Tag: ಜ್ವಾಲಾಮುಖಿ

  • ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ – 11 ಸಾವು, 12 ಪರ್ವತಾರೋಹಿಗಳು ನಾಪತ್ತೆ

    ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ – 11 ಸಾವು, 12 ಪರ್ವತಾರೋಹಿಗಳು ನಾಪತ್ತೆ

    ಜಕಾರ್ತ: ಇಂಡೋನೇಷ್ಯಾದ (Indonesia) ಮೌಂಟ್ ಮರಾಪಿಯಲ್ಲಿ (Mount Marapi) ಜ್ವಾಲಾಮುಖಿ (Volcano) ಸ್ಫೋಟಗೊಂಡಿದ್ದು, ಈ ವೇಳೆ 11 ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. 12ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

    ಭಾನುವಾರ ಪಶ್ಚಿಮ ಸುಮಾತ್ರಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಈ ಸಂದರ್ಭ ಅಲ್ಲಿ 75 ಜನರು ಇದ್ದರು. ಜ್ವಾಲಾಮುಖಿ ಸ್ಫೋಟದ ಬಳಿಕ ರಕ್ಷಣಾ ತಂಡಗಳು ಧಾವಿಸಿದ್ದು, ಅದರಲ್ಲಿ 14 ಜನರನ್ನು ಸುರಕ್ಷಿತವಾಗಿ ಕರೆತಂದಿದ್ದೇವೆ. ಮೊದಲು ನಾಪತ್ತೆಯಾಗಿದ್ದವರಲ್ಲಿ ಮೂವರನ್ನು ಜೀವಂತವಾಗಿ ಪತ್ತೆ ಮಾಡಿದ್ದೇವೆ. 11 ಜನರು ಶವವಾಗಿ ಪತ್ತೆಯಾಗಿದ್ದಾರೆ. ಇನ್ನೂ ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಲಾಗುತ್ತಿದೆ ಎಂದು ರಕ್ಷಣಾ ಏಜೆನ್ಸಿಯ ಮುಖ್ಯಸ್ಥ ಅಬ್ದುಲ್ ಮಲಿಕ್ ತಿಳಿಸಿದ್ದಾರೆ.

    ಭಾನುವಾರ ಸಂಭವಿಸಿದ ಜ್ವಾಲಾಮುಖಿ ಸ್ಫೋಟದ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಜ್ವಾಲಾಮುಖಿಯಿಂದಾದ ದಟ್ಟವಾದ ಹೊಗೆ ಆಕಾಶದಲ್ಲಿ ಹರಡಿರುವುದು, ರಸ್ತೆ, ವಾಹನಗಳು ಜ್ವಾಲಾಮುಖಿಯ ಬೂದಿಯಿಂದ ಆವೃತವಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: ತೆಲಂಗಾಣದಲ್ಲಿ IAFನ ತರಬೇತಿ ವಿಮಾನ ಪತನ – ಇಬ್ಬರು ಪೈಲಟ್‌ಗಳ ದುರ್ಮರಣ

    ಇಂಡೋನೇಷ್ಯಾ ಪೆಸಿಫಿಕ್ ಸಾಗರದ ರಿಂಗ್ ಆಫ್ ಫೈರ್‌ನ ಅಂಚಿನಲ್ಲಿ ಬರುತ್ತದೆ. ದೇಶದ ಜ್ವಾಲಾಮುಖಿ ಏಜೆನ್ಸಿಯ ಪ್ರಕಾರ ಮೌಂಟ್ ಮರಾಪಿ ಸುಮಾರು 2,891 ಅಡಿ ಎತ್ತರದಲ್ಲಿದ್ದು, ಇದೇ ರೀತಿಯ 127 ಸಕ್ರಿಯ ಜ್ವಾಲಾಮುಖಿಗಳು ಈ ಪ್ರದೇಶದಲ್ಲಿದೆ. ಇದನ್ನೂ ಓದಿ: ಕೂಟಿಯಾಲ ಹೊಳೆಯಲ್ಲಿ ತಾಯಿ, ಇಬ್ಬರು ಹೆಣ್ಣು ಮಕ್ಕಳ ಶವ ಪತ್ತೆ

  • ಐಸ್‍ಲ್ಯಾಂಡ್‍ನಲ್ಲಿ 800 ಬಾರಿ ಕಂಪಿಸಿದ ಭೂಮಿ – ತುರ್ತು ಪರಿಸ್ಥಿತಿ ಘೋಷಣೆ

    ಐಸ್‍ಲ್ಯಾಂಡ್‍ನಲ್ಲಿ 800 ಬಾರಿ ಕಂಪಿಸಿದ ಭೂಮಿ – ತುರ್ತು ಪರಿಸ್ಥಿತಿ ಘೋಷಣೆ

    ಐಸ್‍ಲ್ಯಾಂಡ್: ಸುಮಾರು 800 ಬಾರಿ ಭೂಮಿ ಕಂಪಿಸಿದ್ದರಿಂದ (Earthquake) ಐಸ್‍ಲ್ಯಾಂಡ್‍ನಲ್ಲಿ (Iceland) ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಪರಿಸ್ಥಿತಿ (Emergency) ಘೋಷಿಸಲಾಗಿದೆ.

    ಶುಕ್ರವಾರ ನಸುಕಿನ ಜಾವ 2 ಗಂಟೆಗೆ ಸರಣಿ ಭೂಕಂಪಗಳಾಗಿದ್ದು, ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ. ಇದು ಜ್ವಾಲಾಮುಖಿ ಸ್ಫೋಟಕ್ಕೆ ಕಾರಣವಾಗಬಹುದು. ಇದು ಮುಂದುವರೆದರೆ ಹಲವಾರು ಸಮಸ್ಯೆಗಳು ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಅಕ್ಟೋಬರ್ ಅಂತ್ಯದಿಂದ ಇಲ್ಲಿಯವರೆಗೂ ದ್ವೀಪದಲ್ಲಿ ಸುಮಾರು 24,000 ಭೂಕಂಪಗಳು ದಾಖಲಾಗಿವೆ. ಇದನ್ನೂ ಓದಿ: ಇಂದು ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವ – ಏಕಕಾಲದಲ್ಲಿ ಬೆಳಗಲಿದೆ 24 ಲಕ್ಷ ಹಣತೆ

    ಐಸ್‍ಲ್ಯಾಂಡ್‍ನ ಅತಿದೊಡ್ಡ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಬ್ಲೂ ಲಗೂನ್ ಜಿಯೋಥರ್ಮಲ್ ಸ್ಪಾ ಜ್ವಾಲಾಮುಖಿ ಸಾಧ್ಯತೆಯಿಂದಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲದೇ ಜನರ ರಕ್ಷಣೆ ಸಲುವಾಗಿ ಭೂಕಂಪನ ಸ್ಥಳಗಳಲ್ಲಿ ಸೇನಾ ಹಡಗುಗಳು ಕಾರ್ಯ ನಿರ್ವಹಿಸುತ್ತಿವೆ.

    ಪ್ರವಾಸಿ ತಾಣಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಲವೆಡೆ ನಿರಾಶ್ರಿತರ ತಾಣಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ.

    2010ರ ಏಪ್ರಿಲ್‍ನಲ್ಲಿ ಐಸ್‍ಲ್ಯಾಂಡ್‍ನ ದಕ್ಷಿಣ ಪ್ರದೇಶದಲ್ಲಿ ಬೃಹತ್ ಜ್ವಾಲಾಮುಖಿ ಸ್ಫೋಟದಿಂದಾಗಿ ವಿಶ್ವದಾದ್ಯಂತ ಸುಮಾರು 1 ಲಕ್ಷ ವಿಮಾನಗಳು ರದ್ದಾಗಿದ್ದವು. ಇದರೀಮದಾಗಿ ವಿಶ್ವದಲ್ಲಿ ಕೋಟಿಗೂ ಹೆಚ್ಚು ಜನರು ಪರದಾಡಿದ್ದರು. ಇದನ್ನೂ ಓದಿ: ವಿಜಯೇಂದ್ರ ಆಯ್ಕೆ ‘ಹೊಸ ಬಾಟಲಿಗೆ ಹಳೆ ವೈನ್’ ಹಾಕಿದಂತೆ: ಡಿ.ಸುಧಾಕರ್

  • ಯುವ ರಾಜ್‌ಕುಮಾರ್‌ ಸಿನಿಮಾದ ಟೈಟಲ್: ‘ಜ್ವಾಲಾಮುಖಿ’ನಾ? ಅಥವಾ ‘ಅಶ್ವಮೇಧ’ನಾ?

    ಯುವ ರಾಜ್‌ಕುಮಾರ್‌ ಸಿನಿಮಾದ ಟೈಟಲ್: ‘ಜ್ವಾಲಾಮುಖಿ’ನಾ? ಅಥವಾ ‘ಅಶ್ವಮೇಧ’ನಾ?

    ಇಂದು ಸಂಜೆ 6.55ಕ್ಕೆ ಯುವ ರಾಜ್‌ಕುಮಾರ್‌ (Yuva Rajkumar) ನಟನೆಯ ಚೊಚ್ಚಲು ಸಿನಿಮಾದ ಟೈಟಲ್ ಟೀಸರ್ ಅನಾವರಣಗೊಳ್ಳುತ್ತಿದೆ. ಟೀಸರ್ ಬಿಡುಗಡೆ ಕ್ಷಣಗಣನೆಯ ಹೊತ್ತಿನಲ್ಲಿ ಚಿತ್ರದ ಟೈಟಲ್ (Title) ಏನಿರಬಹುದು ಎನ್ನುವ ಚರ್ಚೆ ಶುರುವಾಗಿದೆ. ಜೊತೆಗೆ ಎರಡು ಶೀರ್ಷಿಕೆಗಳು ಕೂಡ ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ. ಡಾ.ರಾಜ್‌ಕುಮಾರ್‌ ನಟನೆಯ ‘ಅಶ್ವಮೇಧ’ (Ashwamedha) ಅಥವಾ ‘ಜ್ವಾಲಾಮುಖಿ’ (Jwalamukhi) ಚಿತ್ರಗಳ ಹೆಸರನ್ನೇ ಯುವ  ಸಿನಿಮಾಗೆ ಇಡಲಾಗಿದೆ ಎಂದು ಕೇಳಿ ಬರುತ್ತಿದೆ.

    ಡಾ.ರಾಜ್ ಕುಟುಂಬದ ಅಭಿಮಾನಿಗಳು ಕೂಡ ಈ ಎರಡೂ ಹೆಸರಿನ ಪೋಸ್ಟರ್ ಗಳನ್ನು ತಮ್ಮದೇ ಆದ ರೀತಿಯಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಎರಡು ಶೀರ್ಷಿಕೆಗಳಲ್ಲಿ ಒಂದಂತೂ ಪಕ್ಕಾ ಎಂದೇ ಹೇಳಲಾಗುತ್ತಿದೆ. ಅಲ್ಲದೇ, ಜ್ವಾಲಮುಖಿಯೇ ಫಿಕ್ಸ್ ಆಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಸಹಜವಾಗಿಯೇ ಟೈಟಲ್ ಬಗ್ಗೆ ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಯಾವ ಟೈಟಲ್ ಅನ್ನು ಚಿತ್ರತಂಡ ಘೋಷಿಸಲಿದೆ ಎಂದು ಕಾದು ನೋಡಬೇಕಿದೆ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಮದುವೆ ಬಗ್ಗೆ ಇಲ್ಲಿದೆ ಬಿಗ್ ಅಪ್‌ಡೇಟ್

    ಈ ಹಿಂದೆ ಸಿನಿಮಾದ ಟೀಸರ್ ಮತ್ತು ಟೈಟಲ್ ಲಾಂಚ್ ಅನ್ನು ಪುನೀತ್ ರಾಜ್‌ಕುಮಾರ್‌ ಅವರ ಹುಟ್ಟು ಹಬ್ಬದಂದು ರಿಲೀಸ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಅಪ್ಪು ಹುಟ್ಟುಹಬ್ಬ 14 ದಿನ ಬಾಕಿ ಇರುವಾಗಲೇ ಇಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಕಾರಣ ಅಂದು ಪುನೀತ್ ಪತ್ನಿ ಅಶ್ವಿನಿ ಅವರು ಲಭ್ಯವಿಲ್ಲ ಎನ್ನುವ ಮಾಹಿತಿಯೂ ಹರಿದಾಡುತ್ತಿದೆ. ಈ ಕಾರಣದಿಂದಾಗಿ ಶುಕ್ರವಾರ ಸಂಜೆ ಮುಹೂರ್ತ, ಟೈಟಲ್ ಮತ್ತು ಟೀಸರ್ ಲಾಂಚ್ ಮಾಡಲು ಸಂಸ್ಥೆ ಮುಂದೆ ಬಂದಿದೆಯಂತೆ.

    ಈ ಸಿನಿಮಾ ಮೂಲಕ ಪುನೀತ್ ರಾಜ್‌ಕುಮಾರ್‌ ಅವರ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿರುವ ಯುವರಾಜ್ ಕುಮಾರ್ ಅಧಿಕೃತವಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ಮೂಡಿ ಬರಲಿದೆ.  ಪುನೀತ್  ಜೊತೆ ಒಳ್ಳೆಯ ಬಾಂಧವ್ಯ ಹಾಗೂ ಅವರ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಸಂತೋಷ್ ಆನಂದ್ ರಾಮ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದರೆ, ನುರಿತ ತಂತ್ರಜ್ಞರ ತಂಡವೇ ಸಿನಿಮಾದಲ್ಲಿದೆ.

    ಅಂದುಕೊಂಡಂತೆ ಆಗಿದ್ದರೆ ಯುವ ಈ ಹಿಂದೆಯೇ ಲಾಂಚ್ ಆಗಬೇಕಿತ್ತು. ಯುವಗಾಗಿಯೇ ‘ಯುವ ರಣಧೀರ ಕಂಠೀರವ’ ಸಿನಿಮಾ ಮಾಡಲು ಹೊರಟಿದ್ದರು ಜಾಕಿ ತಿಮ್ಮಯ್ಯ. ಸಾಕಷ್ಟು ಹಣ ಖರ್ಚು ಮಾಡಿ ಟೀಸರ್ ಕೂಡ ರಿಲೀಸ್ ಮಾಡಿದ್ದರು. ಆದರೆ, ಆ ಸಿನಿಮಾ ಮುಂದುವರೆಯಲಿಲ್ಲ. ಈ ಕಾರಣದಿಂದಾಗಿ ಸಂತೋಷ್ ಆನಂದ್ ರಾವ್ ಅವರ ಚಿತ್ರವೇ ಯುವ ನಟನೆಯ ಚೊಚ್ಚಲು ಸಿನಿಮಾವಾಗಲಿದೆ.

  • ಸೂರ್ಯನ ಮೇಲ್ಮೈ ಸ್ಫೋಟ – ಭೂಮಿಗೆ ಕಾದಿದೆಯಾ ಅಪಾಯ?

    ಸೂರ್ಯನ ಮೇಲ್ಮೈ ಸ್ಫೋಟ – ಭೂಮಿಗೆ ಕಾದಿದೆಯಾ ಅಪಾಯ?

    ನವದೆಹಲಿ: ನಮ್ಮ ಸೌರಮಂಡಲದ ಪ್ರಮುಖ ನಕ್ಷತ್ರವಾಗಿರುವ ಸೂರ್ಯನ ಈಶಾನ್ಯ ಪಾರ್ಶ್ವದಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.

    https://twitter.com/JonathanBrisby1/status/1554271963836735491

    ಯೂನಿವರ್ಸಲ್ ಟೈಮ್ ಕೊಆರ್ಡಿನೇಷನ್’ (UTC) ಪ್ರಕಾರ, ಜು. 31ರ 23:09 ಗಂಟೆಗೆ (ಭಾರತೀಯ ಕಾಲಮಾನದ ಆ.1ರ ಬೆಳಗ್ಗಿನ ಜಾವ 4:30ರ ಸುಮಾರಿಗೆ) ಈ ಸ್ಫೋಟ (C9.3 ವರ್ಗದ ಜ್ವಾಲೆ ಎಂದು ಹೆಸರಿಸಲಾಗಿದೆ) ಸಂಭವಿಸಿದ್ದು, ಅದನ್ನು ನಾಸಾದ `ಸೋಲಾರ್ ಡೈನಮಿಕ್ಸ್ ಅಬ್ಸರ್ವೇಟರಿ’ (SDO) ಸೆರೆಹಿಡಿದಿದೆ. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥ ಝವಾಹಿರಿ ಹತ್ಯೆ- ಮೋಸ್ಟ್ ವಾಂಟೆಡ್ ಉಗ್ರನ ಮೇಲೆ ಡ್ರೋಣ್ ಸ್ಟ್ರೈಕ್‌

    ಭೂಮಿಯ ಕಡೆಯಿಂದ ಸೆರೆಹಿಡಿದಿರುವ ಈ ವೀಡಿಯೋದಲ್ಲಿ ಸ್ಫೋಟದ ಕೆನ್ನಾಲಿಗೆಗಳು ಸೂರ್ಯನ ಮೇಲ್ಮೈ ನಿಂದ ಹೊರಚಾಚಿರುವ ದೃಶ್ಯಗಳಿದ್ದು, ಅವು ಅಸ್ಪಷ್ಟವಾಗಿವೆ. ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದೂ ಇನ್ನೂ ತಿಳಿದುಬಂದಿಲ್ಲ. ಆದರೆ ಸ್ಫೋಟದಿಂದ ಹೊರಬಿದ್ದ ಕಿಡಿಗಳು ಬಾಹ್ಯಾಕಾಶದಲ್ಲಿ ಹಾರಿ ಹೋಗುತ್ತಿರುವುದನ್ನು ಅಬ್ಸರ್ವೇಟರಿ ಸೆರೆಹಿಡಿದಿದೆ ಎಂದು ನಾಸಾ ಹೇಳಿದೆ. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ವೈಟ್‍ಲಿಫ್ಟರ್ ‘ಅಚಿಂತಾ ಶೆಯುಲಿ’ – ಮೋದಿಯಿಂದ ಅಭಿನಂದನೆ

    ಇತ್ತೀಚೆಗೆ ಸೂರ್ಯನ ಜ್ವಾಲೆಗಳು ಹೆಚ್ಚೆಚ್ಚು ಉದ್ದುದ್ದವಾಗಿ ಕಾಣಿಸಿಕೊಳ್ಳುತ್ತಿದೆ. ಕಳೆದ 11 ವರ್ಷಗಳಿಂದ ಹೀಗಾಗುತ್ತಿದ್ದು, ಈಗ ಅದರ ಮೇಲ್ಮೈ ಮೇಲೆ ಸ್ಫೋಟವಾಗಿರುವುದು ಅಧ್ಯಯನದ ಬೇರೊಂದು ಆಯಾಮವನ್ನು ವಿಜ್ಞಾನಿಗಳ ಮುಂದೆ ತೆರೆದಿಟ್ಟಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.

    Live Tv
    [brid partner=56869869 player=32851 video=960834 autoplay=true]

  • ಹೊಳೆಯಂತೆ ಹರಿದ ಲಾವಾರಸ – ಡ್ರೋನ್‍ನಲ್ಲಿ ಜ್ವಾಲಾಮುಖಿ ಸ್ಫೋಟ ಸೆರೆ

    ಹೊಳೆಯಂತೆ ಹರಿದ ಲಾವಾರಸ – ಡ್ರೋನ್‍ನಲ್ಲಿ ಜ್ವಾಲಾಮುಖಿ ಸ್ಫೋಟ ಸೆರೆ

    ಫಾಗ್ರಾಡಾಲ್ಸ್: ಜ್ವಾಲಾಮುಖಿ ಸ್ಫೋಟದ ವೀಡಿಯೋದಲ್ಲಿ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಭೂಗರ್ಭದಿಂದ ಹೊರ ಬಂದ ಲಾವಾರಸ ಹೊಳೆಯಂತೆ ಹರಿದಿರೋ ಭಯಾನಕ ದೃಶ್ಯ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಆಂಥೋನಿ ಕ್ವಿಂಟನೋ ಫೋಟೋಗ್ರಾಫಿ ಹೆಸರಿನ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದ್ದು, 30 ಸಾವಿರಕ್ಕೂ ಅಧಿಕ ಬಾರಿ ರೀಟ್ವಿಟ್ ಆಗಿದೆ. ಈ ಜ್ವಾಲಾಮುಖಿ ನೋಡಲು ಸ್ಥಳೀಯರು ಸೇರಿದಂತೆ ದೂರ ದೂರಿಂದ ಬಂದಂತಹ ಛಾಯಾಗ್ರಾಹಕರ ಸ್ಫೋಟದ ಸಮೀಪ ತೆರಳಿ, ಅದರ ರೌದ್ರತೆಯನ್ನ ಕಂಡು ಹಿಂದಿರುಗಿದ್ದಾರೆ. ಡ್ರೋನ್ ನಿಂದ ಈ ಎಲ್ಲ ಲಾವಾರಸ ಹರಿಯೋದನ್ನ ಸೆರೆ ಹಿಡಿಯಲಾಗಿದೆ.

    ಫಾಗ್ರಾಡಾಲ್ಸ್ ಫಾಲ್ ಐಲ್ಯಾಂಡ್ ಪರ್ವತದ ಮೇಲಿರುವ ಈ ಜ್ವಾಲಾಮುಖಿ ಸುಮಾರು ಆರು ಸಾವಿರ ವರ್ಷಗಳಿಂದ ಶಾಂತವಾಗಿತ್ತು. ಸ್ಫೋಟಕ್ಕೂ ಮುನ್ನ ಜ್ವಾಲಾಮುಖಿಯ ಪ್ರಖರತೆ ಮಿಂಚು ರೇಕ್ ಜಾವಿಕ್ ನಿಂದ ಗೋಚರಿಸುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಜ್ವಾಲಾಮುಖಿ ಸ್ಫೋಟವಾದ ಸ್ಥಳದಿಂದ ಸುಮಾರು 30 ರಿಂದ 32 ಕಿಲೋ ಮೀಟರ್ ವರೆಗೆ ಇದರ ಶಾಖವಿತ್ತು ಎಂದು ವರದಿಯಾಗಿದೆ.

    https://twitter.com/AnthonyQuintano/status/1373787472493170695

  • ಏಕಕಾಲಕ್ಕೆ ಎರಡೆರಡು ಜ್ವಾಲಾಮುಖಿ ಸ್ಫೋಟ- ಹೀಟ್ ವೇವ್ ವಿಜ್ಞಾನಿಗಳು ಆತಂಕ

    ಏಕಕಾಲಕ್ಕೆ ಎರಡೆರಡು ಜ್ವಾಲಾಮುಖಿ ಸ್ಫೋಟ- ಹೀಟ್ ವೇವ್ ವಿಜ್ಞಾನಿಗಳು ಆತಂಕ

    ಬೆಂಗಳೂರು: ಫೆಬ್ರವರಿ ತಿಂಗಳಿನಿಂದ ಜನರ ಜೀವಕ್ಕೆ ಅಪಾಯವೆಸಗುವ “ದಿ ಮೋಸ್ಟ್ ಡೇಂಜರಸ್ ಸೂರ್ಯ ಶಿಕಾರಿ” ಎಲ್ಲರನ್ನೂ ಕಾಡಲಿದೆ. ಏಕೆಂದರೆ ಎರಡೆರಡು ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಹೀಟ್ ವೇವ್ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

    ಜನವರಿ ಅಂತ್ಯದ ಬಿಸಿಲು ಭರ್ತಿ 150 ವರ್ಷದ ಇತಿಹಾಸವನ್ನು ಪುಡಿಗಟ್ಟಿತ್ತು. ಜನವರಿಯ ಬಿಸಿಲು 150 ವರ್ಷದಲ್ಲಿಯೇ ದಾಖಲೆಯ ಬಿಸಿಲು. ಇನ್ನು ಸಣ್ಣಗೆ ಚಳಿ ಇರಬೇಕಾಗಿದ್ದ ಫೆಬ್ರವರಿಯಲ್ಲಿ ಸೂರ್ಯನ ಬಿಸಿಲು ನೆತ್ತಿ ಸುಡುತ್ತಿದೆ. ಜನ ಈಗಲೇ ಬೆವರು ಒರೆಕೊಳ್ಳುವಂತಾಗಿದೆ.

    ಈ ಬಾರಿ ನಿಮಗೆ ಸೂರ್ಯ ನರಕ ದರ್ಶನ ಮಾಡಿಸಲಿದ್ದಾನೆ ಎನ್ನಲಾಗಿದೆ. ಹಾಗಂತ ಬೇಸಿಗೆ ಯುದ್ಧಕ್ಕೂ ಬಿಸಿಲ ಬೇಗೆ ಇರಲ್ಲ. ಬದಲಾಗಿ ಒಂದೊಂದು ದಿನ ಒಂದೊಂದು ರೀತಿಯ ವಾತಾವರಣ ಕಂಡು ಬರಲಿದೆ ಎಂದು ಹೇಳಲಾಗುತ್ತಿದ್ದು, ಇದು ವಿಜ್ಞಾನಿಗಳನ್ನೇ ಆತಂಕಕ್ಕೀಡು ಮಾಡಿದೆ. ಒಂದು ದಿನ ತಡೆದುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಹ ಬಿಸಿಲು ಬೆಂಗಳೂರು ಸೇರಿದಂತೆ ಇಡೀ ಕರುನಾಡನ್ನು ಕಾಡಲಿದೆ ಎಂದು ಭೂಗರ್ಭ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.

    ಪಿಲಿಫೈನ್ಸ್, ನ್ಯೂಜಿಲ್ಯಾಂಡ್, ಸುಮಾತ್ರ ಹೀಗೆ ನಾನಾ ಕಡೆ ಈ ಬಾರಿ ಏಕಕಾಲಕ್ಕೆ ಎರಡೆರಡು ಜ್ವಾಲಾಮುಖಿ ಸ್ಫೋಟವಾಗುತ್ತಿದೆ. ಈ ಸ್ಫೋಟದ ತೀವ್ರತೆಯ ಪರಿಣಾಮ ಅದ್ಯಾವ ಪರಿ ಇರುತ್ತೆ ಎಂದರೆ, ಇಡೀ ಬೇಸಿಗೆಯನ್ನು ಜನರ ಪಾಲಿಗೆ ನರಕವನ್ನಾಗಿಸುತ್ತೆ ಎನ್ನಲಾಗಿದೆ. ಒಂದಿನ ಅಸಾಧ್ಯ ಎನ್ನುವ ಬಿಸಿಲು, ಇನ್ನೊಂದು ದಿನ ಚಳಿ, ಇದರಿಂದ ಕಾಯಿಲೆಗಳು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

    ಅದರಲ್ಲೂ ಆಕಾಶ ಚುಂಬಿಸುವಂತೆ ಭೂಮಿಯಿಂದ ಜ್ವಾಲಾಮುಖಿ ಸ್ಫೋಟಗೊಳ್ಳುತ್ತಿರುವುದರಿಂದ ಕಪ್ಪು ಅನಿಲ ವಿಷ ಅನಿಲವನ್ನು ಹೊರ ಸೂಸುತ್ತಿದೆ. ಹೀಗಾಗಿ ರಣಭೀಕರ ಕಾಯಿಲೆಗಳು ಬರಲಿದೆ ಎಂದು ಭೂಗರ್ಭ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಬೆಂಗಳೂರಿಗೆ ಮೇಘ ಸ್ಫೋಟದ ಭೀತಿ – ಮೊನ್ನೆ ದಿಢೀರ್ ಮಳೆಯಾಗಿದ್ದು ಯಾಕೆ?

    ಬೆಂಗಳೂರಿಗೆ ಮೇಘ ಸ್ಫೋಟದ ಭೀತಿ – ಮೊನ್ನೆ ದಿಢೀರ್ ಮಳೆಯಾಗಿದ್ದು ಯಾಕೆ?

    ಬೆಂಗಳೂರು: ಮುನ್ಸೂಚನೆ ಇಲ್ಲದೇ ಈ ವರ್ಷ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

    ಕಳೆದ ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ದಿಢೀರ್ ಭಾರೀ ಮಳೆಯಾಗಿತ್ತು. ಈ ರೀತಿ ಮಳೆ ಯಾಕೆ ಆಗುತ್ತದೆ ಎಂದು ಪಬ್ಲಿಕ್ ಟಿವಿ ಭೂಗರ್ಭ ವಿಜ್ಞಾನಿ ಪ್ರಕಾಶ್ ಅವರನ್ನು ಸಂಪರ್ಕಿಸಿದಾಗ ಅವರು ಹಲವಾರು ವಿಚಾರಗಳನ್ನು ತಿಳಿಸಿದ್ದಾರೆ.

    ಸಾಧಾರಣವಾಗಿ ಮುಂಗಾರು ಪೂರ್ವ, ಮುಂಗಾರು ಮಳೆ ಆಗುವುದನ್ನು ನಾವು ಅಂದಾಜಿಸುತ್ತೇವೆ. ಆದರೆ ದಿಢೀರ್ ಆಗಿ ಮಳೆ ಆಗುವುದನ್ನು ಅಂದಾಜಿಸುವುದು ಬಹಳ ಕಷ್ಟ. ಮೊನ್ನೆ ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿಯೊಂದು ಸ್ಫೋಟಗೊಂಡ ಪರಿಣಾಮ ಮಳೆಯಾಗಿದೆ. ಸುಮತ್ರಾ ದ್ವೀಪದಲ್ಲಿರುವ ಸ್ಫೋಟಗೊಂಡ ಸಿನಾಬಂಗ್ ಜ್ವಾಲಾಮುಖಿಯ ದಟ್ಟ ಹೊಗೆ 15 ಸಾವಿರ ಅಡಿ ಎತ್ತರಕ್ಕೆ ಹೋಗಿತ್ತು. ಇದರಿಂದಾಗಿ ಬೆಂಗಳೂರು ನಗರದಲ್ಲಿ ದಿಢೀರ್ ಮಳೆಯಾಗಿದೆ ಎಂದು ವಿವರಿಸಿದರು.

    ಪ್ರಕೃತಿಯಲ್ಲಿ ಈ ರೀತಿ ವಿದ್ಯಮಾನಗಳು ನಡೆದಾಗ ಹವಾಮಾನ ಇಲಾಖೆಗೆ ಈ ಪ್ರದೇಶದಲ್ಲೇ ಮಳೆಯಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಸುಮತ್ರಾ ಭಾರತಕ್ಕೆ ಹತ್ತಿರದಲ್ಲಿರುವ ಕಾರಣ ಇಲ್ಲಿ ಮಳೆಯಾಗುತ್ತದೆ. ಬೆಂಗಳೂರು ಮಾತ್ರ ಅಲ್ಲ ಭಾರತದ ಯಾವುದೇ ಪ್ರದೇಶದಲ್ಲಿ ಮುನ್ಸೂಚನೆ ಇಲ್ಲದೇ ಭಾರೀ ಮಳೆಯಾಗಬಹುದು ಎಂದು ಅವರು ತಿಳಿಸಿದರು.

    ಭಾರತದಲ್ಲಿ ಜೂನ್ ತಿಂಗಳಿನ ಮೊದಲ ವಾರದಲ್ಲಿ ಸಾಧಾರಣವಾಗಿ ಮುಂಗಾರು ಮಳೆ ಆಗುತ್ತದೆ. ಆದರೆ ಈ ರೀತಿಯ ದಿಢೀರ್ ಮಳೆಯಿಂದಾಗಿ ಮುಂಗಾರು ಮಳೆಯ ಪಥವೇ ಬದಲಾಗಬಹುದು. ಈ ವರ್ಷ ಮತ್ತಷ್ಟು ದಿಢೀರ್ ಮಳೆಯಾಗಬಹುದು ಎಂದು ಪ್ರಕಾಶ್ ಅವರು ಮಾಹಿತಿಯನ್ನು ನೀಡಿದರು.

    ಇಂಡೋನೇಷ್ಯಾದಲ್ಲಿ ಸುಮಾರು 130 ಜ್ವಾಲಾಮುಖಿಗಳು ಕಾರ್ಯ ಪ್ರವೃತ್ತವಾಗಿದ್ದು. 400 ವರ್ಷಗಳಲ್ಲೇ ಮೊದಲ ಬಾರಿಗೆ 2010ರಲ್ಲಿ ಸಿನಾಬಂಗ್ ಪರ್ವತದಿಂದ ಜ್ವಾಲಾಮುಖಿ ಸ್ಫೋಟಿಸಿತ್ತು. ನಂತರ 2013ರಲ್ಲಿಯೂ ಜ್ವಾಲಾಮುಖಿ ಸ್ಫೋಟಿಸಿ, ಅಂದಿನಿಂದ ನಿರಂತರವಾಗಿ ಜ್ವಾಲಾಮುಖಿ ಸಕ್ರಿಯವಾಗಿದೆ. 2014ರಲ್ಲಿ ಉಂಟಾದ ಸ್ಫೋಟದಲ್ಲಿ 16 ಮಂದಿ ಸಾವನ್ನಪ್ಪಿದ್ದರೆ, 2016ರಲ್ಲಿ ಸಂಭವಿಸಿದ್ದ ಜ್ವಾಲಾಮುಖಿ ಸ್ಫೋಟದಲ್ಲಿ 7 ಮಂದಿ ಮೃತಪಟ್ಟಿದ್ದಾರೆ.

  • ಇಂಡೋನೇಷ್ಯಾ ಸುನಾಮಿಗೆ 222ಕ್ಕೂ ಹೆಚ್ಚು ಮಂದಿ ಬಲಿ

    ಇಂಡೋನೇಷ್ಯಾ ಸುನಾಮಿಗೆ 222ಕ್ಕೂ ಹೆಚ್ಚು ಮಂದಿ ಬಲಿ

    ಜಕಾರ್ತಾ: ಇಂಡೋನೇಷ್ಯಾದಲ್ಲಿ ಶನಿವಾರ ಸಂಭವಿಸಿದ ಸುನಾಮಿ ಆರ್ಭಟಕ್ಕೆ ಇಲ್ಲಿಯವರೆಗೆ ಸುಮಾರು 222 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.

    ಸುನಾಮಿ ಅಬ್ಬರಕ್ಕೆ ಇಂಡೋನೇಷ್ಯಾದ ಜಾವಾ ಹಾಗೂ ಸುಮಾತ್ರಾ ದ್ವೀಪಗಳು ತತ್ತರಿಸಿ ಹೋಗಿದೆ. ಶನಿವಾರದಂದು ಅನಾಖ್ ಕ್ರಾಕಟೋ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಸಮುದ್ರದಲ್ಲಿ ಬೃಹತ್ ಅಲೆಗಳು ನಿರ್ಮಾಣವಾಗಿ ಸುನಾಮಿ ಸಂಭವಿಸಿತ್ತು. ಈ ಪ್ರಕೃತಿ ಅವಘಡದಿಂದ ಸುಮಾರು 745 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇಲ್ಲಿಯವರೆಗೆ 222ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ನಾಪತ್ತೆ ಆಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

    ಸುನಾಮಿ ಸಂಭವಿಸಿದ ದ್ವೀಪಗಳಲ್ಲಿ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯ ಮುಂದುವರಿಸಿದೆ. ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದು, ಅಲ್ಲಿನ ಸರ್ಕಾರ ಅವರಿಗೆ ಆಶ್ರಯ ಕಲ್ಪಿಸುವ ಕಾರ್ಯದಲ್ಲಿದೆ.

    2004 ರ ಡಿಸೆಂಬರ್ ತಿಂಗಳಿನಲ್ಲಿ ಹಿಂದೂ ಮಹಾಸಾಗರದಲ್ಲಿ ಸಂಭವಿಸಿದ ಸುನಾಮಿ ಹೊಡೆತಕ್ಕೆ 13 ರಾಷ್ಟ್ರಗಳ ಸುಮಾರು 2.27 ಲಕ್ಷ ಜನರು ಮೃತಪಟ್ಟಿದ್ದರು. ಅದರಲ್ಲಿ 1.20 ಲಕ್ಷ ಮಂದಿ ಇಂಡೋನೇಷ್ಯಾದವರಾಗಿದ್ದರು. 2018ರ ಸೆಪ್ಟೆಂಬರ್ ನಲ್ಲಿ ಇಂಡೋನೇಷ್ಯಾದಲ್ಲಿ ಅಪ್ಪಳಿಸಿದ ಸುನಾಮಿಗೆ 2,500 ಮಂದಿ ಬಲಿಯಾಗಿದ್ದರು.

    ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸುನಾಮಿಯಿಂದ ತತ್ತರಿಸಿರುವ ಇಂಡೋನೇಷ್ಯಾಕ್ಕೆ ನೆರೆಯ ರಾಷ್ಟ್ರಗಳಾದ ಮಲೇಷ್ಯಾ ಹಾಗೂ ಆಸ್ಟ್ರೇಲಿಯಾ ನೆರವು ನೀಡುವುದಾಗಿ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಸ್ತೆಗೆ ನುಗ್ಗಿದ ಜ್ವಾಲಾರಸ-82 ಮನೆಗಳು ನಾಶ

    ರಸ್ತೆಗೆ ನುಗ್ಗಿದ ಜ್ವಾಲಾರಸ-82 ಮನೆಗಳು ನಾಶ

    ಹವಾಯಿ: ಜ್ವಾಲಾಮುಖಿಯಿಂದಾಗಿ ಕರಗಿದ ಬಂಡೆಯ ಜ್ವಾಲಾರಸವು ನಗರದ ಬೀದಿಗಳಿಗೆ ನುಗ್ಗಿದ ಪರಿಣಾಮ ಹಲವಾರು ಮನೆಗಳು ನಾಶಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

    ಲೀಲಾನಿ ಎಸ್ಟೇಟ್ ವಸತಿ ಅಭಿವೃದ್ಧಿಗೆ ಸೇರಿದ ಸುಮಾರು 82 ಮನೆಗಳು ನಾಶವಾಗಿದೆ ಎಂದು ಫೆಡರಲ್ ಎಮರ್ಜೆನ್ಸಿ ಮ್ಯಾನೇಜ್ಮೆಂಟ್ ಏಜೆನ್ಸಿ ತಿಳಿಸಿದೆ. ಸಾರ್ವಜನಿಕರಿಗೆ ಜ್ವಾಲಾರಸದಿಂದ ತಪ್ಪಿಸಿಕೊಳ್ಳುವಂತೆ ಅಧಿಕಾರಿಗಳು ಮುನ್ಸೂಚನೆ ಕೊಟ್ಟಿದ್ದಾರೆ.

    ಮೇ 3 ರಿಂದ 2,200 ಎಕರೆ ವ್ಯಾಪ್ತಿಯಲ್ಲಿ ಲಾವಾರಸ ಹರಡಿದೆ. ಕಳೆದ 100 ವರ್ಷದಲ್ಲೇ ಹವಾಯಿ ದ್ವೀಪ ರಾಷ್ಟ್ರ ಕಂಡ ವಿನಾಶಕಾರಕ ಕಿಲೂಯೆ ಜ್ವಾಲಾಮುಖಿ ಇದಾಗಿದೆ ಎನ್ನಲಾಗಿದೆ.

    ಕೌಪುಲಿ ರಸ್ತೆಯಲ್ಲಿ ನಿಂತು ಪಕ್ಕದ ರಸ್ತೆಗೆ ಜ್ವಾಲಾರಸ ಹೋಗುತ್ತಿರುವ ವಿಡಿಯೊವನ್ನು ಇಕಾಕ್ ಮಾರ್ಜೊ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದು, ವೈರಲ್ ಆಗಿದೆ.

    ಜ್ವಾಲಾರಸ ಸುಮಾರು 100 ಅಡಿಗಳ ಎತ್ತರಕ್ಕೆ ಚಿಮ್ಮಿ ಕರಗಿದ ಬಂಡೆಗಳ ಕೊಳಗಳು ನಿರ್ಮಾಣವಾಗುತ್ತಿವೆ. ಕಹುಕೈ ಮತ್ತು ಮೊಹಾಲಾ ರಸ್ತೆಗಳ ಕಡೆ ಲಾವಾ ರಸ ಹರಿದು ಬರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ದಳದವರು ಪ್ರತಿಯೊಂದು ಮನೆಗೂ ಭೇಟಿ ನೀಡಿ ಅಲ್ಲಿಯ ನಿವಾಸಿಗಳನ್ನು ಸ್ಥಳಾಂತರಿಸುತ್ತಿದ್ದಾರೆ.

    ಕೆಲವು ರಸ್ತೆಗಳ ಸುತ್ತ ಲಾವಾರಸ ಹರಿದು ಅಲ್ಲಿರುವವರನ್ನು ತಲುಪಲಿಕ್ಕೆ ಆಗದ ಸ್ಥಿತಿ  ಕೂಡ ನಿರ್ಮಾಣವಾಗಿದೆ ಎನ್ನಲಾಗಿದೆ. ಈಗ ಹೊರಬರುತ್ತಿರುವ ಲಾವಾರಸ ಜ್ವಾಲಾಮುಖಿಯ ಒಂದು ಸಣ್ಣ ಭಾಗ ಎಂದು ಹೇಳಲಾಗುತ್ತಿದೆ.

    https://www.facebook.com/ikaika.marzo/videos/1814217715297423/

     

  • 150 ವರ್ಷಗಳ ಬಳಿಕ ದೇಶದ ಏಕೈಕ ಜ್ವಾಲಾಮುಖಿ ಸಕ್ರಿಯ

    150 ವರ್ಷಗಳ ಬಳಿಕ ದೇಶದ ಏಕೈಕ ಜ್ವಾಲಾಮುಖಿ ಸಕ್ರಿಯ

    ಪಣಜಿ: ವಿದೇಶದ ಕೆಲವು ದ್ವೀಪಗಳಲ್ಲಿ ಜ್ವಾಲಾಮುಖಿ ಸುದ್ದಿಗಳನ್ನು ನೀವು ಓದಿರಬಹುದು. ಆದರೆ ಈಗ ನಿಮಗೆಲ್ಲರಿಗೂ ಅಚ್ಚರಿ ಮೂಡಿಸುವ ಸುದ್ದಿ ಎನ್ನುವುಂತೆ 150 ವರ್ಷಗಳ ಬಳಿಕ ಭಾರತದ ಏಕೈಕ ಜ್ವಾಲಾಮುಖಿ ಸಕ್ರಿಯವಾಗಿದೆ ಎಂದು ತಜ್ಞರ ತಂಡವೊಂದು ತಿಳಿಸಿದೆ.

    ಹೌದು. ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿರುವ ದೇಶದ ಏಕೈಕ ಜ್ವಾಲಾಮುಖಿ ಸಕ್ರಿಯವಾಗಿದೆ ಎಂದು ಗೋವಾದಲ್ಲಿರುವ ರಾಷ್ಟ್ರೀಯ ಸಾಗರ ವಿಜ್ಞಾನ ಸಂಸ್ಥೆ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

    ಅಂಡಮಾನ್ ರಾಜಧಾನಿ ಪೋರ್ಟ್ ಬ್ಲೇರ್ ನಿಂದ 140 ಕಿ.ಮೀ ದೂರದಲ್ಲಿ ಈಶಾನ್ಯ ಭಾಗದಲ್ಲಿರುವ ಬಾರನ್ ದ್ವೀಪದಲ್ಲಿ ಈ ಜ್ವಾಲಾಮುಖಿ ಇದ್ದು, ಜನವರಿ ತಿಂಗಳಲ್ಲಿ ಲಾವಾರಸವನ್ನು ಉಗುಳಿದೆ.

    ಜ್ವಾಲಾಮುಖಿ ಇರುವ ಪ್ರದೇಶಕ್ಕೆ ಜನವರಿ 23ರಂದು ತಂಡ ತೆರಳಿ ಅಧ್ಯಯನ ನಡೆಸಿತ್ತು. ಈ ವೇಳೆ 4 ಗಂಟೆಗಳ ಕಾಲ ಲಾವಾ ರಸವನ್ನು ಉಗುಳಿದೆ ಎಂದು ತಜ್ಞರು ತಿಳಿಸಿದ್ದಾರೆ.

    ಜನವರಿ 26ರಂದು ತಂಡ ಎರಡನೇ ಬಾರಿ ದ್ವೀಪದ ಬಳಿ ತೆರಳಿದಾಗಲೂ ಕೆಂಪು ಲಾವಾ ರಸ ಉಗುಳುತ್ತಿರುವುದನ್ನು ನೋಡಿದೆ. ಹೀಗಾಗಿ ಜ್ವಾಲಾಮುಖಿ ಸ್ಫೋಟಗೊಳ್ಳಬಹುದು ಎನ್ನುವ ಆತಂಕವನ್ನು ಸಂಶೋಧಕರು ಹೊಂದಿದ್ದು, ಈಗ ಜ್ವಾಲಾಮುಖಿಯ ಬೂದಿಯನ್ನು ಅಧ್ಯಯನಕ್ಕಾಗಿ ಸಂಗ್ರಹಿಸಿದ್ದಾರೆ.

    ಸಂಶೋಧಕರು ಲಾವಾ ರಸ ಚಿಮ್ಮುತ್ತಿರುವ ಪ್ರದೇಶಕ್ಕೆ ಹೋಗಿಲ್ಲ. ಈ ಪ್ರದೇಶ ಅಪಾಯಕಾರಿಯಾಗಿರುವುದರಿಂದ ಒಂದು ಮೈಲಿ ದೂರದಿಂದ ಈ ಅಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಗಮನಿಸಿ ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಸುಮಾರು 150 ವರ್ಷಗಳ ಹಿಂದೆ ಈ ಜ್ವಾಲಾಮುಖಿ ಸ್ಫೋಟಗೊಂಡಿರಬಹುದು ಎನ್ನುವ ಅಭಿಪ್ರಾಯವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.