ಮನೆಯಲ್ಲಿರುವ ಡ್ರೋನ್ ‍ಪ್ರತಾಪ್ ಅವರು ತಮಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ಎರಡು ದಿನಗಳ ಹಿಂದೆಯಷ್ಟೇ ಸಾರಂಗ್ ಮಾನೆ ಎನ್ನುವವರು ಆರೋಪ ಮಾಡಿದ್ದರು. ಈ ಕುರಿತಂತೆ ಕಾನೂನು ಕ್ರಮಕ್ಕೂ ಮುಂದಾಗುವುದಾಗಿ ಅವರು ತಿಳಿಸಿದ್ದರು. ಇದೀಗ ಪ್ರತಾಪ್ ಅವರಿಗೆ ಸಮಯ ನೀಡುವುದಾಗಿ ತಿಳಿಸಿದ್ದಾರೆ.

    ಪ್ರತಾಪ್ ನ ಕಂಪೆನಿ ಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಜೊತೆ ಬ್ಯುಸಿನೆಸ್ ಪಾರ್ಟನರ್ ಆಗಿದ್ದ ಸಾರಂಗ್ ಮಾನೆ, ನಮ್ಮ ಜೊತೆ ಪ್ರತಾಪ್ ಬ್ಯುಸಿನೆಸ್ ಮಾಡಿ ಡ್ರೋನ್ ಗಳನ್ನು ಕೊಟ್ಟಿಲ್ಲ, ಅವುಗಳಿಗಾಗಿ ಕೊಟ್ಟಿದ್ದ ಹಣವನ್ನ ಕೂಡ ನೀಡದೆ ವಂಚನೆ ಮಾಡ್ತಿರುವುದಾಗಿ ಆರೋಪ ಮಾಡಿದ್ದಾರೆ ಸಾರಂಗ್ ಮಾನೆ.

    ಪ್ರತಾಪ್  ಕಳೆದ ಎಂಟು ತಿಂಗಳ ಹಿಂದೆ ಮಹಾರಾಷ್ಟ್ರದ  ದುಲೇನಲ್ಲಿ ಭೇಟಿ ಮಾಡಿದ್ರಂತೆ. ಅವಾಗ ಬ್ಯುಸಿನೆಸ್ ಪಾರ್ಟ್ ನರ್ ಆಗಿ ಮಾಡಿಕೊಂಡು 9 ಡ್ರೋನ್ ಗಳನ್ನ ನೀಡುವುದಾಗಿ ಹೇಳಿ 35 ಲಕ್ಷ ತೆಗೆದುಕೊಂಡಿದ್ರಂತೆ ಪ್ರತಾಪ್. ಆದರೆ ಡ್ರೋನ್ ಗಳನ್ನ  ನೀಡಲು ಸತಾಯಿಸಿದ್ದಾರೆ.  ಎರಡುವರೆ ತಿಂಗಳು ಸಮಯ ತೆಗೆದುಕೊಂಡಿದ್ದ ಹಾಗೂ ಎರಡು ಡ್ರೋನ್ ಗಳನ್ನ ನೀಡಿದ್ದ  ಪ್ರತಾಪ್ ಅದಾದ ನಂತರ ಮತ್ತೆ ಡಿಲೇ ಮಾಡಿ ಮತ್ತೆರಡು ಡ್ರೋನ್ ಕಳುಹಿಸಿದ್ದರಂತೆ.

     

    ಆದರೆ ಕೊಟ್ಟಿರುವ ನಾಲ್ಕು ಡ್ರೋನ್ ಗಳು ಈಗ ಕೆಲಸ ಮಾಡುತ್ತಿಲ್ಲ. ಬ್ಯಾಟರಿಗಳ ಕ್ವಾಲಿಟಿ ಸರಿಯಿಲ್ಲದೆ ಮತ್ತೊಂದು ಹಾರಬೇಕಾದರೆ ಕೆಳಗಡೆ ಬಿದ್ದು ಹೋಗಿ ಮೂಲೆ ಸೇರಿವೆ ಎಂದಿದ್ದಾರೆ ಸಾರಂಗ್. ಇತ್ತ ಡ್ರೋನ್ ಕೊಡುವುದಾಗಿ ಹೇಳಿ ರೈತರಿಂದ ಹಣ ಪಡೆದಿದ್ದ ಸಾರಂಗ್, ಇದೀಗ ಹಣನೂ ಹಿಂದಿರುಗಿಸಲೇ ಆಗದೆ ಕಂಪೆನಿ ಕೂಡ ಲಾಸ್ ನಲ್ಲಿ ನಡೆಯುತ್ತಿದ್ದು ಕಷ್ಟ ಪಡುತ್ತಿರುವುದಾಗಿ ಹೇಳಿದ್ದಾರೆ. ಡ್ರೋನ್ ಪ್ರತಾಪ್ ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ 30 ನೇ ತಾರೀಖಿನವರೆಗೂ ಸಮಯ ಕೊಟ್ಟು, ಆನಂತರ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ತಿಳಿಸಿದ್ದಾರೆ.

  • ಬಿಗ್ ಬಾಸ್ ಮನೆಯಿಂದ ಡ್ರೋಣ್ ಔಟ್: ಬಚಾವ್ ಮಾಡಿದ ಸುದೀಪ್

    ಬಿಗ್ ಬಾಸ್ ಮನೆಯಿಂದ ಡ್ರೋಣ್ ಔಟ್: ಬಚಾವ್ ಮಾಡಿದ ಸುದೀಪ್

    ಬಿಗ್ ಬಾಸ್ (Bigg Boss) ಮನೆಯಲ್ಲಿ ನಿನ್ನ ಹೈಡ್ರಾಮಾ ನಡೆದಿದೆ. ಫಿನಾಲೆಗೆ ಇನ್ನೆರಡೇ ದಿನಗಳು ಬಾಕಿ ಇರುವಾಗ ನಿನ್ನೆ ಮಿಡ್ ನೈಟ್ ಎಲಿಮಿನೇಷನ್(Elimination)  ನಡೆಯಿತು. ಫಿನಾಲೆಗೆ ಐದೇ ಐದು ಜನರು ಹೋಗಬೇಕಾಗಿದ್ದರಿಂದ ಒಬ್ಬರನ್ನು ಮನೆಯಿಂದ ಕಳುಹಿಸೋದು ಅನಿವಾರ್ಯವಾಗಿತ್ತು. ಹಾಗಾಗಿ ನಿನ್ನೆ ಬಿಗ್ ಬಾಸ್ ಎಲಿಮಿನೇಷನ್ ಘೋಷಣೆ ಮಾಡಿದರು.

    ಮಿಡ್ ನೈಟ್ ಎಲಿಮಿನೇಷನ್ ನಡೆಯಲಿದ್ದು, ಒಬ್ಬರು ಮನೆಯಿಂದ ಹೊರ ಹೋಗಲು ಸಿದ್ಧರಾಗಿ ಎಂದು ಬಿಗ್ ಬಾಸ್ ಶಾಕ್ ನೀಡಿದರು. ನಂತರ ಡ್ರೋಣ್ ಪ್ರತಾಪ್ (Drone Pratap) ಅವರು ಎಲಿಮಿನೇಷನ್ ಆಗಿದ್ದಾರೆ ಎಂದು ಘೋಷಿಸಿದರು. ಎಲ್ಲರ ಕಣ್ಣಲ್ಲೂ ನೀರು. ಅಭಿಮಾನಿಗಳಿಗೂ ಶಾಕ್. ಸಂಗೀತಾ ಶೃಂಗೇರಿ ಸೇರಿದಂತೆ ಪ್ರತಿಯೊಬ್ಬರೂ ಕಣ್ಣೀರಿಟ್ಟರು. ಆನಂತರ ನಡೆದದ್ದೇ ಬೇರೆ.

    ಇನ್ನೇನು ಡ್ರೋಣ್ ಪ್ರತಾಪ್ ಮನೆಯಿಂದ ಹೊರಡಲು ಸಿದ್ಧರಾದಾಗ ಬಿಗ್ ಬಾಸ್ ಮತ್ತೊಂದು ಸೂಚನೆ ನೀಡಿದರು. ಮನೆಗೆ ಬಂದಿದ್ದ ಲೆಟರ್ ಅನ್ನು ಓದಲು ಹೇಳಲಾಯಿತು. ಅದು ನಟ ಸುದೀಪ್ ಬರೆದಿದ್ದ ಪತ್ರವಾಗಿತ್ತು. ಎಲಿಮಿನೇಟ್ ಆದ ಪ್ರತಾಪ್‍ ಅವರಿಗೆ ವರ ಎನ್ನುವಂತೆ ಆ ಲೆಟರ್ ನಲ್ಲಿ ಒಂದು ವಾಕ್ಯವಿತ್ತು.

    ಸುದೀಪ್ (Sudeep) ಕಳುಹಿಸಿದ್ದ ಪತ್ರದಲ್ಲಿ ಈ ವಾರ ಯಾವುದೇ ಎಲಿಮಿನೇಷನ್ ಇಲ್ಲ. ಎಲ್ಲರೂ ಫಿನಾಲೆಗೆ ತಲುಪಲಿದ್ದೀರಿ ಎಂದು ಬರೆಯಲಾಗಿತ್ತು. ಹಾಗಾಗಿ ಡ್ರೋಣ್ ಪ್ರತಾಪ್ ಬಚಾವ್ ಆದರು. ಎಲ್ಲರ ಮುಖದಲ್ಲೂ ಮತ್ತೆ ಸಂಭ್ರಮ ಕಾಣಿಸಿಕೊಂಡಿದೆ. ಆರು ಜನ ಫಿನಾಲೆಗೆ ತಲುಪಿದ್ದಾರೆ ನಿಜ. ಆದರೆ, ಸುದೀಪ್ ಅವರ ಎಡಬಲದಲ್ಲಿ ನಿಂತುಕೊಳ್ಳೋದು ಇಬ್ಬರೇ. ಆಗಾಗಿ ಹೊರ ಬರುವ ಮೂವರು ಯಾರು ಎನ್ನೋದೇ ಕುತೂಹಲ.

  • ಡ್ರೋಣ್ ಪ್ರತಾಪ್ ಮೋಸದ ಆರೋಪ: ಡಾ.ಪ್ರಯಾಗ್ ಎಂಟ್ರಿ

    ಡ್ರೋಣ್ ಪ್ರತಾಪ್ ಮೋಸದ ಆರೋಪ: ಡಾ.ಪ್ರಯಾಗ್ ಎಂಟ್ರಿ

    ನಗೆ ಡ್ರೋಣ್ ಪ್ರತಾಪ್ (Drone Pratap) ಅವರು 83 ಲಕ್ಷ ರೂಪಾಯಿ ಮೋಸ ಮಾಡಿದ್ದಾರೆ ಎಂದು ಇಂದು ಬೆಳಗ್ಗೆಯಷ್ಟೇ ಸಾರಂಗ್ ಮಾನೆ (Sarang Mane) ಎನ್ನುವವರು ಆರೋಪ ಮಾಡಿದ್ದರು. ಡ್ರೋಣ್ ಗಳನ್ನು ರೆಡಿ ಮಾಡಿಕೊಡುವುದಾಗಿ ದುಡ್ಡು ಪಡೆದು, ಕೆಲವೇ ಡ್ರೋಣ್ ನೀಡಿದ್ದಾರೆ. ಅವೂ ಕೂಡ ಕೆಲಸ ಮಾಡುತ್ತಿಲ್ಲವೆಂದು ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಂಗ್ ಮಾನೆ, ಈ ಹಿಂದೆ ಡ್ರೋಣ್ ಮೇಲೆ ಮಾನನಷ್ಟ ಹೂಡಿದ್ದ ಡಾ.ಪ್ರಯಾಗ್ ರಾಜ್ (Prayag Raj) ಅವರನ್ನು ಸಂಪರ್ಕಿಸಿದ್ದಾರೆ.

    ಈ ಕುರಿತಂತೆ ಸ್ವತಃ ಪ್ರಯಾಗ್ ಅವರೇ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ನಾನು ಡ್ರೋಣ್ ಪ್ರತಾಪ್ ಮೇಲೆ ಮಾನನಷ್ಟ ಪ್ರಕರಣ ದಾಖಲು ಮಾಡಿದ್ದೆ. ಹೀಗಾಗಿ ಡ್ರೋಣ್ ಪ್ರತಾಪ್  ಜೊತೆ ಇದ್ದ ಮಾಜಿ ಪಾರ್ಟನರ್  ಸಾರಂಗ್ ಮಾನೆ  ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಸಂಪರ್ಕಿಸಿದ್ರು. 83 ಲಕ್ಷ ಪ್ರತಾಪ್ ಮೋಸ ಮಾಡಿದ್ರು ಅಂತಾ ಒಂದಿಷ್ಟು ಡಾಕ್ಯುಮೆಂಟ್ ಕಳಿಸಿದ್ರು. ನಂಗೆ ಸಪೋರ್ಟ್ ಕೊಡಿ ನಾನು ಪೊಲೀಸ್ ಗೆ ದೂರು ಕೊಡಬೇಕು ಅಂತಾ ಸಾರಂಗ್ ಕೇಳಿಕೊಂಡಿದ್ದಾರೆ. ದೂರು ಕೊಡೋಕೆ ಕೂಡ ರೆಡಿಯಾಗಿದ್ದಾರೆ. ಆದರೆ, ಈಗ ಡ್ರೋಣ್ ಕಡೆಯವರು ಸಾರಂಗ್ ಗೆ ಬೆದರಿಕೆ ಹಾಕುತ್ತಿದ್ದಾರೆ’ ಆರೋಪ ಮಾಡಿದ್ದಾರೆ.

    ಪ್ರತಾಪ್ ಈಗಾಗಲೇ 2 ಡ್ರೋಣ್ ಕಳಿಸಿದ್ದಾರೆ. ಆದರೆ, ಅವು ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಒಂದು ವರ್ಷವಾಗಿದೆ ಹಣವನ್ನೂ ಕೊಡುತ್ತಿಲ್ಲ ಎಂದು ಸಾರಂಗ್ ಮಾನೆ ಆರೋಪ ಮಾಡುತ್ತಿದ್ದಾರೆ. ರೈತರ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪಡಿಸುವ ಡ್ರೋಣ್ ಗಳ ಎಕ್ಸಿಬಿಷನ್ ವೇಳೆ ಸಾರಂಗ್ ಮಾನೆ ಅವರಿಗೆ  ಡ್ರೋಣ್ ಪ್ರತಾಪ್ ಪರಿಚವಾಗಿದ್ದರಂತೆ. ರೈತರಿಗೆ ಡ್ರೋಣ್ ಕಳಿಸಿಕೊಡುವ ಟೆಂಡರ್ ಪಡೆದಿದ್ದ ಸಾರಂಗ್ ಮಾನೆ ಅವರು ಪ್ರತಾಪ್ ಗೆ ಆ ಜವಾಬ್ದಾರಿ ನೀಡಿದ್ದರು. ಆದರೆ, ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿಲ್ಲ ಎನ್ನುವುದು ಮಾನೆ ಆರೋಪಕ್ಕೆ.

     

    ಇದರ ಸತ್ಯಾಸತ್ಯೆ ಏನು ಎನ್ನುವುದನ್ನು ಡ್ರೋಣ್ ಪ್ರತಾಪ್ ಅವರೇ ಬಹಿರಂಗ ಪಡಿಸಬೇಕು. ಇನ್ನೇನು ಎರಡ್ಮೂರು ದಿನದೊಳಗೆ ಬಿಗ್ ಬಾಸ್ ಮನೆಯಿಂದ ಡ್ರೋಣ್ ಆಚೆ ಬರ್ತಾರೆ. ಅವಾಗ ಸ್ಪಷ್ಟ ಉತ್ತರ ಸಿಗಬಹುದು.

  • ಡ್ರೋಣ್ ಪ್ರತಾಪ್ ಮೇಲೆ ಮತ್ತೊಂದು ಗಂಭೀರ ಆರೋಪ

    ಡ್ರೋಣ್ ಪ್ರತಾಪ್ ಮೇಲೆ ಮತ್ತೊಂದು ಗಂಭೀರ ಆರೋಪ

    ಬಿಗ್ ಬಾಸ್ ಮನೆಯಲ್ಲಿ ಗೆಲುವಿಗಾಗಿ ಸೆಣೆಸುತ್ತಿರುವ ಡ್ರೋನ್ ಪ್ರತಾಪ್ (Drone Pratap) ಮೇಲೆ ಒಂದರ ಮೇಲೆ ಒಂದರಂತೆ ದೂರುಗಳು ದಾಖಲಾಗುತ್ತಿವೆ. ಮೊನ್ನೆಯಷ್ಟೇ ಡಾ.ಪ್ರಯಾಗ್ ಎನ್ನುವವರು ಡ್ರೋಣ್ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಇದೀಗ ಲಕ್ಷ ಲಕ್ಷ ದೋಖಾ ಮಾಡಿರುವ ಆರೋಪ ಕೇಳಿ ಬಂದಿದೆ.

    ಪೂಣಾ ಮೂಲದ ಸಾರಂಗ್ ಮಾನೆ (Sarang Mane) ಎನ್ನುವವರು ಡ್ರೋಣ್ ಪ್ರತಾಪ್ ಗೆ ಬರೋಬ್ಬರಿ 83 ಲಕ್ಷ ರೂಪಾಯಿ ನೀಡಿದ್ದಾರಂತೆ. ಈ ಹಣದಲ್ಲಿ 8 ಡ್ರೋಣ್ ನೀಡುವುದಾಗಿ ಪ್ರತಾಪ್ ಹೇಳಿದ್ದರಂತೆ. ಆದರೆ, ಕೊಟ್ಟ ಮಾತಿನಂತೆ ‍ಪ್ರತಾಪ್ ನಡೆದುಕೊಂಡಿಲ್ಲ ಎನ್ನುವುದು ಮಾನೆ ಆರೋಪ.

    ಪ್ರತಾಪ್ ಈಗಾಗಲೇ 2 ಡ್ರೋಣ್ ಕಳಿಸಿದ್ದಾರೆ. ಆದರೆ, ಅವು ಸರಿಯಾಗಿ ಕಾರ್ಯ ಮಾಡುತ್ತಿಲ್ಲ. ಒಂದು ವರ್ಷವಾಗಿದೆ ಹಣವನ್ನೂ ಕೊಡುತ್ತಿಲ್ಲ ಎಂದು ಸಾರಂಗ್ ಮಾನೆ. ಆರೋಪ ಮಾಡುತ್ತಿದ್ದಾರೆ. ರೈತರ ಬೆಳೆಗಳಿಗೆ ಕ್ರಿಮಿನಾಶಕ ಔಷಧ ಸಿಂಪಡಿಸುವ ಡ್ರೋಣ್ ಗಳ ಎಕ್ಸಿಬಿಷನ್ ವೇಳೆ ಸಾರಂಗ್ ಮಾನೆ ಅವರಿಗೆ  ಡ್ರೋಣ್ ಪ್ರತಾಪ್ ಪರಿಚವಾಗಿದ್ದರಂತೆ. ರೈತರಿಗೆ ಡ್ರೋಣ್ ಕಳಿಸಿಕೊಡುವ ಟೆಂಡರ್ ಪಡೆದಿದ್ದ ಸಾರಂಗ್ ಮಾನೆ ಅವರು ಪ್ರತಾಪ್ ಗೆ ಆ ಜವಾಬ್ದಾರಿ ನೀಡಿದ್ದರು.

  • Bigg Boss Kannada: ಮನೆ ಒಳಗೆ ಕಾಣಿಸಿಕೊಂಡ ದೆವ್ವ

    Bigg Boss Kannada: ಮನೆ ಒಳಗೆ ಕಾಣಿಸಿಕೊಂಡ ದೆವ್ವ

    ಬಿಗ್ ಬಾಸ್ ಸೀಸನ್ 7ರಲ್ಲಿ ಬಿಗ್ ಬಾಸ್ (Bigg Boss Kannada) ಮನೆಯಲ್ಲೇ ದೆವ್ವ ಕಾಣಿಸಿಕೊಂಡು ಗಾಬರಿ ಮೂಡಿಸಿತ್ತು. ಆಗ ದೊಡ್ಮನೆ ಒಳಗಿದ್ದ ಚೈತ್ರಾ ಕೋಟೂರು ಭೂತ ಕಂಡ ಬೊಬ್ಬೆ ಹಾಕಿದ್ದರು. ಮನೆಯಲ್ಲಿ ದೆವ್ವ ಇದೆ ನಾನು ನೋಡಿದ್ದೇನೆ ಎಂದು ಇಡೀ ಬಿಗ್ ಬಾಸ್ ಮನೆಯ ವಾತಾವರಣವನ್ನೇ ಭಯಭೀತಿಗೊಳಿಸಿದ್ದಳು. ಚೈತ್ರಾ ಮಾತನ್ನು ಅನೇಕರು ನಂಬಿದ್ದರು. ಭಯದಲ್ಲೇ ಅಂದಿನ ದಿನವನ್ನು ಕಳೆಯಲಾಗಿತ್ತು.

    ಬಿಗ್ ಬಾಸ್ ಮನೆಯಲ್ಲಿ ದೆವ್ವ ಕಾಣಿಸಿಕೊಂಡ ವಿಚಾರ ದೊಡ್ಮನೆ ಒಳಗೆ ಮಾತ್ರವಲ್ಲ, ಆಚೆಯೂ ಸಾಕಷ್ಟು ಸದ್ದು ಮಾಡಿತ್ತು. ತಮ್ಮದೇ ಆದ ಕಲ್ಪನೆಯನ್ನು ಸೇರಿಸಿ ಸುದ್ದಿಯನ್ನು ಮತ್ತಷ್ಟು ದೊಡ್ಡದು ಮಾಡಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯ ಸದ್ದು ಮಾಡಿತ್ತು. ಈ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ದೆವ್ವ ಕಾಣಿಸಿಕೊಂಡಿದೆ. ಆದರೆ, ಯಾರೂ ಭಯ ಪಡಲು ಹೋಗಿಲ್ಲ. ಕಾರಣ, ಆ ದೆವ್ವವನ್ನು ಸೃಷ್ಟಿ ಮಾಡಿದವರು ಅದೇ ಮನೆಯಲ್ಲೇ ಇದ್ದರು.

    ಬಿಗ್ ಬಾಸ್ ಮನೆಯಲ್ಲಿ ಇಂದು ಇಂಟ್ರಸ್ಟಿಂಗ್ ಸಂಗತಿಯೊಂದು ನಡೆಯಿತು. ಒಬ್ಬೊಬ್ಬರು ಒಂದೊಂದು ಸಾಲನ್ನು ಜೋಡಿಸುವ ಮೂಲಕ ಹಾರರ್ ಸಿನಿಮಾದ ಕಥೆಯನ್ನು ರೆಡಿ ಮಾಡಿದರು. ಒಬ್ಬೊಬ್ಬರು ಒಂದೊಂದು ರೋಚಕ ಸಾಲುಗಳನ್ನು ಪೋಣಿಸುವ ಮೂಲಕ ದೆವ್ವದ ಕಥೆಯೊಂದನ್ನು ರೆಡಿ ಮಾಡಿದರು. ಆ ಕಥೆ ನಿಜಕ್ಕೂ ಇಂಟ್ರಸ್ಟಿಂಗ್ ಆಗಿತ್ತು. ಜೋಡಿಸಿದ ಸಾಲುಗಳಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಇದ್ದವು.

    ಅದರಲ್ಲೂ ತುಕಾಲಿ ಸಂತು ದೆವ್ವ, ನಾಗಿಣಿಯಾದ ಎಳೆಗೆ ಹಾಲು ಕುಡಿಸುವ ದೃಶ್ಯವನ್ನೂ ಪೋಣಿಸಿದರು. ಅಲ್ಲಿಂದ ಕಥೆಯ ಚಿತ್ರಣವೇ ಬದಲಾಯಿತು. ಇಡೀ ಮನೆಯಲ್ಲಿ ಆಹ್ಲಾದಕರ ವಾತಾವರಣವಿತ್ತು. ಯಾವುದೇ ಕೆಲಸವಿರಲಿ ಎಲ್ಲರೂ ಕೈ ಜೋಡಿಸಿದರೆ ಅದ್ಭುತವಾದ ಕೆಲಸವನ್ನು ಮಾಡಲು ಸಾಧ್ಯ ಎನ್ನುವುದಕ್ಕೆ ಈ ದೃಶ್ಯ ಸಾಕ್ಷಿಯಾಗಿತ್ತು.

     

    ಈ ಕಥೆ ಹೆಣೆಯುವ ಪ್ರಕ್ರಿಯೆಯಲ್ಲಿ ಸ್ನೇಕ್ ಶ್ಯಾಮ್ ಉತ್ತೇಜಿಸುತ್ತಲೇ, ಹಾದಿ ತಪ್ಪುವ ಮಾತುಗಳಿಗೆ ಬ್ರೇಕ್ ಹಾಕುತ್ತಿದ್ದರು. ಕೆಲವರು ಉತ್ಸಾಹದಿಂದ ಭಾಗಿಯಾದರೆ, ಇನ್ನೂ ಕೆಲವರು ಕಥೆ ಕೇಳಿಕೊಂಡು ಎಂಜಾಯ್ ಮಾಡುತ್ತಿದ್ದರು. ಅವರು ಕಟ್ಟಿದ ಕಥೆಯನ್ನು JioCinema live ನಲ್ಲೂ ವೀಕ್ಷಿಸಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]