Tag: ಟೆಸ್ಟ್ ಟೂರ್ನಿ

  • ಬಾರ್ಡರ್ – ಗವಾಸ್ಕರ್ ಟೂರ್ನಿಯ ಟಾಪ್ 5 ಕ್ಯಾಚ್ – ವಿಡಿಯೋ

    ಬಾರ್ಡರ್ – ಗವಾಸ್ಕರ್ ಟೂರ್ನಿಯ ಟಾಪ್ 5 ಕ್ಯಾಚ್ – ವಿಡಿಯೋ

    ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಇತಿಹಾಸ ಸೃಷ್ಟಿ ಮಾಡಿದೆ. ಇದೇ ವೇಳೆ ನಾಯಕ ವಿರಾಟ್ ಕೊಹ್ಲಿ ಸರಣಿ ಗೆಲುವಿಗೆ ತಂಡದ ಆಟಗಾರ ಸಂಘಟಿತ ಹೋರಾಟ ಕಾರಣ ಎಂದು ತಿಳಿಸಿದ್ದು, ಈ ಸರಣಿಯಲ್ಲಿ ದಾಖಲಾದ ಐದು ಅತ್ಯುತ್ತಮ ಕ್ಯಾಚ್ ಗಳ ಮಾಹಿತಿ ಇಲ್ಲಿದೆ.

    ರಹಾನೆ: ಟೀಂ ಇಂಡಿಯಾ ಉಪ ನಾಯಕ ಸಿಡ್ನಿ ಟೆಸ್ಟ್ ಪಂದ್ಯ ವೇಳೆ ಮೊದಲ ಇನ್ನಿಂಗ್ಸ್ ನ ಶಮಿ ಎಸೆದ 52ನೇ ಓವರಿನ ನಾಲ್ಕನೇಯ ಎಸೆತದಲ್ಲಿ ಮಾರ್ನಸ್ ಲ್ಯಾಬುಶಾನೆ ಕ್ಯಾಚ್ ಪಡೆದು ಗಮನ ಸೆಳೆದರು. ಶಾರ್ಟ್ ಮಿಡ್ ವಿಕೆಟ್‍ನತ್ತ ಸಿಡಿದ ಚೆಂಡನ್ನು ರಹಾನೆ ಅತ್ಯುತ್ತಮವಾಗಿ ಕ್ಯಾಚ್ ಹಿಡಿದು ಆಸ್ಟ್ರೇಲಿಯಾದ ಹಿನ್ನಡೆಗೆ ಕಾರಣರಾಗಿದ್ದರು. ಈ ವೇಳೆ 38 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಮಾರ್ನಸ್ ಲ್ಯಾಬುಶಾನೆ ಪೆವಿಲಿಯನ್ ಸೇರಿದರು.

    ಮಯಾಂಕ್ ಅಗರ್ವಾಲ್: ಆಸೀಸ್ ಟೆಸ್ಟ್ ಸರಣಿಗೆ ಆಯ್ಕೆ ಆಗಿ ಉತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಫೀಲ್ಡಿಂಗ್‍ನಲ್ಲೂ ಕಮಲ್ ಮಾಡಿದ್ದರು. 3ನೇ ಟೆಸ್ಟ್ ಪಂದ್ಯದ ಆಸೀಸ್ ಇನ್ನಿಂಗ್ಸ್ ವೇಳೆ 11ನೇ ಓವರ್ ಎಸೆದಿದ್ದ ಇಶಾಂತ್ ಶರ್ಮಾ ಬೌಲಿಂಗ್ ನಲ್ಲಿ 8 ರನ್ ಗಳಿಸಿದ್ದ ಫಿಂಚ್, ಶಾರ್ಟ್ ಮಿಡ್‍ವಿಕೆಟ್ ನತ್ತ ಸಿಡಿಸಿದ್ದ ಚೆಂಡನ್ನು ಮಯಾಂಕ್ ಡೈವ್ ಮಾಡಿ ಕ್ಯಾಚ್ ಪಡೆದಿದ್ದರು.

    https://twitter.com/telegraph_sport/status/1078441138674167809?

    ವಿರಾಟ್ ಕೊಹ್ಲಿ: ಟೆಸ್ಟ್ ಸರಣಿಯ ಉದ್ದಕ್ಕೂ ಆಕ್ರಮಣಕಾರಿ ಪ್ರವೃತ್ತಿಯಿಂದೇ ಆಸೀಸ್ ವಿರುದ್ಧ ಸವಾರಿ ಮಾಡಿದ್ದ ನಾಯಕ ವಿರಾಟ್ ಕೊಹ್ಲಿ, 2ನೇ ಟೆಸ್ಟ್ ಪಂದ್ಯದ ವೇಳೆ ಹ್ಯಾಡ್ಸ್‍ಕಾಂಬ್ ಕ್ಯಾಚ್ ಪಡೆದು ಮಿಂಚಿದ್ದರು. ಪಂದ್ಯದ ಮೊದಲ ಇನ್ನಿಂಗ್ಸ್ ನ ಇಶಾಂತ್ ಶರ್ಮಾ ಎಸೆದ 54ನೇ ಓವರ್ ನಲ್ಲಿ 7 ರನ್ ಗಳಿಸಿದ್ದ ಹ್ಯಾಡ್ಸ್ ಕಾಂಬ್ ಸ್ಲಿಪ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ್ದರು.

    ಹ್ಯಾಂಡ್ಸ್ ಕಾಂಬ್: ಯುವ ವಿಕೆಟ್ ಕೀಪರ್ ರಿಷಬ್ ಪಂತ್ 2ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ನಾಥನ್ ಲಯನ್ ಬ್ಯಾಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ್ದರು. 54ನೇ ಓವರ್ ನ 3ನೇ ಎಸೆತದಲ್ಲಿ ನಾಥನ್ ಲಯನ್ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದ ಪಂತ್‍ರನ್ನು ಹ್ಯಾಂಡ್ಸ್ ಕಾಂಬ್ ಉತ್ತಮವಾಗಿ ಕ್ಯಾಚ್ ಹಿಡಿದು ಔಟ್ ಮಾಡಿಸಿದರು.

    ಖವಾಜಾ: ಟೆಸ್ಟ್ ಸರಣಿ ಆರಂಭಕ್ಕೂ ಮುನ್ನವೇ ನಾಯಕ ವಿರಾಟ್ ಕೊಹ್ಲಿ ಅವರನ್ನು ಕಟ್ಟಿ ಹಾಕಲು ಪ್ರಯತ್ನಿಸಿದ್ದ ಆಸೀಸ್ ಬೌಲರ್ ಗಳು ಕೊಹ್ಲಿ ವಿಕೆಟ್ ಪಡೆಯಲು ಪೈಪೋಟಿ ನಡೆಸಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ವಿಕೆಟ್ ಪಡೆದ ಕಮ್ಮಿನ್ಸ್ ಸಾಧನೆಗೆ ಗಲ್ಲಿಯಲ್ಲಿ ನಿಂತಿದ್ದ ಖವಾಜಾ ಕಾರಣರಾಗಿದ್ದರು. 10ನೇ ಓವರ್ ನ 3ನೇ ಎಸೆತದಲ್ಲಿ ಡ್ರೈವ್ ಮಾಡಲು ಕೊಹ್ಲಿ ಯತ್ನಿಸುತ್ತಿದ್ದಂತೆ ಸಿಡಿದ ಚೆಂಡನ್ನು ಖವಾಜಾ ಒಂದೇ ಕೈಯಲ್ಲಿ ಹಿಡಿದಿದ್ದರು.

    ಸರಣಿಯಲ್ಲಿ ಟೀಂ ಇಂಡಿಯಾ ತಂಡವನ್ನು ಆಕ್ರಮಣಕಾರಿಯಾಗಿ ಮುನ್ನಡೆಸಿದ್ದ ಕೊಹ್ಲಿ ಫಿಲ್ಡಿಂಗ್ ನಲ್ಲೂ ಇದೇ ತಂತ್ರವನ್ನು ಬಳಸಿದ್ದರು. ಎದುರಾಳಿ ಆಟಗಾರರಿಗೆ ಬ್ಯಾಟ್ ಬೀಸಲು ಅವಕಾಶ ನೀಡಿ ಕ್ಯಾಚ್ ಆಗುವಂತಹ ಸನ್ನಿವೇಶ ಸೃಷ್ಟಿಸಿ ವಿಕೆಟ್ ಪಡೆಯುತ್ತಿದ್ದರು. ಹಲವು ಬಾರಿ ಪಂದ್ಯದ ನಡುವೆ ಕೊಹ್ಲಿ ಫಿಲ್ಡಿಂಗ್ ನಲ್ಲಿ ಮಾಡಿದ್ದ ಬದಲಾವಣೆಗಳು ತಂಡಕ್ಕೆ ವರವಾಗಿ ಪರಿಣಮಿಸಿದ್ದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟೀಂ ಇಂಡಿಯಾ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿಸಿ: ಚೇತನ್ ಚೌಹಾಣ್

    ಟೀಂ ಇಂಡಿಯಾ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿಸಿ: ಚೇತನ್ ಚೌಹಾಣ್

    ಮುಂಬೈ: ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಗೆಲುವು ಸಾಧಿಸಿದರೂ ರವಿಶಾಸ್ತ್ರಿ ಅವರನ್ನು ಕೋಚ್ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಅಭಿಯಾನ ಇಂದು ಮತ್ತೆ ಜೀವ ಪಡೆದಿದೆ. ಒಂದು ಹಂತದಲ್ಲಿ ಇಂದು #ಸ್ಯಾಕ್_ರವಿಶಾಸ್ತ್ರಿ ಹ್ಯಾಷ್‍ಟ್ಯಾಗ್ ಟ್ರೆಂಡ್ ಆಗಿತ್ತು. ಈ ನಡುವೆಯೇ ಟೀಂ ಇಂಡಿಯಾದ ಮಾಜಿ ಆಟಗಾರ ಚೇತನ್ ಚೌಹಾಣ್ ರವಿಶಾಸ್ತ್ರಿ ಕೋಚಿಂಗ್ ಕೆಲಸ ಸಾಕು, ಅವರಿಗೆ ಕಮೆಂಟ್ರಿಯೇ ಬೆಟರ್ ಎಂಬ ಸಲಹೆ ನೀಡಿದ್ದಾರೆ.

    ಈಗಷ್ಟೇ ಅಂತ್ಯವಾದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 1-4 ಅಂತರದಲ್ಲಿ ಸೋಲುಂಡ ಬಳಿಕ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿಯನ್ನು ಸೋಲಿನ ಹೊಣೆ ಮಾಡಿ ಕೋಚ್ ಸ್ಥಾನದಿಂದ ಕೆಳಗಿಳಿಸುವಂತೆ ಹಲವರು ಆಗ್ರಹಿಸಿದ್ದರು. ಸದ್ಯ ಟೀಂ ಇಂಡಿಯಾ ಮಾಜಿ ಆಟಗಾರ ಚೇತನ್ ಚೌಹಾಣ್ ಕೂಡ ತಂಡದ ಸೋಲಿಗೆ ರವಿಶಾಸ್ತ್ರಿ ಕಾರಣವಾಗಿದ್ದು, ಮುಂದಿನ ಆಸ್ಟ್ರೇಲಿಯಾ ವಿರುದ್ಧ ಸರಣಿಗೂ ಮುನ್ನ ರವಿಶಾಸ್ತ್ರಿಯನ್ನು ತಂಡದಿಂದ ಕೈಬಿಡುವಂತೆ ಹೇಳಿದ್ದಾರೆ.

    https://twitter.com/Bhuklagiheyaar/status/1042774411013705728

    ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್ ಬಳಿಕ ಚೌಹಾಣ್ ಅವರು ರವಿಶಾಸ್ತ್ರಿ ಕೋಚ್ ಹುದ್ದೆ ತ್ಯಜಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಚೌಹಾಣ್, ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಟೀಂ ಇಂಡಿಯಾ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ಅಗತ್ಯವಿದೆ. ಆಗ ಎರಡು ತಂಡಗಳು ಸಮರ್ಥವಾಗಿ ಪೈಪೋಟಿ ನಡೆಸಲಿವೆ. ಆದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ತನ್ನ ವೈಫಲ್ಯಗಳನ್ನು ಅರಿತುಕೊಳ್ಳಲು ವಿಫಲವಾಗಿದೆ. ಇದಕ್ಕೆ ನೇರ ಕಾರಣ ಕೋಚ್ ರವಿಶಾಸ್ತ್ರಿ. ಅದ್ದರಿಂದ ಮುಂದಿನ ಟೂರ್ನಿ ಆರಂಭಕ್ಕೂ ಮೊದಲು ಅವರನ್ನು ಕೋಚ್ ಹುದ್ದೆಯಿಂದ ತೆಗೆಯುವುದು ಸೂಕ್ತ ಎಂದು ತಿಳಿಸಿದ್ದಾರೆ.

    https://twitter.com/Amit_smiling/status/1028647401375105025?

    ಇದೇ ವೇಳೆ ರವಿಶಾಸ್ತ್ರಿ ಉತ್ತಮ ವೀಕ್ಷಕ ವಿವರಣೆ ನೀಡಬಲ್ಲರು ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಚೌಹಾಣ್, ರವಿಶಾಸ್ತ್ರಿ ಅವರಿಗೆ ಆ ಹುದ್ದೆ ನೀಡಿದರೆ ಉತ್ತಮ ಎಂದು ತಿಳಿಸಿದ್ದಾರೆ. ಅಲ್ಲದೇ 1980ರ ದಶಕ ಬಳಿಕ ಸದ್ಯದ ಟೀಂ ಇಂಡಿಯಾ ಅತ್ಯುತ್ತಮ ತಂಡ ಎಂಬ ರವಿಶಾಸ್ತ್ರಿ ಹೇಳಿಕೆಯನ್ನು ತಾನು ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

    ಚೇತನ್ ಚೌಹಾಣ್ ಹಿನ್ನೆಲೆ: 1969ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಚೇತನ್ ಚೌಹಾಣ್ ಪಾದಾರ್ಪಣೆ ಮಾಡಿದ್ದರು. ಟೀಂ ಇಂಡಿಯಾದಲ್ಲಿ 1969 ರಿಂದ 1981 ಅವಧಿಯಲ್ಲಿ ಸ್ಥಾನ ಪಡೆದಿದ್ದರು. ಒಟ್ಟಾರೆ ಚೌಹಾಣ್ 40 ಟೆಸ್ಟ್ ಪಂದ್ಯ ಆಡಿ 2,084 ರನ್ ಗಳಿಸಿದ್ದಾರೆ. 1981 ರಲ್ಲಿ ನ್ಯೂಜಿಲೆಂಡ್ ವಿರುದ್ಧವೇ ಅಂತಿಮ ಟೆಸ್ಟ್ ಪಂದ್ಯವನ್ನಾಡಿದ್ದರು. ಉಳಿದಂತೆ 7 ಅಂತರಾಷ್ಟ್ರೀಯ ಏಕದಿನ ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮುಖ್ಯವಾಗಿ ಟೀಂ ಇಂಡಿಯಾ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರೊಂದಿಗೆ ಆರಂಭಿಕರಾಗಿ ಕಣಕ್ಕೆ ಇಳಿಯುತ್ತಿದ್ದರು.

    ಇದೇ ವೇಳೆ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲೂ ಸ್ಯಾಕ್ ರವಿಶಾಸ್ತ್ರಿ ಹ್ಯಾಷ್‍ಟ್ಯಾಗ್ ಅಭಿಯಾನ ಆರಂಭವಾಗಿದೆ. ರವಿಶಾಸ್ತ್ರಿ ಅವರನ್ನು ಟೀಂ ಇಂಡಿಯಾ ಕೋಚ್ ಸ್ಥಾನದಿಂದ ಪದಚ್ಯುತಗೊಳಿಸುವಂತೆ ಟ್ವೀಟಿಗರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

    https://twitter.com/Dhruv1607/status/1027983938214658049?

    https://twitter.com/imkrishnendu92/status/1042791215945547776

  • ಮೊದಲ ಟೆಸ್ಟ್‌ಗೆ ಆರಂಭಿಕನಾಗಿ ಕೆಎಲ್ ರಾಹುಲ್ ಕಣಕ್ಕಿಳಿಯಲಿ : ಗಂಗೂಲಿ

    ಮೊದಲ ಟೆಸ್ಟ್‌ಗೆ ಆರಂಭಿಕನಾಗಿ ಕೆಎಲ್ ರಾಹುಲ್ ಕಣಕ್ಕಿಳಿಯಲಿ : ಗಂಗೂಲಿ

    ನವದೆಹಲಿ: ಬಹುನಿರೀಕ್ಷಿತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮುರಳಿ ವಿಜಯ್ ಜೊತೆ ಕೆಎಲ್ ರಾಹುಲ್ ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕೆ ಇಳಿಯಬೇಕೆಂದು ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

    ಸದ್ಯ ತಂಡದ ಆರಂಭಿಕರಾಗಿರುವ ಶಿಖರ್ ಧವನ್ ಏಕದಿನ ಮಾದರಿಗೆ ಹೆಚ್ಚು ಸೂಕ್ತವಾಗಿದ್ದು, ಟೆಸ್ಟ್ ನಲ್ಲಿ ಉತ್ತಮ ದಾಖಲೆಯನ್ನು ಹೊಂದಿಲ್ಲ. ಈ ಹಿಂದಿನ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಹಾಗೂ ಇಂಗ್ಲೆಂಡ್ ವಿರುದ್ಧದ ಟೂರ್ನಿಗಳಲ್ಲಿ ಧವನ್ ಸಾಕಷ್ಟು ಹೆಣಗಾಡಿದ್ದಾರೆ. ಅದ್ದರಿಂದ ನಾನು ಇಂಗ್ಲೆಂಡ್ ಟೆಸ್ಟ್ ಸರಣಿಯ ಆರಂಭಿಕರಾಗಿ ಮುರಳಿ ವಿಜಯ್, ಕೆಎಲ್ ರಾಹುಲ್ ಜೋಡಿಯನ್ನು ಆಯ್ಕೆ ಮಾಡುತ್ತೇನೆ ಎಂದಿದ್ದಾರೆ.

    ಶಿಖರ್ ಧವನ್ ತವರಿನಲ್ಲಿ ಆಡಿರುವ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಸದ್ಯ ತಂಡದ ಆಡಳಿತ ಮಂಡಳಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಗಂಗೂಲಿ ಹೇಳಿದರು.

    ಸದ್ಯ ಮಾಧ್ಯಮ ಕ್ರಮಾಂಕದಲ್ಲಿಯೂ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿರುವುದರಿಂದ ಚೇತೇಶ್ವರ ಪೂಜಾರ ಸ್ಥಾನದಲ್ಲಿ ರಾಹುಲ್‍ರನ್ನು ಕಣಕ್ಕೆ ಇಳಿಸಬೇಕೆಂಬ ಚರ್ಚೆ ಕ್ರಿಕೆಟ್ ವಿಮರ್ಶಕರಿಂದ ಕೇಳಿಬಂದಿದೆ. ಈ ಕುರಿತು ಖಾಸಗಿ ಮಾಧ್ಯಮದೊಂದಿಗೆ ಶುಕ್ರವಾರ ತಮ್ಮ ಅಭಿಪ್ರಾಯ ಹಂಚಿಕೊಂಡ ಇಂಗ್ಲೆಂಡ್ ತಂಡದ ಮಾಜಿ ವೇಗಿ ಡ್ಯಾರೆನ್ ಗಫ್ ಇತ್ತೀಚಿನ ಪ್ರದರ್ಶನಗಳನ್ನು ಅವಲೋಕಿಸಿದರೆ ಪೂಜಾರ ಆಡುವ 11ರ ಬಳಗಕ್ಕೆ ಫಿಟ್ ಎಂದು ಕಾಣುತ್ತಿಲ್ಲ. ಈ ಸ್ಥಾನದಲ್ಲಿ ರಾಹುಲ್‍ಗೆ ಅವಕಾಶ ನೀಡುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    ಚೇತೇಶ್ವರ ಪೂಜಾರ ಟೆಸ್ಟ್ ಕ್ರಿಕೆಟ್‍ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದು, 50.34 ರ ಸರಾಸರಿ ಯಲ್ಲಿ 4,531 ರನ್ ಗಳಿಸಿದ್ದಾರೆ. ಆದರೆ ಇತ್ತೀಚೆಗೆ ಅವರು ಭಾಗವಹಿಸಿದ್ದ ಕೌಟಿ ಚಾಂಪಿಯನ್ ಶಿಪ್ ನಲ್ಲಿ 14.33 ಸರಾಸರಿಯಲ್ಲಿ ಕೇವಲ 172 ರನ್ ಮಾತ್ರ ಗಳಿಸಿ ನಿರಾಸೆ ಮೂಡಿಸಿದ್ದರು.

    ಕೆಎಲ್ ರಾಹುಲ್ ಎಸ್ಸೆಕ್ಸ್ ತಂಡ ವಿರುದ್ಧ ನಡೆದ ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 58 ರನ್ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದು ಅಜೇಯ 36 ರನ್ ಗಳಿಸಿ ಭರವಸೆ ಮೂಡಿಸಿದ್ದರು.