Tag: ಡೆಲ್ಟಾ ವೈರಸ್

  • ಡೆಲ್ಟಾ ಪ್ರಕರಣದ ಬಗ್ಗೆ ಬಿಬಿಎಂಪಿ ಕಮಿಷನರ್ ಆತಂಕ

    ಡೆಲ್ಟಾ ಪ್ರಕರಣದ ಬಗ್ಗೆ ಬಿಬಿಎಂಪಿ ಕಮಿಷನರ್ ಆತಂಕ

    ಬೆಂಗಳೂರು: ನಗರದಲ್ಲಿ ಡೆಲ್ಟಾ ಪ್ರಕರಣಗಳು ಮಹಾ ಸ್ಫೋಟ ಆಗುತ್ತಿರುವ ಹೊತ್ತಲ್ಲೇ ಬಿಬಿಎಂ ಕಮಿಷನರ್ ಗೌರವ್ ಗುಪ್ತಾ ಆತಂಕಕಾರಿ ಹೇಳಿಕೆಯನ್ನು ನೀಡಿದ್ದಾರೆ. ಡೆಲ್ಟಾ ವೇರಿಯಂಟ್ ವೈರಾಣು ತಳಿ, 10 ಕೇಸ್ ಗಳು ದೃಢವಾದ್ರೆ, ಅದ್ರಲ್ಲಿ 6-7 ಕೇಸ್ ಗಳು ಡೆಲ್ಟಾ ಕೇಸ್ ಗಳು ಪತ್ತೆಯಾಗುತ್ತಿವೆ. ಎರಡನೇ ಅಲೆಯಲ್ಲಾದ ಸಾವು ನೋವುಗಳಿಗೆ ಇದರ ಹಬ್ಬುವಿಕೆಯೇ ಕಾರಣ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ, ಡೆಲ್ಟಾ ವೆರಿಯಂಟ್ ಕೇಸ್ ಗಳ ಬಗ್ಗೆ ಮಾಹಿತಿಯನ್ನು ನೀಡಿದ್ದು, ಪ್ರತಿನಿತ್ಯದ ಕೊರೊನಾ ಸೋಂಕಿನ ಪ್ರಕರಣಗಳಲ್ಲಿ ಡೆಲ್ಟಾ ರೂಪಾಂತರ ವೈರಸ್‍ನ ಪ್ರಕರಣಗಳು ಪತ್ತೆಯಾಗುತ್ತಿವೆ. ಡೆಲ್ಟಾ ವೇರಿಯಂಟ್‍ನ ಮತ್ತೊಂದು ರೂಪವೇ ಡೆಲ್ಟಾ ಪ್ಲಸ್. ಜನರ ಕೈಯಲ್ಲಿಯೇ ಎಲ್ಲವೂ. ಜನರ ಸುರಕ್ಷತೆ ಮುಖ್ಯ. ಜನ ಗಾಬರಿ ಪಡುವಂತಹ ಅವಶ್ಯಕತೆಯಿಲ್ಲ ಎಂದರು. ಇದನ್ನೂ ಓದಿ: ಮೈಸೂರಲ್ಲಿ ಶೀಘ್ರವೇ ಡೆಲ್ಟಾ ಪ್ಲಸ್ ಪರೀಕ್ಷಾ ಲ್ಯಾಬ್ ಆರಂಭ

    ಬೆಂಗಳೂರಿನಲ್ಲಿ ಒಟ್ಟು 525 ಡೆಲ್ಟಾ ವೆರಿಯಂಟ್ ಪ್ರಕರಣಗಳು ಪತ್ತೆಯಾಗಿದ್ದು, ಸ್ಯಾಂಪಲ್ಸ್ ನ್ನು ನಿಮಾನ್ಸ್ ಹಾಗೂ ಎನ್‍ಸಿಬಿಎಸ್‍ಗೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಜನರು ಆದಷ್ಟು ಸುರಕ್ಷತೆಯಿಂದ ಇರಬೇಕೆಂದು ಸಲಹೆ ನೀಡಿದರು.

  • ಮಹಾರಾಷ್ಟ್ರದಿಂದ ರಾಜ್ಯಕ್ಕೆ ಮಹಾಕಂಟಕ – ಪ್ರತಿನಿತ್ಯ ಬರ್ತಿದ್ದಾರೆ ಸಾವಿರಾರು ಜನ

    ಮಹಾರಾಷ್ಟ್ರದಿಂದ ರಾಜ್ಯಕ್ಕೆ ಮಹಾಕಂಟಕ – ಪ್ರತಿನಿತ್ಯ ಬರ್ತಿದ್ದಾರೆ ಸಾವಿರಾರು ಜನ

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ಕಡಿಮೆಯಾಗಿದೆ. ಸರ್ಕಾರ ಹಂತ ಹಂತವಾಗಿ ರಾಜ್ಯವನ್ನು ಅನ್‍ಲಾಕ್ ಮಾಡುತ್ತಿದೆ. ಜುಲೈ 5ರ ಬಳಿಕ ಮತ್ತಷ್ಟು ಕ್ಷೇತ್ರಗಳಿಗೆ ಸರ್ಕಾರ ರಿಯಾಯಿತಿ ನೀಡಲು ಸಮಾಲೋಚನೆ ಮಾಡುತ್ತಿದೆ.

    ಈ ಸಮಯದಲ್ಲಿ ರಾಜ್ಯದಲ್ಲಿ ಕೊರೊನಾ ರೂಪಾಂತರಿ ಡೆಲ್ಟಾ ವೈರಸ್ ಕಾಟ ಶುರುವಾಗಿದೆ. ಒಂದೇ ದಿನದಲ್ಲಿ 200ಕ್ಕೂ ಅಧಿಕ ಜನರಲ್ಲಿ ಡೆಲ್ಟಾ ವೈರಸ್ ಕಾಣಿಸಿಕೊಂಡಿರುವುದು ಆತಂಕ ಸೃಷ್ಟಿಸಿದೆ. ಈ ನಡುವೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಪ್ರತಿನಿತ್ಯ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಟ್ರೈನ್ ಮೂಲಕ ಸಾವಿರಾರು ಜನ ಬರ್ತಿದ್ದಾರೆ.

    ಮಹಾರಾಷ್ಟ್ರದಿಂದ ಬರುವವರು ಕಡ್ಡಾಯವಾಗಿ 72 ಗಂಟೆಯ ಒಳಗಡೆ ಮಾಡಿಸಿರುವ ಕೋವಿಡ್ ಟೆಸ್ಟ್ ರಿಪೋರ್ಟ್ ತರಬೇಕು ಅಥವಾ 1 ಡೋಸ್ ಲಸಿಕೆ ಪಡೆದಿರುವ ಪ್ರಮಾಣ ಪತ್ರವನ್ನು ತೋರಿಸಬೇಕು ಎಂದು ಸೂಚಿಸಿದೆ. ಆದರೆ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಸಾವಿರಾರು ಜನ ಯಾವ ರಿಪೋರ್ಟ್ ಕೂಡ ತರದೇ ಬರುತ್ತಿದ್ದಾರೆ.

    ಸರ್ಕಾರ ಮತ್ತು ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಕೋವಿಡ್ ಟೆಸ್ಟಿಂಗ್ ಕ್ಯಾಂಪ್ ಕೂಡ ಮಾಡುತ್ತಿದ್ದಾರೆ. 1,000 ದಿಂದ 1,400 ಜನ ಒಂದು ಟ್ರೈನ್‍ನಲ್ಲಿ ಬಂದರೆ ಕೇವಲ 100 ರಿಂದ 150 ಜನ ಮಾತ್ರ ಕೋವಿಡ್ ಟೆಸ್ಟ್‌ಗೆ ಒಳಪಡುತ್ತಿದ್ದಾರೆ. ಒಂದು ಕಡೆ ಮಹಾರಾಷ್ಟ್ರದಿಂದ ಬರುವಾಗ ಕೋವಿಡ್ ಟೆಸ್ಟ್ ರಿಪೋರ್ಟ್ ತರುತ್ತಿಲ್ಲ. ಇಲ್ಲಿ ಕೂಡ ಟೆಸ್ಟಿಂಗ್ ಮಾಡಿಸಿಕೊಳ್ಳುತ್ತಿಲ್ಲ.

    ಇದರಿಂದಾಗಿ ರಾಜ್ಯಕ್ಕೆ ಮಹಾಕಂಟಕ ಶುರುವಾಗಲಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಯಾಗುತ್ತಿದೆ. ಅಲ್ಲಿಂದ ಬರುವವರು ರಾಜ್ಯದಲ್ಲೂ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿದ್ದು ಸರ್ಕಾರ ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ 7 ಮಂದಿ ಯುವಕರಿಂದ ನಿರಂತರ ಅತ್ಯಾಚಾರ

  • ಮೈಸೂರಿನಲ್ಲಿ 1 ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿದ್ದು, ರೋಗಿಯನ್ನ ಐಸೋಲೇಟ್ ಮಾಡಲಾಗಿದೆ: ಸುಧಾಕರ್

    ಮೈಸೂರಿನಲ್ಲಿ 1 ಡೆಲ್ಟಾ ಪ್ಲಸ್ ಪ್ರಕರಣ ಪತ್ತೆಯಾಗಿದ್ದು, ರೋಗಿಯನ್ನ ಐಸೋಲೇಟ್ ಮಾಡಲಾಗಿದೆ: ಸುಧಾಕರ್

    ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆಯ ಭೀತಿಯ ಬೆನ್ನಲ್ಲೇ ರಾಜ್ಯದಲ್ಲಿ ಡೆಲ್ಟಾ ಪ್ಲಸ್ (Delta Plus) ವೈರಸ್ ಆತಂಕ ಎದುರಾಗಿದೆ. ಮೈಸೈರಿನಲ್ಲಿ ಒಂದು ಡೆಲ್ಟಾ ವೈರಸ್ ಪ್ರಕರಣ ಪತ್ತೆಯಾಗಿದ್ದು, ಆ ರೋಗಿಯನ್ನು ಐಸೋಲೇಟ್ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಲ್ಟಾ ಪ್ಲಸ್ ಕೇಸ್ ಮಹಾರಾಷ್ಟ್ರದಲ್ಲಿ 20-30 ಕೇಸ್ ಬಂದಿದೆ. ಮೈಸೂರಿನಲ್ಲಿ ಒಂದು ಕೇಸ್ ಬಂದಿದೆ. ಅವರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಯಾವುದೇ ರೋಗ ಲಕ್ಷಣ ಕಂಡು ಬಂದಿಲ್ಲ. ಅಲ್ಲದೆ ಅವರಿಂದ ಯಾರಿಗೂ ಸೋಂಕು ಹರಡಿಲ್ಲ. ಆತನ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕದಲ್ಲಿ ಇರೋರಿಗೆ ಸೋಂಕು ಹರಡಿಲ್ಲ. ಈ ವೈರಸ್ ಬಗ್ಗೆ ನಿರಂತರವಾಗಿ ಎಚ್ಚರವಹಿಸಿದ್ದೇವೆ. 6 ಜಿನೋಮ್ ಲ್ಯಾಬ್ ಕೂಡಾ ಪ್ರಾರಂಭ ಮಾಡಲು ತೀರ್ಮಾನ ಮಾಡಲಾಗಿದೆ. ನಾನ್ ಕೋವಿಡ್ ರೋಗಿಗಳಿಗೂ ಇನ್ನು ಮುಂದೆ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದ್ದೇವೆ ಎಂದರು.

    ಡಾ.ದೇವಿಶೆಟ್ಟಿ ನಿನ್ನೆ ಪ್ರಾಥಮಿಕ ವರದಿ ನೀಡಿದೆ. ನಮ್ಮ ಕಮಿಟಿ ಜೊತೆ ಚರ್ಚೆ ಮಾಡಿ ಶಿಫಾರಸು ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳುತ್ತೇವೆ. 45 ದಿನಗಳ ಒಳಗೆ ಎಲ್ಲಾ ಜಿಲ್ಲೆಗಳಿಗೆ ತಜ್ಞರ ಶಿಫಾರಸು ಅನುಷ್ಠಾನ ಮಾಡ್ತೀವಿ. ಡೆಲ್ಟಾ ಪ್ಲಸ್ ವೈರಸ್ ಗೆ ಚಿಕಿತ್ಸೆ ದೊಡ್ಡ ಬದಲಾವಣೆ ಇಲ್ಲ. ಡೆಲ್ಟಾ ವೈರಸ್ ಗೆ ನೀಡುವ ಚಿಕಿತ್ಸೆ ಜೊತೆ ಕೆಲ ಔಷಧಿಗಳನ್ನ ಹೆಚ್ಚುವರಿಯಾಗಿ ನೀಡಲಾಗ್ತಿದೆ. ಡೆಲ್ಟಾ ಪ್ಲಸ್ ಸ್ವಭಾವ ಕೂಡಾ ಡೆಲ್ಟಾ ಸ್ವಭಾವವೇ ಇದೆ. ಕೆಲ ಔಷಧಿ ಮಾತ್ರ ಬದಲಾವಣೆ ಮಾಡಲಾಗ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ನೆರೆಯ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ವೈರಾಣು ಪತ್ತೆ – ಸರ್ಕಾರಕ್ಕೆ ತಜ್ಞರ ಎಚ್ಚರಿಕೆ

    ಪ್ರತಿ ಜಿಲ್ಲೆಗಳಲ್ಲಿ ಡೆಲ್ಟಾ ಪ್ಲಸ್ ಕೇಸ್ ಬಗ್ಗೆ ಟೆಸ್ಟ್ ಗೆ ಕಳಿಸಲಾಗ್ತಿದೆ. ಶೇ.5 ಪ್ರತಿ ಜಿಲ್ಲೆಯಲ್ಲಿ ರಾಂಡಮ್ ಟೆಸ್ಟ್ ಗೆ ಕಳಿಸಲು ನಿರ್ಧಾರ ಮಾಡಲಾಗಿದೆ. ಅನುಮಾನ ಇರೋ ಕಡೆ ಹೆಚ್ಚು ಟೆಸ್ಟ್ ಗೆ ಕಳಿಸುವುದಾಗಿ ಹೇಳಿದರು.