Tag: ಜ್ವಾಲಮುಖಿ

  • ನ್ಯೂಜಿಲ್ಯಾಂಡ್ ಜ್ವಾಲಾಮುಖಿಯಲ್ಲಿ ಭಾರತೀಯ ಮೂಲದ ಅಮೆರಿಕ ದಂಪತಿ ಸಾವು

    ನ್ಯೂಜಿಲ್ಯಾಂಡ್ ಜ್ವಾಲಾಮುಖಿಯಲ್ಲಿ ಭಾರತೀಯ ಮೂಲದ ಅಮೆರಿಕ ದಂಪತಿ ಸಾವು

    ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್‍ನಲ್ಲಿ ಸಂಭವಿಸಿದ ಜ್ವಾಲಾಮುಖಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಮೂಲದ ಅಮೆರಿಕ ದಂಪತಿ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಜೋಡಿಯ ಮೂವರು ಮಕ್ಕಳು ಅನಾಥರಾಗಿದ್ದಾರೆ.

    ಪ್ರತಾಪ್ ಸಿಂಗ್ ಹಾಗೂ ಮಯೂರಿ ಸಿಂಗ್ ಮೃತಪಟ್ಟ ದಂಪತಿ. ಪ್ರತಾಪ್ ಹಾಗೂ ಮಯೂರಿ ಡಿ. 9ರಂದು ರಜೆ ದಿನಗಳನ್ನು ಕಳೆಯಲು ನ್ಯೂಜಿಲೆಂಡ್‍ನ ವೈಟ್ ಐಲ್ಯಾಂಡ್‍ಗೆ ತೆರೆಳಿದ್ದರು. ಈ ವೇಳೆ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಮಯೂರಿ ಹಾಗೂ ಪ್ರತಾಪ್ ಗಂಭೀರವಾಗಿ ಗಾಯಗೊಂಡಿದ್ದರು. ಮಯೂರಿ ಡಿ. 22ರಂದು ಮೃತಪಟ್ಟರೆ, ಪ್ರತಾಪ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಪ್ರತಾಪ್ ಅವರು ಕೂಡ ಆಕ್ಲೆಂಡ್ ನಲ್ಲಿರುವ ಮಿಡಿಲ್‍ಮೋರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಪ್ರತಾಪ್ ಅವರ ಸಾವಿನ ನಂತರ ಜ್ವಾಲಾಮುಖಿಯಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿದೆ. ಮಯೂರಿ ಮೃತಪಟ್ಟ ಆಸ್ಪತ್ರೆಯಲ್ಲೇ ಪ್ರತಾಪ್ ಕೂಡ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಪ್ರತಾಪ್ ಅವರ ದೇಹ ಅರ್ಧದಷ್ಟು ಸುಟ್ಟು ಹೋಗಿದೆ. ಜ್ವಾಲಾಮುಖಿ ಸ್ಫೋಟಿಸಿದಾಗ ಅಲ್ಲಿ 47 ಮಂದಿ ಇದ್ದು, ಅದರಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಇನ್ನು ಹಲವು ಮಂದಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದಾರೆ.

    ಈ ಜೋಡಿಯ 11 ವರ್ಷ ಮಗ ಹಾಗೂ 6 ವರ್ಷದ ಅವಳಿ ಹೆಣ್ಣು ಮಕ್ಕಳು ರಾಯಲ್ ಕೆರಿಬಿಯನ್ ಕ್ರೂಸ್ ಶಿಪ್‍ನಲ್ಲಿ ಸಂಚರಿಸುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಈಗ ತಂದೆ-ತಾಯಿ ಇಬ್ಬರು ಮೃತಪಟ್ಟಿದ್ದು, ಮಕ್ಕಳು ಅನಾಥರಾಗಿದ್ದಾರೆ.

  • ರಾಜ್ಯದಲ್ಲಿ ಮತ್ತೆ ಮಳೆಯಬ್ಬರ – ಬೆಂಗ್ಳೂರಲ್ಲಿ ಬೆಳಗ್ಗೆಯಿಂದ್ಲೇ ಮೋಡ ಕವಿದ ವಾತಾವರಣ

    ರಾಜ್ಯದಲ್ಲಿ ಮತ್ತೆ ಮಳೆಯಬ್ಬರ – ಬೆಂಗ್ಳೂರಲ್ಲಿ ಬೆಳಗ್ಗೆಯಿಂದ್ಲೇ ಮೋಡ ಕವಿದ ವಾತಾವರಣ

    ಬೆಂಗಳೂರು: ಕಳೆದೆರಡು ದಿನದಿಂದ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ ಆಗುತ್ತಿದ್ದು, ಸೂರ್ಯ ಮರೆಯಾಗುತ್ತಿದ್ದಾನೆ. ಮೈ ಕೊರೆಯುವ ಚಳಿ ಆರಂಭವಾಗುವ ಟೈಂನಲ್ಲಿ ವರ್ಷ ಪೂರ್ತಿ ವರ್ಷಧಾರೆಯ ಸಿಂಚನ. ವಾತಾವರಣ ಈ ಪರಿ ಬದಲಾಗುತ್ತಿರುವುದೇಕೆ ಎನ್ನುವ ಪ್ರಶ್ನೆಗಳಿಗೆಲ್ಲ ವಿಜ್ಞಾನಿಗಳು ಬೆಚ್ಚಿಬೀಳುವ ಕಾರಣ ಕೊಟ್ಟಿದ್ದಾರೆ.

    ಬೆಂಗಳೂರಿನಲ್ಲಿ ಬದಲಾಗುತ್ತಿರುವ ಹವಾಮಾನ ವೈಪರೀತ್ಯದ ಹಿಂದೆ ಅರಬ್ಬೀ, ಬಂಗಾಳಕೊಲ್ಲಿಯ ಸಮುದ್ರಾಳದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ ಭೂಕಂಪ ಸೃಷ್ಟಿಯಾಗುತ್ತಿದ್ದು, ಇದು ಪ್ರಾಕೃತಿಕ ಬದಲಾವಣೆಗೂ ಕಾರಣವಾಗಿದೆ. ಹಾಗಾಗಿಯೇ ಕಳೆದೆರಡು ದಿನದಿಂದ ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ, ಮೋಡ ಮುಚ್ಚಿದ ವಾತಾವರಣ ಕಂಡು ಬರುತ್ತಿದೆ. ಇದು ತುಂಬಾ ಡೇಂಜರಸ್ ಎಂದು ಭೂಗರ್ಭ ತಜ್ಞರು ಹೇಳುತ್ತಾರೆ.

    ಪ್ರಕಾಶ್, ಭೂ ಗರ್ಭ ತಜ್ಞ

    ಅರಬ್ಬೀ ಸಮುದ್ರದಲ್ಲಿ ಸ್ಫೋಟಿಸಿದ ಮೂರು ಭೂಕಂಪಗಳು ಬೆಂಗಳೂರಿನಲ್ಲಿ ಈ ವಿಚಿತ್ರ ವಾತಾವರಣವನ್ನು ಸೃಷ್ಟಿಸಿದೆ. ಆತಂಕದ ವಿಚಾರ ಎಂದರೆ ಸಮುದ್ರಾಳದ ಸ್ಫೋಟದ ತೀವ್ರತೆಯ ಪ್ರಮಾಣ ಅಪಾಯದ ಮಟ್ಟ ಮೀರಿದ್ದು ಇದು ವಾತಾವರಣದ ಏರುಪೇರಿಗೆ ಕಾರಣವಾಗುತ್ತಿದೆ ಎನ್ನಲಾಗಿದೆ. ಇದೇ ರೀತಿ ಪದೇ ಪದೇ ಸಮುದ್ರಾಳದಲ್ಲಿ ಜ್ವಾಲಾಮುಖಿ ಮುನಿಸಿಕೊಂಡರೆ ಬೆಂಗಳೂರಿಗೆ ಇನ್ನಷ್ಟು ಅಪಾಯ ಕಾಡುವ ಸಾಧ್ಯತೆಗಳಿವೆ. ಮಳೆಯ ಅಬ್ಬರ, ವಾತಾವರಣ ಏರುಪೇರಿನಿಂದ ಅನಾರೋಗ್ಯದಂತಹ ಸಮಸ್ಯೆ ಕಾಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಅದೆಲ್ಲೋ ಅಪರೂಪಕ್ಕೆ ಈ ರೀತಿ ಜ್ವಾಲಮುಖಿ ಸ್ಫೋಟಗೊಳ್ಳುತ್ತಿತ್ತು. ಆದರೆ ಈಗ ಪದೇ ಪದೇ ಈ ರೀತಿಯ ಸ್ಫೋಟ ಡೇಂಜರಸ್ ಎಂದು ಹೇಳಲಾಗುತ್ತಿದೆ. ಕಾಲ್ಸ್ ಬರ್ಗ್ ರಿಡ್ಜ್ ಎನ್ನುವ ಜ್ವಾಲಾಮುಖಿಗಳು ಈ ಮಳೆಗೆ ಕಾರಣವಾಗಿದ್ದು, ಇದು ಭಾರತದಲ್ಲಿ ಭೂಕಂಪದಂತಹ ಅಪಾಯವನ್ನು ತಂದೊಡ್ಡಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

    ಭೂಮಿಯಲ್ಲಿ ನಮಗರಿವಿಲ್ಲದಂತೆ ಆಗುವ ಬದಲಾವಣೆ ಇದೀಗ ದೊಡ್ಡ ಮಟ್ಟದ ಆತಂಕವನ್ನು ಸೃಷ್ಟಿಸಿದೆ. ಮೊದಲೇ ನೆರೆಯ ಅಬ್ಬರದಲ್ಲಿ ಮುಳುಗಿದ ಕರುನಾಡಿಗೆ ಮಗದೊಂದು ಅಪಾಯದ ಸೂಚನೆ ಭೀತಿ ಹುಟ್ಟಿಸಿದೆ.