Tag: ಟ್ರಾಫಿಕ್ ರೂಲ್ಸ್

  • ಉಡುಪಿಯಲ್ಲಿ ಟ್ರಾಫಿಕ್ ನಿಯಮ ಮುರಿದ ನಳೀನ್- ಸುನೀಲ್

    ಉಡುಪಿಯಲ್ಲಿ ಟ್ರಾಫಿಕ್ ನಿಯಮ ಮುರಿದ ನಳೀನ್- ಸುನೀಲ್

    ಉಡುಪಿ: ಜನಸಾಮಾನ್ಯರಿಗೊಂದು ನ್ಯಾಯ ನಮ್ಮನ್ನಾಳುವ ನಾಯಕರಿಗೊಂದು ನ್ಯಾಯ ಎನ್ನುವ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಿದೆ. ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಪೊಲೀಸರು ಹೊಸ ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪೊಲೀಸರು ಜಾರಿಗೆ ತಂದಿದ್ದಾರೆ. ಆದರೆ ಉಡುಪಿಯಲ್ಲಿ ಬಿಜೆಪಿ ನಾಯಕರಿಗೆ ಪೊಲೀಸರು ದಂಡ ಬೀಸಲೇ ಇಲ್ಲ.

    ರಾಜ್ಯಾದ್ಯಂತ ಮಧ್ಯಮ ವರ್ಗವನ್ನು ಗುರಿಯಾಗಿಸಿ ಪೊಲೀಸರು ದಂಡ ಬೀಸುತ್ತಿದ್ದಾರೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಉಡುಪಿಯಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಉಡುಪಿಗೆ ಬರುತ್ತಾ ನಳೀನ್ ಅವರು ಸೀಟ್ ಬೆಲ್ಟ್ ಹಾಕಿರಲಿಲ್ಲ. ಸೀಟ್ ಬೆಲ್ಟ್ ಹಾಕದೆಯೇ ನಳೀನ್  ಕುಮಾರ್  ಮಂಗಳೂರಿನಿಂದ ಉಡುಪಿಗೆ ಪ್ರಯಾಣಿಸಿದ್ದಾರೆ.

    ಸರ್ಕಾರದ ಮುಖ್ಯ ಸಚೇತಕ ಶಾಸಕ ಸುನೀಲ್ ಕುಮಾರ್ ಅವರು ಕೂಡ ನಿಯಮ ಉಲ್ಲಂಘಿಸಿದ್ದಾರೆ. ಇವರಿಬ್ಬರೂ ಕಣ್ಮುಂದೆಯೇ ಕಾರಿಂದ ಇಳಿದರೂ ಟ್ರಾಫಿಕ್ ಪೊಲೀಸರು ದಂಡ ಹಾಕಿಲ್ಲ. ಅಷ್ಟೇ ಅಲ್ಲದೆ ಉಡುಪಿಯ ಪ್ರಮುಖ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಯಿತು.

    ಈ ಜೀಪಿನ ಚಾಲಕ ಸೀಟ್ ಬೆಲ್ಟ್ ಹಾಕದೆ ಮೂರ್ನಾಲ್ಕು ಕಿ.ಮೀ ವಾಹನ ಚಲಾಯಿಸಿದ್ದಾನೆ. ನಗರದಾದ್ಯಂತ ತೆರೆದ ವಾಹನ ಸಂಚರಿಸುವಾಗ ಪೊಲೀಸರು ಜೀಪಿಗೆ ರಕ್ಷಣೆ ನೀಡಿದರೆ  ವಿನಾಃ ಆ ಚಾಲಕನಿಗೆ ದಂಡ ಹಾಕಲಿಲ್ಲ.

  • ಟ್ರಾಫಿಕ್ ದಂಡಕ್ಕೆ ಹೊಸ ಮಂತ್ರದಂಡ ಸಿದ್ಧಪಡಿಸಿಕೊಂಡ ನೆಟ್ಟಿಗರು- ವೈರಲಾಯ್ತು ವಿಡಿಯೋ

    ಟ್ರಾಫಿಕ್ ದಂಡಕ್ಕೆ ಹೊಸ ಮಂತ್ರದಂಡ ಸಿದ್ಧಪಡಿಸಿಕೊಂಡ ನೆಟ್ಟಿಗರು- ವೈರಲಾಯ್ತು ವಿಡಿಯೋ

    ಬೆಂಗಳೂರು: ಹೊಸ ಮೋಟಾರು ವಾಹನ ಕಾಯ್ದೆ ವಾಹನ ಸವಾರರ ಜೇಬನ್ನು ಸುಡುತ್ತಿದೆ. ಸರ್ಕಾರ ದಂಡದ ಮೊತ್ತ ಹೆಚ್ಚಳ ಮಾಡುವದರಿಂದ ಸಾರ್ವಜನಿಕರು ಸಂಚಾರಿ ನಿಯಮ ಪಾಲನೆ ಮಾಡುತ್ತಾರೆ ಎಂಬ ಉದ್ದೇಶವನ್ನು ಹೊಂದಿತ್ತು. ಆದ್ರೆ ಸರ್ಕಾರದ ಮಂತ್ರಕ್ಕೆ ಜನರು ತಿರುಮಂತ್ರವನ್ನು ಸಿದ್ಧಪಡಿಸಿಕೊಂಡು ತಿರುಗೇಟು ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಏನದು ವಿಡಿಯೋ ವೈರಲ್?
    ಹರ್ಯಾಣದ ಐಪಿಎಸ್ ಅಧಿಕಾರಿ ಪಂಕಜ್ ನಾಯನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಸವಾರರು ಪೊಲೀಸರನ್ನು ಕಂಡಕೂಡಲೇ ತಮ್ಮ ವಾಹನವನ್ನು ತಳ್ಳಿಕೊಂಡು ಹೋಗಿದ್ದಾರೆ. ಪೊಲೀಸರು ಮುಂದೆಯೇ ಬಹುತೇಕರು ತಮ್ಮ ದ್ವಿಚಕ್ರ ವಾಹನಗಳನ್ನು ತಳ್ಳಿಕೊಂಡು ಹೋಗುತ್ತಿರೋದನ್ನು ವಿಡಿಯೋದಲ್ಲಿ ಕಾಣಬಹುದು.

    https://twitter.com/bijendra125/status/1169143385095114753

    ಈ ವಿಡಿಯೋವನ್ನು ಹಲವರು ರೀಟ್ವೀಟ್ ಮಾಡಿಕೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ದೊಡ್ಡ ಮೊತ್ತದ ದಂಡ ಪಾವತಿಸಬೇಕಾಗುತ್ತದೆ ಎಂದು ಎಲ್ಲರೂ ಬೈಕ್ ತಳ್ಳಿಕೊಂಡು ಹೋಗುತ್ತಿದ್ದಾರೆ. ಪ್ರತಿಯೊಂದಕ್ಕೂ ಒಂದೊಂದು ಕಳ್ಳ ಮಾರ್ಗಗಳನ್ನು ಭಾರತೀಯರು ಹುಡುಕಿಕೊಳ್ಳುತ್ತಾರೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಹಲವರು ಹಂಚಿಕೊಳ್ಳುತ್ತಿದ್ದು, ಟ್ರೋಲ್ ಮೂಲಕ ದೊಡ್ಡ ಮೊತ್ತದ ದಂಡಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

    ಟ್ರಾಫಿಕ್ ರೂಲ್ಸ್ ಉಲ್ಲಂಘನೆಯಿಂದ ಸಾವಿರಾರು ರೂ. ದಂಡವನ್ನು ಹಲವರು ಕಟ್ಟಿದ್ದಾರೆ. ಸಾರ್ವಜನಿಕ ವಲಯದಲ್ಲಿ ಹೊಸ ನಿಯಮಕ್ಕೆ ವ್ಯಾಪಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲವರು ತಮ್ಮ ಹಳೆಯ ವಾಹನದ ಮೌಲ್ಯಕ್ಕಿಂತ ದಂಡವೇ ಹೆಚ್ಚಾಯ್ತು ಎಂದು ಕಿಡಿಕಾರುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ರಾಫಿಕ್ ದಂಡಕ್ಕೆ ಸಂಬಂಧಿಸಿದ ಮೀಮ್ಸ್, ಜೋಕ್ ಗಳು ಮಿಂಚಿನಂತೆ ಹರಿದಾಡುತ್ತಿವೆ.

    ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನದವರೆಗೆ ಒಂದೇ ದಿನದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ 2,978 ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಗಳಿಂದ ಟ್ರಾಫಿಕ್ ಪೊಲೀಸರು ವಾಹನ ಸವಾರರಿಂದ ಭರ್ತಿ 30 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದವರ ಬಳಿ ಭಾರೀ ದಂಡ ಕಟ್ಟಿಸಿಕೊಂಡು ಪೊಲೀಸರು ವಾಹನ ಸವಾರರ ಬೆವರಿಳಿಸಿದ್ದಾರೆ.

    https://twitter.com/piyushtajpuria/status/1169258231706746882

  • ಕುಮಾರಸ್ವಾಮಿ, ಸಿದ್ದರಾಮಯ್ಯನವರಿಂದಲೂ ಟ್ರಾಫಿಕ್ ರೂಲ್ಸ್ ಬ್ರೇಕ್

    ಕುಮಾರಸ್ವಾಮಿ, ಸಿದ್ದರಾಮಯ್ಯನವರಿಂದಲೂ ಟ್ರಾಫಿಕ್ ರೂಲ್ಸ್ ಬ್ರೇಕ್

    ಬೆಂಗಳೂರು: ಹೊಸ ಸಂಚಾರಿ ನಿಯಮ ಜಾರಿಯಾದ ನಂತರ ಸವಾರರಿಗೆ ಟ್ರಾಫಿಕ್ ಪೊಲೀಸರು ದಂಡ ಹಾಕುವುದು ನಿಮಗೆ ಗೊತ್ತೇ ಇದೆ. ಜನರ ಮೇಲೆ ದಂಡ ಪ್ರಯೋಗ ಮಾಡುತ್ತಿರುವ ಪೊಲೀಸರು ನಾಯಕರ ವಿರುದ್ಧ ಮೌನಕ್ಕೆ ಶರಣಾಗಿದ್ದಾರೆ.

    ಸೀಟ್ ಬೆಲ್ಟ್ ಧರಿಸದೇ ಇದ್ದರೆ ಕಾರು ಪ್ರಯಾಣಿಕರಿಗೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರು ಸಂಚಾರ ನಿಯಮ ಉಲ್ಲಂಘಿಸಿದ್ದರೂ ಪೊಲೀಸರು ಮೂಖ ಪ್ರೇಕ್ಷಕರಾಗಿದ್ದಾರೆ. ಸೆ.3 ರಂದು ಜೆಪಿ ನಗರದ ನಿವಾಸದಿಂದ ಕಾರಲ್ಲಿ ಹೊರಟ ಕುಮಾರಸ್ವಾಮಿ ಸೀಟ್ ಬೆಲ್ಟ್ ಧರಿಸುವ ಗೋಜಿಗೆ ಹೋಗಲಿಲ್ಲ. ಭದ್ರತೆಗೆ ಇದ್ದ ಪೊಲೀಸರು ಕೂಡ ಸೀಟ್ ಬೆಲ್ಟ್ ಹಾಕಿಕೊಳ್ಳಿ ಎಂದು ಹೇಳಲು ಹೋಗಲಿಲ್ಲ.

    ಕೇವಲ ಯಡಿಯೂರಪ್ಪ, ಕುಮಾರಸ್ವಾಮಿ ಮಾತ್ರವಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಸಂಚಾರಿ ನಿಯಮ ಅನ್ವಯವಾಗುವುದಿಲ್ಲ. ಟ್ರಾಫಿಕ್ಸ್ ರೂಲ್ಸ್ ಲೆಕ್ಕಕ್ಕೆ ಇದ್ದಂಗೆ ಇಲ್ಲ. ಅವ್ರು ಕೂಡ ಕಾರಲ್ಲಿ ಕೂತ್ರೆ ಸೀಟ್ ಬೆಲ್ಟ್ ಹಾಕಿಕೊಳ್ಳುವುದೇ ಇಲ್ಲ

    ಅನರ್ಹ ಶಾಸಕ ಬಿಸಿ ಪಾಟೀಲ್ ಈ ಹಿಂದೆ ಇನ್ಸ್‍ಪೆಕ್ಟರ್ ಆಗಿದ್ದವರು. ಎಲ್ಲರಿಗೂ ರೂಲ್ಸ್ ರೆಗ್ಯೂಲೇಷನ್ ಹೆಳಿಕೊಟ್ಟವರು. ಎಲ್ಲರಿಗಿಂತ ರೂಲ್ಸ್ ಬಗ್ಗೆ ಸ್ವಲ್ಪ ಜಾಸ್ತಿಯೇ ಅವರಿಗೆ ತಿಳಿದಿರುತ್ತದೆ. ಆದರೆ ಅವರು ಕೂಡ ಸೀಟ್ ಬೆಲ್ಟ್ ಹಾಕಿಕೊಳ್ಳದೇ ನಿಯಮ ಉಲ್ಲಂಘಿಸಿದ್ದಾರೆ.

    ಕೇವಲ ಇವರಷ್ಟೇ ಅಲ್ಲದೇ ನಟಿ ತಾರಾ, ಐಪಿಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್, ಲಕ್ಷ್ಮಿ ನಾರಾಯಣ ಅವರ ವಾಹನದ ಚಾಲಕರು ಸೀಟ್ ಬೆಲ್ಟ್ ಧರಿಸದೇ ಬಿಂದಾಸ್ ಆಗಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಇವರನ್ನು ನೋಡಿಯೂ ಟ್ರಾಫಿಕ್ ಪೊಲೀಸರು ಸೈಲೆಂಟ್ ಆಗಿದ್ದಾರೆ. ಇಲ್ಲಿ ಕಾಡುತ್ತಿರುವ ಕಟ್ಟ ಕಡೆಯ ಪ್ರಶ್ನೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

  • ಟ್ರಾಫಿಕ್ ರೂಲ್ಸ್ ಉಲ್ಲಂಘನೆ- ಬೈಕಿಗೆ 23, 24 ಸಾವಿರ ರೂ, ಆಟೋಗೆ 32 ಸಾವಿರ ರೂ. ದಂಡ

    ಟ್ರಾಫಿಕ್ ರೂಲ್ಸ್ ಉಲ್ಲಂಘನೆ- ಬೈಕಿಗೆ 23, 24 ಸಾವಿರ ರೂ, ಆಟೋಗೆ 32 ಸಾವಿರ ರೂ. ದಂಡ

    ನವದೆಹಲಿ: ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾಗಿದ್ದು, ಸಂಚಾರಿ ನಿಯಮ ಉಲ್ಲಂಘನೆಗೆ ದೊಡ್ಡ ಮೊತ್ತದ ದಂಡವನ್ನ ಪಾವತಿಸಬೇಕಿದೆ. ಸಂಚಾರಿ ಪೊಲೀಸರು ಸಹ ದಂಡದ ಸ್ಲಿಪ್ ಗಳನ್ನು ಹರಿದು ಸವಾರರಿಗೆ ನೀಡುತ್ತಿದ್ದಾರೆ. ದಂಡದ ಮೊತ್ತ ಕೆಲವೊಬ್ಬರಿಗೆ ವಾಹನದ ಮೌಲ್ಯಕ್ಕಿಂತ ಹೆಚ್ಚಾಗುತ್ತಿದೆ. ಮಂಗಳವಾರ ಬೈಕ್ ಸವಾರರಿಬ್ಬರಿಗೆ ಗುರುಗ್ರಾಮ ಪೊಲೀಸರು 23 ಸಾವಿರ ಮತ್ತು ಆಟೋ ಚಾಲಕನಿಗೆ 32 ಸಾವಿರ ರೂ. ದಂಡದ ಬಿಲ್ ನೀಡಿದ್ದಾರೆ.

    ದೆಹಲಿಯ ಗೀತಾ ಕಾಲೋನಿಯ ನಿವಾಸಿ ದಿನೇಶ್ ಮದನ್ ಅವರಿಗೆ ಗುರುಗ್ರಾಮದಲ್ಲಿ 23 ಸಾವಿರ ರೂ. ದಂಡದ ಬಿಲ್ ನೀಡಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ದಿನೇಶ್, ನನ್ನ ಸ್ಕೂಟಿಯ ಮೌಲ್ಯ 15 ಸಾವಿರ ರೂ. ದಂಡವಾಗಿ 23 ಸಾವಿರ ರೂ. ಪಾವತಿಸೋದು ಹೇಗೆ ಸಾಧ್ಯ. ದಿನೇಶ್ ಬಳಿ ಲೈಸೆನ್ಸ್, ಆರ್ ಸಿ ಇರಲಿಲ್ಲ. ಎಮಿಸನ್ ಟೆಸ್ಟ್, ವಿಮೆ ಸಹ ಮಾಡಿಸದೇ ಹೆಲ್ಮೆಟ್ ಧರಿಸದೇ ಸ್ಕೂಟಿ ಚಲಾಯಿಸುತ್ತಿದ್ದರು. ಇದನ್ನೂ ಓದಿ: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಕಟ್ಟಬೇಕಾಗುತ್ತೆ ದುಪ್ಪಟ್ಟು ದಂಡ

    ಇದೇ ರೀತಿ ಗುರುಗ್ರಾಮದ ಜೈಕಂಪುರ ವ್ಯಾಪ್ತಿಯಲ್ಲಿ ಓರ್ವ ತನ್ನ ಸ್ನೇಹಿತನೊಂದಿಗೆ ಬೈಕಿನಲ್ಲಿ ರಾಜೀವ್ ಚೌಕ್ ಗೆ ತೆರಳುತ್ತಿದ್ದರು. ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಟ್ರಾಫಿಕ್ ಪೊಲೀಸರು ಒಟ್ಟು 24 ಸಾವಿರ ರೂ. ದಂಡದ ಚಲನ್ ನೀಡಿದ್ದಾರೆ. ಸಹ ಸವಾರ ಹೆಲ್ಮೆಟ್ ಧರಿಸದಕ್ಕೆ ಆತನಿಗೂ 1 ಸಾವಿರ ರೂ. ದಂಡ ಹಾಕಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ರಸ್ತೆಯಲ್ಲಿ ಕ್ರಿಸ್ ಕ್ರಾಸ್: ಏನಿದು ಈ ಹೊಸ ಟ್ರಾಫಿಕ್ ರೂಲ್ಸ್? ದಂಡ ಎಷ್ಟು?

    ದಂಡ ವಿಧಿಸಿರುವ ಟ್ರಾಫಿಕ್ ಪೊಲೀಸ್ ಅಮಿತ್ ಮಾತನಾಡಿ, ಸವಾರರಿಬ್ಬರು ಹೆಲ್ಮೆಟ್ ಧರಿಸಿರಲಿಲ್ಲ. ತಡೆದು ದಾಖಲೆ ಕೇಳಿದಾಗ ಅವರ ಬಳಿ ವಾಹನಕ್ಕೆ ಸಂಬಂಧಿಸಿದ ಯಾವುದೇ ಕಾಗದ ಪತ್ರಗಳು ಇರಲಿಲ್ಲ. ಇಷ್ಟು ದೊಡ್ಡ ಮೊತ್ತ ಪಾವತಿಸಬೇಕೆಂಬ ಭಯದಿಂದ ಎಲ್ಲರೂ ಸಂಚಾರಿ ನಿಯಮ ಪಾಲಿಸುತ್ತಾರೆ ಎಂಬುವುದು ನನ್ನ ನಂಬಿಕೆ ಎಂದು ಹೇಳುತ್ತಾರೆ.

    ದಂಡದ ಮೊತ್ತ ಪಾವತಿಸದ ಹಿನ್ನೆಲೆಯಲ್ಲಿ ಪೊಲೀಸರು ದಿನೇಶ್ ಅವರ ಸ್ಕೂಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಕೂಟರ್ ಮಾರುಕಟ್ಟೆ ಬೆಲೆ 15 ಸಾವಿರ ರೂ. ಇದೆ. ದಂಡ ವಾಹನದ ಮೌಲ್ಯಕ್ಕಿಂತ ಹೆಚ್ಚಿದೆ. ಹಾಗಾಗಿ ಸ್ಕೂಟಿಯನ್ನು ಬಿಡಿಸಿಕೊಳ್ಳದಿರಲು ದಿನೇಶ್ ಚಿಂತಿಸಿದ್ದಾರೆ.

    ಗುರುಗ್ರಾಮದ ಸೆಕ್ಟರ್ 25ರಲ್ಲಿ ಬ್ರಿಸ್ಟಲ್ ಚೌಕದ ಬಳಿ ಆಟೋ ಡ್ರೈವರ್ ಗೆ ಟ್ರಾಫಿಕ್ ಪೊಲೀಸರು 32 ಸಾವಿರ ರೂ.ಯ ದಂಡ ಹಾಕಿದ್ದಾರೆ. ಅತಿ ವೇಗ, ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್, ಪರವಾನಿಗೆ, ನೋಂದಣಿ, ವಿಮೆ ಮತ್ತು ಎಮಿಷನ್ ಟೆಸ್ಟ್ ಮಾಡಿಸದಕ್ಕೆ ಒಟ್ಟು 32 ಸಾವಿರ ರೂ. ದಂಡ ಹಾಕಲಾಗಿದೆ. ಆಟೋ ಡ್ರೈವರ್ ಮೊಹಮ್ಮದ್ ಮುಸ್ತಕಿಲ್ ಪಶ್ಚಿಮ ಬಂಗಾಳದ ಮೂಲದವರಾಗಿದ್ದು, ಕಳೆದ 15 ವರ್ಷಗಳಿಂದ ಗುರುಗ್ರಾಮದಲ್ಲಿ ವಾಸವಾಗಿದ್ದಾರೆ. ಎರಡು ತಿಂಗಳಿನಿಂದ ಆಟೋ ಚಲಾಯಿಸುತ್ತಿದ್ದರು. ದಂಡ ಪಾವತಿಸದ ಹಿನ್ನೆಲೆಯಲ್ಲಿ ಪೊಲೀಸರು ಆಟೋ ವಶಕ್ಕೆ ಪಡೆದುಕೊಂಡಿದ್ದಾರೆ.

  • ರಸ್ತೆ ಅಪಘಾತವಾದ್ರೆ ಇನ್ಮುಂದೆ ವೈಜ್ಞಾನಿಕ ತನಿಖೆ

    ರಸ್ತೆ ಅಪಘಾತವಾದ್ರೆ ಇನ್ಮುಂದೆ ವೈಜ್ಞಾನಿಕ ತನಿಖೆ

    ಬೆಂಗಳೂರು: ನಗರದಲ್ಲಿ ರಸ್ತೆ ಅಪಘಾತದಿಂದ ಗಂಭೀರ ಗಾಯ ಅಥವಾ ಪ್ರಾಣ ಹಾನಿ ಸಂಭವಿಸಿದ್ರೆ, ಟ್ರಾಫಿಕ್ ಪೊಲೀಸರ ಜೊತೆಗೆ ಲೋಕೋಪಯೋಗಿ ಅಧಿಕಾರಿಗಳು ಮತ್ತು ಆರ್‌ಟಿಒ ಅಧಿಕಾರಿಗಳು ಘಟನಾ ಸ್ಥಳದಲ್ಲಿ ಇನ್ಮುಂದೆ ವೈಜ್ಞಾನಿಕ ತನಿಖೆ ನಡೆಸಲಿದ್ದಾರೆ.

    ಸುಪ್ರೀಂ ಕೋರ್ಟ್ ಕಳೆದ ವರ್ಷ ರಚನೆ ಮಾಡಿದ್ದ ರಸ್ತೆ ಸುರಕ್ಷತಾ ಸಮಿತಿಯಲ್ಲಿ, ಲೋಕೋಪಯೋಗಿ ಮತ್ತು ಸಾರಿಗೆ ಅಧಿಕಾರಿಗಳ ಜೊತೆಗೆ ಸಂಚಾರಿ ಪೊಲೀಸರು ಇದ್ದು, ಅಧ್ಯಯನ ವರದಿಯನ್ನು ಮುಖ್ಯ ಕಾರ್ಯದರ್ಶಿಗಳಿಗೆ ನೀಡಬೇಕು.

    ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ನೇತೃತ್ವದಲ್ಲಿ ಸಭೆ ಸೇರಿದ್ದ ಮೂರು ಇಲಾಖೆಗಳ ಅಧಿಕಾರಿಗಳು, ಕೆಲ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಆಕ್ಸಿಡೆಂಟ್ ಸ್ಥಳಕ್ಕೆ ಭೇಟಿ ನೀಡಿ, ಅಪಘಾತಕ್ಕೆ ನಿಖರ ಕಾರಣಗಳ ಬಗ್ಗೆ ತನಿಖೆ ನಡೆಸಬೇಕು ಹಾಗೂ ರಸ್ತೆಗಳು ನ್ಯೂನತೆಯಿದ್ದರೆ ಅದನ್ನು ಸರಿಪಡಿಸಬೇಕು.

    ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸುವ ಬಗ್ಗೆ ಸಮಿತಿ ತೀರ್ಮಾನ ಮಾಡಿದೆ. ಅಲ್ಲದೆ ರಸ್ತೆ ಸುರಕ್ಷತಾ ಪ್ರಾಧಿಕಾರ ಜಿಲ್ಲಾ ಮತ್ತು ತಾಲೂಕುವಾರು ಜಂಟಿ ಸಮಿತಿಯನ್ನು ರಚನೆ ಮಾಡಿದ್ದು, ಅಪಘಾತಗಳ ನಿಖರ ವರದಿ ನೀಡಲಿದೆ.

  • ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಕಟ್ಟಬೇಕಾಗುತ್ತೆ ದುಪ್ಪಟ್ಟು ದಂಡ

    ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಕಟ್ಟಬೇಕಾಗುತ್ತೆ ದುಪ್ಪಟ್ಟು ದಂಡ

    ಬೆಂಗಳೂರು: ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಮೊದಲು ವಾಹನ ಸವಾರರೇ ಎಚ್ಚರವಾಗಿರಿ. ಯಾಕೆಂದರೆ ಇನ್ನು ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಸಿಕ್ಕಾಪಟ್ಟೆ ದಂಡ ಕಟ್ಟಬೇಕಾಗುತ್ತದೆ.

    ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡುವುದು, ನೋ ಪಾರ್ಕಿಂಗ್‍ನಲ್ಲಿ ವಾಹನಗಳನ್ನು ಪಾರ್ಕ್ ಮಾಡುವುದು ಮತ್ತು ಅತಿಯಾದ ವೇಗಕ್ಕೆ ವಿಧಿಸುವ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಇಂದಿನಿಂದಲೇ ಜಾರಿಗೆ ಬರುವಂತೆ ಹೊಸ ದಂಡವನ್ನು ಫಿಕ್ಸ್ ಮಾಡಲಾಗಿದೆ.

    ಯಾವ್ಯಾವ ರೂಲ್ಸ್ ಬ್ರೇಕ್‍ಗೆ ಎಷ್ಟೆಷ್ಟು ಫೈನ್:
    ಮೊಬೈಲ್ ಬಳಕೆ ಮಾಡಿದರೆ ಮೊದಲು ಸಾವಿರ ರೂ. ದಂಡ ಕಟ್ಟಬೇಕು, 2ನೇ ಬಾರಿಗೆ 2 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ. ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲದಿದ್ದರೆ, ಮೊದಲು 2 ಸಾವಿರ ರೂ. ದಂಡ, 2ನೇ ಬಾರಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

    ಅಲ್ಲದೆ ಇನ್ಶೂರೆನ್ಸ್ ಇಲ್ಲದಿದ್ದರೆ, ಸಾವಿರ ರೂಪಾಯಿ ದಂಡ ಕಟ್ಟಬೇಕು. ಇನ್ಶೂರೆನ್ಸ್ ಇಲ್ಲದವರಿಗೆ ಮೊದಲು 500 ರೂ. ದಂಡ ಇತ್ತು. ನೋ ಪಾರ್ಕಿಂಗ್‍ನಲ್ಲಿ ಪಾರ್ಕಿಂಗ್ ಮಾಡಿದವರಿಗೆ ಮೊದಲು ಸಾವಿರ ರೂ. ದಂಡ, 2ನೇ ಬಾರಿಗೆ ಹಾಗೇ ಮಾಡಿದರೆ 2 ಸಾವಿರ ಕಟ್ಟಬೇಕಾಗುತ್ತದೆ.

    1998ರ ಮೋಟಾರ್ ವೆಹಿಕಲ್ ಆ್ಯಕ್ಟ್ ನಿಗದಿಪಡಿಸಿದ ಮಿತಿಯ ಒಳಗೆ ದಂಡ ಫಿಕ್ಸ್ ಮಾಡಲಾಗಿದೆ.

  • ಸಿಎಂ, ಡಿಸಿಎಂ ಸೇರಿದಂತೆ ಜನಪ್ರತಿನಿಧಿಗಳಿಂದ್ಲೇ ರೂಲ್ಸ್ ಬ್ರೇಕ್!

    ಸಿಎಂ, ಡಿಸಿಎಂ ಸೇರಿದಂತೆ ಜನಪ್ರತಿನಿಧಿಗಳಿಂದ್ಲೇ ರೂಲ್ಸ್ ಬ್ರೇಕ್!

    ಬೆಂಗಳೂರು: ಸಾರ್ವಜನಿಕರಿಗೆ ಮಾದರಿಯಾಗಬೇಕಾದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರೆ ಟ್ರಾಫಿಕ್ ನಿಯಮವನ್ನು ಪಾಲಿಸದೇ ಉಲ್ಲಂಘನೆ ಮಾಡಿದ್ದಾರೆ. ಇದರಿಂದ ಸಂಚಾರಿ ನಿಯಮಗಳು ಕೇವಲ ಜನಸಾಮಾನ್ಯರಿಗೆ ಮಾತ್ರವೇ? ಜನಪ್ರತಿನಿಧಿಗಳನ್ನ ಕೇಳೊರಿಲ್ವಾ? ಜನಪ್ರತಿನಿಧಿಗಳು ಏನ್ ಮಾಡಿದರೂ ಸರಿ, ನಾವ್ ತಪ್ಪಾ? ಇಂತಹ ಅನೇಕ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡುತ್ತಿವೆ.

    ಹೊಸ ವರ್ಷದಲ್ಲಿ ಕುಡಿದ ವಾಹನ ಚಲಾಯಿಸುತ್ತಿದ್ದರು ಅಂತ ಸುಮಾರು 500ಕ್ಕೂ ಹೆಚ್ಚು ಜನರಿಗೆ ದಂಡ ಹಾಕಲಾಗಿದೆ. ಹೀಗೆ ಸಂಚಾರಿ ನಿಯಮಗಳನ್ನು ಗಾಳಿಗೆ ತೂರೋರಿಗೆ ದಂಡ ಹಾಕುವುದಾದರೆ ಜನಪ್ರತಿನಿಧಿಗಳು ಮಾತ್ರ ರೂಲ್ಸ್ ಬ್ರೇಕ್ ಮಾಡಿದರು ಕೇಳುವುದಿಲ್ಲ.

    ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಪರಮೇಶ್ವರ್ ಸೀಟ್ ಬೆಲ್ಟ್ ಹಾಕದೇ ಸಂಚಾರಿ ನಿಯಮಕ್ಕೆ ಬಿಡುಗಾಸಿನ ಕಿಮ್ಮತ್ತು ಕೊಟ್ಟಿಲ್ಲ. ಇತ್ತ ಸಿಎಂ ಕುಮಾರಸ್ವಾಮಿ ಚಾಲಕರಂತೂ ಸಿಎಂ ಚಾಲಕ ಅಂತ ಧಿಮಾಕು ತೋರಿಸಿ, ಸೀಟ್ ಬೆಲ್ಟ್ ಹಾಕದೇ ನಿಯಮವನ್ನು ಬ್ರೇಕ್ ಮಾಡಿದ್ದಾರೆ.

    ಅಷ್ಟೇ ಅಲ್ಲದೇ ಇತ್ತ ಮೇಯರ್ ಗಂಗಾಬಿಕ ಮಲ್ಲಿಕಾರ್ಜುನ್, ಉಪಮೇಯರ್ ಭದ್ರೇಗೌಡ ಅವರು ಕೂಡ ಸಂಚಾರಿ ನಿಯಮ ಪಾಲನೆಗೆ ಕಿಮ್ಮತ್ತು ಕೊಟ್ಟಿಲ್ಲ. ಇವರಷ್ಟೇ ಅಲ್ಲದೇ ಮಾಜಿ ಮೇಯರ್ ಪದ್ಮಾವತಿ, ಕಾರ್ಪೋರೇಟರ್ ಗಳಂತೂ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಎಂಬ ಬೇದ ಭಾವವಿಲ್ಲದೇ ಸೀಟ್ ಬೆಲ್ಟ್ ಹಾಕದೇ ಸಂಚಾರಿ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ.

    ಪೊಲೀಸರು ಸಿಎಂ ಕುಮಾರಸ್ವಾಮಿಗೆ ಝೀರೋ ಟ್ರಾಫಿಕ್ ಕೊಡುತ್ತಾರೆ. ಆಗ ನಿಯಮ ಉಲ್ಲಂಘಿಸಿದ್ದು ನೋಡಿಲ್ವಾ? ಡಿಸಿಎಂಗೂ ಸಿಗ್ನಲ್ ಫ್ರೀ ಕೊಡುತ್ತಾರೆ ಆಗಲೂ ನೋಡಲ್ವಾ? ಇನ್ನು ಮಾಸಿಕ ಸಭೆಗೆ ಬರುವ ಕಾರ್ಪೋರೇಟರ್ ಗಳಿಗೂ ಭದ್ರತೆ ಕೊಡುತ್ತಾರೆ. ಆಗಲೂ ಪೊಲೀಸರು ನೋಡಿದರೂ ನೋಡದಂತೆ ಇರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಗ್ನಲ್ ಜಂಪ್, ವಾಹನ ಚಾಲನೆ ವೇಳೆ ಮೊಬೈಲ್ ಬಳಸಿ ಸಿಕ್ಕಿಬಿದ್ರೆ 3 ತಿಂಗಳು ಲೈಸೆನ್ಸ್ ರದ್ದು!

    ಸಿಗ್ನಲ್ ಜಂಪ್, ವಾಹನ ಚಾಲನೆ ವೇಳೆ ಮೊಬೈಲ್ ಬಳಸಿ ಸಿಕ್ಕಿಬಿದ್ರೆ 3 ತಿಂಗಳು ಲೈಸೆನ್ಸ್ ರದ್ದು!

    ಮುಂಬೈ: ವಾಹನ ಚಾಲನೆ ವೇಳೆ ಮೊಬೈಲ್ ಬಳಸುವುದು ಅಥವಾ ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

    ರಾಜ್ಯಾದ್ಯಂತ ಅಪಘಾತಗಳು ಹಾಗೂ ಸಂಚಾರಿ ನಿಯಮ ಉಲ್ಲಂಘನಾ ಪ್ರಕರಣಗಳು ಹೆಚ್ಚುತ್ತಿದೆ. ಹೀಗಾಗಿ ವಾಹನ ಸವಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. 6 ಸಂಚಾರಿ ನಿಯಮಗಳ ಪೈಕಿ, ಯಾವುದೇ ಒಂದನ್ನು ಉಲ್ಲಂಘಿಸುವ ವಾಹನ ಸವಾರರ ಚಾಲನಾ ಪರವಾನಗಿಯನ್ನು ಮೂರು ತಿಂಗಳುಗಳವರೆಗೆ ನಿರ್ಬಂಧಿಸುವ ಅಧಿಕಾರವನ್ನು ಸರ್ಕಾರ ಆರ್‌ಟಿಓಗೆ ನೀಡಿದೆ.

    ವೇಗದ ಚಾಲನೆ, ಕುಡಿದು ಚಾಲನೆ, ಸಿಗ್ನಲ್ ಜಂಪ್, ಡ್ರೈವ್ ಮಾಡುವಾಗ ಮೊಬೈಲ್ ಬಳಕೆ, ವಾಣಿಜ್ಯ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟ ಮತ್ತು ಓವರ್ ಲೋಡಿಂಗ್ ಸೇರಿದಂತೆ ಒಟ್ಟು 6 ಕಾರಣಗಳಿಗೆ ಲೈಸನ್ಸ್ ರದ್ದು ಮಾಡಲು ಆರ್‌ಟಿಓ ಅಧಿಕಾರ ನೀಡಲಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಹೆದ್ದಾರಿ ವರಿಷ್ಠಾಧಿಕಾರಿ ವಿಜಯ್ ಪಾಟೀಲ್, ಇಂದಿನ ದಿನಗಳಲ್ಲಿ ಹೆಚ್ಚಿನ ಮೊತ್ತದ ದಂಡ ವಿಧಿಸಿದರೂ, ಸಂಚಾರ ನಿಯಮ ಉಲ್ಲಂಘನೆ ತಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಚಾಲಕರ ವಾಹನಾ ಚಾಲನಾ ಪರವಾನಗಿಯನ್ನೇ ನಿಷೇಧಿಸಿದರೆ ಎಚ್ಚರಗೊಂಡು ತಕ್ಕ ಪಾಠ ಕಲಿಯುತ್ತಾರೆಂದು ಕಠಿಣ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

    ಕಳೆದ ವರ್ಷ ಮಹಾರಾಷ್ಟ್ರದಲ್ಲಿ 35,800 ಕ್ಕೂ ಹೆಚ್ಚು ರಸ್ತೆ ಅಪಘಾತಗಳು ವರದಿಯಾಗಿವೆ. ಪರಿಣಾಮವಾಗಿ 12 ಸಾವಿರಕ್ಕೂ ಅಧಿಕ ಸಾವುಗಳು ಸಂಭವಿಸಿವೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯು ರಸ್ತೆ ಅಪಘಾತ ಮತ್ತು ಸಾವುಗಳನ್ನು 10% ರಷ್ಟು ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ಹೀಗಾಗಿ ಮಹಾರಾಷ್ಟ್ರ ಸರ್ಕಾರ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಫುಟ್‍ಪಾತ್ ಮೇಲೆ ಬೈಕ್ ಓಡಿಸುತ್ತಿದ್ದ ಸವಾರರ ಚಳಿ ಬಿಡಿಸಿದ ಬ್ರೇವ್ ಲೇಡಿ

    ಫುಟ್‍ಪಾತ್ ಮೇಲೆ ಬೈಕ್ ಓಡಿಸುತ್ತಿದ್ದ ಸವಾರರ ಚಳಿ ಬಿಡಿಸಿದ ಬ್ರೇವ್ ಲೇಡಿ

    ಬೆಂಗಳೂರು: ನಗರದಲ್ಲಿ ಫುಟ್‍ಪಾತ್ ಮೇಲೆಯೇ ಬೈಕ್ ಓಡಿಸುತ್ತಿದ್ದ ಸವಾರರಿಬ್ಬರ ಚಳಿ ಬಿಡಿಸಿರುವ ಮಹಿಳೆಯೊಬ್ಬರ ವಿಡಿಯೋವೊಂದು ಸಾಮಾಜಿಕ ಜಾಲತಾಣ ವಾಟ್ಸಪ್, ಫೇಸ್‍ಬುಕ್ ನಲ್ಲಿ ವೈರಲ್ ಆಗಿದೆ.

    ಮಂಜು ಥಾಮಸ್ ಎಂಬವರೇ ಸವಾರರಿಗೆ ಚಳಿ ಬಿಡಿಸಿದ ಮಹಿಳೆ. ಶನಿವಾರ ರಾತ್ರಿ ಬೆಂಗಳೂರಿನ ಕಾರ್ಪೋರೇಷನ್ ಬಳಿ ಈ ಘಟನೆ ನಡೆದಿದೆ. ಕೆಎ 51 ಇಎಫ್ 7695 ನಂಬರಿನ ಹೋಂಡಾ ಆಕ್ಟಿವಾದಲ್ಲಿ ಇಬ್ಬರು ಯುವಕರು ಫುಟ್‍ಪಾತ್ ಮೇಲೆಯೇ ತಮ್ಮ ಬೈಕ್ ಚಲಾಯಿಸುತ್ತಿದ್ದರು. ಈ ವೇಳೆ ಯುವಕರನ್ನು ತಡೆದ ಮಂಜು ನಿಮಗೆ ಫುಟ್‍ಪಾತ್ ಯಾವುದು? ರಸ್ತೆ ಯಾವುದು? ಅಂತ ಗೊತ್ತಿಲ್ವಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ವೇಳೆ ಬೈಕ್ ಸವಾರರು ನಾವು ನಿಮ್ಮ ಲೆಕ್ಚರ್ ಕೇಳೋಕೆ ಇಲ್ಲಿ ಬಂದಿಲ್ಲ. ಎಲ್ಲರೂ ಫುಟ್‍ಪಾತ್ ಮೇಲೆಯೇ ಹೋಗ್ತಾ ಇದ್ದಾರೆ ಅಂತಾ ಎದುರುತ್ತರ ನೀಡಿದ್ದಾರೆ. ಒಬ್ಬ ವಿದ್ಯಾವಂತ ನಾಗರಿಕರಾಗಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವುದು ತಪ್ಪಾಗುತ್ತದೆ ಅಂತಾ ತಿಳಿಸಿದ ಕೂಡಲೇ ಬೈಕ್ ಸವಾರರು ಫುಟ್‍ಪಾತ್ ಬಿಟ್ಟು ರಸ್ತೆ ಮೇಲೆ ಹೋಗಿದ್ದಾರೆ.

    ಬೈಕ್ ಸವಾರರು ಫುಟ್‍ಪಾತ್ ನಿಂದ ತೆರಳುತ್ತಿದ್ದಂತೆ ಮಂಜು ಅವರು, ಕದಡಿದ ಟೈಲ್ಸ್ ಗಳನ್ನು ಸರಿಯಾಗಿ ಜೋಡಣೆ ಮಾಡಿ ತೆರಳಿದ್ದಾರೆ. ಮಂಜು ಅವರು ಸವಾರರನ್ನು ತರಾಟೆಗೆ ತೆಗೆದುಕೊಳ್ಳುವ ವಿಡಿಯೋವನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಹೀಗಾಗಿ ಇದೀಗ ಆ ವಿಡಿಯೋ ವೈರಲ್ ಆಗಿದೆ.

    https://youtu.be/X8xPVw2A5wc