Tag: ಡ್ರೈವರ್

  • ಹೊರ ರಾಜ್ಯಕ್ಕೆ ಪ್ರವಾಸಕ್ಕೆ ಹೋಗೋರೇ ಹುಷಾರ್- ಪ್ರವಾಸಿಗರ ಮೇಲೆ ಡ್ರೈವರ್ ದರ್ಬಾರ್..!

    ಹೊರ ರಾಜ್ಯಕ್ಕೆ ಪ್ರವಾಸಕ್ಕೆ ಹೋಗೋರೇ ಹುಷಾರ್- ಪ್ರವಾಸಿಗರ ಮೇಲೆ ಡ್ರೈವರ್ ದರ್ಬಾರ್..!

    ಬೆಂಗಳೂರು: ಹಾಲಿಡೇಸ್‍ನಲ್ಲಿ ಕುಟುಂಬದವರ, ಸ್ನೇಹಿತರ ಜೊತೆ ಹೊರ ರಾಜ್ಯದ ಪ್ರವಾಸಿ ತಾಣಗಳಿಗೆ ಹೋಗಲು ಇಷ್ಟಪಡುತ್ತಾರೆ. ಆದರೆ ಹೊರ ರಾಜ್ಯಗಳಲ್ಲಿ ಪ್ರವಾಸಿಗರ ಮೇಲೆ ಡ್ರೈವರ್‍ಗಳು ದರ್ಬಾರ್ ಮಾಡುತ್ತಿದ್ದಾರೆ.

    ಹೌದು. ಬೆಂಗಳೂರಿನ ಬಸವನಗುಡಿ ಹಾಗೂ ಲಗ್ಗರೆಯ ಮಂದಿ ಕಳೆದ ವಾರ ಶಿರಡಿ ಸಾಯಿಬಾಬಾನ ದರ್ಶನಕ್ಕೆ ಎಂದು ಟ್ರೈನ್ ಮೂಲಕ ಹೋಗಿದ್ದಾರೆ. ಸಾಯಿಬಾಬಾನ ದರ್ಶನವಾದ ಮೇಲೆ ಸುತ್ತಮುತ್ತಲಿನ ದೇವಾಲಯಗಳನ್ನು ನೋಡಲು ಕರ್ನಾಟಕ ಭವನದ ಮುಂದೆ ಇದ್ದ ಟ್ರಾವಲ್ಸ್ ನಿಂದ 6 ಸಾವಿರ ರೂಪಾಯಿ ಕೊಟ್ಟು ಟಿಟಿ ಮಾಡಿಕೊಂಡಿದ್ದಾರೆ. ಆದರೆ ಟಿಟಿ ಡ್ರೈವರ್ ಮಾತ್ರ ನಾನು ನಿಲ್ಲಿಸಿದ ಕಡೆ ಊಟ, ತಿಂಡಿ ಮಾಡಬೇಕು ಎಂದು ಕಂಡಿಶನ್ ಹಾಕಿದ್ದಾನೆ. ಗೊತ್ತಿಲ್ಲದ ಊರಲ್ಲಿ ಕಿರಿಕ್ ಯಾಕೆ ಅಂತ ಎಲ್ಲರೂ ಒಪ್ಪಿಕೊಂಡಿದ್ದಾರೆ.

    ಟೆಂಪೋ ಟ್ರಾವೆಲ್ಲರ್ ನಲ್ಲಿ 8 ಜನ ಮಹಿಳೆಯರು, ಇಬ್ಬರು ಯುವಕರು ಮತ್ತಿಬ್ಬರು ಮಕ್ಕಳು ದೇವಾಲಯ ನೋಡಲು ಹೊರಟಿದ್ದೆವು. ದರ್ಶನ ಮುಗಿಸಿ ಬಂದರೂ ಚಾಲಕ ಮಾತ್ರ ಸರಿಯಾಗಿ ಗಾಡಿಯಲ್ಲಿ ಇರದೇ ಕರ್ನಾಟಕದ ಪ್ರವಾಸಿಗರನ್ನ ಕಾಯಿಸಿದ್ದಾನೆ. ಬನ್ನಿ ಸರ್ ಟೈಂ ಆಗುತ್ತೆ ಹೋಗೋಣ ಅಂತ ಕರೆದರೆ, 1 ಸಾವಿರ ಇಸ್ಪೀಟ್‍ ಗೆ ಕಟ್ಟಿದ್ದೇನೆ ಗೆಲ್ಲೋವರೆಗೂ ಬರಲ್ಲ ಅಂತ ಹೇಳಿದ್ದನು ಎಂದು ತೊಂದರೆಗೊಳಗಾದ ವೈಶಾಲಿ ಹೇಳಿದ್ದಾರೆ.

    ತಾನು ಹೇಳಿದ ಕಡೆ ಊಟ ಮಾಡದಿದ್ದರೆ ನಿಮ್ಮ ಲಗೇಜ್‍ ನೆಲ್ಲ ಬೀಸಾಕುತ್ತೇನೆ ಎಂದು ಬ್ಯಾಗ್‍ಗಳನ್ನ ಬಿಸಾಕಲು ಮುಂದಾಗಿದ್ದನು. ಇಷ್ಟೇ ಅಲ್ಲದೇ ಮಾರ್ಗ ಮಧ್ಯೆ ರಾತ್ರಿ 10:30 ಸುಮಾರಿಗೆ ಗಾಡಿ ನಿಲ್ಲಿಸಿ ಹೋದ ಚಾಲಕ ತಡ ರಾತ್ರಿ 2 ಗಂಟೆಯಾದರೂ ಬಾರದೇ ಕನ್ನಡಿಗರು ಪರಡಾಡುವಂತೆ ಮಾಡಿದ್ದನು. ಕೊನೆಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೆವು. ಆಗ ಪೊಲೀಸರು ಡ್ರೈವರ್ ಗೆ ಬುದ್ಧಿ ಹೇಳಿ ಕಳುಹಿಸಿದ್ದಾರೆ ಎಂದು ಪ್ರವಾಸಿಗರು ತಿಳಿಸಿದ್ದಾರೆ.

    ದೇವರ ದರ್ಶನಕ್ಕೆ ಎಂದು ಹೋದ ಸಿಲಿಕಾನ್ ಸಿಟಿ ಮಂದಿಗೆ ಮಹಾರಾಷ್ಟ್ರದ ಟಿಟಿ ಡ್ರೈವರ್ ದರ್ಪ ತೋರಿಸಿ ಅಯ್ಯೋ ಅನ್ನಿಸಿದ್ದಾನೆ. ಹೀಗಾಗಿ ಹೊರ ರಾಜ್ಯಗಳಿಗೆ ಟ್ರಿಪ್ ಹೋಗುವ ಮೊದಲು ಸರಿಯಾದ ಪ್ಲಾನ್ ಮಾಡಿಕೊಳ್ಳಿ, ಇಲ್ಲವಾದರೆ ಈ ರೀತಿಯಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕನ್ನಡ ಶಾಲೆ ಉಳಿವಿಗಾಗಿ ಡ್ರೈವರ್ ಆದ್ರು ಮೇಷ್ಟ್ರು!

    ಕನ್ನಡ ಶಾಲೆ ಉಳಿವಿಗಾಗಿ ಡ್ರೈವರ್ ಆದ್ರು ಮೇಷ್ಟ್ರು!

    ಉಡುಪಿ: ಖಾಸಗಿ ಶಾಲೆಗಳ ಆರ್ಭಟ ಮತ್ತು ಪೋಷಕರ ಅತಿಯಾದ ಆಂಗ್ಲ ಮಾಧ್ಯಮದ ಒಲವಿನಿಂದ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಆದರೆ ಉಡುಪಿಯ ಬ್ರಹ್ಮಾವರ ತಾಲೂಕಿನ ಬಾರಾಳಿಯ ಶಿಕ್ಷಕರಾದ ರಾಜಾರಾಮ್ ಅವರು ಕನ್ನಡ ಶಾಲೆಗಳ ಉಳಿಸಲು ಹಗಲಿರುಳು ಪ್ರಯತ್ನ ಮಾಡುತ್ತಿದ್ದಾರೆ.

    ಬಾರಾಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾಗಿರುವ ರಾಜಾರಾಮ್ ಅವರು, ಬೆಳಗ್ಗೆ 7 ಗಂಟೆಗೆ ಎದ್ದು ಶಾಲೆಯ ಬಸ್ಸಿನ ಚಾಲಕನ ಸೀಟು ಏರಿ 87 ಮಕ್ಕಳನ್ನು ಕರೆದುಕೊಂಡು ಬೆಳಗ್ಗೆ 9.15ಕ್ಕೆ ಶಾಲೆಗೆ ಬರುತ್ತಾರೆ. ಮತ್ತೆ ಸಂಜೆ ತರಗತಿ ಬಿಟ್ಟ ಕೂಡಲೇ ಎಲ್ಲಾ ಮಕ್ಕಳನ್ನು ಮನೆಗೆ ಬಿಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

    ಹಳ್ಳಿಗಾಡಿನ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲದಿದ್ದಾಗ ಶಾಲೆಯ ಹಳೆ ವಿದ್ಯಾರ್ಥಿ ವಿಜಯ ಹೆಗ್ಡೆ ಎಂಬುವವರು ಸ್ಕೂಲ್ ಬಸ್ ಖರೀದಿಸಿ ಶಾಲೆಗೆ ಕೊಟ್ಟಿದ್ದಾರೆ. ಬಸ್‍ಗೆ ಚಾಲಕ ಹಾಗೂ ಸಹಾಯಕ, ಡೀಸೆಲ್ ಹಾಗೂ ನಿರ್ವಹಣೆ ಮಾಡಲು ತಿಂಗಳಿಗೆ ಸಾವಿರಾರು ರೂ. ಖರ್ಚಾಗುತ್ತಿತ್ತು. ಶಾಲೆಯಲ್ಲಿ ಹೆಚ್ಚಿನ ಅನುದಾನ ಇಲ್ಲದೇ ಬಸ್ ಓಡಾಟ ನಿಲ್ಲಿಸಬೇಕೆಂದಿದ್ದಾಗ ಶಾಲೆಯ ದೈಹಿಕ ಶಿಕ್ಷಕರಾಗಿರುವ ರಾಜಾರಾಮ ಅವರು ತಾವು ಡ್ರೈವರ್ ಆಗಲು ಮುಂದೆ ಬಂದಿದ್ದಾರೆ. ದಿನಕ್ಕೆ 8 ಟ್ರಿಪ್ ಡ್ರೈವರ್ ಆಗಿ ಕೆಲಸ ಮಾಡುವ ರಾಜಾರಾಮ್ ಮೇಷ್ಟ್ರು, ಬಸ್ ನಿರ್ವಹಣೆಗೆ ಈವರೆಗೆ 70 ಸಾವಿರ ರೂ. ಸಂಬಳದ ಹಣ ಖರ್ಚು ಮಾಡಿದ್ದಾರೆ.

    ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾರಾಳಿ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು 6 ಕಿ.ಮೀ. ನಡೆದು ಹೋಗುವ ಅನಿವಾರ್ಯತೆ ಇತ್ತು. ಈ ಸಮಸ್ಯೆಯಿಂದ ಶಾಲೆಗೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಕಡಿಮೆಯಾಗಿತ್ತು. ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡಲು ಮುಂದಾದ ಶಾಲೆಯ ಶಿಕ್ಷಕ ರಾಜರಾಮ್ ತಾವೇ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ ಶಾಲೆಗೆ ಸುತ್ತಲಿನ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದು, ಶಿರಿಯಾರ ಕಲ್ಲುಬೆಟ್ಟು, ಹೊರಳಿಜೆಡ್ಡು, ಅಲ್ತಾರು ಕಾರ್ತಿಬೆಟ್ಟು, ಕಾಜ್ರಳ್ಳಿ, ಮುಸಪುರಿ ಗ್ರಾಮಗಳಿಂದ ತಾವೇ ವಿದ್ಯಾರ್ಥಿಗಳನ್ನು ಕರೆತರುತ್ತಾರೆ. ಉಳಿದಂತೆ ದೈಹಿಕ ಶಿಕ್ಷಣದ ಜೊತೆಗೆ ವಿಜ್ಞಾನ ಮತ್ತು ಗಣಿತವನ್ನೂ ಬೋಧಿಸುತ್ತಾರೆ.

    ಶಾಲಾ ವಾಹನ ಚಾಲನೆ ಮಾಡಲು ಶಿಕ್ಷಕರು ಪರವಾನಗಿ ಸಹ ಪಡೆದಿದ್ದಾರೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಮುಂದಾದ ಬಳಿಕ ಸುತ್ತಮುತ್ತಲಿನ ಗ್ರಾಮದ ಎಲ್ಲಾ ಪೋಷಕರು ಸಹ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿದ್ದಾರೆ. ಕಳೆದ 2 ಎರಡು ವರ್ಷದಿಂದ ಈ ಎಲ್ಲಾ ಸೇವೆಯನ್ನು ಒಂದು ದಿನವೂ ತಪ್ಪದೆ ಮಾಡುತ್ತಿರುವ ರಾಜಾರಾಮ್ ಮೇಷ್ಟ್ರು, ಮಕ್ಕಳು ಹಾಗೂ ಪೋಷಕರು ಸೇರಿದಂತೆ ಸಹ ಶಿಕ್ಷಕರ ಅಕ್ಕರೆಗೆ ಪಾತ್ರರಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡ್ರೈವರ್ ಸೀಟಿನಿಂದ್ಲೇ ಮಹಿಳೆಯನ್ನು ಬಸ್ಸೊಳಗೆ ಕರೆಸಿಕೊಂಡು ಮಾನವೀಯತೆ ಮೆರೆದ  ಬಿಎಂಟಿಸಿ ಚಾಲಕ

    ಡ್ರೈವರ್ ಸೀಟಿನಿಂದ್ಲೇ ಮಹಿಳೆಯನ್ನು ಬಸ್ಸೊಳಗೆ ಕರೆಸಿಕೊಂಡು ಮಾನವೀಯತೆ ಮೆರೆದ ಬಿಎಂಟಿಸಿ ಚಾಲಕ

    ಬೆಂಗಳೂರು: ಬಿಎಂಟಿಸಿ ಚಾಲಕರೊಬ್ಬರು ಮಹಿಳೆಯನ್ನು ತನ್ನ ಸೀಟಿನಿಂದಲೇ ಬಸ್ಸೊಳಗೆ ಕರೆಸಿಕೊಂಡು ಮಾನವೀಯತೆ ಮೆರೆದಿದ್ದಾರೆ.

    ಭಾರತ್ ಬಂದ್ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ನಿಲ್ದಾಣದಲ್ಲಿ ಇಂದು ವಿರಳವಾಗಿ ಬಸ್ ಸಂಚರಿಸುತಿತ್ತು. ಕಡಿಮೆ ಬಸ್ ಇದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರ ನೂಕು ನುಗ್ಗಾಟ ಜಾಸ್ತಿಯಿತ್ತು.

    ನೂಕು ನುಗ್ಗಾಟದ ಮಧ್ಯೆ ಮಹಿಳೆಯೊಬ್ಬರು ತನ್ನ ಪುಟ್ಟ ಮಕ್ಕಳನ್ನು ಎತ್ತಿಕೊಂಡು ಬಸ್ ಹತ್ತಲು ಪರದಾಡುತ್ತಿದ್ದರು. ಮಹಿಳೆಯ ಸಂಕಟ ನೋಡಿ ಬಿಎಂಟಿಸಿ ಬಸ್ ಡ್ರೈವರ್ ಅವರ ನೆರವಿಗೆ ಬಂದಿದ್ದಾರೆ. ಚಾಲಕ ತನ್ನ ಸೀಟಿನಿಂದಲೇ ಅವರನ್ನು ಬಸ್ಸೊಳಗೆ ಕರೆಸಿಕೊಂಡು ಮಾನವೀಯತೆ ಮರೆದಿದ್ದಾರೆ. ಚಾಲಕ ತಾಯಿ ಹಾಗೂ ಚಿಕ್ಕ ಮಗುವನ್ನು ಬಸ್ಸಿನೊಳಗೆ ಕರೆಸಿಕೊಂಡಿದಲ್ಲದೇ ತನ್ನ ಸೀಟ್ ನ ಪಕ್ಕದಲ್ಲೇ ಕೂರಿಸಿಕೊಂಡಿದ್ದಾರೆ.

    ಮಂಗಳವಾರದ ಬಂದ್‍ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಬಸ್‍ಗಳನ್ನು ರಸ್ತೆಗಿಳಿಸಲು ಬಿಎಂಟಿಸಿ, ಕೆಎಸ್‍ಆರ್ ಟಿಸಿ ನಿರ್ಧರಿಸಿತ್ತು. ಆದರೆ ಕೆಲ ಬಸ್‍ಗಳ ಮೇಲೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಹಲವು ಕಡೆ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೂ ಆಗಾಗ ಕೆಲವೊಂದು ಬಸ್ಸುಗಳು ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿದೆ.

    https://www.youtube.com/watch?v=nCVC3K38xnY

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೆಟ್ರೋಲ್ ಹಾಕಿಸಿ ಚಿಲ್ಲರೆ ಕೇಳಿದ್ದಕ್ಕೆ ಡ್ರೈವರ್ ಮೇಲೆ ಹಲ್ಲೆ

    ಪೆಟ್ರೋಲ್ ಹಾಕಿಸಿ ಚಿಲ್ಲರೆ ಕೇಳಿದ್ದಕ್ಕೆ ಡ್ರೈವರ್ ಮೇಲೆ ಹಲ್ಲೆ

    ಬೆಂಗಳೂರು: ಪೆಟ್ರೋಲ್ ಹಾಕಿಸಿ ಚಿಲ್ಲರೆ ಕೇಳಿದ್ದಕ್ಕೆ ಡ್ರೈವರ್ ಮೇಲೆ ಹಲ್ಲೆ ನಡೆಸಲಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಸೋಲೂರಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ನಲ್ಲಿ ಈ ಘಟನೆ ನಡೆದಿದೆ. ಅಮಾಯಕ ಡ್ರೈವರ್ ಮುನಿಯಪ್ಪಗೆ ಬಂಕ್ ಮಾಲೀಕ ಶಿವಕುಮಾರ್ ಹಾಗೂ ಕ್ಯಾಷಿಯರ್ ದಿನೇಶ್ ಸೇರಿದಂತೆ ಐದು ಜನರು ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಮುನಿಯಪ್ಪ 500 ರೂ. ಗೆ ನೀಡಿ 100 ರೂ. ಮೌಲ್ಯದ ಪೆಟ್ರೋಲ್ ಹಾಕಿಸಿಕೊಂಡು ಉಳಿದ ಚಿಲ್ಲರೆ ಹಣ ಕೇಳಿದ್ದಕ್ಕೆ ಹಲ್ಲೆ ನಡೆದಿದೆ ಎಂದು ಮುನಿಯಪ್ಪ ಆರೋಪಿಸುತ್ತಾರೆ. ಮುನಿಯಪ್ಪಗೆ ತಲೆ, ಕೈ ಹಾಗೂ ಕಾಲು ಭಾಗದಲ್ಲಿ ಗಾಯಗಳಾಗಿದ್ದು, ಸೋಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸದ್ಯ ಈ ಘಟನೆ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಧ್ಯರಾತ್ರಿ ಬಸ್ಸಿಳಿದ ಯುವತಿ- ಆಟೋ ಹತ್ತೋವರೆಗೂ ಬಸ್ ನಿಲ್ಲಿಸಿ ಕಾದ ಕಂಡಕ್ಟರ್ -ಡ್ರೈವರ್

    ಮಧ್ಯರಾತ್ರಿ ಬಸ್ಸಿಳಿದ ಯುವತಿ- ಆಟೋ ಹತ್ತೋವರೆಗೂ ಬಸ್ ನಿಲ್ಲಿಸಿ ಕಾದ ಕಂಡಕ್ಟರ್ -ಡ್ರೈವರ್

    ಮುಂಬೈ: ನಾವು ಪ್ರತಿದಿನ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಶೋಷಣೆಗಳ ಸುದ್ದಿಯನ್ನು ನೋಡುತ್ತಿರುತ್ತೇವೆ. ಇತ್ತ ಬಸ್ ಕಂಡಕ್ಟರ್ ಮತ್ತು ಡ್ರೈವರ್ ಗಳು ಕೂಡ ರಾತ್ರಿ ಯುವತಿಯೊಬ್ಬಳೆ ಬಸ್ ಇಳಿದ ತಕ್ಷಣ ಹೊರಟು ಹೋಗುತ್ತಾರೆ. ಆದರೆ ಇಂತಹವರ ಮಧ್ಯೆ ನಗರದ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಯುವತಿಯೊಬ್ಬಳು ಬಸ್ ಇಳಿದು ಮನೆಗೆ ಆಟೋ ಹತ್ತೊವರೆಗೂ ಅಲ್ಲೆ ನಿಂತಿದ್ದು, ಬಳಿಕ ಹೋಗಿದ್ದಾರೆ.

    ಯುವತಿ ತನಗಾಗಿ ಕಾದಿದ್ದ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಬಗ್ಗೆ ಟ್ವೀಟ್ ಮಾಡಿ ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ. “ಮೊದಲಿಗೆ ಯುವತಿ ಈ ಕಾರಣಕ್ಕೆ ನಾನು ಮುಂಬೈಯನ್ನ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    https://twitter.com/nautankipanti/status/1048081287393632256

    “ನಾನು ಪ್ರಯಾಣಿಸುತ್ತಿದ್ದ ಬಸ್ಸಿನಿಂದ ಮಧ್ಯರಾತ್ರಿ 1.30 ಕ್ಕೆ ಮುಂಬೈನ ಬಸ್ ನಿಲ್ದಾಣದಲ್ಲಿ ಇಳಿದುಕೊಂಡಿದ್ದೆ. ನಂತರ ನಾನು ಒಬ್ಬಳೇ ಇರುವುದು ಕಂಡು, ಬಸ್ ಹೋಗದೇ ಅಲ್ಲಿಯೇ ನಿಲ್ಲಿಸಿ ನಿಮ್ಮನ್ನು ಕರೆದೊಕೊಂಡು ಹೋಗಲು ಯಾರಾದರೂ ಬರುತ್ತಾರಾ ಎಂದು ಕೇಳಿದರು. ಈ ವೇಳೆ ಯಾರು ಬರಲ್ಲ ಎಂದು ಹೇಳಿದೆ. ನಂತರ ನಾನು ಒಬ್ಬಳೇ ಇರುತ್ತೇನೆ ಎಂಬ ಕಾರಣಕ್ಕೆ ಕಂಡಕ್ಟರ್ ಮತ್ತು ಡ್ರೈವರ್ ಬಸ್ ನಿಲ್ಲಿಸಿ ಅಲ್ಲೆ ನಿಂತಿದ್ದರು. ಬಳಿಕ ನಾನು ಆಟೋ ಹತ್ತಿ ಹೊರಟೆ, ನಾನು ಸುರಕ್ಷಿತವಾಗಿ ಹೊರಟ ನಂತರ ಅವರು ಅಲ್ಲಿಂದ ಹೊರಟರು” ಅಂತ ಟ್ವೀಟ್ ಮಾಡಿ ಧನ್ಯವಾದವನ್ನು ತಿಳಿಸಿದ್ದಾರೆ.

    ಚಾಲಕ ಮತ್ತು ಕಂಡಕ್ಟರ್ ತಮ್ಮ ಕರ್ತವ್ಯವನ್ನಷ್ಟೇ ಮಾಡಿದ್ದರೆ, ಯುವತಿಗಾಗಿ ಕಾಯುವುದು ಅವರ ಕೆಲಸ ಆಗಿರಲಿಲ್ಲ. ಯುವತಿಯನ್ನು ಬಸ್ಸಿಂದ ಇಳಿಸಿ ಸೀದಾ ಹೋಗಬಹುದಿತ್ತು.  ಆದರೆ ಅವರು ಮಾನವೀಯತೆಯ ದೃಷ್ಟಿಯಿಂದ ನಿಂತಿದ್ದರು. ನಿಜಕ್ಕೂ ಡ್ರೈವರ್ ಮತ್ತು ಚಾಲಕನ ಕೆಲಸ ಮೆಚ್ಚುವಂತಹದ್ದು ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ಜೀವನ ನಿರ್ವಹಣೆಗೆ ಟ್ಯಾಕ್ಸಿ ಓಡಿಸುತ್ತಿದ್ದ ಶಂಕರ್ ಅಶ್ವಥ್‍ಗೆ ಆಸರೆಯಾದ ದರ್ಶನ್!

    ಬೆಂಗಳೂರು: ಸಿನಿಮಾ ಅವಕಾಶ ಇಲ್ಲದೆ ಊಬರ್ ಕ್ಯಾಬ್ ಓಡಿಸುತ್ತಿರುವ ಹಿರಿಯ ನಟ ಕೆ.ಎಸ್.ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

    ಶಂಕರ್ ಅಶ್ವಥ್ ಕ್ಯಾಬ್ ಡ್ರೈವರ್ ಆಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಸುದ್ದಿ ತಿಳಿದ ಬಳಿಕ ಕನ್ನಡ ಚಿತ್ರರಂಗದ ಕೆಲವರು ಶಂಕರ್ ಸಹಾಯಕ್ಕೆ ಮುಂದಾಗಿದ್ದರು. ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶಂಕರ್ ಅಶ್ವಥ್ ಕುಟುಂಬಕ್ಕೆ ಪರೋಕ್ಷವಾಗಿ ನೆರವಾಗಿದ್ದಾರೆ. ಇದನ್ನೂ ಓದಿ: ಜೀವನ ನಿರ್ವಹಣೆಗೆ ಕ್ಯಾಬ್ ಡ್ರೈವರ್ ಆದ ಕೆ.ಎಸ್. ಅಶ್ವಥ್ ಪುತ್ರ!

    ಸದ್ಯ ಚಾಲೆಂಜಿಂಗ್ ಸ್ಟಾರ್ ಅಭಿನಯಿಸುತ್ತಿರುವ ಯಜಮಾನ ಚಿತ್ರದಲ್ಲಿ ಶಂಕರ್ ಅಶ್ವಥ್ ಅವರಿಗೂ ಸಿನಿಮಾದಲ್ಲಿ ಅವಕಾಶ ನೀಡಿ ಎಂದು ದರ್ಶನ್ ಚಿತ್ರತಂಡದ ಹತ್ತಿರ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ಹಾಗೂ ಶಂಕರ್ ಅಶ್ವಥ್ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದೇನೆ: ಶಂಕರ್ ಅಶ್ವಥ್

    ಯಜಮಾನ ಚಿತ್ರದಲ್ಲಿ ನನಗೂ ಅವಕಾಶ ನೀಡುವಂತೆ ದರ್ಶನ್ ಚಿತ್ರತಂಡಕ್ಕೆ ಹೇಳಿದ್ದಾರೆ ಎಂದು ಸ್ವತಃ ಶಂಕರ್ ಅಶ್ವಥ್ ತಮ್ಮ ಫೇಸ್ ಬುಕ್‍ನಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಶಂಕರ್ ಅಶ್ವಥ್ ಅವರಿಗೆ ಸಿನಿಮಾ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಇದನ್ನೂ ಓದಿ: ಶಂಕರ್ ಅಶ್ವಥ್‍ರನ್ನು ಭೇಟಿ ಮಾಡಿದ ಪ್ರಥಮ್

  • ಚೈಲ್ಡ್ ಲಾಕ್ ಮಾಡಿ ಯುವತಿ ಮುಂದೆ ಓಲಾ ಡ್ರೈವರ್ ನಿಂದ ಅಸಭ್ಯವಾಗಿ ವರ್ತನೆ

    ಚೈಲ್ಡ್ ಲಾಕ್ ಮಾಡಿ ಯುವತಿ ಮುಂದೆ ಓಲಾ ಡ್ರೈವರ್ ನಿಂದ ಅಸಭ್ಯವಾಗಿ ವರ್ತನೆ

    ಬೆಂಗಳೂರು: ನಡು ರಸ್ತೆಯಲ್ಲಿ ಕಾರು ನಿಲ್ಲಿಸಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದ ಡ್ರೈವರ್ ನನ್ನು ಓಲಾ ಕಂಪನಿ ಅಮಾನತು ಮಾಡಿದೆ.

    ರಾಜಶೇಖರ್ ರೆಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ ಡ್ರೈವರ್. ಭಾನುವಾರ ರಾತ್ರಿ ಕೋರಮಂಗಲ ರಿಂಗ್ ರಸ್ತೆಯಲ್ಲಿ ಈ ಘಟನೆ ರಾಜಶೇಖರ್ ರೆಡ್ಡಿ ಅಸಭ್ಯವಾಗಿ ವರ್ತಿಸಿದ್ದ.

    ಇಂದಿರಾನಗರದಿಂದ ಬಿಟಿಎಂ ಲೇಔಟ್ ತೆರಳುತ್ತಿದ್ದಾಗ ರಾಜಶೇಖರ್ ರೆಡ್ಡಿ ಕಾರನ್ನು ಚೈಲ್ಡ್ ಲಾಕ್ ಮಾಡಿ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದ. ಈ ಕುರಿತು ಓಲಾ ಸಂಸ್ಥೆಗೆ ಯುವತಿ ದೂರು ನೀಡಿದ್ದರು. ಆದರೆ ಈ ಕುರಿತು ಯುವತಿ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದ್ದರು.

    ಈ ವಿಚಾರ ಬೆಳಕಿಗೆ ಬಂದ ಬಳಿಕ ಓಲಾ ಕಂಪೆನಿ ಡ್ರೈವರ್ ನನ್ನು ಅಮಾನತು ಗೊಳಿಸಿದ್ದು, ರಾಜಶೇಖರ್ ರೆಡ್ಡಿ ಮೇಲೆ ದೂರು ನೀಡುವಂತೆ ಯುವತಿ ಜೊತೆ ಕೇಳಿಕೊಂಡಿದೆ. ( ಇದನ್ನೂ ಓದಿ: ಕೊತ ಕೊತ ಕುದಿಯುವ ಬಿಸಿ ಬಿಸಿ ಎಣ್ಣೆ ಗಂಡನ ‘ಅದಕ್ಕೇ’ ಸುರಿದ್ಳು ಪತ್ನಿ! )

    ನಡೆದಿದ್ದು ಏನು? 23 ವರ್ಷದ ಯುವತಿ ಭಾನುವಾರ ರಾತ್ರಿ ಇಂದಿರಾನಗರದಿಂದ ಬಿಟಿಎಂ ಲೇಔಟ್ ತೆರಳಲು ಓಲಾ ಕಾರ್ ಬುಕ್ ಮಾಡಿದ್ದರು. ಈ ವೇಳೆ ಕೋರ ಮಂಗಲದ ರಿಂಗ್ ರಸ್ತೆಯಲ್ಲಿ ಕಾರು ನಿಲ್ಲಿಸಿದ ಡ್ರೈವರ್ ಚೈಲ್ಡ್ ಲಾಕ್ ಮಾಡಿ ಯುವತಿಯ ದೇಹವನ್ನು ಮುಟ್ಟಲು ಪ್ರಯತ್ನಿಸಿ ಅಸಭ್ಯವಾಗಿ ವರ್ತಿಸಿದ್ದ.

    ಈ ವೇಳೆ ಕಾರ್ ನಿಂದ ಹೊರ ಬರಲು ಪ್ರಯತ್ನಿಸಿದ ಯುವತಿ ಕಾರ್ ಲಾಕ್ ಆಗಿದುವುದನ್ನು ಕಂಡು ಕಾರಿನ ಕಿಟಕಿ ಗಾಜಿನ ಮೇಲೆ ಬಲವಾಗಿ ಹೊಡೆದು ಕಿರುಚಿಕೊಳ್ಳುತ್ತಾರೆ. ಇದರಿಂದ ಭಯಗೊಂಡ ಡ್ರೈವರ್ ಯುವತಿಯನ್ನು ಕಾರಿನಿಂದ ಹೊರ ಬಿಡುತ್ತಾನೆ. ಅಲ್ಲಿಂದ ಸುಮಾರು 500 ಮೀಟರ್ ದೂರವಿರುವ ಈಜಿಪುರ ಟ್ರಾಫಿಕ್ ಸಿಗ್ನಲ್ ಬಳಿ ಓಡಿ ಬಂದ ಯುವತಿ ಅಲ್ಲಿಂದ ಬೇರೆ ವಾಹನದಲ್ಲಿ ಮನೆಗೆ ತೆರಳುತ್ತಾರೆ. ಘಟನೆ ನಡೆದ ಮರುದಿನವೂ ಡ್ರೈವರ್ ಫೋನ್ ಮಾಡಿ ಆಕೆಯ ಜೊತೆ ಮಾತನಾಡಿದ್ದಾನೆ. ನಂತರ ಘಟನೆ ಕುರಿತು ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

     

  • ತನ್ನ ಹುಟ್ಟುಹಬ್ಬದಂದು ಡ್ರೈವರ್ ಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ಕೊಟ್ಟ ಅನುಷ್ಕಾ ಶೆಟ್ಟಿ!

    ತನ್ನ ಹುಟ್ಟುಹಬ್ಬದಂದು ಡ್ರೈವರ್ ಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ಕೊಟ್ಟ ಅನುಷ್ಕಾ ಶೆಟ್ಟಿ!

    ಹೈದರಾಬಾದ್: ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸಿನಿಮಾ ಇತಿಹಾಸ ಬರೆದಿದೆ. ಚಿತ್ರದಲ್ಲಿ ದೇವಸೇನಾ ಪಾತ್ರಕ್ಕೆ ಜೀವ ತುಂಬಿದ್ದ ಅನುಷ್ಕಾ ಶೆಟ್ಟಿ ಇಂದು ತಮ್ಮ 36 ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬಾಹುಬಲಿ ಚಿತ್ರದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ರಾಜಕುಮಾರಿ ಆಗಿರುವ ಅನುಷ್ಕಾ ತಮ್ಮ ಹುಟ್ಟುಹಬ್ಬದಂದು ತಮ್ಮ ಕಾರಿನ ಡ್ರೈವರ್ ಗೆ 12 ಲಕ್ಷ ರೂ. ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಅನುಷ್ಕಾ ಒಟ್ಟು 140 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ. ಅನುಷ್ಕಾ ತಮ್ಮ ಸಿನಿಮಾಗಳಿಗೆ 4 ರಿಂದ 5 ಕೋಟಿ ಸಂಭಾವನೆ ಪಡೆಯುತ್ತಾರೆ. ಈ ಹಣದಿಂದ ತಮ್ಮ ಸೀನಿಯರ್ ಡ್ರೈವರ್ ಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಅನುಷ್ಕಾ ತಮ್ಮ ಕಾರ್ ಡೈವರ್ ಅವರ ಕೆಲಸದ ಬಗ್ಗೆಯಿರುವ ನಿಷ್ಠೆಯನ್ನು ಇಷ್ಟಪಟ್ಟಿದ್ದಾರೆ. ನನಗೆ ಅವರು ಕಷ್ಟಪಟ್ಟು ಮಾಡುವ ಕೆಲಸ ಹಾಗೂ ಅವರು ನನ್ನನ್ನು ನೋಡಿಕೊಳ್ಳುವಂತಹ ರೀತಿ ಇಷ್ಟವಾಗಿದೆ. ಹಾಗಾಗಿ ನಾನು ಅವರಿಗೆ 12 ಲಕ್ಷದ ಕಾರನ್ನು ಉಡುಗೊರೆಯಾಗಿ ನೀಡಿದ್ದರಿಂದ ನನಗೆ ಖುಷಿಯಾಗಿದೆ ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ.

    ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿರೋ ಪ್ರಭಾಸ್‍ಗೆ ಅನುಷ್ಕಾ ಗಿಫ್ಟ್ ಕೊಟ್ಟಿದ್ದು ಏನು ಗೊತ್ತಾ?

    ಅನುಷ್ಕಾ ಅವರ ನಿಜವಾದ ಹೆಸರು ಸ್ವೀಟಿ ಶೆಟ್ಟಿ. ಕಾರಿನ ಬಗ್ಗೆ ತುಂಬಾ ಕ್ರೇಜ್ ಇರುವ ಅನುಷ್ಕಾ ಬಳಿ ಬಿಎಂಡಬ್ಲೂ 6, ಆಡಿ ಎ6, ಆಡಿ ಕ್ಯೂ5 ಮತ್ತು ಟೊಯೆಟಾ ಕೊರಲಾ ನಂತಹ ವಿಲಾಸಿ ಕಾರುಗಳಿವೆ.

  • ಮಹಿಳೆ ಎದುರೆ ಹಸ್ತಮೈಥುನ ಮಾಡಿಕೊಂಡ ಉಬರ್ ಕ್ಯಾಬ್ ಡ್ರೈವರ್ ಅರೆಸ್ಟ್

    ಮಹಿಳೆ ಎದುರೆ ಹಸ್ತಮೈಥುನ ಮಾಡಿಕೊಂಡ ಉಬರ್ ಕ್ಯಾಬ್ ಡ್ರೈವರ್ ಅರೆಸ್ಟ್

    ಹೈದರಬಾದ್: ಮಹಿಳೆಯ ಮುಂದೆಯೇ ಹಸ್ತಮೈಥುನ ಮಾಡಿಕೊಂಡಿದ್ದ ಉಬರ್ ಕ್ಯಾಬ್ ಡ್ರೈವರ್ ನನ್ನು ಸೈಬಾರಾಬಾದ್ ಪೊಲೀಸರು ಬಂಧಿಸಿದ್ದಾರೆ.

    ಕೊಂದಾಪುರ ಗಚಿಬೌಲಿ ಬಡಾವಣೆಯ ಮಹಿಳಾ ನಿವಾಸಿ, ಅಕ್ಟೋಬರ್ 19 ರಂದು ಬೆಳಗ್ಗೆ ದೆಹಲಿಗೆ ಹೊರಡಲು ಬುಕ್ ಮಾಡಿದ್ದ ಕಾರಿನಲ್ಲಿ ಡ್ರೈವರ್ ಈ ಕೃತ್ಯ ಎಸಗಿದ್ದ. ಈ ಕೃತ್ಯವನ್ನು ನೋಡಿದ್ದ ಮಹಿಳೆ ದೆಹಲಿಯ ಸಫರ್ ಜಂಗ್ ಠಾಣೆಯಲ್ಲಿ ದೂರು ನೀಡಿದ್ದರು.

    ಏನಿದು ಪ್ರಕರಣ?
    ಅಕ್ಟೋಬರ್ 19 ರಂದು ಹೈದರಬಾದ್ ವಿಮಾನ ನಿಲ್ದಾಣಕ್ಕೆ ತೆರಳಲು ಮಹಿಳೆಯೊಬ್ಬರು ಉಬರ್ ಕಾರನ್ನು ಬುಕ್ ಮಾಡಿದ್ದರು. ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಉಬರ್ ಡ್ರೈವರ್ ಕಾರಿನಲ್ಲೇ ಹಸ್ತಮೈಥುನ ಮಾಡಿಕೊಂಡಿದ್ದ. ಅಷ್ಟೇ ಅಲ್ಲದೇ ಕಾರನ್ನು ನಿಲ್ಲಿಸಿ ಹಸ್ತಮೈಥುನ ಮಾಡಿದ್ದ. ಈ ವೇಳೆ ಕೃತ್ಯವನ್ನು ಪೊಲೀಸರಿಗೆ ತಿಳಿಸುವುದಾಗಿ ಎಚ್ಚರಿಕೆ ನೀಡಿದ ಬಳಿಕ ಆತ ಮಹಿಳೆಯನ್ನು ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡಿದ್ದ.

    ಮಹಿಳೆಯು ದೆಹಲಿ ವಿಮಾನ ನಿಲ್ದಾಣಕ್ಕೆ ತಲುಪುತ್ತಿದ್ದಂತೆ 1091 ಸಹಾಯವಾಣಿಗೆ ಕರೆ ಮಾಡಿ ಸಫರ್ ಜಂಗ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ  ಕೇಸ್ ವರ್ಗಾವೆಣೆಯಾಗಿ  ಸೈಬಾರಾಬಾದ್ ಪೊಲೀಸರು ಐಪಿಸಿ ಸೆಕ್ಷನ್ ಅಡಿಯಲ್ಲಿ ಡ್ರೈವರ್ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

    ಡಿಸಿಪಿ ಮಧಪುರ್ ಅವರು ಡ್ರೈವರ್‍ನನ್ನು ಬಂಧಿಸಿಲು ಎರಡು ವಿಶೇಷ ತಂಡಗಳನ್ನು ರಚಿಸಿದ್ದರು. ಈಗ ಡ್ರೈವರ್ ನನ್ನು ಬಂಧಿಸಲಾಗಿದ್ದು, ಕಾರನ್ನು ವಶಕ್ಕೆ ಪಡೆಯಲಾಗಿದೆ. ಡ್ರೈವರ್‍ನನ್ನು ಕೋರ್ಟ್ ಗೆ ಹಾಜರುಪಡಿಸಿದ್ದು, ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

    ತನಗಾದ ಅನ್ಯಾಯವನ್ನು ಮಹಿಳೆ ಫೇಸ್‍ಬುಕ್ ನಲ್ಲಿ ಬರೆದು ಪೋಸ್ಟ್ ಮಾಡಿದ್ದರು. ಮಹಿಳೆಯ ಆರೋಪದ ಅಡಿ ಉಬರ್ ಕ್ಯಾಬ್ ಸಂಸ್ಥೆಯು ಡ್ರೈವರ್ ನನ್ನು ವಜಾ ಮಾಡಿದೆ.

    ಈ ಘಟನೆಯ ಬಳಿಕ ಡ್ರೈವರ್ ನನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ. ಮತ್ತೆ ಡ್ರೈವರ್ ಕ್ಷಮೆಯಾಚಿಸಿದರೂ ಆತನನ್ನು ಸೇವೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ಉಬರ್ ತಿಳಿಸಿದೆ.

  • ಕೇರಳದಲ್ಲಿ ಖ್ಯಾತ ಬಹುಭಾಷಾ ನಟಿ ಮೇಲೆ ಮಾಜಿ ಡ್ರೈವರ್‍ನಿಂದಲೇ ರೇಪ್

    ಕೇರಳದಲ್ಲಿ ಖ್ಯಾತ ಬಹುಭಾಷಾ ನಟಿ ಮೇಲೆ ಮಾಜಿ ಡ್ರೈವರ್‍ನಿಂದಲೇ ರೇಪ್

    ಕೊಚ್ಚಿ: ಶೂಟಿಂಗ್ ಮುಗಿಸಿ ವಾಪಾಸಾಗುತ್ತಿದ್ದ ಬಹುಭಾಷಾ ನಟಿಯೊಬ್ಬರನ್ನು ಗ್ಯಾಂಗ್‍ವೊಂದು ಅಪಹರಿಸಿ ಅತ್ಯಾಚಾರ ಎಸಗಿದ್ದು, ಈ ಸಂಬಂಧ ಪೊಲೀಸರು ನಟಿಯ  ಡ್ರೈವರ್‍ನನ್ನು ಬಂಧಿಸಿದ್ದಾರೆ.

    ಒಟ್ಟು ಏಳು ಮಂದಿಯ ಗ್ಯಾಂಗ್ ಈ ಕೃತ್ಯ ಎಸಗಿದ್ದು, ಡ್ರೈವರ್  ಮಾರ್ಟಿನ್ ನನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಮುಖ್ಯ ಆರೋಪಿ ಸುನೀಲ್ ಎಂದು ಗುರುತಿಸಲಾಗಿದ್ದು, ಕೆಲ ತಿಂಗಳ ಕಾಲ ನಟಿಯ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕೃತ್ಯಕ್ಕೆ ಸಹಕಾರ ನೀಡಿದ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಈಗ ಶೋಧ ಕಾರ್ಯ ಆರಂಭಿಸಿದ್ದಾರೆ.

    ಶನಿವಾರ ಬೆಳಗ್ಗೆ ನಟಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವ ಸುದ್ದಿ ಸಿಕ್ಕಿತ್ತು. ಆದರೆ ನಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ನನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ.

    ಏನಿದು ಘಟನೆ?
    ಶುಕ್ರವಾರ ರಾತ್ರಿ ಕೇರಳದ ತ್ರಿಶೂರ್‍ನಿಂದ ಎರ್ನಾಕುಳಂ ಗೆ ನಟಿ ಮತ್ತು ಚಾಲಕ ಇಬ್ಬರೇ ಪ್ರಯಾಣಿಸುತ್ತಿದ್ದ ವೇಳೆ ನಡು ರಸ್ತೆಯಲ್ಲೇ ಟೆಂಪೋ ಟ್ರಾವೆಲ್ಲರ್ ವಾಹನದಲ್ಲಿ ಬಂದ ಗ್ಯಾಂಗ್ ಆಡಿ ಕಾರನ್ನು ಕಾರನ್ನು ಅಡ್ಡಗಟ್ಟಿ ಪ್ರವೇಶಿಸಿದೆ. ಡ್ರೈವರ್ ಕಾರನ್ನು ಚಲಾಯುಸುತ್ತಿದ್ದಂತೆ ಕಾಮುಕರು ಕೃತ್ಯ ಎಸಗಿ ಪಳರಿವಟ್ಟಂ ಎಂಬಲ್ಲಿ ನಟಿಯನ್ನು ಬಿಟ್ಟು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಕಾಮುಕರು ಕೃತ್ಯದ ಫೋಟೋ ಮತ್ತು ವಿಡಿಯೋವನ್ನು ತೆಗೆದಿದ್ದು, ಘಟನೆ ಬಳಿಕ ನಟಿ ಕಾಕನಾಡದ ನಿರ್ದೇಶಕರ ಮನೆಗೆ ತೆರಳಿ ಆಶ್ರಯ ಪಡೆದಿದ್ದಾರೆ. ಕಳಮಶೆರಿ ವೈದ್ಯಕೀಯ ಕಾಲೇಜಿನಲ್ಲಿ  ವೈದ್ಯಕೀಯ ಪರೀಕ್ಷೆ ನಡೆದಿದ್ದು, ನಟಿಯ ಮೇಲೆ ಆತ್ಯಾಚಾರ ಎಸಗಿರುವುದು ಸಾಬೀತಾಗಿದೆ.

    ಶುಕ್ರವಾರ ಮಾರ್ಟಿನ್ ಮತ್ತು ಸುನೀಲ್ ನಡುವೆ ಸುಮಾರು 40 ಕರೆಗಳು ಹೋಗಿವೆ. ಅಷ್ಟೇ ಅಲ್ಲದೇ ಸಾಕಷ್ಟು ಸಂದೇಶಗಳು ಸಹ ಹೋಗಿದೆ ಎಂದು ಎರ್ನಾಕುಲಂ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.