Tag: ಟಾರ್ಚರ್

  • ಕೊರೊನಾ ಸಂಕಷ್ಟದ ನಡುವೆ ವಾರಿಯರ್ಸ್‍ಗೆ ಕಿರುಕುಳ- ಟಾರ್ಗೆಟ್ ಮಿಸ್ಸಾದ್ರೆ ತಲೆದಂಡ ಫಿಕ್ಸ್!

    ಕೊರೊನಾ ಸಂಕಷ್ಟದ ನಡುವೆ ವಾರಿಯರ್ಸ್‍ಗೆ ಕಿರುಕುಳ- ಟಾರ್ಗೆಟ್ ಮಿಸ್ಸಾದ್ರೆ ತಲೆದಂಡ ಫಿಕ್ಸ್!

    ಬೆಂಗಳೂರು: ಸರ್ಕಾರ ಕೊರೊನಾ ವಾರಿಯರ್ಸ್ ಗೆ ಟೆಸ್ಟಿಂಗ್ ಟಾರ್ಗೆಟ್ ನೀಡುತ್ತಿದ್ದು, ಸರ್ಕಾರದ ಈ ಕಿರಿಕ್‍ನಿಂದ ಆರೋಗ್ಯಾಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಮೈಸೂರು ವೈದ್ಯಾಧಿಕಾರಿ ನಾಗೇಂದ್ರ ಸಾವು ಬೆನ್ನಲ್ಲೆ ಕೊರೊನಾ ವಾರಿಯರ್ಸ್ ಗೆ ಸರ್ಕಾರದ ಇಲಾಖೆಯಿಂದ ಟಾರ್ಗೆಟ್ ಟಾರ್ಚರ್ ಬಿಚ್ಚಿಕೊಳ್ಳುತ್ತಿದೆ. ಹಿರಿಯ ಅಧಿಕಾರಿಗಳು ನೀಡುತ್ತಿರುವ ಟಾರ್ಚರ್ ಕಥೆಯನ್ನು ಅಧಿಕಾರಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.

    ಬೆಂಗಳೂರಿನಲ್ಲಿ 140 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇದ್ದಾವೆ. ಅದರಲ್ಲಿ ಪ್ರತಿ ಕೇಂದ್ರಗಳಿಗೆ 250 ಜನರನ್ನು ಟೆಸ್ಟ್ ಮಾಡಬೇಕು ಎಂದು ಆರಂಭದಲ್ಲಿ ಟಾರ್ಗೆಟ್ ನೀಡಲಾಗಿತ್ತು, ಈಗ ಅದು 500ಕ್ಕೆ ಏರಿಕೆಯಾಗಿದೆಯಂತೆ. ಅದರಲ್ಲಿ 300 ಅಂತೂ ನಿತ್ಯವೂ ಆಗಲೇಬೇಕು ಎಂದು ಸೂಚಿಸಲಾಗಿದೆ. ಪ್ರಾಥಮಿಕ ಸಂಪರ್ಕಿತರು, ದ್ವಿತೀಯ ಸಂಪರ್ಕಿತರನ್ನು ಟೆಸ್ಟ್ ಮಾಡಬಹುದು. ಆದರೆ ಗುಣಲಕ್ಷಣಗಳು ಇಲ್ಲದೇ ಇರುವ ಜನರನ್ನು ಟೆಸ್ಟ್ ಮಾಡಿ ಅಂದರೆ ಎಲ್ಲಿ ಬರುತ್ತಾರೆ ಎಂದು ಸಿಬ್ಬಂದಿ ದೂರಿದ್ದಾರೆ.

    ಟಾರ್ಗೆಟ್ ರೀಚ್ ಆಗದೇ ಇದ್ದರೆ ತಲೆದಂಡ ಫಿಕ್ಸ್. ಈಗಾಗಲೇ ಅನೇಕ ಅಧಿಕಾರಿಗಳು ಕೊರೊನಾ ಟೆಸ್ಟಿಂಗ್ ಆಗದೇ ಇದ್ದಿದ್ದಕ್ಕೆ ಕೆಲಸವನ್ನು ಕಳಕೊಂಡಿದ್ದಾರಂತೆ. ಕ್ಯಾಂಪ್‍ಗಳನ್ನು ಮಾಡಿ ಸುಖಾಸುಮ್ಮನೆ ಜನರನ್ನು ಟೆಸ್ಟ್ ಮಾಡಿ ಟಾರ್ಗೆಟ್ ರೀಚ್ ಮಾಡುತ್ತಿದ್ದೇವೆ. ಈಗ ಬೆಂಗಳೂರಿನಲ್ಲಿ ಕ್ಯಾಂಪ್‍ಗಳನ್ನು ಮಾಡಿ ಆಟೋ ಡ್ರೈವರ್ಸ್ ತರಕಾರಿ ವ್ಯಾಪಾರಿಗಳನ್ನು ರೋಗದ ಲಕ್ಷಣ ಇಲ್ಲದೆ ಇದ್ದರೂ ಕರೆದು ಟೆಸ್ಟಿಂಗ್ ಮಾಡುತ್ತಿದ್ದೇವೆ. ಒಂದಿನಾನೂ ರಜೆಯೇ ತೆಗೆದುಕೊಳ್ಳದೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

    ಲ್ಯಾಬ್ ಟೆಕ್ನಿಷನ್ಸ್ ಗಳಿಗಷ್ಟೇ ವೈಜ್ಞಾನಿಕವಾಗಿ ಸ್ವಾಬ್ ಕಲೆಕ್ಷನ್ ಗೊತ್ತಿರುತ್ತೆ. ಆದರೆ ಈಗ ಸರ್ಕಾರ ಸಿಕ್ಕ ಸಿಕ್ಕವರಿಗೆ ಟ್ರೈನಿಂಗ್ ಕೊಟ್ಟು ಸ್ವಾಬ್ ಕಲೆಕ್ಷನ್ ಮಾಡಿ ಎಂದು ಕಳಿಸುತ್ತಿದ್ದಾರೆ. ಇದರಿಂದ ಪರಿಣಿತರಲ್ಲದವರು ಮೂಗಿನ ದ್ರಾವಣ ತೆಗೆಯುವಾಗ ಅನೇಕರಿಗೆ ರಕ್ತ ಬಂದಿದೆ. ಲ್ಯಾಬ್ ಟೆಕ್ನಿಷನ್ಸ್ ಕೊರತೆ ಇದ್ದರೂ ಸರ್ಕಾರದ ಟಾರ್ಚರ್ ನಿಂದ ಇಲಾಖೆಯ ಕಿರಿಕ್‍ನಿಂದ ಇಂತವರನ್ನು ನೇಮಕ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿದ್ದೇವೆ ಎಂದು ಅಧಿಕಾರಿಗಳು ಅಳಲನ್ನು ತೋಡಿಕೊಂಡಿದ್ದಾರೆ.

  • ಪ್ರಿನ್ಸಿಪಾಲ್ ಕಿರುಕುಳದಿಂದ 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

    ಪ್ರಿನ್ಸಿಪಾಲ್ ಕಿರುಕುಳದಿಂದ 7ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ

    ಬೆಂಗಳೂರು: ಪ್ರಾಂಶುಪಾಲರ ಕಿರುಕುಳ ಸಹಿಸಿಕೊಳ್ಳಲು ಆಗದೇ ವಿದ್ಯಾರ್ಥಿಯೊಬ್ಬ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಸವನಹಳ್ಳಿ ಬಳಿಯಿರುವ ಖಾಸಗಿ ಕಾಲೇಜಿನಲ್ಲಿ ನಡೆದಿದೆ.

    ಶ್ರೀಹರ್ಷ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಮೂಲತಃ ಆಂಧ್ರ ಪ್ರದೇಶದವನಾಗಿದ್ದು, ಎಂಜಿನಿಯರಿಂಗ್ ಓದುತ್ತಿದ್ದನು. ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಟಾರ್ಚರ್ ಸಹಿಸಿಕೊಳ್ಳಲು ಆಗದೇ ಹರ್ಷ ಇಂದು ಬೆಳಗ್ಗೆ ಕಾಲೇಜಿನ ಏಳನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಹಿಂದೆ ಹರ್ಷ ಹಾಸ್ಟೆಲಿನಲ್ಲಿ ಊಟ, ತಿಂಡಿ ಸರಿ ಇಲ್ಲ ಎಂದು ಪ್ರತಿಭಟಿಸಿದ್ದನು. ಹೀಗಾಗಿ ಪ್ರಾಂಶುಪಾಲರು ಹರ್ಷ ಸೇರಿ 20 ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಿದ್ದರು. ಅಲ್ಲದೆ ಕಳೆದ ಒಂದು ತಿಂಗಳಿಂದ ಹರ್ಷ ಕಾಲೇಜಿನಿಂದ ಸಸ್ಪೆಂಡ್ ಆಗಿದ್ದನು.

    ಹರ್ಷ ಒಂದು ತಿಂಗಳಿಂದ ಕಾಲೇಜಿನಲ್ಲಿ ಕಿರುಕುಳ ಅನುಭವಿಸುತ್ತಿದ್ದನು. ಈ ನಡುವೆ ಹರ್ಷ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಆಯ್ಕೆಯಾಗಿದ್ದನು. ಹರ್ಷ ಸಸ್ಪೆಂಡ್ ಆಗಿದ್ದ ಎಂದು ಕಾಲೇಜು ಆಡಳಿತ ಮಂಡಳಿ ಆಫರ್ ಲೆಟರ್ ಅನ್ನು ಹರಿದು ಹಾಕಿತ್ತು. ಇದರಿಂದ ಬೇಸರಗೊಂಡ ಹರ್ಷ ಇಂದು ಬೆಳಗ್ಗೆ 7ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಈ ಬಗ್ಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಆಸ್ತಿಗಾಗಿ ಮಕ್ಕಳ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಕೊಲೆಗೆ ಸಂಚು!

    ಆಸ್ತಿಗಾಗಿ ಮಕ್ಕಳ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಕೊಲೆಗೆ ಸಂಚು!

    ಬೆಂಗಳೂರು: ಆಸ್ತಿಗಾಗಿ ಪತ್ನಿಯೇ ತನ್ನ ಪತಿಯನ್ನು ಕಿಡ್ನಾಪ್ ಮಾಡಿ ಕೊಲೆಗೆ ಸಂಚು ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ರಾಮಚಂದ್ರ(48) ಕಿಡ್ನಾಪ್ ಆಗಿದ್ದ ಪತಿ. ಪತ್ನಿ ಮುನಿರತ್ನಮ್ಮ ತನ್ನ ಮಕ್ಕಳು ಹಾಗೂ ಸಂಬಂಧಿಕರ ಜೊತೆ ಸೇರಿ ಗಂಡನನ್ನು ಕಿಡ್ನಾಪ್ ಮಾಡಿ ಕೊಲೆಗೆ ಸಂಚು ರೂಪಿಸಿದ್ದು, ಈಗ ಎಚ್‍ಎಎಲ್ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

    ಇದೇ ತಿಂಗಳ 5ರಂದು ಪತ್ನಿ ಮುನಿರತ್ನಮ್ಮ ತನ್ನ ಮಕ್ಕಳ ಜೊತೆ ಸೇರಿಕೊಂಡು ಪತಿ ರಾಮಚಂದ್ರನ ಕಿಡ್ನಾಪ್ ಮಾಡಿದ್ದಾಳೆ. ಹೆಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಮೇಶ್ ನಗರ ಸಮೀಪ ನಿರ್ಜನ ಪ್ರದೇಶದಲ್ಲಿ ಕಿಡ್ನಾಪ್ ಮಾಡಲಾಗಿತ್ತು. ನಂತರ ಬೊಮ್ಮಸಂದ್ರದ ಕಿತ್ತಗಾನ್ ಹಳ್ಳಿಯಲ್ಲಿ ರೂಮ್ ಒಂದರಲ್ಲಿ ಕೂಡಿ ಹಾಕಿ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಆಸ್ತಿ ಪತ್ರಕ್ಕೆ ಸಹಿ ಹಾಕುವಂತೆ ಪತ್ನಿ, ಮಕ್ಕಳು ಹಾಗೂ ಬಾಮೈದ ಟಾರ್ಚರ್ ನೀಡಿದ್ದಾರೆ.

    ರಾಮಚಂದ್ರನನ್ನು ಈ ರೀತಿ ಕಿರುಕುಳ ನೀಡುತ್ತಿರುವುದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪೊಲೀಸರು ಕಿಡ್ನಾಪ್ ಆಗಿದ್ದ ರಾಮಚಂದ್ರನನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಸ್ಥಳೀಯ ಆಸ್ಪತ್ರೆಯಲ್ಲಿ ರಾಮಚಂದ್ರಗೆ ಚಿಕಿತ್ಸೆ ನೀಡಲಾಗ್ತಿದೆ.

    ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್‍ಎಎಲ್ ಠಾಣಾ ಪೊಲೀಸರು ಪತ್ನಿ ಹಾಗೂ ಮಕ್ಕಳನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರಾಂಶುಪಾಲನ ಟಾರ್ಚರ್ ಗೆ ಸ್ಕೂಲ್ ಬಿಟ್ಟ ಶಿಕ್ಷಕಿ- ಸೀನಿಯರ್ ವಿದ್ಯಾರ್ಥಿಗಳನ್ನು ನಿಲ್ಲಿಸಿ ದಿಗ್ಬಂಧನ

    ಪ್ರಾಂಶುಪಾಲನ ಟಾರ್ಚರ್ ಗೆ ಸ್ಕೂಲ್ ಬಿಟ್ಟ ಶಿಕ್ಷಕಿ- ಸೀನಿಯರ್ ವಿದ್ಯಾರ್ಥಿಗಳನ್ನು ನಿಲ್ಲಿಸಿ ದಿಗ್ಬಂಧನ

    ಬೆಂಗಳೂರು: ಶಿಕ್ಷಕಿಯೊಬ್ಬರು ಪ್ರಾಂಶುಪಾಲನ ಟಾರ್ಚರ್ ನಿಂದಾಗಿ ಶಾಲೆ ಬಿಟ್ಟು, ಶಾಲೆಯ ಮುಂದೆ ಪುಟ್ಟದಾದ ಅಂಗಡಿ ಹಾಕಿಕೊಂಡು ಬದುಕು ಶುರು ಮಾಡಿದ್ದರು. ಆದರೆ ಶಿಕ್ಷಕಿಯ ಪ್ರೀತಿಯ ವಿದ್ಯಾರ್ಥಿಗಳನ್ನು ಉಪಯೋಗಿಸಿಯೇ ಪ್ರಾಂಶುಪಾಲ ಆಕೆಯ ಬದುಕಿಗೆ ಕೊಳ್ಳಿ ಇಡಲು ರೆಡಿಯಾಗಿದ್ದಾನೆ.

    ಹೊಗಸಂದ್ರದ ಆಕ್ಸ್ ಫರ್ಡ್ ಸ್ಕೂಲ್ ನ ಪ್ರಾಂಶುಪಾಲ ಸೋಮಶೇಖರ್ ಶಿಕ್ಷಕಿಗೆ ಟಾರ್ಚರ್ ಕೊಡುತ್ತಿದ್ದಾನೆ. ಈ ಶಾಲೆಯಲ್ಲಿ ಐದು ವರ್ಷದಿಂದ ವಿಜಯ ಶಿಕ್ಷಕಿಯಾಗಿದ್ದರು. ಎಲ್ಲ ಮಕ್ಕಳ ಪ್ರೀತಿಯ ಟೀಚರ್ ಕೂಡ ಆಗಿದ್ದರು. ಆದರೆ ಪ್ರಾಂಶುಪಾಲರ ಕಿರಿಕ್ ಮತ್ತು ಸಂಬಳ ಕೊಡದೆ ಸತಾಯಿಸುತ್ತಿದ್ದರಿಂದ ಶಿಕ್ಷಕ ವೃತ್ತಿ ಬಿಟ್ಟು ಸ್ಕೂಲ್ ಮುಂದೆ ಅಂಗಡಿ ಹಾಕಿಕೊಂಡಿದ್ದರು.

    ಪತಿ ನಿಧನವಾಗಿದ್ದರಿಂದ ನನ್ನ ಮಗುವನ್ನು ಸಾಕುವ ಜವಾಬ್ದಾರಿ ಇತ್ತು. ಆದರೆ ಈ ಶಾಲೆಯ ಪ್ರಾಂಶುಪಾಲ ಮತ್ತೆ ಕಾಡಲು ಶುರುಮಾಡಿದ್ದಾನೆ. ಮಧ್ಯಾಹ್ನ, ಸಂಜೆ ಶಾಲೆ ಬಿಡುವ ಸಮಯದಲ್ಲಿ ಈ ಅಂಗಡಿಯ ಮುಂದೆ ಹತ್ತು ವಿದ್ಯಾರ್ಥಿಗಳನ್ನು ಸಾಲಾಗಿ ಕಾವಲಿಗೆ ನಿಲ್ಲಿಸಿ ಅಂಗಡಿಗೆ ಯಾವ ಮಕ್ಕಳು ಬಾರದಂತೆ ತಡೆಯುವ ಕೆಲಸ ಮಾಡುತ್ತಿದ್ದಾನೆ ಎಂದು ಶಿಕ್ಷಕಿ ವಿಜಯ ಅವರು ತಿಳಿಸಿದ್ದಾರೆ.

    ನಮಗೆ ಈ ಮಿಸ್ ಕಂಡರೆ ತುಂಬಾ ಇಷ್ಟ. ಶಾಲೆ ಬಿಟ್ಟ ಮೇಲೆ ಈ ಅಂಗಡಿ ಹಾಕಿದ್ದಾರೆ. ಅದಕ್ಕೆ ಮಿಸ್ ನ ಮಾತಾನಾಡಿಸಲು ಬಂದೆ ಅಷ್ಟೆ. ಆದರೆ ಐದಾರು ಜನ ಬಂದು ನನ್ನ ಕೈ-ಕಾಲು ಹಿಡ್ಕೊಂಡು ದರ ದರನೇ ಎಳೆದುಕೊಂಡು ಹೋದರು ಎಂದು 5ನೇ ತರಗತಿಯ ಬಾಲಕಿಯೊಬ್ಬಳು ಪಬ್ಲಿಕ್ ಟಿವಿ ಮುಂದೆ ಬಿಕ್ಕಿ ಬಿಕ್ಕಿ ಅಳುತ್ತಾ ತನ್ನ ನೋವು ತೋಡಿಕೊಂಡಿದ್ದಾಳೆ.

    ಈ ಬಗ್ಗೆ ವರದಿ ಮಾಡುವುದಕ್ಕೆ ಹೋಗಿದ್ದ ಮಾಧ್ಯಮದವರ ಕ್ಯಾಮೆರಾ ಕಿತ್ತುಕೊಳ್ಳಲು ಪ್ರಾಂಶುಪಾಲ ಮುಂದಾಗಿದ್ದಾನೆ. ಓದುವ ಮಕ್ಕಳನ್ನು ತನ್ನ ವೈಯಕ್ತಿಕ ದ್ವೇಷಕ್ಕಾಗಿ ಅಂಗಡಿ ಮುಂದೆ ಗಂಟೆಗಟ್ಟಲೆ ಕಾವಲು ನಿಲ್ಲಿಸುವ ಈ ಪ್ರಾಂಶುಪಾಲನ ವಿರುದ್ಧ ಸೂಕ್ತ ಕ್ರಮವನ್ನು ಶಿಕ್ಷಣ ಇಲಾಖೆ ತೆಗೆದುಕೊಳ್ಳಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬ್ಲೂಫಿಲಂನಲ್ಲಿರೋದು ನೀನೇ ಅಂತ ಪತ್ನಿಗೆ ಕಾಟ- ಪ್ರಶ್ನೆ ಮಾಡಿದ್ರೆ ದೊಡ್ಡವರು ಗೊತ್ತೆಂದು ಡಿಕೆಶಿ ಆಪ್ತನಿಂದ ಧಮ್ಕಿ!

    ಬ್ಲೂಫಿಲಂನಲ್ಲಿರೋದು ನೀನೇ ಅಂತ ಪತ್ನಿಗೆ ಕಾಟ- ಪ್ರಶ್ನೆ ಮಾಡಿದ್ರೆ ದೊಡ್ಡವರು ಗೊತ್ತೆಂದು ಡಿಕೆಶಿ ಆಪ್ತನಿಂದ ಧಮ್ಕಿ!

    ಬೆಂಗಳೂರು: ಬ್ಲೂಫಿಲಂ ನೋಡಿ ಪತ್ನಿಗೆ ನಿತ್ಯ ಟಾರ್ಚರ್ ಕೊಡುತ್ತಿದ್ದಾನೆಂದು ಇಂಧನ ಸಚಿವ ಡಿ ಕೆ ಶಿವಕುಮಾರ್ ಆಪ್ತನ ಮೇಲೆ ಆರೋಪ ಕೇಳಿ ಬಂದಿದೆ.

    ಚನ್ನಪಟ್ಟಣದಲ್ಲಿ ಡಿಕೆಶಿ ಜೊತೆ ಗುರುತಿಸಿಕೊಂಡಿರುವ ಕಾಂತರಾಜ್, 30 ವರ್ಷಗಳ ಹಿಂದೆ ಯುವತಿಯನ್ನು ಪ್ರೀತಿಸಿ ಮದುವೆ ಆಗಿದ್ದ. ಪತ್ನಿ ಬೇರೆ ಜಾತಿ ಎಂದು ಮನೆಯವರು ವಿರೋಧಿಸಿದ್ದರಿಂದ ಮತ್ತೊಂದು ಮದುವೆ ಮಾಡಿಸಿಕೊಂಡಿದ್ದಾನೆ.

    ಕಾಂತರಾಜ್ ಮೊದಲ ಪತ್ನಿಯನ್ನು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ಮರಿಯಪ್ಪನ ಪಾಳ್ಯದಲ್ಲಿ ಇರಿಸಿದ್ದನು. ಇತ್ತ ಇತ್ತೀಚಿಗೆ ಮಂಡ್ಯದಲ್ಲಿ ಬೇರೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ಆ ಬಳಿಕ ವಿನಾಕಾರಾಣ ಟಾರ್ಚರ್ ಕೊಡುತ್ತಿದ್ದಾರೆಂದು ಮೊದಲ ಪತ್ನಿ ಇದೀಗ ಆರೋಪಿಸಿದ್ದಾರೆ.

    ಅಷ್ಟೇ ಅಲ್ಲದೇ ಕಾಂತರಾಜ್ ಬ್ಲೂಫಿಲಂ ನೋಡಿ ನೀಲಿ ಚಿತ್ರದಲ್ಲಿರುವುದು ನೀನೇ ಎಂದು ನಿತ್ಯ ಟಾರ್ಚರ್ ನೀಡುತ್ತಿದ್ದಾನೆ. ಕಾಂತರಾಜ್ ಬೇರೋಬ್ಬಳನ್ನು ನೋಡಿ ನೀಲಿ ಚಿತ್ರದಲ್ಲಿರುವ ಮುಖ ನಿನ್ನ ಮುಖದ ಚಹರೆ ಒಂದೇ ರೀತಿ ಇದೆ ಎಂದು ಕಿರುಕುಳ ನೀಡುತ್ತಿದ್ದಾನೆ ಅಂತ ಅವರು ಆರೋಪಿಸಿದ್ದಾರೆ.

    ನೀನು ನೀಲಿ ಚಿತ್ರದ ದಂಧೆಗೆ ಇಳಿದ್ದಿದ್ದೀಯಾ. ನಿನ್ನ ಸಹವಾಸ ನನಗೆ ಬೇಡ ಎಂದು ಕಾಂತರಾಜ್ ಮೊದಲ ಪತ್ನಿಯನ್ನು ದೂರ ಮಾಡಲು ಮುಂದಾಗಿದ್ದಾನೆ. ಅಷ್ಟೇ ಅಲ್ಲದೇ ಆ ವಿಡಿಯೋವನ್ನು
    ಗೆಳೆಯರೆಲ್ಲರಿಗೂ ಕಳಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾನೆಂದು ಪತ್ನಿ ಆರೋಪಿಸಿ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪತಿ ಕಾಂತರಾಜು ವಿರುದ್ಧ ದೂರು ನೀಡಿದ್ದಾರೆ.

    ಕಾಂತರಾಜ್ ಎರಡು ಮದುವೆ ಸಾಲದೆಂದು ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದನು. ಮಂಡ್ಯದಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆಂದು ಪತ್ನಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಸ್ತ್ರೀ ಲೋಲ ಕಾಂತರಾಜ್ ನಡೆ ಬಗ್ಗೆ ಪ್ರಶ್ನಿಸಿದ್ರೆ ಧಮ್ಕಿ ಹಾಕುತ್ತಾನೆ. ನನಗೆ ಸಿಎಂ ಹಾಗೂ ಡಿಕೆಶಿ ಗೊತ್ತು. ಅದೇನ್ ಮಾಡ್ಕೊಳ್ತಿ ಮಾಡ್ಕೋ ಎಂದು ಕಾಂತರಾಜ್ ಬೆದರಿಸುತ್ತಾನೆ ಅಂತ ಅವರು ದೂರಿನಲ್ಲಿ ತಿಳಿಸಿದ್ದಾರೆ.

    ಕಾಂತರಾಜ್ ಚನ್ನಪಟ್ಟಣದಲ್ಲಿ ಕಾಂಗ್ರೆಸ್‍ನ ಸ್ಥಳೀಯ ಮುಖಂಡನಾಗಿ ಗುರುತಿಸಿಕೊಂಡಿದ್ದು, ಸದ್ಯ ಪತಿಯ ನಡೆಯಿಂದ ಮೊದಲ ಪತ್ನಿ ಹಾಗೂ ಇಬ್ಬರು ಮಕ್ಕಳು ಕಂಗಾಲಾಗಿದ್ದಾರೆ.

  • 3ನೇ ಮದ್ವೆಯಾಗಿ ಬೀಗರೂಟ ಹಾಕಿಸುತ್ತಿದ್ದ ಗಂಡನಿಗೆ ಮೊದಲ ಹೆಂಡ್ತಿಯಿಂದ ತಕ್ಕ ಶಾಸ್ತಿ

    3ನೇ ಮದ್ವೆಯಾಗಿ ಬೀಗರೂಟ ಹಾಕಿಸುತ್ತಿದ್ದ ಗಂಡನಿಗೆ ಮೊದಲ ಹೆಂಡ್ತಿಯಿಂದ ತಕ್ಕ ಶಾಸ್ತಿ

    ಹಾಸನ: ಮೊದಲನೇ ಹೆಂಡತಿಗೆ ಎರಡು ಮಕ್ಕಳನ್ನು ಕೊಟ್ಟು, ಎರಡನೇ ಹೆಂಡತಿಗೆ ಸಕತ್ ಟಾರ್ಚರ್ ಕೊಟ್ಟು, ಮೂರನೇ ಮದುವೆಯಾಗಿ ಯುವತಿಯೊಂದಿಗೆ ಸಂಸಾರ ನೆಡೆಸಲು ಹೊರಟಿದ್ದ ಭಂಡ ಗಂಡನಿಗೆ ಮೊದಲನೇ ಹೆಂಡತಿ ತಕ್ಕ ಶಾಸ್ತಿ ಮಾಡಿದ ಘಟನೆ ಹಾಸನದ ಗೊರೂರಿನಲ್ಲಿ ನಡೆದಿದೆ.

    ರಾಜೇಶ್ ಎಂಬಾತನೇ ಮೂರನೇ ಮದುವೆಯಾಗಿ ಸದ್ಯ ಪೊಲೀಸ್ ವಶದಲ್ಲಿರುವ ಆರೋಪಿ. 2006ರಲ್ಲಿ ಚನ್ನರಾಯಪಟ್ಟಣದ ಸೌಮ್ಯ ಎಂಬುವರೊಂದಿಗೆ ಸಪ್ತಪದಿ ತುಳಿದು 6 ವರ್ಷಗಳ ಕಾಲ ಅನ್ಯೋನ್ಯವಾಗಿದ್ದ. ಬಳಿಕ ಸಂಸಾರದಲ್ಲಿ ಎದುರಾದ ಕೆಲ ಸಣ್ಣಪಟ್ಟ ಘಟನೆಗಳಿಂದ ಹೆಂಡತಿಗೆ ಕಿರುಕುಳ ಕೊಟ್ಟು ಕೊನೆಗೆ ಹೆಂಡತಿಯೇ ಬೇಡ ಎಂದು ಕೌಟುಂಬಿಕ ನ್ಯಾಯಾಲಯದ ಮೊರೆಹೋದ.

    ಇಬ್ಬರೂ ಜೊತೆಯಲ್ಲಿರಲು ಕೋರ್ಟ್ ಅವಕಾಶ ಕೊಟ್ಟಿದ್ದ ಸಮಯದಲ್ಲಿಯೇ ಅರಕಲಗೂಡಿನ ಮಲ್ಲಿಪಟ್ಟಣದ ಕಲಾ ಎಂಬಾಕೆಯನ್ನು ಮದುವೆಯಾಗಿ, 10 ತಿಂಗಳು ಸಂಸಾರ ಮಾಡಿ ಆಕೆಗೂ ಕೊಡಬಾರದ ಟಾರ್ಚರ್ ಕೊಟ್ಟಿದ್ದಾನೆ ಎನ್ನಲಾಗಿದೆ.

    ಕಳೆದ ನವೆಂಬರ್ 15 ರಂದು ಮತ್ತೊಂದು ಯುವತಿಯನ್ನು ಮದುವೆಯಾಗಿದ್ದ. ಈಗ ಬೀಗರೂಟ ಎಂದು ಸಂಬಂಧಿಕರನ್ನೆಲ್ಲಾ ಕರೆದು ಮಾಂಸದೂಟ ಮಾಡಿಸಿದ್ದ. ಈ ಬಗ್ಗೆ ಮೊದಲನೇ ಹೆಂಡತಿಗೆ ವಿಷಯ ತಿಳಿದು ಪ್ರಶ್ನೆ ಮಾಡಿದ್ದಕ್ಕೆ ಬೀಗರ ಔತಣಕೂಟದಲ್ಲಿಯೇ ಹೆಂಡತಿ, ನಾದಿನಿ ಮತ್ತು ಆಕೆಯ ಪತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೆ ಪೂಲೀಸರ ಮೇಲೆಯೂ ಹಲ್ಲೆ ಮಾಡಲು ಮುಂಗಿದ್ದು, ಭಂಡ ವರನಿಗೆ ತಕ್ಕ ಶಾಸ್ತಿ ಮಾಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಗೊರೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

    https://www.youtube.com/watch?v=6EGFDTHsH_8

    https://www.youtube.com/watch?v=xpZ4RApmREQ