Tag: ಜ್ವರ

  • ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಮಹಾಮಾರಿ ಅಬ್ಬರ- ಬೆಂಗಳೂರಲ್ಲಿ ಶಂಕಿತ ಡೆಂಗ್ಯೂಗೆ ಮಹಿಳೆ ಬಲಿ

    ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಮಹಾಮಾರಿ ಅಬ್ಬರ- ಬೆಂಗಳೂರಲ್ಲಿ ಶಂಕಿತ ಡೆಂಗ್ಯೂಗೆ ಮಹಿಳೆ ಬಲಿ

    ಬೆಂಗಳೂರು: ರಾಜ್ಯದ ಹಲವೆಡೆ ಡೆಂಗ್ಯೂ ನರ್ತನ ಜೋರಾಗಿದೆ. ಸಣ್ಣ ಪ್ರಮಾಣದ ಮಳೆಯಿಂದ ರಾಜಧಾನಿ ಬೆಂಗಳೂರು, ದಾವಣಗೆರೆ ಹಾಗೂ ಮಂಡ್ಯದ ಜಿಲ್ಲೆಗಳಲ್ಲೂ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿದೆ.

    ದಾವಣಗೆರೆ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಹಲವೆಡೆ ಡೆಂಗ್ಯೂ ಮಹಾಮಾರಿ ಮತ್ತೆ ತಾಂಡವ ಆಡ್ತಿದೆ. ಸಿಲಿಕಾನ್ ಸಿಟಿಯಲ್ಲಿ ಶಂಕಿತ ಡೆಂಗ್ಯೂ ಜ್ವರಕ್ಕೆ ಚೌಡರಪಾಳ್ಯದಲ್ಲಿ 32 ವರ್ಷದ ಕಲಾವತಿ ಎಂಬಾಕೆ ಬಲಿಯಾಗಿದ್ದಾರೆ. ಕಳೆದ ಎರಡು ದಿನದಿಂದ ಜ್ವರದಿಂದ ಬಳಲ್ತಿದ್ದ ಕಲಾ, ಚಿಕಿತ್ಸೆ ಫಲಿಸದೇ ಮಾಗಡಿ ರಸ್ತೆಯ ಸ್ಪೈನ್‍ಕೇರ್ ಮತ್ತು ಆರ್ಥೋಕೇರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

    ಡೆಂಗ್ಯೂ ಅಷ್ಟೇ ಅಲ್ಲ. ರಾಜ್ಯಾದ್ಯಂತ ಚಿಕೂನ್ ಗುನ್ಯಾ ಅಬ್ಬರ ಕೂಡಾ ಜೋರಾಗಿದೆ. ಸ್ವತಃ ಆರೋಗ್ಯ ಸಚಿವ ರಮೇಶ್ ಕುಮಾರ್ ಈ ಬಗ್ಗೆ ಕಳವಳ ಹಾಗೂ ಭಯ ವ್ಯಕ್ತಪಡಿಸಿದ್ದಾರೆ.

    ರಾಜ್ಯಾದ್ಯಂತ ಎಷ್ಟು ಪ್ರಕರಣ ಕಂಡುಬಂದಿದೆ ನೋಡೋದಾದ್ರೆ:

    ಬೆಂಗಳೂರು – 7 ತಿಂಗಳಲ್ಲಿ 1,106 ಕೇಸ್
    14 ಜನರಿಗೆ ಚಿಕೂನ್ ಗೂನ್ಯಾ
    ರಾಜ್ಯಾದ್ಯಂತ 2053 ಡೆಂಗ್ಯೂ ಪ್ರಕರಣ
    ರಾಜ್ಯದಲ್ಲಿ 143 ಜನರಲ್ಲಿ ಚಿಕೂನ್ ಗೂನ್ಯಾ

    ದಾವಣಗೆರೆ, ಹರಿಹರ, ಜಗಳೂರು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿವೆ. ದಾವಣಗೆರೆ ಜಿಲ್ಲಾಸ್ಪತ್ರೆಯೊಂದರಲ್ಲೇ ಏಪ್ರಿಲ್, ಮೇನಲ್ಲಿ 20 ಇದ್ದ ಪ್ರಕರಣಗಳು, ಜೂನ್‍ನಲ್ಲಿ ನಾಲ್ಕೈದು ಪಟ್ಟು ಹೆಚ್ಚಾಗಿವೆ.

    ದಾವಣಗೆರೆ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಮಾಣ ಎಷ್ಟಿದೆ ಅಂತಾ ನೋಡೋದಾದ್ರೆ:

    2016 ಜನವರಿಯಿಂದ ಡಿಸೆಂಬರ್: ಶಂಕಿತ ಪ್ರಕರಣ – 2002, ದೃಢಪಟ್ಟ ಪ್ರಕರಣ – 446
    2017 – ಜನವರಿಯಿಂದ ಜೂನ್ 27: ಶಂಕಿತ ಪ್ರಕರಣ – 922, ದೃಢಪಟ್ಟ ಪ್ರಕರಣ – 146

    ವಿಶ್ವಸಂಸ್ಥೆ ಸೂಚನೆ ಪ್ರಕಾರ ಡೆಂಗ್ಯೂ ಪತ್ತೆಗೆ ಎನ್‍ಎಸ್‍ಐ, ಐಜಿಪಿ, ಐಜಿಎಂ (ನ್ಯಾಕ್ ಎಲೈಜಾ) ಮೊದಲಾದ ಪರೀಕ್ಷೆಗಳನ್ನು ಮಾಡಬೇಕು. ಆದ್ರೆ ಅದೂ ನಡೆಯುತ್ತಿಲ್ಲ. ಖಾಸಗಿ ಲ್ಯಾಬ್‍ಗಳು ಅವೈಜ್ಞಾನಿಕವಾಗಿ ಪರೀಕ್ಷೆ ನಡೆಸುತ್ತಿವೆ ಅನ್ನೋ ಆರೋಪಗಳು ಕೂಡ ಕೇಳಿ ಬರುತ್ತಿವೆ. ಕೆಲವೆಡೆ ಡೆಂಗ್ಯೂನಾ? ಮಲೇರಿಯಾನಾ? ಅಥವಾ ಇನ್ಯಾವುದೋ ಕಾಯಿಲೆ ಅನ್ನೋದನ್ನ ಖಚಿತಪಡಿಸಲು ವೈದ್ಯರಿಗೆ ಆಗುತ್ತಿಲ್ಲ.

    ಒಟ್ಟಿನಲ್ಲಿ ಜನರೇ ಹುಷಾರಾಗಿರಿ. ಮೈ ಕೈ ನೋವು, ಜ್ವರ, ಮೈ ಮೇಲೆ ಕೆಂಪು ಹಚ್ಚೆ ಮೂಡಿದ್ರೆ ಇವೆಲ್ಲಾ ಡೆಂಗ್ಯೂ ಲಕ್ಷಣಗಳು. ಯಾವುದಕ್ಕೂ ಆಲಕ್ಷ್ಯ ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ. ಜೊತೆಗೆ ಮರೆಯದೇ ಸೊಳ್ಳೆ ಪರದೆ ಬಳಸಿ.

  • ಜು.1ರಂದು ಸಪ್ತಪದಿ ತುಳಿಯಬೇಕಿದ್ದ ಯೋಧ ಜ್ವರಕ್ಕೆ ಬಲಿ- ಬಳ್ಳಾರಿಯಲ್ಲಿ ಮನಕಲಕುವ ಘಟನೆ

    ಜು.1ರಂದು ಸಪ್ತಪದಿ ತುಳಿಯಬೇಕಿದ್ದ ಯೋಧ ಜ್ವರಕ್ಕೆ ಬಲಿ- ಬಳ್ಳಾರಿಯಲ್ಲಿ ಮನಕಲಕುವ ಘಟನೆ

    ಬಳ್ಳಾರಿ: ಜುಲೈ 1 ರಂದು ಮದುವೆಯಾಗಿ ಸಪ್ತಪದಿ ತುಳಿಯಬೇಕಾಗಿದ್ದ ಯೋಧರೊಬ್ಬರು ಇಂದು ತ್ರೀವ ಜ್ವರದಿಂದ ಮೃತಪಟ್ಟ ಮನಕಲಕುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

    ಹೂವಿನಹಡಗಲಿ ತಾಲೂಕಿನ ಬಸರಳ್ಳಿ ಗ್ರಾಮದ 30 ವರ್ಷದ ಯೋಧ ಹನುಮಂತಪ್ಪ ಕೊರ್ಲಗಟ್ಟಿ ಮೃತ ದುರ್ದೈವಿಯಾಗಿದ್ದು, ಇವರು ಜಾರ್ಖಂಡನ ಸೆಂಟ್ರಲ್ ಆರ್ಮಡ್ ಪೊಲೀಸ್ ಪೋರ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

    ಮೃತ ಯೋಧರಿಗೆ ಮದುವೆ ನಿಗದಿಯಾಗಿತ್ತು. ಹೀಗಾಗಿ ಊರಿಗೆ ಊರೇ ಯೋಧರ ಮದುವೆಯ ತಯಾರಿಯಲ್ಲಿ ಓಡಾಡುತ್ತಿತ್ತು. ಆದ್ರೆ ವಿಧಿ ಮಾತ್ರ ಆ ಯೋಧರನ್ನೆ ಬಲಿ ತೆಗೆದುಕೊಂಡಿದೆ.

    ಜುಲೈ 1 ರಂದು ಸಪ್ತಪದಿ ತುಳಿಯಬೇಕಾಗಿದ್ದ ಹನುಂತಪ್ಪ ತ್ರೀವ ಜ್ವರದಿಂದ ಬಳಲುತ್ತಿದ್ದರು. ಮದುವೆ ಸಂಭ್ರಮದಲ್ಲಿ ಓಡಾಡುತ್ತಿದ್ದ ಯೋಧ ಹನುಮಂತಪ್ಪರಿಗೆ ಜ್ವರ ತ್ರೀವವಾಗುತ್ತಿದ್ದಂತೆ ಗದಗ ಜಿಲ್ಲೆಯ ಮುಂಡರಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗುತ್ತಿತ್ತು. ಆದ್ರೆ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

    ಮದುವೆ ಸಂಭ್ರಮದಲ್ಲಿದ್ದ ಯೋಧ ಹನುಂತಪ್ಪ ಮನೆಯಲ್ಲೀಗ ಶೋಕ ಮಡುಗಟ್ಟಿದೆ. ಅಲ್ಲದೇ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.