Tag: ಟೀ-ಶರ್ಟ್

  • Bengaluru | ನಟ ದರ್ಶನ್‌ಗೆ ಜೈಲಲ್ಲಿ ರೌಡಿಗಳ ನಂಟು – ದರ್ಶನ್‌ ಮೇಲೆ‌ ಮತ್ತೆರಡು ಎಫ್‌ಐಆರ್‌!

    Bengaluru | ನಟ ದರ್ಶನ್‌ಗೆ ಜೈಲಲ್ಲಿ ರೌಡಿಗಳ ನಂಟು – ದರ್ಶನ್‌ ಮೇಲೆ‌ ಮತ್ತೆರಡು ಎಫ್‌ಐಆರ್‌!

    – ಮೋಸ್ಟ್‌ ವಾಂಟೆಡ್‌ಗಳಿರುವ ಹಿಂಡಲಗಾ ಜೈಲಿಗೆ ದರ್ಶನ್‌ ಶಿಫ್ಟ್‌ ಮಾಡಲು ಚಿಂತನೆ
    – ದರ್ಶನ್ ಸೇರಿ ನಾಲ್ವರ ಬಾಡಿವಾರೆಂಟ್‌ಗೆ ಅರ್ಜಿ

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಹಾಗೂ ವಿಲ್ಸನ್ ಗಾರ್ಡನ್ ನಾಗನಿಗೆ ರಾಜಾತಿಥ್ಯ ವಿಚಾರವಾಗಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ 3 ಎಫ್‌ಐಆರ್‌ಗಳು ದಾಖಲಾಗಿವೆ. ಕೇಂದ್ರ ಕಾರಾಗೃಹಗಳ ಉಪನಿರ್ದೇಶಕರಾದ ಎಂ. ಸೋಮಶೇಖರ್ ರಿಂದ ದೂರು ನೀಡಲಾಗಿದ್ದು, ಮೂರು ಪ್ರಕರಣಗಳಲ್ಲಿ ಎರಡರಲ್ಲಿ ದರ್ಶನ್ ಎ1 ಆರೋಪಿಯನ್ನಾಗಿಸಲಾಗಿದೆ‌. 3ನೇ ಎಫ್ಐಆರ್ ಜೈಲು ಅಧಿಕಾರಿಗಳ ಮೇಲಾಗಿದ್ದು, ದರ್ಶನ್‌ಗೆ ಮತ್ತೆ ಸಂಕಷ್ಟ ಶುರುವಾಗಿದೆ.

    ಏನೇನು ಪ್ರಕರಣ – ಯಾರು ಆರೋಪಿ?
    1) ಕಾರಾಗೃಹ U/s. 42 ಅಕ್ಟ್ ಅಡಿ ಯಲ್ಲಿ ಒಂದು ಎಫ್‌ಐಆರ್‌
    A1- ದರ್ಶನ್
    A2- ನಾಗರಾಜ್
    A3-ವಿಲ್ಸನ್ ಗಾರ್ಡನ್ ನಾಗ
    A4-ಕುಳ್ಳ ಸೀನಾ.

    2) ಮತ್ತೊಂದು ಕಾರಾಗೃಹ U/s. 42 ಅಕ್ಟ್ ಅಡಿ ಯಲ್ಲಿ ಒಂದು ಎಫ್‌ಐಆರ್‌
    A1-ದರ್ಶನ್
    A2-ಧರ್ಮ
    A3-ಸತ್ಯ

    3)U/S 42, 54 (1(A) Prisons Act & 238, 323 BNS ಅಕ್ಟ್ ಅಡಿ ಎಫ್‌ಐಆರ್‌
    A1-ಸುದರ್ಶನ್ ಕೆ.ಎಸ್.
    A2-ಮುಜೀಬ್
    A3-ಪರಮೇಶ ನಾಯಕ್ ಲಮಾಣಿ
    A4- ಕೆ ಬಿ ರಾಯಮನೆ

    ಸಿಸಿಬಿ ದಾಳಿ; ಹಿಂದಿನ ರಾತ್ರಿಯೇ ಮಾಹಿತಿ ಸೋರಿಕೆ:
    ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ವೇಲು ಎಂಬಾತನ ಮೊಬೈಲ್‌ನಿಂದ ದರ್ಶನ್‌ ಜೈಲಿನಲ್ಲಿ ದರ್ಬಾರ್‌ ನಡೆಸುತ್ತಿರೋ ಫೋಟೋ ಸೋರಿಕೆ ಆಗಿತ್ತು, ಧರ್ಮ ಎಂಬಾತ ಮೊಬೈಲ್‌ನಿಂದ ದರ್ಶನ್‌ ವೀಡಿಯೋ ಕಾಲ್‌ ಮಾಡಿ ಮಾತನಾಡಿದ್ದರು. ಇಷ್ಟೆಲ್ಲಾ ಆಗಿದ್ದರೂ ಸಿಸಿಬಿ ಅಧಿಕಾರಿಗಳ ಕೈಗೆ ಯಾವುದೇ ಮೊಬೈಲ್‌ ಸಿಕ್ಕಿಲ್ಲ ಅಂತ ಅಧಿಕಾರಿಗಳು, ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಅಲ್ಲದೇ ಸಿಸಿಬಿ ದಾಳಿ ನಡೆಯುತ್ತೆ ಅಂತ ಹಿಂದಿನ ರಾತ್ರಿಯೇ ಮಾಹಿತಿ ಸೋರಿಕೆಯಾಗಿತ್ತು ಎಂದೂ ಮೂಲಗಳು ತಿಳಿಸಿವೆ.

    ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ಚಿಂತನೆ:
    ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ದರ್ಶನ್ ರನ್ನ ಮಂಗಳವಾರ ಅಥವಾ ಬುಧವಾರ ರಾತ್ರಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲು ಜೈಲಾಧಿಕಾರಿಗಳು ಚರ್ಚೆ ಮಾಡ್ತಿದ್ದಾರೆ. ನಟೋರಿಯಸ್ ರೌಡಿ ನಾಗನ ಜೊತೆಗಿರೋ ಫೋಟೋ ವೈರಲ್ ಆದ ಬೆನ್ನಲ್ಲೇ ಇಂಥದ್ದೊಂದು ನಿರ್ಧಾರಕ್ಕೆ ಬರಲಾಗಿದೆಯಂತೆ. ನೂರು ವರ್ಷಗಳ ಇತಿಹಾಸ ಇರುವ ಈ ಜೈಲಿನಲ್ಲಿ ಮರಣದಂಡನೆಗೆ ಗುರಿಯಾಗಿರೋ ಖೈದಿಗಳು ಇದ್ದಾರೆ. ನಟೋರಿಯಸ್ ರೌಡಿಗಳು, ಸಮಾಜಘಾತಕರು, ದೇಶದ್ರೋಹಿಗಳು, ವಿಕೃತ ಕಾಮಿಗಳು ಇರುವಂತ ಜೈಲಿಗೆ ದರ್ಶನ್ ಅವರನ್ನ ಶಿಫ್ಟ್ ಮಾಡಲಾಗ್ತಿದೆ. ಖುದ್ದು ಸಿಎಂ ಸಿದ್ದಾರಮಯ್ಯ ಅವರೇ ದರ್ಶನ್ ಅಂಡ್ ಗ್ಯಾಂಗ್ ಅನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಆದೇಶ ನೀಡಿದ್ದಾರೆ. ಮೋಸ್ಟ್ ವಾಟೆಂಡ್ ಕ್ರಿಮಿನಲ್ ಇರುವಂಥ ಜೈಲು ಇದಾಗಿದ್ದು, ದರ್ಶನ್ ಗೆ ಶಿಫ್ಟ್ ಮಾಡುವ ಮೂಲಕ, ಈಗಿನಿಂದಲೇ ಶಿಕ್ಷೆ ಕೊಡೋಕೆ ಸಿದ್ಧತೆ ನಡೆದಿದೆ.

    ದರ್ಶನ್ ಸೇರಿ ನಾಲ್ವರ ಬಾಡಿವಾರೆಂಟ್‌ಗೆ ಅರ್ಜಿ:
    ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ದರ್ಶನ್ ಸೇರಿ ನಾಲ್ವರ ಬಾಡಿವಾರೆಂಟ್‌ಗೆ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಸಂಜೆ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿರುವ ಪೊಲೀಸರು ಮಂಗಳವಾರ (ಆ.27) ಕೋರ್ಟ್‌ ಗಮನಕ್ಕೆ ತಂದು ಬಾಡಿವಾರೆಂಟ್ ಗೆ ಪಡೆಯಲು ತಯಾರಿ ನಡೆಸಿದ್ದಾರೆ. ಮಂಗಳವಾರ ಸಂಜೆಯೇ ದರ್ಶನ್‌ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.

  • ದರ್ಶನ್ ಜೊತೆ ಜೈಲಲ್ಲಿ ಪೋಸ್ ಕೊಟ್ಟ ರೌಡಿಶೀಟರ್ ನಾಗ ಧರಿಸಿದ್ದ ಟಿ-ಶರ್ಟ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!

    ದರ್ಶನ್ ಜೊತೆ ಜೈಲಲ್ಲಿ ಪೋಸ್ ಕೊಟ್ಟ ರೌಡಿಶೀಟರ್ ನಾಗ ಧರಿಸಿದ್ದ ಟಿ-ಶರ್ಟ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಾ!

    ಬೆಂಗಳೂರು: ಕೊಲೆ ಆರೋಪಿ ದರ್ಶನ್‌ಗೆ (Darshan) ರಾಜಾತಿಥ್ಯ ನೀಡಲಾಗುತ್ತಿದೆ ಎನ್ನುವ ಫೋಟೋ ವೈರಲ್‌ ಪ್ರಕರಣದಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಜೈಲಲ್ಲಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನ (Wilson Garden Naga) ರಾಯಲ್ ಲೈಫ್ ಒಂದೊಂದಾಗಿ ತೆರೆದುಕೊಳ್ತಿದೆ.

    ಬ್ರಾಂಡೆಡ್ ಬಟ್ಟೆ, ಬ್ರ್ಯಾಂಡೆಡ್ ಶೂ, ರುಚಿಯಾದ ಊಟ, ಕೈಯಲ್ಲಿ ಮೊಬೈಲ್, ಐಷಾರಾಮಿ ವೆಸ್ಟರ್ನ್ ಟಾಯ್ಲೆಟ್, ಹೈಟೇಕು ಹಾಸಿಗೆ, ಜಿಮ್ ಉಪಕರಣ, ಹೀಗೆ ಒಂದಾ ಎರಡಾ? ನಾಗನ ಐಷಾರಾಮಿ ಬ್ಯಾರಕ್ ನೋಡಿ ಸಿಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಇದನ್ನೂ ಓದಿ: ದರ್ಶನ್‍ಗೆ ಜೈಲಲ್ಲಿ ರಾಜಾತಿಥ್ಯ | ಸಿಎಂ- ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ: ಪ್ರಲ್ಹಾದ್ ಜೋಶಿ

    ʻದಾಸʼನ ಜೊತೆ ಕುಳಿತು ಹರಟೆ ಹೊಡೆದಿದ್ದ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಧರಿಸಿದ್ದ ಬಾಲ್ಮೈನ್ ಟಿ-ಶರ್ಟ್ (T Shirt) ಬೆಲೆಯೇ 15-20 ಸಾವಿರ ರೂ. ಇದೆ ಎನ್ನಲಾಗಿದೆ. ದುಬೈ ಸೇರಿದಂತೆ ಫಾರಿನ್ ಕಾಸ್ಟ್ಲಿ ಬ್ರ್ಯಾಂಡ್ ಟಿ-ಶರ್ಟ್‌ಗಳನ್ನ ನಾಗ ಧರಿಸ್ತಿದ್ದಾನೆ. ಇದಲ್ಲದೇ ಬ್ಯಾರಕ್‌ನಲ್ಲಿ ಐದಾರು ಜೊತೆ ಬ್ರ್ಯಾಂಡೆಡ್ ಶೂ, ಕೆಜಿಗಟ್ಟಲೆ ಡ್ರೈಫ್ರೂಟ್ಸ್, ಫ್ರೂಟ್ಸ್ ಕಂಡು ಸಿಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಇದನ್ನೂ ಓದಿ: ಟಾರ್ಚ್ ಹಾಕಿ ತಡಕಾಡೋದು ಸಿಎಂಗೆ ಶೋಭೆಯಲ್ಲ – ಶಿಶುಪಾಲನಂತೆ ತಪ್ಪಿನ ಮೇಲೆ ತಪ್ಪು ಮಾಡ್ತಿದ್ದೀರಿ: ಹೆಚ್‌ಡಿಕೆ ಎಚ್ಚರಿಕೆ

    ಇನ್ನೂ ನಾಗನ ಬ್ಯಾರಕ್‌ನಿಂದ ದಾಸನಿಗೆ ಊಟ ಹೋಗ್ತಿರೊ ಆರೋಪದ ನಡುವೆಯೇ ಫೋಟೊ ವೈರಲ್ ಆಗಿದೆ. ಇಷ್ಟಾದ್ರು ಖತರ್ನಾಕ್ ರೌಡಿಗಳನ್ನ ಶಿಫ್ಟಿಂಗ್ ಮಾಡ್ತಿಲ್ಲ. ಪರಪ್ಪನ ಅಗ್ರಹಾರ ಜೈಲಿಂದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡುವಂತೆ ಪೊಲೀಸ್‌ ಆಯುಕ್ತ ದಯಾನಂದ್ ಪತ್ರ ಕೂಡ ಬರೆದಿದ್ದರು. ಜೈಲಲ್ಲಿದ್ದಕೊಂಡೇ ಲಿಟಿಗೇಷನ್ ಪ್ರಾಪರ್ಟಿ ಸೇರಿದಂತೆ ಬೆದರಿಕೆ ಕಾಲ್ ಮಾಡ್ತಿರುವ ರೌಡಿಶೀಟರ್‌ಗಳ ವಿರುದ್ಧ ಕ್ರಮ ಆಗ್ತಿಲ್ಲ ಅನ್ನೋದಂತು ಸತ್ಯ. ಇದನ್ನೂ ಓದಿ: ರಾಜ್ಯದ ಸಬ್ ರಿಜಿಸ್ಟರ್ ಕಚೇರಿಗಳಲ್ಲಿ ಆಧಾರ್, ಪ್ಯಾನ್, ಪಾಸ್‌ಪೋರ್ಟ್ ಕಡ್ಡಾಯ: ಕೃಷ್ಣಭೈರೇಗೌಡ

  • ಕಾರಿನಲ್ಲಿ ಸಾಗಿಸ್ತಿದ್ದ ಟೀ ಶರ್ಟ್ ಬಂಡಲ್ ಜಪ್ತಿ

    ಕಾರಿನಲ್ಲಿ ಸಾಗಿಸ್ತಿದ್ದ ಟೀ ಶರ್ಟ್ ಬಂಡಲ್ ಜಪ್ತಿ

    ಬಾಗಲಕೋಟೆ: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಟೀ ಶರ್ಟ್ ಬಂಡಲ್ (T Shirt) ಇದ್ದ ವಾಹನವನ್ನು ಪೊಲೀಸರು ಜಪ್ತಿ ಮಾಡಿರುವ ಘಟನೆ ಬಾಗಲಕೋಟೆ (Bagalkote) ನಗರದ ಬಸವೇಶ್ವರ ಸರ್ಕಲ್ (Basaveshwar Circle) ಬಳಿ ನಡೆದಿದೆ.

    ನಗರದ ಬಸವೇಶ್ವರ್ ಸರ್ಕಲ್ ಬಳಿಯ ಪ್ರಭು ನಾರಾ ಎಂಬ ವ್ಯಾಪಾರಸ್ಥರ ಗೋದಾಮಿನಲ್ಲಿದ್ದ ಕಾರು ಒಂದರಲ್ಲಿ ಟೀಶರ್ಟ್ ಬಂಡಲ್ ಇರುವುದು ಪತ್ತೆಯಾಗಿದೆ. ನಾರಾ ಅವರು ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ನಿಕಟವರ್ತಿಯಾಗಿದ್ದು, ಮತದಾರರಿಗೆ ಟೀ ಶರ್ಟ್ ಉಡುಗೊರೆ ನೀಡಲು ತರಿಸಿದ್ದಾರೆಂದು ಆರೋಪಿಸಿ, ಕೇಸ್ ದಾಖಲಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಯ ಬೆಂಬಲಿಗರು ಪ್ರತಿಭಟನೆ ನಡೆಸಿದರು.

    ತಪಾಸಣೆ ನಡೆಸಿ ಅವರ ವಿರುದ್ಧ ದೂರು ದಾಖಲಿಸಿ ಎಂದು ಪೊಲೀಸರಿಗೆ ಆಗ್ರಹಿಸಿದರು. ಆದರೆ ಪ್ರಭು ನಾರಾ ಅವರು ಕಾರು ಕೀ ನೀಡದೇ ಕೆಲ ಹೊತ್ತು ಅಧಿಕಾರಿಗಳನ್ನ ಕಾಯಿಸಿ, ಹೈಡ್ರಾಮಾ ಸೃಷ್ಟಿಸಿದರು. ನಂತರ ಕಾರಿನಲ್ಲಿದ್ದ ಬಂಡಲ್‍ಗಳನ್ನ ಓಪನ್ ಮಾಡಿಸುವಂತೆ ಕೆಲ ಕಾರ್ಯಕರ್ತರು ಅಧಿಕಾರಿಗಳ ಎದುರೇ ಪ್ರತಿಭಟನೆ ನಡೆಸಿದಾಗ, ಕಾರ್ ಡೋರ್ ಓಪನ್ ಮಾಡಿಸಲಾಯಿತು. ಈ ವೇಳೆ ಕಾರಿನಲ್ಲಿದ್ದ ಟೀ ಶರ್ಟ್ ಮೇಲೆ ‘4’ ಸಂಖ್ಯೆ ಇರುವುದು ಬೆಳಕಿಗೆ ಬಂತು. ಇದನ್ನೂ ಓದಿ: ಮತದಾನದ ಮಮತೆಯ ಕರೆಯೋಲೆ ಆಮಂತ್ರಣ ಪತ್ರಿಕೆ ಬಿಡುಗಡೆ

    ಬಿಜೆಪಿ ಅಭ್ಯರ್ಥಿ (BJP Candidate) ವೀರಣ್ಣ ಚರಂತಿಮಠ ಅವರ ಕ್ರಮಸಂಖ್ಯೆ ಸಹ ‘4’ ಆಗಿರೋದ್ರಿಂದ, ಮತದಾರರಿಗೆ ಆಮಿಷ ಒಡ್ಡಲು ಟೀ ಶರ್ಟ್ ನೀಡಲು ಮುಂದಾಗಿದ್ದಾರೆಂದು ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. ಟೀ ಶರ್ಟ್ ಬಂಡಲ್ ಗಳು ಇದ್ದ ಕಾರನ್ನು ಜಪ್ತಿ ಮಾಡಿದ ಅಧಿಕಾರಿಗಳು. ನಂತರ ನಾರಾ ಅವರ ಗೋದಾಮು ಪರಿಶೀಲಿಸಿದ್ರು. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಾಗಿದ್ರೆ, ಅವರ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂಬ ಭರವಸೆ ನೀಡಿದರು.

    ಇತ್ತ ಗೋದಾಮಿನ ಮಾಲೀಕ ಪ್ರಭು ನಾರಾ, ಈ ಟೀ ಶರ್ಟ್ ಗಳಿಗೂ ಹಾಗೂ ಚುನಾವಣೆಗೂ ಸಂಬಂಧ ಇಲ್ಲ, ಯಾವುದೇ ಪಕ್ಷದ ಚಿನ್ಹೆ ಇಲ್ಲ, ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲು ಟೀ ಶರ್ಟ್ ತರಿಸಲಾಗಿದೆ. ಇದರ ಎಲ್ಲಾ ಬಿಲ್‍ಗಳು ನಮ್ಮ ಬಳಿ ಇವೆ. ನಾಳೆ ಬೆಳಗ್ಗೆ ಅಧಿಕಾರಿಗಳಿಗೆ ಬಿಲ್ ತೋರಿಸುವುದಾಗಿ ಹೇಳಿದರು. ಕೆಲ ಹೊತ್ತು ಬಸವೇಶ್ವರ ಸರ್ಕಲ್ ನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ನಂತರ ಪೊಲೀಸರು ಅಲ್ಲಿದ್ದ ಜನರನ್ನು ಚದುರಿಸಿ, ಟೀ ಶರ್ಟ್ ಬಂಡಲ್ ಇದ್ದ ಕಾರನ್ನು ಸೀಜ್ ಮಾಡಿ ಪೊಲೀಸ್ ಠಾಣೆಗೆ ಒಯ್ದರು.

  • ಫಾರಿನ್‌ ಟೀ-ಶರ್ಟ್‌ ಹಾಕ್ಕೊಂಡು ಭಾರತ್‌ ಜೋಡೋ ಯಾತ್ರೆ ಮಾಡ್ತಿದ್ದಾರೆ – ರಾಹುಲ್‌ ಗಾಂಧಿ ಕಾಲೆಳೆದ ಅಮಿತ್‌ ಶಾ

    ಫಾರಿನ್‌ ಟೀ-ಶರ್ಟ್‌ ಹಾಕ್ಕೊಂಡು ಭಾರತ್‌ ಜೋಡೋ ಯಾತ್ರೆ ಮಾಡ್ತಿದ್ದಾರೆ – ರಾಹುಲ್‌ ಗಾಂಧಿ ಕಾಲೆಳೆದ ಅಮಿತ್‌ ಶಾ

    ಜೈಪುರ್‌: ವಿದೇಶಿ ಟೀ-ಶರ್ಟ್‌ (t-shirt) ಧರಿಸಿ, ಭಾರತ್‌ ಜೋಡೋ ಯಾತ್ರೆ (Bharat Jodo Yatra) ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ವ್ಯಂಗ್ಯವಾಡಿದ್ದಾರೆ.

    ‘ಭಾರತ್ ಜೋಡೋ ಯಾತ್ರೆ’ ವೇಳೆ ಹಣದುಬ್ಬರ ವಿಷಯವನ್ನು ಪ್ರಸ್ತಾಪಿಸಿದ್ದ ರಾಹುಲ್ ಗಾಂಧಿ (Rahul Gandhi) ಅವರು ಸ್ವತಃ ವಿದೇಶಿ ಬ್ರ್ಯಾಂಡ್‌ನ 41,257 ರೂ. ಮೌಲ್ಯದ ಟೀ ಶರ್ಟ್ ಧರಿಸಿದ್ದರು ಎಂದು ಬಿಜೆಪಿ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಕಾಲೆಳೆದಿತ್ತು. ಇದು ಕಾಂಗ್ರೆಸ್‌ (Congress) ಮತ್ತು ಬಿಜೆಪಿ (BJP) ನಡುವಿನ ವಾಕ್ಸಮರಕ್ಕೆ ಕಾರಣವಾಗಿತ್ತು. ಇದೇ ವೇಳೆ ಅಮಿತ್‌ ಶಾ ಅವರು ರಾಹುಲ್‌ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಧರಿಸಿದ್ದ 41 ಸಾವಿರ ರೂ.ನ ಟೀಶರ್ಟ್ ಕುರಿತು ಬಿಜೆಪಿ ವ್ಯಂಗ್ಯ

    ರಾಹುಲ್ ಗಾಂಧಿ ಅವರು ವಿದೇಶಿ ಟೀ-ಶರ್ಟ್ ಧರಿಸಿ ಭಾರತ್ ಜೋಡೋ ಯಾತ್ರೆಗೆ ಹೊರಟಿದ್ದಾರೆ. ನಾನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ಸಿಗರು ಸಂಸತ್ತಿನಲ್ಲಿ ಮಾಡಿದ ಭಾಷಣವನ್ನು ನೆನಪಿಸುತ್ತೇನೆ. ರಾಹುಲ್ ಬಾಬಾ ʻಭಾರತ ರಾಷ್ಟ್ರವಲ್ಲʼ ಎಂದು ಹೇಳಿದ್ದರು. ರಾಹುಲ್ ಗಾಂಧಿ, ನೀವು ಯಾವ ಪುಸ್ತಕದಲ್ಲಿ ಓದಿದ್ದೀರಿ? ಇದು ಲಕ್ಷಗಟ್ಟಲೆ ಜನರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ರಾಷ್ಟ್ರವಾಗಿದೆ. ರಾಹುಲ್ ಗಾಂಧಿ ಅವರು ಭಾರತದ ಇತಿಹಾಸವನ್ನು ಅಧ್ಯಯನ ಮಾಡಬೇಕಾಗಿದೆ ಎಂದು ಜೋಧ್‌ಪುರದಲ್ಲಿ ನಡೆದ ಬೂತ್ ಅಧ್ಯಕ್ಷ ಸಂಕಲ್ಪ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡುವಾಗ ಶಾ ತಿಳಿಸಿದ್ದಾರೆ.

    ಇಂಧನ ಬೆಲೆ ಏರಿಕೆ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರಿಗೆ ಅಮಿತ್‌ ಶಾ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ. ರಸ್ತೆ ನಿರ್ಮಿಸಲು ಸಾಧ್ಯವಿಲ್ಲ, ವಿದ್ಯುತ್ ನೀಡಲು ಸಾಧ್ಯವಿಲ್ಲ, ಉದ್ಯೋಗ ನೀಡಲು ಸಾಧ್ಯವಿಲ್ಲ. ಗೆಹ್ಲೋಟ್ ಸರ್ಕಾರವು ಕೇವಲ ವೋಟ್ ಬ್ಯಾಂಕ್ ಮತ್ತು ಓಲೈಕೆ ರಾಜಕಾರಣವನ್ನು ಮಾತ್ರ ಮಾಡಬಲ್ಲದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ರಾಹುಲ್ ಗಾಂಧಿ ವಿಶ್ರಾಂತಿಗೆ ವಾಹನದಲ್ಲಿ ಬೆಡ್, ಎಸಿ ವ್ಯವಸ್ಥೆ

    Live Tv
    [brid partner=56869869 player=32851 video=960834 autoplay=true]

  • ಟೀ ಶರ್ಟ್ ವಿಚಾರಕ್ಕೆ ಲವರ್ಸ್‌ ಕಿತ್ತಾಟ – ಮೆಟ್ರೋದಲ್ಲೇ ಬಾಯ್ ಫ್ರೆಂಡ್ ಕೆನ್ನೆಗೆ ಬಾರಿಸಿದ್ಲು

    ಟೀ ಶರ್ಟ್ ವಿಚಾರಕ್ಕೆ ಲವರ್ಸ್‌ ಕಿತ್ತಾಟ – ಮೆಟ್ರೋದಲ್ಲೇ ಬಾಯ್ ಫ್ರೆಂಡ್ ಕೆನ್ನೆಗೆ ಬಾರಿಸಿದ್ಲು

    ನವದೆಹಲಿ: ಟೀ ಶರ್ಟ್ ವಿಚಾರಕ್ಕೆ ದೆಹಲಿ ಮೆಟ್ರೋದಲ್ಲಿ ಬಾಯ್‍ಫ್ರೆಂಡ್ ಕಪಾಳಕ್ಕೆ ಯುವತಿ ಬಾರಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ದೆಹಲಿ ಮೆಟ್ರೋ ರೈಲಿನಲ್ಲಿ ಯುವಕ, ಯುವತಿ ಪ್ರಯಾಣಿಸುತ್ತಿರುತ್ತಾರೆ. ಈ ವೇಳೆ ಯುವತಿ 1,000 ರೂಪಾಯಿಗೆ ಟಿ-ಶರ್ಟ್ ಖರೀದಿಸಿರುವ ಬಗ್ಗೆ ತನ್ನ ಬಾಯ್‍ಫ್ರೆಂಡ್ ಬಳಿ ಹೇಳಿಕೊಂಡಿದ್ದಾಳೆ. ಇದಕ್ಕೆ ಯುವಕ ಈ ಟೀ ಶರ್ಟ್ ಬೆಲೆ ರೂಪಾಯಿಗಿಂತಲೂ ಹೆಚ್ಚಿಲ್ಲ ಎಂದು ಹೇಳಿದ್ದಾನೆ. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ಕೋಪಗೊಂಡ ಯುವತಿ ಯುವಕನಿಗೆ ಎಲ್ಲರ ಮುಂದೆ ಹೊಡೆಯುತ್ತಾಳೆ. ಇದನ್ನೂ ಓದಿ: ಗರ್ಭಪಾತ ಬೇಡ, ಮಗುವಿಗೆ ಜನ್ಮ ನೀಡಿ ದತ್ತು ಕೊಡಿ – ದೆಹಲಿ ಹೈಕೋರ್ಟ್

    ನಂತರ ಯುವಕ ಇದು ಸಾರ್ವಜನಿಕ ಸ್ಥಳ ಎಂದು ಆಕೆಗೆ ವಾರ್ನಿಂಗ್ ಕೊಡುತ್ತಾನೆ. ಆದರೂ ಹಿಂಜರಿಯದೇ ಯುವತಿ ಆತನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಬಳಿಕ ರೊಚ್ಚಿಗೆದ್ದು ಯುವಕ ಕೂಡ ಆಕೆಯ ಕೆನ್ನೆಗೆ ಬಾರಿಸಿದ್ದಾನೆ. ಇದನ್ನೂ ಓದಿ: ನರ್ತನ್ ನಿರ್ದೇಶನದಲ್ಲಿ ಯಶ್ ನಟಿಸ್ತಾರಾ ಅಥವಾ ಇಲ್ಲವಾ? : ಒಂದು ವಾರ ಡೆಡ್ ಲೈನ್

    ಈ ವೀಡಿಯೋವನ್ನು ಮಂದರ್ ಅವರು ಟ್ವಿಟರ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಇದು ಕೇವಲ ತಮಾಷೆಯ ವೀಡಿಯೋವೋ ಅಥವಾ ಇಬ್ಬರು ನಿಜವಾಗಿಯೂ ಜಗಳವಾಡುತ್ತಿದ್ದಾರೋ ಎಂಬುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ವೀಡಿಯೊ ನೋಡಿ ನೆಟ್ಟಿಗರು ಇವರಿಬ್ಬರು ದಂಪತಿಗಳು ಎಂದರೆ, ಮತ್ತೆ ಕೆಲವರು ಈ ಇಬ್ಬರು ಸಹೋದರ ಮತ್ತು ಸಹೋದರಿ ಇರಬಹುದು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಾಕಿಸ್ತಾನದ ಆಟಗಾರನಿಗೆ ಸಿಎಸ್‍ಕೆ ಟೀ-ಶರ್ಟ್ ಗಿಫ್ಟ್ ಕೊಟ್ಟ ಕ್ಯಾಪ್ಟನ್ ಕೂಲ್

    ಪಾಕಿಸ್ತಾನದ ಆಟಗಾರನಿಗೆ ಸಿಎಸ್‍ಕೆ ಟೀ-ಶರ್ಟ್ ಗಿಫ್ಟ್ ಕೊಟ್ಟ ಕ್ಯಾಪ್ಟನ್ ಕೂಲ್

    ಇಸ್ಲಾಮಾಬಾದ್: ಪಾಕಿಸ್ತಾನ ತಂಡದ ಬೌಲರ್ ಹ್ಯಾರಿಸ್ ರೌಫ್‍ಗೆ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್‍ನ ಟೀ-ಶರ್ಟ್‍ನ್ನು ಉಡುಗೊರೆಯಾಗಿ ನೀಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ವಲಯದಲ್ಲಿ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಇವರನ್ನು ಕ್ರಿಕೆಟ್ ಲೋಕದಲ್ಲೇ ಶ್ರೇಷ್ಠ ನಾಯಕನೆಂದು ಗುರುತಿಸಲಾಗಿದೆ. ಈಗ ಧೋನಿ ತಮ್ಮ ಟೀ-ಶರ್ಟ್‍ನ್ನು ಪಾಕಿಸ್ತಾನದ ಆಟಗಾರನಿಗೆ ಉಡುಗೊರೆಯಾಗಿ ನೀಡಿರುವುದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಶುಕ್ರವಾರ ಧೋನಿ ಸಹಿ ಮಾಡಿದ ಸಿಎಸ್‍ಕೆ ಜರ್ಸಿಯೊಂದನ್ನು ಪಾಕಿಸ್ತಾನ ತಂಡದ ಆಟಗಾರ ಹ್ಯಾರಿಸ್ ರೌಫ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಟ್ವಿಟ್ಟರ್‌ನಲ್ಲಿ ಏನಿದೆ?: ಕ್ರಿಕೆಟ್ ಲೋಕದ ಕ್ಯಾಪ್ಟನ್ ಕೂಲ್ ಎಂದೇ ಹೆಸರುವಾಸಿಯಾಗಿರುವ ಎಂ.ಎಸ್.ಧೋನಿಯವರು ಸಿಎಸ್‍ಕೆ ತಂಡದ ಟೀ-ಶರ್ಟ್‍ನ್ನು ನನಗೆ ನೀಡಿದ್ದಾರೆ. ಈ ಉಡುಗೊರೆಯನ್ನು ನಾನು ಖುಷಿಯಿಂದ ಸ್ವೀಕರಿಸಿದ್ದೇನೆ. ಟೀ-ಶರ್ಟ್ ನಂಬರ್-7 ಎಲ್ಲರ ಮನಸನ್ನು ಗೆದ್ದಿದೆ. ವಿಶೇಷವಾಗಿ ಬೆಂಬಲ ನೀಡಿದ ರಸೆಲ್ ಅವರಿಗೆ ತುಂಬು ಹೃದಯದ ಧನ್ಯವಾದ ಎಂದು ಹ್ಯಾರಿಸ್ ರೌಫ್ ಟ್ವೀಟ್ ಮಾಡಿದ್ದಾರೆ.

    ಟಿ20 ವಿಶ್ವಕಪ್‍ನಲ್ಲಿ ಭಾರತದ ವಿರುದ್ಧ ರೌಫ್ ಭರ್ಜರಿ ಪ್ರದರ್ಶನ ತೋರಿದ್ದರು. ನಾಲ್ಕು ಓವರ್‍ಗಳಲ್ಲಿ 25 ರನ್‍ಗಳನ್ನು ನೀಡಿ 1 ವಿಕೆಟ್ ಪಡೆದಿದ್ದರು. ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 10 ವಿಕೆಟ್‍ಗಳ ಜಯ ಸಾಧಿಸಿತ್ತು. ಸೆಮಿಫೈನಲ್‍ನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಸೋಲನ್ನು ಕಂಡಿತ್ತು. ಈ ಆವೃತ್ತಿಯಲ್ಲಿ ಪಾಕಿಸ್ತಾನ ತಂಡದಲ್ಲಿ 2ನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರರಾಗಿ ಹೊರಹೊಮ್ಮಿದ್ದರು. ಇದನ್ನೂ ಓದಿ: ಜೈಲು ಅಧಿಕಾರಿಗಳ ಕಣ್ತಪ್ಪಿಸಲು ಮೊಬೈಲ್ ನುಂಗಿದ ಕೈದಿ!

    ಧೋನಿ ಈ ವರ್ಷ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಆಡುವ ನಿರೀಕ್ಷೆಯಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಈ ವರ್ಷದ ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ಮೊದಲು ಉಳಿಸಿಕೊಂಡಿರುವ ನಾಲ್ವರು ಆಟಗಾರರಲ್ಲಿ ಸಿಎಸ್‍ಕೆ ನಾಯಕ ಧೋನಿ ಅವರು ಒಬ್ಬರಾಗಿದ್ದಾರೆ. ಇದನ್ನೂ ಓದಿ: ಡ್ರ್ಯಾಗನ್ ಫ್ರೂಟ್‍ನಲ್ಲಿ ಕೊರೊನಾ!

  • ಟೀ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟಳೆಂದು ಹುಡುಗಿಯ ಕೊಲೆ ಮಾಡಿದ್ರು!

    ಟೀ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟಳೆಂದು ಹುಡುಗಿಯ ಕೊಲೆ ಮಾಡಿದ್ರು!

    ಲಕ್ನೋ: ಆಧುನಿಕ ಜಗತ್ತಿನಲ್ಲಿ ಯುವತಿಯರು ಜೀನ್ಸ್ ಪ್ಯಾಂಟ್, ಟೀ ಶರ್ಟ್ ತೊಡುವುದು ಸಾಮಾನ್ಯವಾಗಿದೆ. ಆದರೆ ಕೆಲವೆಡೆಗಳಲ್ಲಿ ಇನ್ನೂ ಜನರು ಇದನ್ನು ವಿರೋಧಿಸುತ್ತಾರೆ. ಇದೀಗ ಜೀನ್ಸ್, ಟಿ- ಶರ್ಟ್ ಧರಿಸಿದಳೆಂದು ಹುಡುಗಿಯೊಬ್ಬಳನ್ನು ಕೊಲೆಗೈದ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.

    ಮೃತಳನ್ನು ನೇಹಾ (16) ಎಂದು ಗುರುತಿಸಲಾಗಿದೆ. ಈ ಘಟನೆ ಉತ್ತರಪ್ರದೇಶದ ದೇವಾರಿಯಾ ಪ್ರದೇಶದಲ್ಲಿ ನಡೆದಿದೆ. ಈಕೆ ವಿದ್ಯಾಭ್ಯಾಸ ಹಿನ್ನೆಲೆಯಲ್ಲಿ ಲೂಧಿಯಾನದಲ್ಲಿ ನೆಲೆಸಿದ್ದಳು. ಹೀಗಾಗಿ ಅಲ್ಲಿ ಎಲ್ಲರಂತೆ ನೇಹಾ ಕೂಡ ಜೀನ್ಸ್, ಟೀ ಶರ್ಟ್ ಧರಿಸುತ್ತಿದ್ದಳು.

    ಲೂಧಿಯಾನದಲ್ಲಿ ಧರಿಸಿ ಅಭ್ಯಾಸವಿದ್ದ ನೇಹಾ ತಮ್ಮ ಮನೆಗೆ ಬಂದ ಸಂದರ್ಭದಲ್ಲಿಯೂ ಜೀನ್ಸ್, ಟೀ ಶರ್ಟ್ ಹಾಕಿದ್ದಾಳೆ. ಈ ವೇಳೆ ಮನೆಯಲ್ಲಿ ಇಂತಹ ಬಟ್ಟೆಗಳನ್ನು ಹಾಕಿಕೊಳ್ಳಬೇಡ ಎಂದು ನೇಹಾ ಚಿಕ್ಕಪ್ಪ ಹಾಗೂ ಅಜ್ಜ ವಾರ್ನ್ ಮಾಡಿದ್ದಾರೆ. ಈ ವಿಚಾರದಲ್ಲಿ ಮನೆಯಲ್ಲಿ ಗದ್ದಲವೇ ನಡೆದಿದೆ.

    ಜಗಳವಾಗಿ ಕೆಲ ಹೊತ್ತಿನ ಬಳಿಕ ಊರ ಹೊರಗೆ ಸೇತುವೆಯ ಬಳಿ ನೇಣು ಬಿಗಿದುಕೊಂಡ ರೀತಿಯಲ್ಲಿ ನೇಹಾ ಶವವವಾಗಿ ಪತ್ತೆಯಾಗಿದ್ದಾಳೆ. ಹುಡುಗಿ ಶವ ನೋಡಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಅಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಯಾರೋ ಕೊಲೆ ಮಾಡಿ ನೇತು ಹಾಕಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

    ಇತ್ತ ಹುಡುಗಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ನಾನು ಮನೆಯಲ್ಲಿ ಇಲ್ಲದ ವೇಳೆ ನನ್ನ ಮಗಳನ್ನು ಚಿಕ್ಕಪ್ಪ ಹಾಗೂ ಆಕೆಯ ಅಜ್ಜ ಸೇರಿ ಕೊಲೆ ಮಾಡಿದ್ದಾರೆ. ಬಳಿಕ ಅವರೇ ಮಗಳ ಶವವನ್ನು ಇಲ್ಲಿ ಎಸೆದಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬದುಕಿರುವುದಕ್ಕಾಗಿ ನಾನು ಅದೃಷ್ಟವಂತೆ: ಶಿಲ್ಪಾ ಶೆಟ್ಟಿ

    ತಾಯಿ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.