Tag: ಡಿ.ಸಿ.ತಮ್ಮಣ್ಣ

  • ಯಾವ ಜಾತಿಯ ಬಗ್ಗೆಯೂ ಹೀನಾಯವಾಗಿ ಮಾತಾಡಬಾರದು: ಡಿ.ಸಿ ತಮ್ಮಣ್ಣ

    ಯಾವ ಜಾತಿಯ ಬಗ್ಗೆಯೂ ಹೀನಾಯವಾಗಿ ಮಾತಾಡಬಾರದು: ಡಿ.ಸಿ ತಮ್ಮಣ್ಣ

    ಮಂಡ್ಯ: ಯಾವುದೇ ಜಾತಿಯ ಬಗ್ಗೆ ಹೀನಾಯವಾಗಿ ಮಾತಾಡಬಾರದು ಎಂದು ಶಾಸಕ ಡಿ.ಸಿ ತಮ್ಮಣ್ಣ (DC Tammanna) ಹೇಳಿದರು.

    ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಯವರ ಹೇಳಿಕೆಗೆ ತಿರುಗೇಟು ಕೊಟ್ಟರು. ದೇಶಕ್ಕೆ ಬ್ರಾಹ್ಮಣರು ಸಂಸ್ಕಾರ ಕೊಟ್ಟಿದ್ದಾರೆ. ಉತ್ತಮ ಗುಣಗಳನ್ನು ರೂಢಿಸಿಕೊಂಡು ಬ್ರಾಹ್ಮಣತ್ವ ಪಡೆದವರು. ಯಾವ ಜಾತಿಗೆ ಸೇರಿದ್ದರೂ ಆತ ಬ್ರಾಹ್ಮಣ ಎಂದು ಅವರು ಅಭಿಪ್ರಾಯಪಟ್ಟರು.

    ಬ್ರಾಹ್ಮಣತ್ವ ಬೇರೆ ಬ್ರಾಹ್ಮಣ ಜಾತಿಯೇ ಬೇರೆ ಎಂದ ಅವರು ಕುಮಾರಸ್ವಾಮಿಯವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಆದರೆ ಹೀನಾಯವಾಗಿ ಮಾತಾಡಬಾರದು ಎಂದರು. ಇದನ್ನೂ ಓದಿ: ಬ್ರಾಹ್ಮಣರ ವಿರುದ್ಧದ ಎಚ್‍ಡಿಕೆ ಹೇಳಿಕೆಗೆ ಪೇಜಾವರ ಶ್ರೀ ಬೇಸರ

    2023ರ ಮಹಾಸಮರದ ಹೊಸ್ತಿಲಲ್ಲಿ ದಳಪತಿ ಹೆಚ್.ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಯನ್ನು ಹೆಚ್‍ಡಿಕೆ ಟಾರ್ಗೆಟ್ ಮಾಡಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ಬ್ರಾಹ್ಮಣರಿಗೇ ಸಿಎಂ ಪಟ್ಟ ನೀಡಲಾಗುತ್ತದೆ. ಪ್ರಹ್ಲಾದ್ ಜೋಶಿಗೆ ಪಟ್ಟ ಕಟ್ಟಲು ಸಂಘ ಪರಿವಾರ ಪ್ಲಾನ್ ಮಾಡಿದೆ ಎಂಬ ಕುಮಾರಸ್ವಾಮಿ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಹೆಚ್‍ಡಿಕೆ ಹೇಳಿದ್ದು ಯಾಕೆ..?: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಜೆಡಿಎಸ್ ಪಂಚರತ್ನ ಯಾತ್ರೆಯನ್ನು ಟೀಕಿಸಿದ್ದರು. ಇದು ಪಂಚರತ್ನ ಅಲ್ಲ, ನವಗ್ರಹ ಯಾತ್ರೆ ಎಂದು ಹೇಳಿದ್ದರು. ಜೋಶಿ ಹೇಳಿಕೆಯಿಂದ ಸಿಡಿದೆದ್ದ ಎಚ್.ಡಿಕುಮಾರಸ್ವಾಮಿ ಇದೀಗ ವಾಗ್ದಾಳಿ ನಡೆಸಿದ್ದಾರೆ. ಈ ಬಾರಿ ಬಿಜೆಪಿ (BJP) ಅಧಿಕಾರಕ್ಕೆ ಬಂದರೆ ಬ್ರಾಹ್ಮಣರಿಗೆ ಮುಖ್ಯಮಂತ್ರಿ ಪಟ್ಟ. ಆರೆಸ್‍ಎಸ್ ಸಭೆಯಲ್ಲಿ ಪ್ರಹ್ಲಾದ್ ಜೋಶಿ ಹೆಸರು ಪ್ರಸ್ತಾಪವಾಗಿದೆ ಎಂಬುದಾಗಿ ಹೇಳಿದ್ದಾರೆ.  ಇದನ್ನೂ ಓದಿ: `ಬ್ರಾಹ್ಮಣ ಸಿಎಂ’ ಬಾಂಬ್ – ಡ್ಯಾಮೇಜ್ ತಪ್ಪಿಸಲು 50 ಸಾವಿರ ವಾಟ್ಸಪ್ ಗ್ರೂಪ್ ಮೊರೆಹೋದ BJP

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎಚ್‍ಡಿಕೆ, ಡಿ.ಸಿ.ತಮ್ಮಣ್ಣಗೆ ಮಾನ ಮರ್ಯಾದೆ ಇದ್ದರೆ ಭೂಕಬಳಿಕೆ ಜಾಗವನ್ನ ಮರಳಿಸಲಿ: ಹಿರೇಮಠ್

    ಎಚ್‍ಡಿಕೆ, ಡಿ.ಸಿ.ತಮ್ಮಣ್ಣಗೆ ಮಾನ ಮರ್ಯಾದೆ ಇದ್ದರೆ ಭೂಕಬಳಿಕೆ ಜಾಗವನ್ನ ಮರಳಿಸಲಿ: ಹಿರೇಮಠ್

    ರಾಮನಗರ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ನಾಚಿಕೆ, ಮಾನ ಮರ್ಯಾದೆ ಇದ್ದರೆ ಭೂಕಬಳಿಕೆ ಜಾಗವನ್ನ ವಾಪಸ್ ಮಾಡಲಿ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹೀರೇಮಠ್ ಆಗ್ರಹಿಸಿದ್ದಾರೆ.

    ರಾಮನಗರ ತಾಲೂಕಿನ ಬಿಡದಿಯ ಕೇತಗಾನಹಳ್ಳಿಗೆ ಹೋಗಿದ್ದಾಗ ಮೊಟ್ಟೆ ಎಸೆದು ಹಲ್ಲೆ ನಡೆಸಲಾಗಿತ್ತು. ಈ ವಿಚಾರವಾಗಿ ಇಂದು ರಾಮನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಎಚ್‍ಡಿ ಕುಮಾರಸ್ವಾಮಿ ಹಾಗೂ ಡಿ.ಸಿ.ತಮ್ಮಣ್ಣ ಅವರಿಗೆ ಸಂವಿಧಾನದ ಮೇಲೆ ಗೌರವಿದ್ದರೆ ಕರ್ನಾಟಕದ ಜನರ ಕ್ಷಮೆ ಕೇಳಬೇಕು. ಜೊತೆಗೆ ತಾವು ಯಾರ ಬಳಿ ಜಮೀನು ತೆಗೆದುಕೊಂಡಿದ್ದಾರೋ ಅವರಿಗೆ ಮರಳಿಸಲಿ. ಇಲ್ಲದಿದ್ದರೆ ಪ್ರಭಾವಿಗಳಿಗೆ ಬಂದ ಸ್ಥಿತಿ ಇವರಿಗೂ ಬರಬಹುದು. ನಾವು ಇಷ್ಟಕ್ಕೆ ಇದನ್ನ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಬಿಡದಿಯಲ್ಲಿ ಎಸ್.ಆರ್ ಹಿರೇಮಠ್, ರವಿಕೃಷ್ಣಾ ರೆಡ್ಡಿ ಮೇಲೆ ಮೊಟ್ಟೆ ಏಟು

    ಬಿಡದಿಯ ಕೇತಗಾನಹಳ್ಳಿ ಸಮೀಪದ ಮಾಜಿ ಸಿಎಂ ಕುಮಾರಸ್ವಾಮಿ ಅವರು 22 ಎಕರೆ ಗೋಮಾಳ ಜಮೀನು ಖರೀದಿಸಿದ್ದಾರೆ. ಅವರ ಚಿಕ್ಕಮ್ಮ ಸಾವಿತ್ರಮ್ಮ 22 ಎಕರೆ ಖರೀದಿಸಿ ದಾನ ನೀಡಿದ್ದು, 56 ಎಕರೆ ಎಚ್‍ಡಿ ಕುಮಾರಸ್ವಾಮಿ ಹೆಸರಿನಲ್ಲಿದೆ. ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಅವರ ತಮ್ಮ ನಂಜುಡ್ಯಯ್ಯ, ತಮ್ಮಣ್ಣನ ಪತ್ನಿ ಹಾಗೂ ಮಕ್ಕಳು 210 ಎಕರೆ ಜಮೀನನ್ನು ಭೂಕಬಳಿಕೆ ಮಾಡಿದ್ದಾರೆ. ವಸ್ತುಸ್ಥಿತಿ ತಿಳಿಯಲು ಗ್ರಾಮಕ್ಕೆ ಹೋಗಿದ್ದೇವು. ಈ ವೇಳೆ ಮೊಟ್ಟೆಯಲ್ಲಿ ಹೊಡೆದು ಅವಾಚ್ಯ ಶಬ್ದಗಳಿಂದ ಎಚ್‍ಡಿಕೆ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಭೂಕಬಳಿಕೆ ವಿಚಾರವಾಗಿ ಇದನ್ನು ಇಷ್ಟಕ್ಕೆ ಬಿಡುವುದಿಲ್ಲ. ಕಾನೂನಾತ್ಮಕ ಹೋರಾಟ ನಡೆಸುವುದಾಗಿ ತಿಳಿಸಿದರು.

    ನಾಚಿಕೆ, ಮಾನ, ಮಾರ್ಯದೆ ಬಿಟ್ಟು ಭೂಕಬಳಿಕೆ ಮಾಡಿದ್ದು ಕರ್ನಾಟಕ ಜನತೆಯ ಕ್ಷಮೆ ಕೇಳಿ ಭೂಮಿ ವಾಪಾಸ್ ನೀಡಲಿ. ಅಲ್ಲದೇ ಈ ವಯಸ್ಸಿನಲ್ಲಾದರೂ ಎಚ್.ಡಿ.ದೇವೇಗೌಡ ಅವರು ವಯಸ್ಸಿಗೆ ತಕ್ಕಂತೆ ನಡೆದುಕೊಳ್ಳಲಿ ಎಂದರು.

    ಪಬ್ಲಿಕ್ ಟಿವಿ ಸಂದರ್ಶನದ ವೇಳೆ ಡಿ.ಕೆ.ಶಿವಕುಮಾರ್ ಅವರು ಸಾರ್ವಜನಿಕ ಜೀವನದಲ್ಲಿ ಇರಲು ಅರ್ಹರಲ್ಲ ಎಂದಿದ್ದೆ. ಅವರಿಗೆ ಒಂದು ಗತಿ ಬಂತು. ಕಾನೂನಿನ ಗಾಲಿಗಳು ಚಲಿಸಿದರೆ ನೂರು ವರ್ಷ ಅವರು ಜೈಲಿನಲ್ಲಿರಬೇಕಾಗುತ್ತದೆ ಎಂದು ಹೇಳಿದರು.

    ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ರಾಜ್ಯದ ಸಿಎಂ ಆಗಿದ್ದವರು. ತಮ್ಮ ಕಾರ್ಯಕರ್ತರಿಗೆ ಬುದ್ಧಿ ಹೇಳಬೇಕು. ತಮ್ಮ ಹೆಸರಿಗೆ ಕಳಂಕ ತರುವ ಕಾರ್ಯಕರ್ತರನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ನಾಚಿಕೆ, ಮರ್ಯಾದೆ ಬಿಟ್ಟು ಭೂಕಬಳಿಕೆ ಮಾಡಿದ್ದಾರೆ. ಮಾನ ಮರ್ಯಾದೆಯಿದ್ದರೆ ಭೂಕಬಳಿಕೆ ಜಾಗವನ್ನು ವಾಪಸ್ ಮಾಡಲಿ ಎಂದರು.

    ಇದೇ ವೇಳೆ ಮಾತನಾಡಿದ ಲಂಚಮುಕ್ತ ಕರ್ನಾಟಕ ವೇದಿಕೆಯ ರವಿಕೃಷ್ಣರೆಡ್ಡಿ ಅವರು, ನಮ್ಮ ಮೇಲೆ ಮೊಟ್ಟೆ ಎಸೆದು ಹಲ್ಲೆ ನಡೆಸಿದ ಘಟನೆ ಎಚ್.ಡಿ.ಕುಮಾರಸ್ವಾಮಿ ಪ್ರೇರಿತವಲ್ಲ. ಆದರೆ ಹಲ್ಲೆ ನಡೆಸಿದವರು ಜೆಡಿಎಸ್ ಕಾರ್ಯಕರ್ತರ ಎಂಬುದು ಸ್ಪಷ್ಟ. ಇಂತಹ ಹುಚ್ಚುನಾಯಿಗಳನ್ನು ಎಚ್‍ಡಿಕೆ ಸಾಕಿಕೊಂಡಿದ್ದಾರೆ ಎಂದು ಹರಿಹಾಯ್ದರು.

  • ಕೆಆರ್‌ಪೇಟೆಯಲ್ಲಿ ಕಾಮಾಟಿಪುರ ಕಿಚ್ಚು – ಡಿ.ಸಿ ತಮ್ಮಣ್ಣ ವಿರುದ್ಧ ಸಿಡಿದೆದ್ದ ಮುಂಬೈ ಜನ

    ಕೆಆರ್‌ಪೇಟೆಯಲ್ಲಿ ಕಾಮಾಟಿಪುರ ಕಿಚ್ಚು – ಡಿ.ಸಿ ತಮ್ಮಣ್ಣ ವಿರುದ್ಧ ಸಿಡಿದೆದ್ದ ಮುಂಬೈ ಜನ

    ಮಂಡ್ಯ: ಕೆ.ಆರ್ ಪೇಟೆ ಚುನಾವಣಾ ಕಾವು ರಂಗೇರುತ್ತಿದೆ. ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದು, ಮೂರು ಪಕ್ಷಗಳು ಸರ್ಕಸ್ ಮಾಡುತ್ತಿವೆ. ಈ ನಡುವೆ ಮೂರು ಪಕ್ಷದ ಅಭ್ಯರ್ಥಿಗಳು ಒಬ್ಬರ ಮೇಲೊಬ್ಬರು ಕೆಸರೆರಚಿಕೊಳ್ಳುತ್ತಿದ್ದಾರೆ. ಪರಸ್ಪರ ಮಾತಿನ ಚಾಟಿ ಬೀಸೋ ಭರದಲ್ಲಿ ರೆಡ್‍ಲೈಟ್ ಏರಿಯಾದ ಪ್ರಸ್ತಾಪ ಕೆಆರ್‌ಪೇಟೆ ಉಪಕಣದಲ್ಲಿ ಕಿಡಿ ಹತ್ತಿಸಿದೆ.

    ಹೌದು. ಕೆಆರ್‍ಪೇಟೆಯ ಕಿಕ್ಕೇರಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾಜಿ ಸಚಿವ ಡಿ.ಸಿ ತಮ್ಮಣ್ಣ ಬಿಜೆಪಿ ಅಭ್ಯರ್ಥಿ ವಿರುದ್ಧ ವಾಗ್ದಾಳಿ ಮಾಡೋ ಭರದಲ್ಲಿ ರೆಡ್‍ಲೈಟ್ ಏರಿಯಾದ ಪ್ರಸ್ತಾಪ ಮಾಡಿದ್ದಾರೆ. ನಾರಾಯಣಗೌಡ್ರನ್ನು ಒಂದು ವೇಳೆ ಗೆಲ್ಲಿಸಿದ್ರೆ, ಕೆಆರ್‌ಪೇಟೆಯನ್ನ ಮುಂಬೈಯ ರೆಡ್‍ಲೈಟ್ ಏರಿಯಾ ಕಾಮಾಟಿಪುರವನ್ನಾಗಿ ಮಾಡುತ್ತಾರೆ ಅಂತ ಕಿಡಿ ಹೊತ್ತಿಸಿದ್ದಾರೆ.

    ಡಿ.ಸಿ ತಮ್ಮಣ್ಣರ ಈ ವಿವಾದಾತ್ಮಕ ಹೇಳಿಕೆಯಿಂದ ಆಕ್ರೋಶಗೊಂಡಿರುವ ಮುಂಬೈನಲ್ಲಿ ವಾಸವಿರುವ ಕೆಆರ್‌ಪೇಟೆ ಜನ, ಇದೀಗ ಉಪಕಣಕ್ಕೆ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ. ಅಲ್ಲದೇ ನಾರಾಯಣಗೌಡರ ಪರ ನಿಂತು ತೊಡೆ ತಟ್ಟೋಕೆ ನಿರ್ಧರಿಸಿದ್ದಾರೆ. ತಮ್ಮಣ್ಣ ಕೆಆರ್‌ಪೇಟೆಯನ್ನ ಕಾಮಾಟಿಪುರಕ್ಕೆ ಹೋಲಿಸಿದ್ದು ಖಂಡನೀಯ. ನಮ್ಮ ಹೆಣ್ಣು ಮಕ್ಕಳು ಇದರಿಂದ ಬೇಸರಗೊಂಡಿದ್ದಾರೆ. ಹೀಗಾಗಿ ತಮ್ಮಣ್ಣ ಹೇಳಿಕೆ ಖಂಡಿಸಿ ಮುಂಬೈನಿಂದ 4-5 ಸಾವಿರ ಜನ ತಮ್ಮ ಸ್ವಂತ ಖರ್ಚಿನಿಂದ ಕೆಆರ್‌ಪೇಟೆಗೆ ಬಂದು ನಾರಾಯಣಗೌಡರ ಪರವಾಗಿ ಮತ ಹಾಕುತ್ತೇವೆ ಎಂದು ಸವಾಲು ಹಾಕಿದ್ದಾರೆ.

    ಒಟ್ಟಾರೆ ಡಿಸಿ ತಮ್ಮಣ್ಣ ಕೆಆರ್‌ಪೇಟೆಯಲ್ಲಿ ಹಚ್ಚಿದ ಕಾಮಾಟಿಪುರದ ಕಿಚ್ಚು ಮುಂಬೈವರೆಗೂ ವ್ಯಾಪಿಸಿದೆ. ಈ ಕಿಚ್ಚು ಎಷ್ಟರ ಮಟ್ಟಿಗೆ ಮತವಾಗಿ ರೂಪುಗೊಳುತ್ತದೆ ಎಂದು ಕಾದುನೋಡಬೇಕಿದೆ.

  • ಹೋರಿಗಳು ಬರ್ತಾವೆ ಹತ್ತಿಸಿಕೊಳ್ಳಿ – ಡಿಸಿ ತಮ್ಮಣ್ಣ

    ಹೋರಿಗಳು ಬರ್ತಾವೆ ಹತ್ತಿಸಿಕೊಳ್ಳಿ – ಡಿಸಿ ತಮ್ಮಣ್ಣ

    ಮಂಡ್ಯ: ಹೋರಿಗಳು ಬರುತ್ತವೆ ಹತ್ತಿಸಿಕೊಳ್ಳಿ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಅವರು ಹೇಳಿಕೆ ನೀಡಿದ್ದಾರೆ.

    ಸಚಿವ ಡಿ.ಸಿ. ತಮ್ಮಣ್ಣ ಅವರು ಮದ್ದೂರು ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದರು. ಈ ವೇಳೆ ಕುರುಬರದೊಡ್ಡಿ ಗ್ರಾಮದಲ್ಲಿ, ನಿಮಗೆಲ್ಲಾ ಮಾಡಿಕೊಡುತ್ತಾರೆ, ಮಾಡಿಸಿಕೊಳ್ಳಿ. ಹೋರಿಗಳು ಬರುತ್ತವೆ ಹತ್ತಿಸಿಕೊಳ್ಳಿ. ನನಗೇನಿಲ್ಲ ನಾನೇನಿದ್ದರೂ ನೇರ. ನಾನೇನು ಗೂಟ ಹೊಡೆದುಕೊಂಡು ಇಲ್ಲೇ ಕೂರಬೇಕಿಲ್ಲ ಎಂದು ಹೇಳಿದ್ದಾರೆ.

    ಇಂದು ಬೆಳಗ್ಗೆ ಮದ್ದೂರು ಗ್ರಾಮಸ್ಥರು ಮದ್ದೂರಮ್ಮನ ಕೆರೆಯಂಗಳದಲ್ಲಿ ನಡೆದ ಕುಡಿಯುವ ನೀರಿನ ಕಾಮಗಾರಿಯ ಶಂಕುಸ್ಥಾಪನೆ ವೇಳೆ ದಲಿತ ಕಾಲೋನಿಗೆ ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರು ಡಿ.ಸಿ ತಮ್ಮಣ್ಣ ಅವರ ಬಳಿ ಕೇಳಿಕೊಂಡಿದ್ದರು.

    ಗ್ರಾಮಸ್ಥರ ಮಾತುಕೇಳಿ ಸಿಟ್ಟಿಗೆದ್ದ ಸಚಿವ ತಮ್ಮಣ್ಣ, ಅಭಿವೃದ್ಧಿಗೆ ನಾವು ಬೇಕು, ಮತ ಹಾಕಲು ವೋಟು ನೀಡಲು ಅವರು ಬೇಕಾ ಎಂದು ತರಾಟೆ ತೆಗೆದುಕೊಂಡಿದ್ದರು. ಅಲ್ಲದೆ ಮಣೆಗಾರಿಕೆ ಮಾಡಲು ಬರುತ್ತಾರೆ, ಅಭಿವೃದ್ದಿ ಕೆಲಸಕ್ಕಾಗಿ ನಮ್ಮನ್ನು ಕೇಳುವುದಕ್ಕೆ ನಾಚಿಕೆ ಆಗಲ್ವಾ ಎಂದು ಮದ್ದೂರು ಕ್ಷೇತ್ರದಲ್ಲಿ ನಿಖಿಲ್‍ಗೆ ಮತ ಹಾಕದ ಜನರ ಮೇಲೆ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದರು.

    ಈ ಹಿಂದೆ ಡಿ.ಸಿ ತಮ್ಮಣ್ಣ ಚುನಾವಣೆ ವೇಳೆಯಲ್ಲಿ ತಮ್ಮ ನಾಲಿಗೆ ಹರಿಯಬಿಟ್ಟು ಎಡವಟ್ಟು ಮಾಡಿಕೊಂಡಿದ್ದರು. ತಮ್ಮಣ್ಣ ಅವರು ಹೆಬ್ಬೆರಳು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಲ್ಲದೆ ಹೋದ ಕಡೆಗಳಲ್ಲಿ ಮತ ಹಾಕದ ಮತದಾರರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಸುಮಲತಾ ಅವರು, ಒಬ್ಬ ಸಚಿವರಾಗಿ ಡಿಸಿ ತಮ್ಮಣ್ಣ ಈ ರೀತಿ ಮಾತಾಡುವುದು ಸರಿಯಲ್ಲ. ಚುನಾವಣೆಯಲ್ಲಿ ಈ ರೀತಿ ಮಾತಾಡಿರುವುದರಿಂದಲೇ ಮತದಾರರು ಪಾಠ ಕಲಿಸಿದ್ದಾರೆ. ನನನ್ನು ಟಾರ್ಗೆಟ್ ಮಾಡಿದರೆ ಸಹಿಸಿಕೊಳ್ಳುತ್ತೇನೆ. ಆದರೆ ಜನರನ್ನ ಟಾರ್ಗೆಟ್ ಮಾಡುವುದು ಸರಿಯಲ್ಲ. ಸಚಿವರಿಗೆ ಜೆಡಿಎಸ್ ಮುಖಂಡರು ಬುದ್ಧಿವಾದ ಹೇಳಬೇಕು ಎಂದು ಕಿಡಿಕಾರಿದರು.

  • ಕೆಲಸ ಮಾಡಲು ಆಗದಿದ್ರೆ ಡಿ.ಸಿ ತಮ್ಮಣ್ಣ ರಾಜೀನಾಮೆ ಕೊಡ್ಲಿ: ಸುಮಲತಾ

    ಕೆಲಸ ಮಾಡಲು ಆಗದಿದ್ರೆ ಡಿ.ಸಿ ತಮ್ಮಣ್ಣ ರಾಜೀನಾಮೆ ಕೊಡ್ಲಿ: ಸುಮಲತಾ

    ಬೆಂಗಳೂರು: ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಜನರ ಮೇಲೆ ಸಚಿವ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದ ವಿಚಾರವಾಗಿ ಸಂಸದೆ ಸುಮಲತಾ ಅವರು ಪ್ರತಿಕ್ರಿಯಿಸಿ, ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಬೇಜಾರಾಗಿದ್ರೆ ರಾಜೀನಾಮೆ ಕೊಡಿ ಎಂದರು. ಬಳಿಕ ಜೆಡಿಎಸ್ ಸೋಲಿಗೆ ಡಿ.ಸಿ ತಮ್ಮಣ್ಣ ಅವರ ಹೇಳಿಯೇ ಕಾರಣ. ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ಕೆಲಸ ಮಾಡಲು ಆಗದಿದ್ದರೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ.

    ಅಷ್ಟೇ ಅಲ್ಲದೆ ತಮ್ಮಣ್ಣ ಅವರು ಹೇಳಿಕೆ ನಿಖಿಲ್ ಹೇಳಿಕೆಗೆ ವಿರುದ್ಧವಾಗಿದೆ. ಅವರ ಪಾರ್ಟಿಯಲ್ಲಿ ಇರೋರು ಅವರಿಗೆ ತಿಳಿಸಿ ಹೇಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

    ಡಿ.ಸಿ ತಮ್ಮಣ್ಣ ಹೇಳಿದ್ದೇನು?
    ಮದ್ದೂರು ಗ್ರಾಮಸ್ಥರು ಮದ್ದೂರಮ್ಮನ ಕೆರೆಯಂಗಳದಲ್ಲಿ ನಡೆದ ಕುಡಿಯುವ ನೀರಿನ ಕಾಮಗಾರಿಯ ಶಂಕುಸ್ಥಾಪನೆ ವೇಳೆ ದಲಿತ ಕಾಲೋನಿಗೆ ಚರಂಡಿ ಮತ್ತು ಸಮರ್ಪಕ ರಸ್ತೆ ನಿರ್ಮಿಸುವಂತೆ ಗ್ರಾಮಸ್ಥರು ಡಿ.ಸಿ ತಮ್ಮಣ್ಣ ಅವರ ಬಳಿ ಕೇಳಿಕೊಂಡಿದ್ದರು.

    ಗ್ರಾಮಸ್ಥರ ಮಾತುಕೇಳಿ ಸಿಟ್ಟಿಗೆದ್ದ ಸಚಿವ ತಮ್ಮಣ್ಣ, ಅಭಿವೃದ್ಧಿಗೆ ನಾವು ಬೇಕು, ಮತ ಹಾಕಲು ವೋಟು ನೀಡಲು ಅವರು ಬೇಕಾ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೆ ಮಣೆಗಾರಿಕೆ ಮಾಡಲು ಬರುತ್ತಾರೆ, ಅಭಿವೃದ್ದಿ ಕೆಲಸಕ್ಕಾಗಿ ನಮ್ಮನ್ನು ಕೇಳುವುದಕ್ಕೆ ನಾಚಿಕೆ ಆಗಲ್ವಾ ಎಂದು ಮದ್ದೂರು ಕ್ಷೇತ್ರದಲ್ಲಿ ನಿಖಿಲ್‍ಗೆ ಮತ ಹಾಕದ ಜನರ ಮೇಲೆ ಡಿ.ಸಿ ತಮ್ಮಣ್ಣ ವಾಗ್ದಾಳಿ ನಡೆಸಿದರು.

    ಈ ಹಿಂದೆ ಡಿ.ಸಿ ತಮ್ಮಣ್ಣ ಚುನಾವಣೆ ವೇಳೆಯಲ್ಲಿ ತಮ್ಮ ನಾಲಿಗೆ ಹರಿಯಬಿಟ್ಟು ಎಡವಟ್ಟು ಮಾಡಿಕೊಂಡಿದ್ದರು. ತಮ್ಮಣ್ಣ ಅವರು ಹೆಬ್ಬೆರಳು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಲ್ಲದೆ ಹೋದ ಕಡೆಗಳಲ್ಲಿ ಮತ ಹಾಕದ ಮತದಾರರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

  • ‘ಡಿ.ಸಿ.ತಮ್ಮಣ್ಣ ಯಾವುದಕ್ಕೂ ರೆಡಿ ಇರು – ನಿನ್ನ ಎದುರಾಳಿ ಅಭಿಷೇಕ್ ಅಂಬರೀಶ್’

    ‘ಡಿ.ಸಿ.ತಮ್ಮಣ್ಣ ಯಾವುದಕ್ಕೂ ರೆಡಿ ಇರು – ನಿನ್ನ ಎದುರಾಳಿ ಅಭಿಷೇಕ್ ಅಂಬರೀಶ್’

    – ಡಿ ಬಾಸ್ ಅಭಿಮಾನಿಗಳಿಂದ ಪೋಸ್ಟ್
    – ತಾಯಿಯ ಬಳಿಕ ಅಭಿಷೇಕ್ ಮದ್ದೂರಿನಲ್ಲಿ ಸ್ಪರ್ಧೆ?

    ಮಂಡ್ಯ: ಡಿ.ಸಿ.ತಮ್ಮಣ್ಣ ಯಾವುದಕ್ಕೂ ರೆಡಿ ಇರು, ಮುಂದೆ ನಿನ್ನ ಎದುರಾಳಿ ಅಭಿಷೇಕ್ ಅಂಬರೀಶ್ ಇರುತ್ತಾರೆ ಎಂದು ನಟ ದರ್ಶನ್ ಅಭಿಮಾನಿಗಳು ಪೋಸ್ಟ್ ಮಾಡಿ ಸವಾಲು ಎಸೆದಿದ್ದಾರೆ.

    ಇದೀಗ ದರ್ಶನ್ ಅಭಿಮಾನಿಗಳ ಪೋಸ್ಟ್ ನಿಂದ ಅಮ್ಮನ ರಾಜಕೀಯ ಎಂಟ್ರಿ ಬಳಿಕ ಅಭಿಷೇಕ್ ಅಂಬರೀಶ್ ರಾಜಕೀಯ ರಂಗ ಪ್ರವೇಶ ಮಾಡಲು ಸಜ್ಜಾಗಿದ್ದಾರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಪೋಸ್ಟ್ ನಲ್ಲಿ ಏನಿದೆ?
    “ಡಿ.ಸಿ.ತಮ್ಮಣ್ಣ ಯಾವುದಕ್ಕೂ ರೆಡಿ ಇರು. ಮುಂದೆ ನಿನ್ನ ಎದುರಾಳಿ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಆಗಿದ್ದಾರೆ. ಮದ್ದೂರು ವಿಧಾನಸಭಾ ಕ್ಷೇತ್ರ, ತಾಕತ್ ಇದ್ದರೆ ಫೇಸ್ ಮಾಡು” ಎಂದು ಫೇಸ್‍ಬುಕ್‍ನಲ್ಲಿ ಬರೆದು ಅಭಿಮಾನಿಗಳು ಪೋಸ್ಟ್ ಮಾಡಿದ್ದಾರೆ.

    ಮದ್ದೂರು ವಿಧಾನಸಭಾ ಕ್ಷೇತ್ರದ ದೊಡ್ಡರಸಿನಕೆರೆ ಗ್ರಾಮ ಅಂಬರೀಶ್ ಅವರ ಹುಟ್ಟೂರಾಗಿದೆ. ಹೀಗಾಗಿ ಮದ್ದೂರು ಕ್ಷೇತ್ರದಲ್ಲಿ ಅಂಬಿ ಕುಟುಂಬಕ್ಕೆ ಸಾವಿರಾರು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲದೇ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮದ್ದೂರು ಕ್ಷೇತ್ರದಲ್ಲಿ ಹೆಚ್ಚು ಲೀಡ್ ಪಡೆಯಲಿದ್ದಾರೆ ಎಂಬ ಲೆಕ್ಕಾಚಾರವು ಇದೆ.

  • ‘ಅಪ್ಪನಿಗೆ ಹುಟ್ಟಿದ್ರೆ ಟೀಕೆ ಮಾಡ್ರೀ’: ಡಿ.ಸಿ.ತಮ್ಮಣ್ಣ

    ‘ಅಪ್ಪನಿಗೆ ಹುಟ್ಟಿದ್ರೆ ಟೀಕೆ ಮಾಡ್ರೀ’: ಡಿ.ಸಿ.ತಮ್ಮಣ್ಣ

    ಮಂಡ್ಯ: ಅಪ್ಪನಿಗೆ ಹುಟ್ಟಿದ್ರೆ ಟೀಕೆ ಮಾಡ್ರೀ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

    ಮದ್ದೂರು ಎಳನೀರು ಮಾರುಕಟ್ಟೆ ಬಳಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತಿದ್ದ ವೇಳೆ ಮಾತನಾಡಿದ ಸಚಿವರು, ಎಳನೀರು ಮಾರುಕಟ್ಟೆ ಒಳಗೆ ಕೆಲವರು ಮಜಾ ಮಾಡಿಕೊಂಡು ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನೀವು ಟೀಕೆ ಮಾಡುವುದನ್ನು ನಾನು ಕೇಳಿದ್ದೇನೆ. ತಾಕತ್ ಇದ್ದರೆ, ಅಪ್ಪನಿಗೆ ಹುಟ್ಟಿದ್ರೆ ಬಂದು ಎದುರಿಗೆ ನಿಂತು ಟೀಕೆ ಮಾಡಿ ಎಂದರು.

    ಎಳನೀರು ಮಾರುಕಟ್ಟೆಯ ಚರಿತ್ರೆ ನನಗೆ ಗೊತ್ತು. ಸಿಎಂ ಕುಮಾರಸ್ವಾಮಿ ಹಾಗೂ ನಾನು ಎಳನೀರು ಮಾರುಕಟ್ಟೆಯ ಅಭಿವೃದ್ಧಿ ಶ್ರಮಿಸಿದ್ದೇವೆ. ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನದ ತಂದು ಸಾಕಷ್ಟು ಕೆಲಸಗಳನ್ನು ಮಾಡಿಸಿದ್ದೇನೆ. ಆದರೆ ಕೆಲವರು ಮಾರುಕಟ್ಟೆಯಲ್ಲಿ ಹಣ ಮಾಡಿಕೊಂಡು ಈಗ ನನ್ನ ವಿರುದ್ಧವೇ ಮಾತನಾಡುತ್ತಿದ್ದಾರೆ. ಅಂತಹವರು ಯಾರಾರು ಇದ್ರೆ ಮುಂದೆ ಬನ್ನಿ ಎಂದು ಸವಾಲು ಹಾಕಿದರು.

    ಪ್ರಚಾರದ ವಾಹನದಲ್ಲಿಯೇ ನಿಂತು ಸಚಿವರು ವಾಗ್ದಾಳಿ ನಡೆಸಿದ್ದರು. ಈ ವೇಳೆ ಕೆಲವರು ಡಿ.ಸಿ.ತಮ್ಮಣ್ಣ ಅವರ ಮನವೊಲಿಸಿ ವಾಹನದಿಂದ ಕೆಳಗೆ ಇಳಿದು ಬರುವಂತೆ ಮನವಿ ಮಾಡಿಕೊಂಡರು. ಎಷ್ಟೇ ಕರೆದರೂ ಸಚಿವರು ಮಾತ್ರ ವಾಗ್ದಾಳಿ ಮುಂದುವರಿಸಿದರು. ಕೆಲ ಕಾರ್ಯಕರ್ತರು ನಿಖಿಲ್ ಕುಮಾರಸ್ವಾಮಿ ಪರ ಘೋಷಣೆ ಕೂಗಿದರು.

    ನಾನು ಮದ್ದೂರು ಕ್ಷೇತ್ರದಲ್ಲಿ ಇರುವವರೆಗೂ ಇಲ್ಲಿನ ಜನರ ಅಭಿವೃದ್ಧಿ ಕೆಲಸ ಮಾಡುತ್ತೇನೆ. ಮುಂದೆ ಬರುವ ಅಭ್ಯರ್ಥಿಗೆ ನಿಮ್ಮ ಕೊಡುಗೆ ಏನು ಅಂತ ನೀವು ಪ್ರಶ್ನಿಸಬೇಕು. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಸಿಎಂ ಕುಮಾರಸ್ವಾಮಿ ಹಾಗೂ ನಾನು ಈ ಕ್ಷೇತ್ರಕ್ಕೆ ಅನೇಕ ಕೊಡುಗೆ ನೀಡಿದ್ದೇವೆ. ಈಗ ಕೆಲವರು ರಾಜಕೀಯ ಆರಂಭಿಸಿದ್ದಾರೆ. ಅವರ ಮಾತಿಗೆ ಕಿವಿ ಕೊಡಬೇಡಿ ಎಂದು ಮತದಾರರಲ್ಲಿ ಸಚಿವರು ಮನವಿ ಮಾಡಿಕೊಂಡರು.

  • ಸುಮಲತಾ ಸಮಾವೇಶಕ್ಕೆ ಹೊರಗಿನಿಂದ ಜನ ಕರೆಸಲಾಗಿದೆ: ಡಿ.ಸಿ ತಮ್ಮಣ್ಣ

    ಸುಮಲತಾ ಸಮಾವೇಶಕ್ಕೆ ಹೊರಗಿನಿಂದ ಜನ ಕರೆಸಲಾಗಿದೆ: ಡಿ.ಸಿ ತಮ್ಮಣ್ಣ

    ಮಂಡ್ಯ: ಸುಮಲತಾ ಸಮಾವೇಶದಲ್ಲಿ ಮಂಡ್ಯ ಜನತೆ ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಹೊರಗಿನ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಹೇಳಿಕೆ ನೀಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಡಿ.ಸಿ ತಮ್ಮಣ್ಣ ಅವರು, “ಸುಮಲತಾ ಅವರ ಸಮಾವೇಶದಲ್ಲಿ ನಮ್ಮ ಅಂಬರೀಶ್ ಅವರ ಅಭಿಮಾನಿಗಳು ಹೋಗಿರುತ್ತಾರೆ. ನನಗೆ ತಿಳಿದ ಮಾಹಿತಿ ಪ್ರಕಾರ ಸುಮಲತಾ ಅವರ ಬೃಹತ್ ಸಮಾವೇಶಕ್ಕೆ ಬಂದವರ ಪೈಕಿ ಮಂಡ್ಯ ಜಿಲ್ಲೆಯವರು ಕಡಿಮೆ. ಹೆಚ್ಚಾಗಿ ಹೊರಗಿನಿಂದ ಜನ ಕರೆಸಲಾಗಿದೆ. ಮೈಸೂರು, ಚನ್ನಪಟ್ಟಣ, ರಾಮನಗರದಿಂದ ಜನ ಕರೆಸಲಾಗಿದೆ ಎನ್ನುವ ವಿಷಯ ಗೊತ್ತಾಯಿತು” ಎಂದು ಹೇಳಿದರು.

    ಸಮಾವೇಶದಲ್ಲಿ ನಮ್ಮವರು ಹಾಗೂ ಅವರ ಕಡೆಯವರು ಬಂದಿರುತ್ತಾರೆ. ಹಾಗಂತ ಅಲ್ಲಿ ಇದ್ದ ಜನರೆಲ್ಲಾ ಸುಮಲತಾ ಅವರಿಗೆ ವೋಟ್ ಹಾಕುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವ ಕಾರಣ ಕೆಲ ಕಾಂಗ್ರೆಸ್ ನಮ್ಮ ಜೊತೆ ಬರಲು ಒಪ್ಪಿದ್ದಾರೆ. ಅಲ್ಲದೆ ನಮಗೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಈಗಾಗಲೇ ಸುಮಲತಾ ಜೊತೆ ಗುರುತಿಸಿಕೊಂಡ ಕಾಂಗ್ರೆಸ್ ಮುಖಂಡರ ಜೊತೆಗೆ ಮಾತುಕತೆ ಮಾಡಲಾಗಿದೆ ಎಂದು ತಿಳಿಸಿದರು.

    ಸುಮಲತಾ ಅವರಿಗೂ ಜನ ಇರಬಹುದು. ಆದರೆ ಅವರಿಗಿಂತ ಹತ್ತು ಪಟ್ಟು ಅಭಿಮಾನಿಗಳು ಕುಮಾರಸ್ವಾಮಿ ಅವರಿಗೆ ಇದ್ದಾರೆ. ನಾವ್ಯಾಕೆ ವಿರೋಧ ಮಾಡಬೇಕು? ದರ್ಶನ್ ಹಾಗೂ ಯಶ್ ಅವರನ್ನು ನಾವು ವಿರೋಧ ಮಾಡಲ್ಲ. ನಾವು ಬೇರೆಯವರ ಬಗ್ಗೆ ಮಾತನಾಡಬಾರದು ಎಂದು ಡಿ.ಸಿ ತಮ್ಮಣ್ಣ ಹೇಳಿದರು.

    ಬುಧವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಸುಮಲತಾ ಅವರು ಭರ್ಜರಿ ರೋಡ್ ಶೋ ಮೂಲಕ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಆಯೋಜನೆಗೊಂಡಿದ್ದ ಸಮಾವೇಶಕ್ಕೆ ಆಗಮಿಸಿದ್ದರು. ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಿ ಸುಮಲತಾ ಅವರನ್ನು ಬೆಂಬಲಿಸಿದ್ದರು.

  • ಸುಮಲತಾರನ್ನು ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು: ಸಚಿವ ಡಿ.ಸಿ.ತಮ್ಮಣ್ಣ

    ಸುಮಲತಾರನ್ನು ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು: ಸಚಿವ ಡಿ.ಸಿ.ತಮ್ಮಣ್ಣ

    ಮಂಡ್ಯ: ಸುಮಲತಾರನ್ನು ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ಇತ್ತು ಎಂದು ಮಂಡ್ಯದ ಮದ್ದೂರಿನಲ್ಲಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿಕೆ ನೀಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಅವರು, ಸುಮಲತಾರನ್ನೇ ಜೆಡಿಎಸ್ ಅಭ್ಯರ್ಥಿ ಮಾಡುವ ಆಸೆ ನನಗಿತ್ತು. ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡಿಸುವ ಯತ್ನ ಮಾಡಿದ್ದೆ. ಆದರೆ ಸಂಬಂಧಿ ಮಧು ಮೂಲಕ ಮಾಡಿದ ಪ್ರಯತ್ನ ವಿಫಲವಾಯ್ತು ಎಂದು ಹೇಳಿದ್ದಾರೆ.

    ಮಧು ಎಂಬವರು ಸಚಿವ ತಮ್ಮಣ್ಣ ಮತ್ತು ಅಂಬಿ ಕುಟುಂಬದ ಸಂಬಂಧಿ. ಸಂಧಾನಕ್ಕೆ ನಾನು, ನನ್ನ ಮಗ ಸಕಲ ಪ್ರಯತ್ನ ಮಾಡಿದ್ದೇವು. ಸಂಧಾನಕ್ಕೆ ಸುಮಲತಾ ಅವರೇ ಒಪ್ಪಲಿಲ್ಲ. ಎಚ್.ಡಿ ಕುಮಾರಸ್ವಾಮಿ ಹಾಗೂ ಸುಮಲತಾ ನಡುಡುವೆ ಏನು ನಡೆದಿದೆಯೋ ನನಗೆ ಗೊತ್ತಿಲ್ಲ. ಹೀಗಾಗಿ ಕುಮಾರಸ್ವಾಮಿ ಮೇಲೆ ಒತ್ತಡ ಹೇರಲಿಲ್ಲ. ಸುಮಲತಾ ಅವರು ಕುಮಾರಸ್ವಾಮಿಯನ್ನು ಭೇಟಿಯಾಗಿ ನಾನೇ ಅಭ್ಯರ್ಥಿ ಆಗ್ತೀನಿ ಟಿಕೆಟ್ ಕೊಡಿ ಎಂದು ಸುಮಲತಾ ಕೇಳಬೇಕಿತ್ತು. ಆದರೆ ಭೇಟಿಯಾಗೋಕೆ ಅವರೇ ಒಪ್ಪಲಿಲ್ಲ ಎಂದು ಸಾರಿಗೆ ಸಚಿವ ಡಿ.ಸಿ ತಮ್ಮಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಚಿವರು, ಅಂಬರೀಶ್ ಅವರ ಅಣ್ಣನ ಮಗ ಮಧು ಮೂಲಕ ನಾನು ಹಾಗೂ ನನ್ನ ಮಗ ಸುಮಲತಾ ಬಳಿ ಮಾತನಾಡಿದ್ದೇನೆ. ಸುಮಲತಾ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾಗಲೇ ನಾವು ಕೇಳಿದ್ದೇವೆ. ಅಂಬರೀಶ್ ಹಾಗೂ ಕುಮಾರಸ್ವಾಮಿ ಇಬ್ಬರು ಒಳ್ಳೆಯ ಸ್ನೇಹಿತರು. ಇಬ್ಬರ ನಡುವೆ ಒಳ್ಳೆಯ ಸಂಬಂಧ ಬೆಳೆಯಲಿ ಎಂದು ಇಬ್ಬರು ಕುಳಿತು ಸ್ಪರ್ಧೆ ಬಗ್ಗೆ ಮಾತನಾಡಲಿ ಎಂದು ಈ ರೀತಿ ಮಾಡಿದ್ದೆ ಎಂದರು.

    ಸುಮಲತಾ ಅವರು ನಮ್ಮ ಮನವಿಯನ್ನು ಏಕೆ ತಿರಸ್ಕರಿಸಿದರು ಎಂಬುವುದು ಗೊತ್ತಿಲ್ಲ. ಅವರು ಈ ವಿಷಯದ ಬಗ್ಗೆ ಒಲವು ತೋರಿಸದ ಕಾರಣ ಒತ್ತಾಯಿಸಲಿಲ್ಲ. ನಾನು ಸುಮಲತಾ ಅವರ ಜೊತೆ ನೇರವಾಗಿ ಮಾತನಾಡಿಲ್ಲ. ಮಧು ಮೂಲಕ ನಾವು ಈ ವಿಷಯದ ಬಗ್ಗೆ ಮಾತನಾಡಿದ್ದೇವೆ. ದೇವೇಗೌಡರು ಹಾಗೂ ಸುಮಲತಾ ಅವರು ನಮಗೆ ಸಂಬಂಧಿಕರೇ. ಸುಮಲತಾ ಅವರು ಈ ಬಗ್ಗೆ ಒಲವು ತೋರಿಸಿದ್ದರೆ, ನಾವು ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹಾಕುತ್ತಿದ್ದೇವು ಎಂದು ತಮ್ಮಣ್ಣ ಸ್ಪಷ್ಟಪಡಿಸಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಿವೃತ್ತಿ ಹೊಂದುವ 3 ಗಂಟೆ ಮೊದ್ಲೇ ನೀಡಿದ್ರು ಸಸ್ಪೆಂಡ್ ಆರ್ಡರ್..!

    ನಿವೃತ್ತಿ ಹೊಂದುವ 3 ಗಂಟೆ ಮೊದ್ಲೇ ನೀಡಿದ್ರು ಸಸ್ಪೆಂಡ್ ಆರ್ಡರ್..!

    – ಚೀಫ್ ಮೆಕ್ಯಾನಿಕಲ್ ಎಂಜಿನಿಯರ್ ಕಕ್ಕಾಬಿಕ್ಕಿ

    ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಮೆಕ್ಯಾನಿಕಲ್ ಎಂಜಿನಿಯರೊಬ್ಬರಿಗೆ ನಿವೃತ್ತಿ ಹೊಂದುವ ಕೇವಲ 3 ಗಂಟೆ ಮೊದಲು ಬಿಎಂಟಿಸಿ ಸಸ್ಪೆಂಡ್ ಆರ್ಡರ್ ನೀಡಿದೆ.

    ಬಿಎಂಟಿಸಿಯಲ್ಲಿ ಚೀಫ್ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಗಂಗಣ್ಣಗೌಡರು ಸಸ್ಪೆಂಡ್ ಆರ್ಡರ್ ಪಡೆದು ಕಂಗಾಲಾಗಿದ್ದಾರೆ. ರಾಜ್ಯ ಸಾರಿಗೆ ಇಲಾಖೆಯಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಗಂಗಣ್ಣ ಅವರು ಎಷ್ಟೋ ಬಸ್‍ಗಳಿಗೆ ಮರು ಜೀವ ತುಂಬಿದ್ದರು. ಆದ್ರೆ ಬಿಎಂಟಿಸಿಯಲ್ಲಿ ಚೀಫ್ ಮೆಕ್ಯಾನಿಕಲ್ ಎಂಜಿನಿಯರ್ ಆಗಿ ನಿವೃತ್ತಿ ಹೊಂದಬೇಕಾಗಿದ್ದ ದಿನವೇ ಬಿಎಂಟಿಸಿ ಗಂಗಣ್ಣ ಅವರಿಗೆ ಸಸ್ಪೆಂಡ್ ಆರ್ಡರ್ ನೀಡಿ ಶಾಕ್ ಕೊಟ್ಟಿದೆ.

    34 ವರ್ಷಗಳ ಕಾಲ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೆ ನಿಸ್ವಾರ್ಥ ಸೇವೆ ಮಾಡಿ ನೆಮ್ಮದಿಯ ನಿವೃತ್ತಿ ಜೀವನ ಮಾಡಬೇಕಾಗಿದ್ದ ಗಂಗಣ್ಣ ಅವರು ಸೇವೆಯ ಕೊನೆಯ ದಿನ ಅಮಾನತುಗೊಂಡು ಚಿಂತೆಯಲ್ಲಿ ಕುಳಿತಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಬಿಎಂಟಿಸಿಯಲ್ಲಿ ಚೀಫ್ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಗಂಗಣ್ಣ, ತಮ್ಮ ಅವಧಿಯಲ್ಲಿ ಬಸ್ ಬ್ರೇಕ್ ಡೌನ್ ಆಗಿ ನಿಲ್ಲೋದನ್ನ ಅತ್ಯಂತ ಕಡಿಮೆ ಮಟ್ಟಕ್ಕೆ ತಂದಿದ್ದರು. ಈ ಹಿಂದೆ ವರ್ಷಕ್ಕೆ 1500 ರಿಂದ 1800 ಬಸ್‍ಗಳು ಆನ್ ರೋಡ್ ಬ್ರೇಕ್ ಡೌನ್ ಆಗಿ ನಿಲ್ಲುತ್ತಿತ್ತು. ಆದ್ರೆ ಗಂಗಣ್ಣ ಅವರು ಚೀಫ್ ಎಂಜಿನಿಯರ್ ಆದ ಮೇಲೆ ವರ್ಷಕ್ಕೆ 1500 ಆನ್ ರೋಡ್ ಬ್ರೇಕ್ ಡೌನ್ ಪ್ರಕರಣಗಳಿಂದ 300ಕ್ಕೆ ತಂದಿದ್ದರು. ಆದ್ರೆ ಇವರ ಅವಧಿಯಲ್ಲಿ ಬಸ್‍ಗಳು ಹೆಚ್ಚು ಕಾಲ ಶೇಡ್ ನಲ್ಲಿ ನಿಂತಿದೆ ಎಂದು ಆರೋಪಿಸಿ ನಿವೃತ್ತಿಗೊಳ್ಳೋ ಮೂರು ಗಂಟೆ ಮುಂಚೆ ಬಿಎಂಟಿಸಿ ಎಂಡಿ ಗಂಗಣ್ಣ ಅವರನ್ನು ಅಮಾನತು ಮಾಡಿದ್ದಾರೆ.

    ಈ ಬಗ್ಗೆ ಮಾತಾನಾಡಿದ ಎಐಟಿಯುಸಿ ಅಧ್ಯಕ್ಷ ಅನಂತಸುಬ್ಬ ರಾವ್, ಸಾರಿಗೆ ಇಲಾಖೆಗೆ ಮಂತ್ರಿಯಾಗಿ ಡಿ.ಸಿ ತಮ್ಮಣ್ಣ ಬಂದಾಗಿನಿಂದ ಇಂತಹ ಘಟನೆಗಳು ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಗಂಗಣ್ಣಗೌಡ ಒಬ್ಬ ದಕ್ಷ ಅಧಿಕಾರಿ. ಮಂತ್ರಿಗಳು ಹಣದಾಸೆಗೆ ಅವರು ಹೇಳಿದಂತೆ ಕೆಲಸ ಮಾಡಲಿಲ್ಲ ಎಂದು ಗಂಗಣ್ಣಗೌಡ ಅವರನ್ನು ಅಮಾನತು ಮಾಡಿದ್ದಾರೆ. ಹಾಗೆಯೇ ದಕ್ಷ ಅಧಿಕಾರಿಗಳಿಗೆ ಒಂದು ಸಂದೇಶ ರವಾನಿಸಿದ್ದಾರೆ. ತಮ್ಮ ವಿರುದ್ಧವಾಗಿ ಕೆಲಸ ಮಾಡಿದರೆ ಇದೇ ಗತಿ ಎಂದು ತೋರಿಸಲು ಮಂತ್ರಿಗಳು ಮಾಡಿರೋ ಕುತಂತ್ರವಿದು, ಗಂಗಣ್ಣಗೌಡರನ್ನ ಬಲಿಪಶು ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv