Tag: ಜೈಜಗದೀಶ್

  • ಬಾಟಲಿ ಬಿಸಾಡಿದ್ದಕ್ಕೆ ನಟ ಜೈ ಜಗದೀಶ್ ಮತ್ತು ಮಂಡ್ಯ ವ್ಯಕ್ತಿಯೊಂದಿಗೆ ಗಲಾಟೆ : ನಿಜ ಘಟನೆ ಏನು?

    ಬಾಟಲಿ ಬಿಸಾಡಿದ್ದಕ್ಕೆ ನಟ ಜೈ ಜಗದೀಶ್ ಮತ್ತು ಮಂಡ್ಯ ವ್ಯಕ್ತಿಯೊಂದಿಗೆ ಗಲಾಟೆ : ನಿಜ ಘಟನೆ ಏನು?

    ನಾಲ್ಕೈದು ದಿನಗಳಿಂದ ನಟ ಜೈ ಜಗದೀಶ್ ಅವರು ತಮ್ಮ ತೋಟಕ್ಕೆ ಹೊರಟಾಗ, ಬೆಳ್ಳೂರು ಕ್ರಾಸ್ ಟೋಲ್ ಬಳಿ ವ್ಯಕ್ತಿಯೊಂದಿಗೆ ಗಲಾಟೆಯಾಗಿ ಅದು ಪೊಲೀಸ್ ಠಾಣೆ ಮೆಟ್ಟಿಲು ಏರಿತ್ತು. ಗಲಾಟೆಯಾಗಿ ಐದು ದಿನಗಳ ಬಳಿಕ ಆವ್ಯಕ್ತಿಯು ದೂರು ನೀಡಿದ್ದನ್ನು ಕೇಳಿ ಸ್ವತಃ ಜೈ ಜಗದೀಶ್ ಅವರೇ ಅಚ್ಚರಿ ವ್ಯಕ್ತ ಪಡಿಸಿದ್ದಾರೆ. ಆ ವ್ಯಕ್ತಿ ಮಾಡಿರುವ ಆರೋಪಗಳನ್ನು ಅವರು ತಳ್ಳಿ ಹಾಕಿದ್ದಾರೆ. ಗಲಾಟೆ ನಡೆದದ್ದು ನಿಜವಾದರೂ, ಆ ವ್ಯಕ್ತಿ ದೂರಿನಲ್ಲಿ ಬರೆದದ್ದು ಸುಳ್ಳು ಎಂದು ಹೇಳಿದ್ದಾರೆ ಜೈ ಜಗದೀಶ್.

    ಪ್ರತಿವಾರವೂ ಜೈ ಜಗದೀಶ್ ನ್ಯಾಷನಲ್ ಹೈವೇಯಲ್ಲಿ ತೋಟಕ್ಕೆ ಹೋಗುತ್ತಾರಂತೆ. ಹೀಗೆ ಹೋಗುವ ಸಂದರ್ಭದಲ್ಲಿ ಬೆಳ್ಳೂರು ಕ್ರಾಸ್ ಟೋಲ್ ಬಳಿ ಬಸ್ ನಿಂತಿದೆ. ಆ ಬಸ್ ನಿಂದ ವ್ಯಕ್ತಿಯೊಬ್ಬ ಬಾಟಲಿ ಬಿಸಾಡಿದ್ದಾನೆ. ಅದನ್ನು ಕಂಡು ಜೈ ಜಗದೀಶ್ ಆ ವ್ಯಕ್ತಿಯನ್ನು ಪ್ರಶ್ನಿಸಿದ್ದಾರೆ. ಜಗಳ ಇಲ್ಲಿಂದ ಪ್ರಾರಂಭವಾಗಿದೆ. ಆ ವ್ಯಕ್ತಿಯು ಬಾಟಲಿ ಬಿಸಾಡಿದ್ದು ನಾನಲ್ಲ ಅಂದರೆ, ನೀನೇ ಬಿಸಾಡಿದ್ದು ಎಂದು ಜೈ ಜಗದೀಶ್ ಹೇಳಿದ್ದಾರೆ.  ಆಗ ಆ ವ್ಯಕ್ತಿಯೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಎಂದಿದ್ದಾರೆ ಜೈ ಜಗದೀಶ್. ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ

    ಮಾತಿಗೆ ಮಾತು ಬೆಳೆದಾಗ ಬರೀ ಬೈಗುಳಗಳು ಮಾತ್ರವಲ್ಲ, ಹೊಡೆಯುವಂತೆ ಜೈ ಜಗದೀಶ್ ಮೇಲೆ ಆ ವ್ಯಕ್ತಿ ಬಂದನಂತೆ. ಆ ಜೈ ಜಗದೀಶ್ ಕಾರು ಡ್ರೈವರ್ ಆತನ್ನು ಬಿಡಿಸುವುದಕ್ಕಾಗಿ ಹೋಗಿದ್ದಾರೆ. ಅಲ್ಲದೇ ವ್ಯಕ್ತಿಯು ಕಾರಿನ ಕೀ ಕಿತ್ತುಕೊಂಡಾಗ ಅದನ್ನು ವಾಪಸ್ಸು ಪಡೆಯಲು ಹರಸಾಹಸವೇ ನಡೆದಿದೆ. ಆ ವೇಳೆಯಲ್ಲಿ ವ್ಯಕ್ತಿ ಬಟ್ಟೆ ಹರಿದಿದೆ. ಘಟನೆ ನಡೆದು ಐದು ದಿನಗಳ ನಂತರ ದೂರು ದಾಖಲಾಗಿದೆ. ಅದು ಆ ವ್ಯಕ್ತಿಯಲ್ಲ, ಅವರ ತಂದೆ ಕೊಟ್ಟಿರುವ ದೂರು ಎಂದಿದ್ದಾರೆ ಜೈ ಜಗದೀಶ್.

  • ನಟ ಜೈಜಗದೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ನಟ ಜೈಜಗದೀಶ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

    ಸ್ ನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ಜಯರಾಮೇಗೌಡ ಅನ್ನುವವರಿಗೆ ನಟ ಜೈಜಗದೀಶ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಮತ್ತು ಹಲ್ಲೆ ಮಾಡಿದ್ದಾರೆ ಎಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಇದೇ ಜೂ.5ರಂದು ಈ ಘಟನೆ ನಡೆದದ್ದು, ಜಯರಾಮೇಗೌಡ ಅವರು ಬಸ್ಸಿನಿಂದ ಕೆಳಕ್ಕೆ ಇಳಿಯುತ್ತಿರುವ ಸಂದರ್ಭದಲ್ಲಿ ಬಸ್ ನ ಹಿಂದೆಯೇ ಕಾರಿನಲ್ಲಿ ಬರುತ್ತಿದ್ದ  ಜೈಜಗದೀಶ್ ಅವರು ಕಾರು ನಿಲ್ಲಿಸಿ, ಬಸ್ ನಿಂದ ಬಾಟಲಿ ಎಸೆಯುತ್ತೀಯಾ ಎಂದು ಕೆಟ್ಟದಾಗಿ ನಿಂದಿಸಿದರು. ಮಾತಿಗೆ ಮಾತು ಬೆಳೆದ ನಂತರ ಅವರು ನನ್ನ ಮೇಲೆ ಹಲ್ಲೆಗೆ ಮುಂದಾದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಜೈಪುರ ಪ್ರವಾಸದಲ್ಲಿ `ರಾಬರ್ಟ್’ ನಟಿ ಆಶಾ ಭಟ್

    ಈ ಕುರಿತು ಜೈಜಗದೀಶ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ವರದಿಯಾಗಿದೆ. ಜೈಜಗದೀಶ್ ಮತ್ತು ಜಯರಾಮೇಗೌಡ ಅವರು ಜಗಳ ಮಾಡುವ ಸಂದರ್ಭದಲ್ಲಿ ಸ್ಥಳೀಯರು ಜೈಜಗದೀಶ್ ಅವರಿಗೆ ಸಮಾಧಾನ ಮಾಡಿದರೂ, ಅವರು ಕೋಪ ಕಡಿಮೆ ಆಗಲಿಲ್ಲ ಎಂದಿದ್ದಾರೆ ಜಯರಾಮೇಗೌಡ.

  • ಕಾಣದ ಕೈಗಳ ಆಟಕ್ಕೆ ಬ್ರೇಕ್ ಹಾಕುವ ‘ಟಕ್ಕರ್’

    ಕಾಣದ ಕೈಗಳ ಆಟಕ್ಕೆ ಬ್ರೇಕ್ ಹಾಕುವ ‘ಟಕ್ಕರ್’

    ಸೈಬರ್ ಕ್ರೈಂ ಕಥಾಹಂದರದ ‘ಟಕ್ಕರ್’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಮನೋಜ್ ಕುಮಾರ್ ನಾಯಕ ನಟನಾಗಿ ನಟಿಸುತ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ರಂಜನಿ ರಾಘವನ್ ಜೋಡಿಯಾಗಿದ್ದಾರೆ.

    ‘ರನ್ ಆ್ಯಂಟನಿ’ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ವಿ.ರಘುಶಾಸ್ತ್ರಿ ಈ ಚಿತ್ರದಲ್ಲಿ, ಹೆಣ್ಣುಮಕ್ಕಳ ಜೀವನ ಹಾಗೂ ಜೀವಕ್ಕೆ ಕುತ್ತು ತರುತ್ತಿರುವ ಮೊಬೈಲ್, ಲ್ಯಾಪ್ ಟಾಪ್ ಬಳಕೆ, ತಂತ್ರಜ್ಞಾನದಿಂದಾಗಬಹುದಾದ ಅನಾಹುತಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕಣ್ಣಿಗೆ ಕಾಣದ ಹ್ಯಾಕರ್‌ಗಳು ಎಲ್ಲೋ ಕುಳಿತು ಹೆಣ್ಣುಮಕ್ಕಳ ಜೀವದ ಜೊತೆ ಆಟವಾಡುತ್ತಿದ್ದಾರೆ. ಇದೆಲ್ಲ ಹೇಗೆ ಸಾಧ್ಯ, ಯಾವ ರೀತಿ ಟ್ರ್ಯಾಪ್ ಮಾಡಿ ಬಲೆ ಬೀಸುತ್ತಾರೆ ಎಲ್ಲವನ್ನು ಸಿನಿಮ್ಯಾಟಿಕ್ ಆಗಿ ಮಾಸ್ ಎಳೆಯಲ್ಲಿ ತೆರೆ ಮೇಲೆ ಚಿತ್ರತಂಡ ತಂದಿದೆ. ಇದನ್ನೂ ಓದಿ: ಭಾವಿಪತಿಯನ್ನೇ ಅರೆಸ್ಟ್ ಮಾಡಿದ ಇನ್ಸ್‌ಪೆಕ್ಟರ್ 

    ಕಥೆಯೇನು?
    ನಾಯಕ ನಟ ಸಾತ್ಯುಕಿ ಕಾಲೇಜು ಸ್ಟೂಡೆಂಟ್. ದಿನಾ ಒಂದಿಲ್ಲೊಂದು ಹೊಡೆದಾಟದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರೋದು ಆತನಿಗೆ ಕಾಮನ್. ಹಾಗಂತ ಕೆಟ್ಟವನಲ್ಲ. ಸಹಾಯ ಹಸ್ತ ಚಾಚೋ ಹುಡುಗ. ಆತನ ಗುಣಕ್ಕೆ ಮನಸೋಲೋ ಹುಡುಗಿ ಪುಣ್ಯ. ಹೀಗಿರುವಾಗ ಪಕ್ಕದ್ಮನೆ ಹುಡುಗಿ ದೀಪಾ ಕೊಲೆಯಾಗುತ್ತಾಳೆ. ಇದರ ಜೊತೆಗೆ ನಗರದಲ್ಲಿ ಅನೇಕ ಹುಡುಗಿಯರು ಕಾರಣವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುತ್ತಾರೆ ಇದು ಪೊಲೀಸ್ ಇಲಾಖೆಗೂ ದೊಡ್ಡ ತಲೆ ನೋವಾಗಿರುತ್ತೆ.

    ದೀಪಾ ಕೊಲೆ ಭೇದಿಸಲು ನಿಂತ ಸಾತ್ಯುಕಿಗೆ ಪೊಲೀಸರ ಸಾಥ್ ಕೂಡ ಸಿಗುತ್ತೆ. ಇದೊಂದು ದೊಡ್ಡ ಸೈಬರ್ ಕ್ರೈಂ, ಹುಡುಗಿಯರ ಆತ್ಮಹತ್ಯೆ ಹಿಂದೆ ಇರೋದು ಹ್ಯಾಕರ್‍ನದ್ದೇ ಕೈವಾಡ ಅನ್ನೋದು ಮನವರಿಕೆಯಾಗುತ್ತೆ. ಆ ಕಾಣದ ಕೈ ಯಾರದ್ದು.? ಹುಡುಗಿಯರು ಸೂಸೈಡ್ ಮಾಡಿಕೊಳ್ಳಲು ಕಾರಣವೇನು? ಯಾವ ರೀತಿ ಹುಡುಗಿಯರನ್ನು ಟ್ರ್ಯಾಪ್ ಮಾಡುತ್ತಿದ್ದ..? ಎಂಬುದರ ಬೆನ್ನತ್ತಿ ನಾಯಕ ಹೊರಡುತ್ತಾನೆ. ಈ ಆಟದಲ್ಲಿ ಗೆಲುವು ಸುಲಭದ್ದಾಗಿರೋದಿಲ್ಲ. ಬಂದ ಅಡೆತಡೆಗಳನ್ನು ಚಾಲೆಂಜಿಂಗ್ ಆಗಿ ಸ್ವೀಕರಿಸಿ ಹ್ಯಾಕರ್‌ನನ್ನು ಕಂಡು ಹಿಡಿಯುತ್ತಾನಾ.? ಹ್ಯಾಕರ್ ಬಲೆಗೆ ಬಿದ್ದ ಹುಡುಗಿಯರು ಬಚಾವಾಗುತ್ತಾರಾ..? ಅನ್ನೋದು ‘ಟಕ್ಕರ್’ ಸಾರಾಂಶ.

    ವಿಮರ್ಶೆ:
    ಸೈಬರ್ ಕ್ರೈಂ ಕಥಾಹಂದರವನ್ನು ಪಕ್ಕಾ ಮಾಸ್ ಶೈಲಿಯಲ್ಲಿ ಹೆಣೆದು ನಿರ್ದೇಶಕ ರಘು ಶಾಸ್ತ್ರಿ ತಮ್ಮ ಜಾಣ್ಮೆಯನ್ನು ಪ್ರದರ್ಶಿಸಿದ್ದಾರೆ. ಆದ್ರೆ ಚಿತ್ರಕಥೆ ವಿಚಾರದಲ್ಲಿ ಇನ್ನಷ್ಟು ಹೋಂವರ್ಕ್ ಮಾಡಿದ್ರೆ ಚಿತ್ರ ಇನ್ನಷ್ಟು ಅದ್ಭುತವಾಗಿರುತ್ತಿತ್ತು. ಮನೋಜ್ ಮಾಸ್ ಹೀರೋ ಆಗಿ ಗಮನ ಸೆಳೆದರೂ ಅಭಿನಯದಲ್ಲಿ ಇನ್ನಷ್ಟು ಪಳಗಬೇಕು. ನಾಯಕಿ ರಂಜನಿ ರಾಘವನ್ ವೈದ್ಯಕೀಯ ವಿದ್ಯಾರ್ಥಿನಿಯಾಗಿ ಸಾಫ್ಟ್ ರೋಲ್‍ನಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಎನ್‍ಕೌಂಟರ್‌ನಲ್ಲಿ ಮೂರು ಭಯೋತ್ಪಾದಕರ ಪೈಕಿ ಒಬ್ಬ ಬದುಕುಳಿದ 

    ಚಿತ್ರದಲ್ಲಿ ಕಡಿಮೆ ಸ್ಪೇಸ್ ಇದ್ದರೂ ಇರುವಷ್ಟು ಸಮಯ ಗಮನ ಸೆಳೆಯುತ್ತಾರೆ. ಪೊಲೀಸ್ ಕಮಿಶನರ್ ಆಗಿ ಜೈಜಗದೀಶ್, ಪೊಲೀಸ್ ಆಗಿ ಶ್ರೀಧರ್, ಸಾಧುಕೋಕಿಲ ಎಂದಿನಂತೆ ತಮ್ಮ ಮನೋಜ್ಞ ಅಭಿನಯ ತೋರಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮರಾ ವರ್ಕ್, ಮಣಿಕಾಂತ್ ಕದ್ರಿ ಸಂಗೀತ ಅಷ್ಟೇನು ಕಾಡದಿದ್ರು ಚೊಕ್ಕದಾಗಿ ಮೂಡಿ ಬಂದಿದೆ. ಒಟ್ಟಾರೆಯಾಗಿ, ಪ್ರತಿಯೊಬ್ಬರೂ ನೋಡಲೇಬೇಕಾದ, ಫ್ಯಾಮಿಲಿ ಸಮೇತ ಎಂಜಾಯ್ ಮಾಡಬಹುದಾದ ಚಿತ್ರ ‘ಟಕ್ಕರ್’.

  • ಹಿರಿಯ ನಟ ಜೈ ಜಗದೀಶ್ ವಿರುದ್ಧ ಕಿಶನ್ ಗರಂ

    ಹಿರಿಯ ನಟ ಜೈ ಜಗದೀಶ್ ವಿರುದ್ಧ ಕಿಶನ್ ಗರಂ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಬಿಗ್ ಬಾಸ್-7’ ಶುರುವಾಗಿ ಎರಡು ವಾರಗಳಾಗಿದೆ. ಈಗಾಗಲೇ ಮನೆಯಲ್ಲಿ ಜಗಳ ಶುರುವಾಗಿದ್ದು, ಹಿರಿಯ ನಟ ಜೈ ಜಗದೀಶ್ ವಿರುದ್ಧ ಕಿಶನ್ ಗರಂ ಆಗಿದ್ದಾರೆ.

    ಬಿಗ್ ಬಾಸ್ ಸ್ಪರ್ಧಿಗಳು ಮನೆಯ ಹೊರಗೆ ಕುಳಿತಿರುತ್ತಾರೆ. ಈ ವೇಳೆ ಕಿಶನ್, ಜೈ ಜಗದೀಶ್ ಅವರ ಬಳಿ ಹೋಗಿ ನೀವು ಎಲ್ಲರನ್ನು ಕೆಟ್ಟದಾಗಿ ನಿಂದಿಸುತ್ತೀರಿ. ತುಂಬಾ ಜನಕ್ಕೆ ಬೇಜಾರು ಮಾಡಿದ್ದೀರಿ. ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಜೈಜಗದೀಶ್ ವಿರುದ್ಧ ಗರಂ ಆಗಿದ್ದಾರೆ.

    ಈ ವೇಳೆ ಜಗದೀಶ್ ನೀನು ಇಷ್ಟು ದಿನ ಇರಲಿಲ್ಲ. ನಾನು ಯಾರಿಗೂ ಬೇಜಾರು ಮಾಡಿಲ್ಲ. ನಾನು ನೇರವಾಗಿ ಎಲ್ಲರ ಜೊತೆ ಮಾತನಾಡುತ್ತೇನೆ. ನೀನು ಇಷ್ಟು ದಿನಗಳಿಂದ ಇಲ್ಲಿ ಇರಲಿಲ್ಲ. ಹಾಗಾಗಿ ನಿನಗೆ ಸಂಪೂರ್ಣ ವಿಷಯ ಗೊತ್ತಿಲ್ಲ. ನೀನು ನನಗೆ ಬುದ್ಧಿ ಹೇಳಲು ಬರಬೇಡ ಎಂದು ಜೈ ಜಗದೀಶ್ ಕೋಪದಲ್ಲಿಯೇ ಉತ್ತರಿಸಿದ್ದಾರೆ.

    ಬಳಿಕ ಚೈತ್ರ ವಾಸುದೇವ್ ಅವರು ಕೂಡ ಕಣ್ಣೀರು ಹಾಕಿ, ನಾನು ಊಟಕ್ಕೆಂದು ಬಂದಿಲ್ಲ. ಬೇರೆಯವರ ಬಳಿ ನಾನು ಕಿತ್ತುಕೊಂಡು ತಿಂದಿಲ್ಲ. ನಾನು ತಿನ್ನುವುದಕ್ಕೆ ಬಂದಿರಲಿಲ್ಲ. ಕೆಲಸ ಹುಡುಕುತ್ತಿದ್ದೆ. ನಾನು ಕೇವಲ ಬಿಸ್ಕೇಟ್ ನೋಡುತ್ತಿದ್ದೆ. ಅದನ್ನು ತಿನ್ನಲು ಹೋಗಲಿಲ್ಲ ಎಂದು ಹೇಳಿದ್ದಾರೆ.

    ಕಿಶನ್ ಹಾಗೂ ಜೈ ಜಗದೀಶ್ ನಡುವೆ ಜಗಳ ಜಾಸ್ತಿ ಆಗುತ್ತಿದ್ದಂತೆ ನಟ ಹರೀಶ್ ರಾಜ್, ಸುಜಾತ ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ. ಕಿಶನ್ ಜಗಳವಾಡುತ್ತಿರುವುದನ್ನು ನೋಡಿ ಹರೀಶ್, ಇದು ಜೈ ಜಗದೀಶ್ ಅವರ ಆಡುಭಾಷೆ. ನಿನಗೆ ಹಾಗೆ ಅನಿಸಿರಬಹುದು ಎಂದು ಕಿಶನ್ ಹಾಗೂ ಜೈ ಜಗದೀಶ್ ಅವರನ್ನು ಸಮಾಧಾನಪಡಿಸಿದ್ದಾರೆ.

    ಗಲಾಟೆಯ ಬಳಿಕ ಅಡುಗೆ ವಿಭಾಗದಲ್ಲಿದ್ದ ಜೈ ಜಗದೀಶ್ ಅವರು ಈ ವಾರದ ಕ್ಯಾಪ್ಟನ್ ಆಗಿದ್ದ ರಶ್ಮಿ ಅವರನ್ನು ಕರೆದಿದ್ದಾರೆ. ರಶ್ಮಿ ಅವರನ್ನು ಕರೆದು ನನಗೆ ಅಡುಗೆ ಡಿಪಾರ್ಟ್ ಮೆಂಟ್ ಬೇಡ. ನನಗೆ ಬೇರೆ ಡಿಪಾರ್ಟ್ ಮೆಂಟ್ ಬೇಕು ಎಂದು ಹೇಳಿದ್ದಾರೆ.