Tag: ಟಗ್

  • ನೌಕಾದಳದಿಂದ ಸಮುದ್ರದ ಮಧ್ಯೆ ಸಿಲುಕಿದ್ದ 9 ಮಂದಿಯ ರಕ್ಷಣೆ

    ನೌಕಾದಳದಿಂದ ಸಮುದ್ರದ ಮಧ್ಯೆ ಸಿಲುಕಿದ್ದ 9 ಮಂದಿಯ ರಕ್ಷಣೆ

    ಮಂಗಳೂರು: ಅರಬ್ಬೀ ಸಮುದ್ರದಲ್ಲಿ ಟಗ್ ನಲ್ಲಿ ಸಿಲುಕಿ ಹಾಕಿಕೊಂಡಿದ್ದ 9 ಜನರನ್ನು ರಕ್ಷಿಸಿ ಸುರಕ್ಷಿತವಾಗಿ ದಡ ಸೇರಿಸಲಾಗಿದೆ.

    ಕಳೆದ ಎರಡು ದಿನದ ಹಿಂದೆ ಎಂಆರ್ ಪಿಎಲ್ ಗೆ ಸೇರಿದ್ದ ಸಮುದ್ರದಲ್ಲಿ ಅಂಡರ್ ಗ್ರೌಂಡ್ ಪೈಪ್ ಜೋಡಿಸುವ ಕೋರಮಂಡಲ ಸಪೋರ್ಡರ್-9 ಎಂಬ ಟಗ್ ಸಮುದ್ರ ಮಧ್ಯೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿತ್ತು.

    9 ಮಂದಿಯ ರಕ್ಷಣೆಗೆ ಮುಂದಾದ ಜಿಲ್ಲಾಡಳಿತ ಇಂಡಿಯನ್ ಕೋಸ್ಟ್ ಗಾರ್ಡ್, ನೌಕಾದಳದ ಜಂಟಿ ಕಾರ್ಯಾಚರಣೆಯ ಮೂಲಕ ಇಂದು ಹೆಲಿಕಾಪ್ಟರ್ ಹಾಗೂ ಸ್ಪೀಡ್ ಬೋಟ್ ಮೂಲಕ ರಕ್ಷಣೆ ಮಾಡಲಾಗಿದೆ.ನಾಲ್ವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಪಣಂಬೂರು ಎನ್ ಎಂಪಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನೀಡಲಾಗಿದೆ.

    ಇನ್ನುಳಿದ 5 ಮಂದಿಯನ್ನು ಸ್ಪೀಡ್ ಮೂಲಕ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂದಾಯ ಸಚಿವ ಆರ್.ಅಶೋಕ್ ರಕ್ಷಿಸಲ್ಪಟ್ಟ ಟಗ್ ಸಿಬ್ಬಂದಿ ಜೊತೆ ಮಂಗಳೂರಿನ ಎನ್‍ಎಂಪಿಟಿ ಬಂದರ್ ನಲ್ಲಿ ಮಾತುಕತೆ ನಡೆಸಿದ್ರು. ದುರಂತದ ಮಾಹಿತಿ ಸಂಗ್ರಹಿಸಿ ಬಳಿಕ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ರು.

  • ಎಂಆರ್‌ಪಿಎಲ್ ದೋಣಿ ದುರಂತ – ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ ಕರಾವಳಿ ಕಾವಲುಪಡೆ

    ಎಂಆರ್‌ಪಿಎಲ್ ದೋಣಿ ದುರಂತ – ರಕ್ಷಣಾ ಕಾರ್ಯಾಚರಣೆಗೆ ಕೈಜೋಡಿಸಿದ ಕರಾವಳಿ ಕಾವಲುಪಡೆ

    ಉಡುಪಿ: ಮಂಗಳೂರಿನ ಎಂಆರ್‌ಪಿಎಲ್ ಕಂಪನಿಯ ಟಗ್ ದೋಣಿ ಮುಳುಗಿರುವ ಘಟನೆಗೆ ಸಂಬಂಧಿಸಿದಂತೆ 9 ಜನರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಕರಾವಳಿ ಕಾವಲುಪಡೆ ಪೊಲೀಸರ ತಂಡ ಕೂಡಾ ರಕ್ಷಣಾ ಕೆಲಸದಲ್ಲಿ ಕೈಜೋಡಿಸಿದ್ದಾರೆ.

    ಬೋಟ್ ನಲ್ಲಿವರ ಪೈಕಿ ಇಬ್ಬರು ಈಜಿ ದಡ ಸೇರಿದ್ದಾರೆ. ಸತತ 8 ಗಂಟೆಯಿಂದ ಟ್ಯೂಬ್ ನಲ್ಲಿ ಈಜಿ ಜೀವ ಉಳಿಸಿಕೊಂಡ ಇಬ್ರು ಉಡುಪಿಯ ಪಡುಕೆರೆ ಮಟ್ಟು ಕೊಪ್ಲಕ್ಕೆ ಬಂದಿದ್ದಾರೆ. ಬದುಕುಳಿದವರನ್ನು ಮೊಮಿರುಲ್ ಮುಲ್ಲಾ, ಕರೀಮುಲ್ಲಾ ಶೇಕ್ ಎಂದು ಗುರುತಿಸಲಾಗಿದೆ.

    ಈ ನಡುವೆ ಮಗುಚಿಬಿದ್ದ ಟಗ್ ಬೋಟಿನಲ್ಲಿದ್ದ ಒಬ್ಬ ವ್ಯಕ್ತಿಯದ್ದು ಎನ್ನಲಾದ ಶವಪತ್ತೆಯಾಗಿದೆ. ಹೇಮಚಂದ್ರ ಜಾ ಎಂಬಾತನ ಶವ ಪಡುಬಿದ್ರೆಯಲ್ಲಿ ಸಿಕ್ಕಿದೆ. ಒಟ್ಟು ಒಂಬತ್ತು ಜನರು ಕಾರ್ಯನಿರ್ವಹಿಸುತ್ತಿದ್ದರು ಎಂಬ ಮಾಹಿತಿಯಿದೆ. ದಡ ಸೇರಿದ ಇಬ್ಬರಿಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಉಡುಪಿಯ ಪಡುತೋನ್ಸೆ ಬೆಂಗ್ರೆ ಬಳಿ ದಡಕ್ಕೆ ಯುವಕ ಬಂದು ತಲುಪಿದ್ದಾನೆ. ನಸೀಮ್ ಟ್ಯೂಬ್ ಸಹಾಯದಿಂದ ಸತತವಾಗಿ ಈಜಿ ದಡಕ್ಕೆ ಬದುಕಿ ಬಂದವನು. ಹರಿಯಾಣ ಮೂಲದ ನಸೀಮ್ ಮಂಗಳೂರು ಎಂಆರ್ ಪಿಎಲ್ ಕಂಪನಿಯ ನೌಕರನಾಗಿದ್ದು, ಮಂಗಳೂರಿನಲ್ಲಿ ದೋಣಿ ಮಗುಚಿ ಬಿದ್ದ ಸಂದರ್ಭ ನೀರುಪಾಲಾಗಿದ್ದರು.

    ಸದ್ಯ ಬೋಟ್‍ನಲ್ಲಿ ಸುರಕ್ಷಿತವಾಗಿರುವ 9 ಮಂದಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲು ಕೋಸ್ಟ್ ಗಾರ್ಡ್ ಸಿಬ್ಬಂದಿ ಪ್ರಯತ್ನ ಮಾಡುತ್ತಿದೆ. ಸೆಲ್ಫಿ ವಿಡಿಯೋ ಮಾಡಿ ರಕ್ಷಣೆಗೆ ಮೊರೆ ಹೋಗಿದ್ದಾರೆ. ಕರಾವಳಿ ಕಾವಲುಪಡೆ ಪೊಲೀಸರಿಗೆ ವೀಡಿಯೋ ರವಾನೆ ಮಾಡಲಾಗಿದೆ. ರಕ್ಷಣಾ ಕಾರ್ಯಚರಣೆ ಕಡಲ ಅಲೆಗಳ ಅಬ್ಬರ ಅಡ್ಡಿಯಾಗಿದೆ.

    ಸಮುದ್ರ ಅಬ್ಬರ ಕಡಿಮೆಯಾದ ಬಳಿಕ ರಕ್ಷಣಾ ಕಾರ್ಯಚರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಸ್ಥಳಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್, ಜಿಲ್ಲಾಧಿಕಾರಿ ಜಿ ಜಗದೀಶ್, ಎಸ್‍ಪಿ ಎಸ್ ವಿಷ್ಣುವರ್ಧನ್ ಭೇಟಿ ನೀಡಿದ್ದಾರೆ.