Tag: ಜ್ಯೋತಿಷ್ಯ

  • ಚಂದ್ರಗ್ರಹಣ: ರಾಜ್ಯ ರಾಜಕೀಯದಲ್ಲಿ ಗ್ರಹಣ ಯಾರಿಗೆ ಹಿಡಿಯುತ್ತೆ?

    ಚಂದ್ರಗ್ರಹಣ: ರಾಜ್ಯ ರಾಜಕೀಯದಲ್ಲಿ ಗ್ರಹಣ ಯಾರಿಗೆ ಹಿಡಿಯುತ್ತೆ?

    – ಮಿಡ್ ನೈಟ್ ಗ್ರಹಣ ಬುಡಮೇಲಾಗುತ್ತಾ ರಾಜ್ಯ ರಾಜಕಾರಣ!
    – ರಾಜಕೀಯದಂಗಳದಲ್ಲೀಗ ‘ಚಂದ್ರ ಗ್ರಹಣ’ದ್ದೇ ಲೆಕ್ಕಾಚಾರ

    ಬೆಂಗಳೂರು: ನಭೋಮಂಡಲದಲ್ಲಿ ಗೋಚರಿಸುವ ವಿಸ್ಮಯ ಖಗೋಳ ತಜ್ಞರ ಪಾಲಿಗೆ ಸೊಬಗು. ನೆರಳು ಬೆಳಕಿನ ಚಮತ್ಕಾರ. ಆದರೆ ಜನಸಾಮಾನ್ಯರ ಪಾಲಿಗೆ ಗ್ರಹಣ ‘ಗ್ರಹಚಾರ’ ಎನ್ನುವುದು ಜ್ಯೋತಿಷಿಗಳು ಹೇಳುವ ಭವಿಷ್ಯವಾಣಿ. ಅದರಲ್ಲೂ ಈ ಬಾರಿಯ ದೀರ್ಘ ಕಾಲದ ಪೌರ್ಣಿಮೆಯ ಗ್ರಹಣ ನಾನಾ ಪರಿಣಾಮ, ಗಂಡಾಂತರ ತಂದೊಡ್ಡಲಿದೆ ಎಂದಿರುವ ಜೋತಿಷಿಗಳ ಭವಿಷ್ಯ ಜನರನ್ನು ನಡುಗಿಸಿದೆ. ಕೇತುಗ್ರಸ್ಥ ಚಂದ್ರಗ್ರಹಣವಾದ ಕಾರಣ ರವಿಯ ಬೆಳಕು ಬೀಳದೇ ಚಂದ್ರ ದುರ್ಬಲನಾಗುತ್ತಾನೆ. ಅಮಾವಾಸ್ಯೆಯ ನಂತ್ರ ಪೌರ್ಣಮಿಯಲ್ಲಿ ಕಂಗೊಳಿಸುವ ಚಂದ್ರ ಮಂಕಾಗಾಲಿದ್ದಾನೆ. ಬೆರಗಿನಿಂದ ಪ್ರಕಾಶಮಾನವಾಗುವ ಚಂದ್ರನ ಶಕ್ತಿಯನ್ನು ಕೇತು ಮಂಕಾಗಿಸುವಾಗ, ಇದರ ಪರಿಣಾಮ ಎಲ್ಲರ ಮೇಲಾಗಲಿದೆಯಂತೆ. ಇದಕ್ಕಿಂತ ಮುಖ್ಯವಾಗಿ ಈ ಬಾರಿಯ ಗ್ರಹಣದ ವಕ್ರದೃಷ್ಟಿ ರಾಜ್ಯ ರಾಜಕೀಯದ ಮೇಲಾಗಲಿದೆ ಎಂಬ ಎಂಬ ಜ್ಯೋತಿಷಿಗಳ ಭವಿಷ್ಯವಾಣಿಯಿಂದ ರಾಜಕೀಯ ಮುಖಂಡರು ನಡುಗಿ ಹೋಗಿದ್ದಾರೆ. ಹೀಗಾಗಿ ಸದ್ಯ ರಾಜಕೀಯದಂಗಳದಲ್ಲೀಗ ಗ್ರಹಣ ಟೆನ್ಶನ್ ಶುರುವಾಗಿದೆ. ನಾವ್ಯಾವುದನ್ನೂ ನಂಬಲ್ಲ ಅಂತಿರೋರೆಲ್ಲಾ ಒಳಗೊಳಗೇ ಎಲ್ಲಾ ಲೆಕ್ಕಾಚಾರ ಹಾಕಲು ಶುರು ಮಾಡಿ, ನಮಗೆ ಕಂಟಕವೇನೂ ಆಗದಿರಲಿ ಎಂದು ದೇವರ ಮೊರೆ ಹೋಗಲು ಸಜ್ಜಾಗುತ್ತಿದ್ದಾರೆ.

    ಜುಲೈ 27ರ ಗ್ರಹಣದಿಂದ ರಾಜ್ಯ ರಾಜಕೀಯದಲ್ಲಿ ಏನೆಲ್ಲ ಬದಲಾವಣೆಯಾಗಲಿದೆ, ಚಂದ್ರನ ಕರಿಛಾಯೆ ಯಾರ ಮೇಲೆ ಬೀಳಲಿದೆ ಎನ್ನುವುದೇ ಈಗ ಸದ್ಯದ ಮಾತು. ವಿಚಿತ್ರ ಅಂದ್ರೆ ಈ ಬಾರಿಯ ಚಂದ್ರಗ್ರಹಣ ಕರ್ನಾಟಕ ರಾಜಕೀಯಕ್ಕೂ ತಟ್ಟುತ್ತಾ ಎಂಬ ಕುತೂಹಲವಿದೆ. ಚಂದ್ರಗ್ರಹಣದ ವಕ್ರದೃಷ್ಟಿ ಇಬ್ಬರು ಶತ್ರುಗಳಲ್ಲಿ ಒಬ್ಬರಿಗೆ ದುರದೃಷ್ಟವಾದ್ರೇ, ಇನ್ನೊಬ್ಬರಿಗೆ ಭಾಗ್ಯದ ಬಾಗಿಲು ತೆರೆಯಲಿದೆ ಎನ್ನುವುದು ರಾಜ್ಯದ ಜ್ಯೋತಿಷಿಗಳ ಲೆಕ್ಕಾಚಾರ.

    ಮೈತ್ರಿ ಸರ್ಕಾರಕ್ಕೇನಾಗುತ್ತೆ?: ಮೊದಲೇ ತೊಯ್ದಾಟದಲ್ಲಿ ಸಿಲುಕಿದಂತಿರುವ ಸಮ್ಮಿಶ್ರ ಸರ್ಕಾರಕ್ಕೆ ಈ ಬಾರಿ ಗ್ರಹಣ ಗ್ರಹಚಾರದ ಎಫೆಕ್ಟ್ ಜೋರಾಗಿ ತಟ್ಟಲಿದೆಯಂತೆ. ಗಟ್ಟಿ ಭಾಂದವ್ಯವನ್ನೇ ಕೆಡವಿ ಹಾಕುವ ಕ್ಷುದ್ರ ಗ್ರಹಣಕ್ಕೆ ಡೋಲಾಯಮಾನ ಸ್ಥಿತಿಯಲ್ಲಿರುವ ಸರ್ಕಾರ ಯಾವ ಲೆಕ್ಕ, ಸೂರ್ಯ ಚಂದ್ರನನ್ನೇ ಬೆಂಬಿಡದೇ ಕಾಡುವ ಕೇತು ಅಧಿಕಾರದಲ್ಲಿರುವವರನ್ನು ಬೆಂಬಿಡದೇ ಕಾಡಲಿದ್ದಾನೆ ಅನ್ನೋದು ಜ್ಯೋತಿಷಿಗಳ ಮಾತು. ಅದೆಷ್ಟೇ ಒಗ್ಗಟ್ಟಿನಲ್ಲಿ ಹೋದರೂ ಗ್ರಹಣದ ಎಫೆಕ್ಟ್ ನಿಂದ ಜಗಳ, ಕಿರಿಕಿರಿ ನಿರಂತರವಾಗಿರುತ್ತೆ. ಆಡಳಿತ ಪಕ್ಷದಲ್ಲಿ ಸಮನ್ವಯ ಅನ್ನೋದು ಸಾಧ್ಯವಾಗೋದೆ ಇಲ್ವಂತೆ. ಒಳಜಗಳ, ಮಾನಸಿಕ ತೊಳಲಾಟ, ಕ್ಷೋಭೆಗಳಿಂದ ಸರ್ಕಾರದ ಬುಡ ಅಲುಗಾಡಲಿದೆ ಎನ್ನುವುದು ಬೆಂಗಳೂರಿನ ಗವಿಗಂಗಾಧರ ಕ್ಷೇತ್ರದ ಅರ್ಚಕರು ಹಾಗೂ ಖ್ಯಾತ ಜ್ಯೋತಿಷಿಗಳಾದ ಸೋಮಸುಂದರ ದೀಕ್ಷಿತ್ ಅಭಿಪ್ರಾಯ.

    ಚಂದ್ರಗ್ರಹಣಕ್ಕೆ ಬೆದರಿದ ರಾಜಾಹುಲಿ!: ಚಂದ್ರಗ್ರಹಣದ ಭೀತಿಗೆ ಬೆದರಿರುವ ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಸಿಎಂ ಯಡಿಯೂರಪ್ಪ ಬಹಿರಂಗವಾಗಿ ಚಂದ್ರಗ್ರಹಣದ ಸಂದರ್ಭದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಬೇಡಿ ಅಂತಾ ಬಿಜೆಪಿ ಕಾರ್ಯಕರ್ತರಿಗೆ ಸೂಚನೆಯನ್ನು ಬಹಿರಂಗವಾಗಿಯೇ ಕೊಟ್ಟಿದ್ದಾರೆ. ಇದರ ಜೊತೆಗೆ ಗ್ರಹಣದಿಂದ ಜನರನ್ನು ಪಾರು ಮಾಡಲು ಪೂಜೆ ಪ್ರಾರ್ಥನೆಗಳನ್ನು ಮಾಡಿ ಅಂತಾ ಯಡಿಯೂರಪ್ಪ ಕರೆ ನೀಡಿದ್ದಾರೆ. ಅಷ್ಟೇ ಯಾಕೆ ಗ್ರಹಣದ ಭೀತಿಗೆ ರಾಜ್ಯ ಪ್ರವಾಸವನ್ನು ಕೂಡ ಮೊಟಕುಗೊಳಿಸಿರುವ ಯಡಿಯೂರಪ್ಪ, ಗ್ರಹಣಕ್ಕೆ ತಾನೆಷ್ಟು ಬೆದರಿದ್ದೇನೆ ಅನ್ನೋದನ್ನು ತೋರಿಸಿದ್ದಾರೆ. ಗ್ರಹಣದ ಬಳಿಕವಷ್ಟೇ ರಾಜ್ಯಪ್ರವಾಸ ನಡೆಸೋದಾಗಿ ಬಿಎಸ್‍ವೈ ಹೇಳಿದ್ದು ಈಗಾಗಲೇ ಗ್ರಹಣ ದೋಷ ನಿವಾರಣೆಗಾಗಿ ದೇವರ ಮೊರೆ ಹೋಗಿದ್ದಾರೆ.

     

    ದೇವೇಗೌಡರ ಕುಟುಂಬದಿಂದ ಪೂಜೆ: ದೇವೇಗೌಡ್ರ ಕುಟುಂಬಕ್ಕಂತೂ ಮೊದಲೇ ದೇವರು, ಜ್ಯೋತಿಷ್ಯ ಅಂತಾ ನಂಬಿಕೆ ಜಾಸ್ತಿ. ರಾಜ್ಯ ರಾಜಕೀಯದಲ್ಲಿ ಅಸ್ಥಿರತೆಯ ಬಗ್ಗೆ ಭವಿಷ್ಯವಾಣಿಗಳು ಕೇಳಿ ಬರುತ್ತಿದ್ದಂತೆ ದೇವೇಗೌಡರ ಕುಟುಂಬ ಗ್ರಹಣ ದೋಷ ನಿವಾರಣೆಗಾಗಿ ಮಹಾ ಪೂಜೆ ನಡೆಸಲು ನಿರ್ಧರಿಸಿದ್ದಾರೆ. ಸುದೀರ್ಘ ಗ್ರಹಣ ಮುಗಿದ ಬೆಳಗಿನ ಜಾವ ಗ್ರಹಣ ದೋಷ ನಿವಾರಣೆಗಾಗಿ ಗವಿ ಗಂಗಾಧರ ದೇಗುಲದಲ್ಲಿ ಶಿವಾರಾಧನೆ, ಹೋಮ, ಯಜ್ಞ ಯಾಗಗಳನ್ನು ನಡೆಸಲಿದ್ದಾರೆ ಎಂದು ಸೋಮಸುಂದರ ದೀಕ್ಷಿತ್ ಹೇಳಿದ್ದಾರೆ.

    ಪ್ರಧಾನಿ ಮೋದಿಗೂ ಕಾಡಲಿದ್ಯಾ ಗ್ರಹಣ ಕಂಟಕ!: ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲದೇ ಪ್ರಧಾನಿ ಮೋದಿಗೂ ಗ್ರಹಣ ಕಂಟಕದ ಕರಿನೆರಳ ಛಾಯೆ ಬೀಳಲಿದೆ ಎಂದು ಮಗದೊಂದು ಬೆಚ್ಚಿಬೀಳಿಸುವ ಭವಿಷ್ಯವನ್ನು ಜ್ಯೋತಿಷಿಗಳು ನುಡಿದಿದ್ದಾರೆ. ಈ ಹಿಂದೆ ರಕ್ತ ಚಂದ್ರ ಗ್ರಹಣದ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಹಿಂಸಾಚಾರ ಹೆಚ್ಚಾಗಿ ಕೇಂದ್ರಕ್ಕೆ ತಲೆನೋವಾಗಿತ್ತು. ಈ ಬಾರಿಯೂ ಇಂತಹ ಅನಿರೀಕ್ಷಿತ ತೊಂದರೆಗಳು ಎದುರಾಗಲಿದೆಯಂತೆ. ದೇಶಕ್ಕೆ ಜಲಪ್ರಳಯ, ಕಂಟಕ ಕಾಡಲಿದ್ದು ಸರ್ಕಾರದ ನೆಮ್ಮದಿ ಕಸಿದುಕೊಳ್ಳಲಿದೆ. ಮುಂಬರುವ ಲೋಕಸಭಾ ಚುನಾವಣಾ ಕದನದ ದಿಕ್ಕನ್ನೇ ಬದಲಿಸುತ್ತಾ ಅನ್ನೋ ವಿಶ್ಲೇಷಣೆ ಕೂಡಿ ಕೇಳಿ ಬರುತ್ತಿದೆ.

    ರಾಜಕೀಯ ಅಖಾಡದ ಶತ್ರುಗಳಿಗೆ ಲಾಭ – ನಷ್ಟದ ಗ್ರಹಣ!: ಇವೆಲ್ಲದರ ಮಧ್ಯೆ ಕುತೂಹಲ ಮೂಡಿಸಿದ್ದು ಅಂದ್ರೆ ರಾಜಕೀಯ ಅಖಾಡದ ಇಬ್ಬರೂ ಘಟಾನುಘಟಿಗಳಲ್ಲಿ ಒಬ್ಬರಿಗೆ ಗ್ರಹಣ ಅದೃಷ್ಟದ ಬಾಗಿಲು ತೆರೆಯುತ್ತದಂತೆ. ಇನ್ನೊಬ್ಬರಿಗೆ ಎರಡು ದೋಣಿಯ ಪಯಣದ ಅಸಲಿ ಸಂಕಷ್ಟ ಶುರುವಾಗಲಿದೆ ಅನ್ನೋ ಭವಿಷ್ಯಗಳು ಕೇಳಿದೆ. ಯಡಿಯೂರಪ್ಪನವರದ್ದು ವೃಶ್ಚಿಕ ರಾಶಿ. ಈ ರಾಶಿಯವರಿಗೆ ಗ್ರಹಣದ ನಂತರ ಅದೃಷ್ಟ ಖುಲಾಯಿಸಲಿದೆ ಎಂಬ ಲೆಕ್ಕಾಚಾರವನ್ನು ಕೆಲ ಜ್ಯೋತಿಷಿಗಳು ಹಾಕಿದ್ದಾರೆ. ಇದು ರಾಜಕೀಯದಲ್ಲಿ ಹೊಸ ಟ್ವಿಸ್ಟ್ ಮೂಡಿಸಬಹುದಾ ಎಂಬ ಅನುಮಾನವೂ ಇದೆ. ಅದೃಷ್ಟ – ನತದೃಷ್ಟ, ಲಾಭ ನಷ್ಟ, ಹೀಗೆ ಜುಲೈ 27 ರ ಚಂದಮಾಮನ ಗ್ರಹಣದ ಒಳಿತು ಕೆಡುಕುಗಳ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ.

  • ಶುಕ್ರವಾರ ಚಂದ್ರಗ್ರಹಣ : ಯಾವ ರಾಶಿಯವರಿಗೆ ಏನಾಗುತ್ತೆ? ಇಲ್ಲಿದೆ ವಿವರ

    ಶುಕ್ರವಾರ ಚಂದ್ರಗ್ರಹಣ : ಯಾವ ರಾಶಿಯವರಿಗೆ ಏನಾಗುತ್ತೆ? ಇಲ್ಲಿದೆ ವಿವರ

    – ಗ್ರಹಣ ದಿನ ಏನ್ಮಾಡ್ಬೇಕು ಎಂದು ವಿವರಿಸಿದ್ದಾರೆ ಜ್ಯೋತಿಷಿಗಳು

    – ನಂಬಿಕೆಯಿಲ್ಲದವರು ಆಕಾಶದ ವಿಸ್ಮಯ ನೋಡಿ ಎಂಜಾಯ್ ಮಾಡಿ

    ಬೆಂಗಳೂರು: ಬಾನಂಗಳದ ಚಂದಿರ ಹುಣ್ಣಿಮೆಯ ದಿನವೂ ಮಂಕಾಗಲಿದ್ದಾನೆ. ಬಾಹ್ಯಕಾಶದಲ್ಲಿ ನಡೆಯುವ ವಿಸ್ಮಯ ಮನುಕುಲದ ಮೇಲೆ ಬೀರುವ ಪ್ರಭಾವ ಅಷ್ಟೇ ರೌದ್ರವಂತೆ. ಜುಲೈ 27 ರ ಹುಣ್ಣಿಮೆಯ ರಾತ್ರಿ 11.54 ರಿಂದ 3.40 ರವೆಗೆ ಸಂಭವಿಸುವ ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಯಾವ ರಾಶಿಗಳಿಗೆ ಕೆಡುಕನ್ನುಂಟು ಮಾಡಲಿದೆ, ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ. ಗ್ರಹಣ ದೋಷದಿಂದ ತಪ್ಪಿಸಿಕೊಳ್ಳುವ ಮಾರ್ಗ ಹೇಗೆ..? ಜ್ಯೋತಿಷಿಗಳು ಏನ್ ಹೇಳ್ತಾರೆ ಹುಣ್ಣಿಮೆ ಚಂದಿರನ ರಾಶಿಗಳ ಜೊತೆಗಿನ ಆಟ ಹೇಗಿರುತ್ತದೆ ಎನ್ನುವುದನ್ನು ಖ್ಯಾತ ಜ್ಯೋತಿಷಿಗಳು ವಿವರಿಸಿದ್ದಾರೆ.

     

    ಹುಣ್ಣಿಮೆ ಚಂದಿರನ ವಕ್ರದೃಷ್ಟಿ ಯಾವ ರಾಶಿಯ ಮೇಲೆ ಬೀರಲಿದೆ?: ವಿಳಂಬಿ ನಾಮ ಸಂವತ್ಸರದ ಆಷಾಢ ಶುಕ್ಲ ಹುಣ್ಣಿಮೆಯಂದು ಉತ್ತರಾಷಾಢ ಮತ್ತು ಶ್ರವಣ ನಕ್ಷತ್ರಗಳಲ್ಲಿ ಮಕರ ರಾಶಿ, ಮೇಷ, ವೃಷಭ ಮತ್ತು ಮಿಥುನ ಲಗ್ನದಲ್ಲಿ ಈ ಚಂದ್ರಗ್ರಹಣ ಸಂಭವಿಸಲಿದೆ. ಇದು ನಾಲ್ಕು ರಾಶಿಗಳ ಮೇಲೆ ತೀರಾ ಕೆಡುಕು, ನಾಲ್ಕು ರಾಶಿಗಳಿಗೆ ಮಿಶ್ರ ಫಲ ಹಾಗೂ ನಾಲ್ಕು ರಾಶಿಗಳಿಗೆ ಕೊಂಚ ಶುಭದಾಯಕವಾಗಿದೆ. ಆದ್ರೇ ಇದು ಭೂಮಂಡಲವನ್ನೇ ಅಲುಗಾಡಿಸುವಂತೆ ಮಾಡುವ ಚಂದಿರನ ಹೊಳಪನ್ನು ಮರೆಮಾಚುವ ಈ ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದ್ದು ಬಹುತೇಕ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

    ಚಂದ್ರಗ್ರಹಣ ಯಾವ ರಾಶಿಗಳ ಮೇಲೆ ಏನು ಪ್ರಭಾವ?: ಈ ಚಂದ್ರಗ್ರಹಣ ನಕ್ಷತ್ರ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು, ಯಾವ ರಾಶಿಯವರಿಗೆ ಚಂದ್ರನ ಪ್ರಭಾವ ಇರುತ್ತೋ ಅವ್ರಿಗೆ ಕೆಡುಕು, ಚಿಂತೆ, ಅನಾರೋಗ್ಯ, ಮಾನಹಾನಿ ಸೇರಿದಂತೆ ನಾನಾ ಕಂಟಕ ತಲೆದೋರಲಿದೆ ಅಂತಾ ಖ್ಯಾತ ಜ್ಯೋತಿಷಿಗಳಾದ ಸೋಮಸುಂದರ ದೀಕ್ಷಿತ್ ಹೇಳಿದ್ದಾರೆ. ಮುಖ್ಯವಾಗಿ ಉತ್ತರಾಷಾಢ, ಕೃತಿಕಾ, ಉತ್ತರ, ಶ್ರವಣ, ರೋಹಿಣಿ, ಹಸ್ತ ನಕ್ಷತ್ರದವರಿಗೆ ತೀವ್ರ ತೊಂದರೆ ಕಾಡಲಿದ್ದು, ರಾಶಿ ಪ್ರಕಾರ ಮಕರ, ಧನಸ್ಸು, ವೃಷಭ, ಸಿಂಹ ರಾಶಿಯವರಿಗೆ ದೋಷದ ಫಲ ಹೆಚ್ಚಾಗಿ ಆಗುತ್ತದೆ. ಕೆಲವು ರಾಶಿಗೆ ಕೆಡುಕು ಮಾಡುವ ಈ ಚಂದ್ರಗ್ರಹಣ ವೃಶ್ಚಿಕ, ಮೀನ, ತುಲಾ ರಾಶಿಯವರಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ ಎನ್ನುವುದು ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರವಾದ್ರೂ ದ್ವಾದಶ ರಾಶಿಗಳಿಗೂ ಕಂಟಕ ಎದುರಾಗೋದ್ರಿಂದ ಎಲ್ಲರಿಗೂ ಗ್ರಹಣ ದೋಷ ಎದುರಾಗಲಿದೆ ಎಂದು ಅವರು ಹೇಳಿದ್ದಾರೆ.

     

    ಆನ್ ಲೈನ್ ಬುಕ್ಕಿಂಗ್ ಶುರು!: ಚಂದ್ರಗ್ರಹಣದ ನೆರಳು ಬೀಳುವ ಸೂಚನೆ ಸಿಕ್ಕಾಗ ಮನುಷ್ಯ ಜೀವ ತಲ್ಲಣಿಸುತ್ತೆ. ಈ ಗ್ರಹಣ ದೋಷದಿಂದ ಪಾರಾಗುವ ಬಗೆ ಹೇಗೆ? ಬದುಕಿನ ಗಂಡಾಂತರ ನಿವಾರಣೆಯಾಗಲು ಏನು ಮಾಡಬೇಕು ಅನ್ನೋದು ಪ್ರತಿಯೊಬ್ಬರ ಪ್ರಶ್ನೆ. ಖಂಡಿತಾ ಇದಕ್ಕೆಲ್ಲ ಮಾರ್ಗೋಪಾಯಗಳಿವೆ. ಗ್ರಹಣ ದೋಷ ನಿವಾರಣೆಗಾಗಿ ಆಯಾಯ ರಾಶಿ ನಕ್ಷತ್ರಗಳ ದೋಷ ನಿವಾರಣೆಗಾಗಿ ದೇಗುಲಗಳಲ್ಲಿ ಪೂಜೆ ಪುನಸ್ಕಾರಕ್ಕೆ ಸಿದ್ಧತೆಗಳು ಈಗಾಗಲೇ ನಡೆಯುತ್ತಿದೆ. ಈಗಾಗಲೇ ಬಹುತೇಕ ದೇಗುಲಗಳ ಮುಂದೆ ಗ್ರಹಣ ದೋಷ ನಿವಾರಣಾ ಪೂಜೆಯ ವಿವರದ ಬ್ಯಾನರ್ ಬಿದ್ದಾಗಿದೆ. ಅಷ್ಟೇ ಯಾಕೆ ಕೆಲ ದೇಗುಲದಲ್ಲಿ ಗ್ರಹಣ ದೋಷ ಪೂಜೆ ನಿವಾರಣೆಗಾಗಿ ಅನ್ ಲೈನ್ ಬುಕ್ಕಿಂಗ್ ಗೆ ಜನ ಮುಗಿಬೀಳುತ್ತಿದ್ದಾರೆ ಎಂದು ಉಮಾಮಹೇಶ್ವರಿ ದೇವಸ್ಥಾನದ ಸೂರ್ಯಪ್ರಕಾಶ ಗುರೂಜಿ ಹೇಳಿದ್ದಾರೆ.

    ವಿಚಿತ್ರ ಅಂದ್ರೆ ಮನುಕುಲಕ್ಕೆ ಮಾತ್ರವಲ್ಲ, ದೇಗುಲದ ಗರ್ಭಗುಡಿಯೊಳಗೂ ದೇವರಿಗೆ ಗ್ರಹಣದ ಸಂದರ್ಭದಲ್ಲಿ ಬಂಧನ ಭೀತಿ. ದರ್ಭೆಯಲ್ಲಿ ದೇವರನ್ನು ಬಂಧಿಸಿಡಲಾಗುತ್ತೆ. ಆದರೆ ಜನರ ವಿಪರೀತ ಭಯದಿಂದಾಗಿ ಕೆಲ ದೇಗುಲದಲ್ಲಿ ಜುಲೈ 27ರಲ್ಲಿ ಮಿಡ್ ನೈಟ್ ಪೂಜೆ ಪ್ರಾರ್ಥನೆಗಳು ಯಾಗ ಹೋಮಗಳು ಕೂಡ ನಡೆಯಲಿದೆ.

    ಗ್ರಹಣ ದೋಷ ನಿವಾರಣೆ ಹೇಗೆ?: ಗ್ರಹಣ ದೋಷ ನಿವಾರಣೆಗಾಗಿ ಜುಲೈ 28ರ ಬೆಳಗಿನ ಜಾವ ಎಲ್ಲಾ ದೇಗುಲದಲ್ಲೂ ಹೋಮ ಹವನ ನಡೆಯಲಿದೆ. ದೇವರ ಜಪ ಪೂಜೆಯ ಜೊತೆಗೆ ಚಂದ್ರಗ್ರಹ ಶಾಂತಿಗೆ, ಅಕ್ಕಿ, ಬಿಳಿವಸ್ತ್ರ, ಹಾಲು ದಾನ, ಉಪ್ಪು ಹಾಕದ ಮೊಸರನ್ನ ದಾನ, ಶ್ರೀ ದುರ್ಗಾಸ್ತುತಿ ಹಾಗೂ ಕೇತುಗ್ರಹ ಶಾಂತಿಗೆ ಹುರುಳಿಕಾಳು, ಚಿತ್ರವಸ್ತ್ರ, ಶ್ರೀ ಗಣೇಶನಿಗೆ ಕೆಂಪು ಕಣಿಗಲೆ ಹೂವು ಸಮರ್ಪಣೆ, ಮೃತ್ಯುಂಜಯ ಜಪ ಮಾಡಬೇಕು ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.

    ಗ್ರಹಣದ ದಿನ ಊಟ, ತಿಂಡಿ ಹೇಗೆ?: ಗ್ರಹಣದ ದಿನ ಮಧ್ಯಾಹ್ನ 2.30ರ ತನಕ ಭೋಜನ ಮಾಡಬಹುದು. ಅನಾರೋಗ್ಯ ಇರುವವರು ರಾತ್ರಿ 7.30ರೊಳಗೆ ಭೋಜನ ಮುಗಿಸುವುದು ಒಳ್ಳೆಯದು ಅನ್ನುವ ಸಲಹೆಯನ್ನು ನೀಡಿದ್ದಾರೆ. ಗ್ರಹಣದ ಸಂದರ್ಭದಲ್ಲಿ ಭೋಜನ ನಿಷಿದ್ಧ. ಗ್ರಹಣದ ಬಳಿಕ ತಣ್ಣೀರ ಸ್ನಾನವನ್ನು ಮಾಡಿ ಶಿವನ ದರ್ಶನ ಪಡೆದರೆ ಗ್ರಹಣ ದೋಷ ನಿವಾರಣೆಯಾಗಲಿದೆ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ. ಇನ್ನು ಮನುಷ್ಯರಿಗೆ ಮಾತ್ರವಲ್ಲ ದೇಗುಲದಲ್ಲೂ ಗ್ರಹಣ ದೋಷ ನಿವಾರಣೆಗಾಗಿ ದೇವರಿಗೆ ದರ್ಭೆಯ ಪೂಜೆಯ ಬಳಿಕ ಸಂಪ್ರೋಕ್ಷಣಾ ವಿಧಿ ವಿಧಾನ ನಡೆಯಲಿದ್ದು, ಕ್ಷುದ್ರಗೊಂಡ ದೇವರನ್ನು ತಣಿಸಲು ಎಳನೀರಿನ ಅಭಿಷೇಕ, ಕ್ಷೀರಾಭಿಷೇಕಗಳು ನಡೆಯಲಿದೆ. ಇಡೀ ದೇಗುಲದ ಪ್ರಾಂಗಣ, ಗರ್ಭಗುಡಿಯನ್ನು ಶುದ್ಧೀಕರಿಸಲಾಗುತ್ತೆ. ಹೀಗೆ ಗ್ರಹಣದ ದೋಷ ನಿವಾರಣೆಗೆ ನಾನಾ ಮಾರ್ಗಗಳು ಇವೆ.

    ನಂಬಿಕೆಯಿಲ್ಲದವರು ಹೀಗೆ ಮಾಡಿ!: ನಮಗೆ ಗ್ರಹಣದ ಬಗ್ಗೆ ನಂಬಿಕೆಯಿಲ್ಲ. ಇವೆಲ್ಲವನ್ನೂ ನಂಬಲು ನಾವು ಸಿದ್ಧವಿಲ್ಲ ಎನ್ನುವವರೂ ಇದ್ದಾರೆ. ಅಂಥವರು ಆಕಾಶದಲ್ಲಿ ನಡೆಯುವ ವಿಸ್ಮಯಕ್ಕೆ ಸಾಕ್ಷಿಯಾಗಲು ವಿಪರೀತ ಭಯವೂ ಬೇಕಾಗಿಲ್ಲ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟ ವಿಚಾರ. ನಭದ ಕೌತುಕ ಕಣ್ತುಂಬಿಸಿಕೊಳ್ಳುವ ಉತ್ಸಾಹವಿದ್ದರೆ ದಿಗಂತದತ್ತ ದೃಷ್ಟಿ ಹಾಯಿಸಿ. ದೋಷ, ಸಮಸ್ಯೆ, ಕಂಟಕ ಎಲ್ಲವನ್ನೂ ಮರೆತು ಬಾನಂಗಳದ ಚಂದಮಾಮನ ಇನ್ನೊಂದು ಅವತಾರವನ್ನು ನೋಡಿ ಎಂಜಾಯ್ ಮಾಡಿ.

     

  • ಚಂದ್ರಗ್ರಹಣ: ರಾಜ್ಯ ರಾಜಕೀಯದಲ್ಲಿ ಯಾರಿಗೆ ಹಿಡಿಯಲಿದೆ ಗ್ರಹಣ?

    ಚಂದ್ರಗ್ರಹಣ: ರಾಜ್ಯ ರಾಜಕೀಯದಲ್ಲಿ ಯಾರಿಗೆ ಹಿಡಿಯಲಿದೆ ಗ್ರಹಣ?

    – ಮಿಡ್ ನೈಟ್ ಗ್ರಹಣ ಬುಡಮೇಲಾಗುತ್ತಾ ರಾಜ್ಯ ರಾಜಕಾರಣ!
    – ರಾಜಕೀಯದಂಗಳದಲ್ಲೀಗ ‘ಚಂದ್ರ ಗ್ರಹಣ’ದ್ದೇ ಲೆಕ್ಕಾಚಾರ

    ಬೆಂಗಳೂರು: ನಭೋಮಂಡಲದಲ್ಲಿ ಗೋಚರಿಸುವ ವಿಸ್ಮಯ ಖಗೋಳ ತಜ್ಞರ ಪಾಲಿಗೆ ಸೊಬಗು. ನೆರಳು ಬೆಳಕಿನ ಚಮತ್ಕಾರ. ಆದರೆ ಜನಸಾಮಾನ್ಯರ ಪಾಲಿಗೆ ಗ್ರಹಣ ‘ಗ್ರಹಚಾರ’ ಎನ್ನುವುದು ಜ್ಯೋತಿಷಿಗಳು ಹೇಳುವ ಭವಿಷ್ಯವಾಣಿ. ಅದರಲ್ಲೂ ಈ ಬಾರಿಯ ದೀರ್ಘ ಕಾಲದ ಪೌರ್ಣಿಮೆಯ ಗ್ರಹಣ ನಾನಾ ಪರಿಣಾಮ, ಗಂಡಾಂತರ ತಂದೊಡ್ಡಲಿದೆ ಎಂದಿರುವ ಜೋತಿಷಿಗಳ ಭವಿಷ್ಯ ಜನರನ್ನು ನಡುಗಿಸಿದೆ. ಕೇತುಗ್ರಸ್ಥ ಚಂದ್ರಗ್ರಹಣವಾದ ಕಾರಣ ರವಿಯ ಬೆಳಕು ಬೀಳದೇ ಚಂದ್ರ ದುರ್ಬಲನಾಗುತ್ತಾನೆ. ಅಮಾವಾಸ್ಯೆಯ ನಂತ್ರ ಪೌರ್ಣಮಿಯಲ್ಲಿ ಕಂಗೊಳಿಸುವ ಚಂದ್ರ ಮಂಕಾಗಾಲಿದ್ದಾನೆ. ಬೆರಗಿನಿಂದ ಪ್ರಕಾಶಮಾನವಾಗುವ ಚಂದ್ರನ ಶಕ್ತಿಯನ್ನು ಕೇತು ಮಂಕಾಗಿಸುವಾಗ, ಇದರ ಪರಿಣಾಮ ಎಲ್ಲರ ಮೇಲಾಗಲಿದೆಯಂತೆ. ಇದಕ್ಕಿಂತ ಮುಖ್ಯವಾಗಿ ಈ ಬಾರಿಯ ಗ್ರಹಣದ ವಕ್ರದೃಷ್ಟಿ ರಾಜ್ಯ ರಾಜಕೀಯದ ಮೇಲಾಗಲಿದೆ ಎಂಬ ಎಂಬ ಜ್ಯೋತಿಷಿಗಳ ಭವಿಷ್ಯವಾಣಿಯಿಂದ ರಾಜಕೀಯ ಮುಖಂಡರು ನಡುಗಿ ಹೋಗಿದ್ದಾರೆ. ಹೀಗಾಗಿ ಸದ್ಯ ರಾಜಕೀಯದಂಗಳದಲ್ಲೀಗ ಗ್ರಹಣ ಟೆನ್ಶನ್ ಶುರುವಾಗಿದೆ. ನಾವ್ಯಾವುದನ್ನೂ ನಂಬಲ್ಲ ಅಂತಿರೋರೆಲ್ಲಾ ಒಳಗೊಳಗೇ ಎಲ್ಲಾ ಲೆಕ್ಕಾಚಾರ ಹಾಕಲು ಶುರು ಮಾಡಿ, ನಮಗೆ ಕಂಟಕವೇನೂ ಆಗದಿರಲಿ ಎಂದು ದೇವರ ಮೊರೆ ಹೋಗಲು ಸಜ್ಜಾಗುತ್ತಿದ್ದಾರೆ.

    ಜುಲೈ 27ರ ಗ್ರಹಣದಿಂದ ರಾಜ್ಯ ರಾಜಕೀಯದಲ್ಲಿ ಏನೆಲ್ಲ ಬದಲಾವಣೆಯಾಗಲಿದೆ, ಚಂದ್ರನ ಕರಿಛಾಯೆ ಯಾರ ಮೇಲೆ ಬೀಳಲಿದೆ ಎನ್ನುವುದೇ ಈಗ ಸದ್ಯದ ಮಾತು. ವಿಚಿತ್ರ ಅಂದ್ರೆ ಈ ಬಾರಿಯ ಚಂದ್ರಗ್ರಹಣ ಕರ್ನಾಟಕ ರಾಜಕೀಯಕ್ಕೂ ತಟ್ಟುತ್ತಾ ಎಂಬ ಕುತೂಹಲವಿದೆ. ಚಂದ್ರಗ್ರಹಣದ ವಕ್ರದೃಷ್ಟಿ ಇಬ್ಬರು ಶತ್ರುಗಳಲ್ಲಿ ಒಬ್ಬರಿಗೆ ದುರದೃಷ್ಟವಾದ್ರೇ, ಇನ್ನೊಬ್ಬರಿಗೆ ಭಾಗ್ಯದ ಬಾಗಿಲು ತೆರೆಯಲಿದೆ ಎನ್ನುವುದು ರಾಜ್ಯದ ಜ್ಯೋತಿಷಿಗಳ ಲೆಕ್ಕಾಚಾರ.

    ಮೈತ್ರಿ ಸರ್ಕಾರಕ್ಕೇನಾಗುತ್ತೆ?: ಮೊದಲೇ ತೊಯ್ದಾಟದಲ್ಲಿ ಸಿಲುಕಿದಂತಿರುವ ಸಮ್ಮಿಶ್ರ ಸರ್ಕಾರಕ್ಕೆ ಈ ಬಾರಿ ಗ್ರಹಣ ಗ್ರಹಚಾರದ ಎಫೆಕ್ಟ್ ಜೋರಾಗಿ ತಟ್ಟಲಿದೆಯಂತೆ. ಗಟ್ಟಿ ಭಾಂದವ್ಯವನ್ನೇ ಕೆಡವಿ ಹಾಕುವ ಕ್ಷುದ್ರ ಗ್ರಹಣಕ್ಕೆ ಡೋಲಾಯಮಾನ ಸ್ಥಿತಿಯಲ್ಲಿರುವ ಸರ್ಕಾರ ಯಾವ ಲೆಕ್ಕ, ಸೂರ್ಯ ಚಂದ್ರನನ್ನೇ ಬೆಂಬಿಡದೇ ಕಾಡುವ ಕೇತು ಅಧಿಕಾರದಲ್ಲಿರುವವರನ್ನು ಬೆಂಬಿಡದೇ ಕಾಡಲಿದ್ದಾನೆ ಅನ್ನೋದು ಜ್ಯೋತಿಷಿಗಳ ಮಾತು. ಅದೆಷ್ಟೇ ಒಗ್ಗಟ್ಟಿನಲ್ಲಿ ಹೋದರೂ ಗ್ರಹಣದ ಎಫೆಕ್ಟ್ ನಿಂದ ಜಗಳ, ಕಿರಿಕಿರಿ ನಿರಂತರವಾಗಿರುತ್ತೆ. ಆಡಳಿತ ಪಕ್ಷದಲ್ಲಿ ಸಮನ್ವಯ ಅನ್ನೋದು ಸಾಧ್ಯವಾಗೋದೆ ಇಲ್ವಂತೆ. ಒಳಜಗಳ, ಮಾನಸಿಕ ತೊಳಲಾಟ, ಕ್ಷೋಭೆಗಳಿಂದ ಸರ್ಕಾರದ ಬುಡ ಅಲುಗಾಡಲಿದೆ ಎನ್ನುವುದು ಬೆಂಗಳೂರಿನ ಗವಿಗಂಗಾಧರ ಕ್ಷೇತ್ರದ ಅರ್ಚಕರು ಹಾಗೂ ಖ್ಯಾತ ಜ್ಯೋತಿಷಿಗಳಾದ ಸೋಮಸುಂದರ ದೀಕ್ಷಿತ್ ಅಭಿಪ್ರಾಯ.

    ಚಂದ್ರಗ್ರಹಣಕ್ಕೆ ಬೆದರಿದ ರಾಜಾಹುಲಿ!: ಚಂದ್ರಗ್ರಹಣದ ಭೀತಿಗೆ ಬೆದರಿರುವ ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಸಿಎಂ ಯಡಿಯೂರಪ್ಪ ಬಹಿರಂಗವಾಗಿ ಚಂದ್ರಗ್ರಹಣದ ಸಂದರ್ಭದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಬೇಡಿ ಅಂತಾ ಬಿಜೆಪಿ ಕಾರ್ಯಕರ್ತರಿಗೆ ಸೂಚನೆಯನ್ನು ಬಹಿರಂಗವಾಗಿಯೇ ಕೊಟ್ಟಿದ್ದಾರೆ. ಇದರ ಜೊತೆಗೆ ಗ್ರಹಣದಿಂದ ಜನರನ್ನು ಪಾರು ಮಾಡಲು ಪೂಜೆ ಪ್ರಾರ್ಥನೆಗಳನ್ನು ಮಾಡಿ ಅಂತಾ ಯಡಿಯೂರಪ್ಪ ಕರೆ ನೀಡಿದ್ದಾರೆ. ಅಷ್ಟೇ ಯಾಕೆ ಗ್ರಹಣದ ಭೀತಿಗೆ ರಾಜ್ಯ ಪ್ರವಾಸವನ್ನು ಕೂಡ ಮೊಟಕುಗೊಳಿಸಿರುವ ಯಡಿಯೂರಪ್ಪ, ಗ್ರಹಣಕ್ಕೆ ತಾನೆಷ್ಟು ಬೆದರಿದ್ದೇನೆ ಅನ್ನೋದನ್ನು ತೋರಿಸಿದ್ದಾರೆ. ಗ್ರಹಣದ ಬಳಿಕವಷ್ಟೇ ರಾಜ್ಯಪ್ರವಾಸ ನಡೆಸೋದಾಗಿ ಬಿಎಸ್‍ವೈ ಹೇಳಿದ್ದು ಈಗಾಗಲೇ ಗ್ರಹಣ ದೋಷ ನಿವಾರಣೆಗಾಗಿ ದೇವರ ಮೊರೆ ಹೋಗಿದ್ದಾರೆ.

    ದೇವೇಗೌಡರ ಕುಟುಂಬದಿಂದ ಪೂಜೆ: ದೇವೇಗೌಡ್ರ ಕುಟುಂಬಕ್ಕಂತೂ ಮೊದಲೇ ದೇವರು, ಜ್ಯೋತಿಷ್ಯ ಅಂತಾ ನಂಬಿಕೆ ಜಾಸ್ತಿ. ರಾಜ್ಯ ರಾಜಕೀಯದಲ್ಲಿ ಅಸ್ಥಿರತೆಯ ಬಗ್ಗೆ ಭವಿಷ್ಯವಾಣಿಗಳು ಕೇಳಿ ಬರುತ್ತಿದ್ದಂತೆ ದೇವೇಗೌಡರ ಕುಟುಂಬ ಗ್ರಹಣ ದೋಷ ನಿವಾರಣೆಗಾಗಿ ಮಹಾ ಪೂಜೆ ನಡೆಸಲು ನಿರ್ಧರಿಸಿದ್ದಾರೆ. ಸುದೀರ್ಘ ಗ್ರಹಣ ಮುಗಿದ ಬೆಳಗಿನ ಜಾವ ಗ್ರಹಣ ದೋಷ ನಿವಾರಣೆಗಾಗಿ ಗವಿ ಗಂಗಾಧರ ದೇಗುಲದಲ್ಲಿ ಶಿವಾರಾಧನೆ, ಹೋಮ, ಯಜ್ಞ ಯಾಗಗಳನ್ನು ನಡೆಸಲಿದ್ದಾರೆ ಎಂದು ಸೋಮಸುಂದರ ದೀಕ್ಷಿತ್ ಹೇಳಿದ್ದಾರೆ.

    ಪ್ರಧಾನಿ ಮೋದಿಗೂ ಕಾಡಲಿದ್ಯಾ ಗ್ರಹಣ ಕಂಟಕ!: ರಾಜ್ಯ ರಾಜಕೀಯದಲ್ಲಿ ಮಾತ್ರವಲ್ಲದೇ ಪ್ರಧಾನಿ ಮೋದಿಗೂ ಗ್ರಹಣ ಕಂಟಕದ ಕರಿನೆರಳ ಛಾಯೆ ಬೀಳಲಿದೆ ಎಂದು ಮಗದೊಂದು ಬೆಚ್ಚಿಬೀಳಿಸುವ ಭವಿಷ್ಯವನ್ನು ಜ್ಯೋತಿಷಿಗಳು ನುಡಿದಿದ್ದಾರೆ. ಈ ಹಿಂದೆ ರಕ್ತ ಚಂದ್ರ ಗ್ರಹಣದ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ, ಹಿಂಸಾಚಾರ ಹೆಚ್ಚಾಗಿ ಕೇಂದ್ರಕ್ಕೆ ತಲೆನೋವಾಗಿತ್ತು. ಈ ಬಾರಿಯೂ ಇಂತಹ ಅನಿರೀಕ್ಷಿತ ತೊಂದರೆಗಳು ಎದುರಾಗಲಿದೆಯಂತೆ. ದೇಶಕ್ಕೆ ಜಲಪ್ರಳಯ, ಕಂಟಕ ಕಾಡಲಿದ್ದು ಸರ್ಕಾರದ ನೆಮ್ಮದಿ ಕಸಿದುಕೊಳ್ಳಲಿದೆ. ಮುಂಬರುವ ಲೋಕಸಭಾ ಚುನಾವಣಾ ಕದನದ ದಿಕ್ಕನ್ನೇ ಬದಲಿಸುತ್ತಾ ಅನ್ನೋ ವಿಶ್ಲೇಷಣೆ ಕೂಡಿ ಕೇಳಿ ಬರುತ್ತಿದೆ.

    ರಾಜಕೀಯ ಅಖಾಡದ ಶತ್ರುಗಳಿಗೆ ಲಾಭ – ನಷ್ಟದ ಗ್ರಹಣ!: ಇವೆಲ್ಲದರ ಮಧ್ಯೆ ಕುತೂಹಲ ಮೂಡಿಸಿದ್ದು ಅಂದ್ರೆ ರಾಜಕೀಯ ಅಖಾಡದ ಇಬ್ಬರೂ ಘಟಾನುಘಟಿಗಳಲ್ಲಿ ಒಬ್ಬರಿಗೆ ಗ್ರಹಣ ಅದೃಷ್ಟದ ಬಾಗಿಲು ತೆರೆಯುತ್ತದಂತೆ. ಇನ್ನೊಬ್ಬರಿಗೆ ಎರಡು ದೋಣಿಯ ಪಯಣದ ಅಸಲಿ ಸಂಕಷ್ಟ ಶುರುವಾಗಲಿದೆ ಅನ್ನೋ ಭವಿಷ್ಯಗಳು ಕೇಳಿದೆ. ಯಡಿಯೂರಪ್ಪನವರದ್ದು ವೃಶ್ಚಿಕ ರಾಶಿ. ಈ ರಾಶಿಯವರಿಗೆ ಗ್ರಹಣದ ನಂತರ ಅದೃಷ್ಟ ಖುಲಾಯಿಸಲಿದೆ ಎಂಬ ಲೆಕ್ಕಾಚಾರವನ್ನು ಕೆಲ ಜ್ಯೋತಿಷಿಗಳು ಹಾಕಿದ್ದಾರೆ. ಇದು ರಾಜಕೀಯದಲ್ಲಿ ಹೊಸ ಟ್ವಿಸ್ಟ್ ಮೂಡಿಸಬಹುದಾ ಎಂಬ ಅನುಮಾನವೂ ಇದೆ. ಅದೃಷ್ಟ – ನತದೃಷ್ಟ, ಲಾಭ ನಷ್ಟ, ಹೀಗೆ ಜುಲೈ 27 ರ ಚಂದಮಾಮನ ಗ್ರಹಣದ ಒಳಿತು ಕೆಡುಕುಗಳ ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ.

     

  • ಜುಲೈ 27ರ ಚಂದ್ರಗ್ರಹಣ – ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ?

    ಜುಲೈ 27ರ ಚಂದ್ರಗ್ರಹಣ – ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ?

    – ಗ್ರಹಣ ದಿನ ಏನ್ಮಾಡ್ಬೇಕು ಎಂದು ವಿವರಿಸಿದ್ದಾರೆ ಜ್ಯೋತಿಷಿಗಳು
    – ನಂಬಿಕೆಯಿಲ್ಲದವರು ಆಕಾಶದ ವಿಸ್ಮಯ ನೋಡಿ ಎಂಜಾಯ್ ಮಾಡಿ

    ಬೆಂಗಳೂರು: ಬಾನಂಗಳದ ಚಂದಿರ ಹುಣ್ಣಿಮೆಯ ದಿನವೂ ಮಂಕಾಗಲಿದ್ದಾನೆ. ಬಾಹ್ಯಕಾಶದಲ್ಲಿ ನಡೆಯುವ ವಿಸ್ಮಯ ಮನುಕುಲದ ಮೇಲೆ ಬೀರುವ ಪ್ರಭಾವ ಅಷ್ಟೇ ರೌದ್ರವಂತೆ. ಜುಲೈ 27 ರ ಹುಣ್ಣಿಮೆಯ ರಾತ್ರಿ 11.54 ರಿಂದ 3.40 ರವೆಗೆ ಸಂಭವಿಸುವ ಈ ಶತಮಾನದ ಸುದೀರ್ಘ ಚಂದ್ರಗ್ರಹಣ ಯಾವ ರಾಶಿಗಳಿಗೆ ಕೆಡುಕನ್ನುಂಟು ಮಾಡಲಿದೆ, ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ. ಗ್ರಹಣ ದೋಷದಿಂದ ತಪ್ಪಿಸಿಕೊಳ್ಳುವ ಮಾರ್ಗ ಹೇಗೆ..? ಜ್ಯೋತಿಷಿಗಳು ಏನ್ ಹೇಳ್ತಾರೆ ಹುಣ್ಣಿಮೆ ಚಂದಿರನ ರಾಶಿಗಳ ಜೊತೆಗಿನ ಆಟ ಹೇಗಿರುತ್ತದೆ ಎನ್ನುವುದನ್ನು ಖ್ಯಾತ ಜ್ಯೋತಿಷಿಗಳು ವಿವರಿಸಿದ್ದಾರೆ.

    ಹುಣ್ಣಿಮೆ ಚಂದಿರನ ವಕ್ರದೃಷ್ಟಿ ಯಾವ ರಾಶಿಯ ಮೇಲೆ ಬೀರಲಿದೆ?: ವಿಳಂಬಿ ನಾಮ ಸಂವತ್ಸರದ ಆಷಾಢ ಶುಕ್ಲ ಹುಣ್ಣಿಮೆಯಂದು ಉತ್ತರಾಷಾಢ ಮತ್ತು ಶ್ರವಣ ನಕ್ಷತ್ರಗಳಲ್ಲಿ ಮಕರ ರಾಶಿ, ಮೇಷ, ವೃಷಭ ಮತ್ತು ಮಿಥುನ ಲಗ್ನದಲ್ಲಿ ಈ ಚಂದ್ರಗ್ರಹಣ ಸಂಭವಿಸಲಿದೆ. ಇದು ನಾಲ್ಕು ರಾಶಿಗಳ ಮೇಲೆ ತೀರಾ ಕೆಡುಕು, ನಾಲ್ಕು ರಾಶಿಗಳಿಗೆ ಮಿಶ್ರ ಫಲ ಹಾಗೂ ನಾಲ್ಕು ರಾಶಿಗಳಿಗೆ ಕೊಂಚ ಶುಭದಾಯಕವಾಗಿದೆ. ಆದ್ರೇ ಇದು ಭೂಮಂಡಲವನ್ನೇ ಅಲುಗಾಡಿಸುವಂತೆ ಮಾಡುವ ಚಂದಿರನ ಹೊಳಪನ್ನು ಮರೆಮಾಚುವ ಈ ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದ್ದು ಬಹುತೇಕ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

    ಚಂದ್ರಗ್ರಹಣ ಯಾವ ರಾಶಿಗಳ ಮೇಲೆ ಏನು ಪ್ರಭಾವ?: ಈ ಚಂದ್ರಗ್ರಹಣ ನಕ್ಷತ್ರ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು, ಯಾವ ರಾಶಿಯವರಿಗೆ ಚಂದ್ರನ ಪ್ರಭಾವ ಇರುತ್ತೋ ಅವ್ರಿಗೆ ಕೆಡುಕು, ಚಿಂತೆ, ಅನಾರೋಗ್ಯ, ಮಾನಹಾನಿ ಸೇರಿದಂತೆ ನಾನಾ ಕಂಟಕ ತಲೆದೋರಲಿದೆ ಅಂತಾ ಖ್ಯಾತ ಜ್ಯೋತಿಷಿಗಳಾದ ಸೋಮಸುಂದರ ದೀಕ್ಷಿತ್ ಹೇಳಿದ್ದಾರೆ. ಮುಖ್ಯವಾಗಿ ಉತ್ತರಾಷಾಢ, ಕೃತಿಕಾ, ಉತ್ತರ, ಶ್ರವಣ, ರೋಹಿಣಿ, ಹಸ್ತ ನಕ್ಷತ್ರದವರಿಗೆ ತೀವ್ರ ತೊಂದರೆ ಕಾಡಲಿದ್ದು, ರಾಶಿ ಪ್ರಕಾರ ಮಕರ, ಧನಸ್ಸು, ವೃಷಭ, ಸಿಂಹ ರಾಶಿಯವರಿಗೆ ದೋಷದ ಫಲ ಹೆಚ್ಚಾಗಿ ಆಗುತ್ತದೆ. ಕೆಲವು ರಾಶಿಗೆ ಕೆಡುಕು ಮಾಡುವ ಈ ಚಂದ್ರಗ್ರಹಣ ವೃಶ್ಚಿಕ, ಮೀನ, ತುಲಾ ರಾಶಿಯವರಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ ಎನ್ನುವುದು ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರವಾದ್ರೂ ದ್ವಾದಶ ರಾಶಿಗಳಿಗೂ ಕಂಟಕ ಎದುರಾಗೋದ್ರಿಂದ ಎಲ್ಲರಿಗೂ ಗ್ರಹಣ ದೋಷ ಎದುರಾಗಲಿದೆ ಎಂದು ಅವರು ಹೇಳಿದ್ದಾರೆ.

    ಆನ್ ಲೈನ್ ಬುಕ್ಕಿಂಗ್ ಶುರು!: ಚಂದ್ರಗ್ರಹಣದ ನೆರಳು ಬೀಳುವ ಸೂಚನೆ ಸಿಕ್ಕಾಗ ಮನುಷ್ಯ ಜೀವ ತಲ್ಲಣಿಸುತ್ತೆ. ಈ ಗ್ರಹಣ ದೋಷದಿಂದ ಪಾರಾಗುವ ಬಗೆ ಹೇಗೆ? ಬದುಕಿನ ಗಂಡಾಂತರ ನಿವಾರಣೆಯಾಗಲು ಏನು ಮಾಡಬೇಕು ಅನ್ನೋದು ಪ್ರತಿಯೊಬ್ಬರ ಪ್ರಶ್ನೆ. ಖಂಡಿತಾ ಇದಕ್ಕೆಲ್ಲ ಮಾರ್ಗೋಪಾಯಗಳಿವೆ. ಗ್ರಹಣ ದೋಷ ನಿವಾರಣೆಗಾಗಿ ಆಯಾಯ ರಾಶಿ ನಕ್ಷತ್ರಗಳ ದೋಷ ನಿವಾರಣೆಗಾಗಿ ದೇಗುಲಗಳಲ್ಲಿ ಪೂಜೆ ಪುನಸ್ಕಾರಕ್ಕೆ ಸಿದ್ಧತೆಗಳು ಈಗಾಗಲೇ ನಡೆಯುತ್ತಿದೆ. ಈಗಾಗಲೇ ಬಹುತೇಕ ದೇಗುಲಗಳ ಮುಂದೆ ಗ್ರಹಣ ದೋಷ ನಿವಾರಣಾ ಪೂಜೆಯ ವಿವರದ ಬ್ಯಾನರ್ ಬಿದ್ದಾಗಿದೆ. ಅಷ್ಟೇ ಯಾಕೆ ಕೆಲ ದೇಗುಲದಲ್ಲಿ ಗ್ರಹಣ ದೋಷ ಪೂಜೆ ನಿವಾರಣೆಗಾಗಿ ಅನ್ ಲೈನ್ ಬುಕ್ಕಿಂಗ್ ಗೆ ಜನ ಮುಗಿಬೀಳುತ್ತಿದ್ದಾರೆ ಎಂದು ಉಮಾಮಹೇಶ್ವರಿ ದೇವಸ್ಥಾನದ ಸೂರ್ಯಪ್ರಕಾಶ ಗುರೂಜಿ ಹೇಳಿದ್ದಾರೆ.

    ವಿಚಿತ್ರ ಅಂದ್ರೆ ಮನುಕುಲಕ್ಕೆ ಮಾತ್ರವಲ್ಲ, ದೇಗುಲದ ಗರ್ಭಗುಡಿಯೊಳಗೂ ದೇವರಿಗೆ ಗ್ರಹಣದ ಸಂದರ್ಭದಲ್ಲಿ ಬಂಧನ ಭೀತಿ. ದರ್ಭೆಯಲ್ಲಿ ದೇವರನ್ನು ಬಂಧಿಸಿಡಲಾಗುತ್ತೆ. ಆದರೆ ಜನರ ವಿಪರೀತ ಭಯದಿಂದಾಗಿ ಕೆಲ ದೇಗುಲದಲ್ಲಿ ಜುಲೈ 27ರಲ್ಲಿ ಮಿಡ್ ನೈಟ್ ಪೂಜೆ ಪ್ರಾರ್ಥನೆಗಳು ಯಾಗ ಹೋಮಗಳು ಕೂಡ ನಡೆಯಲಿದೆ.

    ಗ್ರಹಣ ದೋಷ ನಿವಾರಣೆ ಹೇಗೆ?: ಗ್ರಹಣ ದೋಷ ನಿವಾರಣೆಗಾಗಿ ಜುಲೈ 28ರ ಬೆಳಗಿನ ಜಾವ ಎಲ್ಲಾ ದೇಗುಲದಲ್ಲೂ ಹೋಮ ಹವನ ನಡೆಯಲಿದೆ. ದೇವರ ಜಪ ಪೂಜೆಯ ಜೊತೆಗೆ ಚಂದ್ರಗ್ರಹ ಶಾಂತಿಗೆ, ಅಕ್ಕಿ, ಬಿಳಿವಸ್ತ್ರ, ಹಾಲು ದಾನ, ಉಪ್ಪು ಹಾಕದ ಮೊಸರನ್ನ ದಾನ, ಶ್ರೀ ದುರ್ಗಾಸ್ತುತಿ ಹಾಗೂ ಕೇತುಗ್ರಹ ಶಾಂತಿಗೆ ಹುರುಳಿಕಾಳು, ಚಿತ್ರವಸ್ತ್ರ, ಶ್ರೀ ಗಣೇಶನಿಗೆ ಕೆಂಪು ಕಣಿಗಲೆ ಹೂವು ಸಮರ್ಪಣೆ, ಮೃತ್ಯುಂಜಯ ಜಪ ಮಾಡಬೇಕು ಎಂದು ಜ್ಯೋತಿಷಿಗಳು ಸಲಹೆ ನೀಡಿದ್ದಾರೆ.

    ಗ್ರಹಣದ ದಿನ ಊಟ, ತಿಂಡಿ ಹೇಗೆ?: ಗ್ರಹಣದ ದಿನ ಮಧ್ಯಾಹ್ನ 2.30ರ ತನಕ ಭೋಜನ ಮಾಡಬಹುದು. ಅನಾರೋಗ್ಯ ಇರುವವರು ರಾತ್ರಿ 7.30ರೊಳಗೆ ಭೋಜನ ಮುಗಿಸುವುದು ಒಳ್ಳೆಯದು ಅನ್ನುವ ಸಲಹೆಯನ್ನು ನೀಡಿದ್ದಾರೆ. ಗ್ರಹಣದ ಸಂದರ್ಭದಲ್ಲಿ ಭೋಜನ ನಿಷಿದ್ಧ. ಗ್ರಹಣದ ಬಳಿಕ ತಣ್ಣೀರ ಸ್ನಾನವನ್ನು ಮಾಡಿ ಶಿವನ ದರ್ಶನ ಪಡೆದರೆ ಗ್ರಹಣ ದೋಷ ನಿವಾರಣೆಯಾಗಲಿದೆ ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ. ಇನ್ನು ಮನುಷ್ಯರಿಗೆ ಮಾತ್ರವಲ್ಲ ದೇಗುಲದಲ್ಲೂ ಗ್ರಹಣ ದೋಷ ನಿವಾರಣೆಗಾಗಿ ದೇವರಿಗೆ ದರ್ಭೆಯ ಪೂಜೆಯ ಬಳಿಕ ಸಂಪ್ರೋಕ್ಷಣಾ ವಿಧಿ ವಿಧಾನ ನಡೆಯಲಿದ್ದು, ಕ್ಷುದ್ರಗೊಂಡ ದೇವರನ್ನು ತಣಿಸಲು ಎಳನೀರಿನ ಅಭಿಷೇಕ, ಕ್ಷೀರಾಭಿಷೇಕಗಳು ನಡೆಯಲಿದೆ. ಇಡೀ ದೇಗುಲದ ಪ್ರಾಂಗಣ, ಗರ್ಭಗುಡಿಯನ್ನು ಶುದ್ಧೀಕರಿಸಲಾಗುತ್ತೆ. ಹೀಗೆ ಗ್ರಹಣದ ದೋಷ ನಿವಾರಣೆಗೆ ನಾನಾ ಮಾರ್ಗಗಳು ಇವೆ.

    ನಂಬಿಕೆಯಿಲ್ಲದವರು ಹೀಗೆ ಮಾಡಿ!: ನಮಗೆ ಗ್ರಹಣದ ಬಗ್ಗೆ ನಂಬಿಕೆಯಿಲ್ಲ. ಇವೆಲ್ಲವನ್ನೂ ನಂಬಲು ನಾವು ಸಿದ್ಧವಿಲ್ಲ ಎನ್ನುವವರೂ ಇದ್ದಾರೆ. ಅಂಥವರು ಆಕಾಶದಲ್ಲಿ ನಡೆಯುವ ವಿಸ್ಮಯಕ್ಕೆ ಸಾಕ್ಷಿಯಾಗಲು ವಿಪರೀತ ಭಯವೂ ಬೇಕಾಗಿಲ್ಲ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟ ವಿಚಾರ. ನಭದ ಕೌತುಕ ಕಣ್ತುಂಬಿಸಿಕೊಳ್ಳುವ ಉತ್ಸಾಹವಿದ್ದರೆ ದಿಗಂತದತ್ತ ದೃಷ್ಟಿ ಹಾಯಿಸಿ. ದೋಷ, ಸಮಸ್ಯೆ, ಕಂಟಕ ಎಲ್ಲವನ್ನೂ ಮರೆತು ಬಾನಂಗಳದ ಚಂದಮಾಮನ ಇನ್ನೊಂದು ಅವತಾರವನ್ನು ನೋಡಿ ಎಂಜಾಯ್ ಮಾಡಿ.