Tag: ಜೀವ್ನಾನೇ ನಾಟ್ಕ ಸಾಮಿ

  • ರಿಯಾಲಿಟಿ ಶೋ ಮೂಲಕ ಜೀವನದ ಸತ್ಯಾಸತ್ಯತೆಯ ಅನಾವರಣ

    ರಿಯಾಲಿಟಿ ಶೋ ಮೂಲಕ ಜೀವನದ ಸತ್ಯಾಸತ್ಯತೆಯ ಅನಾವರಣ

    ಚಿತ್ರ: ಜೀವ್ನಾನೇ ನಾಟ್ಕ ಸಾಮಿ
    ನಿರ್ದೇಶನ: ರಾಜು ಭಂಡಾರಿ ರಾಜಾವರ್ತ
    ನಿರ್ಮಾಪಕ: ಲಲಿತ ರಾಜಶೇಖರ ಶಿರಹಟ್ಟಿ
    ಸಂಗೀತ: ಅತಿಶಯ ವೇದಾಂತ್ ಜೈನ್
    ಛಾಯಾಗ್ರಹಣ: ಕಿಟ್ಟಿ ಕೌಶಿಕ್
    ತಾರಾಬಳಗ: ಕಿರಣ್ ರಾಜ್, ಶ್ರೀಹರ್ಷ, ಅನಿಕಾ ರಮ್ಯ, ಪವಿತ್ರಾ ಕೊಟ್ಯಾನ್, ಇತರರು.

    ‘ಜೀವ್ನಾನೇ ನಾಟ್ಕ ಸಾಮಿ’ ರಾಜು ಭಂಡಾರಿ ರಾಜಾವರ್ತ ನಿರ್ದೇಶನದ ಮೊದಲ ಸಿನಿಮಾ. ಶೇ.50ರಷ್ಟು ಪ್ರೇಕ್ಷಕರಿಗೆ ಅನುಮತಿ ಇದ್ರು ಕೂಡ ಮೊದಲ ದಿನ ಸಿನಿಮಾ ಬಿಡುಗಡೆಯಾದ ಕಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಹಾಯಕ ನಿರ್ದೇಶಕನಾಗಿ ಕೆಲಸ ನಿರ್ವಹಿಸುತ್ತಿರುವ ಆಕಾಶ್ ನದ್ದು ಮಧ್ಯಮ ವರ್ಗದ ಕುಟುಂಬ. ತನ್ನೆಲ್ಲ ಕಷ್ಟಗಳ ನಡುವೆ ಆತನಿಗೆ ನಿರ್ದೇಶಕನಾಗಬೇಕೆಂಬ ಕನಸಿರುತ್ತೆ. ಹೀಗಿರುವಾಗ ಆಕಾಶ್ ಪುತ್ರಿ ಅದಿತಿ ‘ಜೀವ್ನಾನೇ ನಾಟ್ಕ ಸಾಮಿ’ ಎಂಬ ಮಕ್ಕಳ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಾಳೆ.ಇದನ್ನೂ ಓದಿ:ಜೀವನ ಪಾಠ ಹೇಳಲು ಬರ್ತಿದ್ದಾರೆ ಕನ್ನಡತಿ ಖ್ಯಾತಿಯ ಕಿರಣ್ ರಾಜ್!

    ಒಂಭತ್ತು ಜನ ಮಕ್ಕಳು ಈ ಶೋನಲ್ಲಿ ಭಾಗಿಯಾಗಿರುತ್ತಾರೆ. ಪ್ರತಿಯೊಬ್ಬ ಮಗುವಿನ ಹಾಗೂ ಪೋಷಕರ ಮನಸ್ಥಿತಿ, ಆಕಾಂಕ್ಷೆ ಒಬ್ಬರಿಗಿಂತ ಒಬ್ಬರದ್ದು ಬಹಳ ವಿಭಿನ್ನ. ಅವರೆಲ್ಲ ರಿಯಾಲಿಟಿ ಶೋನಲ್ಲಿ ಗೆಲ್ಲಲೇ ಬೇಕು ಎಂದು ಏನೆಲ್ಲ ಮಾಡುತ್ತಾರೆ. ಮಕ್ಕಳ ಹಾಗೂಪೋಷಕರ ಜೀವನದಲ್ಲಿ ಈ ಶೋ ಯಾವೆಲ್ಲ ಪರಿಣಾಮ ಉಂಟು ಮಾಡುತ್ತೆ ಎನ್ನುವುದು ಚಿತ್ರದ ಕಥಾವಸ್ತು.

    ಕೊನೆಗೆ ಎಲ್ಲರಿಗೂ ಒಂದು ಜೀವನ ಪಾಠವಾಗಿ ‘ಜೀವ್ನಾನೇ ನಾಟ್ಕ ಸಾಮಿ’ ಶೋ ಹೇಗೆ ಕೊನೆಗಾಣುತ್ತೆ ಎನ್ನುವುದೇ ಸಿನಿಮಾದ ಇಂಟ್ರಸ್ಟಿಂಗ್ ಫ್ಯಾಕ್ಟರ್. ನಿರ್ದೇಶಕರ ಪ್ರಯತ್ನ ಹಾಗೂ ಪ್ರಯೋಗಾತ್ಮಕತೆಯನ್ನು ಮೆಚ್ಚಲೇಬೇಕು. ಮಕ್ಕಳ ರಿಯಾಲಿಟಿ ಶೋ ಆಧಾರವಾಗಿಟ್ಟುಕೊಂಡು ಅದನ್ನು ಸಿನಿಮಾವಾಗಿ ಕಟ್ಟಿಕೊಡುವ ಅವರ ಆಲೋಚನೆಯೇ ಗಮನಾರ್ಹ. ಇದನ್ನೂ ಓದಿ:ರಾಜು ಭಂಡಾರಿ ರಾಜಾವರ್ತ ನಿರ್ದೇಶನದ ಮೊದಲ ಸಿನಿಮಾ ‘ಜೀವ್ನಾನೇ ನಾಟ್ಕ ಸಾಮಿ’

    ಚಿತ್ರಕಥೆ ಹಾಗೂ ತೆರೆ ಮೇಲೆ ಕಟ್ಟಿಕೊಡುವಲ್ಲಿ ನಿರ್ದೇಶಕರ ಚಾಕಚಕ್ಯತೆ ಪ್ರಶಂಸನೀಯ. ಚಿತ್ರದಲ್ಲಿ ಆಕಾಶ್ ಹಾಗೂ ಸಂತೋಷ್ ಪಾತ್ರಧಾರಿಗಳಾದ ಕಿರಣ್ ರಾಜ್ ಮತ್ತು ಶ್ರೀಹರ್ಷ ತಮ್ಮ ನೈಜ ಅಭಿನಯದ ಮೂಲಕ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ನಾಯಕಿಯರಾದ ಪದ್ಮಶ್ರೀ ಜೈನ್, ಅನಿಕಾ ರಮ್ಯ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ದೇವಯ್ಯ, ಮಹದೇವ್, ಜೋಕರ್ ಹನುಮಂತು, ಶ್ರಾವ್ಯ ಆಚಾರ್ಯ ಸೇರಿದಂತೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅತಿಶಯ ವೇದಾಂತ್ ಜೈನ್ ಸಂಗೀತ ಕಥೆಗೆ ಪೂರಕವಾಗಿದ್ದು, ಮಾನಸ ಹೊಳ್ಳ ಹಾಡಿರುವ ಹತ್ತಿಯ ಮರಕೆ ಜನಪದ ಹಾಡು ಮನಮುಟ್ಟುತ್ತದೆ. ಕಿಟ್ಟಿ ಕೌಶಿಕ್ ಛಾಯಾಗ್ರಹಣ ಗಮನ ಸೆಳೆಯುತ್ತದೆ.

    ರೇಟಿಂಗ್: 3/5

  • ರಾಜು ಭಂಡಾರಿ ರಾಜಾವರ್ತ ನಿರ್ದೇಶನದ ಮೊದಲ ಸಿನಿಮಾ ‘ಜೀವ್ನಾನೇ ನಾಟ್ಕ ಸಾಮಿ’

    ರಾಜು ಭಂಡಾರಿ ರಾಜಾವರ್ತ ನಿರ್ದೇಶನದ ಮೊದಲ ಸಿನಿಮಾ ‘ಜೀವ್ನಾನೇ ನಾಟ್ಕ ಸಾಮಿ’

    ‘ಜೀವ್ನಾನೇ ನಾಟ್ಕ ಸಾಮಿ’.. ಚಂದನವನದಲ್ಲಿ ಬಿಡುಗಡೆಯ ಹೊಸ್ತಿಲಲ್ಲಿರುವ ಸಿನಿಮಾ. ರಾಜು ಭಂಡಾರಿ ರಾಜಾವರ್ತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಇದೇ ತಿಂಗಳ 19ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ನಿರ್ದೇಶಕರ ಮೊದಲ ಸಿನಿಮಾ ಇದಾಗಿದ್ದು, ಟೈಟಲ್ ಎಲ್ಲರ ಗಮನ ಸೆಳೆಯುತ್ತಿದೆ. ಹಲವು ವಿಶೇಷತೆಗಳು ಸಿನಿಮಾದಲ್ಲಿದ್ದು, ಚಿತ್ರದ ತುಣುಕುಗಳು ಕೂಡ ಒಂದಿಲ್ಲೊಂದು ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿವೆ.

    ನಿರ್ದೇಶಕರಾದ ರಾಜು ಭಂಡಾರಿ ರಾಜಾವರ್ತ ರಂಗಭೂಮಿಯ ಪ್ರತಿಭೆ. ಹದಿನೈದು ವರ್ಷಗಳ ರಂಗಭೂಮಿ ನಂಟು ಇಟ್ಟುಕೊಂಡಿರುವ ಇವರು ಲೇಖಕರೂ ಕೂಡ ಹೌದು. ಈಗಾಗಲೇ ಮೂರು ಪುಸ್ತಕಗಳು ಬಿಡುಗಡೆಯಾಗಿ ಓದುಗರ ಮೆಚ್ಚುಗೆ ಗಳಿಸಿಕೊಂಡಿವೆ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಇವರಿಗೆ ಸಿನಿಮಾ ಕ್ಷೇತ್ರ ಮೊದಲ ಅನುಭವ. ‘ಜೀವ್ನಾನೇ ನಾಟ್ಕ ಸಾಮಿ’ ಚಿತ್ರಕ್ಕೆ ಸ್ವತಃ ತಾವೇ ಕಥೆ ಚಿತ್ರಕಥೆ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

    ಡ್ರಾಮಾ ಜಾನರ್ ಸಬ್ಜೆಕ್ಟ್ ಒಳಗೊಂಡಿರುವ ಈ ಚಿತ್ರದಲ್ಲಿ ರಿಯಾಲಿಟಿ ಶೋ ಆಧರಿಸಿದ ಕಥಾಹಂದರವಿದೆ. ರಿಯಾಲಿಟಿ ಶೋನಲ್ಲಿ ನಡೆಯುವ ಘಟನೆಗಳು ಅಲ್ಲಿರುವ ಪಾತ್ರಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತೆ ಅನ್ನೋದನ್ನ ಚಿತ್ರದಲ್ಲಿ ಹೇಳಲಾಗಿದೆ ಎನ್ನುವುದು ನಿರ್ದೇಶಕರ ಮಾತು. ಚಿತ್ರದಲ್ಲಿ ಕಿರಣ ರಾಜ್, ಶ್ರೀ ಹರ್ಷ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅನಿಕಾ ರಮ್ಯ, ಪವಿತಾ ಕೊಟ್ಯಾನ್ ನಾಯಕಿಯರಾಗಿ ನಟಿಸಿದ್ದಾರೆ. 2019ರಲ್ಲಿ ಚಿತ್ರೀಕರಣ ಮುಗಿಸಿದ್ದ ಈ ಚಿತ್ರ ಕೊರೊನಾ ಕಾರಣದಿಂದ ಲೇಟಾಗಿ ಚಿತ್ರಮಂದಿರಕ್ಕೆ ಕಾಲಿಡುತ್ತಿದೆ. ಇದನ್ನೂ ಓದಿ: ಜೀವನ ಪಾಠ ಹೇಳಲು ಬರ್ತಿದ್ದಾರೆ ಕನ್ನಡತಿ ಖ್ಯಾತಿಯ ಕಿರಣ್ ರಾಜ್!

    ಕಿಟ್ಟಿ ಕೌಶಿಕ್ ಕ್ಯಾಮೆರಾ ವರ್ಕ್, ಅತಿಶಯ ವೇದಾಂತ ಜೈನ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಆರ್ಯ ಎಂಟರ್ ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಲಲಿತ ರಾಜಶೇಖರ ಶಿರಹಟ್ಟಿ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಬಾಲನಟಿ ಯಾಗಿ ಶ್ರಾವ್ಯಾ ಆಚಾರ್ ನಟಿಸಿದ್ದು, ಜೋಕರ್ ಹನುಮಂತು, ದೇವಯ್ಯ, ಮಹದೇವ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಬಿಡುಗಡೆಗೂ ಮುನ್ನವೇ ಹಲವು ವೇದಿಕೆಗಳಲ್ಲಿ ಈ ಸಿನಿಮಾ ಪ್ರಶಸ್ತಿಗಳನ್ನು ಪಡೆದುಕೊಂಡು ಭರವಸೆ ಮೂಡಿಸಿದೆ.