Tag: ಡಾಂಬರೀಕರಣ

  • ಧೋ ಎಂದು ಸುರಿಯುತ್ತಿರುವ ಮಳೆಯಲ್ಲೇ ಡಾಂಬರೀಕರಣ – 4 ಎಂಜಿನಿಯರ್‌ಗಳು ಸಸ್ಪೆಂಡ್

    ಧೋ ಎಂದು ಸುರಿಯುತ್ತಿರುವ ಮಳೆಯಲ್ಲೇ ಡಾಂಬರೀಕರಣ – 4 ಎಂಜಿನಿಯರ್‌ಗಳು ಸಸ್ಪೆಂಡ್

    ಚಂಡೀಗಢ: ಜೋರಾಗಿ ಸುರಿಯುತ್ತಿರುವ ಮಳೆಯ ನಡುವೆಯೇ ರಸ್ತೆಯಲ್ಲಿ ಮರು ಡಾಂಬರೀಕರಣ ನಡೆದಿದೆ. ಕಾರ್ಮಿಕರು ರಸ್ತೆಯಲ್ಲಿ ಡಾಂಬರ್‌ಅನ್ನು ಸುರಿಯುತ್ತಲೇ ಅದು ಮಳೆ ನೀರಿನೊಂದಿಗೆ ಕಳಚಿಕೊಂಡಿದೆ. ಇಂತಹ ಎಡವಟ್ಟಿನ ಕಾಮಗಾರಿಯನ್ನು ನಡೆಸಿರುವ ಎಂಜಿನಿಯರುಗಳನ್ನು ಪಂಜಾಬ್ ಸರ್ಕಾರ ಅಮಾನತು ಮಾಡಿದೆ.

    ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯಲ್ಲಿ ಜೋರಾಗಿ ಮಳೆ ಸುರಿಯುತ್ತಿದ್ದ ಸಂದರ್ಭವೇ ರಸ್ತೆಗೆ ತೇಪೆ ಹಾಕಿದ್ದಾರೆ. ಇದರ ವೀಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪಂಜಾಬ್‌ನ ಲೋಕೋಪಯೋಗಿ ಕಟ್ಟಡ ಹಾಗೂ ರಸ್ತೆಗಳ ಇಲಾಖೆ ನಾಲ್ವರು ಎಂಜಿನಿಯರುಗಳನ್ನು ಅಮಾನತುಗೊಳಿಸಿದೆ. ಇದನ್ನೂ ಓದಿ: ನೀನು ಶಿಕ್ಷಕ ಅಲ್ಲ, ರಾಜಕಾರಣಿಯಂತೆ ಕಾಣುತ್ತೀಯ: ಕುರ್ತಾ, ಪೈಜಾಮಾ ಧರಿಸಿದ್ದಕ್ಕೆ ಮುಖ್ಯೋಪಾಧ್ಯಾನಿಗೆ ಡಿಎಂ ನಿಂದನೆ

    ಹೋಶಿಯಾರ್‌ಪುರದ ಚಬ್ಬೇವಾಲ್ ಕ್ಷೇತ್ರದ ಮಹಿಲ್‌ಪುರ ಬ್ಲಾಕ್‌ನ ನಂಗಲ್ ಖಿಲಾಡಿಯನ್ ಹಾಗೂ ಶೆರ್ಪುರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಳೆಯ ನಡುವೆ ಕಾರ್ಮಿಕರು ರಸ್ತೆಗೆ ಡಾಂಬರು ಎರಚುವುದು ವೀಡಿಯೋದಲ್ಲಿ ಕಂಡುಬಂದಿದೆ. ಈ ಅವೈಜ್ಞಾನಿಕ ಕಾಮಗಾರಿಗೆ ಉಪವಿಭಾಗದ ಎಂಜಿನಿಯರ್ ತಾರ್ಸೆಮ್ ಸಿಂಗ್, ಜೂನಿಯರ್ ಎಂಜಿನಿಯರ್ ವಿಪನ್ ಕುಮಾರ್, ಪ್ರವೀಣ್ ಕುಮಾರ್ ಹಾಗೂ ಜಸ್ಬೀರ್ ಸಿಂಗ್ ಅಮಾನತುಗೊಂಡಿದ್ದಾರೆ. ಇದನ್ನೂ ಓದಿ: ಶೋಭಾ ಕರಂದ್ಲಾಜೆ ನೋಡಲು ನೆರೆ ನೀರಿನಲ್ಲಿ ಈಜಿ ಬಂದ ಜನ

    ಈ ಕಾಮಗಾರಿಯ ವೀಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿ ಕಾರ್ಮಿಕನೊಬ್ಬನಲ್ಲಿ ರಸ್ತೆ ಬಾಳಿಕೆ ಬರುತ್ತಾ ಎಂದು ಪ್ರಶ್ನಿಸಿದ್ದಾನೆ. ಆದರೂ ಆತ ಹೌದು ಎಂದು ಉತ್ತರಿಸಿದ್ದಾನೆ. ಬಳಿಕ ಈ ವೀಡಿಯೋವನ್ನು ಗಮನಿಸಿದ ಎಎಪಿ ಕಾರ್ಯಕರ್ತ ಗುರ್ವಿಂದರ್ ಸಿಂಗ್ ಸಿಎಂ ಭಗವಂತ್ ಮಾನ್ ಅವರ ಗಮನಕ್ಕೂ ತಂದಿದ್ದಾರೆ. ಇದರ ಬೆನ್ನಲ್ಲೇ ಲೋಕೋಪಯೋಗಿ ಇಲಾಖೆ ಪಂಜಾಬ್‌ನ ಪ್ರಧಾನ ಕಾರ್ಯದರ್ಶಿ ಅನುರಾಗ್ ವರ್ಮಾ 4 ಎಂಜಿನಿಯರುಗಳನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಿಎಂ ಯಡಿಯೂರಪ್ಪ ಮನೆ ರೋಡ್ ಫುಲ್ ಲಕಲಕ

    ಸಿಎಂ ಯಡಿಯೂರಪ್ಪ ಮನೆ ರೋಡ್ ಫುಲ್ ಲಕಲಕ

    ಬೆಂಗಳೂರು: ಸಿಲಿಕಾನ್ ಸಿಟಿಯ ಅದೆಷ್ಟೋ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ಎಷ್ಟೇ ಹಳ್ಳ ಬಿದ್ದರೂ ಅಧಿಕಾರಿಗಳು ಮಾತ್ರ ದುರಸ್ಥಿ ಕಾರ್ಯಕ್ಕೆ ಮುಂದಾಗಲ್ಲ. ಆದ್ರೆ ರಾಜ್ಯದ ದೊರೆ ಸಿಎಂ ಯಡಿಯೂರಪ್ಪರ ಡಾಲರ್ಡ್ ಕಾಲೋನಿ ನಿವಾದ ರಸ್ತೆ ಮಾತ್ರ ಅದೆಂತ ಪುಣ್ಯ ಮಾಡಿತ್ತೋ ಗೊತ್ತಿಲ್ಲ. ಚಿಕ್ಕ ಗುಂಡಿ ಬಿದ್ದಿದ್ದಕ್ಕೆ ರಾತ್ರೋ ರಾತ್ರಿ ರಸ್ತೆಗೆ ಡಾಂಬರೀಕರಣ ಭಾಗ್ಯ ದೊರೆತಿದೆ.

    ಸಿಎಂ ಯಡಿಯೂರಪ್ಪ ಅಧಿಕೃತ ಸರ್ಕಾರಿ ಬಂಗಲೆಗೆ ಹೋಗಿಲ್ಲ. ಹೀಗಾಗಿ ನಿತ್ಯ ತಮ್ಮ ಖಾಸಗಿ ಮನೆ ಧವಳಗಿರಿಯಿಂದಾನೇ ಓಡಾಡುತ್ತಿದ್ದಾರೆ. ನಿತ್ಯ ನೂರಾರು ಜನ ಸಿಎಂ ಭೇಟಿಗೆ ಬರ್ತಾರೆ. ಫಾರಿನ್ ಡೆಲಿಗೇಟ್ಸ್ ಕೂಡಾ ಬರ್ತಾನೆ ಇರ್ತಾರೆ. ಹೀಗಾಗಿ ರಸ್ತೆ ಸಮಸ್ಯೆ ಇದ್ರೆ ಸರಿಯಾಗಲ್ಲ ಅಂತ ಅಧಿಕಾರಿಗಳು ಡಾಂಬರೀಕರಣ ಭಾಗ್ಯ ಕೊಟ್ಟಿದ್ದಾರೆ.

    ಕೆಲ ದಿನಗಳ ಹಿಂದೆ ಸಿಎಂ ಮನೆಯ ಡಾಲರ್ಸ್ ಕಾಲೋನಿ ರಸ್ತೆಯಲ್ಲಿ ಅಲ್ಲಲ್ಲಿ ಚಿಕ್ಕ ಚಿಕ್ಕ ಗುಂಡಿ ಇತ್ತು. ಅದ್ಯಾವ ಅಧಿಕಾರಿ ಲೋಕೋಪಯೋಗಿ ಇಲಾಖೆಗೆ ತರಾಟೆಗೆ ತೆಗೆದುಕೊಂಡ್ರೋ ಗೊತ್ತಿಲ್ಲ. ರಾತ್ರೋ ರಾತ್ರಿ ಅಧಿಕಾರಿಗಳು ಡಾಂಬರೀಕರಣ ಮಾಡಿದ್ದಾರೆ. ಸಿಎಂ ಮನೆ ರಸ್ತೆ ಅಂತ ರಾತ್ರೊ ರಾತ್ರಿ ರಸ್ತೆ ಹಾಕೋ ಅಧಿಕಾರಿಗಳು ನಗರದ ಗುಂಡಿ ಬಿದ್ದ ರಸ್ತೆಯನ್ನು ಇಷ್ಟೇ ನಿಷ್ಠೆಯಿಂದ ಮುಚ್ಚಿದ್ರೆ ಅನುಕೂಲ ಆಗುತ್ತೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

  • ರಸ್ತೆ ಗುಂಡಿ ಮುಚ್ಚೋಕೆ ಪುಣೆಯಿಂದ ಮೈಸೂರಿಗೆ ಬಂತು `ರೋಡ್ ಡಾಕ್ಟರ್’!

    ರಸ್ತೆ ಗುಂಡಿ ಮುಚ್ಚೋಕೆ ಪುಣೆಯಿಂದ ಮೈಸೂರಿಗೆ ಬಂತು `ರೋಡ್ ಡಾಕ್ಟರ್’!

    ಮೈಸೂರು: ರಾಜ್ಯದಲ್ಲಿ ಈಗ ರಸ್ತೆಯಲ್ಲಿ ಬಿದ್ದಿರೋ ಗುಂಡಿಗಳದ್ದೇ ಚರ್ಚೆ. ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟಕ್ಕೂ ಗುಂಡಿಗಳು ವೇದಿಕೆಯಾಗಿವೆ.

    ರಸ್ತೆಯಲ್ಲಿನ ಗುಂಡಿಗಳು ಸರಕಾರಕ್ಕೆ ಕೆಟ್ಟ ಹೆಸರು ತರುತ್ತೀವೆ. ಆದ್ರೆ ಇದೀಗ ಇಂತಹ ಗುಂಡಿಗಳನ್ನು ಪಟಾ ಪಟ್ ಮುಚ್ಚುವ ಯಂತ್ರವೊಂದು ರೋಡಿಗಿಳಿದಿದೆ. ಸುಲಭವಾಗಿ ಗುಂಡಿ ಮುಚ್ಚುವ ಮಿಷನ್ ಪ್ರಾಯೋಗಿಕ ಇಂದು ಮೈಸೂರಿನಲ್ಲಿ ಮಾಡಲಾಯಿತು.

    ಪುಣೆಯಿಂದ ಬಂದ ತಂಡ ಮೈಸೂರಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಇದರ ಕಾರ್ಯ ವೈಖರಿಯನ್ನು ತೋರಿಸಿದರು. ಒಂದು ಸ್ಕ್ವೇರ್ ಮೀ. ನ ಗುಂಡಿ ಮುಚ್ಚಲು 2.5 ಸಾವಿರ ವೆಚ್ಚ. ಅಂದರೇ ಹಳೆಯ ವಿಧಾನಕ್ಕಿಂತ ನೂತನ ವಿಧಾನದ ವೆಚ್ಚ ಹೆಚ್ಚು. ಈಗ ಇರುವುದಕ್ಕಿಂತ 5 ಪಟ್ಟು ಯಂತ್ರದ ವೆಚ್ಚ ಹೆಚ್ಚಾಗುತ್ತದೆ. ಹಳೆಯ ವಿಧಾನದ ಡಾಂಬರಿಕರಣಕ್ಕೆ 500ರೂ ವೆಚ್ಚವಾಗಿದ್ದು, 1 ವರ್ಷ ಗ್ಯಾರೆಂಟಿ ಇತ್ತು. ಈ ನೂತನ ಯಂತ್ರದಲ್ಲಿ ಒಂದು ಗುಂಡಿ ಮುಚ್ಚಲು ತಗಲುವ ವೆಚ್ಚ 2.5 ಸಾವಿರವಾಗಿದ್ದು, 2 ವರ್ಷ ಗ್ಯಾರೆಂಟಿ ಇದೆ. `ರೋಡ್ ಡಾಕ್ಟರ್’ ಎಂಬ ಪುಣೆ ಕಂಪನಿ ಈ ಯಂತ್ರವನ್ನು ರೂಪಿಸಿದೆ. ಸಂಪೂರ್ಣವಾಗಿ ಕಂಪನಿಯ ಜವಾಬ್ದಾರಿಯಲ್ಲೇ ಗುಂಡಿ ಮುಚ್ಚೊ ಕೆಲಸ ನಡೆಯುತ್ತದೆ.

    ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್ ಮತ್ತು ಮೇಯರ್ ರವೀಕುಮಾರ್ ಯಂತ್ರದ ಪ್ರಾಯೋಗಿಕ ಪರಿಶೀಲನೆ ನಡೆಸಿದರು. ರಾಜ್ಯ ಸರ್ಕಾರದಿಂದ ಈಗಾಗಲೇ ಮೈಸೂರಿನಾದ್ಯಂತ ರಸ್ತೆಗಳ ಗುಂಡಿ ಮುಚ್ಚಲು 10 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಈ ಯಂತ್ರ ಬಳಕೆಗೆ ಚರ್ಚೆ ಶುರುವಾಗಿದೆ.

    ಗಡುವು ವಿಸ್ತರಣೆ: ಬೆಂಗಳೂರಿನಲ್ಲಿ ಗುಂಡಿ ಮುಚ್ಚಲು ನಾನು ನೀಡಿದ್ದ ಗಡುವು ಮುಗಿದಿದೆ. ಆದ್ರೆ ಮೇಯರ್ ಹಾಗೂ ಪಾಲಿಕೆ ಆಯುಕ್ತರು ನನ್ನ ಬಳಿ ಇನ್ನಷ್ಟು ಗಡುವು ನೀಡಲು ಮನವಿ ಮಾಡಿದ್ರು. ಮಳೆ ಬಂದ ಕಾರಣ ಕೆಲವು ಕಡೆ ಕಾಮಾಗಾರಿ ನಡೆಸಲು ಸಾಧ್ಯವಾಗಿಲ್ಲ. ಈ ಕಾರಣದಿಂದ ನವೆಂಬರ್ 6ರವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ ಅಂತ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.