Tag: ಜೈಲು ಶಿಕ್ಷೆ

  • ಪತ್ರಕರ್ತ ರವಿ ಬೆಳಗೆರೆಗೆ 1 ವರ್ಷ ಜೈಲು- ಬಂಧನಕ್ಕೆ ಕಾದು ಕುಳಿತ ಬೆಂಗ್ಳೂರು ಸಿಸಿಬಿ ಪೊಲೀಸರು

    ಪತ್ರಕರ್ತ ರವಿ ಬೆಳಗೆರೆಗೆ 1 ವರ್ಷ ಜೈಲು- ಬಂಧನಕ್ಕೆ ಕಾದು ಕುಳಿತ ಬೆಂಗ್ಳೂರು ಸಿಸಿಬಿ ಪೊಲೀಸರು

    ಧಾರವಾಡ: ಶಾಸಕರ ಬಗ್ಗೆ ಮಾನಹಾನಿಕರ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಸದನ ಸಮಿತಿ 1 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.

    ಸದ್ಯ ಅನಾರೋಗ್ಯದ ಹಿನ್ನೆಲೆಯಲ್ಲಿ ಧಾರವಾಡದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರವಿ ಬೆಳೆಗೆರೆಯವರನ್ನ ಬಂಧಿಸಲು ಬೆಂಗಳೂರು ಸಿಸಿಬಿ ಪೊಲೀಸರು ಕಾಯುತ್ತಿದ್ದಾರೆ. ಧಾರವಾಡ ವಿದ್ಯಾಗಿರಿ ಪೊಲೀಸರೂ ಕೂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

    ಜೈಲು ಶಿಕ್ಷೆ ಪ್ರಕಟವಾದ ಬಗ್ಗೆ ಆಸ್ಪತ್ರೆಯಲ್ಲಿದ್ದುಕೊಂಡೇ ಪ್ರತಿಕ್ರಿಯೆ ನೀಡಿರೋ ರವಿ ಬೆಳಗೆರೆ, ನನಗೆ 1 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದ್ದಾರೆ. ನಾನು ಹೈ ಕೋರ್ಟ್ ಅಲ್ಲ ಸುಪ್ರೀಂ ಕೋರ್ಟ್ ತನಕ ಹೋಗಿ ಬಡಿದಾಡ್ತೀನಿ. ಇನ್ನು ಈ ಸರ್ಕಾರಕ್ಕೆ, ಕೇವಲ ಒಂದು ವರ್ಷ ಇದೆ ಎಲೆಕ್ಷನ್‍ಗೆ. ಇವರ ಜೀವನ ಮುಗಿಯಿತು ಇಲ್ಲಿಗೆ. ಪತ್ರಕರ್ತರ ತಂಟೆಗೆ ಯಾಕ್ರೀ ಬರ್ತೀರಿ? ಯಾವುದಕ್ಕಾದ್ರೂ ನನ್ನನ್ನ ಯಾಕೆ ದೂಷಿಸುತ್ತೀರಿ? ಇದು ಬಹಳ ಧಮನಕಾರಿ ಆಕ್ರಮಣ. ನಾನು ಇದರ ವಿರುದ್ಧ ಇದ್ದೀನಿ. ನಾನು ವ್ಯವಸ್ಥೆ ವಿರುದ್ಧ ಇರುತ್ತೇನೆ. ಕೈ ಕಾಲು ಇಲ್ಲದವನಲ್ಲ, ದಡ್ಡನಲ್ಲ, ಮೂರ್ಖನಲ್ಲ. ಬೇಕಾದ್ದು ಮಾಡಲಿ. ಹೋರಾಟ ಮಾಡದೇ ಕೈ ಕಟ್ಟಿ ಶರಣಾಗುವ ಪರಿಸ್ಥಿತಿ ನನಗಿಲ್ಲ. ಅಂತಹದ್ದು ಬಂದ್ರೆ ಆತ್ಮಹತ್ಯೆ ಮಾಡಿಕೊಂಡು ಸಾಯ್ತೀನಿ ಅಂದ್ರು.

    ಕಾಂಗ್ರೆಸ್ ನ ಎಂ.ಬಿ.ನಾಗರಾಜ ವಿರುದ್ಧದ ಪ್ರಕರಣದಲ್ಲಿ ಅವಹೇಳನಕಾರಿ ಲೇಖನ ಪ್ರಕಟಿಸಿದ ದೂರಿನ ಮೇಲೆ 1 ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿ ಹಕ್ಕು ಬಾಧ್ಯತಾ ಸಮಿತಿ ಶಿಫಾರಸು ಮಾಡಿತ್ತು. ಅದನ್ನು ಸದನ ಅಂಗೀಕರಿಸಿತ್ತು.

    https://www.youtube.com/watch?v=NTHycVatfSM&feature=youtu.be

  • ಮನೆ ಊಟದ ಬಳಿಕ ಜೈಲಧಿಕಾರಿಗಳ ಜೊತೆ ಶಶಿಕಲಾ ಮನವಿ ಏನ್ ಗೊತ್ತಾ?

    ಮನೆ ಊಟದ ಬಳಿಕ ಜೈಲಧಿಕಾರಿಗಳ ಜೊತೆ ಶಶಿಕಲಾ ಮನವಿ ಏನ್ ಗೊತ್ತಾ?

    ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಶಿಕಲಾ ಇದೀಗ ಟೇಬಲ್ ಫ್ಯಾನ್ ಹಾಗೂ ಹಾಸಿಗೆ ನೀಡುವುಂತೆ ಜೈಲಿನ ಅಧಿಕಾರಿಗಳ ಜೊತೆ ಮನವಿ ಮಾಡಿದ್ದಾರೆ.

    ಹೌದು. ತಮ್ಮ ವಯಸ್ಸು ಮತ್ತು ಅನಾರೋಗ್ಯದ ಹಿನ್ನೆಲೆಯಲ್ಲಿ ಜೈಲಿನಲ್ಲಿ ಈ ವ್ಯವಸ್ಥೆ ಕಲ್ಪಿಸುವಂತೆ ಆಪ್ತರ ಮೂಲಕ ಮನವಿ ಮಾಡಿಸಿದ್ದಾರೆ.

    ಒಂದು ವಾರದ ಜೈಲುವಾಸದಲ್ಲಿ ಶಶಿಕಲಾ ಜೈಲಿನ ಬದುಕಿಗೆ ಹೊಂದಿಕೊಳ್ಳುತ್ತಿದ್ದಾರೆ. ರಕ್ತದೊತ್ತಡವೂ ನಿಯಂತ್ರಣದಲ್ಲಿದೆ. ಶಶಿಕಲಾ ಅವರಿಗೆ ಬೇಕಾದ ಸೌಲಭ್ಯಗಳನ್ನು ಅಧಿಕಾರಿಗಳು ನೀಡಿದ್ದಲ್ಲಿ ಅವರು ಜೈಲಿನಲ್ಲಿರುವಷ್ಟು ದಿನ ಆರಾಮಾಗಿರಬಹುದು. ಹೀಗಾಗಿ ಶಶಿಕಲಾ ಅವರು ಚೆನ್ನೈ ಕೇಂದ್ರ ಜೈಲಿಗೆ ಸ್ಥಳಾಂತರವಾಗುವವರೆಗೆ ಬೆಂಗಳೂರು ಜೈಲಿನಲ್ಲಿ ಅವರಿಗೆ ಹಾಸಿಗೆ, ಟೇಬಲ್ ಫ್ಯಾನ್ ಮತ್ತು ಬಾತ್‍ರೂಂ ಸೌಲಭ್ಯವನ್ನು ನೀಡಿ ಅಂತಾ ಎಐಎಡಿಎಂಕೆ ಕರ್ನಾಟಕ ಪ್ರಾಂತ್ಯದ ಕಾರ್ಯದರ್ಶಿ ಜೈಲಾಧಿಕಾರಿಯನ್ನು ಕೇಳಿಕೊಂಡಿದ್ದಾರೆ.

    ಈ ಹಿಂದೆ ಮನೆಯಲ್ಲಿ ತಯಾರಿಸಿ ಆಹಾರ ಮತ್ತು ನೀರು ಬೇಕೆಂದು ಶಶಿಕಲಾ ಮನವಿ ಸಲ್ಲಿಸಿದ್ದರು. ಆದ್ರೆ ಜೈಲು ಅಧಿಕಾರಿಗಳು ಶಶಿಕಲಾ ಮನವಿಯನ್ನು ತಿರಸ್ಕರಿಸಿದ್ದರು. ಆ ಬಳಿಕ ಆರೋಗ್ಯ ಸಮಸ್ಯೆಯ ನೆಪವೊಡ್ಡಿ ಬೆಂಗಳೂರು ಜೈಲಿನಿಂದ ಚೆನ್ನೈ ಜೈಲಿಗೆ ಸ್ಥಳಾಂತರಿಸಬೇಕೆಂದು ಮನವಿ ಮಾಡಿದ್ದರು. ಆದ್ರೆ ಇದಕ್ಕೆ ಸೂಕ್ತ ಕಾರಣ ನೀಡಬೇಕೆಂದು ನ್ಯಾಯಾಲಯ ಹೇಳಿತ್ತು.

    ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಶಶಿಕಲಾ ದಂಡದ ಮೊತ್ತವಾಗಿರುವ 10 ಕೋಟಿ ರೂ. ಹಣವನ್ನು ಪಾವತಿಸದೇ ಇದ್ದರೆ 13 ತಿಂಗಳ ಕಾಲ ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಜೈಲಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಹೇಳಿದ್ದರು. 2014ರ ಸೆಪ್ಟೆಂಬರ್‍ನಲ್ಲಿ ಪರಪ್ಪನ ಅಗ್ರಹಾರದಲ್ಲಿ 21 ದಿನಗಳ ಕಾಲ ಕಳೆದ ಹಿನ್ನೆಲೆಯಲ್ಲಿ ಶಶಿಕಲಾ ಒಟ್ಟು 3 ವರ್ಷ, 11 ತಿಂಗಳು ಜೈಲಿನಲ್ಲಿ ಇರಬೇಕಾಗುತ್ತದೆ

    ಜೈಲಿನಲ್ಲಿ ಈಗ ಹೇಗಿದ್ದಾರೆ?: ಸಾಧಾರಣ ಶಿಕ್ಷೆಯಲ್ಲಿ ಬಂಧನಕ್ಕೆ ಒಳಗಾದ ಜೈಲು ನಿಯಮಾವಳಿಗಳ ಪ್ರಕಾರ ಸಮವಸ್ತ್ರ ಮತ್ತು ಇತರೇ ಊಟದ ತಟ್ಟೆಗಳನ್ನು ನೀಡಲಾಗಿದೆ. ಭದ್ರತಾ ದೃಷ್ಟಿಯಿಂದ ಪ್ರತ್ಯೇಕವಾದ ಕೊಠಡಿಯಲ್ಲಿ ಮಹಿಳಾ ಬಂಧಿಗಳನ್ನು ಇಡಲಾಗಿದ್ದು, ಭದ್ರತೆಗೆ ಮಹಿಳಾ ಅಧೀಕ್ಷಕರನ್ನು ನೇಮಿಸಲಾಗಿದೆ. ವಿ.ಎನ್. ಸುಧಾಕರನ್ ಪುರುಷ ವಿಭಾಗದಲ್ಲಿದ್ದು, ಭದ್ರತೆಗೆ ವಿಶೇಷ ಪಹರೆ ನೇಮಿಸಿದೆ.

    ಜೈಲಿನ ಊಟವನ್ನು ಇತರೇ ಬಂಧಿಗಳಿಗೆ ನೀಡುವಂತೆ ಇವರಿಗೂ ಅದೇ ಆಹಾರವನ್ನು ನೀಡಲಾಗುತ್ತಿದೆ. ಕಾರಾಗೃಹದ ವೈದ್ಯಾಧಿಕಾರಿಗಳಿಂದ ಆರೋಗ್ಯದ ತಪಾಸಣೆ ಮಾಡಿಸಿ ಸಂಬಂಧಿಸಿದ ಔಷಧಿಗಳನ್ನು ನೀಡಲಾಗಿದೆ. ಮನೋರಂಜನೆಗಾಗಿ ಇತರೇ ಬಂಧಿಗಳಂತೆ ಟಿವಿ ನೀಡಲಾಗಿದೆ.

    ಅಕ್ರಮ ಆಸ್ತಿ ಪ್ರಕರಣ ಸಂಬಂಧಿಸಿದಂತೆ ವಿಶೇಷ ಕೋರ್ಟ್ ತೀರ್ಪಿನ ಬಳಿಕ ಶಶಿಕಲಾ 2014ರಲ್ಲಿ ಜಯಲಲಿತಾ ಜೊತೆ ಬೆಂಗಳೂರಿನ ಜೈಲಿನಲ್ಲಿ ಕೆಲ ವಾರಗಳನ್ನು ಕಳೆದಿದ್ದರು. ಇದಾದ ಬಳಿಕ ಹೈಕೋರ್ಟ್ ಈ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದ ಪರಿಣಾಮ ರಿಲೀಫ್ ಸಿಕ್ಕಿತ್ತು. ಆದರೆ ಇಗ ಸುಪ್ರೀಂ ಕೋರ್ಟ್ ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದ ಪರಿಣಾಮ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಳವರಸಿ ಮತ್ತು ಸುಧಾಕರಣ್ ಜೊತೆ ಶಶಿಕಲಾ ಜೈಲುಪಾಲಾಗಿದ್ದಾರೆ.

  • ದಂಡ ಪಾವತಿಸದೇ ಇದ್ದರೆ ಶಶಿಕಲಾಗೆ 13 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ

    ದಂಡ ಪಾವತಿಸದೇ ಇದ್ದರೆ ಶಶಿಕಲಾಗೆ 13 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ

    ಬೆಂಗಳೂರು: ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಶಶಿಕಲಾ ದಂಡದ ಮೊತ್ತವಾಗಿರುವ 10 ಕೋಟಿ ರೂ. ಹಣವನ್ನು ಪಾವತಿಸದೇ ಇದ್ದರೆ 13 ತಿಂಗಳ ಕಾಲ ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

    ಜೈಲಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಹೇಳಿಕೆಯೊಂದನ್ನು ಪ್ರಕಟಿಸಿದ್ದು, ಸುಪ್ರೀಂ ಕೋರ್ಟ್ ತೀರ್ಪಿನಂತೆ 10 ಕೋಟಿ ರೂ. ದಂಡ ಪಾವತಿಸದೇ ಇದ್ದರೆ ಶಶಿಕಲಾ 13 ತಿಂಗಳು ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಫೆಬ್ರವರಿ 14ರಂದು ಸುಪ್ರೀಂ ಕೋರ್ಟ್ ಶಶಿಕಲಾ ದೋಷಿ ಎಂದು ತೀರ್ಪು ನೀಡಿ, 10 ಕೋಟಿ ರೂ. ದಂಡ, 4 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ 2014ರ ಸೆಪ್ಟೆಂಬರ್‍ನಲ್ಲಿ ಪರಪ್ಪನ ಅಗ್ರಹಾರದಲ್ಲಿ 21 ದಿನಗಳ ಕಾಲ ಕಳೆದ ಹಿನ್ನೆಲೆಯಲ್ಲಿ ಶಶಿಕಲಾ ಒಟ್ಟು 3 ವರ್ಷ, 11 ತಿಂಗಳು ಜೈಲಿನಲ್ಲಿ ಇರಬೇಕಾಗುತ್ತದೆ

    ಜೈಲಿನಲ್ಲಿ ಹೇಗಿದ್ದಾರೆ?
    ಸಾಧಾರಣ ಶಿಕ್ಷೆಯಲ್ಲಿ ಬಂಧನಕ್ಕೆ ಒಳಗಾದ ಜೈಲು ನಿಯಮಾವಳಿಗಳ ಪ್ರಕಾರ ಸಮವಸ್ತ್ರ ಮತ್ತು ಇತರೇ ಊಟದ ತಟ್ಟೆಗಳನ್ನು ನೀಡಲಾಗಿದೆ. ಭದ್ರತಾ ದೃಷ್ಟಿಯಿಂದ ಪ್ರತ್ಯೇಕವಾದ ಕೊಠಡಿಯಲ್ಲಿ ಮಹಿಳಾ ಬಂಧಿಗಳನ್ನು ಇಡಲಾಗಿದ್ದು, ಭದ್ರತೆಗೆ ಮಹಿಳಾ ಅಧೀಕ್ಷಕರನ್ನು ನೇಮಿಸಲಾಗಿದೆ. ವಿ.ಎನ್. ಸುಧಾಕರನ್ ಪುರುಷ ವಿಭಾಗದಲ್ಲಿದ್ದು, ಭದ್ರತೆಗೆ ವಿಶೇಷ ಪಹರೆ ನೇಮಿಸಿದೆ.

    ಜೈಲಿನ ಊಟವನ್ನು ಇತರೇ ಬಂಧಿಗಳಿಗೆ ನೀಡುವಂತೆ ಇವರಿಗೂ ಅದೇ ಆಹಾರವನ್ನು ನೀಡಲಾಗುತ್ತಿದೆ. ಕಾರಾಗೃಹದ ವೈದ್ಯಾಧಿಕಾರಿಗಳಿಂದ ಆರೋಗ್ಯದ ತಪಾಸಣೆ ಮಾಡಿಸಿ ಸಂಬಂಧಿಸಿದ ಔಷಧಿಗಳನ್ನು ನೀಡಲಾಗಿದೆ. ಮನೋರಂಜನೆಗಾಗಿ ಇತರೇ ಬಂಧಿಗಳಂತೆ ಟಿವಿ ನೀಡಲಾಗಿದೆ.

  • ಮೌಲ್ಯಮಾಪನ ಬಹಿಷ್ಕರಿಸಿದ್ರೆ ಜೈಲು ಶಿಕ್ಷೆ – ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

    ಮೌಲ್ಯಮಾಪನ ಬಹಿಷ್ಕರಿಸಿದ್ರೆ ಜೈಲು ಶಿಕ್ಷೆ – ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

    ಬೆಂಗಳೂರು: ಮೌಲ್ಯಮಾಪನ ಬಹಿಷ್ಕರಿಸುವ ಉಪನ್ಯಾಸಕರು, ಶಿಕ್ಷಕರಿಗೆ ಜೈಲು ಶಿಕ್ಷೆ ಹಾಗೂ ಮೌಲ್ಯಮಾಪನ ಬಹಿಷ್ಕಾರ ಬೆಂಬಲಿಸುವ ಸಂಘಟನೆಗಳ ಮೇಲೂ ಕ್ರಮ ಕೂಗೊಳ್ಳುವ ಬಗ್ಗೆ ವಿಧಾನಸಭೆಯಲ್ಲಿ ರಾಜ್ಯ ಸರ್ಕಾರ ಮಂಡಿಸಿದ ಮಹತ್ವದ ಮಸೂದೆ ಅಂಗೀಕಾರವಾಗಿದೆ.

    ವಿಧಾನಸಭೆಯಲ್ಲಿ ಕರ್ನಾಟಕ ಶಿಕ್ಷಣ ತಿದ್ದುಪಡಿ ಮಸೂದೆ ಅಂಗೀಕಾರವಾಗಿದ್ದು, ಬಜೆಟ್ ಅಧಿವೇಶನದ ವೇಳೆ ಪರಿಷತ್‍ನಲ್ಲಿ ಅಂಗೀಕಾರ ಪಡೆದುಕೊಳ್ಳಲು ಸರ್ಕಾರದ ನಿರ್ಧಾರಿಸಿದೆ.

    ವಿಧೇಯಕದ ಅಂಶಗಳು: 
    * ವಿಧೇಯಕದ 23 ಡಿ ತಿದ್ದುಪಡಿ.
    * ಮೌಲ್ಯಮಾಪಕ ಮೌಲ್ಯಮಾಪನದ ಮೇಲ್ವಿಚಾರಣೆ ಜವಾಬ್ದಾರಿ ಹೊತ್ತವರು ಮೌಲ್ಯಮಾಪನ ಸ್ಕೀಂ ಉಲ್ಲಂಘನೆ ಮಾಡುವಂತಿಲ್ಲ.
    * ಮೌಲ್ಯಮಾಪನ ಬಹಿಷ್ಕಾರ ಮಾಡುವಂತಿಲ್ಲ ಹಾಗೂ ಮೌಲ್ಯಮಾಪಕರು, ಮೇಲ್ವೀಚಾರಕರಿಗೆ ಕೆಲಸ ಮಾಡದಂತೆ ಯಾರೂ ಪ್ರಚೋದನೆ ಮಾಡುವಂತಿಲ್ಲ. ಅಂದ್ರೆ ಪ್ರತಿಭಟನೆ ಮಾಡುವಂತೆ ಪ್ರಚೋದಿಸುವಂತಿಲ್ಲ.
    * ಹೀಗೆ ಮಾಡಿದ್ರೆ ಮೌಲ್ಯಮಾಪನ ಬಹಿಷ್ಕಾರ ಮಾಡಿದವರಿಗೂ, ಪ್ರಚೋದನೆ ನೀಡುವವರಿಗೂ ಐದು ವರ್ಷ ವಿಸ್ತರಿಸಬಹುದಾದ ಜೈಲು ಶಿಕ್ಷೆ, ಐದು ಲಕ್ಷ ರೂ.ವರೆಗೆ ಜುಲ್ಮಾನೆ.
    * ಅಥವಾ ಜುಲ್ಮಾನೆ ಶಿಕ್ಷೆ ಎರಡೂ ವಿಧಿಸುವ ಕಾನೂನು.

    ರಾಜ್ಯ ಸರ್ಕಾರದ ಈ ನಡೆಗೆ ಉಪನ್ಯಾಸಕರ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೋರಾಟ ಮಾಡಿದ್ರೆ ಜೈಲಿಗೆ ಹಾಕೋದು ಎಷ್ಟು ಸರಿ? ಸರ್ಕಾರ ನಮ್ಮ ಹೋರಾಟ ಹತ್ತಿಕ್ಕುವ ಕೆಲಸ ಮಾಡ್ತಿದೆ. ನಮ್ಮ ಬೇಡಿಕೆ ಈಡೇರಿಸದೆ ಕಾನೂನು ಪ್ರಯೋಗಿಸಿ ನಮ್ಮನ್ನ ನಿಯಂತ್ರಣ ಮಾಡಲು ಮುಂದಾಗಿದೆ. ಈ ವಿಧೇಯಕ ಒಪ್ಪಲು ಸಾಧ್ಯವಿಲ್ಲ. ಇದು ಶಿಕ್ಷಕರಿಗೆ ಮಾಡ್ತಿರುವ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಮೊದಲು ನಮ್ಮ ಬೇಡಿಕೆ ಈಡೇರಿಸಿ ಅಮೇಲೆ ಕಾನೂನು ತನ್ನಿ. ನಿರಂತರ ಹೋರಾಟ ಮಾಡಿದ್ರೂ ಭರವಸೆ ಈಡೇರಿಸುತ್ತಿದ್ದೀರಾ? ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹಾಗೂ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಶ್ರೀಕಂಠೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ವಿಧೇಯಕ ವಾಪಸ್ ಪಡೆಯದಿದ್ರೆ ಹೋರಾಟ ಮಾಡಬೇಕಾಗುತ್ತೆ ಅಂತ ಉಪನ್ಯಾಸಕರು ಎಚ್ಚರಿಕೆ ನೀಡಿದ್ದಾರೆ.