Tag: ಟಿ20

  • ಟೀಂ ಇಂಡಿಯಾ ಪರ ವಿಶೇಷ ದಾಖಲೆ ನಿರ್ಮಿಸಿದ ಭುವನೇಶ್ವರ್ ಕುಮಾರ್

    ಟೀಂ ಇಂಡಿಯಾ ಪರ ವಿಶೇಷ ದಾಖಲೆ ನಿರ್ಮಿಸಿದ ಭುವನೇಶ್ವರ್ ಕುಮಾರ್

    ಜೊಹಾನ್ಸ್ ಬರ್ಗ್: ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಪರ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ.

    24 ರನ್ ಗಳಿಗೆ 5 ವಿಕೆಟ್ ಪಡೆದು ಗೆಲುವಿನ ರೂವಾರಿಯಾದ ಭುವಿ, ಟೀಂ ಇಂಡಿಯಾ ಪರ ಕ್ರಿಕೆಟ್ ಟೆಸ್ಟ್, ಏಕದಿನ, ಟಿ20 ಮೂರು ಮಾದರಿಯಲ್ಲಿ 5 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಟಿ20 ಮಾದರಿಯಲ್ಲಿ 5 ವಿಕೆಟ್ ಉರುಳಿಸುವ ಮೂಲಕ ಈ ಸಾಧನೆ ಮಾಡಿದ ಎರಡನೇ ಟೀಂ ಇಂಡಿಯಾ ಬೌಲರ್ ಎಂಬ ಹೆಗ್ಗಳಿಕೆ ಪಡೆದರು. ಈ ಹಿಂದೆ ಟೀಂ ಇಂಡಿಯಾ ಯುವ ಸ್ಪಿನ್ ಬೌಲರ್ ಯಜುವೇಂದ್ರ ಚಹಲ್ 5 ವಿಕೆಟ್ ಉರುಳಿಸಿದ್ದರು.

    ಪಂದ್ಯದ 18ನೇ ಓವರ್ ನಲ್ಲಿ ಭುವಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಅವಕಾಶದಿಂದ ವಂಚಿತರಾದರು. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಸಂಕಷ್ಟ ಸಮಯದಲ್ಲಿ ಉತ್ತಮ ಜೊತೆಯಾಟವಾಡುತ್ತಿದ್ದ ರೀಝ ಹೆಂಡ್ರಿಕ್ಸ್ (70) ಮತ್ತು ಫರ್ಹಾನ್ ಬೆಹರ್ಡಿನ್ (39) ಜೋಡಿಯನ್ನು ಔಟ್ ಮಾಡಿದ್ದರು.

    ಭುವಿ ಈ ಓವರ್ ನಲ್ಲಿ ಮೂರು ವಿಕೆಟ್ ಪಡೆದರೆ, ಕೊನೆಯ ಎಸೆತದಲ್ಲಿ ರನೌಟ್ ಆಗುವ ಮೂಲಕ ದಕ್ಷಿಣ ಆಫ್ರಿಕಾ 5 ವಿಕೆಟ್ ಕಳೆದುಕೊಂಡಿತು. ಆಫ್ರಿಕಾ ವಿರುದ್ಧ ಅತ್ಯುತ್ತಮ ಬೌಲಿಂಗ್ ದಾಖಲೆ ಮಾಡಿದ ವಿಶ್ವದ ಬೌಲರ್ ಗಳ ಪಟ್ಟಿಯಲ್ಲಿ ಭುವನೇಶ್ವರ್ ಮೂರನೇ ಸ್ಥಾನ ಪಡೆದರು. ಅಲ್ಲದೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಭುವನೇಶ್ವರ್ ವೃತ್ತಿ ಜೀವನದಲ್ಲಿ ಟೆಸ್ಟ್ ಮಾದರಿಯಲ್ಲಿ 82 ರನ್ ನೀಡಿ 6 ವಿಕೆಟ್, ಏಕದಿನದಲ್ಲಿ 42 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.

    ಪಂದ್ಯದ ನಂತರ ಮಾತನಾಡಿದ ಭುವಿ, ದೇಶದ ಪರ ಆಡುವ ಸಂದರ್ಭದಲ್ಲಿ ವಿಕೆಟ್ ಪಡೆಯುವುದು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಆದರೆ 5 ವಿಕೆಟ್ ಪಡೆಯುವುದು ಅಲ್ಲ. ಪ್ರತಿ ಪಂದ್ಯದಲ್ಲಿ ಗೆಲುವು ಪಡೆಯುವುದು ಮುಖ್ಯ. ಮೂರು ಮಾದರಿಯಲ್ಲಿ ಐದು ವಿಕೆಟ್ ಸಿಕ್ಕಿರುವುದು ಸಂತೋಷವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮೊದಲ ಟಿ-20ಯಲ್ಲಿ ಧೋನಿಯಿಂದ ವಿಶ್ವದಾಖಲೆ

  • ಕೊನೆಯಲ್ಲಿ ಕಾರ್ತಿಕ್ ಸಿಕ್ಸರ್, ಕ್ಲೀನ್ ಸ್ವೀಪ್ ಗೈದು ಸರಣಿ ಗೆದ್ದ ಟೀಂ ಇಂಡಿಯಾ

    ಕೊನೆಯಲ್ಲಿ ಕಾರ್ತಿಕ್ ಸಿಕ್ಸರ್, ಕ್ಲೀನ್ ಸ್ವೀಪ್ ಗೈದು ಸರಣಿ ಗೆದ್ದ ಟೀಂ ಇಂಡಿಯಾ

    ಮುಂಬೈ: ಮೂರನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 5 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಗೆಲ್ಲಲು 136 ರನ್ ಗಳ ಸವಾಲನ್ನು ಪಡೆದ ಭಾರತ 20 ಓವರ್ 19.2 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿಯನ್ನು ಮುಟ್ಟಿತು.

    16.1 ಓವರ್ ಗಳಲ್ಲಿ 108 ರನ್ ಗಳಿಸಿದಾಗ ಪಾಂಡ್ಯ ಔಟಾದಾಗ ಶ್ರೀಲಂಕಾದ ಗೆಲುವಿನ ಆಸೆ ಚಿಗುರಿತ್ತು. ಕೊನೆಯಲ್ಲಿ 18 ಎಸೆತಕ್ಕೆ 20 ರನ್ ಬೇಕಿದ್ದರೆ ನಂತರದ ಓವರ್ ನಲ್ಲಿ 12 ಎಸೆತಕ್ಕೆ 15 ರನ್ ಬೇಕಿತ್ತು.

    ಪ್ರದೀಪ್ ಎಸೆದ 19ನೇ ಓವರಿನ ಮೊದಲ ಎಸೆತವನ್ನು ಕಾರ್ತಿಕ್ ಸಿಕ್ಸರ್ ಅಟ್ಟಿದ್ದರಿಂದ ಪಂದ್ಯದ ರೋಚಕ ಚಿತ್ರಣ ಬದಲಾಯಿತು. ಕೊನೆಯ ಓವರ್ ನಲ್ಲಿ 6 ಎಸೆತಕ್ಕೆ 3 ರನ್ ಬೇಕಿತ್ತು. ಮೊದಲ ಎಸೆತದಲ್ಲಿ ಮ್ಯಾಚ್ ಫಿನಿಶರ್ ಧೋನಿ ಎರಡು ರನ್ ಹೊಡೆದರೆ ಎರಡನೇ ಎಸೆತವನ್ನು ಬೌಂಡರಿಗೆ ಅಟ್ಟಿ ಸರಣಿಯನ್ನು ಗೆದ್ದುಕೊಟ್ಟರು.

    ಕೆಎಲ್ ರಾಹುಲ್ 4 ರನ್ ಗಳಿಸಿ ಔಟಾದರೆ ರೋಹಿತ್ ಶರ್ಮಾ 27 ರನ್(20 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು. ಉತ್ತಮವಾಗಿ ಆಡುತ್ತಿದ್ದ ಶ್ರೇಯಸ್ ಅಯ್ಯರ್ 30 ರನ್(32 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು.

    ಮನಿಷ್ ಪಾಂಡೆ 32 ರನ್(29 ಎಸೆತ, 4 ಬೌಂಡರಿ) ಹೊಡೆದರೆ ಹಾರ್ದಿಕ್ ಪಾಂಡ್ಯ 4 ರನ್ ಗೊಳಿಸಿ ಔಟಾದರು. ಕೊನೆಯಲ್ಲಿ ಕಾರ್ತಿಕ್ ಮತ್ತು ಧೋನಿ ಮುರಿಯದ 6ನೇ ವಿಕೆಟ್ ಗೆ 31 ರನ್ ಜೊತೆಯಾಟವಾಡಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಕಾರ್ತಿಕ್ 18 ರನ್(12 ಎಸೆತ, 1 ಬೌಂಡರಿ), ಧೋನಿ 16 ರನ್(10 ಎಸೆತ, 2 ಬೌಂಡರಿ) ಹೊಡೆದರು.

    ಆರಂಭದಿಂದಲೇ ವಿಕೆಟ್ ಪತನ:
    ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಲಂಕಾ ಆರಂಭದಲ್ಲಿ 8 ರನ್ ಗಳಿಸಿದ್ದಾಗ ಮೊದಲ ವಿಕೆಟ್ ಪತನಗೊಂಡಿತ್ತು. 85 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ 7ನೇ ವಿಕೆಟ್ ಗೆ ಗುಣರತ್ನೆ ಮತ್ತು ಶನುಕ 26 ರನ್ ಜೊತೆಯಾಟ ವಾಡಿದ್ದರೆ, ಮುರಿಯದ 8ನೇ ವಿಕೆಟ್ ಗೆ ಶನುಕ ಮತ್ತು ಧನಂಜಯ 24 ರನ್ ಜೊತೆಯಾಟವಾಡಿದ್ದರಿಂದ ತಂಡದ ಮೊತ್ತ 20 ಓವರ್ ಗಳಿಗೆ 7 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು.

    ಗುಣರತ್ನೆ 36 ರನ್(37 ಎಸೆತ, 3 ಬೌಂಡರಿ), ಶನುಕ 29 ರನ್(24 ಎಸೆತ, 2 ಸಿಕ್ಸರ್) ಮಧ್ಯಮ ಕ್ರಮಾಂಕದಲ್ಲಿ ಸಮರವಿಕ್ರಮ 21 ರನ್(17 ಎಸೆತ, 3 ಬೌಂಡರಿ) ಹೊಡೆದರು. ಜಯದೇವ್ ಉನದ್ಕತ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್, ಇಂದು ಮೊದಲ ಪಂದ್ಯ ಆಡಿದ ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ 1 ವಿಕೆಟ್ ಪಡೆದರು.

    ಈ ಪಂದ್ಯದಲ್ಲಿ 2 ವಿಕೆಟ್ ಕಿತ್ತು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಜಯದೇವ್ ಉನದ್ಕತ್ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

    ಲಂಕಾ ಪ್ರವಾಸದಲ್ಲೂ ಭಾರತ ಟೆಸ್ಟ್, ಏಕದಿನ, ಟಿ20 ಸರಣಿಯನ್ನು ಗೆದ್ದುಕೊಂಡಿತ್ತು. ಈಗ ಭಾರತದ ಲಂಕಾ ಪ್ರವಾಸದಲ್ಲೂ ಎಲ್ಲ ಮೂರು ಮಾದರಿಯ ಸರಣಿಯನ್ನು ಗೆದ್ದುಕೊಂಡಿದೆ. ಕಟಕ್ ನಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು 93 ರನ್ ಗಳಿಂದ ಭಾರತ ಜಯಗಳಿಸಿದ್ದರೆ, ಇಂದೋರ್ ನಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು 88 ರನ್ ಗಳಿಂದ ಜಯಗಳಿಸಿತ್ತು.

  • ವೈರಲ್ ವಿಡಿಯೋ: ಕೋಚ್ ರವಿಶಾಸ್ತ್ರಿ ಅವರಿಗೆ ರೋಹಿತ್ ಶರ್ಮಾ ಮಾಡಿದ ಸಿಗ್ನಲ್ ಏನು?

    ವೈರಲ್ ವಿಡಿಯೋ: ಕೋಚ್ ರವಿಶಾಸ್ತ್ರಿ ಅವರಿಗೆ ರೋಹಿತ್ ಶರ್ಮಾ ಮಾಡಿದ ಸಿಗ್ನಲ್ ಏನು?

    ಇಂದೋರ್: ಇಲ್ಲಿನ ಹೋಳ್ಕರ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಧೋನಿ ಅವರನ್ನು ನಂ.3 ರಲ್ಲಿ ಬ್ಯಾಟಿಂಗ್ ಕಳುಹಿಸುವಂತೆ ಕೋಚ್ ರವಿ ಶಾಸ್ತ್ರಿ ಅವರಿಗೆ ಸಿಗ್ನಲ್ ಮಾಡಿರುವ ವಿಡಿಯೋ ಈ ವೈರಲ್ ಆಗಿದೆ.

    ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿರುವ ವಿಧಾನ ಹಾಗೂ ಅವರ ನಿರ್ಧಾರಗಳು ಹಲವು ಹಿರಿಯ ಆಟಗಾರರ ಮೆಚ್ಚುಗೆಗೆ ಕಾರಣವಾಗಿದೆ.

    ಪಂದ್ಯದ ಆರಂಭಿಕರಾಗಿ ಕಣಕ್ಕೆ ಇಳಿದ ರೋಹಿತ್ ಶರ್ಮಾ, ಕೆ.ಎಲ್ ರಾಹುಲ್ ಜೋಡಿ ಅಬ್ಬರದ ಆಟವಾಡಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಸುರಿಸಿ ಹಲವು ದಾಖಲೆಗಳಿಗೆ ಕಾರಣರಾದರು. ಈ ವೇಳೆ 43 ಎಸೆತಗಳಲ್ಲಿ 118 ರನ್ ಗಳಿದ್ದ ರೋಹಿತ್ ಔಟ್ ಆದ ತಕ್ಷಣ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ಯಾರನ್ನು ಬ್ಯಾಟಿಂಗ್ ಗೆ ಕಳುಹಿಸ ಬೇಕು ಎಂಬ ಪ್ರಶ್ನೆಗೆ ರೋಹಿತ್, ಧೋನಿ ಅವರನ್ನು ಸೂಚಿಸಿದರು.

    ಈ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ, ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್, ಧೋನಿ ಬ್ಯಾಟಿಂಗ್ ಅವರಿಗೆ ಮುಂಬಡ್ತಿ ನೀಡುವ ರೋಹಿತ್ ಶರ್ಮಾ ಅವರ ನಿರ್ಧಾರಕ್ಕೆ ಮೆಚ್ಚುಗೆ ಸೂಚಿಸಿದರು. ಅಲ್ಲದೇ ಟೀಂ ಇಂಡಿಯಾದ ಹಲವು ಕ್ರಿಕೆಟ್ ಅಭಿಮಾನಿಗಳು ರೋಹಿತ್ ಶರ್ಮಾ ಅವರ ನಿರ್ಧಾರಕ್ಕೆ ಮೆಚ್ಚಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  23 ಎಸೆತಕ್ಕೆ 50 ರನ್, 35 ಎಸೆತಕ್ಕೆ 100 ರನ್: ಟಿ20ಯಲ್ಲೂ ರೋ’ಹಿಟ್’ ದಾಖಲೆಯ ಶತಕ

    ಲಂಕಾ ವಿರುದ್ಧದ ಮೊದಲ ಟಿ2 ಪಂದ್ಯದ ವೇಳೆಯೂ ಧೋನಿ ಅವರ ಬ್ಯಾಟಿಂಗ್ ಕ್ರಮಾಂಕವನ್ನು 4ನೇ ಸ್ಥಾನಕ್ಕೆ ಹೆಚ್ಚಿಸಿ, ಧೋನಿ ಅವರು ಬ್ಯಾಟಿಂಗ್ ನಡೆಸಲು ಸೂಕ್ತ ಕ್ರಮಾಂಕ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದರು.

    https://twitter.com/CricketKaVideos/status/944217327637225472

  • ಶ್ರೀಲಂಕಾದ 100ನೇ ಟಿ20 ಪಂದ್ಯದಲ್ಲಿ ಬಂದಿದ್ದು ಕೇವಲ 4 ಬೌಂಡರಿ, 2 ಸಿಕ್ಸ್ ಮಾತ್ರ!

    ಶ್ರೀಲಂಕಾದ 100ನೇ ಟಿ20 ಪಂದ್ಯದಲ್ಲಿ ಬಂದಿದ್ದು ಕೇವಲ 4 ಬೌಂಡರಿ, 2 ಸಿಕ್ಸ್ ಮಾತ್ರ!

    ಕಟಕ್: ಟೀಂ ಇಂಡಿಯಾ – ಶ್ರೀಲಂಕಾ ನಡುವಿನ ಮೊದಲ ಟಿ20 ಪಂದ್ಯದ ಭಾರತದ ಇನ್ನಿಂಗ್ಸ್ ಹೊಡಿ ಬಡಿ ಆಟಕ್ಕೆ ಸಾಕ್ಷಿಯಾದರೆ ಶ್ರೀಲಂಕಾದ ಇನ್ನಿಂಗ್ಸ್ ಎಲ್ಲೂ ಇದು ಟಿ20 ಪಂದ್ಯವೆಂದು ಅನ್ನಿಸಲೇ ಇಲ್ಲ. ಈ ಪಂದ್ಯ ಶ್ರೀಲಂಕಾದ 100ನೇ ಪಂದ್ಯವಾಗಿತ್ತು. ಆದರೆ ಇದರ ಸವಿ ಶ್ರೀಲಂಕನ್ನರಿಗೆ ಸಿಗಲೇ ಇಲ್ಲ. ಕಾರಣ 100ನೇ ಪಂದ್ಯದಲ್ಲಿ ಶ್ರೀಲಂಕಾ 93 ರನ್ ಗಳಿಂದ ಸೋಲನ್ನಪ್ಪಿದೆ.

    ಶ್ರೀಲಂಕಾ ಆಟಗಾರರು ಬ್ಯಾಟ್ ಮಾಡಿದ 16 ಓವರಲ್ಲಿ ಕೇವಲ 4 ಬೌಂಡರಿ ಹಾಗೂ 2 ಸಿಕ್ಸರ್ ಮಾತ್ರ ಬಂತು. ಇಂದಿನ ಪಂದ್ಯದಲ್ಲಿ ಭಾರತದ ಪರವಾಗಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಒಟ್ಟು 4 ವಿಕೆಟ್ ಪಡೆದು ಪಂದ್ಯಕ್ಕೆ ಮಹತ್ವದ ತಿರುವು ತಂದುಕೊಟ್ಟರು. ಅಲ್ಲದೇ ಚಾಹಲ್ 2017ರಲ್ಲಿ 19 ವಿಕೆಟ್ ಪಡೆದು, ಈ ವರ್ಷ ಗರಿಷ್ಠ ವಿಕೆಟ್ ಪಡೆದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

    ರೋಹಿತ್ ದಾಖಲೆ!: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಂಜೆಲೋ ಮ್ಯಾಥ್ಯೂಸ್ ಬೌಲಿಂಗಲ್ಲಿ 10ನೇ ಬಾರಿಗೆ ಔಟಾದರು. 2010ರ ಬಳಿಕ ಭಾರತದ ಯಾವುದೇ ಆಟಗಾರ ಒಬ್ಬನೇ ಬೌಲರ್ ಗೆ 10 ಬಾರಿ ಔಟಾದ ದಾಖಲೆಗಳಿರಲಿಲ್ಲ.

    ಧೋನಿ ಸ್ಪೆಷಲ್: ಯಾರು ಏನೇ ಹೇಳಿದರೂ ನನ್ನ ನೆಮ್ಮದಿಗೆ ಭಂಗವಿಲ್ಲ ಎಂಬಂತೆ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಪಂದ್ಯದಲ್ಲೂ ತನ್ನ ಮ್ಯಾಜಿಕ್ ಮುಂದುವರೆಸಿದರು. ಬ್ಯಾಟಿಂಗಲ್ಲಿ 22 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರೆ, ಕೀಪಿಂಗಲ್ಲಿ ಶ್ರೀಲಂಕಾದ ನಾಲ್ವರು ಆಟಗಾರರು ಔಟಾಗುವಲ್ಲಿ ಪ್ರಧಾನ ಪಾತ್ರ ವಹಿಸಿದರು. ಇಬ್ಬರು ಆಟಗಾರರನ್ನು ಸ್ಟಂಪಿಂಗ್ ಮಾಡಿದರೆ, ಇನ್ನಿಬ್ಬರು ಆಟಗಾರರು ಧೋನಿಗೆ ಕ್ಯಾಚಿತ್ತು ಪೆವಿಲಿಯನ್ ನತ್ತ ಮುಖ ಮಾಡಿದರು.

  • ಸಿಕ್ಸರ್ ಸಿಡಿಸಿ ಟಿ20ಯಲ್ಲಿ ವಿಶ್ವದಾಖಲೆ ಬರೆದ ಗೇಲ್: ವಿಡಿಯೋ ನೋಡಿ

    ಸಿಕ್ಸರ್ ಸಿಡಿಸಿ ಟಿ20ಯಲ್ಲಿ ವಿಶ್ವದಾಖಲೆ ಬರೆದ ಗೇಲ್: ವಿಡಿಯೋ ನೋಡಿ

    ಢಾಕಾ : ವೆಸ್ಟ್ ಇಂಡೀಸ್‍ನ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ತಮ್ಮ ಆಟದ ಮೂಲಕ ಟ್ವೆಂಟಿ-20 ಕ್ರಿಕೆಟ್ ಮಾದರಿಯಲ್ಲಿ ಹಲವು ಹೊಸ ವಿಶ್ವದಾಖಲೆಗಳನ್ನು ಸೃಷ್ಟಿಸಿದ್ದಾರೆ. ಮಂಗಳವಾರ ನಡೆದ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ನ ಫೈನಲ್ ಪಂದ್ಯದಲ್ಲಿ 18 ಸಿಕ್ಸರ್‍ಗಳನ್ನು ಬಾರಿಸಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದಾರೆ. ಅಲ್ಲದೆ ಟಿ20 ಮಾದರಿಯಲ್ಲಿ 11 ಸಾವಿರ ರನ್ ಕಲೆ ಹಾಕಿದ ವಿಶ್ವದ ಮೊದಲ ಆಟಗಾರನೆಂಬ ದಾಖಲೆಗೂ ಪಾತ್ರರಾಗಿದ್ದಾರೆ.

    ಈ ಹಿಂದೆ 2013ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ಪರ ಕಣಕ್ಕಿಳಿದು ಪುಣೆ ವಾರಿಯರ್ಸ್ ವಿರುದ್ಧ 17 ಸಿಕ್ಸರ್ ಸಿಡಿಸಿ ಇನ್ನಿಂಗ್ಸ್‍ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆಯನ್ನು ನಿರ್ಮಿಸಿದ್ದರು.

    ಪ್ರಸ್ತುತ ಬಾಂಗ್ಲಾದೇಶ ಪ್ರೀಮಿಯರ್ ನಲ್ಲಿ ರಂಗ್ಪುರ್ ರೈಡರ್ಸ್ ಪರ ಕಣಕ್ಕಿಳಿದ ಗೇಲ್, ಕೇವಲ 69 ಎಸೆತಗಳಲ್ಲಿ 5 ಬೌಂಡರಿ ಮತ್ತು 18 ಸಿಕ್ಸರ್‍ಗಳ ನೆರವಿನಿಂದ 146 ರನ್ ಬಾರಿಸಿದ್ದಾರೆ. ಈ ಮೂಲಕ ಟಿ20 ಯಲ್ಲಿ 20 ಶತಕಗಳನ್ನು ಸಿಡಿಸಿದ ಮೊದಲ ಬ್ಯಾಟ್ಸ್ ಮನ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.

    ಗೇಲ್ ದಾಖಲೆಗಳು :
    – ಟಿ20 ಪಂದ್ಯದ ಇನ್ನಿಂಗ್ಸ್‍ವೊಂದರಲ್ಲಿ ಅತಿ ಹೆಚ್ಚು 18 ಸಿಕ್ಸರ್ ಸಿಡಿಸಿದ ಮೊದಲ ಆಟಗಾರ
    – ಟಿ20 ಮಾದರಿ ಫೈನಲ್ ಪಂದ್ಯದಲ್ಲಿ ಹೆಚ್ಚು ರನ್ (146 ರನ್, 69 ಎಸೆತ)ಹೊಡೆದ ಬ್ಯಾಟ್ಸ ಮನ್
    – ಟಿ20 ಮಾದರಿಯಲ್ಲಿ 11 ಸಾವಿರ ರನ್ ಕಲೆ ಹಾಕಿದ ವಿಶ್ವದ ಮೊದಲ ಆಟಗಾರ
    – ಟಿ20 ಕ್ರಿಕೆಟ್‍ನಲ್ಲಿ 20 ಶತಕಗಳನ್ನು ಹೊಡೆದ ಮೊದಲ ಆಟಗಾರ
    – ಐಪಿಲ್, ಸಿಪಿಲ್, ಬಿಪಿಲ್ ಮತ್ತು ಟಿ20 ಮಾದರಿಯ ಲೀಗ್‍ಗಲ್ಲಿ 100 ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ ಮೊದಲ ಆಟಗಾರ.

    https://www.youtube.com/watch?v=D4bwutxZSk8

  • ಟಿ20ಗೆ ಧೋನಿ ನಿವೃತ್ತಿ ಹೇಳೋದು ಉತ್ತಮ: ವಿವಿಎಸ್ ಲಕ್ಷ್ಮಣ್

    ಟಿ20ಗೆ ಧೋನಿ ನಿವೃತ್ತಿ ಹೇಳೋದು ಉತ್ತಮ: ವಿವಿಎಸ್ ಲಕ್ಷ್ಮಣ್

    ನವದೆಹಲಿ: ಟಿ20 ಕ್ರಿಕೆಟ್‍ಗೆ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಹೇಳುವುದು ಒಳ್ಳೆಯದ್ದು ಎಂದು ಭಾರತ ತಂಡ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

    ಶನಿವಾರ ರಾಜ್‍ಕೋಟ್ ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ಬಳಿಕ ಪ್ರತಿಕ್ರಿಯಿಸಿದ ಅವರು, ಧೋನಿ ಟಿ20ಯಲ್ಲಿ ಯುವ ಕ್ರಿಕೆಟಿಗರಿಗ ಅವಕಾಶ ನೀಡಬೇಕು. ಟಿ20ಯ ಬದಲು ಏಕದಿನ ಕ್ರಿಕೆಟ್ ನಲ್ಲಿ ಧೋನಿ ಚೆನ್ನಾಗಿ ಆಡುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    ಧೋನಿ ನಾಲ್ಕನೇಯವರಾಗಿ ಕ್ರೀಸ್ ಗೆ ಆಗಮಿಸುತ್ತಾರೆ. ಜೊತೆಗೆ ಮೈದಾನ ಹೊಂದಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ. ಶನಿವಾರದ ಆಟ ನೋಡಿದರೆ ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ 160 ಇದ್ದರೆ, ಧೋನಿಯ ಸ್ಟ್ರೈಕ್ ರೇಟ್ 80 ಇತ್ತು ಎಂದು ಹೇಳುವ ಮೂಲಕ ತಮ್ಮ ವಾದಕ್ಕೆ ಸಮರ್ಥನೆ ನೀಡಿದ್ದಾರೆ.

    197 ರನ್ ಗಳ ಗುರಿಯನ್ನು ಬೆನ್ನೆಟ್ಟಿಟ್ಟುತ್ತಿದ್ದ ವೇಳೆ 9.1 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 67 ರನ್ ಗಳಿಸಿದ್ದಾಗ ನಾಲ್ಕನೇಯವರಾಗಿ ಧೋನಿ ಕ್ರೀಸ್ ಗೆ ಆಗಮಿಸಿದರು. ಕೊಹ್ಲಿ ಬೌಂಡರಿ ಹೊಡೆದು ರನ್ ಹೆಚ್ಚಿಸುವತ್ತ ಗಮನ ಹರಿಸಿದರೆ ಧೋನಿ ಆರಂಭದಲ್ಲಿ ದೊಡ್ಡ ಹೊಡೆತ ಹೊಡೆಯಲು ಪ್ರಯತ್ನಿಸಲಿಲ್ಲ.

    15 ಓವರ್ ಪೂರ್ಣಗೊಂಡಾಗ ಧೋನಿ 18 ಎಸೆತ ಎದುರಿಸಿ 16 ರನ್ ಹೊಡೆದಿದ್ದರು. ಧೋನಿ ಅಂತಿಮವಾಗಿ 49 ರನ್(37 ಎಸೆತ, 2 ಬೌಂಡರಿ, 3 ಸಿಕ್ಸರ್) ಸಿಡಿಸಿ 19.3 ಓವರ್ ನಲ್ಲಿ 7ನೇಯವರಾಗಿ ಔಟಾದರು.

    ಧೋನಿ ಟಿ20 ಕ್ರಿಕೆಟ್‍ಗೆ ನಿವೃತ್ತಿ ಹೇಳಬೇಕೇ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ದಾಖಲಿಸಿ.

    ಇದನ್ನೂ ಓದಿ: ವಿರಾಟ್, ಧೋನಿ ನಡುವೆ ಹೊಂದಾಣಿಕೆ ಎಷ್ಟಿದೆ? ಕೊಹ್ಲಿಯ ಮಾತು ಕೇಳಿದ್ರೆ ನಿಮ್ಗೆ ಇಷ್ಟವಾಗುತ್ತೆ

     

  • ಯುವಿ ಸಿಕ್ಸರ್ ದಾಖಲೆ ಮುರಿಯದಿದ್ರೂ ‘ಸೊನ್ನೆ’ ಸುತ್ತಬೇಕಾದವ 35 ಎಸೆತದಲ್ಲಿ ಸೆಂಚುರಿ ಬಾರಿಸಿದ!

    ಯುವಿ ಸಿಕ್ಸರ್ ದಾಖಲೆ ಮುರಿಯದಿದ್ರೂ ‘ಸೊನ್ನೆ’ ಸುತ್ತಬೇಕಾದವ 35 ಎಸೆತದಲ್ಲಿ ಸೆಂಚುರಿ ಬಾರಿಸಿದ!

    – ಮೊದಲ 14 ಎಸೆತಗಳಲ್ಲಿ 18 ರನ್, ನಂತರದ 21 ಎಸೆತದಲ್ಲಿ 82 ರನ್

    ಪೊಚೆಸ್ಟ್ರೂಮ್ (ದಕ್ಷಿಣ ಆಫ್ರಿಕಾ): ಬ್ಯಾಟಿಂಗ್ ಗೆ ಬಂದಿದ್ದು 10ನೇ ಓವರ್. ಎದುರಿಸಿದ 2ನೇ ಎಸೆತದಲ್ಲಿ ಕೈಚೆಲ್ಲಿದ ಕ್ಯಾಚ್, ಆರಂಭದ 14 ಎಸೆತಗಳಲ್ಲಿ 18 ರನ್, ನಂತರದ 21 ಎಸೆತಗಳಲ್ಲಿ 82 ರನ್, ಒಂದೇ ಓವರ್ ನಲ್ಲಿ 5 ಸಿಕ್ಸರ್, ಸ್ವಲ್ಪದರಲ್ಲೇ ತಪ್ಪಿದ ಯುವರಾಜ್ ಸಿಂಗ್ ದಾಖಲೆಯನ್ನು ಸರಿಗಟ್ಟುವ ಅವಕಾಶ. ಕೇವಲ 35 ಎಸೆತಗಳಲ್ಲಿ ಸೆಂಚುರಿ ಬಾರಿಸಿದ ಕೀರ್ತಿ ಡೇವಿಡ್ ಮಿಲ್ಲರ್ ಪಾಲಾಯ್ತು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಗೌರವವನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡರು. ಹೌದು, ದಕ್ಷಿಣ ಆಫ್ರಿಕಾ ತಂಡದ ಆಟಗಾರ ಡೇವಿಡ್ ಮಿಲ್ಲರ್ ಬಾಂಗ್ಲಾ ತಂಡದ ವಿರುದ್ಧ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

    2ನೇ ಬಾಲಲ್ಲಿ ಶೂನ್ಯಕ್ಕೆ ಔಟಾಗಬೇಕಿತ್ತು!: ತನಗೆ ಬಾಂಗ್ಲಾ ವಿಕೆಟ್ ಕೀಪರ್ ನೀಡಿದ ಜೀವದಾನವನ್ನು ವರದಾನವಾಗಿ ಪರಿಗಣಿಸಿದ ಡೇವಿಡ್ ಮಿಲ್ಲರ್ ಆರಂಭದಲ್ಲಿ ಮುಗ್ಗರಿಸುತ್ತಲೇ ಬ್ಯಾಟಿಂಗ್ ಮಾಡಿದರು. 10ನೇ ಓವರ್ ನ ಕೊನೆಯ ಎಸೆತದಲ್ಲಿ ಬ್ಯಾಟಿಂಗ್ ಗೆ ಕ್ರೀಸ್ ಗೆ ಆಗಮಿಸಿದ್ದ ಮಿಲ್ಲರ್ ಯಾವುದೇ ರನ್ ಗಳಿಸಲಿಲ್ಲ.

    ಓವರ್ ಮುಗಿದ ಹಿನ್ನೆಲೆಯಲ್ಲಿ ಹಶೀಂ ಆಮ್ಲ ಸ್ಟ್ರೈಕ್ ಗೆ ಬಂದರು. 11ನೇ ಓವರ್ ನ ಮೊದಲ ಎಸೆತದಲ್ಲಿ ಹಶೀಂ ಆಮ್ಲ 1 ರನ್ ಗಳಿಸಿ ಮಿಲ್ಲರ್ ಗೆ ಸ್ಟ್ರೈಕ್ ನೀಡಿದರು. ಈ ಓವರ್ ಎಸೆಯುತ್ತಿದ್ದ ರೂಬೆಲ್ ಹುಸೈನ್ ನಂತರದ ಎಸೆತವನ್ನು ಶಾರ್ಟ್ ಬಾಲ್ ಮಾಡಿದರು. ಈ ವೇಳೆ ಬಾಲ್ ಮಿಲ್ಲರ್ ಗ್ಲೌಸ್ ಸವರಿಕೊಂಡು ವಿಕೆಟ್ ಕೀಪರ್ ಬಳಿಗೆ ಹೋಯಿತು. ವಿಕೆಟ್ ಕೀಪರ್ ಗ್ಲೌಸ್ ಗೆ ಕ್ಯಾಚ್ ಹೋದರೂ ಬ್ಯಾಲೆನ್ಸ್ ತಪ್ಪಿದ ಕಾರಣ ಮುಷ್ಫಿಕುರ್ ಕ್ಯಾಚ್ ಕೈ ಚೆಲ್ಲಿದರು. ನಂತರ ಹಲವಾರು ಎಸೆತಗಳಲ್ಲಿ ಮಿಲ್ಲರ್ ಮುಗ್ಗರಿಸಿದರು.

    ಆರಂಭದಲ್ಲಿ ನನಗೆ ಬ್ಯಾಟ್ ಮಾಡುವಾಗ ಸಮಸ್ಯೆ ಎದುರಾಯಿತು. ಆರಂಭದ 10 ಬಾಲ್ ನಲ್ಲಿ ನಾನು 2 ಬಾರಿ ಔಟಾಗಬೇಕಿತ್ತು. ಆದರೆ ನಾನು ಬಚಾವಾದೆ. ಆದರೆ ಕೊನೆಯಲ್ಲಿ ನನ್ನ ಬ್ಯಾಟಿಂಗ್ ನನಗೆ ತೃಪ್ತಿ ಹಾಗೂ ಸಂತೋಷ ತಂದು ಕೊಟ್ಟಿದೆ ಎಂದು ಹೇಳಿದರು. ಒಟ್ಟು 36 ಎಸೆತಗಳನ್ನು ಎದುರಿಸಿದ ಡೇವಿಡ್ ಮಿಲ್ಲರ್ 9 ಸಿಕ್ಸರ್ ಹಾಗೂ 7 ಬೌಂಡರಿಗಳ ನೆರವಿನಿಂದ 101 ರನ್ ಗಳಿಸಿ ಅಜೇಯರಾಗಿ ಉಳಿದರು.

    ಯುವಿ ದಾಖಲೆ ಸರಿಗಟ್ಟಿದವರಿಲ್ಲ!: ಇನ್ನಿಂಗ್ಸ್‍ನ 19ನೇ ಓವರ್ ನ ಆರಂಭದ 5 ಎಸೆತಗಳನ್ನು ಡೇವಿಡ್ ಮಿಲ್ಲರ್ ಸಿಕ್ಸರ್ ಬಾರಿಸಿದ್ದರು. ಕೊನೆಯ ಎಸೆತವನ್ನೂ ಅವರು ಸಿಕ್ಸರ್ ಬಾರಿಸುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಈ ಮೂಲಕ ಯುವರಾಜ್ ಸಿಂಗ್ ಒಂದೇ ಓವರ್ ಗೆ ಬಾರಿಸಿದ 6 ಸಿಕ್ಸರ್ ಗಳ ದಾಖಲೆಯನ್ನು ಮಿಲ್ಲರ್ ಸರಿಗಟ್ಟುವ ಅವಕಾಶವೂ ಇತ್ತು. ಆದರೆ ಕೊನೆಯ ಎಸೆತದಲ್ಲಿ ಕೇವಲ 1 ರನ್ ಮಾತ್ರ ಗಳಿಸುವುದು ಸಾಧ್ಯವಾಯ್ತು.

    ಮಿಲ್ಲರ್ ಆಮ್ಲ ಜೊತೆಯಾಟ: ಮಿಲ್ಲರ್ ಹಾಗೂ ಹಶೀಂ ಆಮ್ಲ ಜೋಡಿ ನಾಲ್ಕನೇ ವಿಕೆಟ್‍ಗೆ ಕೇವಲ 41 ಎಸೆತಗಳ ನೆರವಿನಿಂದ 79 ರನ್‍ಗಳ ಜೊತೆ ಆಟವನ್ನು ನೀಡಿದರು. ಆಮ್ಲ ಈ ಪಂದ್ಯದಲ್ಲಿ 51 ಎಸೆತಗಳಲ್ಲಿ 85 ಗಳಿಸಿ ಮಿಲ್ಲರ್‍ಗೆ ಉತ್ತಮ ಜೊತೆ ಆಟವನ್ನು ನೀಡಿದರು. 85 ರನ್ ಗಳ ಈ ಇನ್ನಿಂಗ್ಸ್ ನಲ್ಲಿ 1 ಸಿಕ್ಸರ್ ಹಾಗೂ 11 ಬೌಂಡರಿಗಳಿದ್ದವು.

    ಈ ಹಿಂದಿನ ಸೆಂಚುರಿ ದಾಖಲೆ!: ಈ ಹಿಂದೆ ಟಿ20 ಮಾದರಿಯಲ್ಲಿ ಅತ್ಯಂತ ವೇಗದ ಶತಕವನ್ನು ಸಿಡಿಸಿದ ದಾಖಲೆಯನ್ನು ದಕ್ಷಿಣ ಆಫ್ರಿಕಾದ ರಿಚರ್ಡ್ ಲೆವಿ ಹೊಂದಿದ್ದರು. ರಿಚರ್ಡ್ ಲೆವಿ 2012ರಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಕೇವಲ 45 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು. ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಡೇವಿಡ್ ಮಿಲ್ಲರ್ ಸ್ಫೋಟಕ ಶತಕದಿಂದ ನಿಗದಿತ 20 ಓವರ್ ಗಳಲ್ಲಿ 224 ರನ್‍ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ದಕ್ಷಿಣ ಆಫ್ರಿಕಾ ಬೃಹತ್ ಮೊತ್ತವನ್ನು ಬೆನ್ನತ್ತಿದ ಬಾಂಗ್ಲಾ 141 ರನ್‍ಗಳಿಗೆ ಆಲೌಟಾಯಿತು. ಈ ಮೂಲಕ ದಕ್ಷಿಣ ಆಫ್ರಿಕಾ 83 ರನ್‍ಗಳ ಗೆಲುವು ಸಾಧಿಸಿತು.

    ಟಿ20ಯಲ್ಲಿ ದಾಖಲಾಗಿರುವ ಅತ್ಯಂತ ವೇಗದ ಟಾಪ್ 5 ಶತಕಗಳ ವಿವರ ಇಂತಿದೆ. ಡೇವಿಡ್ ಮಿಲ್ಲರ್- 101, 35 ಎಸೆತ, ರಿಚರ್ಡ್ ಲೆವಿ – 117, 45 ಎಸೆತ, ಪ್ಲಾಪ್ ಡೂಪ್ಲೆಸಿಸ್ – 119, 46 ಎಸೆತ, ಕರ್ನಾಟಕದ ಲೋಕೇಶ್ ರಾಹುಲ್ – 110, 46 ಎಸೆತ, ಕ್ರಿಸ್ ಗೇಲ್ – 100, 47 ಎಸೆತ ಹಾಗೂ ಅರೋನ್ ಫಿಂಚ್ – 156, 47 ಎಸೆತಗಳಲ್ಲಿ ಶತಕ ಗಳಿಸಿದ್ದಾರೆ.

    ಐಪಿಎಲ್‍ನಲ್ಲಿ ದಾಖಲೆ: 2013ರಲ್ಲಿ ಕ್ರಿಸ್ ಗೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಕೇವಲ 30 ಎಸೆತಗಳಲ್ಲಿ ಶತಕವನ್ನು ಪೂರೈಸಿದ್ದರು. ಅಲ್ಲದೇ 2004 ರಲ್ಲಿ ಆಂಡ್ರೂ ಸೈಮಂಡ್ಸ್ 34 ಎಸೆತಗಳಲ್ಲಿ ಶತಕವನ್ನು ಸಿಡಿಸಿದ್ದರು.

  • ಟಿ20 ಮ್ಯಾಚ್ ಗೆಲುವಿನ ಬಳಿಕ ಆಸೀಸ್ ತಂಡದ ಬಸ್‍ಗೆ ಕಲ್ಲು

    ಟಿ20 ಮ್ಯಾಚ್ ಗೆಲುವಿನ ಬಳಿಕ ಆಸೀಸ್ ತಂಡದ ಬಸ್‍ಗೆ ಕಲ್ಲು

    ಗುವಾಹಟಿ: ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿರುವ ಘಟನೆ ಗುವಾಹಟಿಯಲ್ಲಿ ನಡೆದಿದೆ.

    ಮಂಗಳವಾರದಂದು ಭಾರತದ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್ ಗಳಿಂದ ಜಯ ಸಾಧಿಸಿದ ಬಳಿಕ ಆಸೀಸ್ ಪಡೆ ಹೋಟೆಲ್ ಗೆ ಹೋಗುವ ವೇಳೆಯಲ್ಲಿ ಅವರ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ.

    ಆಸ್ಟ್ರೇಲಿಯಾದ ಎಲ್ಲ ಕ್ರಿಕೆಟಿಗರು ಬರ್ಸಪರ ಸ್ಟೇಡಿಯಂ ನಿಂದ ಹೋಟೆಲ್ ನತ್ತ ತಮ್ಮ ಪ್ರಯಾಣ ಬೆಳೆಸಿದ್ದರು. ಈ ವೇಳೆ ಬಸ್ ಮೇಲೆ ಕಲ್ಲು ಎಸೆಯಲಾಗಿದ್ದು, ಬಸ್ ನ ಕಿಟಕಿಯ ಗಾಜು ಒಡೆದು ಹೋಗಿದೆ. ಘಟನೆಯಲ್ಲಿ ಯಾವುದೇ ಆಟಗಾರರಿಗೂ ಗಾಯವಾಗಿಲ್ಲ. ಕಲ್ಲು ಬಿದ್ದಾಗ ಒಂದು ಕ್ಷಣ ಎಲ್ಲರೂ ವಿಚಲಿತರಾದ್ರು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

    ಪಂದ್ಯದ ಬಳಿಕ ಬಸ್‍ನ ಕಿಟಕಿಗೆ ಕಲ್ಲು ಎಸೆದಿದ್ದು ನಿಜಕ್ಕೂ ಭಯ ತರಿಸುವಂತಿತ್ತು ಎಂದು ಬ್ಯಾಟ್ಸ್‍ಮನ್ ಅರೋನ್ ಫಿಂಚ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಈ ರೀತಿ ಆಸ್ಟ್ರೇಲಿಯಾ ಆಟಗಾರರ ಬಸ್ ಮೇಲೆ ಕಲ್ಲು ಬಿದ್ದ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ ಚಿತ್ತಗಾಂಗ್ ನಲ್ಲಿ ಆಸ್ಟ್ರೇಲಿಯಾ ಆಟಗಾರರು ಬಾಂಗ್ಲಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನು ಜಯಿಸಿ ಹೋಟೆಲ್ ನತ್ತ ತೆರಳುವಾಗ ದುಷ್ಕರ್ಮಿಗಳು ಕಲ್ಲು ಎಸೆದಿದ್ದರು.

    ಎರಡನೇ ಟಿ 20 ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಳ್ಳುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಜೀವಂತವಾಗಿಟ್ಟುಕೊಂಡಿದೆ. ಮೊದಲ ಪಂದ್ಯಕ್ಕೆ ಮಳೆ ಬಂದ ಕಾರಣ ಡಕ್‍ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತ ಜಯಗಳಿಸಿತ್ತು. ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯಗಳಿಸಿದ್ದು, ಮೂರನೇ ಟಿ20 ಶುಕ್ರವಾರ ಹೈದರಾಬಾದ್ ನಲ್ಲಿ ನಡೆಯಲಿದೆ.

    ಇದನ್ನೂ ಓದಿ: ಟಿ20ಯಲ್ಲಿ ಮೊದಲ ಬಾರಿಗೆ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ!

     

  • ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕಣ್ಣೋಟ ಫುಲ್ ವೈರಲ್!

    ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕಣ್ಣೋಟ ಫುಲ್ ವೈರಲ್!

    ಗುವಾಹಟಿ: ಆಸೀಸ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯವನ್ನಾಡಲು ಗುವಾಹಟಿಗೆ ಆಗಮಿಸಿದ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಭವ್ಯ ಸ್ವಾಗತ ಕೋರಲಾಯಿತು.

    ವಿಮಾನ ನಿಲ್ದಾಣದಲ್ಲಿ ಟೀಂ ಇಂಡಿಯಾ ಆಟಗಾರರಿಗೆ ಸಾಂಪ್ರದಾಯಿಕ ಟೋಪಿ ಹಾಕುವುದರ ಮೂಲಕ ಶುಭ ಕೋರಿದರು. ಹೋಟೆಲ್ ಗೆ ಆಗಮಿಸುತ್ತಿದ್ದಂತೆ ಆಟಗಾರರ ಹಣೆಗೆ ತಿಲಕ ಹಾಗೂ ಶಾಲು ಹೊದೆಸಿ ಸ್ವಾಗತಿಸಲಾಯಿತು. ಈ ವೇಳೆ ತೆಗೆದ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ. ಈ ಫೋಟೋದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಶಾಲು ಹೊದಿಸುತ್ತಿರುವ ಮಹಿಳೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾರೆ. ಈ ವೇಳೆ ಫೋಟೋಗ್ರಾಫರ್ ಕ್ಲಿಕ್ ಸರಿಯಾಗಿ ಆಗಿದೆ. ಇದನ್ನೇ ಕೊಹ್ಲಿ ಕಣ್ಣೋಟವಾಗಿ ಬದಲಾಗಿದೆ. ಉಳಿದ ಎಲ್ಲಾ ಆಟಗಾರರಿಗೂ ಇದೇ ರೀತಿಯ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.

    ಈ ಹಿಂದೆಯೂ ಕೊಹ್ಲಿ ಇದೇ ರೀತಿಯ ‘ಕಣ್ಣೋಟ’ದ ವಿಚಾರದಲ್ಲಿ ಸಿಲುಕಿಕೊಂಡಿದ್ದರು. ಆಂದು ರಾಪಿಡ್ ಫೈರ್ ರೌಂಡ್ ವೇಳೆ ಆಂಕರ್ ಒಬ್ಬರ ಕಾಲಿನ ಮೇಲಿದ್ದ ಹಾಳೆಯನ್ನು ನೋಡಲು ಕೊಹ್ಲಿ ಯತ್ನಿಸಿದ್ದರು. ಈ ಕಣ್ಣೋಟ ಐಪಿಎಲ್ ವೇಳೆ ಭಾರೀ ಪ್ರಚಾರ ಪಡೆದಿತ್ತು.

    ಕೊನೆಗೆ ಆಂಕರ್ ಹಾಗೂ ವೀಕ್ಷಕ ವಿವರಣೆಗಾರ್ತಿ ಅರ್ಚನಾ ವಿಜಯಾ, ನಾನು ರಾಪಿಡ್ ಫೈರ್ ಮಾದರಿಯಲ್ಲಿ ಕೊಹ್ಲಿಯನ್ನು ಪ್ರಶ್ನಿಸುತ್ತಿದ್ದೆ. ಈ ವೇಳೆ ನನ್ನ ಕೈಯಲ್ಲಿದ್ದ ಕಾರ್ಡ್ ನೋಡಲು ಕೊಹ್ಲಿ ಮುಂದಾಗಿದ್ದರೇ ಹೊರತು ಅವರು ನನ್ನ ಕಾಲುಗಳನ್ನು ನೋಡುತ್ತಿರಲಿಲ್ಲ. ಆದರೆ ಫೋಟೋಗ್ರಾಫರ್ ಗಳೇ ಸಮಯ ಸಾಧಿಸಿ ಈ ಫೋಟೋ ತೆಗೆದು ಅನರ್ಥ ಕಲ್ಪಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ ಸ್ಪಷ್ಟನೆ ನೀಡಿದ್ದರು.

  • ಆಸೀಸ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ್ರೆ ಟೀಂ ಇಂಡಿಯಾ ಟಿ-20ಯಲ್ಲಿ ನಂ.2

    ಆಸೀಸ್ ವಿರುದ್ಧ ಕ್ಲೀನ್ ಸ್ವೀಪ್ ಮಾಡಿದ್ರೆ ಟೀಂ ಇಂಡಿಯಾ ಟಿ-20ಯಲ್ಲಿ ನಂ.2

    ರಾಂಚಿ: ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಟಿ-20 ಪಂದ್ಯಕ್ಕೆ ಟೀಂ ಇಂಡಿಯಾ ಸಜ್ಜಾಗಿದೆ. ಒಂದು ವೇಳೆ 3 ಪಂದ್ಯಗಳ ಸರಣಿಯನ್ನು ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿದರೆ ಟಿ-20ಯಲ್ಲೂ ನಂ.2 ಪಟ್ಟಕ್ಕೇರಲಿದೆ. ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿರುವ ಟೀಂ ಇಂಡಿಯಾ ಟಿ20ಯಲ್ಲಿ ಸದ್ಯ 5ನೇ ಸ್ಥಾನದಲ್ಲಿದೆ.

    ಈ ಸರಣಿಯ ಎಲ್ಲಾ ಪಂದ್ಯಗಳನ್ನು ಗೆದ್ದರೆ ಭಾರತ 2ನೇ ಸ್ಥಾನ ಖಚಿತವಾಗಲಿದೆ. ರಾಂಚಿಯ ಜೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಸರಣಿ ಆರಂಭಕ್ಕೆ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ಭಾರೀ ಹೊಡೆತ ಬಿದ್ದಿದೆ. ಕಾರಣ ನಾಯಕ ಸ್ಟೀವ್ ಸ್ಮಿತ್ ಭುಜದ ನೋವಿನಿಂದಾಗಿ ಸರಣಿಯಿಂದ ಸಂಪೂರ್ಣವಾಗಿ ಹೊರಗೆ ಬಿದ್ದಿದ್ದಾರೆ. ಸ್ಮಿತ್ ಸ್ಥಾನಕ್ಕೆ ಮಾಕ್ರ್ಸ್ ಸ್ಟಾಯಿನ್ಸ್ ಆಯ್ಕೆಯಾಗಿದ್ದಾರೆ. ಪಂದ್ಯಕ್ಕೆ ಅಭ್ಯಾಸ ನಡೆಸುವ ವೇಳೆ ರಾಂಚಿಯಲ್ಲಿ ಸ್ಮಿತ್ ಗೆ ಗಾಯವಾಗಿತ್ತು. ಆರಂಭದಲ್ಲಿ ವೈದ್ಯರು ಪಂದ್ಯ ಆಡಬಹುದು ಎಂದಿದ್ದರೂ ಈಗ ಸರಣಿಯಲ್ಲಿ ಆಡಲು ಸ್ಮಿತ್ ಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

    ದಾಖಲೆಗಳಿಂದ…: ಭಾರತ ಹಾಗೂ ಆಸೀಸ್ ಇದುವರೆಗೆ ಒಟ್ಟು 14 ಟಿ20 ಪಂದ್ಯಗಳನ್ನಾಡಿದ್ದು ಇದರಲ್ಲಿ ಭಾರತ 9 ಹಾಗೂ ಆಸ್ಟ್ರೇಲಿಯಾ 4 ಪಂದ್ಯಗಳನ್ನು ಗೆದ್ದಿದೆ. ಭಾರತದಲ್ಲಿ ಎರಡೂ ತಂಡಗಳು 3 ಪಂದ್ಯವನ್ನಾಡಿದ್ದು ಇದರಲ್ಲಿ ಮೂರೂ ಪಂದ್ಯಗಳನ್ನು ಭಾರತವೇ ಗೆದ್ದಿದೆ. ಭಾರತದಲ್ಲಿ ಟೀಂ ಇಂಡಿಯಾ ಇದುವರೆಗೆ ಒಟ್ಟು 23 ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ್ದು 12ರಲ್ಲಿ ಗೆಲುವು ಸಾಧಿಸಿದರೆ, 11 ಪಂದ್ಯದಲ್ಲಿ ಸೋತಿದೆ.

    ಆಸೀಸ್ ಇದುವರೆಗೆ ವಿದೇಶದಲ್ಲಿ 63 ಪಂದ್ಯವನ್ನಾಡಿದೆ. ಇದರಲ್ಲಿ 29 ಗೆಲುವು ಸಾಧಿಸಿದರೆ 31ರಲ್ಲಿ ಸೋತಿದೆ. 2 ಪಂದ್ಯ ಟೈ ಆಗಿದ್ದು 1 ಪಂದ್ಯದಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ.

    2012ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿದ್ದು, ಇದಾದ ನಂತರ ಒಟ್ಟು 6 ಪಂದ್ಯಗಳು ಇತ್ತಂಡಗಳ ನಡುವೆ ನಡೆದಿದೆ. ಈ ಆರೂ ಪಂದ್ಯಗಳಲ್ಲಿ ಟೀಂ ಇಂಡಿಯಾವೇ ಗೆಲುವು ಸಾಧಿಸಿದೆ ಎನ್ನುವುದೇ ವಿಶೇಷ.