Tag: ಜೂನಿಯರ್ ಚಿರು

  • ಜೂನಿಯರ್ ಚಿರುಗೆ 10 ತಿಂಗಳು ತುಂಬಿರುವ ಸಂಭ್ರಮ- ಮನಸಾರೆ ನಕ್ಕ ಮೇಘನಾ ರಾಜ್

    ಜೂನಿಯರ್ ಚಿರುಗೆ 10 ತಿಂಗಳು ತುಂಬಿರುವ ಸಂಭ್ರಮ- ಮನಸಾರೆ ನಕ್ಕ ಮೇಘನಾ ರಾಜ್

    ಬೆಂಗಳೂರು: ಸ್ಯಾಂಡಲವುಡ್ ನಟಿ ಮೇಘನಾ ರಾಜ್ ಜೂನಿಯರ್ ಚಿರುಗೆ 10 ತಿಂಗಳು ತುಂಬಿರೋ ಸಂಭ್ರಮಕ್ಕೆ ಜೂನಿಯರ್ ಚಿರುಗೆ ಹೊಸ ಸ್ನೇಹಿತನನ್ನು ಪರಿಚಯಿಸಿದ್ದಾರೆ.

    ಮುದ್ದಿನ ಮಗ ಜೂನಿಯರ್ ಚಿರುಗೆ 10 ತಿಂಗಳು ತುಂಬಿದ ಸಂಭ್ರಮದಲ್ಲಿ ನಟಿ ಮೇಘನಾ ರಾಜ್ ಇದ್ದಾರೆ. ಈ ಸಂತೋಷದ ವಿಚಾರವನ್ನು ಇನ್‍ಸ್ಟಾಗ್ರಾಮಲ್ಲಿ ಹಂಚಿಕೊಂಡಿದ್ದಾರೆ. ಅಮ್ಮ, ಮಗನ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಅಮ್ಮ ಮಗ ಇಬ್ಬರು ಒಂದೇ ರೀತಿ ಮ್ಯಾಚಿಂಗ್ ಡ್ರೆಸ್ ಧರಿಸಿ ಮುದ್ದಾಗಿ ಪೋಸ್ ಕೊಟ್ಟಿದ್ದಾರೆ. ಮೇಘನಾ ಮತ್ತು ಜೂನಿಯರ್ ಚಿರು ಕಾಣಿಸಿಕೊಂಡಿರುವ ವೀಡಿಯೋದಲ್ಲಿ ಜೂನಿಯರ್ ಚಿರುನ ಹೊಸ ಗೆಳಯನಿರುವುದು ವಿಶೇಷವಾಗಿದೆ.

     

    View this post on Instagram

     

    A post shared by Meghana Raj Sarja (@megsraj)

    ಜೂನಿಯರ್ ಚಿರುಗೆ ಇಷ್ಟವಾಗಿರೋ ಹೊಸ ಸ್ನೇಹಿತ ಚ್ಯಾಂಪ್ ದಿ ಚಿಂಪ್ ಹೆಸರಿನ ಮುದ್ದಾದ ಕೋತಿ ಗೊಂಬೆಯಾಗಿದೆ. ಜೂನಿರ್ ಚಿರುಗೆ ಈ ಗೊಂಬೆ ಈಗ ತುಂಬಾ ಇಷ್ಟ. ಒಳ್ಳೆಯ ಗೆಳಯನಾಗಿದ್ದಾನೆ ಎಂದು ಮೇಘನಾ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ವೀಡಿಯೋ ಶೇರ್ ಮಾಡಿದ್ದಾರೆ. ಅಮ್ಮ, ಮಗನ ಈ ಮುದ್ದಾದ ವೀಡಿಯೋವನ್ನು ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಯಾವಾಗಲೂ ನಗುತ್ತೀರಿ, ನೀವು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದೀರ ನಾವು ನಿಮ್ಮನ್ನು ತುಂಬಾ ಪ್ರೀತಿಸುತ್ತೇವೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ತೂಕ ಕಳೆದುಕೊಂಡ ರಣಧೀರ ನಟಿ

     

    View this post on Instagram

     

    A post shared by Meghana Raj Sarja (@megsraj)

    ಈ ಹಿಂದೆ ಮೇಘನಾ ಅಭಿಮಾನಿಗಳಿಗಾಗಿ ಮಂಡೇ ಮಾನಿರ್ಂಗ್ ಎನ್ನುವ ಫೆÇೀಟೋ ಶೇರ್ ಮಾಡಿದ್ದು ಇದರಲ್ಲಿ ಮಗನ ಜೊತೆ ಮೇಘನಾ ನಗುತ್ತಿದ್ದರು. ಅಮ್ಮನ ನೋಡಿ ಕ್ಯೂಟ್ ಆಗಿ ಸ್ಮೈಲ್ ಕೊಟ್ಟ ಜೂ. ಚಿರುವನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಮೇಘನಾ – ಚಿರು ಮಗುವಿಗೆ ನಾಮಕರಣ ಮಾಡದ ಹಿನ್ನೆಲೆಯಲ್ಲಿ ಎಲ್ಲರೂ ಜೂ.ಚಿರು ಎಂದೇ ಕಂದನನ್ನು ಕರೆಯುತ್ತಿದ್ದಾರೆ. ಮುದ್ದಾದ ಹಾಲುಗಲ್ಲದ ಕಂದನ ಮುಗುಳುನಗೆ ನೆಟ್ಟಿಗರ ಮನಸು ಗೆದ್ದಿದ್ದು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

  • ಅರ್ಜುನ್ ಸರ್ಜಾ ಹುಟ್ಟುಹಬ್ಬಕ್ಕೆ ಜೂ.ಚಿರು ವಿಶ್

    ಅರ್ಜುನ್ ಸರ್ಜಾ ಹುಟ್ಟುಹಬ್ಬಕ್ಕೆ ಜೂ.ಚಿರು ವಿಶ್

    ಬೆಂಗಳೂರು: ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಹುಟ್ಟು 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಜೂನಿಯರ್ ಚಿರು ಸಹ ಮಾಮನಿಗೆ ವಿಶ್ ಮಾಡಿದ್ದಾನೆ. ಈ ಕ್ಯೂಟ್ ಫೋಟೋವನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ.

    ಇನ್‍ಸ್ಟಾಗ್ರಾಂನಲ್ಲಿ ಸ್ಟೋರಿ ಪೋಸ್ಟ್ ಮಾಡಿರುವ ಅವರು, ಅರ್ಜುನ್ ಸರ್ಜಾ ಹಾಗೂ ಜೂನಿಯರ್ ಚಿರು ಕಾಲಕಳೆಯುತ್ತಿರುವ ಫೋಟೋ ಹಾಕಿ ವಿಶ್ ಮಾಡಿದ್ದಾರೆ. ಈ ಮೂಲಕ ಜೂ.ಚಿರು ಕಡೆಯಿಂದಲೂ ವಿಶ್ ತಿಳಿಸಿದ್ದಾರೆ. ಈ ಫೋಟೋದಲ್ಲಿ ಅರ್ಜುನ್ ಸರ್ಜಾ ಜೂ.ಚಿರು ಜೊತೆ ಆಟವಾಡುತ್ತ ಕಾಲ ಕಳೆಯುತ್ತಿದ್ದಾರೆ. ಫೈಟಿಂಗ್ ಮಾಡುವ ರೀತಿಯ ಆ್ಯಕ್ಷನ್ ತೋರಿಸಿದ್ದಾರೆ. ಜೂ.ಚಿರು ಸಹ ಅಷ್ಟೇ ಗಂಭೀರವಾಗಿ ನೋಡಿದ್ದಾನೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಮಗನ ಜೊತೆಗಿನ ಕ್ಯೂಟ್ ಸೆಲ್ಫಿ ಶೇರ್ ಮಾಡಿದ ನಟಿ ಮೇಘನಾ

    ಅರ್ಜುನ್ ಸರ್ಜಾ ಸೇರಿದಂತೆ ಮನೆಯವರೆಲ್ಲರಿಗೂ ಜೂನಿಯರ್ ಚಿರು ಎಂದರೆ ಎಲ್ಲಿಲ್ಲದ ಪ್ರೀತಿ. ಹೆಚ್ಚು ಕಾಲ ಕಳೆಯುತ್ತಿರುತ್ತಾರೆ, ಈ ಕುರಿತು ಫೋಟೋಗಳನ್ನು ಸಹ ಮೇಘನಾ ರಾಜ್ ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದೇ ರೀತಿ ಇದೀಗ ಮಾಮನಿಗೆ ಜೊತೆಗಿನ ಫೋಟೋ ಹಾಕಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಇತ್ತೀಚೆಗೆ ಮಗನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಮೇಘನಾ ಪೋಸ್ಟ್ ಮಾಡಿದ್ದರು. ಇದಕ್ಕೂ ಮೊದಲು ಅಪ್ಪನ ಡ್ಯಾನ್ಸ್ ನೋಡುವುದರಲ್ಲಿ ಜೂ.ಚಿರು ಬ್ಯುಸಿಯಾಗಿದ್ದ ವೀಡಿಯೋವನ್ನು ಹಂಚಿಕೊಂಡಿದ್ದರು. ಈ ಪೋಸ್ಟ್ ಗಳಿಗೆ ಅಭಿಮಾನಿಗಳು ಸಹ ಕಮೆಂಟ್, ಲೈಕ್ ಮೂಲಕ ಪ್ರೀತಿ ತೋರಿಸಿದ್ದರು.

     

    View this post on Instagram

     

    A post shared by Meghana Raj Sarja (@megsraj)

    ಮೇಘನಾ ರಾಜ್ ಸರ್ಜಾ ತಾಯಿಯಾದ ಬಳಿಕ ಮೊದಲ ಬಾರಿಗೆ ಕ್ಯಾಮೆರಾ ಫೇಸ್ ಮಾಡುತ್ತಿರುವ ಬಗ್ಗೆ ಇತ್ತೀಚೆಗೆ ಪೋಸ್ಟ್ ಮಾಡಿದ್ದರು. ಜೂನಿಯರ್ ಚಿರುಗೆ ಒಂಬತ್ತು ತಿಂಗಳು. ವರ್ಷದ ಬಳಿಕ ಕ್ಯಾಮೆರಾ ಫೇಸ್ ಮಾಡುತ್ತಿದ್ದೇನೆ ಎಂದು ಬರೆದು ಹಾರ್ಟ್ ಎಮೋಜಿ ಹಾಕಿ, ಬ್ಯಾಕ್ ಟು ಬೇಸಿಕ್ಸ್ ಎಂದು ಹ್ಯಾಶ್ ಟ್ಯಾಗ್ ಬರೆದಿದ್ದರು. ಈ ಮೂಲಕ ಮತ್ತೆ ಚಿತ್ರೀಕರಣಕ್ಕೆ ಮರಳಿರುವುದಾಗಿ ತಿಳಿಸಿದ್ದರು.

  • ಅಪ್ಪನ ಫೋಟೋ ಜೊತೆ ಆಟ ಆಡಿದ ಜ್ಯೂನಿಯರ್ ಚಿರು!

    ಅಪ್ಪನ ಫೋಟೋ ಜೊತೆ ಆಟ ಆಡಿದ ಜ್ಯೂನಿಯರ್ ಚಿರು!

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ತಮ್ಮ ಮುದ್ದಾದ ಮಗ ಜ್ಯೂನಿಯರ್ ಚಿರುವಿನ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ವೀಡಿಯೋದಲ್ಲಿ ನಟಿ ಮೇಘನಾ ರಾಜ್ ಮಗನನ್ನು ಎತ್ತಿಕೊಂಡು ಚಿರಂಜೀವಿ ಸರ್ಜಾ ಫೋಟೋವನ್ನು ತೋರಿಸಿ, ಅಪ್ಪನನ್ನು ನೋಡು ಎಂದು ಹೇಳುತ್ತಾರೆ. ಆಗ ಜ್ಯೂನಿಯರ್ ಚಿರು ಫೋಟೋದಲ್ಲಿ ಚಿರಂಜೀವಿ ಸರ್ಜಾರನ್ನು ಕಣ್ಣು ಮಿಟಿಕಿಸದೇ ದಿಟ್ಟಿಸಿ ನೋಡುತ್ತಾ, ತನ್ನ ಎರಡು ಕೈಗಳಿಂದ ಫೋಟೋವನ್ನು ಮುಟ್ಟಿ ಮುಗುಳುನಗೆ ಬೀರಿ, ಅಪ್ಪನ ಫೋಟೋದೊಂದಿಗೆ ಆಟ ಆಡಿದ್ದಾನೆ.

     

    View this post on Instagram

     

    A post shared by Meghana Raj Sarja (@megsraj)

    ಈ ವೀಡಿಯೋವನ್ನು ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಮ್ಮ ಪವಾಡ- ಶಾಶ್ವತ ಮತ್ತು ಯಾವಾಗಲೂ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಈ ವೀಡಿಯೋಗೆ ನಟ ಪ್ರಜ್ವಾಲ್ ದೇವರಾಜ್ ಪತ್ನಿ ರಾಗಿಣಿ, ಪನ್ನಾಗಭರಣ, ಕಿರುತರೆ ನಟಿ ಶ್ವೇತ ಚೆಂಗಪ್ಪ ಸೇರಿದಂತೆ ಅನೇಕ ಮಂದಿ ಕಾಮೆಂಟ್ ಮಾಡಿದ್ದಾರೆ.

  • ಜೂನಿಯರ್ ಚಿರುಗೆ ಆರು ತಿಂಗಳ ಸಂಭ್ರಮ

    ಜೂನಿಯರ್ ಚಿರುಗೆ ಆರು ತಿಂಗಳ ಸಂಭ್ರಮ

    ಬೆಂಗಳೂರು: ಜೂನಿಯರ್ ಚಿರು ಆರು ತಿಂಗಳ ಸಂಭ್ರಮದಲ್ಲಿದ್ದು, ಸರ್ಜಾ ಕುಟುಂಬ ಸುಂದರ ಫೋಟೋಶೂಟ್ ಮಾಡಿಸಿದೆ. ಸದ್ಯ ಆರರ ಸಂಭ್ರಮದಲ್ಲಿ ಪುಟ್ಟ ಚಿರು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    ಮೇಘನಾ ರಾಜ್ ಸರ್ಜಾ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಮಗನ ಫೋಟೋಗಳು ಶೇರ್ ಮಾಡಿಕೊಂಡಿದ್ದಾರೆ. ಮಗ ಆರು ತಿಂಗಳನವನಾದ. ನಾನು ಮತ್ತು ತಂದೆ ಇಬ್ಬರು ಆತನನ್ನು ತುಂಬಾ ಪ್ರೀತಿಸುತ್ತೇವೆ ಎಂದು ಬರೆದು ಆರರ ಸಂಭ್ರಮ ಆಯೋಜಿಸಿದ ಎಲ್ಲರಿಗೂ ಮೇಘನಾ ರಾಜ್ ಧನ್ಯವಾದ ಸಲ್ಲಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅಮ್ಮನ ಮಗ ಅಂತ ಬರೆದುಕೊಂಡು ಮುದ್ದಾದ ಫೋಟೋವನ್ನ ಮೇಘನಾ ಹಂಚಿಕೊಂಡಿದ್ದರು.

     

    View this post on Instagram

     

    A post shared by Meghana Raj Sarja (@megsraj)

    ಮಗುವಿಗೇ ಮೇಘನಾಳೇ ತಂದೆ-ತಾಯಿಯಾಗಿದ್ದಾಳೆ. ನಾನು ಪ್ರೀತಿಯಿಂದ ಮಗುವಿಗೆ ಚಿಂಟೂ ಎಂದು ಕರೆಯಬೇಕೆಂದುಕೊಂಡಿದ್ದೇನೆ. ಚಿಂಟೂ ಅಂದ್ರೆ ಚಿಂತೆಯನ್ನ ದೂರ ಮಾಡಲಿ ಅನ್ನೋದಕ್ಕೆ ಆ ಹೆಸರು ಆಯ್ಕೆ ಮಾಡಿದ್ದೇನೆ. ಆದ್ರೆ ಮೇಘನಾ ಮಗುವನ್ನ ಪಾಪು ಅಂತ ಕರೆಯುತ್ತಾಳೆ ಎಂದು ತಂದೆ ಸುಂದರ್ ರಾಜ್ ಹೇಳಿದ್ದರು. ಅಕ್ಟೋಬರ್ 22ರಂದು ಜೂನಿಯರ್ ಹುಟ್ಟಿದ ಕೂಡಲೇ ಮೇಘನಾ ಅವರ ಆಸೆಯಂತೆ ಮಗುವನ್ನ ಚಿರಂಜೀವಿ ಫೋಟೋ ಮುಂದೆ ಹಿಡಿದು ತೋರಿಸಲಾಗಿತ್ತು.

  • ಜೂ.ಚಿರುಗಾಗಿ ಮೇಘನಾಗೆ ಸಿಕ್ತು ವಿಭಿನ್ನ ಗಿಫ್ಟ್

    ಜೂ.ಚಿರುಗಾಗಿ ಮೇಘನಾಗೆ ಸಿಕ್ತು ವಿಭಿನ್ನ ಗಿಫ್ಟ್

    ಬೆಂಗಳೂರು: ಜೂನಿಯರ್ ಚಿರು ಜನನದಿಂದಾಗಿ ಕೇವಲ ಕುಟುಂಬಸ್ಥರು ಮಾತ್ರವಲ್ಲ ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮನೆ ಮಾಡಿದೆ. ಹಲವು ವಿವಿಧ ರೀತಿಯ ಸಹಾಯ ಮಾಡಿದ್ದರೆ. ಇನ್ನೂ ಹಲವರು ಗಿಫ್ಟ್ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಇದೀಗ ಜೂ.ಚಿರುಗಾಗಿ ಮೇಘನಾ ಅವರಿಗೆ ವಿಭಿನ್ನ ಗಿಫ್ಟ್ ಸಿಕ್ಕಿದೆ.

    ಅನಿಲಾ ಇಂಪ್ರೆಶನ್ಸ್ ಆ್ಯಂಡ್ ಫ್ರೇಮ್ಸ್ ಸುಂದರವಾದ ಉಡುಗೊರೆ ನೀಡಿದ್ದು, ಮೇಘನಾ ರಾಜ್ ಅವರಿಗೆ ಹಸ್ತಾಂತರಿಸಿದ್ದಾರೆ. ಗಿಫ್ಟ್ ನೋಡಿದ ಮೇಘನಾ ರಾಜ್, ಫಿದಾ ಆಗಿದ್ದು, ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ ಸಾಲುಗಳನ್ನು ಸಹ ಬರೆದಿರುವ ಅವರು, ಫ್ರೇಮ್‍ನಲ್ಲಿ ಸಂತೋಷವನ್ನು ಹಿಡಿದಿಡಲು ಬಯಸುವುದಾದರೆ ಈ ಸುಂದರ ಉಡುಗೊರೆ ನೀಡಿದ್ದಕ್ಕೆ ಅನಿಲಾ ಇಂಪ್ರೆಶನ್ಸ್ ಆ್ಯಂಡ್ ಫ್ರೇಮ್ಸ್ ಗೆ ಧನ್ಯವಾದಗಳು. ಪುಟ್ಟ ಪಾದಗಳು ಹಾಗೂ ಕೈಗಳನ್ನು ಮಾಡುವ ಮೂಲಕ ನಿಮ್ಮ ಕೆಲಸದಿಂದ ಚಿರಂಜೀವಿಯವರನ್ನು ಅಮರವಾಗಿಸಿದ್ದೀರಿ. ಜೂನಿಯರ್ ಸಿ ಖಂಡಿತವಾಗಿಯೂ ಇದನ್ನು ಕಾಪಾಡಿಕೊಳ್ಳುತ್ತಾನೆ ಎಂದು ತಿಳಿಸಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಪುಟ್ಟ ಮಗುವಿನ ಕೈ ಮತ್ತು ಪಾದದ ಅಳತೆಯನ್ನು ತೆಗೆದು ಅದೇ ರೀತಿಯಾಗಿ ಅನಿಲಾ ಅವರು ತಯಾರಿಸಿಕೊಡುತ್ತಾರೆ. ಅನಿಲಾ ಅವರು ಈಗಾಗಲೇ ಹಲವರಿಗೆ ಈ ರೀತಿಯ ಫ್ರೇಮ್‍ಗಳನ್ನು ಮಾಡಿಕೊಟ್ಟಿದ್ದು ಹಲವರಿಗೆ ಉಡುಗೊರೆಗಳನ್ನು ಸಹ ನೀಡಿದ್ದಾರೆ. ಅದೇ ರೀತಿ ಇದೀಗ ಮೇಘನಾ ರಾಜ್ ಸರ್ಜಾ ಅವರ ಮಗ ಚೂನಿಯರ್ ಚಿರು ಕೈ ಹಾಗೂ ಪಾದಗಳ ಇಂಪ್ರೆಶನ್ ನಿಂದ ಮಾಡಿದ ಫ್ರೇಮ್‍ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಮೇಘನಾ ಸಂತಸ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಸಹ ಕಮೆಂಟ್‍ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

    ಇತ್ತೀಚೆಗಷ್ಟೇ ಜೂನಿಯರ್ ಚಿರುಗೆ ತೊಟ್ಟಿಲು ಶಾಸ್ತ್ರವನ್ನು ಮಾಡಲಾಗಿದ್ದು, ಉತ್ತರ ಕರ್ನಾಟಕ ಶೈಲಿಯ ಅನುಗುಣವಾಗಿ ಎಲ್ಲ ಕಾರ್ಯಗಳನ್ನು ಭರ್ಜರಿಯಾಗಿ ಮಾಡಲಾಗಿದೆ. ಮೇಘನಾ ರಾಜ್ ಅವರ ಸೀಮಂತ ಕಾರ್ಯದಿಂದ ಮಗುವಿನ ತೊಟ್ಟಿಲು ಶಾಸ್ತ್ರದ ವರೆಗೆ ಎಲ್ಲ ಕಾರ್ಯಗಳನ್ನು ಉತ್ತರ ಕರ್ನಾಟಕ ಶೈಲಿಯಲ್ಲಿ ಮಾಡಲಾಗಿತ್ತು. ವನಿತಾ ಗುತ್ತಲ್ ಅವರು ಜೂನಿಯರ್ ಚಿರುಗಾಗಿ ಕಲಘಟಗಿ ತೊಟ್ಟಿಲನ್ನು ನೀಡಿದ್ದರು.

    ಈ ಬಗ್ಗೆ ಮಾತನಾಡಿದ್ದ ವನಿತಾ ಗುತ್ತಲ್, ಉತ್ತರ ಕರ್ನಾಟಕ ಶೈಲಿಯಲ್ಲೇ ಸೀಮಂತ ಮಾಡಿದ್ದೆವು. ಮೇಘನಾ ನಾನ್ ವೆಜ್ ಊಟ ಎಂದರೆ ಹೆಚ್ಚು ಇಷ್ಟ ಎಂದರು ಆಗ ಅಡಿಗೆ ಮಾಡಿ ಎರಡು ದಿನ ಬಿಟ್ಟು ಊಟ ತಂದುಕೊಟ್ಟೆವು. ಬಳಿಕ ಹೆರಿಗೆ ಆದಮೇಲೆ ಸಹ ಉತ್ತರ ಕರ್ನಾಟಕ ಶೈಲಿಯ ಕೊಬ್ಬರಿಖಾರ, ಅವಳಿ ಬೀಜ, ಅರಿಶಿಣ, ಬೆಳ್ಳುಳ್ಳಿ ಹೀಗೆ ನಮ್ಮ ಉತ್ತರ ಕರ್ನಾಟಕ ಪದ್ಧತಿಯಂತೆ ಎಲ್ಲ ಪದಾರ್ಥಗಳನ್ನು ಮೇಘನಾ ಮನೆಯವರಿಗೆ ನೀಡಿದೆವು ಎಂದು ತಿಳಿಸಿದ್ದರು.

    ಮಗುವನ್ನು ಸ್ನಾನ ಮಾಡಿಸಲು ನಮ್ಮ ಸದಸ್ಯರೊಬ್ಬರನ್ನು 10 ದಿನಗಳ ಕಾಲ ಮೇಘನಾ ಅವರ ಮನೆಯಲ್ಲಿಯೇ ಬಿಟ್ಟಿದ್ದೆವು. ಮಗುವಿನ ನಾಮಕರಣಕ್ಕೆ 16 ಜನ ಸ್ತ್ರೀ ಶಕ್ತಿ ಸಂಘದ ಸದಸ್ಯರೆಲ್ಲ ಬಂದಿದ್ದೇವೆ. 4-5 ತಿಂಗಳ ಕಾಲ ಕೆಲಸ ಮಾಡಿ ತೊಟ್ಟಿಲು ತಯಾರಿಸಲಾಗಿದೆ ಎಂದು ವನಿತಾ ಗುತ್ತಲ್ ಅವರು ಹೇಳಿದ್ದರು.

    ಹೀಗೆ ಅನೇಕರು ಜೂನಿಯರ್ ಚಿರುಗೆ ಗಿಫ್ಟ್ ನೀಡಿ ಹಾರೈಸಿದ್ದಾರೆ. ಇದೀಗ ಅನಿಲಾ ಅವರು ಅದ್ಭುತ ಫ್ರೇಮ್ ವರ್ಕ್‍ನ್ನು ಗಿಫ್ಟ್ ನೀಡಿದ್ದಾರೆ. ಇದರಲ್ಲಿ ಜೂನಿಯರ್ ಚಿರುನ ಸುಂದರ ಕೈ ಹಾಗೂ ಪಾದಗಳು ಮೂಡಿ ಬಂದಿವೆ. ಯಶ್ ಹಾಗೂ ರಾಧಿಕಾ ದಂಪತಿ ಪುತ್ರಿ ಐರಾಗೂ ಸಹ ಮೇಕಪ್ ಆರ್ಟಿಸ್ಟ್ ಒಬ್ಬರು ಇದೇ ರೀತಿಯ ಉಡುಗೊರೆ ನೀಡಿದ್ದರು.

  • ಅಮ್ಮನ ಕಿರುಬೆರಳು ಹಿಡಿದ ಜೂನಿಯರ್ ಚಿರು

    ಅಮ್ಮನ ಕಿರುಬೆರಳು ಹಿಡಿದ ಜೂನಿಯರ್ ಚಿರು

    ಬೆಂಗಳೂರು: ಜೂನಿಯರ್ ಚಿರು ಅಮ್ಮನ ಕಿರುಬೆರಳು ಹಿಡಿದಿರುವ ಮುದ್ದಾದ ಫೋಟೋವನ್ನ ಮೇಘನಾ ರಾಜ್ ಸರ್ಜಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಹಾಲಿನಲ್ಲಿ ಅದ್ದಿದಂತೆ ಕಾಣುವ ಪುಟ್ಟ ಕಂದನ ಕೋಮಲ ಕರಗಳಿಗೆ ನೋಡುಗರ ದೃಷ್ಟಿ ತಾಕುವಂತಿದೆ.

    ಮಹಿಳೆಗೆ ಅಮ್ಮನ ಪದವಿಯೇ ಅತ್ಯುನ್ನತ ಸ್ಥಾನ ಅನ್ನೋ ಮಾತಿದೆ. ಮಗುವಿನ ಆಗಮನದ ಜೊತೆಯಲ್ಲಿ ಅಮ್ಮನ ಜನ್ಮವೂ ಆಗುತ್ತೆ. ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತವನ್ನ ತಾಯಿ ಸೂಕ್ಷ್ಮವಾಗಿ ಗಮನಿಸುತ್ತಾಳೆ. ಅದು ಕಿರುಬೆರಳು ಹಿಡಿದು, ಅಮ್ಮ ಎಂದು ಕರೆಯುವರೆಗೂ ಪ್ರತಿ ಹಂತದಲ್ಲಿಯೂ ತಾಯಿ ಜೊತೆಯಲ್ಲಿರುತ್ತಾಳೆ. ಕಂದನ ಪ್ರತಿ ಬೆಳವಣಿಗೆ ಹಂತಗಳು ತಾಯಿಯನ್ನ ಪುಳುಕವನ್ನುಂಟು ಮಾಡುತ್ತೇವೆ.

     

    View this post on Instagram

     

    A post shared by Meghana Raj Sarja (@megsraj)

    ಹಳದಿ ಮತ್ತು ಕಪ್ಪು ಬಣ್ಣದ ಶ್ವೆಟರ್ ತೊಟ್ಟು ಕೈಗೊಂದು ಕೆಂಪು ಲೇಸ್ ಕಟ್ಟಿಕೊಂಡ ಜೂನಿಯರ್ ಚಿರು, ತಾಯಿ ಮೇಘಾನ ಕಿರುಬೆರಳನ್ನ ತನ್ನ ಇಡೀ ಕೈಯಿಂದ ಹಿಡಿಯುವ ಪ್ರಯತ್ನದಲ್ಲಿದ್ದಾನೆ. ಇದೊಂದು ಮಿರಾಕಲ್. ನನ್ನ ಪುಟ್ಟ ಕಂದ ತನ್ನ ಪುಷ್ಪ ದಳದಂತಹ ಕೈಗಳಿಂದ ನನ್ನನ್ನ ಬೆರಳು ಹಿಡಿಯಲು ಪಯತ್ನಿಸುತ್ತಿದೆ. ಇದು ದೇವರು ನೀಡಿದ ಅಮೂಲ್ಯ ಉಡುಗೊರೆ ಎಂದು ಮೇಘನಾ ರಾಜ್ ತಾಯಿಯ ಅನುಭವವನ್ನ ಕೆಲ ಸಾಲುಗಳಲ್ಲಿ ಬರೆದುಕೊಂಡಿದ್ದಾರೆ.

  • ಕಲಘಟಗಿ ತೊಟ್ಟಿಲಿನಲ್ಲಿ ಜೂನಿಯರ್ ಚಿರು – ಈ ತೊಟ್ಟಿಲಿನ ವಿಶೇಷತೆ ಏನು?

    ಕಲಘಟಗಿ ತೊಟ್ಟಿಲಿನಲ್ಲಿ ಜೂನಿಯರ್ ಚಿರು – ಈ ತೊಟ್ಟಿಲಿನ ವಿಶೇಷತೆ ಏನು?

    ಬೆಂಗಳೂರು: ರಾಜ್ಯ ಮಾತ್ರವಲ್ಲ ಹೊರ ರಾಜ್ಯದಲ್ಲಿಯೂ ಧಾರವಾಡ ಜಿಲ್ಲೆಯ ಕಲಘಟಗಿ ತೊಟ್ಟಿಲು ಫೇಮಸ್. ಯಾರೇ ಗಣ್ಯ ವ್ಯಕ್ತಿಗಳಿಗೆ ಮಗು ಜನಿಸಿದರೂ ತೊಟ್ಟಿಲಿನ ವಿಚಾರದಲ್ಲಿ ನೆನಪಾಗುವುದು ಕಲಘಟಗಿ ಎಂದರೆ ತಪ್ಪಾಗಲಿಕ್ಕಿಲ್ಲ. ಈಗ ಚಿರಂಜೀವಿ ಮತ್ತು ಮೇಘನಾ ದಂಪತಿ ಪುತ್ರನನ್ನು ಈ ತೊಟ್ಟಿಲಿಗೆ ಹಾಕಿ ತೂಗಿದ್ದಾರೆ.

    ರಾಮಾಯಣ, ಮಾಹಾಭಾರತ, ಪೌರಾಣಿಕ ಕಥೆಗಳ ಚಿತ್ರಣ, ದೇಶದ ಸಂಸ್ಕೃತಿಗಳ ಚಿತ್ರಣಗಳನ್ನು ಈ ತೊಟ್ಟಿಲುಗಳುಗಳಲ್ಲಿ ಚಿತ್ರಿಸಲಾಗುತ್ತದೆ. ಅಲ್ಲದೆ ಈ ತೊಟ್ಟಿಲುಗಳ ಆಯಸ್ಸು ಸಹ ಹೆಚ್ಚು. ಅಚ್ಚಳಿಯದ ನೆನಪಾಗಿ ಉಳಿಯುತ್ತದೆ ಎಂಬ ಕಾರಣಕ್ಕೆ ಬಹುತೇಕ ಗಣ್ಯ ವ್ಯಕ್ತಿಗಳು ತಮ್ಮ ಪ್ರೀತಿ ಪಾತ್ರರ ಮಕ್ಕಳಿಗೆ ಕಲಘಟಗಿ ತೊಟ್ಟಿಲನ್ನು ನೀಡುತ್ತಾರೆ. ಅದೇ ರೀತಿ ಇದೀಗ ವನಿತಾ ಗುತ್ತಲ ಅವರು ಮೇಘನಾ ರಾಜ್ ಅವರಿಗೆ ಕಲಘಟಗಿ ತೊಟ್ಟಿಲನ್ನು ಮಾಡಿಸಿ ಜೂನಿಯರ್ ಚಿರುಗೆ ಉಡುಗೊರೆಯಾಗಿ ನೀಡಿದ್ದಾರೆ.

    ಇನ್ನೂ ವಿಷೇಶವೆಂದರೆ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮಗಳು ಐರಾಗೂ ಸ್ವತಃ ನಟ ಅಂಬರೀಷ್ ಅವರು ಕಲಘಟಗಿ ತೊಟ್ಟಿಲನ್ನು ಹೇಳಿ ಮಾಡಿಸಿ ಉಡುಗೊರೆಯಾಗಿ ನೀಡಿದ್ದರು. ಇದಾದ ಬಳಿಕ ಜನಾರ್ದನ ರೆಡ್ಡಿ ಮೊಮ್ಮಗಳಿಗೂ ಸಹ ವನಿತಾ ಗುತ್ತಲ್ ಅವರೇ ತೊಟ್ಟಿಲನ್ನು ಮಾಡಿಸಿ ನೀಡಿದ್ದರು. ಮಾತ್ರವಲ್ಲದೆ ರಾಜ್‍ಕುಮಾರ್ ಕುಟುಂಬವರೂ ಕಲಘಟಗಿ ತೊಟ್ಟಿಲನ್ನು ಕೊಳ್ಳುತ್ತಾರೆ. ಇದೀಗ ಜೂನಿಯರ್ ಚಿರುಗು ಸಹ ಇದೇ ರೀತಿಯ ತೊಟ್ಟಿಲನ್ನು ವನಿತಾ ಅವರೇ ಉಡುಗೊರೆಯಾಗಿ ನೀಡಿದ್ದಾರೆ.

    ತೊಟ್ಟಿಲಿನ ವಿಶೇಷತೆ ಏನು?
    ಕರಕುಶಲಕಾರರ ಕೈಚಳಕದಲ್ಲಿ ಮೂಡುವ ಈ ತೊಟ್ಟಿಲುಗಳಿಗೆ ಭಾರೀ ಬೇಡಿಕೆ ಇದ್ದು, ಕಲಘಟಗಿ ತೊಟ್ಟಿಲಿಗೆ 600 ವರ್ಷಗಳ ಇತಿಹಾಸವಿದೆ. ಇಲ್ಲಿ ಧಾರ್ಮಿಕವಾಗಿ ತೊಟ್ಟಿಲು ಮಾಡುತ್ತಾರೆ. ತೊಟ್ಟಲಿಗೆ ಧಾರ್ಮಿಕ ಕಥೆಗಳು, ಮುದ್ದು ಕೃಷ್ಣ ಆಟ, ಲೀಲೆಗಳು, ರಾಮಾಯಣದ ಪ್ರಸಂಗಗಳು ಹೀಗೆ ವಿವಿಧ ರೀತಿಯ ಚಿತ್ರಗಳನ್ನು ಬಿಡಿಸಲಾಗುತ್ತದೆ. ಈ ಬಣ್ಣಕ್ಕೆ 100 ವರ್ಷ ಗ್ಯಾರೆಂಟಿ ಇರುತ್ತದೆ. ಅಲ್ಲದೆ ತೊಟ್ಟಿಲಿಗೆ ಬಣ್ಣ ಹಚ್ಚುವಾಗ ಅವರು ಸಾಧಾರಣ ಬಣ್ಣ ಹಚ್ಚುವುದಿಲ್ಲ. ಗಿಡಮೂಲಿಕೆ ಬಣ್ಣಗಳನ್ನು ಲೇಪನ ಮಾಡಲಾಗುತ್ತದೆ. ಒಂದು ತೊಟ್ಟಿಲುಗಳನ್ನು ತಯಾರಿಸಲು ಸುಮಾರು 4-5 ತಿಂಗಳುಗಳ ಕಾಲ ಸಮಯ ಬೇಕಾಗುತ್ತದೆ.

    ತೊಟ್ಟಿಲಿನ ಬೆಲೆ ಎಷ್ಟು?
    ಜೂನಿಯರ್ ಚಿರುಗೆ ಕಲಘಟಗಿಯ ಕರಕುಶಲಕರ್ಮಿ ಮಾರುತಿ ಬಡಿಗೇರ್ ತೊಟ್ಟಿಲು ತಯಾರಿಸಿ ಕೊಟ್ಟಿದ್ದಾರೆ. ಆರಂಭದಲ್ಲಿ ಒಂದು ತೊಟ್ಟಿಲಿಗೆ 1.10 ಲಕ್ಷ ರೂ. ಹೇಳಿದ್ದರು. ನಾನು ಮೇಘನಾ ಕುಟುಂಬಕ್ಕೆ ತೊಟ್ಟಿಲು ಕೊಡುತ್ತಿರುವುದು ತಿಳಿದು 15 ಸಾವಿರ ರೂ. ಕಡಿಮೆ ಮಾಡಿದರು. ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆಯಾದಾಗ ಸಹಾಯ ಮಾಡುತ್ತೇವೆ. ಆದರೆ ಮೇಘನಾ ಅವರು ಇಷ್ಟು ಬೇಸರಗೊಂಡಿದ್ದಾರೆ. ಹೀಗಾಗಿ ಸಹಾಯ ಮಾಡಬೇಕು ಎಂದು ಈ ಕೆಲಸ ಮಾಡಲು ನಿರ್ಧರಿಸಿದೆವು ಎಂದು ವನಿತಾ ಮಾಹಿತಿ ನೀಡಿದ್ದಾರೆ.

    ಉತ್ತರ ಕರ್ನಾಟಕ ಶೈಲಿಯಲ್ಲಿ ಸೀಮಂತ
    ಸರ್ಜಾ ಕುಟುಂಬಸ್ಥರನ್ನು ಹೇಗೆ ಸಂಪರ್ಕಿಸಬೇಕು ಎಂದು ನಮಗೆ ತಿಳಿದಿರಲಿಲ್ಲ. ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿರುವ ಉಮೇಶ್ ಬಣಕಾರ್ ಅವರು ನಮ್ಮ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನವರು ಹೀಗೆ ಅವರನ್ನು ಸಂಪರ್ಕಿಸಿ, ಬಳಿಕ ಪ್ರಮೀಳಾ ಅವರನ್ನು ಸಂಪರ್ಕಿಸಿದೆವು. ಆರಂಭದಲ್ಲಿ ಸೀಮಂತ ಮಾಡುತ್ತೇವೆ ಎಂದು ಕೇಳಿದಾಗ ಅಷ್ಟೇನು ಆಸಕ್ತಿ ತೋರಲಿಲ್ಲ. ಬಳಿಕ ನಾವು ಕಾರ್ಯಕ್ರಮ ಮಾಡಲು ಮುಂದಾದಾಗ ಚೆನ್ನಾಗಿ ಸ್ಪಂದಿಸಿದರು. ಉತ್ತರ ಕರ್ನಾಟಕ ಶೈಲಿಯಲ್ಲೇ ಸೀಮಂತ ಮಾಡಿದೆವು. ಮೇಘನಾ ನಾನ್ ವೆಜ್ ಊಟ ಎಂದರೆ ಹೆಚ್ಚು ಇಷ್ಟ ಎಂದರು ಆಗ ಅಡಿಗೆ ಮಾಡಿ ಎರಡು ದಿನ ಬಿಟ್ಟು ಊಟ ತಂದುಕೊಟ್ಟೆವು. ಬಳಿಕ ಹೆರಿಗೆ ಆದಮೇಲೆ ಸಹ ಉತ್ತರ ಕರ್ನಾಟಕ ಶೈಲಿಯ ಕೊಬ್ಬರಿಖಾರ, ಅವಳಿ ಬೀಜ, ಅರಿಶಿಣ, ಬೆಳ್ಳುಳ್ಳಿ ಹೀಗೆ ನಮ್ಮ ಉತ್ತರ ಕರ್ನಾಟಕ ಪದ್ಧತಿಯಂತೆ ಎಲ್ಲ ಪದಾರ್ಥಗಳನ್ನು ಮೇಘನಾ ಮನೆಯವರಿಗೆ ನೀಡಿದೆವು ಎಂದು ತಿಳಿಸಿದರು.

    ಮಗುವನ್ನು ಸ್ನಾನ ಮಾಡಿಸಲು ನಮ್ಮ ಸದಸ್ಯರೊಬ್ಬರನ್ನು 10 ದಿನಗಳ ಕಾಲ ಮೇಘನಾ ಅವರ ಮನೆಯಲ್ಲಿಯೇ ಬಿಟ್ಟಿದ್ದೆವು. ಇದೀಗ ಮಗುವಿನ ನಾಮಕರಣಕ್ಕೆ 16 ಜನ ಸ್ತ್ರೀ ಸಂಘದ ಸದಸ್ಯರೆಲ್ಲ ಬಂದಿದ್ದೇವೆ. ಹುಟ್ಟಿದ ಮನಿ ಪುಟ್ಟ ಎಂದು ಹೇಳಿ ನಾನೇ ಮಗುವಿಗೆ ಹೆಸರಿಟ್ಟೆ ತುಂಬಾ ಖುಷಿಯಾಯಿತು ಎಂದು ವನಿತಾ ವಿವರಿಸಿದ್ದಾರೆ.

  • ಸೀಮಂತದಿಂದ ಜೂ.ಚಿರು ನಾಮಕರಣದವರೆಗೆ ಉತ್ತರ ಕರ್ನಾಟಕ ಶೈಲಿಯಲ್ಲಿ ಆರೈಕೆ: ವನಿತಾ ಗುತ್ತಲ್

    ಸೀಮಂತದಿಂದ ಜೂ.ಚಿರು ನಾಮಕರಣದವರೆಗೆ ಉತ್ತರ ಕರ್ನಾಟಕ ಶೈಲಿಯಲ್ಲಿ ಆರೈಕೆ: ವನಿತಾ ಗುತ್ತಲ್

    – ಮೇಘನಾಗಾಗಿ ತೊಟ್ಟಿಲು ಬೆಲೆ 15 ಸಾವಿರ ಕಡಿಮೆ
    – ಪುರಾಣ ಕಥೆಯ ಚಿತ್ರಗಳನ್ನು ಒಳಗೊಂಡಿದೆ ಕಲಘಟಗಿ ತೊಟ್ಟಿಲು

    ಬೆಂಗಳೂರು: ಜೂನಿಯರ್ ಚಿರು ಆಗಮನದಿಂದಾಗಿ ಚಿರಂಜೀವಿ ಸರ್ಜಾ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದ್ದು, ಇನ್ನೂ ವಿಶೇಷವೆಂದರೆ ಮೇಘನಾ ರಾಜ್ ಸರ್ಜಾ ಅವರ ಸೀಮಂತ ಕಾರ್ಯದಿಂದ ಹಿಡಿದು, ಮಗುವನ್ನು ಸ್ನಾನ ಮಾಡಿಸುವುದು, ನಾಮಕರಣ ಮಾಡುವ ಶಾಸ್ತ್ರದ ವರೆಗೆ ಉತ್ತರ ಕರ್ನಾಟಕದ ಶೈಲಿಯನ್ನು ಅನುಸರಿಸಿರುವುದು ವಿಶೇಷವಾಗಿದೆ. ಈ ಬಗ್ಗೆ ಎಲ್ಲ ಶಾಸ್ತ್ರಗಳ ನೇತೃತ್ವ ವಹಿಸಿದ್ದ ವನಿತಾ ಗುತ್ತಲ್ ಅವರು ಹೇಗೆಲ್ಲ ಶಾಸ್ತ್ರ ನೆರವೇರಿಸಿದರು. ಯಾವ ರೀತಿ ಆರೈಕೆ ಮಾಡಲಾಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.

    ವನಿತಾ ಅವರಿಗೆ ಹೊಳೆದದ್ದು ಹೇಗೆ?
    ನಮ್ಮ ಪತಿ ಒಂದು ದಿನ ತಡವಾಗಿ ಬಂದರು, ಯಾಕೋ ಬರುವುದು ತಡವಾಯಿತು ಎಂದು ಕರೆ ಮಾಡಿದೆ. ಆಗ ನನ್ನ ಮಕ್ಕಳು ಅಪ್ಪ ಒಂದು ದಿನ ತಡವಾಗಿ ಬಂದಿದ್ದಕ್ಕೆ ನೀನಗೆ ತಡೆಯಲು ಆಗುತ್ತಿಲ್ಲ. ಚಿರು ಅವರು ತೀರಿದ್ದಾರೆ, ಮೇಘನಾ ಅವರ ಹೊಟ್ಟೆಯಲ್ಲಿ ಪಾಪು ಇದೆ ಅವರು ಹೇಗೆ ಇರಬೇಡ ಎಂದು ಪ್ರಶ್ನಿಸಿದರು. ಆಗ ನನ್ನ ಮನಸ್ಸಿಗೆ ತುಂಬಾ ನೋವಾಯಿತು. ತಕ್ಷಣವೇ ನಮಗೆ ಪರಿಚಯವಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಅವರನ್ನು ಸಂಪರ್ಕಿಸಿ, ಮೇಘನಾ ಅವರ ಸೀಮಂತ ಶಾಸ್ತ್ರ ಮಾಡುವ ಬಗ್ಗೆ ಚರ್ಚಿಸಿದೆವು. ಅಲ್ಲದೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಾರುತಿ ಬಡಿಗೇರ್ ಅವರ ಬಳಿ ನೈಸರ್ಗಿಕ ಬಣ್ಣದಿಂದ ಕೈಯಿಂದ ಮಾಡಿದ ದೇಶದ ಸಂಸ್ಕೃತಿ, ಮಹಾಭಾರತ ಹಾಗೂ ರಾಮಾಯಣ ಸನ್ನಿವೇಶಗಳ ಚಿತ್ರಗಳನ್ನು ಒಳಗೊಂಡ ತೊಟ್ಟಿಲನ್ನು ತಯಾರಿಸಲು ಕೇಳಿಕೊಂಡೆವು.

    ತೊಟ್ಟಿಲಿನ ಬೆಲೆ ಎಷ್ಟು?
    ಕಲಘಟಗಿಯ ಕರಕುಶಲಕರ್ಮಿ ಮಾರುತಿ ಬಡಿಗೇರ್ ತೊಟ್ಟಿಲು ತಯಾರಿಸಿ ಕೊಟ್ಟರು. ಆರಂಭದಲ್ಲಿ ಒಂದು ತೊಟ್ಟಿಲಿಗೆ 1.10 ಲಕ್ಷ ರೂ. ಹೇಳಿದ್ದರು. ನಾನು ಮೇಘನಾ ಕುಟುಂಬಕ್ಕೆ ತೊಟ್ಟಿಲು ಕೊಡುತ್ತಿರುವುದು ತಿಳಿದು 15 ಸಾವಿರ ರೂ. ಕಡಿಮೆ ಮಾಡಿದರು. ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ತೊಂದರೆಯಾದಾಗ ಸಹಾಯ ಮಾಡುತ್ತೇವೆ. ಆದರೆ ಮೇಘನಾ ಅವರು ಇಷ್ಟು ಬೇಸರಗೊಂಡಿದ್ದಾರೆ. ಹೀಗಾಗಿ ಸಹಾಯ ಮಾಡಬೇಕು ಎಂದು ಈ ಕೆಲಸ ಮಾಡಲು ನಿರ್ಧರಿಸಿದೆವು ಎಂದು ವನಿತಾ ತಿಳಿಸಿದರು.

    ಉತ್ತರ ಕರ್ನಾಟಕ ಶೈಲಿಯಲ್ಲಿ ಸೀಮಂತ
    ಸರ್ಜಾ ಕುಟುಂಬಸ್ಥರನ್ನು ಹೇಗೆ ಸಂಪರ್ಕಿಸಬೇಕು ಎಂದು ನಮಗೆ ತಿಳಿದಿರಲಿಲ್ಲ. ಬಳಿಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷರಾಗಿರುವ ಉಮೇಶ್ ಬಣಕಾರ್ ಅವರು ನಮ್ಮ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನವರು ಹೀಗೆ ಅವರನ್ನು ಸಂಪರ್ಕಿಸಿ, ಬಳಿಕ ಪ್ರಮೀಳಾ ಅವರನ್ನು ಸಂಪರ್ಕಿಸಿದೆವು. ಆರಂಭದಲ್ಲಿ ಸೀಮಂತ ಮಾಡುತ್ತೇವೆ ಎಂದು ಕೇಳಿದಾಗ ಅಷ್ಟೇನು ಆಸಕ್ತಿ ತೋರಲಿಲ್ಲ. ಬಳಿಕ ನಾವು ಕಾರ್ಯಕ್ರಮ ಮಾಡಲು ಮುಂದಾದಾಗ ಚೆನ್ನಾಗಿ ಸ್ಪಂದಿಸಿದರು. ಉತ್ತರ ಕರ್ನಾಟಕ ಶೈಲಿಯಲ್ಲೇ ಸೀಮಂತ ಮಾಡಿದೆವು. ಮೇಘನಾ ನಾನ್ ವೆಜ್ ಊಟ ಎಂದರೆ ಹೆಚ್ಚು ಇಷ್ಟ ಎಂದರು ಆಗ ಅಡಿಗೆ ಮಾಡಿ ಎರಡು ದಿನ ಬಿಟ್ಟು ಊಟ ತಂದುಕೊಟ್ಟೆವು. ಬಳಿಕ ಹೆರಿಗೆ ಆದಮೇಲೆ ಸಹ ಉತ್ತರ ಕರ್ನಾಟಕ ಶೈಲಿಯ ಕೊಬ್ಬರಿಖಾರ, ಅವಳಿ ಬೀಜ, ಅರಿಶಿಣ, ಬೆಳ್ಳುಳ್ಳಿ ಹೀಗೆ ನಮ್ಮ ಉತ್ತರ ಕರ್ನಾಟಕ ಪದ್ಧತಿಯಂತೆ ಎಲ್ಲ ಪದಾರ್ಥಗಳನ್ನು ಮೇಘನಾ ಮನೆಯವರಿಗೆ ನೀಡಿದೆವು ಎಂದು ತಿಳಿಸಿದರು.

    ತೊಟ್ಟಿಲು ತಯಾರಿಗೆ ಬೇಕು 4-5 ತಿಂಗಳು
    ಮಗುವನ್ನು ಸ್ನಾನ ಮಾಡಿಸಲು ನಮ್ಮ ಸದಸ್ಯರೊಬ್ಬರನ್ನು 10 ದಿನಗಳ ಕಾಲ ಮೇಘನಾ ಅವರ ಮನೆಯಲ್ಲಿಯೇ ಬಿಟ್ಟಿದ್ದೆವು. ಇದೀಗ ಮಗುವಿನ ನಾಮಕರಣಕ್ಕೆ 16 ಜನ ಸ್ತ್ರೀ ಸಂಘದ ಸದಸ್ಯರೆಲ್ಲ ಬಂದಿದ್ದೇವೆ. ಹುಟ್ಟಿದ ಮನಿ ಪುಟ್ಟ ಎಂದು ಹೇಳಿ ನಾನೇ ಮಗುವಿಗೆ ಹೆಸರಿಟ್ಟೆ ತುಂಬಾ ಖುಷಿಯಾಯಿತು. 4-5 ತಿಂಗಳ ಕಾಲ ಕೆಲಸ ಮಾಡಿ ತೊಟ್ಟಿಲು ತಯಾರಿಸಿದ್ದಾರೆ ವನಿತಾ ಗುತ್ತಲ್ ಅವರು ವಿವರಿಸಿದರು.

    ಸ್ತ್ರೀ ಶಕ್ತಿ ಮಹಿಳಾ ಸೇವಾ ಸಂಸ್ಥೆಯನ್ನು 18 ವರ್ಷಗಳ ಹಿಂದೆ ಕಟ್ಟಿ ಬೆಳೆಸಿದ್ದೇನೆ. ಈ ಸಂಸ್ಥೆ ಅಡಿಯಲ್ಲಿ 27 ಸ್ತ್ರಿ ಶಕ್ತಿ ಸಂಘ ಸಂಸ್ಥೆಗಳು ಬರುತ್ತವೆ. ನಾವು ಎಲ್ಲರಿಂದಲೂ 10 ರೂ. ಸಂಗ್ರಹಿಸಿ ಅದೇ ಹಣವನ್ನು ನಾವು ಅನಿವಾರ್ಯವಿದ್ದ ಸದಸ್ಯರಿಗೆ ಸಾಲವನ್ನಾಗಿ ನೀಡಿ ಸಹಾಯ ಮಾಡಲಾಗುತ್ತವೆ. ರಾಜ್ಯಾದ್ಯಂತ ಮಹಿಳೆಯರಿಗೆ ತೊಂದರೆಯಾಗುತ್ತಿದ್ದಾಗ ಸಹಾಯ ಮಾಡುತ್ತೇವೆ ಎಂದು ತಿಳಿಸಿದರು.

  • ಮೂರು ತಿಂಗಳ ನಂತರ ಅದ್ಧೂರಿ ನಾಮಕರಣ – ಜೂನಿಯರ್ ಚಿರುಗೆ ಎರಡು ನಿಕ್ ನೇಮ್

    ಮೂರು ತಿಂಗಳ ನಂತರ ಅದ್ಧೂರಿ ನಾಮಕರಣ – ಜೂನಿಯರ್ ಚಿರುಗೆ ಎರಡು ನಿಕ್ ನೇಮ್

    ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮೂರು ತಿಂಗಳ ನಂತರ ಅದ್ಧೂರಿಯಾಗಿ ನಾಮಕರಣ ಮಾಡಲಾಗುವುದು ಎಂದು ಮೇಘನಾ ತಂದೆ ಸುಂದರ್ ರಾಜ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸುಂದರ್ ರಾಜ್, ತಿರುಪತಿ ತಿಮ್ಮಪ್ಪನ ಹರಕೆಯಿಂದ ನನ್ನ ಮೊಮ್ಮಗ ಹುಟ್ಟಿದ್ದಾನೆ. ಕನ್ನಡದ ನೆಲದಲ್ಲಿ ದಸರಾ ಹಬ್ಬದ ವೇಳೆ ಮೊಮ್ಮಗು ಹುಟ್ಟಿರೋದು ಶುಭ ಸೂಚಕ. ನವೆಂಬರ್ 1 ರಂದು ಮೇಘನಾ ರಾಜ್ ಎಲ್ಲರ ಜೊತೆ ಮಾತನಾಡುತ್ತಾರೆ. ಕೊರೊನಾ ಕಾಲದಿಂದಾಗಿ ಮೇಘನಾ ರಾಜ್ ಹೊರಗೆ ಬರುವಂತಿಲ್ಲ ಎಂದರು. ಇದನ್ನೂ ಓದಿ: ಜೂನಿಯರ್ ಚಿರುಗೆ ಬೆಳ್ಳಿ ತೊಟ್ಟಿಲು, ಚಿನ್ನದ ಬಟ್ಟಲು ಖರೀದಿಸಿದ ಧ್ರುವ ಸರ್ಜಾ

    ಅರ್ಜುನ್ ಸರ್ಜಾ ಫೋನ್ ಮಾಡಿ ಮಗುವನ್ನ ಬರಮಾಡಿಕೊಳ್ಳುವದರ ಕುರಿತು ಮಾತಾನಾಡಿದ್ರು. ಅರ್ಜುನ್ ಸರ್ಜಾ ಜೆಂಟಲ್‍ಮ್ಯಾನ್, ಧೃವ ಸರ್ಜಾ ಸೂಪರ್ ಶೋ ಮ್ಯಾನ್. ಮಗು ಹುಟ್ಟಿದ ತಕ್ಷಣ ಎಲ್ಲರಿಗೂ ತೋರಿಸಿ ಸಂಭ್ರಮಿಸಿದರು. ಆದ್ರೆ ತಂದೆ ಮಗಳನ್ನು ನೋಡಿಕೊಳ್ಳುವವನು ವಾಚ್ ಮ್ಯಾನ್. ಆ ಕೆಲಸವನ್ನ ಕೊನೆಯವರೆಗೂ ನಾನು ನಿರ್ವಹಿಸುತ್ತೇನೆ. ಚಿರಂಜೀವಿ ಸರ್ಜಾ ಇಲ್ಲ ಅನ್ನೋದನ್ನ ನಂಬಲು ಆಗುತ್ತಿಲ್ಲ. ಮದುವೆಯಾದ ಎರಡೇ ವರ್ಷದಲ್ಲಿ ಚಿರಂಜೀವಿ ನಮ್ಮನ್ನ ಅಗಲಿ ಹೋದ ಎಂದು ಹೇಳುತ್ತಾ ಭಾವುಕರಾದರು. ಇದನ್ನೂ ಓದಿ: ಮೇಘನಾ, ಜ್ಯೂನಿಯರ್ ಚಿರು ನೋಡಲು ಆಸ್ಪತ್ರೆಗೆ ಬಂದ ಮಲಯಾಳಂ ಸ್ಟಾರ್ ಜೋಡಿ

    ಮಗಳನ್ನ ಕೊಟ್ಟು ಮದುವೆ ಮಾಡಿ ಜವಾಬ್ದಾರಿ ಮುಗಿತು ಅಂದುಕೊಳ್ಳವಾಗಲೇ ಚಿರು ಹೋಗಿ ಬಿಟ್ಟ. ಮದ್ವೆ ಆಗದೆ ಇದ್ರೆ ಯೋಚನೆ ಇರ್ತಾಯಿರಲಿಲ್ಲ. ಈ ರೀತಿಯಾಗಿ ಮಗಳನ್ನು ನೋಡೋಕೆ ಕಷ್ಟ ಆಗುತ್ತದೆ. ಆ ಕುಟುಂಬಕ್ಕೆ ಮಗನ ಕಳೆದುಕೊಂಡ ನೋವಿದೆ, ನಮಗೆ ಅಳಿಯನ ಕಳೆದುಕೊಂಡ ದುಃಖವಿದೆ. ದೇವರು ಸುಂದರವಾದ ಮಗಳನ್ನ ಕೊಟ್ಟ. ಆದ್ರೆ ಆಕೆಗೆ ಸುಂದರವಾದ ಜೀವನ ಕೊಡಲಿಲ್ಲ. ಮಗು ಬೆಳೆಯುವವರೆಗೂ ನನಗೆ ಆಯಸ್ಸು ಕೊಡು ಅಂತ ಕೇಳುತ್ತೇನೆ ಎಂದು ದೇವರಲ್ಲಿ ಪ್ರಾರ್ಥಿಸಿದರು. ಇದನ್ನೂ ಓದಿ: ಥೇಟ್ ಚಿರು ಮೂಗಿನಂತೆ ಮಗುವಿನ ಮೂಗಿದೆ: ಐಶ್ವರ್ಯಾ ಸರ್ಜಾ

    ಎರಡು ನಿಕ್‍ನೇಮ್: ಮಗುವಿಗೇ ಮೇಘನಾಳೇ ತಂದೆ-ತಾಯಿಯಾಗಿದ್ದಾಳೆ. ನಾನು ಪ್ರೀತಿಯಿಂದ ಮಗುವಿಗೆ ಚಿಂಟೂ ಎಂದು ಕರೆಯಬೇಕೆಂದುಕೊಂಡಿದ್ದೇನೆ. ಚಿಂಟೂ ಅಂದ್ರೆ ಚಿಂತೆಯನ್ನ ದೂರ ಮಾಡಲಿ ಅನ್ನೋದಕ್ಕೆ ಆ ಹೆಸರು ಆಯ್ಕೆ ಮಾಡಿದ್ದೇನೆ. ಆದ್ರೆ ಮೇಘನಾ ಮಗುವನ್ನ ಪಾಪು ಎಂದು ಕರೆಯುತ್ತಾಳೆ ಎಂದು ಹೇಳಿದರು. ಇದನ್ನೂ ಓದಿ: ಮೇಘನಾ ಆಸೆಯಂತೆ ಹುಟ್ಟಿದ ತಕ್ಷಣ ಚಿರುಗೆ ಮಗು ತೋರ್ಸಿದ್ದೇವೆ: ಲಕ್ಷ್ಮಿ ಅಮ್ಮ

    ಚಿರು ಪರವಾಗಿ ಮನೆಗೆ ಬಂದ ಅವನ ಮಗನನ್ನ ಗೋದೂಳಿ ಮುಹೂರ್ತದಲ್ಲಿ ಮನೆಗೆ ಕರೆದುಕೊಂಡು ಬಂದಿದ್ದೇವೆ. ನಾವು ಈ ಮಹೂರ್ತವನ್ನ ನೋಡಿ ಮಗುವನ್ನು ತೋರಿಸಿಬೇಕು ಅಂದು ಕೊಂಡಿದ್ದೇವೆ. ಮೊದಲಿಗೆ ಮಗುವನ್ನ ಪತ್ನಿ ಪರಿಮಳ ಅವರು ನೋಡಿದ್ರು. ಆ ನಂತರ ನಮಗೆ ಮಗು ತೋರಿಸಲಾಯ್ತು. ಆಸ್ಪತ್ರೆಗೆ ಬಂದ ವೀರಾಂಜನೇಯ ಧ್ರುವ ಸರ್ಜಾ, ಸಂಜೀವಿನಿ ಬೆಟ್ಟ ಹಿಡಿದಂತೆ ಮಗು ಹಿಡಿದು ಎಲ್ಲರಿಗೂ ತೋರಿಸಿದನು. ಇದನ್ನೂ ಓದಿ: ಚಿರು ಮಗನನ್ನ 20 ವರ್ಷದ ನಂತ್ರ ನಾನೇ ಲಾಂಚ್ ಮಾಡ್ತೀನಿ: ಅರ್ಜುನ್ ಸರ್ಜಾ

    ಈ ಮಗು ಸರ್ಜಾ ಕುಟುಂಬದ ಕುಡಿ. ಚಿರು ಅನುಪಸ್ಥಿತಿಯಲ್ಲಿಯೇ ಮಗುವನ್ನ ನೋಡಿಕೊಳ್ಳುವುದು ತಾಯಿಯ ಕರ್ತವ್ಯ. ಈ ಸ್ಥಿತಿಯಲ್ಲಿ ಮಗಳನ್ನ ಆರೈಕೆ ಮಾಡೋದು ನಮ್ಮ ಕರ್ತವ್ಯ. ಹಾಗಾಗಿ ಜೂನಿಯರ್ ಚಿರು ನಮ್ಮ ಮನೆಯಲ್ಲಿಯೇ ಬೆಳೆಯಲಿದ್ದಾನೆ. ಮಗು ಇಲ್ಲಿಯೂ ಇರುತ್ತೆ, ಅಲ್ಲಿಯೂ ಇರಬೇಕು. ಎರಡೂ ಕುಟುಂಬಗಳ ಆರೈಕೆಯಲ್ಲಿ ಮಗು ಬೆಳೆಯಲಿದೆ. ಮಗುವಿನ ಮೂಗು ತುಂಬಾನೇ ಚೆನ್ನಾಗಿದೆ. ಅದುವೇ ಮಗುವಿನ ಟ್ರೇಡ್ ಮಾರ್ಕ್ ಎಂದರು.

  • ಜೂನಿಯರ್ ಚಿರುಗೆ ಬೆಳ್ಳಿ ತೊಟ್ಟಿಲು, ಚಿನ್ನದ ಬಟ್ಟಲು ಖರೀದಿಸಿದ ಧ್ರುವ ಸರ್ಜಾ

    ಜೂನಿಯರ್ ಚಿರುಗೆ ಬೆಳ್ಳಿ ತೊಟ್ಟಿಲು, ಚಿನ್ನದ ಬಟ್ಟಲು ಖರೀದಿಸಿದ ಧ್ರುವ ಸರ್ಜಾ

    ಬೆಂಗಳೂರು: ಸರ್ಜಾ ಕುಟುಂಬ ಹಾಗೂ ಮೇಘನಾ ರಾಜ್ ಅವರು ಜೂನಿಯರ್ ಚಿರು ಆಗಮನದ ನಿರೀಕ್ಷೆಯಲ್ಲಿದ್ದು, ಮನೆಗೆ ಮುದ್ದಾದ ಮಗು ಬರುವ ಮುನ್ನವೇ ಧ್ರುವ ಸರ್ಜಾ ಅವರು ಬೆಳ್ಳಿ ತೊಟ್ಟಿಲು ಖರೀದಿಸಿದ್ದಾರೆ.

    ಇತ್ತೀಚೆಗೆಷ್ಟೇ ಮೇಘನಾ ಅವರಿಗೆ ಸೀಮಂತ ಸಮಾರಂಭ ನೆರವಿಸಿದ್ದ ಸರ್ಜಾ ಫ್ಯಾಮಿಲಿ ಅಕಾಲಿಕವಾಗಿ  ಕಣ್ಮರೆಯಾಗಿದ್ದ ಕನ್ನಡ ಯುವ ನಟ ಚಿರಂಜೀವಿ ಸರ್ಜಾ ಅವರು ಅಗಲಿಕೆಯ ನೋವಿನಿಂದ ಹೊರ ಬರುವ ಪ್ರಯತ್ನದಲ್ಲಿದೆ. ಇದೇ ವೇಳೆ ಆ ನೋವನ್ನು ಮರೆಸಲು ಜೂನಿಯರ್ ಚಿರುಗೆ ಸ್ವಾಗತವನ್ನು ಕೋರಲು ಸಿದ್ಧರಾಗಿದ್ದಾರೆ.

    ಮುದ್ದು ಮಗು ಮನೆಗೆ ಬರುವ ಮುನ್ನವೇ ಪ್ರೀತಿಯ ಅಣ್ಣನ ಮಗುವಿಗೆ ಭರ್ಜರಿ ಸ್ವಾಗತ ಕೋರಲು ಮುಂದಾಗಿರುವ ಧ್ರುವ ಸರ್ಜಾ, ಸುಮಾರು 10 ಲಕ್ಷ ರೂ. ಮೌಲ್ಯದ ಬೆಳ್ಳಿ ತೊಟ್ಟಲು ಖರೀದಿ ಮಾಡಿದ್ದಾರೆ. ನವರತ್ನ ಜ್ಯೂವೆಲರ್ಸ್ ನಲ್ಲಿ ಬೆಳ್ಳಿ ತೊಟ್ಟಿಲು ಖರೀದಿ ಮಾಡಲಾಗಿದ್ದು, ತೊಟ್ಟಿಲು ಜೊತೆಗೆ ಚಿನ್ನದ ಬಟ್ಟಲನ್ನು ಖರೀದಿ ಮಾಡಲಾಗಿದೆ.

    ಅಕ್ಟೋಬರ್ 17 ರಂದು ಚಿರು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಈ ವೇಳೆ ವಿಡಿಯೋ ಪೋಸ್ಟ್ ಮಾಡಿ ಶುಭ ಕೋರಿದ್ದ ಧ್ರುವ ಸರ್ಜಾ, ಹ್ಯಾಪಿ ಬರ್ತ್ ಡೇ ಚಿರು ಎಂದು ಹಾರ್ಟ್ ಸಿಂಬಲ್ ಹಾಕಿದ್ದರು. ಮೈ ಲವ್ ಫಾರ್ ಎವರ್, ಜೂನಿಯರ್ ಚಿರು ಕಮಿಂಗ್ ಸೂನ್ ಎಂದು ಬರೆದು ತೋಳುಗಳ ಎಮೋಜಿ ಹಾಕಿದ್ದರು.

    ಉಳಿದಂತೆ ಅಕ್ಟೋಬರ್ 4ರಂದು ಧ್ರುವ ಸರ್ಜಾ ಅತ್ತಿಗೆ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಮನೆಯಲ್ಲಿಯೇ ಸರಳವಾಗಿ ಸೀಮಂತ ಕಾರ್ಯಕ್ರಮವನ್ನು ಮಾಡಲಾಗಿದೆ. ಕುಟುಂಬದವರು ಮತ್ತು ಕೆಲ ಆಪ್ತರು ಮಾತ್ರ ಸೀಮಂತ ಶಾಸ್ತ್ರಕ್ಕೆ ಆಗಮಿಸಿದ್ದರು. ಜೊತೆಗೆ ಚಿರು ಇಲ್ಲ ಎಂಬ ನೋವು ಮೇಘನಾಗೆ ಕಾಡದಿರಲಿ ಎಂದು ಚಿರು ಅವರ ದೊಡ್ಡ ಫೋಟೋವನ್ನು ಪಕ್ಕದಲ್ಲೇ ಇಟ್ಟು ಸೀಮಂತ ಮಾಡಿದ್ದು ವಿಶೇಷವಾಗಿತ್ತು. ಆ ಬಳಿಕ ಸರ್ಜಾ ಕುಟುಂಬ ಕೂಡ ವಿಶೇಷವಾಗಿ ಸೀಮಂತ ಶಾಸ್ತ್ರ ನೆರವೇರಿಸಿತ್ತು.