Tag: ಜೈನ ಸಮುದಾಯ

  • ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಅಂದ ಅಯೂಬ್ ಖಾನ್ – ಸಿಡಿದೆದ್ದ ಜೈನ ಸಮುದಾಯ

    ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಅಂದ ಅಯೂಬ್ ಖಾನ್ – ಸಿಡಿದೆದ್ದ ಜೈನ ಸಮುದಾಯ

    ಮೈಸೂರು: ಭಗವಾನ್ ಬಾಹುಬಲಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ನ್ಯೂ ಇಂಡಿಯನ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಖಾನ್‍ರನ್ನು ಉದಯಗಿರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ ಎಂದು ಅಯೂಬ್ ಖಾನ್ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಜೈನ ಸಮುದಾಯ ಅಯೂಬ್ ಖಾನ್ ವಿರುದ್ಧ ಸಿಡಿದೆದ್ದಿದೆ. ಇದರೊಂದಿಗೆ ಅಯೂಬ್ ಖಾನ್ ಮೇಲೆ 50ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.

    ಅಯೂಬ್ ಖಾನ್‍ರ ಅವಹೇಳನಕಾರಿ ಮಾತಿಗೆ ಜೈನ ಸಂಘಟನೆಗಳು ಕ್ರಿಮಿನಲ್ ಕೇಸ್ ದಾಖಲಿಸುವಂತೆ ಒತ್ತಾಯಿಸಿದೆ. ಇದಕ್ಕೆ ಮಣಿದ ಮೈಸೂರು ಪೊಲೀಸರು ಅಯೂಬ್ ಖಾನ್‍ರನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ದೇಗುಲದಲ್ಲಿ ನಡೆದ ಪೂಜೆಗೆ ಬಂದು ಎಲ್ಲರನ್ನೂ ಭೇಟಿಯಾಗಿದ್ದು ಸಂತಸ ತಂದಿದೆ: ನಲಪಾಡ್

    ಅಯೂಬ್ ಖಾನ್ ಹಿಜಬ್ ವಿಚಾರವಾಗಿ ಭಗವಾನ್ ಬಾಹುಬಲಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಗೊಮ್ಮಟೇಶ್ವರನಿಗೆ ಚಡ್ಡಿ ಹಾಕಿಸಿ, ದೇಶದ ಮಾನ ಉಳಿಸಿ ಎಂದಿದ್ದು, ಈ ಹೇಳಿಕೆಗೆ ಜೈನ ಸಮುದಾಯ ಭಾರೀ ಆಕ್ರೋಶ ವ್ಯಕ್ತಪಡಿಸಿದೆ.

  • ಬರದ ನಾಡಲ್ಲಿ ಸದ್ದಿಲ್ಲದೆ ನಡೆದಿದೆ ಜಲ ಸಂವರ್ಧನೆ

    ಬರದ ನಾಡಲ್ಲಿ ಸದ್ದಿಲ್ಲದೆ ನಡೆದಿದೆ ಜಲ ಸಂವರ್ಧನೆ

    – ಜಿಲ್ಲೆಯ 33 ಕೆರೆಗಳ ಪುನಶ್ಚೇತನ ಕಾರ್ಯ
    – ರೈತರ ಜಮೀನುಗಳಿಗೆ ಉಚಿತವಾಗಿ ಸಿಗುತ್ತಿದೆ ಫಲವತ್ತಾದ ಮಣ್ಣು
    – ಖಾಸಗಿಯವರಿಂದ ಕೋಟ್ಯಂತರ ರೂಪಾಯಿ ಸಹಾಯ ಧನ

    ರಾಯಚೂರು: ಬಿಸಿಲನಾಡು ರಾಯಚೂರು ಜಿಲ್ಲೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಭೀಕರ ಬರಗಾಲ ಎದುರಿಸುತ್ತಿದೆ. ಒಂದು ವೇಳೆ ಒಳ್ಳೆಯ ಮಳೆ ಬಂದರೂ ನೀರನ್ನ ಹಿಡಿದಿಟ್ಟುಕೊಳ್ಳುವ ವ್ಯವಸ್ಥೆಯೂ ಜಿಲ್ಲೆಯಲ್ಲಿಲ್ಲ. ಹೂಳು ತುಂಬಿರುವ ಜಿಲ್ಲೆಯ ನೂರಾರು ಕೆರೆಗಳು ಇದ್ದರೂ ಇಲ್ಲದಂತಾಗಿದೆ. ಹೀಗಾಗಿ ಖಾಸಗಿ ಸಂಸ್ಥೆಯೊಂದು ಮುಂದೆ ಬಂದಿದ್ದು ಕೆರೆಗಳ ಹೂಳು ತೆಗೆಯುತ್ತಿದೆ. ಒಂದಿಡೀ ಸರ್ಕಾರ ಮಾಡಬೇಕಾದ ಕೆಲಸವನ್ನ ಖಾಸಗಿಯವರು ಮಾಡುತ್ತಿದ್ದಾರೆ.

    ರಾಯಚೂರು ಜಿಲ್ಲೆಯಲ್ಲಿ ತುಂಗಭದ್ರಾ, ಕೃಷ್ಣ ನದಿಗಳೆರಡು ಇದ್ದರೂ ಜಿಲ್ಲೆಯ ಜನ ಹಾಗೂ ರೈತರು ಪ್ರತೀ ವರ್ಷ ನೀರಿನ ಭೀಕರ ಸಮಸ್ಯೆಯನ್ನ ಎದುರಿಸುತ್ತಲೇ ಇದ್ದಾರೆ. ನಾಲ್ಕು ವರ್ಷಕ್ಕೊಮ್ಮೆ ಉತ್ತಮ ಮಳೆ ಬಂದರೆ ಆ ನೀರನ್ನ ಸದ್ಬಳಕೆ ಮಾಡಿಕೊಳ್ಳಲು ಆಗದೆ ರೈತರು ಪುನಃ ಕಂಗಾಲಾಗಿ ಕುಳಿತುಕೊಳ್ಳುತ್ತಲೇ ಇದ್ದಾರೆ. ಹೀಗಾಗಿ ನೀತಿ ಆಯೋಗದ ಸೂಚನೆ ಮೇರೆಗೆ ಭಾರತೀಯ ಜೈನ ಸಮುದಾಯ ರಾಯಚೂರು ಹಾಗೂ ಯಾದಗಿರಿಯ ಕೆರೆಗಳ ಹೂಳೆತ್ತುವ ಕಾಯಕ ಕೈಗೆತ್ತಿಕೊಂಡಿದೆ.

    ಸರ್ಕಾರದೊಂದಿಗೆ ಕೇವಲ ಡೀಸೆಲ್ ನೀಡಲು ಒಪ್ಪಂದ ಮಾಡಿಕೊಂಡಿದ್ದು ಯಂತ್ರೋಪಕರಣ, ಹೂಳು ವಿಲೇವಾರಿ, ಜಾಗೃತಿ ಕಾರ್ಯಕ್ರಮಗಳ ಹೊಣೆಯನ್ನ ಭಾರತೀಯ ಜೈನ ಸಮುದಾಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನಿರ್ವಹಿಸುತ್ತಿವೆ. ಈಗಾಗಲೇ ಫೆಬ್ರವರಿಯಿಂದ ಜಿಲ್ಲೆಯಲ್ಲಿ ಕಟ್ಲಾಟಕೂರ್, ಉಪ್ಪಾರನಂದಿಹಾಳ, ತುಂಟಾಪುರ ಸೇರಿ ಏಳು ಕೆರೆಗಳ ಹೂಳು ತೆಗೆಯಲಾಗುತ್ತಿದೆ. ಜಿಲ್ಲೆಯಲ್ಲಿ 5 ಲಕ್ಷ ಕ್ಯೂಬಿಕ್ ಮೀಟರ್, ಯಾದಗಿರಿಯಲ್ಲಿ 11 ಲಕ್ಷ ಕ್ಯೂಬಿಕ್ ಮೀಟರ್ ಹೂಳನ್ನ ತೆಗೆಯಲಾಗಿದ್ದು ರೈತರಿಗೆ ಉಚಿತವಾಗಿ ಮಣ್ಣನ್ನ ತೆಗೆದುಕೊಂಡು ಹೋಗಲು ಅನುವು ಮಾಡಿಕೊಡಲಾಗಿದೆ ಅಂತ ಬಿಜೆಎಸ್ ರಾಜ್ಯ ಸಂಘಟಕ ಕಮಲ್ ಕುಮಾರ್ ಜೈನ್ ತಿಳಿಸಿದ್ದಾರೆ.

    ಜಿಲ್ಲಾಡಳಿತದ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಸ್ಥಳೀಯ ಖಾಸಗಿ ಸಂಸ್ಥೆಗಳು ಸಹ ಕೆರೆ ಹೂಳು ತೆಗೆಯಲು ಸಹಕಾರ ನೀಡುತ್ತಿವೆ. ರೈತರು ಸ್ವಯಂ ಪ್ರೇರಿತರಾಗಿ ಫಲವತ್ತಾದ ಮಣ್ಣನ್ನ ತಮ್ಮ ಖರ್ಚಿನಲ್ಲೆ ತೆಗೆದುಕೊಂಡು ಹೋಗುತ್ತಿದ್ದಾರೆ. 8 ರಿಂದ 9 ಅಡಿಯಷ್ಟು ಹೂಳನ್ನ ಪ್ರತಿ ಕೆರೆಯಲ್ಲೂ ತೆಗೆಯಲಾಗುತ್ತಿದೆ. ಸದ್ಯ ಜಿಲ್ಲೆಯಲ್ಲಿ 33 ಕೆರೆಗಳನ್ನ ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ 7 ಕೆರೆಗಳ ಹೂಳು ತೆಗೆಯಲಾಗುತ್ತಿದ್ದು, ಮೊದಲ ಹಂತದ ಕೆಲಸ ಮುಕ್ತಾಯ ಹಂತಕ್ಕೆ ತಲುಪಿದೆ. ಇದರಿಂದ ಜಿಲ್ಲೆಯ ರೈತರು ಖುಷಿ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ, ಬರಗಾಲದ ನಾಡಲ್ಲಿ ಜಲ ಸಂವರ್ಧನೆ ಹಾಗು ಕೆರೆಗಳ ಪುನಶ್ಚೇತನ ಕಾರ್ಯ ಸದ್ದಿಲ್ಲದೆ ನಡೆದಿದೆ. ಮಳೆ ಬಂದಾಗ ಹಳ್ಳಗಳಿಗೆ ಹರಿದು ಪೋಲಾಗುತ್ತಿದ್ದ ನೀರು ಇನ್ಮುಂದೆ ಕೆರೆಯಲ್ಲಿ ನಿಲ್ಲಲಿದೆ. ನೀರಿನ ಸಮಸ್ಯೆ ಎದುರಿಸುತ್ತಲೇ ಇರುವ ರೈತರಿಗೆ ಈಗ ಭರವಸೆಯ ಬೆಳಕೊಂದು ಕಾಣಿಸುತ್ತಿದೆ.

  • 5 ವರ್ಷ ಪ್ರೀತಿಸಿ, ಸಮುದಾಯಕ್ಕೆ ಸೆಡ್ಡು ಹೊಡೆದು ಮದುವೆಯಾಗಿ 3 ತಿಂಗಳಲ್ಲೇ ಬೇರೆಯಾದ್ರು!

    5 ವರ್ಷ ಪ್ರೀತಿಸಿ, ಸಮುದಾಯಕ್ಕೆ ಸೆಡ್ಡು ಹೊಡೆದು ಮದುವೆಯಾಗಿ 3 ತಿಂಗಳಲ್ಲೇ ಬೇರೆಯಾದ್ರು!

    ಬಳ್ಳಾರಿ: ಪ್ರೀತಿ ಮಾಡಬಾರದು. ಮಾಡಿದರೆ ಜಗಕೆ ಹೆದರಬಾರದು ಅಂತಾರೆ. ಹೀಗೆ ಎಲ್ಲರನ್ನೂ ಎದುರು ಹಾಕಿಕೊಂಡು ಐದು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಎದುರು-ಬದುರು ಮನೆ ಹುಡ್ಗ-ಹುಡ್ಗಿ ಮೂರೇ ತಿಂಗಳಲ್ಲಿ ಬೇರೆಯಾಗಿದ್ದಾರೆ.

    ಬಳ್ಳಾರಿಯ ಯುವ-ಯುವತಿ 5 ವರ್ಷಗಳ ಕಾಲ ಪರಸ್ಪರ ಪ್ರೀತಿಸಿ, ಹೊಸಪೇಟೆಯ ಜೈನ್ ಸಮಾಜಕ್ಕೆ ಸಡ್ಡು ಹೊಡೆದು ಜೂನ್ ತಿಂಗಳಿನಲ್ಲಿ ಮನೆ ಬಿಟ್ಟು ಹೋಗಿ ಮದ್ವೆಯಾಗಿದ್ದರು. ಆದ್ರೆ, ಈ ಮದ್ವೆಗೆ ಜೈನ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಈ ಬಗ್ಗೆ, ಭಾರೀ ಗಲಾಟೆ ಸೃಷ್ಟಿಯಾಗಿ ಪಬ್ಲಿಕ್‍ಟಿವಿಯಲ್ಲಿ ಚರ್ಚೆಯೆಲ್ಲಾ ನಡೆದು ಸಂಧಾನ ನಡೆದಿತ್ತು. ಆದ್ರೆ, ಮದ್ವೆ ನಡೆದ ಮೂರೇ ತಿಂಗಳಲ್ಲಿ ಮುರಿದು ಬಿದ್ದಿದೆ.

    ಸಮಾಜವನ್ನೇ ಮೆಟ್ಟಿನಿಂತು ಮದ್ವೆಯಾಗಿದ್ದ ನನಗೆ ಪತಿ ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡಿದ್ದ. ಆತನ ಪೋಷಕರು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ರು. ಜೊತೆಗೆ ಎಲ್ಲದಕ್ಕೂ ಅನುಮಾನ ಪಡುತ್ತಾ ವಿದ್ಯಾಭ್ಯಾಸ ಮಾಡೋಕೂ ಬಿಡದೇ ಟಾರ್ಚರ್ ಮಾಡ್ತಿದ್ರು ಅಂತ ನೊಂದ ಯುವತಿ ದೂರಿದ್ದಾಳೆ.

    ತಂದೆ ತಾಯಿಯ ಮಾತನ್ನೂ ಮೀರಿ ಹೋಗಿದ್ದ ಪುತ್ರಿಯ ಪರಿಸ್ಥಿತಿಗೆ ಹೆತ್ತವರು ಮರುಗಿದ್ದು, ಆಶ್ರಯ ನೀಡಿದ್ದಾರೆ. ಅಲ್ಲದೆ, ನಮ್ಮ ಮಗಳನ್ನು ಹಿಂಸಿಸಿದ ಯುವಕನಿಗೆ ಕಠಿಣ ಶಿಕ್ಷೆಯಾಗಬೇಕು ಅಂತಿದ್ದಾರೆ.

  • ಪ್ರೀತಿಸಿದ ತಪ್ಪಿಗೆ ಹುಡುಗಿ ಮನೆಯವರಿಂದ ಹಲ್ಲೆ -ಹೊಡೆತ ತಿಂದವನನ್ನೇ ಜೈಲಿಗೆ ಕಳಿಸಿದ ಪೊಲೀಸರು

    ಪ್ರೀತಿಸಿದ ತಪ್ಪಿಗೆ ಹುಡುಗಿ ಮನೆಯವರಿಂದ ಹಲ್ಲೆ -ಹೊಡೆತ ತಿಂದವನನ್ನೇ ಜೈಲಿಗೆ ಕಳಿಸಿದ ಪೊಲೀಸರು

    ಬಳ್ಳಾರಿ: ಜೈನ ಸಮಾಜ ಶಾಂತಿ ಅಹಿಂಸೆಗೆ ಹೆಸರು ವಾಸಿ. ಇದಕ್ಕೆ ಅಪವಾದ ಅನ್ನುವಂತೆ ಜೈನ ಸಮುದಾಯದವರೇ ಆದ ಯುವಕ-ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಕ್ಕೆ, ಹುಡುಗನಿಗೆ ಜೈಲುವಾಸ ಅನುಭವಿಸುತ್ತಿದ್ದ, ಹುಡುಗಿ ನರಕ ಯಾತನೆ ಅನುಭವಿಸುತ್ತಿರೋ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.

    ಹೌದು. ಬಳ್ಳಾರಿ ಹೊಸಪೇಟೆಯ ನಿವಾಸಿಗಳಾದ, ಜೈನ ಸಮುದಾಯದ ಮಾಹಿನ್ ಮತ್ತು ಮಾನಸಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಸುದ್ದಿ ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾಗಿತ್ತು. ಯಾವಾಗ ಮಾಹಿನ್ ಮತ್ತು ಮಾನಸಿ ಮದುವೆಯಾದ್ರೋ ಅಂದಿನಿಂದ ಇಂದಿನವರೆಗೆ ಮಾನಸಿ ಮನೆಯವರ ಕಾಟ ಮಾತ್ರ ತಪ್ಪಿಲ್ಲ.

    ಇದಕ್ಕೆ ಮತ್ತೊಂದು ಟ್ವಿಸ್ಟ್ ಏನಪ್ಪಾ ಅಂದ್ರೆ ಹೀಗೆ ಮಾಹಿನ್ ಮೇಲೆ ಹಲ್ಲೆ ಮಾಡೋಕೆ ಬಂದೋರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ಮಾಹಿನ್ ವಿರುದ್ಧವೇ 307 ಕೇಸ್ ಬುಕ್ ಮಾಡಿ ಜೈಲಿಗೆ ಕಳಿಸಿದ್ದಾರೆ. ಇದ್ರಿಂದ ನೊಂದಿರುವ ಮಾಹಿನ್ ಪತ್ನಿ ಮಾನ್ಸಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ.

    ಮಾಹಿನ್‍ನನ್ನು ಅರೆಸ್ಟ್ ಮಾಡಿ ಜೈಲಿಗೆ ಕಳಿಸಿರುವ ಪೊಲೀಸರ ವರ್ತನೆಗೆ ಪತ್ನಿ ಮಾನ್ಸಿ ಬೇಸತ್ತಿದ್ದಾರೆ. ಅಲ್ಲದೇ ಜೈನ ಸಮುದಾಯ ಮುಖಂಡರು ಕೂಡ ಮಾನ್ಸಿ ಹಾಗೂ ಅವ್ರ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಮಾನ್ಸಿಗೆ ನ್ಯಾಯ ಕೊಡಿಸಲು ಧರಣಿ ಸಂಸ್ಥೆ ಅವರ ಜೊತೆಗಿದ್ದು, ಪೊಲೀಸರ ನಡವಳಿಕೆ ಬಗ್ಗೆ ಧರಣಿ ಸಂಸ್ಥೆ ಕಾರ್ಯದರ್ಶಿ, ರಮಾ ನಾಗರಾಜ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    https://www.youtube.com/watch?v=H2HNHxPm-LA