Tag: ಜ್ಯೋತಿರಾಜ್

  • ಏಂಜಲ್ ಫಾಲ್ಸ್ ಸಾಧನೆಗೆ ಅಡ್ಡಿಯಾಯ್ತು ಜ್ಯೋತಿರಾಜ್ ತೂಕ

    ಏಂಜಲ್ ಫಾಲ್ಸ್ ಸಾಧನೆಗೆ ಅಡ್ಡಿಯಾಯ್ತು ಜ್ಯೋತಿರಾಜ್ ತೂಕ

    ಚಿತ್ರದುರ್ಗ: ಕನಸು, ಕೊನೆಯ ದಿನ ಎಂಬ ಮಾತುಗಳ ಮೂಲಕ ಬಾರಿ ಸುದ್ದಿ ಮಾಡಿದ್ದ ಜ್ಯೋತಿರಾಜ್ ಫೆಬ್ರವರಿ 26, 27ರಂದು ಅಮೆರಿಕದ ಅತಿ ಎತ್ತರ ಏಂಜಲ್ ಫಾಲ್ಸ್ ಹತ್ತಿ ಅಪ್ರತಿಮ ಸಾಧನೆ ಮಾಡುವ ತವಕದಲ್ಲಿದ್ದರು. ಆದರೆ ಜ್ಯೋತಿರಾಜ್ ಅವರು ಏಂಜಲ್ ಫಾಲ್ಸ್ ಹತ್ತಲಿಲ್ಲ.

    ಜ್ಯೋತಿರಾಜ್ ಅತಿ ಎತ್ತರದ ಫಾಲ್ಸ್ ಹತ್ತುತ್ತಿರುವುದನ್ನು ಕೇಳಿ ಚಿತ್ರದುರ್ಗದ ಜನರಲ್ಲದೇ ದೇಶದ ವಿವಿಧೆಡೆಯಲ್ಲಿರುವ ಅವರ ಅಭಿಮಾನಿಗಳು ಅವರಿಗೆ ಹಲವು ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಮೂಲಕ ಶುಭ ಕೋರಿದರು. ಅಲ್ಲದೆ ಕೆಲವರು ಈಗಾಗಲೇ ಕೋತಿರಾಜ್ ಏಂಜಲ್ ಫಾಲ್ಸ್ ಏರಿ ಅಪ್ರತಿಮ ಸಾಧನೆಗೈದಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ವಾಟ್ಸಪ್, ಫೇಸ್‍ಬುಕ್‍ಗಳಲ್ಲಿ ಹಾಕಿ ಭರ್ಜರಿ ಚರ್ಚೆಗೆ ಆಸ್ಪದವಾಗಿತ್ತು. ಇದನ್ನೂ ಓದಿ: ಫೆಬ್ರವರಿ 26, 27 ನನ್ನ ಕೊನೆಯ ದಿನ – ಅಪಾಯಕಾರಿ ಸಾಹಸಕ್ಕೆ ಮುಂದಾದ ಕೋತಿರಾಜ್

    ಕಳೆದ ಒಂದೆರಡು ದಿನಗಳಿಂದ ಕೋತಿರಾಜ್ ಜೋಗ್ ಫಾಲ್ಸ್ ಏರುತ್ತಿರುವ ವಿಡಿಯೋ ಹಾಗೂ ಫೋಟೋವನ್ನು ಪೋಸ್ಟ್ ಮಾಡಿ, ಅಮೆರಿಕದಲ್ಲಿರುವ ಏಂಜೆಲ್ ಫಾಲ್ಸ್ ಅನ್ನು ಇಂದು ಮತ್ತು ನಾಳೆ ಸ್ಪೈಡರ್ ವ್ಯಾನ್ ಏರಲಿದ್ದಾರೆ ಎಂಬ ಗಾಳಿ ಸುದ್ದಿ ಸಹ ಹರಡಿಸಿ ಜನರಲ್ಲಿ ಅಚ್ಚರಿ ಮೂಡಿಸುವ ಮೂಲಕ ಫೇಕ್ ಮಾಹಿತಿ ನೀಡಿದ್ದರು. ಆದರೆ ಅದೆಲ್ಲಾ ಸುಳ್ಳು ವದಂತಿಗಳೆಂದು ಜ್ಯೋತಿರಾಜ್ ಅವರ ಆಪ್ತ ಸ್ನೇಹಿತ ಬಸವರಾಜ್ ಸ್ಪಷ್ಟನೆ ನೀಡಿದ್ದಾರೆ.

    ಜ್ಯೋತಿರಾಜ್ ಅವರ ಸ್ನೇಹಿತ ಬಸವರಾಜ್ ಜೊತೆಗಿದ್ದಾರೆ. ಸದ್ಯ ಕೋತಿರಾಜ್ ತನ್ನ ದೇಹದ ತೂಕ 85 ಕೆಜಿ ಇದೆ. ಹೀಗಾಗಿ ಜ್ಯೋತಿರಾಜ್ ಅತಿ ಎತ್ತರದ ಏಂಜಲ್ ಫಾಲ್ಸ್ ಏರಲು ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಉತ್ತರಕನ್ನಡದಲ್ಲಿ ಆಯುರ್ವೇದಿಕ್ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ ಅವರು ಹೇಳಿದ ಫೆ. 26 ಹಾಗೂ 27ರಂದು ಆ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ವಾಪಸ್‍ ಬಂದು ಮಾಧ್ಯಮದೊಂದಿಗೆ ಸುದ್ದಿಗೋಷ್ಠಿ ನಡೆಸಿ ಏಪ್ರಿಲಿನಲ್ಲಿ ಈ ಸಾಧನೆಗೆ ತೆರಳಲಿದ್ದಾರೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದ ವೈರಲ್ ಸುದ್ದಿಗೆ ಬ್ರೇಕ್ ಬೀಳಬೇಕೆಂಬುದು ಜ್ಯೋತಿರಾಜ್ ಅವರ ಅಭಿಮಾನಿಗಳ ಕಳಕಳಿ ಮನವಿ.

  • ಸಾಧಕ ಕೋತಿರಾಜ್‍ಗೆ ಸರ್ಕಾರ ಕಲ್ಪಿಸುತ್ತಿಲ್ಲ ಮನೆ ಭಾಗ್ಯ!

    ಸಾಧಕ ಕೋತಿರಾಜ್‍ಗೆ ಸರ್ಕಾರ ಕಲ್ಪಿಸುತ್ತಿಲ್ಲ ಮನೆ ಭಾಗ್ಯ!

    ಚಿತ್ರದುರ್ಗ: ತನ್ನ ಜೀವದ ಹಂಗು ತೊರೆದು ಮತ್ತೊಬ್ಬರ ಜೀವರಕ್ಷಣೆ ಮಾಡುವ ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್‍ಗೆ ಕರ್ನಾಟಕ ಸರ್ಕಾರ ಈವರೆಗೆ ಮನೆ ಭಾಗ್ಯ ಕರುಣಿಸಿಲ್ಲ.

    ಸತತ ನಾಲ್ಕು ವರ್ಷಗಳಿಂದ ಆಶ್ರಯ ಯೋಜನೆಯಡಿ ಮನೆ ಕಲ್ಪಿಸುವಂತೆ ಚಿತ್ರದುರ್ಗದಲ್ಲಿ ಅರ್ಜಿ ಸಲ್ಲಿಸುತ್ತಿರುವ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್, ರಾಕ್ ಕ್ಲೈಮಿಂಗ್ ಹಾಗು ವಾಲ್ ಕ್ಲೈಮಿಂಗ್‍ನಲ್ಲಿ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಸಾಧಿಸಿದ್ದಾರೆ. ಆದ್ರೆ ಈ ಸಾಧಕನಿಗೆ ಸೂರು ಕಲ್ಪಿಸುವಲ್ಲಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಅಲ್ಲದೆ ಈ ಸಾಧಕನ ಚಾತುರ್ಯತೆ ಗಮನಿಸಿರೊ ತಮಿಳುನಾಡು ಸರ್ಕಾರ ಅವರ ರಾಜ್ಯಕ್ಕೆ ಬರುವಂತೆ ಮನವಿ ಮಾಡಿದ್ದು, ಬರುವ ಒಲಂಪಿಕ್ಸ್ ನಲ್ಲಿ ತಮಿಳುನಾಡಿನಿಂದ ಸ್ಪರ್ಧಿಸುವಂತೆ ಕೇಳಿದ್ದಾರೆ.

    ಆದ್ರೆ ಕೆಚ್ಚೆದೆಯ ಕನ್ನಡಭಿಮಾನ ತೋರಿರೋ ಕೋತಿರಾಜ್ ನಾನು ಹುಟ್ಟಿದ್ದು ತಮಿಳುನಾಡಾದರೂ, ನನ್ನನ್ನು ಸಾಕಿ ಬೆಳೆಸಿದ್ದು ಹೆಮ್ಮೆಯ ಕರ್ನಾಟಕ. ಹೀಗಾಗಿ ನಾನು ಕರುನಾಡಿಗಾಗಿ ಬದುಕುವೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಬರುವ ಒಲಂಪಿಕ್ಸ್ ನಲ್ಲಿ ಕರ್ನಾಟಕ ರಾಜ್ಯದಿಂದ ಪ್ರತಿನಿಧಿಸಿ ಪದಕ ಗೆದ್ದು ತರುವೆ, ಕರ್ನಾಟಕದ ಕೀರ್ತಿ ಪತಾಕೆ ವಿಶ್ವದೆಲ್ಲೆಡೆ ಮೊಳಗಿಸುವೆ ಎಂದು ಹೇಳಿದ್ದಾರೆ. ತನ್ನ ಕ್ರೀಡಾಭ್ಯಾಸದ ವೆಚ್ಚಕ್ಕಾಗಿ ತನ್ನ ಬಳಿಯಿದ್ದ ಓಮ್ನಿ ಕಾರೊಂದನ್ನು ಸಹ ಜ್ಯೋತಿರಾಜ್ ಮಾರಾಟ ಮಾಡಿದ್ದಾರೆ.

    ರಾಜ್ಯದ ಕೀರ್ತಿ ಪತಾಕೆಯನ್ನು ಉತ್ತುಂಗಕ್ಕೆ ಕೊಂಡೊಯ್ದಿರುವ ಸಾಧಕ ಜ್ಯೋತಿರಾಜ್ ಅವರಿಗೆ ಈಗ ವಾಸಿಸಲು ಮನೆಯಿಲ್ಲದೇ ಕಂಗಾಲಾಗಿದ್ದಾರೆ. ಎಷ್ಟೇ ಬಾರಿ ಮನೆ ಕಟ್ಟಿಸಿಕೊಡುವಂತೆ ಅರ್ಜಿ ಸಲ್ಲಿಸಿದರೂ ಜಿಲ್ಲಾಡಳಿತ ಹಾಗು ನಗರಸಭೆ ಯಾವುದಕ್ಕೂ ಪ್ರತಿಕ್ರಿಯಿಸದೆ ಕಣ್ಮುಚ್ಚಿ ಕುಳಿತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಲು ಜಾರಿ ಮಧುಗಿರಿ ಬೆಟ್ಟದಿಂದ 600 ಅಡಿ ಪ್ರಪಾತಕ್ಕೆ ಬಿದ್ದ ವ್ಯಕ್ತಿ ಶವವನ್ನು ಹೊರ ತೆಗೆದ ಕೋತಿರಾಜ್

    ಕಾಲು ಜಾರಿ ಮಧುಗಿರಿ ಬೆಟ್ಟದಿಂದ 600 ಅಡಿ ಪ್ರಪಾತಕ್ಕೆ ಬಿದ್ದ ವ್ಯಕ್ತಿ ಶವವನ್ನು ಹೊರ ತೆಗೆದ ಕೋತಿರಾಜ್

    ತುಮಕೂರು: ಜಿಲ್ಲೆ ಮಧುಗಿರಿಯ ಏಕಶಿಲಾ ಬೆಟ್ಟದಿಂದ ಬುಧವಾರ ವ್ಯಕ್ತಿಯೊಬ್ಬ ಕಾಲು ಜಾರಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದ. ಆತನ ಮೃತ ದೇಹ ಮೇಲೆ ತರಲು ಸಾಹಸವೇ ನಡೆದಿದ್ದು, ಇಂದು ಮಧ್ಯಾಹ್ನ ಸ್ಪೈಡರ್ ಮ್ಯಾನ್ ಖ್ಯಾತಿಯ ಚಿತ್ರದುರ್ಗದ ಜ್ಯೋತಿರಾಜ್ ಯಶಸ್ವಿಯಾಗಿ ಶವವನ್ನು ಮೇಲೆ ತಂದಿದ್ದಾರೆ.

    ಮಧುಗಿರಿ ತಾಲೂಕಿನ ತುಂಗೋಟಿ ಗ್ರಾಮದ ಹನುಮಂತರಾಯ (40) ಬೆಟ್ಟದಿಂದ ಕಾಲುಜಾರಿ ಬಿದ್ದಿದ್ದ ವ್ಯಕ್ತಿ. ಬುಧವಾರ ಬೆಟ್ಟ ಹತ್ತಿದ್ದ ಹನುಮಂತರಾಯ ಬಂಡೆಯ ಮೇಲಿದ್ದ ಪಾಚಿಯ ಮೇಲೆ ಕಾಲಿಟ್ಟಿದ್ದರು. ಇದರಿಂದಾಗಿ ಜಾರಿ 600 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದರು. ನಿನ್ನೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಎಷ್ಟೇ ಹರಸಾಹಪಟ್ಟರೂ ಮೃತ ದೇಹವನ್ನು ಮೇಲೆತ್ತಲು ಆಗಿರಲಿಲ್ಲ.

    ಕಳೆದ ಒಂದು ವಾರದಿಂದ ತುಂತುರು ಮಳೆ ಸುರಿಯುತ್ತಿದ್ದು, ಬಂಡೆಗಳ ಮೇಲೆ ಪಾಚಿ ಹೆಚ್ಚಾಗಿತ್ತು. ಬೆಟ್ಟ ಹತ್ತಿದ್ದ ಹನುಮಂತಪ್ಪ ಪಾಚಿಯ ಮೇಲೆ ಕಾಲು ಇಟ್ಟಿದ್ದು, ಜಾರಿ ಕೆಳಗೆ ಬಿದ್ದಿದ್ದು. ಈ ಕುರಿತು ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಮಧುಗಿರಿ ಟೌನ್ ಪೊಲೀಸರು 600 ಅಡಿ ಕೆಳಗಿಳಿದು ಮೃತ ದೇಹವನ್ನು ಮೇಲಕ್ಕೆ ತರಲು ಹರಸಾಹಸಪಟ್ಟರು ಆಗಲಿಲ್ಲ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಲಾಯಿತಾದರೂ, ಅವರು ಕೂಡ ಪ್ರಪಾತಕ್ಕೆ ಇಳಿಯುವ ಸಾಹಸಕ್ಕೆ ಕೈ ಹಾಕಲಿಲ್ಲ.

    ಸ್ಥಳೀಯರೊಬ್ಬರು ಚಿತ್ರದುರ್ಗದ ಜ್ಯೋತಿರಾಜು (ಕೋತಿರಾಜು) ಅವರನ್ನು ಕರೆಸುವಂತೆ ಸಲಹೆ ನೀಡಿದ್ದರು. ಹೀಗಾಗಿ ನಿನ್ನೆ ಸಂಜೆ ಹೊತ್ತಿಗೆ ಜ್ಯೋತಿರಾಜ್ ಹಾಗೂ ಆತನ ತಂಡ ಸ್ಥಳಕ್ಕೆ ಬಂದಿದ್ದು, ಕತ್ತಲಾಗುತ್ತಿದ್ದರಿಂದ ಬೆಳಗ್ಗೆ ಶವ ಮೇಲೆತ್ತುವ ಕೆಲಸ ಮಾಡುವುದಾಗಿ ಒಪ್ಪಿಕೊಂಡಿದ್ದರು. ಇಂದು ಬೆಳಗ್ಗೆ 7 ಗಂಟೆಗೆ ಬೆಟ್ಟ ಹತ್ತಿದ ಜ್ಯೋತಿ ರಾಜ್ ಮತ್ತು ಮಧುಗಿರಿಯ ಜ.ಬಿ.ಬಸವರಾಜ್ ಕಾರ್ಯಾಚರಣೆಗೆ ಮುಂದಾದರು. 600 ಅಡಿ ಎತ್ತರದ ಮೇಲೆ ಹಗ್ಗವನ್ನು ಕಟ್ಟಿ ಅದರ ಸಹಾಯದಿಂದ ಇಬ್ಬರು ಕೆಳಗೆ ಇಳಿದು, ಬಳಿಕ ಒಂದು ಚೀಲದಲ್ಲಿ ಶವವನ್ನು ಕಟ್ಟಿ ಮೇಲೆ ಕಳುಹಿಸಿ, ಬಳಿಕ ತಾವು ಬೆಟ್ಟ ಹತ್ತಿದ್ದಾರೆ.

    ಬೆಟ್ಟದ ಮೇಲೆ ಸೇರಿದ್ದ ಸ್ಥಳೀಯರು ಹಾಗೂ ಮೃತನ ಸಂಬಂಧಿಕರು ಶವವನ್ನು ಹೊತ್ತು ಕೆಳಗೆ ತಂದರು. ಸತತ 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಶವವನ್ನು ಯಶಸ್ವಿಯಾಗಿ ಕೆಳಗೆ ತಂದ ಜ್ಯೋತಿರಾಜ್, ಜ.ಬಿ.ಬಸವರಾಜ್ ಮತ್ತು ಇತರ ಸಾಹಸಿಗಳನ್ನು ಪೊಲೀಸರು ಮತ್ತು ಮಧುಗಿರಿ ಜನತೆ ಅಭಿನಂದಿಸಿದ್ದಾರೆ.

    https://www.youtube.com/watch?v=mouxXeqxL8g

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಜೋಗ ಜಲಪಾತದ ಬುಡದಲ್ಲಿ ಪತ್ತೆಯಾದ ಸ್ಪೈಡರ್ ಮ್ಯಾನ್ ಕೋತಿರಾಜ್

    ಜೋಗ ಜಲಪಾತದ ಬುಡದಲ್ಲಿ ಪತ್ತೆಯಾದ ಸ್ಪೈಡರ್ ಮ್ಯಾನ್ ಕೋತಿರಾಜ್

    ಶಿವಮೊಗ್ಗ: ಜೋಗ ಜಲಪಾತದ ಬುಡದಲ್ಲಿ ನಾಪತ್ತೆಯಾಗಿದ್ದ ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ಇಂದು ಪತ್ತೆಯಾಗಿದ್ದಾರೆ.

    ಇಂದು 8 ಗಂಟೆಯಿಂದ ಜ್ಯೋತಿರಾಜ್ ಗಾಗಿ ಪತ್ತೆ ಕಾರ್ಯಾಚರಣೆ ಆರಂಭವಾಗಿತ್ತು. ಜಲಪಾತದ ಕೆಳಗೆ ಅಗ್ನಿಶಾಮಕ ದಳ ಮತ್ತು ಸಾಗರ, ಸಿದ್ದಾಪುರ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದರು. ಕೋತಿರಾಜ್ ಪತ್ತೆಗೆ ಡ್ರೋನ್ ಕ್ಯಾಮೆರಾ ಕೂಡ ಬಳಸಿದ್ದರು.

    ಜ್ಯೋತಿರಾಜ್ ಪೆಟ್ಟು ಬಿದ್ದು ಜಲಪಾತದ ನಡುವಿನ ಬಂಡೆಗಳ ನಡುವೆ ಸಿಲುಕಿಕೊಂಡಿದ್ದರು. ಕೈಗೆ ಗಾಯವಾಗಿ ಬಂಡೆ ಬಳಿಯ ಪೊಟರೆಯಲ್ಲಿ ಕುಳಿತಿದ್ದರು. ಡ್ರೋನ್ ಕ್ಯಾಮೆರಾ ಮೂಲಕ ಬಂಡೆಗಳಲ್ಲಿ ಸಿಲುಕಿಕೊಂಡಿದ್ದ ಜ್ಯೋತಿರಾಜ್ ಪತ್ತೆಯಾಗಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬಂಡೆಗಳಲ್ಲಿ ಸಿಲುಕಿಕೊಂಡಿದ್ದ ಜ್ಯೋತಿರಾಜ್ ರನ್ನು ರಕ್ಷಣೆ ಮಾಡಿ ಕರೆತಂದಿದ್ದಾರೆ. ಅಗ್ನಿಶಾಮಕ ದಳ, ಸಾಗರ ಮತ್ತು ಸಿದ್ದಾಪುರ ಪೊಲೀಸರು, ಕೋತಿ ರಾಜ್ ತಂಡದವರು ಮತ್ತು ಸ್ಥಳೀಯರು ಸೇರಿ ಐವತ್ತಕ್ಕೂ ಹೆಚ್ಚು ಜನ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದನ್ನು ಓದಿ: ನಾನು ಜೀವಂತವಾಗಿ ವಾಪಸ್ ಬರ್ತೀನೋ ಇಲ್ವೋ ಗೊತ್ತಿಲ್ಲ- ಜೋಗಕ್ಕೆ ತೆರಳುವ ಮುನ್ನ ಸೆಲ್ಫೀ ವಿಡಿಯೋ ಮಾಡಿದ್ದ ಕೋತಿರಾಜ್..

    ಮೂರು ದಿನಗಳ ಹಿಂದೆ ಬೆಂಗಳೂರಿನ ರಾಮಗೊಂಡನಹಳ್ಳಿಯ ಯುವಕನೊಬ್ಬ ಜೋಗ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿತ್ತು. ಆದರೆ ಯುವಕನ ಮೃತದೇಹ ಪತ್ತೆಯಾಗಿರಲಿಲ್ಲ. ಹೀಗಾಗಿ ಯುವಕನ ಶವ ಹುಡುಕಲು ಬಂದಿದ್ದ ಜ್ಯೋತಿರಾಜ್ ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆಗೆ ಜಲಪಾತಕ್ಕೆ ಇಳಿದಿದ್ದರು. ಇದನ್ನು ಓದಿ: ಸ್ಪೈಡರ್ ಮ್ಯಾನ್ ಖ್ಯಾತಿಯ ಕೋತಿ ರಾಜ್ ಜೋಗದಲ್ಲಿ ನಾಪತ್ತೆ

     

     

  • ದಾಂಪತ್ಯ ಜೀವನಕ್ಕೆ ಕಾಲಿಡುವ ಹೊಸ್ತಿಲಲ್ಲಿದ್ದ ಕೋತಿರಾಜ್

    ದಾಂಪತ್ಯ ಜೀವನಕ್ಕೆ ಕಾಲಿಡುವ ಹೊಸ್ತಿಲಲ್ಲಿದ್ದ ಕೋತಿರಾಜ್

    ಚಿತ್ರದುರ್ಗ: ಐತಿಹಾಸಿಕ ಹಿನ್ನಲೆಯುಳ್ಳ ಚಿತ್ರದುರ್ಗ ಎಂದಾಕ್ಷಣ ಎಲ್ಲರಿಗೂ ನೆನೆಪಾಗೋದು ಏಳುಸುತ್ತಿನ ಕೋಟೆ, ಮದಕರಿನಾಯಕ, ಒನಕೆ ಓಬವ್ವ ಮತ್ತು ನಾಗರಹಾವು ಚಲನಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ಡಾ. ವಿಷ್ಣುವರ್ಧನ್ ಹಾಗು ಪುಟ್ಟಣ್ಣ ಕಣಗಾಲ್.

    ಅಂತೆಯೇ ಕಳೆದ 12 ವರ್ಷಗಳಿಂದ ಚಿತ್ರದುರ್ಗದ ಕೋಟೆ ನೋಡಿದವರಿಗೆ ಕೋಟೆಯೊಳಗಿನ ಮಂಕಿಮ್ಯಾನ್ ಎನಿಸಿರೋ ಜ್ಯೋತಿರಾಜ್ ನೆನಪು ಕೂಡ ಮಾಸದೇ ಇರಲ್ಲ. ಯಾಕಂದರೆ ಅವರ ಸಾಹಸ ಎಂತಹವರನ್ನು ಮೆರಗುಗೊಳಿಸುತ್ತದೆ. ತನ್ನ ಸಾಹಸದಿಂದಲೇ ಪ್ರಖ್ಯಾತಿಗಳಿಸಿ ಸ್ಯಾಂಡಲ್‍ವುಡ್ ನಲ್ಲೂ ಒಂದು ರೌಂಡ್ ಹಾಕಿ ಬಂದಿದ್ದರು. ಇದನ್ನೂ ಓದಿ: ಸ್ಪೈಡರ್ ಮ್ಯಾನ್ ಖ್ಯಾತಿಯ ಕೋತಿ ರಾಜ್ ಜೋಗದಲ್ಲಿ ನಾಪತ್ತೆ

    ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮತ್ತೆ ಸಾಹಸದಲ್ಲಿ ತಲ್ಲೀನರಾಗಿದ್ದು, ಮುಂಬರುವ 2020ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನ ಪ್ರತಿನಿಧಿಸಿ ಬಂಗಾರದ ಪದಕ ಗೆಲ್ಲುವ ತವಕದಲ್ಲಿದ್ದರು. ಅಲ್ಲದೇ ಈ ವರ್ಷ ತನ್ನ ಬಾಳ ಸಂಗಾತಿಯೊಂದಿಗೆ ನವಜೀವನವನ್ನು ಆರಂಭಿಸಬೇಕೆಂಬ ಕನಸು ಕಂಡಿದ್ದ ಕೋತಿರಾಜ್ ಮಂಗಳವಾರ ಜೋಗ್ ಫಾಲ್ಸ್ ನಲ್ಲಿ ನಾಪತ್ತೆಯಾಗಿರೋದು ಎಲ್ಲರನ್ನೂ ದಿಗ್ಬ್ರಮೆಗೊಳಿಸಿದೆ.  ಇದನ್ನೂ ಓದಿ: ನಾನು ಜೀವಂತವಾಗಿ ವಾಪಸ್ ಬರ್ತೀನೋ ಇಲ್ವೋ ಗೊತ್ತಿಲ್ಲ- ಜೋಗಕ್ಕೆ ತೆರಳುವ ಮುನ್ನ ಸೆಲ್ಫೀ ವಿಡಿಯೋ ಮಾಡಿದ್ದ ಕೋತಿರಾಜ್

    ಅದರಲ್ಲೂ ಜ್ಯೋತಿರಾಜ್ ಗೆ ಹೆಣ್ಣು ಕೊಟ್ಟು ಕನ್ಯಾಧಾರೆ ಎರೆದು ಹೊಸ ಜೀವನ ಕಟ್ಟಿಕೊಡಬೇಕೆನ್ನುವ ತವಕದಲ್ಲಿದ್ದ ಅವರ ಮಾವ ಶ್ರೀನಿವಾಸ್ ಕುಟುಂಬದಲ್ಲಿ ಕೂಡ ಆತಂಕ ಆವರಿಸಿದೆ. ಹೀಗಾಗಿ ನಾಪತ್ತೆಯಾಗಿರೋ ಸ್ಪೈಡರ್ ಮ್ಯಾನ್ ಕೋತಿರಾಜ್ ಸುರಕ್ಷಿತವಾಗಿ ವಾಪಾಸ್ ಬರಲಿ, ಅವರ ಕನಸು ನನಸಾಗಲಿ. ದೇಶದ ಕೀರ್ತಿ ಇನ್ನಷ್ಟು ಹೆಚ್ಚಿಸಲಿ ಎನ್ನುವುದು ಎಲ್ಲರ ಆಶಯ.

    ಜ್ಯೋತಿರಾಜ್ ಶಿವಮೊಗ್ಗ ಜಿಲ್ಲೆಯ ಜೋಗದಲ್ಲಿ ನಾಪತ್ತೆಯಾಗಿದ್ದಾರೆ. ಮೂರು ದಿನಗಳ ಹಿಂದೆ ಬೆಂಗಳೂರಿನ ರಾಮಗೊಂಡನಹಳ್ಳಿಯ ಯುವಕನೊಬ್ಬ ಜೋಗ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿತ್ತು. ಆದರೆ ಯುವಕನ ಮೃತದೇಹ ಪತ್ತೆಯಾಗಿರಲಿಲ್ಲ. ಹೀಗಾಗಿ ಯುವಕನ ಶವ ಹುಡುಕಲು ಬಂದಿದ್ದ ಜ್ಯೋತಿರಾಜ್ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಜಲಪಾತಕ್ಕೆ ಇಳಿದಿದ್ದರು.

  • ನಾನು ಜೀವಂತವಾಗಿ ವಾಪಸ್ ಬರ್ತೀನೋ ಇಲ್ವೋ ಗೊತ್ತಿಲ್ಲ- ಜೋಗಕ್ಕೆ ತೆರಳುವ ಮುನ್ನ ಸೆಲ್ಫೀ ವಿಡಿಯೋ ಮಾಡಿದ್ದ ಕೋತಿರಾಜ್..

    ನಾನು ಜೀವಂತವಾಗಿ ವಾಪಸ್ ಬರ್ತೀನೋ ಇಲ್ವೋ ಗೊತ್ತಿಲ್ಲ- ಜೋಗಕ್ಕೆ ತೆರಳುವ ಮುನ್ನ ಸೆಲ್ಫೀ ವಿಡಿಯೋ ಮಾಡಿದ್ದ ಕೋತಿರಾಜ್..

    ಶಿವಮೊಗ್ಗ: ಜೋಗ್ ಫಾಲ್ಸ್ ನಲ್ಲಿ ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಮಂಗಳವಾರದಂದು ನಾಪತ್ತೆಯಾಗಿದ್ದು, ಜೋಗಕ್ಕೆ ತೆರಳುವ ಮುನ್ನ ಸೆಲ್ಫೀ ವಿಡಿಯೋ ಮಾಡಿದ್ದರು.

    ಸೆಲ್ಫೀ ವಿಡಿಯೋದಲ್ಲಿ ಜ್ಯೋತಿರಾಜ್, ನಾನು ಜೀವಂತವಾಗಿ ವಾಪಸ್ ಬರುತ್ತೇನೋ ಇಲ್ವೋ ಗೊತ್ತಿಲ್ಲ. ಆದರೆ ಸಹಾಯ ಮಾಡಬೇಕು ಎನ್ನುವ ದೃಷ್ಟಿಯಲ್ಲಿ ಹೋಗುತ್ತಿದ್ದೇನೆ. ನನಗೆ ಇಡೀ ಕರ್ನಾಟಕದ ಜನತೆಯ ಆಶೀರ್ವಾದ ಬೇಕು ಎಂದು ಹೇಳಿಕೊಂಡಿದ್ದರು.

    ಜ್ಯೋತಿರಾಜ್ ಶಿವಮೊಗ್ಗ ಜಿಲ್ಲೆಯ ಜೋಗದಲ್ಲಿ ನಾಪತ್ತೆಯಾಗಿದ್ದಾರೆ. ಮೂರು ದಿನಗಳ ಹಿಂದೆ ಬೆಂಗಳೂರಿನ ರಾಮಗೊಂಡನಹಳ್ಳಿಯ ಯುವಕನೊಬ್ಬ ಜೋಗ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿತ್ತು. ಆದರೆ ಯುವಕನ ಮೃತದೇಹ ಪತ್ತೆಯಾಗಿರಲಿಲ್ಲ. ಹೀಗಾಗಿ ಯುವಕನ ಶವ ಹುಡುಕಲು ಬಂದಿದ್ದ ಜ್ಯೋತಿರಾಜ್ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಜಲಪಾತಕ್ಕೆ ಇಳಿದಿದ್ದರು. ಇದನ್ನೂ ಓದಿ: ಸ್ಪೈಡರ್ ಮ್ಯಾನ್ ಖ್ಯಾತಿಯ ಕೋತಿ ರಾಜ್ ಜೋಗದಲ್ಲಿ ನಾಪತ್ತೆ

    https://www.youtube.com/watch?v=0SlM6UAsVqg

    https://www.youtube.com/watch?v=4nriJLe3cYg