Tag: ಟೆಕ್ಕಿ

  • ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಆಸೆಪಟ್ಟ ಬೆಂಗಳೂರಿನ ಟೆಕ್ಕಿ ಪತಿ ವಿರುದ್ಧ ದೂರು

    ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಆಸೆಪಟ್ಟ ಬೆಂಗಳೂರಿನ ಟೆಕ್ಕಿ ಪತಿ ವಿರುದ್ಧ ದೂರು

    ಬೆಂಗಳೂರು: ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಆಸೆಪಟ್ಟ ಟೆಕ್ಕಿ ವಿರುದ್ಧ ಛತ್ತೀಸ್‌ಗಡದ ರಾಯಭಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈಗ ಪ್ರಕರಣ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.

    ಛತ್ತೀಸ್‍ಗಡದ ಮೂಲದ ಹುಡುಗಿ ಆರು ವರ್ಷದ ಹಿಂದೆ ಸಾಫ್ಟ್ ವೇರ್ ಎಂಜಿನಿಯರ್ ಒಬ್ಬರನ್ನು ಮದುವೆಯಾಗಿದ್ದರು. ಈಜೀಪುರದಲ್ಲಿ ದಂಪತಿ ನೆಲೆಸಿದ್ದು, ಆರಂಭದಲ್ಲಿ ಸಂತೋಷದಲ್ಲಿದ್ದ ಪತ್ನಿಗೆ ನಂತರ ಪತಿಯ ವಿಕೃತ ಮನಸ್ಥಿತಿ ಗೊತ್ತಾಗಿದೆ.

    ಪ್ರತಿ ದಿನ ಬ್ಲೂ ಫಿಲ್ಮ್ ವೀಕ್ಷಿಸುವ ಚಟವನ್ನು ಹೊಂದಿದ್ದ ಈತ  ಅಸ್ವಾಭಾವಿಕ ಲೈಂಗಿಕ ಕ್ರಿಯೆಯ ವಿಡಿಯೋ ತೋರಿಸಿ ನೀನು ಈ ರೀತಿಯಾಗಿ ಸಹಕರಿಸು ಎಂದು ಪೀಡಿಸುತ್ತಿದ್ದ. ಆರಂಭದಲ್ಲಿ ಒಂದೆರಡು ಬಾರಿ ನಾನು ಒಪ್ಪಿ ಸಹಕರಿಸಿದ್ದೆ. ಈ ದೃಶ್ಯಗಳನ್ನು ಮೊಬೈಲ್ ನಲ್ಲಿ ಚಿತ್ರೀಸಿಕೊಂಡಿದ್ದ ಪತಿ  ನಂತರ ಪ್ರತಿ ಬಾರಿಯೂ ಈ ರೀತಿಯಾಗಿ ಸಹಕರಿಸು ಎಂದು ಒತ್ತಾಯಿಸುತ್ತಿದ್ದ.  ನಾನು ಒಲ್ಲೆ ಎಂದಿದ್ದಕ್ಕೆ ನಮ್ಮಿಬ್ಬರ ಲೈಂಗಿಕ ಕ್ರಿಯೆಯ ವಿಡಿಯೋವನ್ನು ನಿನ್ನ ತಂದೆಗೆ ವಾಟ್ಸಪ್ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ

    ಕಿರುಕುಳದ ಬಗ್ಗೆ ಮಾವನ ಹತ್ತಿರ ಹೇಳಿಕೊಂಡಿಲ್ಲ . ಆತ್ತೆ ಬಳಿ ಹೇಳಿದಾಗ ಅವರು ಅದನ್ನು ಗಂಭೀರವಾಗಿ ಸ್ವೀಕರಿಸಲಿಲ್ಲ. ಕೊನೆಗೆ ವಿಕೃತ ಪತಿಯ ಕಾಟ ತಡೆಯಲಾರದೆ ಗಂಡನನ್ನು ಬಿಟ್ಟು ಪತ್ನಿ ತಂದೆಯ ಮನೆಯಾದ ಛತ್ತೀಸ್‍ಗಡದ ರಾಯಭಾಗಕ್ಕೆ ತೆರಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಪ್ರಕರಣ ಈಗ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ.

    ಟೆಕ್ಕಿ ವಿರುದ್ಧ ಅಸ್ವಾಭಾವಿಕ ಲೈಂಗಿಕಕ್ರಿಯೆ (ಐಪಿಸಿ377), ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಇ ಹಾಗೂ 67ರ (ಅಶ್ಲೀಲ ದೃಶ್ಯ ರವಾನೆ) ಅಡಿ ಹಾಗೂ ತಾಯಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಾಗಿದೆ

    ಪ್ರಕರಣ ವರ್ಗಾವಣೆಯಾಗುತ್ತಿದ್ದಂತೆ ಮನೆಯಿಂದ ಟೆಕ್ಕಿ ಪರಾರಿಯಾಗಿದ್ದು, ಪೊಲೀಸರು ಆತನ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ.

  • ಹೆಂಡತಿಯೊಂದಿಗಿನ ಸೆಕ್ಸ್ ಲೈವ್ ಸ್ಟ್ರೀಮಿಂಗ್ ಮಾಡಿದ ಟೆಕ್ಕಿ ಬಂಧನ

    ಹೆಂಡತಿಯೊಂದಿಗಿನ ಸೆಕ್ಸ್ ಲೈವ್ ಸ್ಟ್ರೀಮಿಂಗ್ ಮಾಡಿದ ಟೆಕ್ಕಿ ಬಂಧನ

    ಹೈದರಾಬಾದ್: ಹೆಂಡತಿಯ ಜೊತೆಗೆ ನಡೆಸಿದ ಲೈಂಗಿಕ ಕ್ರಿಯೆಯನ್ನು ಆಕೆಗೆ ಗೊತ್ತಿಲ್ಲದಂತೆ ಪಾರ್ನ್ ಸೈಟ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದ್ದ 33 ವರ್ಷದ ಮಾಜಿ ಸಾಫ್ಟ್ ವೇರ್ ಉದ್ಯೋಗಿಯೊಬ್ಬನನ್ನು ಹೈದರಾಬಾದ್‍ನಲ್ಲಿ ಬಂಧಿಸಲಾಗಿದೆ.

    ನಗರದ ಜೀಡಿಮೆಟ್ಲಾದ ನಿವಾಸಿಯಾಗಿರೋ ಬಂಧಿತ ಆರೋಪಿ ತನ್ನ ಬೆಡ್‍ರೂಮಿನಲ್ಲಿಟ್ಟಿದ್ದ ಲ್ಯಾಪ್‍ಟಾಪ್‍ನ ವೆಬ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ವೀಡಿಯೋಗಳನ್ನು ಹಣಕ್ಕಾಗಿ ಪಾರ್ನ್ ಸೈಟ್‍ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಿದ್ದ ಎಂದು ಆರೋಪಿಸಲಾಗಿದೆ.

    ಐಟಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಪತ್ನಿಗೆ ಕಳೆದ ನವೆಂಬರ್‍ನಲ್ಲಿ ಕೇರಳದಲ್ಲಿರುವ ಸ್ನೇಹಿತರೊಬ್ಬರು ಹೇಳಿದಾಗ ತನ್ನ ಖಾಸಗಿ ವಿಡಿಯೋಗಳು ಪಾರ್ನ್ ಸೈಟ್‍ನಲ್ಲಿದ್ದ ಬಗ್ಗೆ ಗೊತ್ತಾಗಿದೆ ಎಂದು ಸೈಬರ್ ಕ್ರೈಂ ಎಸಿಪಿ ಎಸ್. ಜಯರಾಮ್ ತಿಳಿಸಿದ್ದಾರೆ.

    ನಂತರ ಮಹಿಳೆ ನೀಡಿದ ದೂರಿನನ್ವಯ ಪೊಲೀಸರು ಐಪಿಸಿ ಸೆಕ್ಷನ್ 509 ಹಾಗೂ ಐಟಿ ಕಾಯ್ದೆಯ ಸೂಕ್ತ ಸೆಕ್ಷನ್‍ಗಳಡಿ ಕೇಸ್ ದಾಖಲಿಸಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದಾಗ ಈ ಕೃತ್ಯದ ಹಿಂದಿರುವುದು ಮಹಿಳೆಯ ಗಂಡ ಎನ್ನುವುದು ಗೊತ್ತಾಗಿದೆ. ಏಪ್ರಿಲ್ 7 ರಂದು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಪೊಲೀಸರು ವಿಡಿಯೋ ಲಿಂಕ್‍ನ ಐಪಿ ವಿಳಾಸವನ್ನ ಕೇರಳದ ತಿರುಚಿಯಲ್ಲಿ ಟ್ರೇಸ್ ಮಾಡಿದ್ದರು. ನಂತರ ಆ ಐಪಿ ವಿಳಾಸದ ಮಾಲೀಕನಿಗೆ ನೋಟಿಸ್ ನೀಡಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮಾಲೀಕ, ಬೇರೊಂದು ವೆಬ್‍ಸೈಟ್ ನಲ್ಲಿ ವಿಡಿಯೋ ಡೌನ್‍ಲೋಡ್ ಮಾಡಿಕೊಂಡು ಅದನ್ನೇ ಪ್ರಸಾರ ಮಾಡಿದ್ದಾಗಿ ಹೇಳಿದ್ದನೆಂದು ಜಯರಾಮ್ ತಿಳಿಸಿದ್ದಾರೆ.

    ಪೊಲೀಸರು ಹೇಳುವ ಪ್ರಕಾರ ಆರೋಪಿ ತನ್ನ ಹೆಂಡತಿಗೆ ತಿಳಿಯದಂತೆ ಲ್ಯಾಪ್‍ಟಾಪನ್ನು ಬೆಡ್‍ರೂಮಿನಲ್ಲಿರಿಸಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ಎನ್ನಲಾಗಿದೆ. ಈತ ಲ್ಯಾಪ್‍ಟಾಪ್‍ನಲ್ಲಿ ಸಿನಿಮಾ ಪ್ಲೇ ಮಾಡುತ್ತಿದ್ದರಿಂದ ಹೆಂಡತಿಗೆ ಇದರ ಬಗ್ಗೆ ಗೊತ್ತಾಗುತ್ತಿರಲಿಲ್ಲ. ಈತ ಪಾರ್ನ್ ವೆಬ್‍ಸೈಟ್‍ವೊಂದರ ಸದಸ್ಯನಾಗಿದ್ದು, ವಿಡಿಯೋ ಪೋಸ್ಟ್ ಮಾಡುವುದಕ್ಕೆ ಈತನಿಗೆ ಹಣ ಸಿಗುತ್ತಿತ್ತು. ಈ ಸೈಟ್‍ನಲ್ಲಿ ಸುಮಾರು 3 ಸಾವಿರ ಸದಸ್ಯರಿದ್ದಾರೆಂದು ವರದಿಯಾಗಿದೆ. ಅಲ್ಲದೆ ಆರೋಪಿ ಲೈಂಗಿಕ ಕ್ರಿಯೆಗಾಗಿ ಮಹಿಳೆಯರಿಗೆ ಪುರಷರನ್ನ ಸಪ್ಲೈ ಮಾಡೋ 3 ವೆಬ್‍ಸೈಟ್ ಗಳಲ್ಲಿ ನೊಂದಾಯಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

    ಪೊಲೀಸರು ಈತನ ಮೊಬೈಲ್ ಹಾಗೂ ಲ್ಯಾಪ್‍ಟಾಪ್ ಪರಿಶೀಲಿಸಿದ್ದು, ಇದಕ್ಕೆ ಪೂರಕವಾದ ಸಾಕ್ಷಿಗಳು ಸಿಕ್ಕಿವೆ. ಹಾಗೂ ಬ್ಯಾಂಕ್ ಅಕೌಂಟ್ ಕೂಡ ಪರಿಶೀಲಿಸಲಾಗಿದ್ದು ತಾಂತ್ರಿಕ ಸಾಕ್ಷಿಗಳು ಸಿಕ್ಕಿವೆ ಎಂದು ಎಸಿಪಿ ಜಯರಾಮ್ ತಿಳಿಸಿದ್ದಾರೆ.

  • ಇನ್ಫಿ ಸಿಒಒಗೆ ಭಾರೀ ಪ್ರಮಾಣದ ಸಂಬಳ ಏರಿಸಿದ್ದಕ್ಕೆ ನಾರಾಯಣ ಮೂರ್ತಿ ಆಕ್ಷೇಪ

    ಇನ್ಫಿ ಸಿಒಒಗೆ ಭಾರೀ ಪ್ರಮಾಣದ ಸಂಬಳ ಏರಿಸಿದ್ದಕ್ಕೆ ನಾರಾಯಣ ಮೂರ್ತಿ ಆಕ್ಷೇಪ

    ಬೆಂಗಳೂರು: ಇನ್ಫೋಸಿಸ್  ಕಂಪೆನಿಯ ಚೀಫ್ ಆಪರೇಟಿಂಗ್ ಆಫೀಸರ್ (ಸಿಒಒ) ಯುಬಿ ಪ್ರವೀಣ್ ರಾವ್ ಅವರ ಸಂಬಳ ಏರಿಸಿದ್ದಕ್ಕೆ ಸಂಸ್ಥಾಪಕ ನಾರಾಯಣ ಮೂರ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಫೆಬ್ರವರಿ ತಿಂಗಳಲ್ಲಿ ನಿರ್ದೇಶಕರ ಮಂಡಳಿಯು ಯು ಬಿ ಪ್ರವೀಣ್ ರಾವ್ ಅವರಿಗೆ ಅಗಾಧ ಮೊತ್ತದ ಸಂಬಳವನ್ನು ಏರಿಸಿದ್ದು ಯಾಕೆ ಎಂದು ಪ್ರಶ್ನಿಸಿ ನಾರಾಯಣ ಮೂರ್ತಿ ಮಾಧ್ಯಮ ಸಂಸ್ಥೆಗೆ ಇಮೇಲ್ ಮಾಡಿದ್ದಾರೆ.

    ಕಂಪೆನಿಯ ಹೆಚ್ಚಿನ ನೌಕರರಿಗೆ ಶೇ.6ರಿಂದ ಶೇ.8ರಷ್ಟು ಸಂಬಳವನ್ನು ಏರಿಸಿದರೆ, ಪ್ರವೀಣ್ ರಾವ್ ಅವರಿಗೆ ಶೇ.60ರಿಂದ ಶೇ.70ರಷ್ಟು ಸಂಬಳ ಏರಿಸಿದ್ದು ಸರಿಯಲ್ಲ ಎಂದಿದ್ದಾರೆ. ಈ ರೀತಿ ಸಂಬಳ ಏರಿಸಿದ್ದು ಕಂಪೆನಿಯ ನೌಕರರಲ್ಲಿ ಆಡಳಿತ ವರ್ಗ ಮತ್ತು ನಿರ್ದೇಶಕ ಮಂಡಳಿಯ ಮೇಲಿರುವ ವಿಶ್ವಾಸ ಕಡಿಮೆಯಾಗಲಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ಟೆಕ್ಕಿಗಳಿಗೆ ವಿಶ್ವದಲ್ಲೇ ಬೆಂಗಳೂರಿನಲ್ಲಿ ಕಡಿಮೆ ಸಂಬಳ: ಯಾವ ನಗರದಲ್ಲಿ ಎಷ್ಟು ಸಂಬಳ?

    ಪ್ರವೀಣ್ ನನ್ನು 1985ರಲ್ಲಿ ನಾನೇ ನೇಮಕ ಮಾಡಿದ್ದೆ. ನಾನು ಇನ್‍ಫೋಸಿಸ್‍ನಲ್ಲಿ ಇದ್ದಾಗ ಆತನನ್ನು ಬೆಳೆಸಿದ್ದೆ. ಆದರೆ ಆ ಬಳಿಕ ಆತನನ್ನು ಸೈಡ್‍ಲೈನ್ ಮಾಡಲಾಯಿತು. 2013ರಲ್ಲಿ ನಾನು ಇನ್ಫಿಗೆ ಮರಳಿದಾಗ ಪ್ರವೀಣ್ ಕಾರ್ಯಕಾರಿ ಮಂಡಳಿಯಲ್ಲಿ ಇರಲಿಲ್ಲ. ವಿಶಾಲ್ ಸಿಕ್ಕಾ ಅವರನ್ನು ಸಿಇಒ ಹುದ್ದೆಗೆ ನೇಮಕ ಮಾಡಿದಾಗ ಪ್ರವೀಣ್ ರಾವ್‍ನನ್ನು ಇಒಒ ಹುದ್ದೆಗೆ ಏರಿಸಲಾಯಿತು. ಈಗ ಶೇ.60-70ರಷ್ಟು ಸಂಬಳ ಏರಿಕೆಯ ಆಕ್ಷೇಪಕ್ಕೂ ಪ್ರವೀಣ್‍ಗೂ ಯಾವುದೇ ಸಂಬಂಧವಿಲ್ಲ ಎಂದು ಮೂರ್ತಿ ಸ್ಪಷ್ಟಪಡಿಸಿದ್ದಾರೆ.

    ಈಗ ಎಷ್ಟು ಸಂಬಳ:
    ಪ್ರವೀಣ್ ರಾವ್‍ಗೆ ಒಟ್ಟು ವಾರ್ಷಿಕವಾಗಿ 12.5 ಕೋಟಿ ರೂ. ಪಡೆಯುತ್ತಿದ್ದಾರೆ. ಇದರಲ್ಲಿ 4.62 ಕೋಟಿ ರೂ. ಸಂಬಳ, 3.88 ಕೋಟಿ ರೂ. ಪರಿಹಾರ, 4 ಕೋಟಿ ರೂ. ಸ್ಟಾಕ್ ಕಾಂಪನ್ಸೇಶನ್ ಪಡೆಯುತ್ತಿದ್ದಾರೆ.

    ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಯಾರಿಗೆ ಎಷ್ಟು ಸಂಬಳ? ಕೋಚ್ ಗಳಿಗೆ ಎಷ್ಟು ಸಿಗುತ್ತೆ?

  • ಬೈಕ್ ತಳ್ಳುವಂತೆ ಅವಾಜ್ ಹಾಕಿದ ರೌಡಿಶೀಟರ್‍ಗೆ ಟೆಕ್ಕಿಗಳಿಂದ ಹಲ್ಲೆ

    ಬೈಕ್ ತಳ್ಳುವಂತೆ ಅವಾಜ್ ಹಾಕಿದ ರೌಡಿಶೀಟರ್‍ಗೆ ಟೆಕ್ಕಿಗಳಿಂದ ಹಲ್ಲೆ

    ಮೈಸೂರು: ರೌಡಿ ಶೀಟರ್ ಮೇಲೆಯೇ ಟೆಕ್ಕಿಗಳು ಹಲ್ಲೆ ಮಾಡಿರೋ ಘಟನೆ ಮೈಸೂರಿನ ಬೋಗಾದಿ ರಿಂಗ್ ರಸ್ತೆ ಬಳಿ ನಡೆದಿದೆ.

    ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅಭಿ ಎಂಬ ರೌಡಿ ಶೀಟರ್ ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಪೆಟ್ರೋಲ್ ಖಾಲಿಯಾಗಿ ಬೈಕ್ ತಳ್ಳಿಕೊಂಡು ಹೋಗುತ್ತಿದ್ದ. ಈ ವೇಳೆ ಅದೇ ರಸ್ತೆಯಲ್ಲಿ ರೌಡಿ ಶೀಟರ್‍ಗೆ ಇಬ್ಬರು ಟೆಕ್ಕಿಗಳು ಸಿಕ್ಕಿದ್ರು. ಟೆಕ್ಕಿಗಳಿಗೆ ಬೈಕ್ ತಳ್ಳುವಂತೆ ಅಭಿ ಅವಾಜ್ ಹಾಕಿದ್ದ. ರೌಡಿಶೀಟರ್ ಅವಾಜ್‍ಗೆ ಬೆದರಿ ಮೊದಲು ಓಡಿದ ಟೆಕ್ಕಿಗಳು ಸ್ವಲ್ಪ ದೂರ ಓಡಿದ ಬಳಿ ಹಿಂತಿರುಗಿ ಬಂದು ಚಾಕುವಿನಿಂದ ರೌಡಿಶೀಟರ್‍ಗೆ ಇರಿದಿದ್ದಾರೆ.

    ಹಲ್ಲೆಗೊಳಗಾದ ಅಭಿ ದಾಖಲಿಸಿದ ದೂರಿನ ಹಿನ್ನೆಲೆಯಲ್ಲಿ ಮೈಸೂರಿನ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆಗೈದ ಇಬ್ಬರು ಟೆಕ್ಕಿಗಳಾದ ಮೋಹಿತ್ ಹಾಗೂ ತಮಿಳರಸನ್‍ನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

    ಸದ್ಯ ಅಭಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

  • ದುಷ್ಕರ್ಮಿಯಿಂದ ಅಮೆರಿಕ ಬಿಟ್ಟು ತೊಲಗಿ ಘೋಷಣೆ- ಗುಂಡಿಟ್ಟು ಭಾರತೀಯ ಟೆಕ್ಕಿಯ ಹತ್ಯೆ

    ದುಷ್ಕರ್ಮಿಯಿಂದ ಅಮೆರಿಕ ಬಿಟ್ಟು ತೊಲಗಿ ಘೋಷಣೆ- ಗುಂಡಿಟ್ಟು ಭಾರತೀಯ ಟೆಕ್ಕಿಯ ಹತ್ಯೆ

    ವಾಷಿಂಗ್ಟನ್: ಹೈದರಾಬಾದ್ ಮೂಲದ ಭಾರತೀಯರೊಬ್ಬರು ಅಮೆರಿಕದಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.

    ಬುಧವಾರ ಸಂಜೆ ಹೈದರಾಬಾದ್ ಮೂಲದ ಎಂಜಿನಿಯರ್ ಶ್ರೀನಿವಾಸ್ ಕೂಚಿಬೊಟ್ಲ, ಗೆಳೆಯನ ಜೊತೆ ಕಾನ್ಸಾಸ್‍ನ ಬಾರ್‍ನಲ್ಲಿದ್ದರು. ಈ ವೇಳೆ 51 ವರ್ಷದ ಆಡಂ ಪುರಿಂಟನ್ ಎಂಬ ದುಷ್ಕರ್ಮಿ ಶ್ರೀನಿವಾಸ್ ಮತ್ತು ಅವರ ಗೆಳೆಯನನ್ನು ಮಿಡಲ್ ಈಸ್ಟರ್ನ್(ಮಧ್ಯಪ್ರಾಚ್ಯ ದೇಶದವರು) ಎಂದು ಕರೆದು ನನ್ನ ದೇಶವನ್ನು ಬಿಟ್ಟು ತೊಲಗಿ ಎಂದು ಕೂಗುತ್ತಾ ಗುಂಡಿನ ದಾಳಿ ನಡೆಸಿದ್ದಾನೆ.

    ದಾಳಿಯಲ್ಲಿ ಶ್ರೀನಿವಾಸ್ ಸಾವನ್ನಪ್ಪಿದ್ದು, ಅಲೋಕ್ ಮದಾಸಿನಿ ಎಂಬ ಮತ್ತೊಬ್ಬ ಭಾರತೀಯ ಗಾಯಗೊಂಡು ಸದ್ಯ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಲು ಯತ್ನಿಸಿದ ಪ್ರತ್ಯಕ್ಷದರ್ಶಿ ಐಯಾನ್ ಗ್ರಿಲ್ಲೊಟ್ ಎಂಬವರ ಮೇಲೂ ಗುಂಡಿನ ದಾಳಿ ನಡೆದಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆಯ ನಂತರ ಪರಾರಿಯಾಗಿದ್ದ ದಾಳಿಕೋರ ಆಡಂ ಪುರಿಂಟನ್, ಮಿಸ್ಸೌರಿಯ ಸ್ಥಳೀಯ ಬಾರ್‍ವೊಂದರಲ್ಲಿ ನಾನು ಇಬ್ಬರು ಮಧ್ಯಪ್ರಾಚ್ಯ ವ್ಯಕ್ತಿಗಳನ್ನು ಕೊಂದಿದ್ದೇನೆ ಎಂದು ಹೇಳಿದ್ದಾನೆ. ಇದನ್ನು ಕೇಳಿ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಘಟನೆ ನಡೆದ 5 ಗಂಟೆಗಳ ಒಳಗೆ ಆಡಂನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.

    ಘಟನೆಯ ಬಗ್ಗೆ ಪ್ರತಿಕ್ರಿಯಿಸಿರೋ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ನನಗೆ ಆಘಾತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಶ್ರೀನಿವಾಸ್ ಅವರ ಕುಟುಂಬಕ್ಕೆ ಅಗತ್ಯವಾದ ನೆರವು ನೀಡುವ ಬಗ್ಗೆ ಭರವಸೆ ನೀಡಿದ್ದಾರೆ. ಶ್ರೀನಿವಾಸ್ ಅವರ ಮೃತದೇಹವನ್ನು ಹೈದರಾಬಾದ್‍ಗೆ ತರಲು ಎಲ್ಲಾ ನೆರವು ನೀಡುವುದಾಗಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

    ಶ್ರೀನಿವಾಸ್ ಅವರು ಜಿಪಿಎಸ್ ಸಿಸ್ಟಮ್ ತಯಾರು ಮಾಡುವ ಅಮೆರಿಕದ ಎಂಎನ್‍ಸಿ ಯಲ್ಲಿ ಕೆಲಸ ಮಾಡುತ್ತಿದ್ದರು. 2014ರಲ್ಲಿ ಸಂಸ್ಥೆಯನ್ನು ಸೇರಿದ್ದರು. ಇವರ ಪತ್ನಿ ಸುನಯನ ಕೂಡ ಇದೇ ಪ್ರದೇಶದಲ್ಲಿ ಮತ್ತೊಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.