Tag: ಟಿ20

  • ಸಿಡಿದ ಸೂರ್ಯಕುಮಾರ್ ಯಾದವ್- ಇಂಗ್ಲೆಂಡ್ ವಿರುದ್ಧ ವಿಜಯಪತಾಕೆ ಹಾರಿಸಿದ ಭಾರತ

    ಸಿಡಿದ ಸೂರ್ಯಕುಮಾರ್ ಯಾದವ್- ಇಂಗ್ಲೆಂಡ್ ವಿರುದ್ಧ ವಿಜಯಪತಾಕೆ ಹಾರಿಸಿದ ಭಾರತ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಭಾರತ ತಂಡ 8 ರನ್‍ಗಳ ರೋಚಕ ಜಯ ಸಾಧಿಸಿದೆ. ಈ ಮೊದಲು ಬ್ಯಾಟಿಂಗ್‍ನಲ್ಲಿ ಭಾರತದ ಯುವ ಆಟಗಾರ ಸೂರ್ಯಕಮಾರ್ ತನ್ನ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‍ನ ಮೊದಲ ಅರ್ಧಶತಕವನ್ನು ಭರ್ಜರಿಯಾಗಿ ಸಿಡಿಸಿ ಸಂಭ್ರಮಾಚರಿಸಿಕೊಂಡರು.

    ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ನಾಲ್ಕನೇ ಟಿ20 ಪಂದ್ಯದ ಟಾಸ್ಕ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರದಂತೆ ಉತ್ತಮ ಬೌಲಿಂಗ್ ಮಾಡಿದ ಇಂಗ್ಲೆಂಡ್ ಬೌಲರ್ ಗಳು  ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ 12 ರನ್(12 ಬಾಲ್ 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಆಡುತ್ತಿದ್ದಂತೆ 3ನೇ ಓವರ್‍ನಲ್ಲಿ ದಾಳಿಗಿಳಿದ ಜೊಫ್ರಾ ಆರ್ಚರ್ ಅವರಿಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.

    ಕೆ.ಎಲ್ ರಾಹುಲ್ ಒಂದು ಬೌಂಡರಿ ಸಿಡಿಸಿ ಆರ್ಭಟಿಸುವ ಲಕ್ಷಣ ತೋರಿದರು ಕೂಡ ಅವರ ಆಟ 14 ರನ್ (17 ಬಾಲ್, 2 ಬೌಂಡರಿ)ಗೆ ಅಂತ್ಯವಾಯಿತು. ನಂತರ ಬಂದ ನಾಯಕ ವಿರಾಟ್ ಕೊಹ್ಲಿ 1 ರನ್ ಗೆ ಸುಸ್ತಾದರು. ಈ ವೇಳೆ ಒಂದಾದ ಸೂರ್ಯಕುಮಾರ್ ಯಾದವ್ ಮತ್ತು ರಿಷಬ್ ಪಂತ್ 4ನೇ ವಿಕೆಟ್‍ಗೆ 48 ರನ್(28 ಬಾಲ್) ಸಿಡಿಸಿ ತಂಡಕ್ಕೆ ಚೇತರಿಕೆಯ ಜೊತೆಯಾಟವಾಡಿದರು. ಪಂತ್ 30 ರನ್(23 ಬಾಲ್, 4 ಬೌಂಡರಿ) ಸಿಡಿಸಿ ಔಟ್ ಆದರು. ಆದರೆ ಇನ್ನೊಂದು ಕಡೆಯಲ್ಲಿ ಬ್ಯಾಟಿಂಗ್ ಮುಂದುವರಿಸಿದ ಸೂರ್ಯಕುಮಾರ್ ಯಾದವ್ 57 ರನ್(31 ಬಾಲ್, 6 ಬೌಂಡರಿ, 3 ಸಿಕ್ಸರ್ ಸಿಡಿಸಿ) ತಮ್ಮ ಟಿ20 ಕ್ರಿಕೆಟ್‍ನ ಮೊದಲ ಅರ್ಧಶತಕ ಬಾರಿಸಿ ಸಂಭ್ರಮ ಆಚರಿಸಿಕೊಂಡರು.

    ಇವರಿಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 37( 18 ಎಸೆತ, 5 ಬೌಂಡರಿ, 1 ಸಿಕ್ಸರ್) ಬಾರಿಸಿ ಔಟ್ ಆದರು ಅಂತಿಮವಾಗಿ ಭಾರತ ತಂಡ 20 ಒವರ್‍ಗಳಲ್ಲಿ 8 ವಿಕೆಟ್ ಕಳೆದುಕೊಂಡು 185 ರನ್ ಕಳೆಹಾಕಿತು.

    ಗೆಲುವಿಗೆ 186 ರನ್‍ಗಳ ಗುರಿಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಆರಂಭಿಕ ಆಘಾತ ನೀಡಿದ ಭುವನೇಶ್ವರ್ ಕುಮಾರ್, 9ರನ್(6 ಎಸೆತ, 1 ಸಿಕ್ಸರ್) ಹೊಡದು ಆಡುತ್ತಿದ್ದ ಜೋಸ್ ಬಟ್ಲರ್ ವಿಕೆಟ್ ಪಡೆದರು. ನಂತರ ಬಂದ ಡೇವಿಡ್ ಮಲಾನ್ 14 ರನ್( 17 ಎಸೆತ, 1 ಸಿಕ್ಸರ್)ಗೆ ವಿಕೆಟ್ ಒಪ್ಪಿಸಿದರು. ನಂತರ ಉತ್ತಮವಾಗಿ ಬ್ಯಾಟ್‍ಬೀಸುತ್ತಿದ್ದ ಜೇಸನ್ ರಾಯ್ 40 ರನ್(27 ಎಸೆತ,6 ಬೌಂಡರಿ, 1 ಸಿಕ್ಸರ್) ಸಿಡಿಸಿ ಭಾರತ ಬೌಲರ್‌ಗಳಿಗೆ ಕಾಡಿದರು. ಬಳಿಕ ಬೆನ್ ಸ್ಟೋಕ್ 46 ರನ್ (23 ಎಸೆತ,4 ಬೌಂಡರಿ, 3 ಸಿಕ್ಸರ್) ಬಾರಿಸಿ ಔಟ್ ಆದರು. ಕೊನೆಯಲ್ಲಿ ಗೆಲುವಿಗಾಗಿ ಹೋರಾಡಿದ ಜೋಫ್ರಾ ಆರ್ಚರ್ 18 ರನ್( 8 ಎಸೆತ, 2 ಬೌಂಡರಿ, 1 ಸಿಕ್ಸರ್) ಬಾರಿಸಿದರು ಕೂಡ ಅಂತಿಮವಾಗಿ ನಿಗದಿತ ಒವರ್‍ ಗಳಲ್ಲಿ 8 ವಿಕೆಟ್ ಕಳೆದುಕೊಂಡು 177 ರನ್ ಬಾರಿಸಿ 8 ರನ್‍ಗಳ ಅಂತರದಲ್ಲಿ ಸೋಲುಂಡಿದೆ. ಭಾರತ 8 ರನ್‍ಗಳ ರೋಚಕ ಗೆಲುವಿನೊಂದಿಗೆ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ ಮುಂದಿನ ಕೊನೆಯ ಪಂದ್ಯ ಶನಿವಾರ ನಡೆಯಲಿದ್ದು, ಫೈನಲ್ ಹಣಾಹಣಿಯಂತಾಗಿದೆ.

  • ಕೊಹ್ಲಿ ಭರ್ಜರಿ ಬ್ಯಾಟಿಂಗ್-ಇಂಗ್ಲೆಂಡ್‍ಗೆ 8 ವಿಕೆಟ್ ಜಯ

    ಕೊಹ್ಲಿ ಭರ್ಜರಿ ಬ್ಯಾಟಿಂಗ್-ಇಂಗ್ಲೆಂಡ್‍ಗೆ 8 ವಿಕೆಟ್ ಜಯ

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ 3 ನೇ ಟಿ20 ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ನಡುವೆಯೂ, ಇಂಗ್ಲೆಂಡ್ ತಂಡ ಇನ್ನು 10 ಬಾಲ್ ಉಳಿದಿರುವಂತೆ 8 ವಿಕೆಟ್‍ನಿಂದ ಗೆದ್ದು ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ.

    ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್ ಅತಿಥೇಯ ತಂಡವನ್ನು ಬ್ಯಾಟಿಂಗ್‍ಗೆ ಆಹ್ವಾನಿಸಿದರು. ಭಾರತದ ಪರ ಆರಂಭಿಕರಾಗಿ ಬ್ಯಾಟಿಂಗಿಳಿದ ರೋಹಿತ್ ಶರ್ಮಾ 15ರನ್(17 ಬಾಲ್, 2 ಬೌಂಡರಿ) ಮತ್ತು ಕೆಎಲ್ ರಾಹುಲ್ ಮತ್ತೆ ಶೂನ್ಯಕ್ಕೆ ಔಟ್ ಆಗುವ ಮೂಲಕ ಭರವಸೆಯನ್ನು ನಿರಾಸೆ ಮಾಡಿದರು. ನಂತರ ಬಂದ ಕಳೆದ ಪಂದ್ಯದ ಹೀರೋ ಇಶಾನ್ ಕಿಶಾನ್ ಈ ಪಂದ್ಯದಲ್ಲಿ 4 ರನ್(9 ಬಾಲ್) ಸಿಡಿಸಿ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.

    ನಂತರ ಒಂದಾದ ವಿರಾಟ್ ಕೊಹ್ಲಿ ಮತ್ತು ರಿಷಬ್ ಪಂತ್ ಕೆಲ ಹೊತ್ತು ಬ್ಯಾಟಿಂಗ್‍ನಲ್ಲಿ ಮಿಂಚಿದರು ಕೂಡ ಪಂತ್ 25 ರನ್(20 ಬಾಲ್, 3 ಬೌಂಡರಿ) ಸಿಡಿಸಿ ರನ್ ಔಟ್ ಆದರು. ಒಂದು ಕಡೆ ವಿಕೆಟ್ ಬೀಳುತ್ತಿದ್ದರು ಇತ್ತ ಕೊಹ್ಲಿ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟ್ ಬೀಸಿ ಅಜೇಯ 77 ರನ್( 46 ಎಸೆತ, 8 ಬೌಂಡರಿ, 4 ಸಿಕ್ಸರ್) ಸಿಡಿಸಿ ಕಡೆಯವರೆಗೆ ಕ್ರೀಸ್‍ನಲ್ಲಿದ್ದರು ಅಂತಿಮವಾಗಿ ಭಾರತ ನಿಗದಿತ 20 ಓವರ್‍ನಲ್ಲಿ 6 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿತು. ಇಂಗ್ಲೆಂಡ್ ಪರ ಮಾರ್ಕ್‍ವುಡ್ 3 ವಿಕೆಟ್ ಮತ್ತು ಜೋರ್ಡನ್ 2 ವಿಕೆಟ್ ಕಿತ್ತು ಮಿಂಚಿದರು.

    157 ರನ್‍ಗಳ ಟಾರ್ಗೆಟ್‍ನೊಂದಿಗೆ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್‍ಗೆ ಚಹಲ್ ಆರಂಭಿಕ ಆಘಾತ ನೀಡಿದರು. ಜೋಸನ್ ರಾಯ್ 9 ರನ್(13 ಬಾಲ್, 2 ಬಾಲ್) ಔಟ್ ಆದರೆ, ಇತ್ತ ಇನ್ನೋರ್ವ ಆರಂಭಿಕ ಬ್ಯಾಟ್‍ಮ್ಯಾನ್ ಜೋಸ್ ಬಟ್ಲರ್, ಡೇವಿಡ್ ಮಲಾನ್ ಜೊತೆ ಸೇರಿ ಎರಡನೇ ವಿಕೆಟ್‍ಗೆ 58 ರನ್(39 ಬಾಲ್) ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು.

    ಈ ವೇಳೆ ದಾಳಿಗಿಳಿದ ವಾಷಿಂಗ್ಟನ್ ಸುಂದರ್ 18 ರನ್ ಗಳಿಸಿದ್ದ ಡೇವಿಡ್ ಮಲಾನ್ ವಿಕೆಟ್ ಕಬಳಿಸಿದರು. ಆದರೂ ಬಟ್ಲರ್ ತಮ್ಮ ಆರ್ಭಟ ಮುಂದುವರಿಸಿ ಅಜೇಯ 83 ರನ್(52 ಎಸೆತ, 5 ಬೌಂಡರಿ, 4 ಸಿಕ್ಸ್‍ರ್) ಸಿಡಿಸಿ ಪಂದ್ಯಗೆಲ್ಲಲು ಮಹತ್ವದ ಪಾತ್ರ ವಹಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಜಾನಿ ಬೈಸ್ರ್ಟೋವ್ ಅಜೇಯ 40 ರನ್(28 ಬಾಲ್, 5 ಬೌಂಡರಿ) ಸಿಡಿಸಿ ಇನ್ನು 10 ಬಾಲ್ ಬಾಕಿ ಇರುವಂತೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಇಂಗ್ಲೆಂಡ್ ತಂಡ 5 ಪಂದ್ಯಗಳ ಟಿ20ಸರಣಿಯಲ್ಲಿ 2-1 ಮುನ್ನಡೆ ಪಡೆದುಕೊಂಡಿದೆ.

  • ಇಂಗ್ಲೆಂಡ್ ತಂಡದ ಬೊಂಬಾಟ್ ಆಟಕ್ಕೆ ಶರಣಾದ ಭಾರತ

    ಇಂಗ್ಲೆಂಡ್ ತಂಡದ ಬೊಂಬಾಟ್ ಆಟಕ್ಕೆ ಶರಣಾದ ಭಾರತ

    ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ವಿಭಾಗದಲ್ಲಿ ಉತ್ತಮ ಆಟದ ಪ್ರದರ್ಶನ ನೀಡಿದ ಇಂಗ್ಲೆಂಡ್ ತಂಡ 8 ವಿಕೆಟ್ ಅಂತರದಿಂದ ಗೆದ್ದು ಬೀಗಿದೆ.

    ಟೆಸ್ಟ್ ಪಂದ್ಯವನ್ನು 3-1 ಅಂತರದಿಂದ ಗೆದ್ದಿದ್ದ ಭಾರತ ತಂಡ ಅದೇ ಆತ್ಮವಿಶ್ವಾಸದಲ್ಲಿ ಮೋಟೆರಾ ಅಂಗಳದಲ್ಲಿ ಕಣಕ್ಕಿಳಿದಿತ್ತು. ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಭಾರತ ತಂಡ ಇಂಗ್ಲೆಂಡ್ ಬೌಲರ್‌ಗಳ ಸಂಘಟಿತ ದಾಳಿಗೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಪವರ್ ಪ್ಲೇ ಮುಗಿಯುವ ಮೊದಲೇ ಕೆ.ಎಲ್ ರಾಹುಲ್, 1 ರನ್, ಕೊಹ್ಲಿ 0, ಧವನ್ 4 ರನ್‍ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು. ನಂತರ ಬಂದ ರಿಷಬ್ ಪಂತ್ ಸಿಡಿಯುವ ಸೂಚನೆ ನೀಡಿದರು ಕೂಡ ಅವರ ಆಟ 21ರನ್( 23 ಎಸೆತ, 2 ಬೌಂಡರಿ, 1 ಸಿಕ್ಸರ್) ಕೊನೆಗೊಂಡಿತು. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಐಯ್ಯರ್ ಆಕರ್ಷಕ 67 ರನ್ (48 ಎಸೆತ, 8 ಬೌಂಡರಿ, 1 ಸಿಕ್ಸರ್) ಸಿಡಿಸಿ ಮಿಂಚಿದರು ಭಾರತ ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿತು.

    125 ರನ್‍ಗಳ ಗುರಿ ಪಡೆದು ಬ್ಯಾಟಿಂಗ್‍ಗಿಳಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಜೋಡಿ ಜೋಸನ್ ರಾಯ್ ಮತ್ತು ಜೋಸ್ ಬಟ್ಲರ್ ಸ್ಪೋಟಕ 72 ರನ್‍ಗಳ ಉತ್ತಮ ಆರಂಭ ನೀಡಿತು. ಈ ವೇಳೆ ದಾಳಿಗಿಳಿದ ಚಹಾಲ್, 28ರನ್( 24 ಎಸೆತ,2 ಬೌಂಡರಿ, 1 ಸಿಕ್ಸರ್) ಗಳಿಸಿದ್ದ ಬಟ್ಲರ್ ಅವರ ವಿಕೆಟ್ ಪಡೆದರು. ನಂತರ ಜೋಸನ್ ರಾಯ್ 49 ರನ್( 32 ಎಸೆತ, 4 ಬೌಂಡರಿ, 3 ಸಿಕ್ಸರ್) ಸಿಡಿಸಿ ಔಟ್ ಆದರೆ, ನಂತರ ಬಂದ ಡೇವಿಡ್ ಮಲಾನ್ 24 ರನ್( 20 ಎಸೆತ,2 ಬೌಂಡರಿ, 1 ಸಿಕ್ಸರ್) ಮತ್ತು ಜಾನಿ ಬೈರ್ಸ್ಟೋವ್ 26 ರನ್( 17 ಎಸೆತ, 1 ಬೌಂಡರಿ, 2 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಇಂಗ್ಲೆಂಡ್ 15.3 ಬೌಲರ್‌ಗಳಲ್ಲಿ ಇನ್ನು 27 ಎಸೆತ ಬಾಕಿ ಇರುವಂತೆ 130 ರನ್‍ಗಳಿಸಿ ಭಾರತ ವಿರುದ್ಧ ಭರ್ಜರಿ ಜಯ ಗಳಿಸಿತು.

  • ರಿಷಬ್ ಪಂತ್ ರಿವರ್ಸ್ ಸ್ಕೂಪ್ ಕಂಡು ದಂಗಾದ ಮಾಜಿ ಕ್ರಿಕೆಟರ್ಸ್

    ರಿಷಬ್ ಪಂತ್ ರಿವರ್ಸ್ ಸ್ಕೂಪ್ ಕಂಡು ದಂಗಾದ ಮಾಜಿ ಕ್ರಿಕೆಟರ್ಸ್

    ಅಹಮದಾಬಾದ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಭಾರತ ತಂಡದ ವಿಕೆಟ್ ಕೀಪರ್  ಬ್ಯಾಟ್ಸ್‌ಮ್ಯಾನ್ ರಿಷಬ್ ಪಂತ್ ಹೊಡೆದ ರಿವರ್ಸ್ ಸ್ಕೂಪ್ ಕಂಡು ಮಾಜಿ ಆಟಗಾರರು ಸಹಿತ ಕ್ರೀಡಾಭಿಮಾನಿಗಳು ದಂಗಾಗಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 3-1 ರಿಂದ ವಶಪಡಿಸಿಕೊಂಡಿದ್ದ ಭಾರತ ಅಹಮದಾಬಾದ್‍ನ ಮೋಟೆರಾ ಕ್ರೀಡಾಂಗಣದಲ್ಲಿ ಇದೇ ಹುರುಪಿನಲ್ಲಿ ಟಿ-20 ಪಂದ್ಯಕ್ಕೆ ಸಜ್ಜಾಗಿತ್ತು. ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಬ್ಯಾಟಿಂಗ್ ಇಳಿಯುತ್ತಿದ್ದಂತೆ ಪವರ್ ಪ್ಲೇ ಮುಗಿಯುವ ಮುನ್ನವೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿತ್ತು. ಈ ವೇಳೆ ಬ್ಯಾಟಿಂಗ್ ಇಳಿದ ಪಂತ್, ಜೊಫ್ರಾ ಆರ್ಚರ್ ಎಸೆದ 3ನೇ ಓವರ್‍ ನ ನಾಲ್ಕನೇ ಎಸೆತವನ್ನು ಆಕರ್ಷಕ ರಿವರ್ಸ್ ಸ್ಕೂಪ್ ಮೂಲಕ ಸಿಕ್ಸರ್‌ಗಟ್ಟಿದರು. ಇದನ್ನು ಕಂಡು ಮಾಜಿ ಆಟಗಾರರಾದ ವಿ.ವಿ.ಎಸ್ ಲಕ್ಷಣ್, ಯುವರಾಜ್ ಸಿಂಗ್, ಇಂಗ್ಲೆಂಡ್‍ನ ಕೆವಿನ್ ಪೀರ್ಟಸನ್ ಸಹಿತ ಹಲವು ಕ್ರಿಕೆಟಿಗರು ದಂಗಾಗಿದ್ದಾರೆ.

    ಪಂತ್ ಈ ಮೊದಲು ನಡೆದ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಇದೇ ರೀತಿಯ ಸಿಕ್ಸ್ ಅನ್ನು ಇಂಗ್ಲೆಂಡ್‍ನ ಜೇಮ್ಸ್ ಆ್ಯಂಡರ್ಸನ್ ಎಸೆತದಲ್ಲಿ ಬಾರಿಸಿ ಮಿಂಚಿದ್ದರು.

    ಪಂತ್ 23 ಎಸೆತಗಳಲ್ಲಿ 21ರನ್ (2 ಬೌಂಡರಿ, 1 ಸಿಕ್ಸರ್) ಸಿಡಿಸಿ ಬೆನ್‍ಸ್ಟೋಕ್ ಗೆ ವಿಕೆಟ್ ಒಪ್ಪಿಸಿದರು. ಭಾರತ ಅಂತಿಮವಾಗಿ 20 ಓವರ್‍ ಗಳಲ್ಲಿ 124 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡು ಇಂಗ್ಲೆಂಡ್‍ಗೆ 125 ರನ್‍ಗಳ ಗುರಿ ನೀಡಿದೆ.

  • ಟಿ20 ಕ್ರಿಕೆಟ್‍ನಲ್ಲಿ ಮತ್ತೊಂದು ದಾಖಲೆ ನಿರ್ಮಿಸುವ ಸನಿಹದಲ್ಲಿ ಕೊಹ್ಲಿ

    ಟಿ20 ಕ್ರಿಕೆಟ್‍ನಲ್ಲಿ ಮತ್ತೊಂದು ದಾಖಲೆ ನಿರ್ಮಿಸುವ ಸನಿಹದಲ್ಲಿ ಕೊಹ್ಲಿ

    ಅಬುಧಾಬಿ: ಐಪಿಎಲ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ.

    ಐಪಿಎಲ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ದಾಖಲೆ ಬರೆಯುವ ಸನಿಹದಲ್ಲಿದೆ. ಕೊಹ್ಲಿ 82 ರನ್ ಗಳಿಸಿದರೆ ಟಿ20 ಮಾದರಿಯಲ್ಲಿ 9 ಸಾವಿರ ಗಳಿಸಿದ ಮೊದಲ ಟೀಂ ಇಂಡಿಯಾ ಆಟಗಾರ ಎನಿಸಿಕೊಳ್ಳಲಿದ್ದಾರೆ. ವಿಶ್ವ ಕ್ರಿಕೆಟ್‍ನಲ್ಲಿ ಕೊಹ್ಲಿ ಈ ಸಾಧನೆ ಮಾಡಿದ 7ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

    ಕೊಹ್ಲಿ 269 ಇನ್ನಿಂಗ್ಸ್ ಗಳಲ್ಲಿ ಇದುವರೆಗೂ 134.24 ಸ್ಟ್ರೈಕ್ ರೇಟ್‍ನಲ್ಲಿ 9,918 ರನ್ ಗಳಿಸಿದ್ದು, ಇದರಲ್ಲಿ 5 ಶತಕ, 64 ಅರ್ಧ ಶತಕಗಳು ಸೇರಿದೆ. ಐಪಿಎಲ್‍ನಲ್ಲಿ 180 ಪಂದ್ಯಗಳಲ್ಲಿ ಕೊಹ್ಲಿ 5,430 ರನ್ ಗಳಿಸಿದ್ದಾರೆ.

    ಐಪಿಎಲ್ 2020ರ ಆವೃತ್ತಿಯಲ್ಲಿ ಇದುವರೆಗೂ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಇದುವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ 18 ರನ್ (3, 1, 14) ಗಳಷ್ಟೇ ಗಳಿಸಿದ್ದಾರೆ. ಇಂದು ಆರ್‌ಸಿಬಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

    ಟೂರ್ನಿಯಲ್ಲಿ ಆರ್‌ಸಿಬಿ ಸೋಲು, ಗೆಲುವಿನ ರುಚಿ ಸವಿದಿದ್ದು, ಹೈದರಾಬಾದ್ ಮತ್ತು ಮುಂಬೈ ಎದುರು ಗೆಲುವು ಪಡೆದಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಸೋಲುಂಡಿತ್ತು. ಇಂದಿನ ಪಂದ್ಯದಲ್ಲಿ ಉಭಯ ತಂಡಗಳ ಬಲಿಷ್ಠ ನಾಯಕರ ನಡುವಿನ ಸೆಣಸಾಟ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬ್ಯಾಟಿಂಗ್ ಹಾಗೂ ನಾಯಕತ್ವದಲ್ಲಿ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಅವರ ನಡುವೆ ಯಾರು ಉತ್ತಮರು ಎಂಬ ಪ್ರಶ್ನೆ ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಕಾರಣ ಇಬ್ಬರಿಗೂ ಈ ಪಂದ್ಯ ಪ್ರತಿಷ್ಠೆಯ ಕಣವಾಗಿದೆ.

  • ಐಪಿಎಲ್ ಕ್ರಿಕೆಟ್‌ – ಅಭಿಮಾನಿಗಳಿಲ್ಲ, ಆಟಗಾರರಿಗೆ ಎರಡು ವಾರದಲ್ಲಿ 4 ಕೋವಿಡ್‌ ಪರೀಕ್ಷೆ

    ಐಪಿಎಲ್ ಕ್ರಿಕೆಟ್‌ – ಅಭಿಮಾನಿಗಳಿಲ್ಲ, ಆಟಗಾರರಿಗೆ ಎರಡು ವಾರದಲ್ಲಿ 4 ಕೋವಿಡ್‌ ಪರೀಕ್ಷೆ

    – ಬಿಸಿಸಿಐ ಸಿದ್ಧಪಡಿಸಿದೆ ಕೋವಿಡ್‌ 19 ಮಾರ್ಗಸೂಚಿ
    – ಶೀಘ್ರವೇ ಐಪಿಎಲ್‌ ತಂಡಗಳಿಗೆ ಎಸ್‌ಒಪಿ ರವಾನೆ

    ಮುಂಬೈ: ಕ್ರೀಡಾಂಗಣದಲ್ಲಿ ಅಭಿಮಾನಿಗಳು ಇರಬಾರದು, ವೀಕ್ಷಕ ವಿವರಣೆಗಾರರು 6 ಅಡಿ ಅಂತರ ಕಾಯ್ದುಕೊಳ್ಳಬೇಕು. ಡ್ರೆಸ್ಸಿಂಗ್‌ ಕೋಣೆಯಲ್ಲಿ 15ಕ್ಕಿಂತ ಹೆಚ್ಚಿನ ಆಟಗಾರರು ಸೇರುವಂತಿಲ್ಲ. ಎರಡು ವಾರದಲ್ಲಿ 4 ಬಾರಿ ಕೋವಿಡ್‌ ಪರೀಕ್ಷೆ.  ಪಂದ್ಯ ಮುಗಿದ ಬಳಿಕ ನಡೆಯುವ ಬಹುಮಾನ ವಿತರಣೆ ವೇಳೆಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು – ಇದು ಐಪಿಎಲ್‌ ಫ್ರಾಂಚೈಸಿಗಳಿಗೆ ಬಿಸಿಸಿಐ ಸಿದ್ಧಪಡಿಸಿರುವ ಕೋವಿಡ್‌-19 ಸುರಕ್ಷಾ ಮಾರ್ಗಸೂಚಿ.

    ಯುಎಇಯಲ್ಲಿ ಈ ಬಾರಿ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಐಪಿಎಲ್‌ ನಡೆಸಲು ಸಿದ್ಧತೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಐಪಿಎಲ್‌ ಫ್ರಾಂಚೈಸಿಗಳು ಅಳವಡಿಸಿಕೊಳ್ಳಬೇಕಾದ ಕೋವಿಡ್‌ ಮಾರ್ಗಸೂಚಿಯನ್ನು ತಯಾರಿಸಿದ್ದು ಶೀಘ್ರವೇ ಎಲ್ಲ ತಂಡಗಳಿಗೆ ರವಾನಿಸಲಿದೆ.

    ಈಗಾಗಲೇ ಬಿಸಿಸಿಐ ಮನವಿಯನ್ನು ಸ್ವೀಕರಿಸಿರುವ ಎಮಿರೇಟ್ಸ್‌ ಕ್ರಿಕೆಟ್‌ ಬೋರ್ಡ್‌ ಐಪಿಎಲ್‌ ಆಯೋಜಿಸಲು ಒಪ್ಪಿಗೆ ನೀಡಿದೆ. ಐಪಿಎಲ್ -13 ಅನ್ನು ಯುಎಇಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ಇಲ್ಲಿಯವರೆಗೆ ಅನುಮೋದನೆ ನೀಡಿಲ್ಲ

    ಎಸ್‌ಒಪಿಯಲ್ಲಿ ಏನಿದೆ?
    ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು ರೂಪಿಸಿದ ಮಾನದಂಡಗಳ ಪ್ರಕಾರ ಬಿಸಿಸಿಐ ಎಸ್‌ಒಪಿ ಸಿದ್ಧಪಡಿಸಿದೆ. ಪಂದ್ಯಾವಳಿಯ ಪ್ರಾರಂಭದ ಎರಡು ವಾರಗಳ ಮೊದಲು ಪ್ರತಿ ಆಟಗಾರನು ನಾಲ್ಕು ಕೋವಿಡ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು. ಎರಡು ಪರೀಕ್ಷೆ ನಿರ್ಗಮನಕ್ಕೆ ಮೊದಲು ಭಾರತದಲ್ಲಿ ನಡೆದರೆ ಇನ್ನು ಎರಡು ಯುಎಇಯಲ್ಲಿ ಕ್ವಾರಂಟೈನ್‌ ಆಗಿರುವಾಗ ನಡೆಯಬೇಕು.

    ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮದ ಜೊತೆ ಮಾತನಾಡಿ, ಮೈದಾನದಲ್ಲಿರುವ ಆಟಗಾರರು ಮಾತ್ರವಲ್ಲ, ಅವರ ಪತ್ನಿಯರು/ಗೆಳತಿಯರು, ಫ್ರ್ಯಾಂಚೈಸ್ ಮಾಲೀಕರು, ಚಾಲಕರು ಎಲ್ಲರೂ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಎಲ್ಲರಿಗೂ ನಿಯಮಗಳು ಅನ್ವಯವಾಗುತ್ತಿದ್ದು ‘ಬಯೋ ಬಬಲ್‌ʼ ಅನ್ನು ಯಾರೂ ಉಲ್ಲಂಘಿಸುವಂತಿಲ್ಲ ಎಂದು ತಿಳಿಸಿದ್ದಾರೆ.

    ಪತ್ನಿಯಂದಿರು, ಕುಟುಂಬದ ಸದಸ್ಯರು ಆಟಗಾರರ ಜೊತೆ ಬರಬೇಕೇ ಬೇಡವೇ ಎಂಬುದನ್ನು ಬಿಸಿಸಿಐ ನಿರ್ಧರಿಸುವುದಿಲ್ಲ. ಈ ಆಯ್ಕೆಯನ್ನು ಫ್ರಾಂಚೈಸಿಗೆ ನೀಡಲಾಗಿದೆ. ಒಂದು ಬಾರಿ ತಂಡದ ಜೊತೆ ಸಂಪರ್ಕಕ್ಕೆ ಬಂದರೆ ಎಲ್ಲರೂ ಮಾರ್ಗಸೂಚಿಯನ್ನು ಪಾಲಿಸಬೇಕಾಗುತ್ತದೆ ಎಂದು ಹೇಳಿದರು.

    ತಂಡದ ಆಟಗಾರರು, ಸಿಬ್ಬಂದಿ ಒಂದು ಬಾರಿ ಹೋಟೆಲ್‌ನಲ್ಲಿ ವ್ಯವಸ್ಥೆ ಕಲ್ಪಿಸಿದ ಬಳಿಕ ಮತ್ತೆ ಹೋಟೆಲ್‌ ಬದಲಾವಣೆಗೆ ಅವಕಾಶವಿಲ್ಲ. ನೆಗೆಟಿವ್‌ ಬಂದಿರುವ ಹೋಟೆಲ್‌ ಸಿಬ್ಬಂದಿಗೆ ಮಾತ್ರ ಆಟಗಾರರ ಡ್ರೆಸ್ಸಿಂಗ್‌ ರೂಂಗೆ ಪ್ರವೇಶ ನೀಡಲಾಗುತ್ತದೆ. ಬಿಸಿಸಿಐ ಈಗಾಗಲೇ ಆಟಗಾರರ ಸುರಕ್ಷತೆ ದೃಷ್ಟಿಯಿಂದ ಕೋವಿಡ್‌ ನಿಯಮಗಳು ಪಾಲನೆ ಮಾಡಲು ಸಾಧ್ಯವಿರುವ ಹೋಟೆಲ್‌ಗಳನ್ನು ಬುಕ್‌ ಮಾಡುವಂತೆ ಫ್ರಾಂಚೈಸಿಗಳಿಗೆ ಸೂಚಿಸಿದೆ.

    ಅಭಿಮಾನಿಗಳಿಗೆ ಪ್ರವೇಶ ನೀಡಲಾಗುತ್ತಾ ಎಂಬ ಪ್ರಶ್ನೆಗೆ, ಟೂರ್ನಿಯ ಆರಂಭದಲ್ಲಿ ನಾವು ಈ ರಿಸ್ಕ್‌ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಂದೆ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿ ತಿಳಿಸಿದರು.

    ಗಲ್ಫ್ ನ್ಯೂಸ್ ಪ್ರಕಾರ, ಯುಎಇಯಲ್ಲಿ ಬುಧವಾರ 375 ಮಂದಿಗೆ ಸೋಂಕು ದೃಢಪಟ್ಟಿದೆ. ಇಲ್ಲಿಯವರೆಗೆ ಒಟ್ಟು 59,921 ಮಂದಿಗೆ ಸೋಂಕು ಬಂದಿದ್ದು, ಇಲ್ಲಿಯವರೆಗೆ 53,202 ಮಂದಿ ಡಿಸ್ಚಾರ್ಜ್‌ ಆಗಿದ್ದಾರೆ.

    ಏನಿದು ಬಯೋ ಬಬಲ್‌?
    ಕೋವಿಡ್‌ 19 ಬಳಿಕ ಈ ಬಯೋಬಬಲ್‌ ಪದ ಸಾಕಷ್ಟು ಸದ್ದು ಮಾಡುತ್ತಿದೆ. ಇಂಗ್ಲೆಂಡ್‌ ಕ್ರಿಕೆಟ್‌ ಬೋರ್ಡ್‌ ಮೊದಲ ಬಾರಿಗೆ ಕ್ರಿಕೆಟ್‌ನಲ್ಲಿ ಇದನ್ನು ಅಳವಡಿಸಿತ್ತು. ಆಟಗಾರರು ಹೊರ ಪ್ರಪಂಚದದಿಂದ ಪ್ರತ್ಯೇಕವಾಗಿ ಸುರಕ್ಷಿತ ವಾತವರಣದಲ್ಲಿರುವ  ಪ್ರದೇಶವೇ ಬಯೋ ಬಬಲ್‌. ಈ ನಿರ್ಧಿಷ್ಟ ಪ್ರದೇಶದಲ್ಲಿ ಕೆಲವೇ ಮಂದಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಮಾಧ್ಯಮದರ ಪ್ರವೇಶಕ್ಕೂ ನಿರ್ಬಂಧ ಹೇರಲಾಗುತ್ತದೆ. ಈ ಜಾಗದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಬೇಕಾಗುತ್ತದೆ. ಉಷ್ಣಾಂಶ ತಪಾಸಣೆ, ಪ್ರತಿದಿನವೂ ಆರೋಗ್ಯದ ವರದಿಯನ್ನು ನಮೂದಿಸಬೇಕಾಗುತ್ತದೆ.

  • ಕೊರೊನಾ ಭೀತಿ ನಡುವೆ ಕೆರಿಬಿಯನ್ನರ ನಾಡಲ್ಲಿ ಕ್ರಿಕೆಟ್ ಹಂಗಾಮ ಶುರು

    ಕೊರೊನಾ ಭೀತಿ ನಡುವೆ ಕೆರಿಬಿಯನ್ನರ ನಾಡಲ್ಲಿ ಕ್ರಿಕೆಟ್ ಹಂಗಾಮ ಶುರು

    – ವಿನ್ಸಿ ಟಿ-10 ಲೀಗ್ ಇಂದಿನಿಂದ ಆರಂಭ
    – ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಅವಕಾಶ

    ಪೋರ್ಟ್ ಆಫ್ ಸ್ಪೇನ್: ಕೊರೊನಾ ಭೀತಿಯ ನಡುವೆ ಕೆರಿಬಿಯನ್ನರ ನಾಡಲ್ಲಿ ಕ್ರಿಕೆಟ್ ಚಟುವಟಿಕೆ ಗರಿಗೆದರಿದೆ. ವಿನ್ಸಿ ಪ್ರೀಮಿಯರ್ ಟಿ-10 ಲೀಗ್ (ವಿಪಿಎಲ್) ಇಂದು ಪೂರ್ವ ಕೆರಿಬಿಯನ್ ದೇಶವಾದ ಸೇಂಟ್ ವಿನ್ಸೆಂಟ್ ಮತ್ತು ದಿ ಗ್ರೆನಡೈನ್ಸ್‍ನಲ್ಲಿ ಪ್ರಾರಂಭವಾಗಲಿವೆ.

    ವಿನ್ಸಿ ಪ್ರೀಮಿಯರ್ ಟಿ-10 ಲೀಗ್ ಟೂರ್ನಿ ಮೇ 31ರವರೆಗೆ ನಡೆಯಲಿದ್ದು, ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಎಲ್ಲಾ 6 ತಂಡಗಳು ಟೂರ್ನಿಯಲ್ಲಿ 10 ದಿನ ಕಾಲ 28 ಪಂದ್ಯಗಳನ್ನು ಆಡಲಿವೆ. ಪ್ರತಿದಿನ 3 ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ. ಫ್ಯಾನ್‍ಕೋಡ್ ಅಪ್ಲಿಕೇಶನ್‍ನಲ್ಲಿ ಭಾರತೀಯ ಕಾಲಮಾನ ಸಂಜೆ 6ರಿಂದ ರಾತ್ರಿ 10:30 ರವರೆಗೆ ಪಂದ್ಯದ ನೇರ ಪ್ರಸಾರವಾಗಲಿದೆ.

    ಈ ಲೀಗ್‍ನ 6 ತಂಡಗಳಲ್ಲಿ ಒಟ್ಟು 72 ಆಟಗಾರರಿದ್ದಾರೆ. ಎಲ್ಲಾ ಫ್ರಾಂಚೈಸಿಗಳು ಈ ಆಟಗಾರರನ್ನು ಮೇ 11ರಂದು ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಿದ್ದರು. ಲೀಗ್‍ನಲ್ಲಿ ವೆಸ್ಟ್ ಇಂಡೀಸ್‍ನ ಸುನಿಲ್ ಅಂಬರೀಸ್, ಕೆಸ್ರಿಕ್ ವಿಲಿಯಮ್ಸ್ ಮತ್ತು ಒಬೆಡ್ ಮೆಕಾಯ್ ಸೇರಿದಂತೆ 6 ಅಂತಾರಾಷ್ಟ್ರೀಯ ಆಟಗಾರರು ಭಾಗವಹಿಸಲಿದ್ದಾರೆ.

    ಸದ್ಯ ಭಾರೀ ಚರ್ಚೆಯಲ್ಲಿರುವ ಲಾಲಾರಸ (ಉಗುಳನ್ನು) ಬಾಲ್‍ಗೆ ಹಚ್ಚುವುದನ್ನು ಟೂರ್ನಿಯಲ್ಲಿ ನಿಷೇಧಿಸಲಾಗಿದೆ. ಈ ಮೂಲಕ ಬಾಲ್ ಹೊಳೆಯಲು ಲಾಲಾರಸ ಅಥವಾ ಬೆವರು ಬಳಸದ ಮೊದಲ ಕ್ರಿಕೆಟ್ ಪಂದ್ಯಾವಳಿ ಇದಾಗಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕ್ರಿಕೆಟ್‍ನಲ್ಲಿ ಲಾಲಾರಸದ ಬಳಕೆಯನ್ನು ನಿಷೇಧಿಸುವಂತೆ ಶಿಫಾರಸು ಮಾಡಿತ್ತು. ಆದರೆ ಬೆವರು ಬಳಕೆಯನ್ನು ನಿಷೇಧಿಸಲಿಲ್ಲ.

    ಪಂದ್ಯದ ವೇಳೆ ಆಟಗಾರರಿಗೆ ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗುವುದಿಲ್ಲ. ಸರ್ಕಾರದ ಸಲಹೆಯಂತೆ ಟೂರ್ನಿ ನಡೆಸಲಾಗುವುದು. ಪಂದ್ಯದ ಸಮಯದಲ್ಲಿ ಸಣ್ಣ ವಿರಾಮವೂ ಇರುತ್ತದೆ. ಇದರಿಂದ ಆಟಗಾರರು ಕೈಯನ್ನು ಸ್ವಚ್ಛಗೊಳಿಸಬಹುದು. ಅಲ್ಲದೆ ಮ್ಯಾಚ್ ಫಿಕ್ಸಿಂಗ್ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ (ಸಿಡಬ್ಲ್ಯುಐ) ತಿಳಿಸಿದೆ.

    ಪ್ರೇಕ್ಷಕರ ಆಸನಕ್ಕಾಗಿ ವ್ಯವಸ್ಥೆ:
    “ಸರ್ಕಾರವು ಯಾವುದೇ ನಿರ್ಬಂಧಗಳನ್ನು ವಿಧಿಸಿಲ್ಲ. ಆದ್ದರಿಂದ ಖಾಲಿ ಕ್ರೀಡಾಂಗಣದಲ್ಲಿ ಈ ಪಂದ್ಯಗಳು ನಡೆಯುತ್ತಿಲ್ಲ. ಕೊರೊನಾ ವೈರಸ್ ಭೀತಿಯ ನಡುವೆ ಟೂರ್ನಿ ನಡೆಯುತ್ತಿವೆ. ಆದ್ದರಿಂದ ಹೆಚ್ಚಿನ ವೀಕ್ಷಕರನ್ನು ಪಡೆಯುವ ಭರವಸೆಯಿಲ್ಲ. ಅದೇನೇ ಇದ್ದರೂ ಪ್ರೇಕ್ಷಕರಿಗೆ ಕ್ರೀಡಾಂಗಣದಲ್ಲಿ ದೂರದಲ್ಲಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿದ್ದೇವೆ. ಪಂದ್ಯದ ಸಮಯದಲ್ಲಿ ವೈದ್ಯಕೀಯ ತಂಡ ಸೇರಿದಂತೆ ಎಲ್ಲಾ ಅಗತ್ಯ ಸೌಲಭ್ಯಗಳು ಲಭ್ಯವಿರುತ್ತವೆ.” ಎಂದು ಸಿಡಬ್ಲ್ಯುಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಕೊರೊನಾದಿಂದಾಗಿ ಕಳೆದ ಮಾರ್ಚ್ ನಲ್ಲಿ ವಿಶ್ವಾದ್ಯಂತ ಕೆಲ ಕ್ರಿಕೆಟ್ ಟೂರ್ನಿಗಳು ರದ್ದುಗೊಂಡರೆ, ಇನ್ನು ಕೆಲವು ಮುಂದೂಲ್ಪಟ್ಟಿದ್ದವು. ಕೊರೊನಾ ಆವರಿಸಲಾರಂಭಿಸಿದಾಗ ನಡೆದ ವಿಶ್ವ ಕ್ರಿಕೆಟಿಗರನ್ನೊಳಗೊಂಡ ಕಡೇಯ ಟೂರ್ನಿಯೆಂದರೆ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‍ಎಲ್). ಕರಾಚಿ ಕಿಂಗ್ಸ್ ಮತ್ತು ಕ್ವೆಟ್ಟಾ ಗ್ಲಾಡಿಯೇಟರ್ಸ್ ಮಧ್ಯೆ ಮಾರ್ಚ್ 15ರಂದು ಪಂದ್ಯ ನಡೆದಿತ್ತು. ಆದರೆ ಕೊರೊನಾ ತೀವ್ರಗೊಂಡಿದ್ದರಿಂದ ಪಿಎಸ್‍ಎಲ್ ರದ್ದಾಗಿತ್ತು.

  • ಭಾರತ ಕೈಬಿಟ್ಟರೆ ಟೆಸ್ಟ್ ಕ್ರಿಕೆಟ್ ಸಾವನ್ನಪ್ಪುತ್ತದೆ: ಗ್ರೇಗ್ ಚಾಪೆಲ್

    ಭಾರತ ಕೈಬಿಟ್ಟರೆ ಟೆಸ್ಟ್ ಕ್ರಿಕೆಟ್ ಸಾವನ್ನಪ್ಪುತ್ತದೆ: ಗ್ರೇಗ್ ಚಾಪೆಲ್

    ಸಿಡ್ನಿ: ಭಾರತ ಟೆಸ್ಟ್ ಕ್ರಿಕೆಟ್ ಕೈಬಿಟ್ಟರೆ ಆ ಮಾದರಿ ಸಾವನ್ನಪ್ಪುತ್ತದೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಗ್ರೇಗ್ ಚಾಪೆಲ್ ಅಭಿಪ್ರಾಯ ಪಟ್ಟಿದ್ದಾರೆ.

    ವಿಶ್ವ ಕ್ರಿಕೆಟ್‍ನಲ್ಲಿ ಎಲ್‍ಬಿಡಬ್ಲೂ ಕುರಿತು ಪ್ರಸ್ತುತ ಇರುವ ನಿಯಮಗಳನ್ನು ಬದಲಾಯಿಸುವ ಅಗತ್ಯವಿದೆ ಎಂದು ಹೇಳಿರುವ ಗ್ರೇಗ್ ಚಾಪೆಲ್, ಟೆಸ್ಟ್ ಕ್ರಿಕೆಟ್ ಪ್ರಾಮುಖ್ಯತೆಯ ಬಗ್ಗೆಯೂ ಮಾತನಾಡಿದ್ದಾರೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳು ಹೊರತು ಪಡಿಸಿದರೆ ಬೇರೆ ಯಾವ ದೇಶಗಳು ಟೆಸ್ಟ್ ಕ್ರಿಕೆಟ್‍ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿಲ್ಲ ಎಂದು ಚಾಪೆಲ್ ಹೇಳಿದ್ದಾರೆ.

    ಚಾಟ್ ಶೋ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿರುವ ಚಾಪೆಲ್, ಸದ್ಯ ಬಹುತೇಕ ಕ್ರಿಕೆಟ್ ಆಡುವ ರಾಷ್ಟ್ರಗಳು ಟಿ20 ಮಾದರಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ದೇಶಗಳು ಮಾತ್ರ ಟೆಸ್ಟ್ ಮಾದರಿಗೆ ಪ್ರಾಮುಖ್ಯತೆ ನೀಡುತ್ತಿವೆ. ಈ ಸಮಯದಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಅತ್ಯುತ್ತಮ ಎಂದು ಹೇಳಿದ್ದಾರೆ. ಟೆಸ್ಟ್ ಮಾದರಿ ಜೀವಂತವಾಗಿರುತ್ತದೆ ಎಂಬ ಆಸೆ ಕೊಹ್ಲಿ ಮಾತುಗಳಿಂದ ಅರ್ಥವಾಗುತ್ತಿದೆ. ಒಂದೊಮ್ಮೆ ಭಾರತ ಟೆಸ್ಟ್ ಕ್ರಿಕೆಟ್ ಕೈಬಿಟ್ಟರೆ ಆ ಮಾದರಿ ಸಾವನ್ನಪ್ಪುತ್ತದೆ ಎಂದು ಹೇಳಿದ್ದಾರೆ.

    ಕೊರೊನಾ ಕಾರಣದಿಂದ ಎಲ್ಲಾ ಕ್ರಿಕೆಟ್ ಬೋರ್ಡ್‍ಗಳು ನಷ್ಟ ಅನುಭವಿಸಿವೆ. ಕೆಲ ಬೋರ್ಡ್‍ಗಳು ಆಟಗಾರರಿಗೆ ಅರ್ಧ ವೇತನ ನೀಡುತ್ತಿವೆ. ಕೊರೊನಾದಿಂದ ಪರಿಸ್ಥಿತಿ ತೇರ್ಗಡೆ ಹೊಂದಿದ್ದ ಬಳಿಕ ಹೆಚ್ಚು ಟಿ20 ಮಾದರಿಯ ಕ್ರಿಕೆಟ್ ಪಂದ್ಯಗಳನ್ನು ನಿರ್ವಹಿಸಲು ಹಲವು ದೇಶಗಳು ಚಿಂತನೆ ನಡೆಸಿವೆ. ಬಿಸಿಸಿಐ ಕೂಡ ಇದೇ ಚಿಂತನೆಯಲ್ಲಿದೆ. ಟೆಸ್ಟ್ ಮಾದರಿಯ ಕ್ರಿಕೆಟ್ ಪಂದ್ಯಗಳಿಗಿಂತ ಏಕದಿನ, ಟಿ20 ಮಾದರಿಯ ಪಂದ್ಯಗಳಿಂದ ಹೆಚ್ಚು ಆದಾಯ ಲಭ್ಯವಾಗ ಕಾರಣ ಇಂತಹ ಚಿಂತನೆ ನಡೆದಿದೆ ಎಂದು ಚಾಪೆಲ್ ವಿವರಿಸಿದ್ದಾರೆ.

    ಇತ್ತೀಚೆಗಷ್ಟೇ ಆಸ್ಟ್ರೇಲಿಯಾ, ಟೀಂ ಇಂಡಿಯಾ ಟೆಸ್ಟ್ ಟೂರ್ನಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಚಾಪೆಲ್, ಈ ಬಾರಿ ಟೀಂ ಇಂಡಿಯಾಗೆ ಸಿರೀಸ್ ಗೆಲುವು ಕಷ್ಟವಾಗಲಿದೆ. ಈ ಹಿಂದೆ ಟೀಂ ಇಂಡಿಯಾ ಟೆಸ್ಟ್ ಸೀರಿಸ್ ಗೆಲುವು ಪಡೆದಿದ್ದರು ಕೂಡ ಮುಂದಿನ ಟೂರ್ನಿಯಲ್ಲಿ ಇದು ಅಷ್ಟು ಸುಲಭವಲ್ಲ. ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಅವರನ್ನು ಬಹುಬೇಗ ಪೆವಿಲಿಯನ್‍ಗೆ ಕಳುಹಿಸಿದರೆ ಟೀಂ ಇಂಡಿಯಾ ಗೆಲ್ಲುವ ಅವಕಾಶ ಇದೆ ಎಂದಿದ್ದರು.

  • ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್ ಒಲವು

    ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್ ಒಲವು

    ಲಂಡನ್: ವಿಶ್ವವೇ ಚುಟುಕು ಕ್ರಿಕೆಟ್ ಕದನದತ್ತ ಮುಖ ಮಾಡಿದ್ದು, ಪ್ರತಿಯೊಂದು ಪಂದ್ಯಗಳೂ ರೋಚಕತೆಗೆ ಸಾಕ್ಷಿಯಾಗುತ್ತಿದೆ. ಟಿ20 ಕ್ರಿಕೆಟ್ ಟೂರ್ನಿಗಳನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಆದರೆ ಈಗ ಒಲಿಂಪಿಕ್ಸ್‌ನಲ್ಲಿ ಟಿ10 ಕ್ರಿಕೆಟ್‍ಗೆ ಒಲವು ವ್ಯಕ್ತವಾಗಿದೆ.

    ಕೇವಲ 10 ದಿನಗಳಲ್ಲಿ ಇಡೀ ಟೂರ್ನಿಯನ್ನ ಮುಗಿಸುವುದು ಕಷ್ಟ. ಹೀಗಾಗಿ ಒಲಿಂಪಿಕ್ಸ್ ನಂತಹ ಜಾಗತಿಕ ಕ್ರೀಡಾಕೂಟದಲ್ಲಿ 10 ಓವರ್‌ಗಳ ಕ್ರಿಕೆಟ್ ಮಾದರಿ ಸೂಕ್ತವಾಗಿದೆ ಎಂದು ವಿಶ್ವಕಪ್ ವಿಜೇತ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮೋರ್ಗಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    1900ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕಾಣಿಸಿಕೊಂಡಿತ್ತು. ಬಳಿಕ 1998ರ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಆಡಲ್ಪಟ್ಟಿತ್ತು. ಆ ಬಳಿಕ ಅನೇಕ ಕ್ರೀಡಾಕೂಟಗಳಲ್ಲಿ ಕ್ರಿಕೆಟ್ ಟೂರ್ನಿ ನಡೆದಿಲ್ಲ. ಆದರೆ ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯುವ 2022ರ ಕಾಮನ್ವೆಲ್ತ್ ಕ್ರೀಡಾಕೂಟವು ಮಹಿಳೆಯರ ಟಿ20 ಟೂರ್ನಿಯನ್ನು ಒಳಗೊಂಡಿದೆ. ಆದರೆ ಮೋರ್ಗನ್ ಅವರು ಟಿ10 ಮಾದರಿಯು ಟಿ20, 50 ಓವರ್‍ಗಳ ಅಥವಾ ಟೆಸ್ಟ್ ಕ್ರಿಕೆಟ್‍ಗಿಂತ ಉತ್ತಮ ಎಂದು ಹೇಳಿದ್ದಾರೆ.

    “ಟೆಸ್ಟ್, ಏಕದಿನ, ಟಿ20 ಮೂರು ಮಾದರಿಗಳಿಗಿಂತ ಟಿ10 ಒಲಿಂಪಿಕ್ಸ್ ಅಥವಾ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಹೊಂದಿಕೊಳ್ಳುತ್ತದೆ. ಈ ಮೂಲಕ 10 ದಿನಗಳಲ್ಲಿ ಇಡೀ ಟೂರ್ನಿಯನ್ನು ಮುಗಿಸಬಹುದಾಗಿದೆ” ಎಂದು ಇಯಾನ್ ಮೋರ್ಗಾನ್ ವಿಡಿಯೋ ಕಾನ್ಫರೆನ್ಸ್ ನಲ್ಲಿ ತಿಳಿಸಿದ್ದಾರೆ.

    “ಟಿ20 ಪಂದ್ಯದಿಂದ 8-10 ದಿನಗಳಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಡಲು ಸಾಧ್ಯವಾಗುತ್ತದೆ. ಹೀಗಾಗಿ ಈ ಆಯ್ಕೆಯು ಎಲ್ಲರಿಗೂ ಇಷ್ಟವಾಗುತ್ತದೆ, ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಹೊಂದಿಕೊಳ್ಳುತ್ತದೆ. ಮತ್ತೊಂದು ವಿಚಾರವೆಂದರೆ ಟಿ10 ಪಂದ್ಯದಿಂದ ಹೆಚ್ಚಿನ ಮನರಂಜನೆ ಸಿಗುತ್ತದೆ” ಎಂದು ಮೋರ್ಗಾನ್ ಹೇಳಿದ್ದಾರೆ.

    ಲಾಭದಾಯಕ ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ವಿಶ್ವಾದ್ಯಂತ ಹಲವಾರು ಫ್ರ್ಯಾಂಚೈಸ್ ಆಧಾರಿತ ಲೀಗ್‍ಗಳನ್ನು ಹುಟ್ಟುಹಾಕಿದ ಟಿ20 ಕ್ರಿಕೆಟ್ ಅತ್ಯಂತ ಜನಪ್ರಿಯ ಸ್ವರೂಪವಾಗಿ ಹೊರಹೊಮ್ಮಿದೆ. ಈಗ ಟಿ10 ಮಾದರಿಯ ಕ್ರಿಕೆಟ್ ಒಲವು ವ್ಯಕ್ತವಾಗಿದ್ದು ಅಚ್ಚರಿಯೆನಲ್ಲ. ಕೆಲ ಅಭಿಮಾನಿಗಳು ಟೆಸ್ಟ್, ಏಕದಿನ ಪಂದ್ಯಕ್ಕಿಂತಲೂ ಚುಟುಕು ಕ್ರಿಕೆಟ್‍ಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ.

  • ಟಿ20 ಕ್ರಿಕೆಟ್‍ನಲ್ಲಿ 14 ವರ್ಷದಿಂದ ಧೋನಿ ಹೆಸರಿನಲ್ಲಿದೆ ಕೆಟ್ಟ ದಾಖಲೆ

    ಟಿ20 ಕ್ರಿಕೆಟ್‍ನಲ್ಲಿ 14 ವರ್ಷದಿಂದ ಧೋನಿ ಹೆಸರಿನಲ್ಲಿದೆ ಕೆಟ್ಟ ದಾಖಲೆ

    ಮುಂಬೈ: ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಮೂರು ಐಸಿಸಿ ಟೈಟಲ್ಸ್ ಗೆದ್ದ ಏಕೈಕ ಕ್ಯಾಪ್ಟನ್ ಆಗಿದ್ದಾರೆ. ಅಲ್ಲದೇ ದಿ ಬೆಸ್ಟ್ ಮ್ಯಾಚ್ ಫಿನಿಶರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ. ಆದರೂ 14 ವರ್ಷದ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿ ಜೀವನದಲ್ಲಿ ಧೋನಿ ಅನಗತ್ಯ ದಾಖಲೆಯನ್ನು ಹೊಂದಿದ್ದಾರೆ.

    2006ರಲ್ಲಿ ಮೊದಲ ಟಿ20 ಪಂದ್ಯವನ್ನಾಡಿದ ಧೋನಿ, ಇದುವರೆಗೂ 98 ಪಂದ್ಯಗಳನ್ನು ಆಡಿದ್ದಾರೆ. ಆದರೆ ಒಂದು ಪಂದ್ಯದಲ್ಲೂ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗಳಿಸಲು ಧೋನಿ ವಿಫಲರಾಗಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ 71ಕ್ಕೂ ಹೆಚ್ಚು ಟಿ20 ಪಂದ್ಯಗಳಲ್ಲಿ ಆಡಿ ಮ್ಯಾನ್ ಆಫ್ ದಿ ಮ್ಯಾಚ್ ಪಡೆಯದ ಏಕೈಕ್ ಆಟಗಾರ ಧೋನಿ. ಕಳೆದ ವರ್ಷದಿಂದ ಟೀಂ ಇಂಡಿಯಾಗೆ ದೂರವಾಗಿರುವ ಧೋನಿ ಅಕ್ಟೋಬರಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಆಡಿದ ಬಳಿಕ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

    ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ 98 ಟಿ20 ಪಂದ್ಯಗಳನ್ನು ಆಡಿರುವ ಧೋನಿ 37.6 ಸರಾಸರಿಯಲ್ಲಿ 1,282 ರನ್ ಗಳಿಸಿದ್ದಾರೆ. ಇದರಲ್ಲಿ 116 ಬೌಂಡರಿ, 52 ಸಿಕ್ಸರ್ ಸೇರಿದ್ದು, 2 ಅರ್ಧ ಶತಕಗಳನ್ನು ಮಾತ್ರ ಗಳಿಸಿದ್ದಾರೆ. ಏಕದಿನ ಮತ್ತು ಟಿ20 ಮಾದರಿಯಲ್ಲಿ ಹೆಚ್ಚು ಬಾರಿ ಸ್ಲಾಗ್ ಓವರ್ ಗಳಲ್ಲಿ ಬ್ಯಾಟಿಂಗ್ ಇಳಿಯುತ್ತಿದ್ದ ಧೋನಿ ಸಾಮಾನ್ಯವಾಗಿ ಕಡಿಮೆ ಎಸೆತಗಳನ್ನ ಎದುರಿಸುವ ಅವಕಾಶ ಪಡೆಯುತ್ತಿದ್ದರು.

    ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್ ಗೆಲ್ಲದೇ ಟಿ20 ಮಾದರಿಯಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ಧೋನಿ ಮೊದಲ ಸ್ಥಾನದಲ್ಲಿದ್ದರೆ. ಉಳಿದಂತೆ ವೆಸ್ಟ್ ಇಂಡೀಸ್ ಆಟಗಾರ ದಿನೇಶ್ ರಾಮ್ದಿನ್-71 ಪಂದ್ಯ, ಅಫ್ಘಾನಿಸ್ತಾನದ ತಂಡದ ಅಸ್ಗರ್ ಅಫ್ಘಾನ್-69 ಪಂದ್ಯ, ಐರ್ಲೆಂಡ್ ತಂಡದ ವಿಲಿಯಂ ಪೋರ್ಟರ್ ಫೀಲ್ಡ್- 61 ಪಂದ್ಯಗಳೊಂದಿಗೆ ಕ್ರಮವಾಗಿ 2,3,4ನೇ ಸ್ಥಾನವನ್ನು ಪಡೆದಿದ್ದಾರೆ.