Tag: ಜೆಇಇ

  • ʻJEE ಮಾಡೋಕಾಗಲ್ಲ, ನಾನು ಕೆಟ್ಟ ಮಗಳು, ಇದೇ ನನ್ನ ಕೊನೇ ಆಯ್ಕೆʼ – ಡೆತ್‌ನೋಟ್‌ ಬರೆದಿಟ್ಟು ಯುವತಿ ಆತ್ಮಹತ್ಯೆ!

    ʻJEE ಮಾಡೋಕಾಗಲ್ಲ, ನಾನು ಕೆಟ್ಟ ಮಗಳು, ಇದೇ ನನ್ನ ಕೊನೇ ಆಯ್ಕೆʼ – ಡೆತ್‌ನೋಟ್‌ ಬರೆದಿಟ್ಟು ಯುವತಿ ಆತ್ಮಹತ್ಯೆ!

    ಜೈಪುರ: 18 ವರ್ಷದ ಜೆಇಇ (Joint Entrance Examination) ಆಕಾಂಕ್ಷಿ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾದಲ್ಲಿ (Kota) ಸೋಮವಾರ ನಡೆದಿದೆ.

    ನನಗೆ ಜೆಇಇ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪೋಷಕರಿಗೆ ಡೆತ್‌ನೋಟ್‌ (Death Note) ಬರೆದಿಟ್ಟು ಪರೀಕ್ಷೆ ಇನ್ನೆರಡು ದಿನಗಳು ಇರುವಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ನಿಹಾರಿಕ ಎಂದು ಗುರುತಿಸಲಾಗಿದೆ. ಕಳೆದ ಒಂದು ವಾರದಲ್ಲಿ ಇದು 2ನೇ ಆತ್ಮಹತ್ಯೆಯ ಪ್ರಕರಣವಾಗಿದೆ.

    ಜೆಇಇ ಮುಖ್ಯಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಸಂತ್ರಸ್ತೆ ಕೋಟಾದ ಶಿಕ್ಷಾನಗರಿ ಪ್ರದೇಶದಲ್ಲಿನ ತನ್ನ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೇ ಜನವರಿ 31 ರಂದು ಪರೀಕ್ಷೆ ನಿಗದಿಯಾಗಿತ್ತು. ಇದನ್ನೂ ಓದಿ: Rajya Sabha Elections: 15 ರಾಜ್ಯಗಳ 56 ಸ್ಥಾನಗಳಿಗೆ ಫೆ.27 ರಂದು ಚುನಾವಣೆ

    ಯುವತಿ ಬರೆದ ಡೆತ್‌ ನೋಟ್‌ನಲ್ಲಿ ಏನಿದೆ? ‌
    ಮಮ್ಮಿ-ಪಪ್ಪಾ ನಾನು ಜೆಇಇ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ಸೋತಿದ್ದೇನೆ, ಇದಕ್ಕೆ ನಾನೇ ಕಾರಣ. ನಾನು ಕೆಟ್ಟ ಮಗಳು. ನನ್ನಮ್ಮು ಕ್ಷಮಿಸಿ, ಮಮ್ಮಿ-ಪಪ್ಪಾ ಇದು ನನ್ನ ಕೊನೆಯ ಆಯ್ಕೆಯಾಗಿದೆ ಎಂದು ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಇದೇ ಜನವರಿ 23ರಂದು ಕೋಟಾದಲ್ಲಿ ನೀಟ್‌ಗೆ ತಯಾರಿ ನಡೆಸುತ್ತಿದ್ದ ಉತ್ತರ ಪ್ರದೇಶದ 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇದನ್ನೂ ಓದಿ: Gyanvapi Mosque Case: ವಜುಖಾನಾ ಡಿ-ಸೀಲಿಂಗ್‌ಗೆ ಹಿಂದೂ ಪರ ಅರ್ಜಿದಾರರಿಂದ ಸುಪ್ರೀಂಕೋರ್ಟಿಗೆ ಅರ್ಜಿ

    ಅಷ್ಟೇ ಅಲ್ಲ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗಳ ಕೋಚಿಂಗ್ ಸಂಸ್ಥೆಗಳಿಗೆ ಹೆಸರುವಾಸಿಯಾಗಿರುವ ಕೋಟಾದಲ್ಲಿ 2023ರಲ್ಲಿ 29 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

  • JEE Mains ಪರೀಕ್ಷೆಯಲ್ಲಿ ಅಕ್ರಮ – ಲ್ಯಾಂಡ್ ಆದ ಕೂಡಲೇ ರಷ್ಯಾ ಪ್ರಜೆ ಅರೆಸ್ಟ್

    ನವದೆಹಲಿ: ಜೆಇಇ ಮೇನ್ಸ್ (JEE Mains) ಪರೀಕ್ಷೆಯ (Exam) ವೆಬ್‌ಸೈಟ್ ಹ್ಯಾಕ್ (Hack) ಮಾಡಿದ್ದ ರಷ್ಯಾ (Russia) ಪ್ರಜೆಯನ್ನು ಸಿಬಿಐ (CBI) ಬಂಧಿಸಿದೆ.

    ಆರೋಪಿ ಮಿಖಾಯಿಲ್ ಶಾರ್ಗಿನ್‌ನನ್ನು ಸಿಬಿಐ ಪೊಲೀಸರು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಈತನ ಕುರಿತು ಸಿಬಿಐ ಲುಕೌಟ್ ನೋಟಿಸ್ ಹೊರಡಿಸಿತ್ತು. ಕಜಕಿಸ್ತಾನದಿಂದ ಆತ ದೆಹಲಿಗೆ ಲ್ಯಾಂಡ್ ಆದ ಕೂಡಲೇ ವಶಕ್ಕೆ ಪಡೆದು ಬಂಧಿಸಲಾಗಿದೆ. ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಈತನೇ ಮುಖ್ಯ ಹ್ಯಾಕರ್ ಆಗಿದ್ದ ಎಂದು ಸಿಬಿಐ ಮೂಲಗಳು ತಿಳಿಸಿವೆ.

    EXAM

    ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ನಡೆದಿದ್ದ ಜೆಇಇ ಮೇನ್ಸ್ ಆನ್‌ಲೈನ್ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಈ ಪರೀಕ್ಷೆಯಲ್ಲಿ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಟಿಸಿಎಸ್ ಸಾಫ್ಟ್‌ವೇರ್ ಹ್ಯಾಕ್ ಮಾಡಿ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ್ದ. ಇದನ್ನೂ ಓದಿ: ಬಡತನ, ನಿರುದ್ಯೋಗ, ಸಂಪತ್ತಿನ ಅಸಮಾನತೆ ಅಪಾಯಕಾರಿಯಾಗುತ್ತಿದೆ – RSS ಬೇಸರ

    ಇದಾದ ಬಳಿಕ ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಅಫಿನಿಟಿ ಎಜುಕೇಶನ್ ಹೆಸರಿನ ಖಾಸಗಿ ಕೋಚಿಂಗ್ ಸಂಸ್ಥೆಯ ಸಿಬ್ಬಂದಿ ತಲಾ 12-15 ಲಕ್ಷ ರೂ.ವರೆಗೆ ಪ್ರಶ್ನೆ ಪತ್ರಿಕೆಯನ್ನು ಮಾರಾಟ ಮಾಡಿದ್ದ.

    TET EXAM 2

    ಈ ಅಕ್ರಮ ಪ್ರಕರಣದಲ್ಲಿ ಹಲವರು ವಿದೇಶಿ ವ್ಯಕ್ತಿಗಳ ಕೈವಾಡ ಇದ್ದು ತನಿಖೆ ನಡೆಯುತ್ತಿದೆ. ಅಕ್ರಮದಲ್ಲಿ ಭಾಗಿಯಾದ 20 ವಿದ್ಯಾರ್ಥಿಗಳು ಮೂರು ವರ್ಷ ಪರೀಕ್ಷೆ ಬರೆಯದಂತೆ ನಿರ್ಬಂಧ ವಿಧಿಸಲಾಗಿದೆ. ಇದನ್ನೂ ಓದಿ: PFI ಜೊತೆ SDPIಗೆ ಯಾವುದೇ ಸಂಬಂಧವಿಲ್ಲ – ಚುನಾವಣಾ ಆಯೋಗ ಸ್ಪಷ್ಟನೆ

    Live Tv
    [brid partner=56869869 player=32851 video=960834 autoplay=true]

  • ದೇಶದಲ್ಲೀಗ ಶಿಕ್ಷಣ ತುಂಬಾ ದುಬಾರಿ!

    ದೇಶದಲ್ಲೀಗ ಶಿಕ್ಷಣ ತುಂಬಾ ದುಬಾರಿ!

    ನವದೆಹಲಿ: ದೇಶದಲ್ಲಿ ಈಗ ಶಿಕ್ಷಣ ತುಂಬಾ ದುಬಾರಿಯಾಗಿದೆ. ಬೆಳೆಯುತ್ತಿರುವ ತಾಂತ್ರಿಕತೆಗೆ ತಕ್ಕಂತೆ ವೇಗವಾಗಿ ಮುನ್ನುಗ್ಗಬೇಕೆಂಬ ಉತ್ಸಾಹದಿಂದ ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣವನ್ನೇ ಕೊಡಿಸಲು ಪೋಷಕರು ಬಯಸುತ್ತಿದ್ದಾರೆ. ಹಾಗಾಗಿಯೇ ಖಾಸಗಿ ಶಾಲೆಗಳಿಗೆ ಡಿಮ್ಯಾಂಡ್ ಹೆಚ್ಚಾಗಿದ್ದು, ಶಿಕ್ಷಣವೂ ದುಬಾರಿಯಾಗಿದೆ. ಇತ್ತೀಚಿನ ಅಧ್ಯಯನ ವರದಿಗಳೂ ತಮ್ಮ ಸಂಶೋಧನೆಯ ಮೂಲಕ ಅದನ್ನು ಸಾಬೀತು ಮಾಡಿವೆ. ಆರ್ಥಿಕ ತೊಂದರೆಗಳು ಎದುರಾಗುತ್ತಿದ್ದರೂ ಶಾಲಾ-ಕಾಲೇಜುಗಳು ಮಾತ್ರ ಕಡಿಮೆಯಾಗುತ್ತಿಲ್ಲ ಎಂಬುದನ್ನು ತಜ್ಞರೂ ಒಪ್ಪಿಕೊಂಡಿದ್ದಾರೆ.

    ಆನ್‌ಲೈನ್ ಸಂಶೋಧನೆಯ ಪ್ರಕಾರ ಭಾರತದಲ್ಲಿ ಒಂದು ಮಗು 3 ವರ್ಷದಿಂದ 17 ವರ್ಷದ ವರೆಗೆ ಶಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯಲು ಕನಿಷ್ಠ 30 ಲಕ್ಷ ರೂ. ವೆಚ್ಚ ಮಾಡಬೇಕಿದೆ ಎಂದು ಹೇಳಿದೆ. ಇದನ್ನೂಓದಿ: ಭಾರತದಲ್ಲಿ ಆತ್ಮಾಹುತಿ ದಾಳಿಗೆ ಸ್ಕೆಚ್ ಹಾಕಿದ್ದ ISIS ಭಯೋತ್ಪಾದಕ ರಷ್ಯಾದಲ್ಲಿ ಅರೆಸ್ಟ್

    10 ವರ್ಷದ ಹಳೆಯ ಸೂತ್ರದ ಪ್ರಕಾರವೇ ಸಂಶೋಧನೆ ಮಾಡಲಾಗಿದ್ದು, ಅಂಕಿ-ಅಂಶ ನಿಖರ ಎಂದು ಹೇಳಲಾಗುವುದಿಲ್ಲ. ಇದಕ್ಕಿಂತಲೂ ಹೆಚ್ಚಿನ ವೆಚ್ಚವೂ ಆಗಬಹಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

    ಸಾಂದರ್ಭಿಕ ಚಿತ್ರ

    2012 ರಿಂದ 2020ರ ನಡುವೆ ಭಾರತದಲ್ಲಿ ಶೈಕ್ಷಣಿಕ ವೆಚ್ಚವು ಶೇ.10 ರಿಂದ 12 ಪ್ರತಿಶತದಷ್ಟು ಹೆಚ್ಚಾಗಿದೆ. ಇದರಲ್ಲಿ ಕೇವಲ ಬೋಧನಾ ಶುಲ್ಕ ಮಾತ್ರವಲ್ಲದೇ ಮಕ್ಕಳಿಗೆ ಖರ್ಚಾಗುವ ಸಾರಿಗೆ ಹಾಗೂ ಪರೀಕ್ಷೆಗಳ ವೆಚ್ಚವೂ ಒಟ್ಟಾರೆ ಖರ್ಚಿನ ಮೇಲೆ ಅವಲಂಬಿತವಾಗಿರುತ್ತದೆ. ವಾರ್ಷಿಕವಾಗಿ ಒಂದು ಬಾರಿ ವ್ಯಯಿಸುವ ವೆಚ್ಚವಾಗಿದೆ ಎಂದು ಹೇಳಲಾಗಿದೆ. ಇದನ್ನೂಓದಿ: ಸಂಗೀತ ಕಾರ್ಯಕ್ರಮದಲ್ಲಿ ಬಿಯರ್ ಬಾಟಲಿ, ಕಲ್ಲು ತೂರಿ ಪೊಲೀಸರ ಮೇಲೆ ಹಲ್ಲೆ

    ಸಾಂದರ್ಭಿಕ ಚಿತ್ರ

    ಯಾವ ಮಾದರಿ ಶಿಕ್ಷಣಕ್ಕೆ ಎಷ್ಟು ಹಣ?

    • ಪ್ರಥಮ ದರ್ಜೆಯ ನಗರದ ಹೆಚ್ಚಿನ ಶಾಲೆಗಳಲ್ಲಿ 25 ಸಾವಿರದಿಂದ 75 ಸಾವಿರ ರೂ. ವರೆಗೆ ಪ್ರವೇಶ ಶುಲ್ಕ ಹೊಂದಿರುತ್ತವೆ. ಒಂದು ವೇಳೆ ಏಕ ಕಾಲದಲ್ಲಿ ಇಬ್ಬರು ಮಕ್ಕಳನ್ನು ಶಾಲೆಗೆ ಸೇರಿಸುವುದಾದರೆ 10 ರಿಂದ 20 ಸಾವಿರ ವರೆಗೆ ರಿಯಾಯಿತಿ ಪಡೆಯಬಹುದಾಗಿದೆ.
    • ಪ್ರಥಮ ಹಾಗೂ ದ್ವಿತೀಯ ದರ್ಜೆ ನಗರದ ಕೆಲವು ಶಾಲೆಗಳಲ್ಲಿ ಶಿಶುವಿಹಾರವನ್ನೂ ಪ್ರೀಸ್ಕೂಲ್ ನಲ್ಲಿ ಸೇರಿಸಲಾಗಿದೆ. ಅದಕ್ಕಾಗಿ ಅವುಗಳಿಗೆ 60 ಸಾವಿರದಿಂದ 1.5 ಲಕ್ಷದ ವರೆಗೆ ಪ್ರವೇಶ ಶುಲ್ಕ ಇರುತ್ತದೆ. ಪೋಷಕರಿಬ್ಬರೂ ಕೆಲಸದಲ್ಲಿ ಇದ್ದರೆ ಅಂಥವರಿಗಾಗಿ ಡೇ ಕೇರ್ ಸೌಲಭ್ಯಗಳೂ ಇವೆ. ಕೆಲವು ಮಹಾನಗರಗಳಲ್ಲಿ ವೃತ್ತಿಪರ ಡೇ-ಕೇರ್ ಸೌಲಭ್ಯ ಕೇಂದ್ರಗಳು ದಿನಕ್ಕೆ 5,000 ರಿಂದ 8,500 ವರೆಗೂ ಶುಲ್ಕ ಪಡೆಯುತ್ತವೆ.
    • ಪ್ರಾಥಮಿಕ ಶಾಲಾ ಶಿಕ್ಷಣಕ್ಕೆ 1.25 ಲಕ್ಷದಿಂದ 1.75 ಲಕ್ಷ ರೂ.ವರೆಗೆ ಇದೆ. ಪೋಷಕರು ತಮ್ಮ ಮಕ್ಕಳ ಪ್ರಾಥಮಿಕ ಶಿಕ್ಷಣಕ್ಕಾಗಿಯೇ 5.50 ಲಕ್ಷ ಬಜೆಟ್ ವ್ಯಯಿಸಬೇಕಿದೆ.
    • ಮಧ್ಯಮ ಶಾಲೆಗಳಲ್ಲಿ ಸರಾಸರಿ ಬೋಧನಾ ಶುಲ್ಕ 1.6 ಲಕ್ಷ ರೂ.ನಿಂದ 1.8 ರೂ. ನಡುವೆ ಇರುತ್ತದೆ. ಇದರಿಂದ ಮಧ್ಯಮ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣಕ್ಕಾಗಿಯೇ 9.5 ಲಕ್ಷ ರೂ ವಿನಿಯೋಗಿಸಬೇಕಾಗುತ್ತದೆ.
    • 11ನೇ ತರಗತಿಯಿಂದ, ಅನೇಕ ಶಾಲೆಗಳು ಪೋಷಕರು ಪ್ರತ್ಯೇಕ ಮಾಸಿಕ 4,000 ದಿಂದ 7 ಸಾವಿರದವರೆಗೆ ಪುಸ್ತಕಕ್ಕಾಗಿ ಪಾವತಿ ಮಾಡಬೇಕಿರುತ್ತದೆ. ಒಟ್ಟಾರೆ ಪ್ರೌಢಶಾಲಾ ಶಿಕ್ಷಣಕ್ಕಾಗಿ ಅಂದಾಜು 9 ಲಕ್ಷ ರೂ. ಮೀಸಲಿಸಬೇಕು.
    • ಇದನ್ನು ಹೊರತುಪಡಿಸಿ ಜೆಇಇ ಮತ್ತು ಇತರ ಪರೀಕ್ಷೆಗಳಂತಹ ಪ್ರವೇಶ ಪರೀಕ್ಷೆಗಳಿಗೆ ಕೇವಲ ಕೋಚಿಂಗ್ ವೆಚ್ಚವೇ 30 ಸಾವಿರದಿಂದ 5 ಲಕ್ಷದವರೆಗೆ ಹಣ ವ್ಯಯಿಸಬೇಕಾಗುತ್ತದೆ ಎಂದು ಸಂಶೋಧನಾ ವರದಿ ಹೇಳಿದೆ.

    Live Tv
    [brid partner=56869869 player=32851 video=960834 autoplay=true]

  • ಜೆಇಇ, ನೀಟ್, ಸಿಇಟಿಗೆ ನೆರವು ನೀಡುವ ಗೆಟ್ ಸೆಟ್ ಗೋ ಕಾರ್ಯಕ್ರಮಕ್ಕೆ ಚಾಲನೆ

    ಜೆಇಇ, ನೀಟ್, ಸಿಇಟಿಗೆ ನೆರವು ನೀಡುವ ಗೆಟ್ ಸೆಟ್ ಗೋ ಕಾರ್ಯಕ್ರಮಕ್ಕೆ ಚಾಲನೆ

    ಬೆಂಗಳೂರು: ಜೆಇಇ, ನೀಟ್ ಮತ್ತು ಸಿಇಟಿಯಂತಹ ಕಠಿಣ ಪ್ರವೇಶ ಪರೀಕ್ಷೆಗಳನ್ನು ತೆಗೆದುಕೊಳ್ಳಲಿರುವ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ನೆರವು ನೀಡುವ ಮೂರನೇ ವರ್ಷದ ಗೆಟ್-ಸೆಟ್-ಗೋ (GetCETgo) ಆನ್ ಲೈನ್ ತರಬೇತಿ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವತ್ಥನಾರಾಯಣ ಬುಧವಾರ ಚಾಲನೆ ನೀಡಿದರು.

    ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಲತಾಣ (www.getcetgo.in) ಅನಾವರಣಗೊಳಿಸಿ ಮಾತನಾಡಿದ ಅಶ್ವತ್ಥನಾರಾಯಣ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳು ಡಿಜಿಲರ್ನ್ ಎಜುಟೆಕ್ ಸಂಸ್ಥೆಯ ಜತೆಗೂಡಿ ರೂಪಿಸಿರುವ ಈ ವಿದ್ಯಾರ್ಥಿ ಸ್ನೇಹಿ ಉಪಕ್ರಮದ ಲಾಭ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ಪಿಯುಸಿಯಿಂದಲೇ ಸಿಗುವಂತೆ ಮಾಡಲಾಗುವುದು. ಈ ಸಂಬಂಧ ಕಂಪನಿಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದರು.

    ಜಾಲತಾಣದ ಜತೆಗೆ ಆ್ಯಪ್ ಮೂಲಕವೂ ಈ ಪ್ರಯೋಜನ ಪಡೆಯಬಹುದಾಗಿದ್ದು, ಇದನ್ನು ಗೂಗಲ್ ಪ್ಲೇಸ್ಟೋರ್‌ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಅಲ್ಲದೆ, ಯೂಟ್ಯೂಬ್ ಮೂಲಕವೂ ಇದರ ವಿಡಿಯೋಗಳನ್ನು ವೀಕ್ಷಿಸಬಹುದು. ಇದು ಪರಿಣಾಮಕಾರಿ ಕಲಿಕೆಯನ್ನು ಸುಲಭಗೊಳಿಸಿದ್ದು, ಕಳೆದ ಎರಡು ವರ್ಷಗಳಲ್ಲಿ ಈ ವೇದಿಕೆ 3.50 ಲಕ್ಷಕ್ಕೂ ಹೆಚ್ಚು ಲಾಗ್‌ಇನ್ ಕಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ವೇದಿಕೆಯಲ್ಲೇ ಕೊಳ್ಳೇಗಾಲ ಟಿಕೆಟ್ ಫೈನಲ್ ಮಾಡಿದ ಬಿಎಸ್‌ವೈ- ಯಾರು ಅಭ್ಯರ್ಥಿ?

    ಗೆಟ್ ಸೆಟ್ ಗೋ ಜಾಲತಾಣದಲ್ಲಿ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಒಮ್ಮೆ ನೋಂದಾಯಿಸಿಕೊಂಡರೆ ಓದಿನ ಪುನರ್ಮನನಕ್ಕೆ ಅನುಕೂಲವಾಗುವ ವೀಡಿಯೋಗಳು, ಸಾರರೂಪದ ಪಿಪಿಟಿಗಳು, ಅಭ್ಯಾಸ ಪ್ರಶ್ನೆಗಳು, ಅಧ್ಯಾಯವಾರು ಪರೀಕ್ಷೆಗಳು, ಅಣಕು ಪರೀಕ್ಷೆಗಳು ಎಲ್ಲವೂ ಉಚಿತವಾಗಿ ಸಿಗುತ್ತವೆ. ಜತೆಗೆ ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆಯನ್ನು ಎದುರಿಸಿ, ತಮ್ಮ ಅಂಕ ಮತ್ತು ಸ್ಥಾನಗಳನ್ನು ತಿಳಿದುಕೊಳ್ಳಬಹುದು ಎಂದು ಹೇಳಿದರು.

    ಎರಡು ವರ್ಷಗಳ ಹಿಂದೆ ಕೊರೊನಾ ಕಾಣಿಸಿಕೊಂಡಾಗ ಈ ಉಪಕ್ರಮವನ್ನು ಆರಂಭಿಸಲಾಯಿತು. ಈಗ ಭೌತಿಕ ತರಗತಿಗಳು ನಡೆಯುತ್ತಿದ್ದರೂ ಈ ನೆರವನ್ನು ವಿಸ್ತರಿಸಲಾಗುತ್ತಿದ್ದು, ಆನ್‌ಲೈನ್ ಕಲಿಕೆ ವರದಾನವಾಗಿದೆ. ಇದರಿಂದಾಗಿ ರಾಜ್ಯದ ಹೆಚ್ಚಿನ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಅಧ್ಯಯನಕ್ಕೆ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯುವುದು ಸಾಧ್ಯವಾಗಿದೆ. ಎರಡು ವರ್ಷಗಳಲ್ಲಿ 3.6 ಲಕ್ಷ ವಿದ್ಯಾರ್ಥಿಗಳು ಈ ವೀಡಿಯೋಗಳನ್ನು ವೀಕ್ಷಿಸಿದ್ದಾರೆ ಎಂದು ಅಶ್ವತ್ಥನಾರಾಯಣ ತಿಳಿಸಿದರು. ಇದನ್ನೂ ಓದಿ: ಅಭಿಷೇಕ್ ಅವರ ಅಪ್ಪನ ಮಗ, ಚುನಾವಣೆ ಸ್ಪರ್ಧೆ ಬಗ್ಗೆ ಅವನೇ ನಿರ್ಧರಿಸುತ್ತಾನೆ: ಸುಮಲತಾ

    ಕಾರ್ಯಕ್ರಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ ಪ್ರದೀಪ್, ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎನ್ ರವಿಚಂದ್ರನ್ ಉಪಸ್ಥಿತರಿದ್ದರು.

  • ರಾಷ್ಟ್ರೋತ್ಥಾನ, ಬೇಸ್ ಸಂಸ್ಥೆಯ 9 ವಿದ್ಯಾರ್ಥಿಗಳು ಐಐಟಿಗೆ ಆಯ್ಕೆ

    ರಾಷ್ಟ್ರೋತ್ಥಾನ, ಬೇಸ್ ಸಂಸ್ಥೆಯ 9 ವಿದ್ಯಾರ್ಥಿಗಳು ಐಐಟಿಗೆ ಆಯ್ಕೆ

    ಬೆಂಗಳೂರು: 2019-21ನೇ ಸಾಲಿನ ಜೆಇಇ ಫಲಿತಾಂಶ ಹೊರಬಂದಿದ್ದು, ರಾಷ್ಟ್ರೋತ್ಥಾನ ಹಾಗೂ ಬೇಸ್ ಸಂಸ್ಥೆಯ ಒಟ್ಟು 32 ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆ ಬರೆದಿದ್ದು, ಅದರಲ್ಲಿ 9 ವಿದ್ಯಾರ್ಥಿಗಳು ಐಐಟಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.

    ರಾಷ್ಟ್ರೋತ್ಥಾನ ಪರಿಷತ್ ಒಂದು ಸ್ವಯಂಸೇವಾ ಸಂಸ್ಥೆಯಾಗಿದ್ದು, ತಪಸ್ ಯೋಜನೆ ಮೂಲಕ ಸಮಾಜದಲ್ಲಿರುವ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವ 10ನೇ ತರಗತಿ ಓದುತ್ತಿರುವ ಬಡ ಪ್ರತಿಭಾವಂತ ಮಕ್ಕಳನ್ನು ಪ್ರವೇಶ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಿ ಎರಡು ವರ್ಷಗಳ ಪಿ.ಯು. ಶಿಕ್ಷಣದ ಜೊತೆ ಜೊತೆ ಐಐಟಿ-ಜೆಇಇ ಪ್ರವೇಶ ಪರೀಕ್ಷೆಗೆ ತರಬೇತಿ ನೀಡಿ ಅವರ ಭವ್ಯ ಭವಿಷ್ಯವನ್ನು ರೂಪಿಸುವಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ಯೋಜನೆ ಸಂಪೂರ್ಣ ಉಚಿತವಾಗಿದ್ದು, ಐಐಟಿ-ಜೆಇಇ ಎನ್ನುವ ಪದವನ್ನೇ ಕೇಳಿರದ, ಕೇಳಿದ್ದರೂ ಪ್ರವೇಶ ಹೊಂದಲು ಪಡೆಯುವ ತರಬೇತಿಗೆ ತಗಲುವ ಅಷ್ಟು ದುಬಾರಿ ಶುಲ್ಕವನ್ನು ಭರಿಸುವ ಸಾಮರ್ಥ್ಯವಿರುವುದಿಲ್ಲ. ಐಐಟಿ ಓದುವ ಕನಸುಹೊಂದಿರುವ, ಓದುವ ಸಾಮರ್ಥ್ಯವುಳ್ಳ ಇಂತಹ ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ, ಜೀವನ ಮೌಲ್ಯಗಳನ್ನೂ ತಿಳಿಸಿಕೊಟ್ಟು ಸಮಾಜಕ್ಕೆ ಒಬ್ಬ ಉತ್ತಮ ಪ್ರಜೆಯನ್ನು ಕೊಡುಗೆಯಾಗಿ ನೀಡುತ್ತಾ ಬಂದಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಮತ ಪಡೆಯಲು ಸಿದ್ದರಾಮಯ್ಯ, ಕುಮಾರಸ್ವಾಮಿ RSS ಟೀಕೆ: ಪ್ರಹ್ಲಾದ ಜೋಶಿ

    ಅದೇ ನಿಟ್ಟಿನಲ್ಲಿ 2019-21 ನೇ ತಂಡದ ಜೆಇಇ ಫಲಿತಾಂಶ ಹೊರಬಂದಿದ್ದು, ಒಟ್ಟು 32 ವಿದ್ಯಾರ್ಥಿಗಳಿದ್ದು ಅದರಲ್ಲಿ 9 ವಿದ್ಯಾರ್ಥಿಗಳು ಐಐಟಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. 32 ವಿದ್ಯಾರ್ಥಿಗಳ ಒಂದು ತರಗತಿಯಲ್ಲಿ 9 ವಿದ್ಯಾರ್ಥಿಗಳು ಆಯ್ಕೆಯಾಗುವುದು ಕಷ್ಟಸಾಧ್ಯ. 2 ವರ್ಷಗಳ ಕಠಿಣ ಪರಿಶ್ರಮದಿಂದ ತಪಸ್‍ನಲ್ಲಿ ಬೇಸ್ ಸಂಸ್ಥೆಯವರು ನೀಡುವ ಶಿಕ್ಷಣ ಪಡೆದು ಈ ಸಾಧನೆ ಮಾಡಿದ್ದಾರೆ.

    ಸಾಧನೆ ಮಾಡಿರುವ ಈ ಎಲ್ಲಾ ಮಕ್ಕಳು ಗ್ರಾಮೀಣ ಭಾಗದ ಆರ್ಥಿಕವಾಗಿ ಅಷ್ಟು ಸಶಕ್ತರಾಗಿರುವ ಕುಟುಂಬದಿಂದ ಬಂದವರಾಗಿದ್ದರೂ. ಪ್ರತಿಭೆಯಿಂದ ಇದನ್ನು ಸಾಧಿಸಿದ್ದಾರೆ. ಈ ಎಲ್ಲಾ ಮಕ್ಕಳಿಗೂ ರಾಷ್ಟ್ರೋತ್ಥಾನ ಪರಿಷತ್ ಹಾಗೂ ಬೇಸ್ ಮುಖ್ಯಸ್ಥರಿಂದ ಅಭಿನಂದನೆ ವ್ಯಕ್ತವಾಗಿದೆ. ಇದನ್ನೂ ಓದಿ: ಇಡೀ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಕೊಟ್ಟಿದ್ದು ದೇವೇಗೌಡ್ರು: ಹೆಚ್.ಡಿ. ರೇವಣ್ಣ

    ಸಾಧನೆಗೈದ ವಿದ್ಯಾರ್ಥಿಗಳು
    ಯಶವಂತಗೌಡ, ರಾಮನಗರ ಜಿಲ್ಲೆಯ, ಕನಕಪುರ ತಾಲ್ಲೂಕಿನ ಒಂದು ಪುಟ್ಟ ಗ್ರಾಮ ಗೂಗರೆದೊಡ್ಡಿಯ ನಿವಾಸಿ. ಬಾಲ್ಯದಲ್ಲೇ (ಇವನು ಹುಟ್ಟುವ ಮೊದಲೇ, ತಾಯಿ ಗರ್ಭವತಿಯಾಗಿದ್ದಾಲೆ) ತಂದೆಯನ್ನು ಕಳೆದುಕೊಂಡ ಮಗು. ತಾಯಿ ಧನಲಕ್ಷ್ಮಿ ಈ ಮಗುವನ್ನು ಸಮಾಜದಲ್ಲಿನ ಚುಚ್ಚುಮಾತಿನ ಮಧ್ಯೆ ಸಾಕಿದ್ದು, ಅವರು ಒಂದು ಸಂಸ್ಥೆಯಲ್ಲಿ ಗುಮಾಸ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈತ ತನ್ನ ಪ್ರತಿಭೆಯಿಂದ ಕಠಿಣ ಶ್ರಮದಿಂದ ಈ ಸಾಧನೆ ಮಾಡಿದ್ದಾನೆ.

    ಲೋಹಿತ್ ತಳವಾರ, ಮೂಲತಃ ಹಾವೇರಿ ಜಿಲ್ಲೆಯವನು. ತಂದೆ ದರ್ಜಿ ಕೆಲಸ ಮಾಡುತ್ತಿದ್ದರೆ, ತಾಯಿ ಕೂಲಿ ಕೆಲಸ ನಿರ್ವಹಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಲೋಹಿತ್ ಧಾರವಾಡ ಜೆ.ಎನ್.ವಿ. ನಲ್ಲಿ ಕಲಿತು ನಂತರ ತಪಸ್‍ಗೆ ಆಯ್ಕೆಯಾಗಿ ಐಐಟಿಗೆ ಆಯ್ಕೆಯಾಗಿ ಪ್ರವೇಶ ಪಡೆಯಲು ನಿರಂತರ ಶ್ರಮದಿಂದ ಈ ಫಲಿತಾಂಶ ಪಡೆದಿದ್ದಾನೆ.

    ಸಾಗರ್ ಹೆಚ್.ಆರ್, ಮೂಲತಃ ತೀರ್ಥಹಳ್ಳಿ ತಾಲೂಕಿನ ಹೊಸಕೇರಿ ಗ್ರಾಮದವನು. ತಂದೆ, ತಾಯಿ ಸಣ್ಣ ಕೃಷಿಕರು. 1 ರಿಂದ 10ನೇ ತರಗತಿಯವರೆಗೆ ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದು, ತಪಸ್‍ಗೆ ಆಯ್ಕೆಯಾಗಿ ಕನ್ನಡ ಮಾಧ್ಯಮ ಎಂದು ದೃತಿಗೆಡದೆ ತನ್ನ ಆಸಕ್ತಿಯನ್ನು ಹೆಚ್ಚುಮಾಡಿಕೊಂಡು, ತುಂಬಾ ಪರಿಶ್ರಮದಿಂದ ಈ ಫಲಿತಾಂಶವನ್ನು ಪಡೆದಿದ್ದಾನೆ. ಇದನ್ನೂ ಓದಿ: ನೀವೇ ಎತ್ತಾಕ್ತಿರಾ, ಇಲ್ಲಾ ನಾನೇ ಎತ್ತಿ ಹಾಕ್ಲಾ – ತೊಂದ್ರೆ ಕೊಡ್ತಿದ್ದ ವ್ಯಕ್ತಿಯ ವಿರುದ್ಧ ರೇವಣ್ಣ ಆಕ್ರೋಶ

    ಇನ್ನುಳಿದ ಎಲ್ಲರೂ ತಮ್ಮ ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಬೇಸ್ ಶಿಕ್ಷಕರು ತಿಳಿಸುವ ಪಾಠವನ್ನು ಮನದಟ್ಟುಮಾಡಿಕೊಂಡು, ಅದಕ್ಕನುಗುಣವಾಗಿ ಪರಿಶ್ರಮ ಹಾಕಿ ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ.

  • ವಯಸ್ಸು 22, ಮೂರು ಸ್ಟಾರ್ಟ್ ಅಪ್, ವರ್ಷದ ಟರ್ನ್ ಓವರ್ 22 ಕೋಟಿ

    ವಯಸ್ಸು 22, ಮೂರು ಸ್ಟಾರ್ಟ್ ಅಪ್, ವರ್ಷದ ಟರ್ನ್ ಓವರ್ 22 ಕೋಟಿ

    – ಮ್ಯಾಗಿ ತಿಂದು ದಿನದೂಡುತ್ತಿದ್ದ ಯುವಕನ ಯಶಸ್ವಿ ಕಥೆ
    – 5 ಸಾವಿರದಿಂದ ಆರಂಭವಾಗಿತ್ತು ಸ್ಟಾರ್ಟ್ ಅಪ್

    ಪ್ರತಿದಿನ ಮ್ಯಾಗಿ ತಿಂದು ಜೀವನ ನಡೆಸುತ್ತಿದ್ದ 22 ವರ್ಷದ ಯುವಕ ಸೌರಭ್ ಮೌರ್ಯ ಮೂರು ಸ್ಟಾರ್ಟ್ ಅಪ್ ಗಳಿಂದ ವಾರ್ಷಿಕ 22 ಕೋಟಿಗೂ ಅಧಿಕ ಟರ್ನ್ ಓವರ್ ಗಳಿಸುತ್ತಿದ್ದಾರೆ. ಐಐಟಿ ಬಿಹೆಚ್‍ಯುನ ಮೂರನೇ ವರ್ಷದ ವಿದ್ಯಾರ್ಥಿಯಾಗಿರುವ ಸೌರಭ್, ಬನಾರಸ ಜಿಲ್ಲೆಯ ಪುಟ್ಟ ಗ್ರಾಮದ ನಿವಾಸಿ. ಸೌರಭ್ ಪೋಷಕರು ಆರ್ಥಿಕ ಪರಿಸ್ಥಿತಿಯೇನು ಉತ್ತಮವಾಗಿರಲಿಲ್ಲ. ಆದ್ರೆ ಬಡತನದಲ್ಲಿಯೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಅನ್ನೋ ಕನಸುಗಳಿಗೆ ಬಡತನ ಇರಲಿಲ್ಲ. ತಂದೆ-ತಾಯಿಯ ಕನಸುಗಳನ್ನು ಸೌರಭ್ ಇಂದು ನನಸು ಮಾಡಿದ್ದು, ವಿದ್ಯಾರ್ಥಿ ಜೀವನದಲ್ಲಿಯೇ ಸ್ವಾವಲಂಬಿಯಾಗಿದ್ದಾರೆ.

    ಚಿಕ್ಕವನಿದ್ದಾಗ ಪೋಷಕರ ಜೊತೆ ಸಂತೆಗೆ ಹೋದಾಗ ಒಂದು ಕಂಪ್ಯೂಟರ್ ಶಾಪ್ ಓಪನ್ ಮಾಡಬೇಕು. ಅಂಗಡಿಗೆ ಬರೋ ಗ್ರಾಹಕರ ಮೊಬೈಲ್ ಗಳಿಗೆ ಹಾಡು ಹಾಕೋದು ನನ್ನದು ಪುಟ್ಟ ಕನಸು ಆಗಿತ್ತು. ಎಂದಿಗೂ ದೊಡ್ಡ ಕನಸು ಕಂಡವನಲ್ಲ. ಆದ್ರೆ ಪೋಷಕರು ಮಾತ್ರ ನಮ್ಮ ಜೀವನದ ಬಗ್ಗೆ ಬಣ್ಣ ಬಣ್ಣದ ಕನಸಿನ ಗೋಪುರ ನಿರ್ಮಿಸಿಕೊಂಡಿದ್ದರು ಎಂದು ಸೌರಭ್ ಹೇಳುತ್ತಾರೆ.

    ಐಐಟಿ ಪ್ರವೇಶ: ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪೋಷಕರು ಸೌರಭ್ ಸೇರಿದಂತೆ ಇನ್ನಿಬ್ಬರು ಸೋದರರನ್ನು ಬನಾರಸಗೆ ಕಳುಹಿಸುತ್ತಾರೆ. ಸೌರಭ್ 11ನೇ ತರಗತಿಯಲ್ಲಿದ್ದಾಗ ಇಬ್ಬರು ಅಣ್ಣಂದಿರು ಐಐಟಿ ಎಕ್ಸಾಂ ಕ್ಲಿಯರ್ ಮಾಡಿಕೊಂಡರು. ಸೌರಭ್ ಸಹ ಐಐಟಿ ಕ್ಲೀಯರ್ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ಪಡೆಯಬೇಕೆಂಬುವುದು ಪೋಷಕರು ಕನಸಾಗಿತ್ತು. ಆದ್ರೆ 11ನೇ ಕ್ಲಾಸ್ ಓದುತ್ತಿದ್ದಾಗಲೂ ಸೌರಭ್ ಗೆ ಕಂಪ್ಯೂಟರ್ ಶಾಪ್ ಓಪನ್ ಮಾಡಬೇಕೆಂಬ ಆಸೆ ಗಟ್ಟಿಯಾಗಿತ್ತು. 12ನೇ ತರಗತಿಯಲ್ಲಿ ಸೌರಭ್ ಜೆಇಇ ಕ್ಲಿಯರ್ ಮಾಡಿಕೊಳ್ಳಲು ವಿಫಲರಾದಾಗ ಅಂದು ದಿನವಿಡೀ ಕಣ್ಣೀರು ಹಾಕಿದ್ದರು. ಆದ್ರೆ ಪೋಷಕರ ಬೆಂಬಲದೊಂದಿಗೆ ಒಂದು ವರ್ಷ ಡ್ರಾಪ್ ಔಟ್ ಮಾಡಿಕೊಂಡು ಮದುವೆ, ಕಾರ್ಯಕ್ರಮ, ಹಬ್ಬ, ಮೊಬೈಲ್ ಎಲ್ಲವನ್ನೂ ತೊರೆದು ಆಸಕ್ತಿಯಿಂದ ಓದಿ ಮುಂದಿನ ವರ್ಷ ಐಐಟಿಯ ಪ್ರವೇಶ ಪಡೆದುಕೊಂಡರು.

    ಕೆಲಸ ನೀಡದ ತರಬೇತಿ ಕೇಂದ್ರಗಳು: ಐಐಟಿ ಬಂದಿದ್ದ ವಿದ್ಯಾರ್ಥಿಗಳು ಒಂದು ನಿರ್ದಿಷ್ಟ ಗುರಿಯ ಜೊತೆ ಬಂದಿದ್ದರು. ಆದ್ರೆ ಕಂಪ್ಯೂಟರ್ ಶಾಪ್ ತೆರೆಯಬೇಕೆಂದು ಆಸೆ ಹೊಂದಿದ್ದ ಸೌರಭ್ ಗೆ ಐಐಟಿ ಹೊಸ ಅನುಭವಗಳನ್ನು ನೀಡಿತು. ಗ್ರಾಮದಲ್ಲಿ ಮಕ್ಕಳಿಗೆ ಸೌರಭ್ ಪಾಠ ಮಾಡುತ್ತಿದ್ದರು. ಕಾಲೇಜಿನ ಅವಧಿ ಮುಗಿದ ಬಳಿಕ ಕೋಚಿಂಗ್ ಕ್ಲಾಸ್ ಗಳಲ್ಲಿ ಕೆಲಸ ಮಾಡಿದ್ರೆ ಒಂದಿಷ್ಟು ಹಣ ಸಂಪಾದಿಸಬಹುದು ಅರ್ಜಿ ಸಲ್ಲಿಸಿದ್ದರು. ಆದರೆ ಅನುಭವ ಇಲ್ಲದ ಕಾರಣ ಸೌರಭ್ ಯಾವ ತರಬೇತಿ ಕೇಂದ್ರ ಕೆಲಸ ನೀಡಿರಲಿಲ್ಲ.

    ಅಮ್ಮ ನೀಡಿದ 5 ಸಾವಿರದಿಂದ ಆರಂಭ: ಒಮ್ಮೆ ಸೌರಭ್ ಗೆ ಅವರ ತಾಯಿ ತಂದೆಗೆ ತಿಳಿಯದಂತೆ ತಾವು ಉಳಿಸಿದ್ದ 5 ಸಾವಿರ ರೂ. ನೀಡಿದ್ದರು. ಅದೇ ಹಣದಿಂದ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸಿ ಸೌರಭ್ ತಮ್ಮ ಸ್ಟಾರ್ಟ್ ಅಪ್ ಆರಂಭಿಸಿದರು. ಯುಟ್ಯೂಬ್ ಚಾನೆಲ್ ಆರಂಭಿಸಿದ ಸೌರಭ್, ಮಕ್ಕಳಿಗೆ ಪಾಠ ಹೇಳುವ ವೀಡಿಯೋಗಳನ್ನ ಅಪ್ಲೋಡ್ ಮಾಡಲಾರಂಭಿಸಿದ್ರು. ಆರಂಭದಲ್ಲಿ ಸೌರಭ್ ಬಳಿ ವೈಟ್ ಬೋರ್ಡ್ ಸಹ ಇರಲಿಲ್ಲ. ಸೌರಭ್ ಪೇಪರ್ ಮೇಲೆ ಸಮಸ್ಯೆಗಳನ್ನ ಪರಿಹರಿಸುತ್ತಿದ್ರೆ ಮತ್ತೋರ್ವ ಗೆಳೆಯ ವೀಡಿಯೋ ಮಾಡುತ್ತಿದ್ದರು. ಬಹು ದಿನಗಳ ಬಳಿಕ 1,300 ರೂ. ನೀಡಿ ವೈಟ್ ಬೋರ್ಡ್ ಖರೀದಿಸಿದ್ದರು.

    ಕಮೆಂಟ್ ನಿಂದ ಆರಂಭವಾಯ್ತು ಸ್ಟಾರ್ಟ್ ಅಪ್: ತಮ್ಮದೇ ಯು ಟ್ಯೂಬ್ ಚಾನೆಲ್ ನಲ್ಲಿ ವೀಡಿಯೋಗಳನ್ನ ಅಪ್ಲೋಡ ಮಾಡುತ್ತಿದ್ದರು. ಒಂದು ದಿನ ತಮ್ಮ ಐಐಟಿ ಜರ್ನಿಯ ಬಗ್ಗೆ ಮಾತನಾಡಿ ವೀಡಿಯೋ ಹಂಚಿಕೊಂಡಿದ್ದರು. ಓರ್ವ ವಿದ್ಯಾರ್ಥಿ ನಮಗೆ ಐಐಟಿಗೆ ಪ್ರವೇಶ ಪಡೆಯಲು ತರಬೇತಿ ನೀಡ್ತೀರಾ ಅಂತ ಕೇಳಿದ್ದರು. ಈ ಒಂದು ಕಮೆಂಟ್ ಸೌರಬ್ ಗೆ ತಮ್ಮದೇ ಸ್ಟಾರ್ಟ್ ಅಪ್ ಆರಂಭಿಸಲು ಹುರಿದುಂಬಿಸಿತು. ಅಂದೇ ಐಐಟಿ ತಯಾರಿ ನಡೆಸುತ್ತಿರೋ 11 ಮತ್ತು 12ನೇ ಕ್ಲಾಸ್ ವಿದ್ಯಾರ್ಥಿಗಳಿಗೆ ವೀಡಿಯೋ ಮಾಡಲು ಆರಂಭಿಸಿದರು.

    ಈ ವೀಡಿಯೋ ನೋಡಲು 99 ರೂಪಾಯಿ ಪ್ಯಾಕ್ ಲಾಂಚ್ ಮಾಡಿದ್ರು. ಹೀಗೆ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದಾಗ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡೋದು ಸೌರಭ್‍ಗೆ ಕಷ್ಟವಾದಾಗ ತಮ್ಮ ಗೆಳೆಯರ ಸಹಾಯ ಪಡೆದರು. ಇದರಿಂದ ಬಂದ ಹಣದಿಂದ ಎಲ್ಲರಿಗೂ ಗೌರವ ಧನವಾಗಿ ನೀಡಿದರು. ಮುಂದೆ ವಾಟ್ಸಪ್ ಮೂಲಕವೂ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿ ಮಾಹಿತಿ ನೀಡಲಾರಂಭಿಸಿದರು.

    ಐಐಟಿ ಹಾಸ್ಟೆಲ್ ನಲ್ಲಿದ್ದರೂ ಕಾಲೇಜಿನ ಸಮೀಪವೇ ಸೌರಭ್ ರೂಮ್ ಬಾಡಿಗೆಗೆ ಪಡೆದುಕೊಂಡು ಹಗಲು ರಾತ್ರಿ ಎನ್ನದೇ ಅಭ್ಯಾಸ ಆರಂಭಿಸಿದರು. ಅಡುಗೆ ಮಾಡಿಕೊಳ್ಳಲು ಸಮಯವಿಲ್ಲದ ಕಾರಣ ಬರೋಬ್ಬರಿ 8 ತಿಂಗಳು ಮ್ಯಾಗಿ ತಿಂದು ಓದುತ್ತಿದ್ದರು ಸೌರಭ.

    ಮೊದಲ ವರ್ಷವೇ 11 ಕೋಟಿ: ಮಾರ್ಗದರ್ಶನದ ಜೊತೆ ವಿದ್ಯಾರ್ಥಿಗಳಿಗೆ ಕೋರ್ಸ್ ಅವಶ್ಯಕತೆ ಇರೋದು ನನ್ನ ಗಮನಕ್ಕೆ ಬಂತು. ಆದರೆ ಕೋಚಿಂಗ್ ಸೆಂಟರ್ ಆರಂಭಿಸುವ ಸಂಪನ್ಮೂಲ ನನ್ನ ಬಳಿ ಇರಲಿಲ್ಲ. ತದನಂತರ ಎರಡು ಸಾವಿರ ರೂಪಾಯಿಯಲ್ಲಿ ಇಯರ್ ಲಾಂಗ್ ಮತ್ತು ಕ್ರೈಶ್ ಕೋರ್ಸ್ ನೀಡಿದ್ದು ಬಹಳ ವಿದ್ಯಾರ್ಥಿಗಳಿಗೆ ಅನಕೂಲವಾಯ್ತು. 2019 ಜನವರಿಯಲ್ಲಿ ಎಸ್‍ಎಸ್‍ಟಿ ಅ್ಯಡ್ ಟೆಕ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿ ಆರಂಭಿಸಿ ಗೆಳೆಯರೊಂದಿಗೆ ಕೆಲಸ ಆರಂಭಿಸಿದೆ. ಈ ಕಂಪನಿಯಲ್ಲಿ ಎರಡು ಸ್ಟಾರ್ಟ್ ಅಪ್ ಆರಂಭಿಸಲಾಯ್ತು. ಒಂದು ಕೋರ್ಸ್ ಮತ್ತೊಂದು ಮೇಂಟರಿಂಗ್. ಇದಕ್ಕಾಗಿ ತಿಂಗಳಿಗೆ 1,500 ರೂ. ಶುಲ್ಕ ನಿಗದಿ ಮಾಡಲಾಯ್ತು. ಮೊದಲ ವರ್ಷದಲ್ಲಿಯೇ 11 ಕೋಟಿ ಟರ್ನ್ ಓವರ್ ಆಯ್ತು. ನಂತರ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಪಿಜಿ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನ ನಮ್ಮ ಕಂಪನಿಯಿಂದ ನೀಡಲಾರಂಭಿಸಿದೇವು. ಇದಕ್ಕಾಗಿ ರ‍್ಯಾಂಕರ್ಸ್ ಕನ್ಸಲಟೆನ್ಸಿ ಪ್ರೈವೇಟ್ ಲಿಮಿಟೆಡ್ ಕಂಪನಿ ಹುಟ್ಟಿಕೊಂಡಿತು ಎಂದು ಸೌರಭ್ ಹೇಳ್ತಾರೆ.

    200 ಐಐಟಿ ವಿದ್ಯಾರ್ಥಿಗಳ ತಂಡ: ಇಂದು ಸೌರಭ್ ಬನಾರಸನಲ್ಲಿ ಮೂರು ಮತ್ತು ಗಾಜಿಯಾಬಾದ್ ನಲ್ಲೊಂದು ಬ್ರ್ಯಾಂಚ್ ಹೊಂದಿದ್ದಾರೆ. ನಾಲ್ಕು ಬ್ರ್ಯಾಂಚ್ ಗಳಲ್ಲಿ 200 ವಿದ್ಯಾರ್ಥಿಗಳಿದ್ದಾರೆ. 30ಕ್ಕೂ ಅಧಿಕ ಡೌಟ್ ಸಾಲ್ವ್ ಮಾಡೋ ಪರಿಣಿತರಿದ್ದಾರೆ. 13 ಜನರ ಉಪನ್ಯಾಸಕರ ತಂಡವಿದೆ. ಪ್ರತಿ ತಿಂಗಳು ಸುಮಾರು 45 ಲಕ್ಷ ರೂ. ಮೌಲ್ಯದ ಕೋರ್ಸ್ ಸೇಲ್ ಮಾಡುತ್ತೇವೆ. ಇಂದು 2,700 ಅಧಿಕ ವಿದ್ಯಾರ್ಥಿಗಳು ನಮ್ಮ ಬಳಿಯಲ್ಲಿದ್ದು, ಕೋವಿಡ್ ವೇಳೆ 1,300ಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಕೋವಿಡ್ ನಿಂದಾಗಿ ಬಹುತೇಕ ಎಲ್ಲ ವಲಯಗಳು ನಷ್ಟ ಅನುಭವಿಸಿವೆ. ಆದ್ರೆ ಆನ್‍ಲೈನ್ ನಿಂದಾಗಿ ಶಿಕ್ಷಣ ಕ್ಷೇತ್ರ ಮತ್ತಷ್ಟು ಬೆಳವಣಿಗೆಯಾಗಿದೆ ಎಂದು ಸೌರಭ್ ತಮ್ಮ ಕಥೆಯನ್ನ ಹಂಚಿಕೊಂಡರು.

  • ನೀಟ್, ಜೆಇಇ ಪರೀಕ್ಷೆಗಳನ್ನು ಮುಂದೂಡಿ – ಸುಪ್ರೀಂಕೋರ್ಟಿಗೆ 6 ರಾಜ್ಯಗಳಿಂದ ಅರ್ಜಿ

    ನೀಟ್, ಜೆಇಇ ಪರೀಕ್ಷೆಗಳನ್ನು ಮುಂದೂಡಿ – ಸುಪ್ರೀಂಕೋರ್ಟಿಗೆ 6 ರಾಜ್ಯಗಳಿಂದ ಅರ್ಜಿ

    ನವದೆಹಲಿ: ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಪರೀಕ್ಷೆ ಗೊಂದಲ ಬಗೆಹರಿದ ಬೆನ್ನಲ್ಲೇ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಆರು ರಾಜ್ಯ ಸರ್ಕಾರಗಳು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ.

    ಕೊರೊನಾ ಸಂಕಷ್ಟ ಕಾಲದಲ್ಲಿ ಪರೀಕ್ಷೆಗಳು ಬೇಡ ಎಂದಿರುವ ಪಶ್ಚಿಮ ಬಂಗಾಳ, ಜಾರ್ಖಂಡ್, ಚತ್ತೀಸ್‍ಗಢ, ಮಹಾರಾಷ್ಟ್ರ, ಪಂಜಾಬ್ ಹಾಗೂ ರಾಜಸ್ಥಾನ ಸರ್ಕಾರಗಳು ಸುಪ್ರೀಂ ಕೋರ್ಟಿನ ಆಗಸ್ಟ್ 17ರ ಆದೇಶವನ್ನು ಪ್ರಶ್ನಿಸಿವೆ.

    ಸೆಪ್ಟೆಂಬರ್ 1ರಿಂದ 6ವರೆಗೆ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಕಲ್ಪಿಸುವ ಜೆಇಇ ಹಾಗೂ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕೆ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್‍ಗೆ ಸೆಪ್ಟೆಂಬರ್ 16ರಂದು ದಿನಾಂಕ ನಿಗಧಿ ಮಾಡಲಾಗಿದೆ. ಸುಮಾರು 28 ಲಕ್ಷ ಮಂದಿ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುತ್ತಿದ್ದಾರೆ. ಇದರಿಂದ ಕೊರೊನಾದಿಂದ ಸಂಕಷ್ಟ ಸೃಷ್ಟಿಯಾಗಬಹುದು ಸೋಂಕು ಹರಡಲು ಮತ್ತೊಂದು ವೇದಿಕೆಯಾಗಬಹುದು ಎಂದು ರಾಜ್ಯ ಸರ್ಕಾರಗಳು ಆರೋಪಿಸಿ ಪರೀಕ್ಷೆ ಮುಂದೂಡಲು ಮನವಿ ಮಾಡಿದೆ.

    ಈ ಹಿಂದೆ ಪರೀಕ್ಷೆ ಸಂಬಂಧ ವೈದ್ಯಕೀಯ ಹಾಗೂ ಎಂಜಿನಿಯರಿಂಗ್ ಕಾಲೇಜುಗಳು ಅರ್ಜಿ ಸಲ್ಲಿಸಿದ್ದ ವೇಳೆ ವಿದ್ಯಾರ್ಥಿಗಳು ಹಿತ ದೃಷ್ಟಿಯಿಂದ ಪರೀಕ್ಷೆ ಮುಖ್ಯ, ಪರೀಕ್ಷೆಗೆ ತಡೆ ಇಲ್ಲ ಎಂದು ಆದೇಶ ನೀಡಿತ್ತು. ಈ ಆದೇಶವನ್ನು ಪಶ್ನಿಸಿ ಈಗ ರಾಜ್ಯ ಸರ್ಕಾರಗಳು ಅರ್ಜಿ ಸಲ್ಲಿಸಿವೆ.

  • ಸಿಇಟಿ, ನೀಟ್, ಜೆಇಇ ಪರೀಕ್ಷೆ: ದಯಾನಂದ ಸಾಗರ್ ಕಾಲೇಜಿನಲ್ಲಿ ಸಿಗಲಿದೆ ಮಾಹಿತಿ

    ಸಿಇಟಿ, ನೀಟ್, ಜೆಇಇ ಪರೀಕ್ಷೆ: ದಯಾನಂದ ಸಾಗರ್ ಕಾಲೇಜಿನಲ್ಲಿ ಸಿಗಲಿದೆ ಮಾಹಿತಿ

    ಬೆಂಗಳೂರು: ನೀವು ಸಿಇಟಿ, ನೀಟ್, ಜೆಇಇ, ಡಿಸ್ಯಾಟ್ ಪರೀಕ್ಷೆಗಳ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೀರಾ? ಈ ಪರೀಕ್ಷೆಗಳ ಬಗ್ಗೆ ಮಾಹಿತಿ ಬೇಕೇ? ಹಾಗಿದ್ದರೆ ಮಾರ್ಚ್ 19ರ ಸೋಮವಾರ ಕೂಡ್ಲು ಗೇಟ್ ಹೊಸೂರು ಮುಖ್ಯ ರಸ್ತೆಯಲ್ಲಿರುವ ದಯಾನಂದ ಸಾಗರ್ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಮಾಹಿತಿ ಪಡೆದುಕೊಳ್ಳಿ.

    ದೇಶದ ಪರಿಣತ ಶಿಕ್ಷಕರಾದ `ಸೂಪರ್ 30′ ಖ್ಯಾತಿಯ ಪ್ರೊ. ಆನಂದ್ ಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ವಿದ್ಯಾರ್ಥಿಗಳ ಸಂದೇಹವನ್ನು ನಿವಾರಿಸಲಿದ್ದಾರೆ.

    ಬಿಹಾರದ ಪಾಟ್ನಾದಲ್ಲಿರುವ ರಾಮಾನುಜಮ್ ಸ್ಕೂಲ್ ಆಫ್ ಮ್ಯಾಥಮ್ಯಾಟಿಕ್ಸ್ ಶಾಲೆಯ ಸಂಸ್ಥಾಪಕರಾಗಿರುವ ಆನಂದ್ ಕುಮಾರ್ ದೇಶದ ಪ್ರಸಿದ್ಧ ಗಣಿತಶಾಸ್ತ್ರಜ್ಞ ಮತ್ತು ಅಂಕಣಗಾರರಾಗಿ ಗುರುತಿಸಿಕೊಂಡಿದ್ದಾರೆ. ಆನಂದ್ ಕುಮಾರ್ ಅವರು ತಮ್ಮ `ಸೂಪರ್ 30′ ಎನ್ನುವ ಕಾರ್ಯಕ್ರಮದ ಅಡಿಯಲ್ಲಿ ದೇಶದ ಹಿಂದುಳಿದ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ, ಅವರನ್ನು ಜೆಇಇ ಪರೀಕ್ಷೆಗೆ ಸಿದ್ಧ ಪಡಿಸುತ್ತಾರೆ. ಟೈಮ್ ಮ್ಯಾಗಜಿನ್ ಗುರುತಿಸಿದ ದೇಶದ ನಾಲ್ಕು ಉತ್ತಮ ಗಣಿತ ಶಾಲೆಗಳ ಪೈಕಿ ರಾಮಾನುಜಮ್ ಶಾಲೆಯೂ ಸೇರಿದೆ.

    ಪ್ರೊ. ಆನಂದ್ ಕುಮಾರ್ ಅವರ ಜೀವನ ಚರಿತ್ರೆಯನ್ನು ಆಧಾರಿಸಿ ಚಿತ್ರ ನಿರ್ಮಾಣವಾಗುತ್ತಿದೆ. ಹೃತಿಕ್ ರೋಶನ್ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಈ ಚಿತ್ರ 2019ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ.

    ಈ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ಮಕ್ಕಳ ಪೋಷಕರು ಹಾಗೂ ಪಿಯು ಕಾಲೇಜಿನ ಶಿಕ್ಷಕರು ಭಾಗವಹಿಸಲು ಅವಕಾಶವಿದೆ. ಸೋಮವಾರ ಎರಡು ಸೆಷನ್ ನಲ್ಲಿ ಕಾರ್ಯಕ್ರಮ ನಡೆಯುತ್ತದೆ. ಮೊದಲ ಅವಧಿಯನ್ನು ಪ್ರೊ. ಆನಂದ್ ಕುಮಾರ್ ನಡೆಸಿಕೊಡಲಿದ್ದು, ಎರಡನೆಯ ಅವಧಿಯಲ್ಲಿ ರಾಜ್ಯದ ಪ್ರಸಿದ್ದ ಶೈಕ್ಷಣಿಕ ತಜ್ಞ, ಬೇಸ್ ಸಂಸ್ಥಾಪಕ ಮತ್ತು ನಿರ್ದೇಶಕ ಡಾ. ಹೆಚ್.ಎಸ್ ನಾಗರಾಜ್, ವಿಟಿಯು ಮಾಜಿ ಕುಲಪತಿ ಪ್ರೊ.ಎಚ್.ಪಿ ಕಿಂಚ, ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಭಾಗವಹಿಸಲಿದ್ದಾರೆ.

    ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದರೆ ನೊಂದಣಿ ಮಾಡಬೇಕಾಗುತ್ತದೆ. ಕುಮಾರಸ್ವಾಮಿ ಲೇಔಟ್ ಕ್ಯಾಂಪಸ್, ಕನಕಪುರ ರಸ್ತೆಯ ರವಿಶಂಕರ್ ಅಶ್ರಮದ ಬಳಿ ಇರುವ ಕ್ಯಾಂಪಸ್, ಕೂಡ್ಲುಗೇಟ್ ಬಳಿ ಇರುವ ಕ್ಯಾಂಪಸ್ ಮತ್ತು ವಿವಿ ಪುರಂ ನಲ್ಲಿರುವ ಕೆರಿಯರ್ ಕೆಫೆಯಲ್ಲಿ ನೊಂದಣಿ ಮಾಡಬಹುದು. ಆನ್‍ಲೈನ್ ಮೂಲಕ www.dsu.edu.in ಭೇಟಿ ನೀಡಿ ನೊಂದಣಿ ಮಾಡಿಕೊಳ್ಳಬಹುದು.