Tag: ಟೆಲಿಕಾಂ ಲೇಔಟ್

  • ನಟಿ ನಿರೂಷಾ ಅವರ ನಾಯಿಯನ್ನು ವಾಪಸ್ಸು ಬಿಟ್ಟು ಹೋದ ಕಳ್ಳರು

    ನಟಿ ನಿರೂಷಾ ಅವರ ನಾಯಿಯನ್ನು ವಾಪಸ್ಸು ಬಿಟ್ಟು ಹೋದ ಕಳ್ಳರು

    ನ್ನಡದ ನಟಿ ನಿರೂಷಾ ಅವರ ಮುದ್ದಿನ ನಾಯಿಯನ್ನು ಎರಡು ದಿನಗಳ ಹಿಂದೆ ಕಳ್ಳರು ಕದ್ದೊಯ್ದಿದ್ದರು. ತಮ್ಮ ನಾಯಿ ಕಳ್ಳತನವಾಗಿದೆ ಎಂದು ತಿಳಿಯುತ್ತಿದ್ದಂತೆಯೇ ನಿರೂಷಾ ಅಕ್ಷರಶಃ ಕಣ್ಣೀರು ಹಾಕಿದ್ದರು. ತಮ್ಮ ನಾಯಿ ಕಳ್ಳತನವಾಗಿದೆ, ಕಳ್ಳರನ್ನು ಹುಡುಕಿ ಕೊಡಿ ಎಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು.

    ನೆಚ್ಚಿನ ನಾಯಿಗಾಗಿ ನಿರೂಷಾ ಹಾಕಿದ ಕಣ್ಣೀರು, ಎಲ್ಲರ ಮನಸ್ಸು ಕಲುಕಿತ್ತು. ಯಾರಾದರೂ, ಅವರ ನಾಯಿಯನ್ನು ಕಂಡರೆ ಅವರಿಗೆ ಮಾಹಿತಿ ಕೊಡಿ ಎಂದು ಅದೆಷ್ಟೋ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ಆ ವಿಡಿಯೋವನ್ನು ಹಂಚಿಕೊಂಡಿದ್ದರು. ಕೊನೆಗೂ ಅವರ ಕಣ್ಣೀರು ಫಲಕೊಟ್ಟಿದೆ. ಇದೀಗ ತಮ್ಮ ನಾಯಿ ಸಿಕ್ಕಿರುವುದಾಗಿ ನಿರೂಷಾ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದು ಹೇಗೆ ಸಿಕ್ಕಿತು ಎನ್ನುವ ಕುರಿತು ಅವರು ಹೇಳಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್ ಅವರನ್ನು ವಿಶ್ವದ ಬಾಕ್ಸ್ ಆಫೀಸಿಗೆ ಹೋಲಿಸಿದ ಉಪೇಂದ್ರ

    ನಿರೂಷಾ ನಾಯಿ ಸುಂಕದಕಟ್ಟೆ ಟೆಲಿಕಾಂ ಲೇಔಟ್ ನಿಂದ ಕಳ್ಳತನವಾಗಿತ್ತು. ಕಳ್ಳರು ಅವರ ಮನೆಯ ಸಮೀಪದಲ್ಲೇ ಇರುವ ಗಣೇಶ್ ದೇವಸ್ಥಾನ ಬಳಿ ನಾಯಿಯನ್ನು ತಂದುಬಿಟ್ಟು, ಅವರ ತಾಯಿಗೆ ಕಾಲ್ ಮಾಡಿ ಹೇಳಿದ್ದಾರಂತೆ. ಆ ಅಪರಿಚಿತ ಕರೆಯಿಂದ ಬಂದ ಸಿಹಿ ಸುದ್ದಿಯು ನಿರೂಷಾಗೂ ತಲುಪಿ, ನೆಮ್ಮದಿಯ ನಿಟ್ಟುಸಿರು ಇಟ್ಟಿದ್ದಾರೆ. ತಮ್ಮ ನಾಯಿ ಕೊನೆಗೂ ಸಿಕ್ಕಿರುವ ಖುಷಿಯನ್ನು ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಡಿಯೋ: ರಾಜಕಾಲುವೆ ಕಟ್ಟೋಕೆ ಹೋಗಿ ಮನೆಗಳಲ್ಲಿ ಬಿರುಕು- ಬಿಬಿಎಂಪಿ ಎಡವಟ್ಟಿಗೆ ಜನರ ಪರದಾಟ

    ವಿಡಿಯೋ: ರಾಜಕಾಲುವೆ ಕಟ್ಟೋಕೆ ಹೋಗಿ ಮನೆಗಳಲ್ಲಿ ಬಿರುಕು- ಬಿಬಿಎಂಪಿ ಎಡವಟ್ಟಿಗೆ ಜನರ ಪರದಾಟ

    ಬೆಂಗಳೂರು: ಮಧ್ಯರಾತ್ರಿ ಸಮಯ ಬೆಂಗಳೂರು ವಿಜಯನಗರದ ಟೆಲಿಕಾಂ ಲೇಔಟ್ ಜನ ಸವಿನಿದ್ದೆಯಲ್ಲಿದ್ರು. ಆದ್ರೆ ಇದ್ದಕ್ಕಿದ್ದ ಹಾಗೆ ಭೂಮಿ ಕಂಪಿಸಿದಂತೆ ಭಾಸವಾಗಿದೆ. ಮನೆಗಳು, ರಸ್ತೆ ಬಿರುಕು ಬಿಟ್ಟಂತೆ ಆಗಿದೆ. ಇದು ಬಿಬಿಎಂಪಿ ಸೃಷ್ಟಿಸಿದ ಕೃತಕ ಭೂಕಂಪನದ ಕಂಪನ.

    ಬಿರುಕು ಬಿಟ್ಟ ರಸ್ತೆ, ಇನ್ನೇನು ಕುಸಿದು ಬಿದ್ದೇ ಬಿಡುತ್ತೆ ಅಂತಾ ಭಯ ಮೂಡಿಸೋ ಕ್ರ್ಯಾಕ್, ರಸೆ-ಮನೆ ಎಲ್ಲ ಕಡೆಯೂ ಬಿರುಕು. ಹಾಗಂತ ಇಲ್ಲಿ ಭೂಕಂಪವಾಗಿಲ್ಲ. ಇದು ವಿಜಯನಗರದ ಟೆಲಿಕಾಂ ಲೇಔಟ್‍ನಲ್ಲಿ ಬಿಬಿಎಂಪಿ ಸೃಷ್ಟಿಸಿದ ಭೂಕಂಪ. ಈ ಮನೆಗಳ ಹಿಂದಿನ ರಸ್ತೆಯಲ್ಲಿ ರಾಜಕಾಲುವೆ ಹರಿದು ಹೋಗುತ್ತೆ. ಮಳೆ ಬಂದಾಗ ಎಡವಟ್ಟಾಗುತ್ತೆ ಅಂತಾ ತಡೆಗೋಡೆ ನಿರ್ಮಾಣಕ್ಕೆ ಬಿಬಿಎಂಪಿ ಮುಂದಾಗಿದೆ. ಅಲ್ಲಿರುವ ಮನೆಗಳನ್ನು ಸ್ಥಳಾಂತರ ಮಾಡದೇ ಏಕಾಏಕಿ ಜೆಸಿಬಿಯಲ್ಲಿ ಇಪ್ಪತ್ತು ಅಡಿ ಭೂಮಿ ಕೊರೆದು ಕಾಂಕ್ರಿಟ್ ವಾಲ್ ಮಾಡಿದೆ. ಇದರ ಪರಿಣಾಮ ಹದಿನೈದು ಮನೆಗಳು ಬಿರುಕು ಬಿಟ್ಟು ಕುಸಿಯುವ ಹಂತದಲ್ಲಿವೆ.

    ರಾತ್ರಿ ವೇಳೆ ಮನೆಯಿಂದ ಹೊರಗೆ ಓಡಿ ಬಂದ ಜನ ಬೀದಿಯಲ್ಲಿಯೇ ನಿಂತ್ರು. ಬಿಬಿಎಂಪಿ ಎಡವಟ್ಟಿಗೆ ಹಿಡಿಶಾಪ ಹಾಕಿದ್ರು. ಮನೆಯೆಲ್ಲಾ ಬಿರುಕು ಬಿಟ್ಟ ಮೇಲೆ ಸ್ಥಳಕ್ಕೆ ಬಂದ ಎಂಜಿನಿಯರ್ ಮನೆಯಲ್ಲಿ ಇರಬೇಡಿ, ಸ್ಥಳಾಂತರ ಮಾಡಿ ಅಂತಾ ನೋಟಿಸ್ ನೀಡಲು ಮುಂದಾದಾಗ ಜನ ತರಾಟೆಗೆ ತೆಗೆದುಕೊಂಡ್ರು. ಕೆಲಸ ಪ್ರಾರಂಭ ಮಾಡುವ ಮುನ್ನ ನೀಡಬೇಕಾದ ನೋಟಿಸ್ ಈಗ ನೀಡಿದ್ರೆ ಏನ್ ಪ್ರಯೋಜನ ಅಂತಾ ಕಿಡಿ ಕಾರಿದ್ರು.

    ಬಿಡಿಎನಿಂದ ಪಡೆದ ಸೈಟ್‍ಗಳಲ್ಲಿ ಮನೆ ಕಟ್ಟಿಕೊಂಡಿದ್ದ ಇಲ್ಲಿನ ನಿವಾಸಿಗಳಿಗೆ ಈಗ ಬಿಬಿಎಂಪಿ ಈ ಬಿಲ್ಡಿಂಗನ್ನೇ ಅನಧಿಕೃತ ಅಂತಾ ಬಿಂಬಿಸಿದೆ. ತಾನು ಮಾಡಿರುವ ಎಡವಟ್ಟಿನಿಂದ ತಪ್ಪಿಸಿಕೊಳ್ಳಲು ಈ ನಾಟಕ ಮಾಡುತ್ತಿದೆ ಅನ್ನೋದು ಜನರ ಆಕ್ರೋಶವಾಗಿದೆ.