Tag: ಟಿಪ್ಪುಸುಲ್ತಾನ್ ಜಯಂತಿ

  • ಅಶ್ಲೀಲ ಫೋಟೋ ವೀಕ್ಷಣೆ  ಪ್ರಕರಣ- ಸಿಐಡಿಯಿಂದ ತನ್ವೀರ್ ಸೇಠ್‍ಗೆ ಕ್ಲೀನ್‍ಚಿಟ್

    ಅಶ್ಲೀಲ ಫೋಟೋ ವೀಕ್ಷಣೆ ಪ್ರಕರಣ- ಸಿಐಡಿಯಿಂದ ತನ್ವೀರ್ ಸೇಠ್‍ಗೆ ಕ್ಲೀನ್‍ಚಿಟ್

    ಬೆಂಗಳೂರು: ಟಿಪ್ಪುಸುಲ್ತಾನ್ ಜಯಂತಿ ಕಾರ್ಯಕ್ರಮದಂದು ಆಶ್ಲೀಲ ವಿಡಿಯೋ ನೋಡಿ ಸಿಕ್ಕಿ ಬಿದ್ದಿದ್ದ ಪ್ರಕರಣದಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಸಿಐಡಿ ಅಧಿಕಾರಿಗಳು ಕ್ಲೀನ್‍ಚಿಟ್ ನೀಡಿದ್ದಾರೆ.

    ನವೆಂಬರ್ 10 2016 ರಂದು ರಾಯಚೂರಿನಲ್ಲಿ ಸರ್ಕಾರ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ದಿನ ಶಿಕ್ಷಣ ಸಚಿವ ತನ್ವೀರ್ ಸೇಠ್ ಅಶ್ಲೀಲ ಫೋಟೋ ನೋಡಿ ಸುದ್ದಿಯಾಗಿದ್ರು. ಬಳಿಕ ಮುಖ್ಯಮಂತ್ರಿಗಳು ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದರು. ಈಗ ಸಿಐಡಿ ವರದಿ ಕೊಟ್ಟಿದ್ದು ಸಚಿವರಿಗೆ ಕ್ಲೀನ್‍ಚಿಟ್ ನೀಡಿದೆ. ಸಚಿವರ ಸ್ನೇಹಿತ ಅರಸು ಅನ್ನೋರು ಈ ಫೋಟೋ ಕಳಿಸಿದ್ದು, ಕೇವಲ ಸಚಿವರಿಗೆ ಮಾತ್ರವಲ್ಲದೇ ಇತರೆ ವಾಟ್ಸಪ್‍ನ 8 ರಿಂದ 10 ಗ್ರೂಪ್‍ಗಳಿಗೆ ಫೋಟೋವನ್ನು ಕಳುಹಿಸಿದ್ದರು ಎಂದು ಹೇಳಲಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವರು, ವಾಟ್ಸಪ್‍ಗೆ ಫೋಟೋ ಬಂದಿರೋದು ನಿಜ. ಆದ್ರೆ ಡೌನ್‍ಲೋಡ್ ಮಾಡಿಲ್ಲ ಅಂತ ಹೇಳಿದ್ದರು. ಮಾತ್ರವಲ್ಲದೇ ತಾವಾಗಿಯೇ ಸರ್ಚ್ ಮಾಡಿ ಅಶ್ಲೀಲ ಫೋಟೋವನ್ನೂ ನೋಡಿಲ್ಲ. ಇದ್ರಲ್ಲಿ ಮಂತ್ರಿಗಳ ತಪ್ಪಿಲ್ಲ. ಅಪರಾಧನೂ ಅಲ್ಲ ಅಂತ ತನಿಖಾಧಿಕಾರಿಗಳು 30 ಪುಟಗಳ ವರದಿಯನ್ನು ಸಿಐಡಿ ಡಿಜಿಪಿ ಕಿಶೋರ್ ಚಂದ್ರರಿಗೆ ಕೊಟ್ಟಿದ್ದರು.