Tag: ಟ್ರೈಸಿಕಲ್

  • ಕುಟುಂಬದ ಜವಾಬ್ದಾರಿ ಹೊರಲು ಪಣತೊಟ್ಟಿರುವ ವಿಕಲಚೇತನಿಗೆ ಬೇಕಿದೆ ಟ್ರೈಸಿಕಲ್!

    ಕುಟುಂಬದ ಜವಾಬ್ದಾರಿ ಹೊರಲು ಪಣತೊಟ್ಟಿರುವ ವಿಕಲಚೇತನಿಗೆ ಬೇಕಿದೆ ಟ್ರೈಸಿಕಲ್!

    ರಾಮನಗರ: ಕುಟುಂಬಕ್ಕೆ ವಂಶಪಾರಂಪರ್ಯವಾಗಿ ಬರುತ್ತಿರುವ ವಿಕಲತೆಯಿಂದ ಕುಟುಂಬದ ಎಲ್ಲರ ಕೈ ಕಾಲುಗಳ ಬೆರಳುಗಳೆಲ್ಲಾ ಕೂಡಿಕೊಂಡಿದೆ. ಕುಟುಂಬದ ಆಧಾರವಾಗಬೇಕಿದ್ದ ಮಗನಿಗೆ ಬೇರೊಬ್ಬರು ಆಧಾರವಾಗಬೇಕಿದೆ. ಆದರೂ ತನ್ನ ಮಕ್ಕಳು, ತಂದೆ-ತಾಯಿಯನ್ನು ಜವಾಬ್ದಾರಿಯಿಂದ ನೋಡಿಕೊಳ್ಳಬೇಕು. ಅಲ್ಲದೇ ಯಾರಿಗೂ ಹೊರೆಯಾಗದಂತೆ ತನ್ನ ಕಾಲ ಮೇಲೆ ನಿಲ್ಲಬೇಕು ಎಂಬ ಆಸೆಯನ್ನಿಟ್ಟುಕೊಂಡಿರುವ ವಿಕಲಚೇತನರೊಬ್ಬರು ಸಹಾಯ ಕೇಳಿ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

    ಕೈ ಕಾಲಿನ ಬೆರಳು ಅಂಟಿಕೊಂಡು, ಓಡಾಡಲು ಕಷ್ಟ ಪಡುತ್ತಿರುವ ಅಪ್ಪ, ಮಗ ಮತ್ತು ಮೊಮ್ಮಗಳು, ವೃದ್ಧ ತಂದೆ ರಾಮಯ್ಯ, ಮಗ ರಾಮಚಂದ್ರು, ಮೊಮ್ಮಗಳು ಸಹನಾ, ರಾಮನಗರ ತಾಲೂಕಿನ ಚಿಕ್ಕೆಗೌಡನದೊಡ್ಡಿ ಗ್ರಾಮದ ಇರುಳಿಗರ ಕಾಲೋನಿಯ ನಿವಾಸಿಗಳು. ವೃದ್ಧ ತಂದೆಯ ಕೈ ಕಾಲುಗಳಲ್ಲಿ ಬೆರಳು ಕೂಡಿಕೊಡಿದ್ದು ಅನುವಂಶೀಯವಾಗಿ ಮಗ ರಾಮಚಂದ್ರು ಮತ್ತು ಮೊಮ್ಮಗಳಿಗೆ ಕೈಕಾಲಿನ ಬೆರಳುಗಳು ಕೂಡಿಕೊಂಡು ಓಡಾಡಲು ಕಷ್ಟ ಪಡುತ್ತಿದ್ದಾರೆ.

    ಬಡತನದಲ್ಲಿ ಜೀವನ ಸಾಗಿಸುತ್ತಿರುವ ರಾಮಚಂದ್ರು ಖಾಸಗಿ ರೆಸಾರ್ಟ್‍ನಲ್ಲಿ ಕೆಲಸ ಮಾಡುತ್ತಿದ್ದು, ಪತ್ನಿ ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗಳು ಸಹನಾಗೆ ಸಾಲ ಮಾಡಿ ಶಸ್ತ್ರಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಇಳಿ ವಯಸ್ಸಿನಲ್ಲಿರುವ ತಂದೆ, ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು. ತನ್ನ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕೆಂಬ ಆಸೆಯಿಟ್ಟುಕೊಂಡಿರುವ ರಾಮಚಂದ್ರು ಪ್ರತಿನಿತ್ಯ 2.5 ಕೀಲೋ ಮೀಟರ್ ಕಾಡಿನ ಮಾರ್ಗವಾಗಿ ನಡೆದುಕೊಂಡು ಹೋಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಆರು ಬೆರಳುಗಳು ಕೂಡಿಕೊಂಡಿರುವುದರಿಂದ ಓಡಾಡಲು ನೋವಾಗುತ್ತಿದ್ದು ಕಷ್ಟ ಪಡುತ್ತಿದ್ದಾರೆ.

    ವಿಕಲಾಂಗತೆಯನ್ನು ಮೆಟ್ಟಿ ಶ್ರಮ ಪಟ್ಟು ಕುಟುಂಬದ ಜವಾಬ್ದಾರಿಯನ್ನು ಹೊತ್ತು ಸ್ವಾಭಿಮಾನದ ಜೀವನ ಮಾಡುತ್ತಿರುವ ರಾಮಚಂದ್ರು ದಿನ ನಿತ್ಯ ಓಡಾಡಲು ಕಷ್ಟಪಡುತ್ತಿದ್ದಾರೆ. ಯಾರಾದರು ದಾನಿಗಳು ಟ್ರೈಸಿಕಲ್ ನೀಡಿ ನಮ್ಮ ಬದುಕಿಗೆ ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಮನವಿ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=XrYK9UbhKN4

  • ಸ್ವಾಭಿಮಾನಿ ಜೀವನ ನಡೆಸಲು ಪಣ ತೊಟ್ಟ ವಿಕಲಚೇತನ ಯುವಕನಿಗೆ ಬೇಕಿದೆ ಟ್ರೈಸಿಕಲ್

    ಸ್ವಾಭಿಮಾನಿ ಜೀವನ ನಡೆಸಲು ಪಣ ತೊಟ್ಟ ವಿಕಲಚೇತನ ಯುವಕನಿಗೆ ಬೇಕಿದೆ ಟ್ರೈಸಿಕಲ್

    ರಾಮನಗರ: ಅಂಗವಿಕಲತೆಯನ್ನು ಮೆಟ್ಟಿ ನಿಂತು ಪಿಯುಸಿ ಪಾಸ್ ಮಾಡಿದ್ದಾರೆ. ಯಾರಿಗೂ ಹೊರೆಯಾಗಬಾರದೆಂಬ ಛಲವನ್ನು ಹೊಂದಿರುವ ಇವರು ಮೊಬೈಲ್ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಆದರೆ ಈಗ ಒಂದು ಟ್ರೈಸಿಕಲ್ ಕೊಡಿಸಿ ಅಂತಾ ಸಹಾಯ ಕೇಳಿ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.

    ಚನ್ನಪಟ್ಟಣ ತಾಲೂಕಿನ ಪಟ್ಲು ಗ್ರಾಮದ ನಿವಾಸಿಯಾಗಿರುವ ಶರತ್, ತನ್ನ ಕಾಲ ಮೇಲೆ ತಾನು ನಿಲ್ಲಬೇಕು ಎಂದು ನಿರ್ಧರಿಸಿ ಮೊಬೈಲ್ ಶಾಪ್‍ವೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದಾರೆ. ಆದರೆ ಕೆಲಸಕ್ಕೆ ತೆರಳಲು ಓಡಾಡೋದೇ ಕಷ್ಟವಾಗಿದೆ. ಅದ್ದರಿಂದ ಯಾರಾದರೂ ದಾನಿಗಳು ಒಂದು ಟ್ರೈಸಿಕಲ್ ಕೊಡಿಸಿ ಅಂತಾ ಸಹಾಯ ಕೇಳ್ತಿದ್ದಾರೆ.

    ಅಂದ ಹಾಗೇ ಶರತ್ ಅವರು ಚಿಕ್ಕಂದಿನಲ್ಲಿಯೇ ತಾಯಿ ಕಳೆದುಕೊಂಡಿದ್ದು, ಕಳೆದ ಐದು ವರ್ಷಗಳ ಹಿಂದೆ ತಂದೆಯೂ ಕೂಡಾ ಸಾವನ್ನಪ್ಪಿದ್ದಾರೆ. ಚಿಕ್ಕಮ್ಮನ ಆಶ್ರಯದಲ್ಲಿ ಜೀವನ ಸಾಗಿಸುತ್ತಿರುವ ಶರತ್ ಅವರಿಗೆ ಯಾರಿಗೂ ಹೊರೆಯಾಗಬಾರದೆಂಬ ಛಲವಿದೆ. ಕಾಲೇಜಿಗೆ ಹೋಗುವ ಸಮಯದಲ್ಲಿ ಸ್ಥಳೀಯರೇ ಆತನಿಗೆ ನೆರವಾಗುತ್ತಿದ್ದರು. ಅಲ್ಲದೇ ಕೆಲಸಕ್ಕೆ ಹೋಗುವಾಗಲೂ ಸಹ ಶರತ್‍ನ ನೆರವಿಗೆ ನಿಂತಿದ್ದಾರೆ. ಆದರೆ ಪ್ರತಿನಿತ್ಯ ಶರತ್‍ನ ನೆರವಿಗೆ ನಿಲ್ಲೋಕೆ ಅವರಿಗೂ ಸಹ ಕಷ್ಟವಿದೆ.

    ಶರತ್ ಅವರಿಗೆ ದುಡಿದು ಛಲದಿಂದ ತನ್ನ ಕಾಲ ಮೇಲೆ ನಿಲ್ಲುವ ಹೆಬ್ಬಯಕೆ. ಆದರೆ ಓಡಾಟದ ಸಮಸ್ಯೆ ಇರುವುದರಿಂದ ಯಾರಾದರೂ ದಾನಿಗಳು ನೆರವು ನೀಡಿ ಛಲದಿಂದ ಬದುಕಲು ನೆರವಾಗಿ ಅನ್ನುವುದು ಪಬ್ಲಿಕ್ ಟಿವಿ ಆಶಯ.

    https://www.youtube.com/watch?v=Gd5DG7eM0Gs

  • ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಮಾಡುವ ಕಾರ್ಯವನ್ನು ಅರ್ಧದಲ್ಲೇ ಕೈಬಿಟ್ಟ ಸ್ಪೀಕರ್!

    ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಮಾಡುವ ಕಾರ್ಯವನ್ನು ಅರ್ಧದಲ್ಲೇ ಕೈಬಿಟ್ಟ ಸ್ಪೀಕರ್!

    ಹಾವೇರಿ: ಸ್ಪೀಕರ್ ಕೆ.ಬಿ ಕೋಳಿವಾಡ ಒಂದಲ್ಲಾ ಒಂದು ವಿವಾದದಲ್ಲಿ ಸುದ್ದಿಯಾಗುತ್ತಾರೆ. ಮೊನ್ನೆ-ಮೊನ್ನೆಯಷ್ಟೇ ವಿಧಾನಸೌಧದ ವಜ್ರಮಹೋತ್ಸವದ ಸಾಕ್ಷ್ಯಚಿತ್ರ ನಿರ್ಮಾಣಕ್ಕಾಗಿ ಆತುರದ ನಿರ್ಧಾರ ತೆಗೆದುಕೊಂಡಿದ್ದರು. ಈಗ ರಾಣೇಬೆನ್ನೂರು ಕ್ಷೇತ್ರದಲ್ಲೂ ಒಂದು ಎಡವಟ್ಟು ಮಾಡಿದ್ದಾರೆ.

    ಸ್ಪೀಕರ್ ಕೆ.ಬಿ ಕೋಳಿವಾಡ ಅವರು ಮುಖ್ಯಮಂತ್ರಿಗಳಿಂದ ಶಹಾಬ್ಬಾಸ್ ಗಿರಿ ಪಡೆಯೋಕೆ ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ನವಂಬರ್ 5 ರಂದು ಕೋಳಿವಾಡ ಅವರ ಜನ್ಮದಿನ ಇತ್ತು. ಅಲ್ಲದೇ ಅವತ್ತು ಹಾವೇರಿಯ ಅವರ ಕ್ಷೇತ್ರ ರಾಣೇಬೆನ್ನೂರಿನಲ್ಲಿ ಸರ್ಕಾರದ ವಿವಿಧ ಕಾಮಗಾರಿಗಳಿಗೆ ಚಾಲನೆ ಕೊಡೋಕೆ ಸಿಎಂ ಸಾಹೇಬ್ರು ಬಂದಿದ್ದರು.

    ಈ ವೇಳೆ ಮುಖ್ಯಮಂತ್ರಿಗಳಿಂದ ಭೇಶ್ ಅನ್ನಿಸಿಕೊಳ್ಳೋಕೆ ಸ್ಪೀಕರ್ ಸಾಹೇಬ್ರು ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಮಾಡುವ ಕಾರ್ಯ ಹಮ್ಮಿಕೊಂಡಿದ್ದರು. ಇದಕ್ಕಾಗಿ 125 ಟ್ರೈಸಿಕಲ್ ಗಳನ್ನು ನಗರದ ಮೈದಾನಕ್ಕೆ ತಂದು ನಿಲ್ಲಿಸಿದ್ದರು. ಸಾಂಕೇತಿಕವಾಗಿ ಸಿಎಂ ಕಡೆಯಿಂದ ಒಂದಿಬ್ಬರಿಗೆ ಟ್ರೈಸಿಕಲ್ ಕಿ ಕೊಡಿಸಿದ್ದರು. ಅದು ಬಿಟ್ಟರೆ ಇಲ್ಲಿವರೆಗೂ ಯಾರಿಗೂ ಟ್ರೈಸಿಕಲ್ ವಿತರಿಸಿಲ್ಲ. 123 ಟ್ರೈಸಿಕಲ್ ಗಳು ಬಿಸಿಲಲ್ಲೇ ನಿಂತಿವೆ.

    ವಿಧಾನಸೌಧ ವಜ್ರಮಹೋತ್ಸವ ವೇಳೆ ಸಾಕ್ಷ್ಯಚಿತ್ರದ ನಿರ್ಮಾಣಕ್ಕೆ ಆತುರಾತುರ ನಿರ್ಧಾರ ಕೈಗೊಂಡಿದ್ದ ಸ್ಪೀಕರ್ ಸಾಹೇಬ್ರು ವಿಕಲಚೇತನರಿಗೆ ಟ್ರೈಸಿಕಲ್ ವಿತರಣೆ ಮಾಡುವ ಕಾಳಜಿ ತೋರಿಸುತ್ತಿಲ್ಲ. ಇಲ್ಲಿವರೆಗೂ ಟ್ರೈಸಿಕಲ್ ವಿತರಣೆ ಆಗಿವೆಯೋ ಇಲ್ವೋ ಎಂದು ವಿಚಾರಿಸುವ ಸೌಜನ್ಯವೂ ತೋರಿಸಿಲ್ಲ. ಇದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.