Tag: ಡಾ.ಕೆ.ಶ್ರೀನಿವಾಸಮೂರ್ತಿ

  • ಜೆಡಿಎಸ್ ಪಕ್ಷದಲ್ಲಿ ತರಬೇತಿ ಪಡೆದು ಪಕ್ಷಾಂತರ – ಶ್ರೀನಿವಾಸಮೂರ್ತಿ ಬೇಸರ

    ಜೆಡಿಎಸ್ ಪಕ್ಷದಲ್ಲಿ ತರಬೇತಿ ಪಡೆದು ಪಕ್ಷಾಂತರ – ಶ್ರೀನಿವಾಸಮೂರ್ತಿ ಬೇಸರ

    ನೆಲಮಂಗಲ: ನಮ್ಮ ಜೆಡಿಎಸ್ ಪಕ್ಷದಲ್ಲೇ ತರಬೇತಿ ಹೊಂದಿ ಬೇರೆ ಪಕ್ಷಕ್ಕೆ ಆಡಳಿತದ ಆಸೆಗೆ ಪಕ್ಷಾಂತರವಾಗುವುದು ಸರಿಯಲ್ಲ ಎಂದು ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಉಪಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿ ಬೇಸರ ವ್ಯಕ್ತಪಡಿಸಿದರು.

    ನೆಲಮಂಗಲ ಗ್ರಾಮಾಂತರ ಭಾಗದ ಗಡಿ ಗ್ರಾಮವಾದ ಬರಗೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುದಾನದಡಿಯಲ್ಲಿ 50 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವೇಳೆ ಪಕ್ಷಾಂತರ ಮಾಡುವವರ ಬಗ್ಗೆ ನೆನೆದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಿಂದುಸ್ತಾನ್ ಆರ್ಟ್ ಅಂಡ್ ಕ್ರಾಫ್ಟ್ ಮೇಳಕ್ಕೆ ನ.12 ರಿಂದ ಚಾಲನೆ

    ಅಧಿಕಾರದ ಲಾಲಸೆಗೆ ಯಾರು ಬಲಿಯಾಗಬಾರದು. ಮುಂದಿನ ದಿನದಲ್ಲಿ ಜೆಡಿಎಸ್ ಪಕ್ಷ ಬಲಾಢ್ಯವಾಗಲಿದೆ. ಇನ್ನೂ 2 ಕೋಟಿ 55 ಲಕ್ಷ ವೆಚ್ಚದಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆಯಾಗುತ್ತಿದ್ದು, ಇದಕ್ಕೆ ಅಂದಿನ ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಸಹಕಾರಿಯಾಗಿದ್ದಾರೆ ಎಂದು ನೆನಪಿಕೊಂಡರು.

    ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ಆರ್.ಡಿ.ಪಿ.ಆರ್ ಅಡಿ ಬಿಡುಗಡೆಯಾಗಿ ವಾಪಸ್ಸು ಆಗಿದ್ದ ಹಣ ಇದೀಗ ಮತ್ತೆ ಬಿಡುಗಡೆಯಾಗಿ, ಕಾಮಗಾರಿ ಪ್ರಾರಂಭವಾಗಿದೆ. ಗಡಿ ಪಂಚಾಯತಿಗಳಾದ ಮರಳಕುಂಟೆ, ಹಸಿರುವಳ್ಳಿ ಗ್ರಾಮಗಳಿಗೆ ಸಾಕಷ್ಟು ಅನುದಾನ ನೀಡಿದ್ದೇವೆ. ಹಸಿರುವಳ್ಳಿ ಪಂಚಾಯತಿಗೆ 1.50 ಕೋಟಿ ಅನುದಾನ ನೀಡಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ, ಸರ್ಕಾರದ ಮೂಲಭೂತ ಸೌಲಭ್ಯಗಳನ್ನು ಧನಾತ್ಮಕವಾಗಿ ಬಳಸಿಕೊಳ್ಳಿ ಎಂದು ಜನತೆಗೆ ಕರೆ ನೀಡಿದರು. ಇದನ್ನೂ ಓದಿ: ಕಾರಿನಲ್ಲಿ ಕೈ ಸನ್ನೆ ಮಾಡಿ ಜೀವ ಉಳಿಸಿಕೊಂಡ ಬಾಲಕಿ

    ಈ ಸಂದರ್ಭದಲ್ಲಿ ಮರಳಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಧನಲಕ್ಷ್ಮೀ ಶೇಖರ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಗುರುಪ್ರಕಾಶ್, ಮುಖಂಡ ಮಹಿಮಣ್ಣ, ಮಾಜಿ.ಗ್ರಾ.ಪಂ.ಅಧ್ಯಕ್ಷ ಅಶ್ವಥ್ ರಾಜು, ಬರಗೂರು ಮಾರುತಿ, ಗ್ರಾ.ಪಂ.ಸದಸ್ಯರಾದ ವೈ.ಟಿ.ಇಂದ್ರಕುಮಾರ್, ಬೆಣಚನಹಳ್ಳಿ ರಾಜಣ್ಣ, ಶೋಭಾ ಮಂಜುನಾಥ್, ದಾಸೇನಹಳ್ಳಿ ಮೂರ್ತಯ್ಯ, ವಿಜಯಕುಮಾರಿ ಇನ್ನೀತರರಿದ್ದರು.

  • ಕ್ಷೇತ್ರದ ಅನುದಾನಕ್ಕೆ ಮುಖ್ಯಮಂತ್ರಿಗಳ ಕಾಲು ಹಿಡಿಯಬೇಕು: ಜೆಡಿಎಸ್ ಶಾಸಕ

    ಕ್ಷೇತ್ರದ ಅನುದಾನಕ್ಕೆ ಮುಖ್ಯಮಂತ್ರಿಗಳ ಕಾಲು ಹಿಡಿಯಬೇಕು: ಜೆಡಿಎಸ್ ಶಾಸಕ

    ಬೆಂಗಳೂರು: ಜೆಡಿಎಸ್ ಶಾಸಕರಿಗೆ ಅನುದಾನ ಬಿಡುಗಡೆ ಮಾಡಬೇಕಾದರೆ ಯಡಿಯೂರಪ್ಪನವರ ಕಾಲು ಹಿಡಿಯಬೇಕೇ ಎಂಬ ಪ್ರಶ್ನೆಯನ್ನು ಜೆಡಿಎಸ್ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಅವರು ಹಿರಿಯ ನಟಿ ಡಾ.ಲೀಲಾವತಿ ಮುಂದೆ ನಗುತ್ತಲೇ ನೋವು ತೋಡಿಕೊಂಡಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಚೌಡಸಂದ್ರ ಹಾಗೂ ಬಿದನಪಾಳ್ಯ ನಡುವಿನ ಸೇತುವೆ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ವೇಳೆ ಈ ಪ್ರಸಂಗ ನಡೆದಿದೆ.

    ಈ ಬಗ್ಗೆ ಮಾತನಾಡಿದ ಶಾಸಕ ಶ್ರೀನಿವಾಸ್, ಈಗಾಗಲೇ ಸಾಕಷ್ಟು ಕಾಮಗಾರಿಯ ಹಣವನ್ನು ವಾಪಸ್ ತೆಗೆದುಕೊಂಡಿದ್ದರು. ನಾನು ಹೋಗಿ ಕಾಲು ಹಿಡಿದುಕೊಂಡೆ, ಇಲ್ಲಾಂದ್ರೆ ಒದ್ದು ಬಿಡುವಂತ ಜನ ಅವರು. ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿವೆ. ಜನರು ನಮ್ಮನ್ನು ಪ್ರಶ್ನೆ ಮಾಡುವ ಪರಿಸ್ಥಿತಿ ಎದುರಾಗಿದೆ. ಹಿಂದಿನ ಸರ್ಕಾರದಲ್ಲಿ ಬಿಡುಗಡೆಯಾದ ಎಲ್ಲ ಕಾಮಗಾರಿಯ ಹಣವನ್ನು ಈಗಾಗಲೇ ವಾಪಸ್ ಪಡೆದಿದ್ದು ಸರಿಯಲ್ಲ. ಕೂಡಲೇ ಶಾಸಕರ ಅನುದಾನವನ್ನು ತಾರತಮ್ಯ ಮಾಡದೇ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಗಮನ ಹರಿಸಬೇಕು ಎಂದು ಮನವಿ ಮಾಡಿದರು.

    ಇದೇ ವೇಳೆ ಹಿರಿಯ ನಟಿ ಡಾ. ಲೀಲಾವತಿ ಮಾತನಾಡಿ, ನಮ್ಮ ಹಳ್ಳಿ ಜನರ ರಕ್ಷಣೆ ಹಾಗೂ ಅಭಿವೃದ್ಧಿಯ ನಿಟ್ಟಿನಲ್ಲಿ ಈ ಕಾಮಗಾರಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದು ಇಂದಿಗೆ ಸಾರ್ಥಕವಾಗಿದೆ ಎಂದರು. ಈ ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ ಶ್ರೀನಿವಾಸ ಮೂರ್ತಿ, ಡಾ.ಲೀಲಾವತಿ, ನಟ ವಿನೋದ್ ರಾಜ್, ಹೇಮಂತ್ ಕುಮಾರ್, ಸಂಪತ್ ಕುಮಾರ್, ಸ್ಥಾಯಿ ಸಮಿತಿಯ ಅಧ್ಯಕ್ಷ ಡಾ. ರಂಗನಾಥ್, ಮಾಜಿ ಸೈನಿಕ ಮೂರ್ತಿ, ವೆಂಕಟೇಶ, ಮತ್ತಿತರ ಮುಖಂಡರು ಹಾಜರಿದ್ದರು.

  • ಸ್ಟೆತೋಸ್ಕೋಪ್ ಹಿಡಿದು ಶಾಸಕ ಶ್ರೀನಿವಾಸಮೂರ್ತಿಯಿಂದ ರೋಗಿಗಳ ಪರೀಕ್ಷೆ

    ಸ್ಟೆತೋಸ್ಕೋಪ್ ಹಿಡಿದು ಶಾಸಕ ಶ್ರೀನಿವಾಸಮೂರ್ತಿಯಿಂದ ರೋಗಿಗಳ ಪರೀಕ್ಷೆ

    ಬೆಂಗಳೂರು: ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟ ಜೆಡಿಎಸ್ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಅವರು ಸ್ವತಃ ತಾವೇ ಸ್ಟೆತೋಸ್ಕೋಪ್ ಹಿಡಿದು ರೋಗಿಗಳ ಪರೀಕ್ಷೆ ಮಾಡಿದ್ದಾರೆ.

    ಇಂದು ಶ್ರೀನಿವಾಸಮೂರ್ತಿ ಅವರು ನೆಲಮಂಗಲ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಶಾಸಕರಾಗಿ ಆಯ್ಕೆ ಆಗುವ ಮೊದಲು ಈ ಆಸ್ಪತ್ರೆಯಲ್ಲಿ ಶ್ರೀನಿವಾಸಮೂರ್ತಿ ಅವರು ವೈದ್ಯರಾಗಿ ಕಾರ್ಯನಿರ್ವಹಿಸಿದ್ದರು. ಆದ್ದರಿಂದ ಆಸ್ಪತ್ರೆ ಸ್ಥಿತಿ ಹೇಗಿದೆ? ವೈದ್ಯರು, ಸಿಬ್ಬಂದಿ ಸರಿಯಾಗಿ ಕೆಲಸ ಮಾಡುತ್ತಿದ್ದಾರಾ? ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ ನೀಡಲಾಗುತ್ತಿದೆಯಾ ಎಂದು ಪರಿಶೀಲಿಸಲು ಶಾಸಕರು ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟಿದ್ದರು.

    ಈ ವೇಳೆ ವೈದ್ಯರು ಆಸ್ಪತ್ರೆಯಲ್ಲಿ ಇಲ್ಲದ್ದನ್ನು ಕಂಡು ಶಾಸಕರು ಕೆಂಡಾಮಂಡಲರಾಗಿದ್ದಾರೆ. ಸಮಯವಾಗಿದ್ದರೂ ಕೆಲಸಕ್ಕೆ ಬಾರದ ಸಿಬ್ಬಂದಿ ವಿರುದ್ಧ ಸಿಡಿದಿದ್ದಾರೆ. ಅಲ್ಲದೆ ವಾರ್ಡ್‍ಗಳಿಗೆ ತೆರಳಿ ರೋಗಿಗಳ ಆರೋಗ್ಯ ವಿಚಾರಿಸಿದ್ದಾರೆ, ಅವರ ಸಮಸ್ಯೆ ಆಲಿಸಿದ್ದಾರೆ. ಜೊತೆಗೆ ಸ್ವತಃ ತಾವೇ ಸ್ಟೆತೋಸ್ಕೋಪ್ ಹಿಡಿದು ರೋಗಿಗಳ ಪರೀಕ್ಷೆ ಕೂಡ ಮಾಡಿದ್ದು, ಶಾಸಕರ ಈ ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.