Tag: ಟೊಮೆಟೊ ಬೆಳೆ

  • ಪಾತಾಳಕ್ಕೆ ಕುಸಿದ ಟೊಮೆಟೊ ಬೆಲೆ – ಬೇಸತ್ತು ಜಮೀನಿಗೆ ಕುರಿ ಬಿಟ್ಟು ಮೇಯಿಸಿದ ರೈತರು

    ಪಾತಾಳಕ್ಕೆ ಕುಸಿದ ಟೊಮೆಟೊ ಬೆಲೆ – ಬೇಸತ್ತು ಜಮೀನಿಗೆ ಕುರಿ ಬಿಟ್ಟು ಮೇಯಿಸಿದ ರೈತರು

    ರಾಯಚೂರು: ಕೆಲ ತಿಂಗಳ ಹಿಂದೆ ಗಗನಕ್ಕೇರಿದ್ದ ಟೊಮೆಟೊ ಬೆಲೆ (Tomato Price) ಈಗ ಪಾತಾಳಕ್ಕೆ ಕುಸಿದಿದೆ. ಫಸಲಿಗೆ ಖರ್ಚು ಮಾಡಿದಷ್ಟು ಆದಾಯವೂ ಬಾರದ ಹಿನ್ನೆಲೆ ರಾಯಚೂರಿನಲ್ಲಿ ರೈತರು (Raichur Farmers) ಸ್ವತಃ ತಾವು ಬೆಳೆದ ಬೆಳೆಯನ್ನ ತಾವೇ ಹಾಳು ಮಾಡುತ್ತಿದ್ದಾರೆ. ಬರಗಾಲ, ಬೆಲೆ ಇಳಿಕೆಯ ಒತ್ತಡಕ್ಕೆ ಟೊಮೆಟೊ ಬೆಳೆಗಾರರ ಬದುಕು ಬೀದಿಗೆ ಬರುವ ಹಂತಕ್ಕೆ ತಲುಪಿದೆ.

    ರಾಯಚೂರು ಜಿಲ್ಲೆಯಲ್ಲಂತೂ ರೈತರು ಮಾರುಕಟ್ಟೆಗೆ ಟೊಮೆಟೊ (Tomato Crop) ತೆಗೆದುಕೊಂಡು ಹೋದ್ರೆ ಸಾಗಣೆ ಖರ್ಚು ಸಹ ವಾಪಸ್ ಬರುವುದಿಲ್ಲ ಅಂತ ತಮ್ಮ ಬೆಳೆಯನ್ನ ತಾವೇ ನಾಶ ಮಾಡುತ್ತಿದ್ದಾರೆ. ಎಕರೆಗೆ 50 ಸಾವಿರ ರೂ.ನಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈತರು ಟೊಮೆಟೊ ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಕೂಲಿ ಆಳುಗಳಿಗೂ ನೀಡಬೇಕಾದಷ್ಟು ಹಣವೂ ಬರುತ್ತಿಲ್ಲ, ಬೆಳೆದ ಫಸಲಿನೊಂದಿಗೆ ಸಾಲ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇದರಿಂದ ತಾವೇ ಬೆಳೆದ ಬೆಳೆಯನ್ನು ಕುರಿಗಳಿಗೆ ಮೇಯಿಸುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ – ಪ್ರತೀ ಕ್ಷೇತ್ರಕ್ಕೆ ತಲಾ 10 ಕೋಟಿ ಬಿಡುಗಡೆ: ಡಿಕೆಶಿ

    ಮಾರುಕಟ್ಟೆಯಲ್ಲಿ 25 ಕೆಜಿಯ ಒಂದು ಕ್ರೇಟ್‌ 50 ರೂ.ಗೆ ಕೇಳೋರಿಲ್ಲ. ಒಂದು ಕ್ರೇಟ್‌ ಬಾಡಿಗೆ 3 ರೂ. ಇದ್ದರೆ, ರೈತರಿಗೆ ಕೇವಲ 2 ರೂ. ಸಿಗುತ್ತಿದೆ. ಆದ್ರೆ ರೈತರಿಂದ ಕೊಂಡುಕೊಂಡವರು ಕೆಜಿ 20 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಕಷ್ಟ ಪಟ್ಟು ಬೆಳೆ ಬೆಳೆದ ರೈತರಿಗೆ ಮಾತ್ರ ಸಾಲದ ಹೊರೆ ಹೆಚ್ಚಾಗುತ್ತಿದೆ. ಹೀಗಾಗಿ ರೈತರು ಕುರಿಗಳಿಗಾದರೂ ಮೇವಾಗಲಿ ಅಂತ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಯನ್ನ ಮೇವಿಗೆ ಬಿಡುತ್ತಿದ್ದಾರೆ. ಇದನ್ನೂ ಓದಿ: ಶಿವರಾತ್ರಿ ದಿನ ಮತ್ತೆ ರಾಮೇಶ್ವರಂ ಕೆಫೆ ತೆರೆಯುತ್ತೇವೆ: ಮಾಲೀಕ ರಾಘವೇಂದ್ರ ರಾವ್‌

    ಬೆಲೆ ಕುಸಿತ ಒಂದು ಕಡೆಯಾದ್ರೆ ಬರಗಾಲದಿಂದ ನೀರಿನ ಕೊರತೆ ಎದುರಾಗಿದ್ದು ಬೆಳೆಗೆ ರೋಗ ಭಾದೆಯೂ ಕಾಡುತ್ತಿದೆ. ಇದರಿಂದ ಬೇಸತ್ತ ರಾಯಚೂರು ತಾಲೂಕಿನ ಕಡಗಂದೊಡ್ಡಿ, ಚಂದ್ರಬಂಡ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ಗುಳೆ ಹೊರಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 3 ದಿನದ ಒಳಗಡೆ ಜನತೆ ಮುಂದೆ ಕ್ಷಮೆ ಕೇಳಿ – ಖರ್ಗೆಗೆ ಗಡ್ಕರಿ ಲೀಗಲ್‌ ನೋಟಿಸ್‌

  • 20 ಗುಂಟೆ ಜಮೀನಿನಲ್ಲಿ ಟೊಮೆಟೋ ಬೆಳೆದು ಲಕ್ಷ ಲಕ್ಷ ಸಂಪಾದಿಸಿದ ಯುವ ರೈತ

    20 ಗುಂಟೆ ಜಮೀನಿನಲ್ಲಿ ಟೊಮೆಟೋ ಬೆಳೆದು ಲಕ್ಷ ಲಕ್ಷ ಸಂಪಾದಿಸಿದ ಯುವ ರೈತ

    ಚಿಕ್ಕೋಡಿ: ಕಳೆದ ಒಂದು ತಿಂಗಳಿನಿಂದ ಈಚೆಗೆ ಟೊಮೆಟೋ ಬೆಳೆಗಾರರು ಬಂಗಾರದ ಬೆಳೆ ತೆಗೆದಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಕಂಡಾಗ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬೀಳುತ್ತಿದ್ದ ಕೆಂಪು ಸುಂದರಿ ಟೊಮೆಟೋಗೆ (Tomato Crop) ಬೇಡಿಕೆಯೂ ಹೆಚ್ಚಾಗಿದ್ದು, ರೈತರು (Farmers) ಲಕ್ಷ ಲಕ್ಷ ಹಣ ಸಂಪಾದಿಸುತ್ತಿದ್ದಾರೆ. ಅದೇ ರೀತಿ ಬೆಳಗಾವಿಯ ಯುವ ರೈತ ಕೇವಲ 20 ಗುಂಟೆ ಜಮೀನಿನಲ್ಲಿ ಟೊಮೆಟೋ ಬೆಳೆದು ಲಕ್ಷ ಲಕ್ಷ ಹಣ ಸಂಪಾದಿಸಿದ್ದಾರೆ.

    ಹೌದು. ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೆಬ್ಬಾಳ ಗ್ರಾಮದ ಯುವ ರೈತ ಮಹೇಶ್ ಹಿರೇಮಠ ಅವರು ಕಳೆದ 4 ವರ್ಷಗಳಿಂದ ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. 4 ಎಕರೆ ಜಮೀನು ಹೊಂದಿರುವ ಮಹೇಶ್‌ ಎರಡು ಎಕರೆಯಲ್ಲಿ ಕಬ್ಬು‌, ಉಳಿದ ಎರಡು ಎಕರೆ ಭೂಮಿಯಲ್ಲಿ ತರಕಾರಿ ಬೆಳೆ ಬೆಳೆದಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಫ್ಲೈಓವರ್‌ನಲ್ಲೇ ಸ್ಕೂಟರ್ ಅಡ್ಡಗಟ್ಟಿ 1.70 ಕೋಟಿ ರೂ. ಮೌಲ್ಯದ ಚಿನ್ನ ದರೋಡೆ

    ಈ ಪೈಕಿ ಕೇವಲ 20 ಗುಂಟೆಯಲ್ಲಿ ಟೊಮೆಟೋ ಬೆಳೆದಿದ್ದಾರೆ. ಜಮೀನಿನಲ್ಲಿ 3,700 ಸಸಿ ನಾಟಿ ಮಾಡಿ ಕಳೆದ 45 ದಿನಗಳಿಂದ ಟೊಮೆಟೋ ಕೊಯ್ಲು ಆರಂಭಿಸಿದ್ದಾರೆ. 20 ಗುಂಟೆಯಲ್ಲಿ ಬರೋಬ್ಬರಿ 20 ಟನ್‌ 400 ಕೆಜಿಯಷ್ಟು ಟೊಮೆಟೋ ಇಳುವರಿ ತೆಗೆದು ಈವರೆಗೆ 11 ಲಕ್ಷ ರೂ. ಸಪಾಂದಿಸಿದ್ದಾರೆ. ಪ್ರತಿದಿನ 20 ಕೆಜಿ ತೂಕದ ಕ್ಯಾರಿಬ್ಯಾಗ್‌ನಲ್ಲಿ 120 ಬ್ಯಾಗ್‌ಗಳನ್ನು ಮಾರುಕಟ್ಟೆಗೆ ಸಾಗಿಸುತ್ತಿದ್ದ ಮಹೇಶ್‌ ಕೆಲವೇ ದಿನಗಳಲ್ಲಿ 11 ಲಕ್ಷ ರೂ. ಸಂಪಾದಿಸಿದ್ದಾರೆ. ಮಹೇಶ್‌ ಟೊಮೆಟೊ ಫಸಲು ತೆಗೆಯಲು 2 ಲಕ್ಷ ರೂ. ಖರ್ಚು ಮಾಡಿದ್ದು, ಬರೋಬ್ಬರಿ 9 ಲಕ್ಷ ರೂ. ಲಾಭ ಗಳಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಯಿಂದ ಕಿರುಕುಳ ಆರೋಪ – ಎಸ್ಪಿ ಕಚೇರಿಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    ಈ ಸಂತಸವನ್ನ ʻಪಬ್ಲಿಕ್‌ ಟಿವಿʼ ಜೊತೆಗೆ ಹಂಚಿಕೊಂಡಿರುವ ಮಹೇಶ್‌, ಕಳೆದ ಮಾರ್ಚ್‌ ತಿಂಗಳಿನಲ್ಲಿ 20 ಗುಂಟೆ ಪ್ಲಾಂಟ್‌ನಲ್ಲಿ 3,700 ಟೊಮೆಟೊ ಸಸಿ ನಾಟಿ ಮಾಡಲಾಗಿತ್ತು. ನಾಟಿ ಮಾಡೋದಕ್ಕೂ ಮುನ್ನ ಪೂರ್ವಭಾವಿಯಾಗಿ ಮಣ್ಣು ಪರೀಕ್ಷೆ ಮಾಡಿ, ಅದಕ್ಕೆ ಬೇಕಾದಂತಹ ಗೊಬ್ಬರ ಹಾಗೂ ಕೀಟ ನಾಶಕ ಸಿಂಪಡಣೆ ಮಾಡಿದ್ವಿ. ಮುಂಚಿತವಾಗಿಯೇ ಸಸಿಗಳಿಗೆ ಬರಬಹುದಾದ ವಿವಿಧ ರೋಗಗಳ ಬಗ್ಗೆಯೂ ಕ್ರಮ ಕೈಗೊಂಡಿದ್ದೆವು. ಹಾಗಾಗಿ ಪ್ರತಿ ಗಿಡದಲ್ಲಿ 6 ರಿಂದ 7 ಕೆಜಿ ಇಳುವರಿ ಬಂದಿದೆ. ಈಗಾಗಲೇ 20 ಟನ್‌ಗೂ ಹೆಚ್ಚು ಟೊಮೆಟೊ ಕೊಯ್ಲು ಮಾಡಿದ್ದು, ಇನ್ನೂ 2 ಟನ್‌ ಇಳುವರಿ ಸಿಗುತ್ತೆ ಎಂದು ಹೇಳಿದ್ದಾರೆ.

    ಟೊಮೆಟೋ ಬೆಳೆಗೆ ಎಲ್ಲ ಕಡೆಯಿಂದಲೂ ಬೇಡಿಕೆಯಿದ್ದು, ಯುವ ರೈತ ಮಹೇಶ್‌ ಇನ್ನೂ ಹೆಚ್ಚಿನ ಲಾಭದ ನಿರೀಕ್ಷೆಯಲ್ಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]